Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ? - Vistara News

ಆರೋಗ್ಯ

Beetroot Side Effects: ಬೀಟ್‌ರೂಟ್‌ ಎಲ್ಲರಿಗೂ ಒಳ್ಳೆಯದಲ್ಲ! ಯಾರು ಇದನ್ನು ತಿನ್ನಬಾರದು ಗೊತ್ತೇ?

(Beetroot Side Effects) ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ, ರಕ್ತ ತುಂಬಿಕೊಳ್ಳಲು, ಚರ್ಮ ಫಳಫಳ ಹೊಳೆದು ಆರೋಗ್ಯದಿಂದ ಕಂಗೊಳಿಸಲು, ಪಿತ್ತಕೋಶದ ಆರೋಗ್ಯಕ್ಕೆ ಸೇರಿದಂತೆ ಹಲವಾರು ಅತ್ಯಗತ್ಯ ಗುಣಗಳು ಇದರಲ್ಲಿರುವುದರಿಂದ ಬೀಟ್‌ರೂಟ್‌ ಆಗಾಗ ಸೇವಿಸುವುದು ಒಳ್ಳೆಯದು ನಿಜ. ಆದರೆ, ಎಲ್ಲರೂ ಹೀಗೆ ಬೇಕಾದಾಗಲೆಲ್ಲ ಬೀಟ್‌ರೂಟ್‌ ಸೇವಿಸಬಹುದೇ? ಇದರಿಂದ ಸಮಸ್ಯೆಗಳಾಗಲಿಕ್ಕಿಲ್ಲವೇ ಎಂಬ ಪ್ರಶ್ನೆ ನಿಮಗೆ ಮೂಡಿದರೆ ಖಂಡಿತ ಅದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Beetroot
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೀಟ್‌ರೂಟ್‌ ಗಡ್ಡೆಯಿಂದ ಸಾಕಷ್ಟು ಆರೋಗ್ಯ ಲಾಭ ಗಳಿರುವುದು ನಿಮಗೆ ಗೊತ್ತೇ ಇದೆ. ಬೀಟ್‌ರೂಟ್‌ನಲ್ಲಿ ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ಹಾಗಾಗಿ ಬೀಟ್‌ರೂಟ್‌ ಸೇವನೆಯನ್ನು ಬಹುತೇಕ ಎಲ್ಲರೂ, ಆರೋಗ್ಯವರ್ಧನೆಗೆ ಸಲಹೆ ಕೊಡುತ್ತಾರೆ. ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ, ರಕ್ತ ತುಂಬಿಕೊಳ್ಳಲು, ಚರ್ಮ ಫಳಫಳ ಹೊಳೆದು ಆರೋಗ್ಯದಿಂದ ಕಂಗೊಳಿಸಲು, ಪಿತ್ತಕೋಶದ ಆರೋಗ್ಯಕ್ಕೆ ಸೇರಿದಂತೆ ಹಲವಾರು ಅತ್ಯಗತ್ಯ ಗುಣಗಳು ಇದರಲ್ಲಿರುವುದರಿಂದ ಬೀಟ್‌ರೂಟ್‌ ಆಗಾಗ ಸೇವಿಸುವುದು ಒಳ್ಳೆಯದು ನಿಜ. ಆದರೆ, ಎಲ್ಲರೂ ಹೀಗೆ ಬೇಕಾದಾಗಲೆಲ್ಲ ಬೀಟ್‌ರೂಟ್‌ ಸೇವಿಸಬಹುದೇ? ಇದರಿಂದ ಸಮಸ್ಯೆಗಳಾಗಲಿಕ್ಕಿಲ್ಲವೇ ಎಂಬ ಪ್ರಶ್ನೆ ನಿಮಗೆ ಮೂಡಿದರೆ, ಖಂಡಿತ ಅದಕ್ಕೆ ಉತ್ತರ ಇಲ್ಲಿದೆ. ಯಾಕೆಂದರೆ, ಬೀಟ್‌ರೂಟ್‌ ಸಂಪೂರ್ಣ ಆಹಾರವೇ ಆದರೂ, ಇದರಿಂದ ಕೆಲವೇ ಕೆಲವರಿಗೆ ಸಮಸ್ಯೆಯೂ ಆಗಬಹುದು. ಬನ್ನಿ, ಯಾರೆಲ್ಲ ಬೀಟ್‌ರೂಟನ್ನು ಹೆಚ್ಚು ತಿನ್ನಬಾರದು (Beetroot Side Effects) ಎಂಬುದನ್ನು ನೋಡೋಣ.

Beetroot
Beetroot Rainy Season Food

ಬೀಟ್‌ರೂಟ್‌ನಲ್ಲಿ ಆಕ್ಸಲೇಟ್‌ ಹೇರಳವಾಗಿದೆ. ಸಾಮಾನ್ಯವಾಗಿ ಕಿಡ್ನಿ ಸ್ಟೋನ್‌/ ಕಿಡ್ನಿಯಲ್ಲಿ ಕಲ್ಲು ಹೊಂದಿದವರಿಗೆ ಕಡಿಮೆ ಆಕ್ಸಲೇಟ್‌ ಇರುವ ಆಹಾರವನ್ನು ವೈದ್ಯರು ಸೂಚಿಸುತ್ತಾರೆ. ಹಾಗಾಗಿ, ಬೀಟ್‌ರೂಟ್‌ ತಿನ್ನುವುದರಿಂದ ಕಿಡ್ನಿಯ ಕಲ್ಲಿನ ಸಮಸ್ಯೆ ಉಲ್ಬಣಗೊಳ್ಳಬಹುದು. ಈಗಾಗಲೇ ಕಿಡ್ನಿ ಕಲ್ಲು ಹೊಂದಿರುವ ಮಂದಿ ಬೀಟ್‌ರೂಟ್‌ ಕಡಿಮೆ ತಿಂದರೆ ಒಳ್ಳೆಯದು.

ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ಈ ಕಾರಣದಿಂದ ಅದು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಧಿಕ ರಕ್ತದೊತ್ತಡ ಇರುವ ಮಂದಿಗೆ ಇದು ಒಳ್ಳೆಯದು. ಅದರೆ, ರಕ್ತದೊತ್ತಡ ಕಡಿಮೆ ಇರುವ, ಲೋ-ಬಿಪಿ ಸಮಸ್ಯೆ ಹೊಂದಿರುವ ಮಂದಿ ಇದನ್ನು ಆಗಾಗ ಸೇವಿಸಿದರೆ, ಔಷಧಿಯನ್ನೂ ಜೊತೆಗೆ ತೆಗೆದುಕೊಳ್ಳುತ್ತಿದ್ದರೆ, ಅಗತ್ಯಕ್ಕಿಂತಲೂ ಹೆಚ್ಚು, ರಕ್ತದೊತ್ತಡ ಕೆಳಗಿಳಿಯಬಹುದು. ಅತಿಯಾಗಿ ಬಿಪಿ ಡೌನ್‌ ಆಗುವುದು ಅಪಾಯ ಕೂಡಾ. ಹಿತಮಿತವಾಗಿ ಅಪರೂಪಕ್ಕೊಮ್ಮೆ ಬೀಟ್‌ರೂಟ್‌ ಸೇವನೆ ತೊಂದರೆ ಮಾಡದು.

Beetroot Rainy Season Food

ಬೀಟ್‌ರೂಟ್‌ನಲ್ಲಿ ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇದ್ದರೂ, ಇದರಲ್ಲಿ ನೈಸರ್ಗಿಕವಾದ ಸಿಹಿಯ ಅಂಶ ಇದೆ. ಹಾಗಾಗಿ, ಈಗಾಗಲೇ ಮಧುಮೇಹದ ಸಮಸ್ಯೆ ಹೊಂದಿದ ಮಂದಿಗೆ ಬೀಟ್‌ರೂಟ್‌ ಅತಿಯಾದ ಸೇವನೆ ಸಮಸ್ಯೆ ತರಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಬಹುದು.

ಕೆಲವರಲ್ಲಿ ಬೀಟೂರಿಯಾ ಎಂಬ ಸಮಸ್ಯೆ ಕಾಣಿಸಬಹುದು. ಬೀಟ್‌ರೂಟ್‌ ತಿಂದರೆ, ವಿಸರ್ಜಿಸುವ ಮೂತ್ರ ಹಾಗೂ ಮಲದ ಬಣ್ಣ ಪಿಂಕ್‌ ಬಣ್ಣಕ್ಕೆ ಬದಲಾಗುತ್ತದೆ. ಇದು ಸಾಮಾನ್ಯ ಹಾಗೂ ಯಾವುದೇ ಅಪಾಯವಿಲ್ಲದ್ದೇ ಆದರೂ, ಅನೇಕರು ಇದನ್ನು ರಕ್ತ ಎಂದು ಭ್ರಮಿಸಿ ಗಾಬರಿಯಾಗುವುದೂ ಉಂಟು. ಹಾಗಾಗಿ ಈ ಬಗ್ಗೆ ತಿಳುವಳಿಕೆ ಇರಲಿ.

ಇದನ್ನೂ ಓದಿ: Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

ಬೀಟ್‌ರೂಟ್‌ನಲ್ಲಿ ಅಧಿಕ ನಾರಿನಂಶ ಇದೆ. ಇದು ಕೆಲವರಿಗೆ ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ತಂದೊಡ್ಡಬಹುದು. ಹೊಟ್ಟೆಯಲ್ಲಿ ಗ್ಯಾಸ್‌ ಅಥವಾ ಹೊಟ್ಟೆಯುಬ್ಬರದ ಸಮಸ್ಯೆಯನ್ನೂ ಹುಟ್ಟುಹಾಕಬಹುದು. ಹಾಗಾಗಿ ಬೀಟ್‌ರೂಟ್‌ ಅಧಿಕವಾಗಿ ಸೇವಿಸಬಾರದು. ಹೆಚ್ಚಾದರೆ ಇಂತಹ ಸಮಸ್ಯೆಗಳು ಕಾಡುವ ಅಪಾಯವೂ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

Vijayanagara News: ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

VISTARANEWS.COM


on

Free eye checkup and surgery camp at Hagaribommanahalli
Koo

ಹಗರಿಬೊಮ್ಮನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು (Vijayanagara News)ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್‌ನ ಗೌರವಾಧ್ಯಕ್ಷ ಎ.ವೀರಣ್ಣ ಮಾತನಾಡಿ, ಟ್ರಸ್ಟ್ ಮತ್ತು ಫೌಂಡೇಷನ್‌ಗಳ ಸಹಯೋಗದೊಂದಿಗೆ ತಾಲೂಕು ಸೇರಿದಂತೆ ಹರಪನಹಳ್ಳಿ, ಹೊಸಪೇಟೆ ಹಾಗೂ ಹಡಗಲಿ ತಾಲೂಕುಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆ ಕೂಡ ಇಂತಹ ಜನಪರ ಕೆಲಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಈ ವೇಳೆ ಒಟ್ಟು 209 ಜನರು ತಪಾಸಣೆಗೊಳಗಾದರು. ಅದರಲ್ಲಿ 94 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಬಳಿಕ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಟ್ರಸ್ಟ್‌ನ ಪದಾಧಿಕಾರಿಗಳು ಗೌರವಿಸಿ, ಸನ್ಮಾನಿಸಿದರು.

ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮೇಲ್ವಿಚಾರಕ ಕೃಷ್ಣ, ವೈದ್ಯರಾದ ಡಾ. ವಿನಯ್, ಡಾ. ದೀಪ, ತ್ಯಾಗರಾಜ್‌ ನಾಯ್ಕ್, ಇಲ್ಲಿಯ ಸರ್ಕಾರಿ ವೈದ್ಯ ಡಾ. ಶರತ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ ಪಾಟೀಲ್, ಕೆ. ಪ್ರಭಾಕರ, ನರೆಗಲ್ ಮಲ್ಲಿಕಾರ್ಜುನ, ದಿವಾಕರಗೌಡ, ಕರಿಬಸವರಾಜ್, ನಾಗರಾಜ್, ಗಜಾಪುರ ಮಂಜುನಾಥ, ಕರಿಯಪ್ಪ ಗುಜನೂರು, ಪೂಜಾರ್ ಮಲ್ಲಿಕಾರ್ಜುನ, ಕುಂಟೂರು ನಿಂಗಣ್ಣ, ಇಟ್ಟಿಗಿ ಗುರುಬಸವರಾಜ್, ಮಲ್ಲಯ್ಯ, ಕಡಬಾಳು ಮಂಜಣ್ಣ, ಎಲಿಗಾರ್ ಮಂಜುನಾಥ, ಭದ್ರವಾಡಿ ಸುರೇಶ, ಹನಸಿ ವೀರೇಶ, ಆನಂದ, ವಿಜಯ್, ಕುಮಾರಸ್ವಾಮಿ, ನೆಲ್ಕುದ್ರಿ ಕುಮಾರ್, ಐನಳ್ಳಿ ಶೇಖರ್, ಬಾಬುವಲಿ, ಸಾಲ್ಮನಿ ನಾಗರಾಜ್ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಎಚ್.ಎಂ. ನಾಗರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

Continue Reading

ಧಾರ್ಮಿಕ

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

Shravana 2024:ಶ್ರಾವಣ ಮಾಸದಲ್ಲಿ (Shravana Masa) ಉಪವಾಸ ಕೈಗೊಳ್ಳುವಾಗ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

VISTARANEWS.COM


on

By

Shravana 2024
Koo

ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ (Shravana 2024) ಆಚರಿಸಲಾಗುವ ಶ್ರಾವಣ ಮಾಸ (Shravana Masa) ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ (Hindu Lunar calendar) ಪವಿತ್ರವಾದ ತಿಂಗಳು (sacred month). ಇದು ಸಾಂಸ್ಕೃತಿಕ ಚೈತನ್ಯ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಂದಿನಿಂದ (ಆ.5) ಶ್ರಾವಣ ಮಾಸ ಆರಂಭ. ಬಹುತೇಕ ಹಿಂದೂಗಳು ಈ ತಿಂಗಳು ಪೂರ್ತಿ ದೇವರ ಪೂಜೆ, ಧ್ಯಾನ, ಜಪ, ತಪಗಳಲ್ಲಿ ನಿರತರಾಗುತ್ತಾರೆ. ಹೆಚ್ಚಿನವರು ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರದಂದು ಉಪವಾಸ ವ್ರತ ಕೈಗೊಳ್ಳುತ್ತಾರೆ.

ಶ್ರಾವಣ ಮಾಸ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಗಳಲ್ಲಿ ಉಪವಾಸವೂ ಒಂದಾಗಿದೆ. ಶಿವ ಭಕ್ತರು ಶಿವನ ಆಶೀರ್ವಾದ ಪಡೆಯಲು ಈ ತಿಂಗಳ ಪ್ರತಿ ಸೋಮವಾರ ಉಪವಾಸವನ್ನು ಆಚರಿಸುತ್ತಾರೆ.

ಜನರು ಈ ಸಂದರ್ಭದಲ್ಲಿ ಮಾಂಸಾಹಾರಿ ಆಹಾರಗಳು, ಈರುಳ್ಳಿ, ಬೆಳ್ಳುಳ್ಳಿ ಸೇವನೆಯನ್ನು ತ್ಯಜಿಸುತ್ತಾರೆ.
ಉಪವಾಸದೊಂದಿಗೆ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

Shravana Masa
Shravana Masa


ಎಳನೀರು

ತೆಂಗಿನ ನೀರು ಉಪವಾಸ ನಿರತರಿಗೆ ಅತ್ಯತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದ್ದು, ಡಿಟಾಕ್ಸ್ ಪಾನೀಯವಾಗಿದೆ. ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ ಮತ್ತು ಸಕ್ಕರೆಯ ಅದ್ಭುತ ಮೂಲವಾಗಿದೆ. ಇದು ಆರೋಗ್ಯಕರ ದೇಹದ ಬೆಳವಣಿಗೆಗೆಯನ್ನು ಉತ್ತೇಜಿಸುತ್ತದೆ.

Shravana Masa
Shravana Masa


ಸೌತೆಕಾಯಿ ಪುದೀನಾ ರಸ

ಶೇ. 95ಕ್ಕಿಂತ ಹೆಚ್ಚು ನೀರನ್ನು ಹೊಂದಿರುವ ಸೌತೆಕಾಯಿ ಪೌಷ್ಟಿಕಾಂಶದಿಂದ ತುಂಬಿರುವ ಸಮೃದ್ಧ ಆಹಾರ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಉಪವಾಸ ನಿರತರು ಇದನ್ನು ಸೇವಿಸಬಹುದು. ಅಗತ್ಯ ಜೀವಸತ್ವ, ಖನಿಜಾಂಶಗಳು ಸೌತೆಕಾಯಿಗಳಲ್ಲಿ ಹೇರಳವಾಗಿವೆ.


ನಿಂಬೆ ನೀರು

ಉಪವಾಸದ ಸಮಯದಲ್ಲಿ ಸೇವಿಸುವ ಆರೋಗ್ಯಕರ ಪಾನೀಯವೆಂದರೆ ನಿಂಬೆ ನೀರು. ಶ್ರಾವಣ ಮಾಸದಲ್ಲಿ ಉಪವಾಸ ನಿರತರಾಗಿರುವವರು ನಿಂಬೆ ರಸ ಅಥವಾ ನಿಂಬೆ ಪಾನಕವನ್ನು ಕುಡಿಯುವುದು ಹೈಡ್ರೇಟೆಡ್ ಆಗಿರಲು ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಕೊಡಲು ಇದು ಸಹಾಯ ಮಾಡುತ್ತದೆ.


ಹಣ್ಣಿನ ರಸಗಳು

ಸೇಬು, ಕಿತ್ತಳೆ, ದಾಳಿಂಬೆ ಮತ್ತು ಇತರ ತಾಜಾ ಹಣ್ಣುಗಳನ್ನು ಜ್ಯೂಸ್ ಮಾಡಿ ಉಪವಾಸ ನಿರತರು ದಿನವಿಡೀ ಸೇವಿಸಬಹುದು. ಇದು ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ತಾಜಾ ಹಣ್ಣಿನ ರಸಗಳು ದೇಹದ ಆರೋಗ್ಯಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Shravana Masa
Shravana Masa


ಚಿಯಾ ಬೀಜಗಳು

ಚಿಯಾ ಬೀಜದ ನೀರು ಅನೇಕ ಗಮನಾರ್ಹವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉಪವಾಸದ ದಿನವನ್ನು ಪ್ರಾರಂಭಿಸಲು ತುಂಬಾ ಆರೋಗ್ಯಕರ ಮಾರ್ಗವಾಗಿದೆ. ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧಿಯಿಂದಾಗಿ, ಚಿಯಾ ಬೀಜಗಳು ದೇಹವನ್ನು ನಿರ್ಜಲೀಕರಣಗೊಳ್ಳದಂತೆತಡೆಯುತ್ತದೆ. ಹೆಚ್ಚು ಗಂಟೆಗಳ ಕಾಲ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

Continue Reading

ಆರೋಗ್ಯ

Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

Water for Health: ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ?

VISTARANEWS.COM


on

drink water
Koo

ನೀರಿನ ವಿಷಯ ಪ್ರಸ್ತಾಪ (Water for Health) ಆಗುತ್ತಿದ್ದಂತೆ, ದಿನಕ್ಕೆಂಟು ಗ್ಲಾಸ್‌ ನೀರು ಕುಡಿಯಿರಿ ಎಂಬ ಸಲಹೆ ಎಲ್ಲೆಡೆಯಿಂದ ಹರಿದು ಬರುತ್ತದೆ. ಎಲ್ಲರ ದೇಹವೂ ಒಂದೇ ತೆರನಾಗಿ ಇರುವುದಿಲ್ಲ ಎಂದಾದರೆ, ಎಲ್ಲರಿಗೂ ಅಷ್ಟೇ ಪ್ರಮಾಣದಲ್ಲಿ ನೀರು ಕುಡಿಯುವುದು ಸಾಕಾದೀತೇ ಅಥವಾ ಬೇಕಾದೀತೆ? ನಮ್ಮ ದೇಹಕ್ಕೆಷ್ಟು ನೀರು ಅಗತ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆ? ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ? ನಮಗೆಷ್ಟು ನೀರು ಬೇಕು ಮತ್ತು ಸಾಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಲ್ಲಿದೆ ಉಪಯುಕ್ತ ಮಾಹಿತಿ.

Pure water Rules of Drinking Water for a Healthier You

ಪರಿಣಾಮ ಬೀರುವುದು ಯಾವುದು?

ನಮ್ಮ ದೈನಂದಿನ ನೀರಿನ ಅಗತ್ಯವೆಷ್ಟು ಎನ್ನುವುದು ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಎತ್ತರದ ಪ್ರದೇಶದಲ್ಲಿ ಇರುವವರು, ದೈಹಿಕವಾಗಿ ಕಠಿಣ ಕೆಲಸಗಳನ್ನು ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದಲ್ಲದೆ, ದೇಹದಲ್ಲಿ ದೊಡ್ಡದಾಗಿರುವವರು, ಸ್ನಾಯುಗಳನ್ನು ಹೆಚ್ಚು ಬೆಳೆಸಿಕೊಂಡವರಿಗೆ ಅಧಿಕ ನೀರು ಬೇಕು. ಫಿಟ್‌ನೆಟ್‌ ತರಬೇತಿಯಲ್ಲಿ ಇದ್ದರೆ, ಉಷ್ಣತೆ ಮತ್ತು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿದ್ದರೆ ನೀರಿನ ಆವಶ್ಯಕತೆ ಹೆಚ್ಚಿರುತ್ತದೆ. ಎತ್ತರದ ಪ್ರದೇಶದಲ್ಲಿ ಉಸಿರಾಟ ತೀವ್ರವಾಗಿದ್ದು, ಮೂತ್ರದ ಉತ್ಪಾದನೆಯೂ ಹೆಚ್ಚಾಗಿರುತ್ತದೆ. ಹಾಗಾಗಿ ನೀರು ಹೆಚ್ಚು ಬೇಕು. ಜ್ವರ, ವಾಂತಿ, ಅತಿಸಾರದಂಥ ಆರೋಗ್ಯ ಏರುಪೇರಿನಲ್ಲಿ ನೀರು ಕುಡಿದಷ್ಟಕ್ಕೂ ಬೇಕು. ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ತಿಂದಿದ್ದರೆ, ಅಧಿಕ ಪ್ರೊಟೀನ್‌ ತಿಂದರೆ ಹೆಚ್ಚು ನೀರನ್ನು ದೇಹಕ್ಕೆ ಒದಗಿಸಲೇಬೇಕು. ಗರ್ಭಿಣಿಯರು ತಮ್ಮ ಮತ್ತು ಶಿಶುವಿನ ಆರೋಗ್ಯಕ್ಕಾಗಿ ಹೆಚ್ಚಿನ ನೀರು ಕುಡಿಯುವುದು ಮುಖ್ಯ. ಹಾಲುಣಿಸುವ ತಾಯಂದಿರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು.
ಯಾರಿಗೆ ಮತ್ತು ಎಂಥ ಹವಾಮಾನಗಳಲ್ಲಿ ಹೆಚ್ಚಿನ ನೀರು ಬೇಕು ಎಂಬುದನ್ನು ತಿಳಿದಾಗಿದೆ. ಈ ಹೆಚ್ಚಿನ ನೀರು ಎಂದರೇನು? ದಿನಕ್ಕೆ ಎಂಟು ಗ್ಲಾಸ್‌ಗಳ ದ್ರವಾಹಾರಕ್ಕೆ ಮೇಲ್ಪಟ್ಟವನ್ನು ಹೀಗೆಂದು ಕರೆಯಬಹುದು. ಅದರಲ್ಲಿ ನೀರು, ಹಾಲು, ಮಜ್ಜಿಗೆ, ಎಳನೀರು, ಕಾಫಿ, ಚಹಾ, ಸೂಪ್‌, ಹಣ್ಣಿನ ರಸ, ನಿಂಬೆ ಚಹಾ ಅಥವಾ ಕಷಾಯದಂಥವು ಮತ್ತು ಸಕ್ಕರೆ ರಹಿತವಾದ ಯಾವುದೇ ಆರೋಗ್ಯಕರ ಪೇಯಗಳನ್ನು ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕೆ ಸೇರಿಸಬಹುದು. ಹಾಗಾಗಿ ದಿನಕ್ಕೆ ಅದಷ್ಟು ದ್ರವಾಹಾರವನ್ನು ತೆಗೆದುಕೊಳ್ಳುವುದು ಖಂಡಿತ ಕಷ್ಟವಲ್ಲ. ಈಗ ಹೆಚ್ಚಿನ ನೀರು ಎಂದರೆ, ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕಿಂತ ಅಧಿಕ. ಅತಿ ಕಡಿಮೆ ದೈಹಿಕ ಚಟುವಟಿಕೆಯಿದ್ದು, ವಾತಾವರಣವೂ ಹದವಾಗಿದ್ದಾಗ, ಹೆಚ್ಚು ಹಣ್ಣು, ಪಾನಕ, ಮಜ್ಜಿಗೆಯಂಥವನ್ನು ಕುಡಿಯುತ್ತಿದ್ದಾಗ ನೀರು ಕೊಂಚ ಕಡಿಮೆಯೇ ಸಾಕು ದೇಹಕ್ಕೆ. ದಿನದ ಲೆಕ್ಕಕ್ಕೆ ಹೇಳುವುದಾದರೂ, ನಿತ್ಯವೂ 3 ಲೀ. ನೀರನ್ನೇ ಕುಡಿಯಬೇಕಾದ ಅಗತ್ಯವಿಲ್ಲ. ತಿನ್ನುವ ಆಹಾರಗಳು ರಸಭರಿತವಾಗಿದ್ದರೆ, ಮಜ್ಜಿಗೆ, ಎಳನೀರು, ಸ್ಮೂದಿ ಮುಂತಾದ ಆರೋಗ್ಯಕರ ಪೇಯಗಳನ್ನು ಸಾಕಷ್ಟು ಸೇವಿಸುವವರು ನೀವಾದರೆ- 1.5ರಿಂದ 1.8 ಲೀ. ನಷ್ಟು ನೀರು ಕುಡಿಯುವುದು ಸಾಕಾಗುತ್ತದೆ. ಉಳಿದಷ್ಟು ಆಹಾರದಿಂದಲೇ ಒದಗುತ್ತದೆ. ನೀರು ಕುಡಿಯುವುದನ್ನು ಮರೆಯಂತೆ ಮಾಡುವುದು ಹೇಗೆ?

Image Of Rules of Drinking Water for a Healthier You

ಬಾಟಲಿ ಇರಿಸಿಕೊಳ್ಳಿ

ಚೆಂದದ ನೀರಿನ ಬಾಟಲಿಯೊಂದನ್ನು ಇದಕ್ಕಾಗಿ ಇರಿಸಿಕೊಳ್ಳಿ. ಅದರಲ್ಲೂ ತಾಮ್ರದ, ಗಾಜಿನ, ಪಿಂಗಾಣಿಯಂಥ ನೀರಿನ ಬಾಟಲಿ/ ಪಾತ್ರೆಗಳು ಹೆಚ್ಚಿನ ಉತ್ಸಾಹವನ್ನು ತುಂಬುತ್ತವೆ. ಈ ಬಾಟಲಿಗಳ ಅಳತೆ ತಿಳಿಯುವುದರಿಂದ ದಿನಕ್ಕೆ ಎಷ್ಟು ಬಾರಿ ಅದನ್ನು ಮರುಪೂರಣ ಮಾಡಿದ್ದೀರಿ ಎನ್ನುವುದರ ಮೇಲೆ ಕುಡಿದ ನೀರಿದ ಪ್ರಮಾಣವನ್ನು ಸುಲಭದಲ್ಲಿ ಲೆಕ್ಕ ಹಾಕಬಹುದು.

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!ಇದನ್ನೂ ಓದಿ:

ಅಲರಾಂ

ನಿತ್ಯದ ಜಂಜಾಟದಲ್ಲಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದೂ ಕೆಲಸ ಮಾಡುವುದಿಲ್ಲ ಎಂದಾದರೆ ತಾಸಿಗೊಮ್ಮೆ ನೀರು ಕುಡಿಯುವ ಅಲರಾಂ ಇಟ್ಟುಕೊಳ್ಳಿ. ಅದು ಕಿರುಚುವ ಹೊತ್ತಿಗೆ ನೀರು ಗುಟುಕರಿಸಬೇಕು ಎನ್ನುವುದು ನಿಶ್ಚಿತವಾಗಿ ನೆನಪಾಗುತ್ತದೆ.

Continue Reading

ಆರೋಗ್ಯ

Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

ಸರಳವಾದ ಮನೆಮದ್ದುಗಳನ್ನು (Health Tips) ಬಳಸಿಕೊಂಡು ಪಾದದ ಊತ ಮತ್ತು ನೋವನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಈ ಅಭ್ಯಾಸಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಪಾದದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ರೋಗಲಕ್ಷಣಗಳು ಮುಂದುವರಿದರೆ ಅಥವಾ ಹದಗೆಟ್ಟರೆ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

VISTARANEWS.COM


on

By

Health Tips
Koo

ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತುಕೊಂಡು ಕೆಲಸ ಮಾಡುವುದು, ಹಳೆಯ ಗಾಯ, ಆರೋಗ್ಯದಲ್ಲಾಗುವ (Health Tips) ಏರುಪೇರುಗಳಿಂದ ಪಾದಗಳಲ್ಲಿ ಊತ, ನೋವು (feet Swelling and Pain) ಉಂಟಾಗುತ್ತದೆ. ಇದು ಸಾಕಷ್ಟು ಅಹಿತಕರವಾಗಿರುತ್ತದೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ. ಇದನ್ನು ಕೆಲವು ಸರಳ ಮನೆಮದ್ದುಗಳ (home remedies) ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿದೆ.

ಕಾಲು ನೋವು ಮತ್ತು ಊತವನ್ನು ತ್ವರಿತವಾಗಿ ಕಡಿಮೆ ಮಾಡಲು ಕೆಲವು ಮನೆ ಮದ್ದುಗಳು ಇಂತಿವೆ.

Health Tips
Health Tips


ಅರಿಶಿನ ಚಿಕಿತ್ಸೆ

ಅರಿಶಿನವು ಉರಿಯೂತ ಮತ್ತು ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ.

ಒಂದು ಬೌಲ್ ಬೆಚ್ಚಗಿನ ನೀರಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಇದಕ್ಕೆ ಒಂದು ಟೀ ಚಮಚ ಉಪ್ಪನ್ನು ಕೂಡ ಸೇರಿಸಬಹುದು. ಈ ಮಿಶ್ರಣದಲ್ಲಿ ಪಾದಗಳನ್ನು ಸುಮಾರು 15- 20 ನಿಮಿಷಗಳ ಕಾಲನೆನೆಸಿಟ್ಟರೆ ಸ್ನಾಯುಗಳಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ಉರಿಯೂತ ಕಡಿಮೆ ಮಾಡುತ್ತದೆ.

ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ಪೇಸ್ಟ್ ಮಾಡಿ ಪಾದಗಳ ಊತ ಅಥವಾ ನೋವಿನ ಪ್ರದೇಶಗಳಿಗೆ ಹಾಕಿ. ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ಕೂಡ ಉರಿಯೂತ, ನೋವನ್ನು ನಿವಾರಿಸುತ್ತದೆ.

Health Tips
Health Tips


ಉಪ್ಪು ನೀರು

ಉಪ್ಪನ್ನು ಬಳಸುವುದು ಪಾದದ ಊತ ಮತ್ತು ನೋವನ್ನು ನಿರ್ವಹಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ.

ಅರ್ಧ ಕಪ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿ ಇದರಲ್ಲಿ ಸುಮಾರು 20- 30 ನಿಮಿಷಗಳ ಕಾಲ ಪಾದಗಳನ್ನು ನೆನೆಸಿ. ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸ್ನಾಯುವಿನ ನೋವನ್ನು ಕಡಿಮೆ ಮಾಡುತ್ತದೆ.

Health Tips
Health Tips


ಐಸ್ ಪ್ಯಾಕ್

ಐಸ್ ಪ್ಯಾಕ್ ಅನ್ನು ಅನ್ವಯಿಸುವುದು ಊತ ಮತ್ತು ಮರಗಟ್ಟುವಿಕೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಲವು ಐಸ್ ತುಂಡುಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅಥವಾ ಐಸ್ ಪ್ಯಾಕ್ ಬಳಸಿ. ಇದನ್ನು 15- 20 ನಿಮಿಷಗಳ ಕಾಲ ಪಾದಗಳ ಊತ ಅಥವಾ ನೋವಿನ ಪ್ರದೇಶಕ್ಕೆ ಅನ್ವಯಿಸಿ. ಫ್ರಾಸ್ಬೈಟ್ ಅನ್ನು ತಡೆಗಟ್ಟಲು ಐಸ್ ಮತ್ತು ನಚರ್ಮದ ನಡುವೆ ಬಟ್ಟೆಯನ್ನು ಇರಿಸಲು ಮರೆಯದಿರಿ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

Health Tips
Health Tips


ಪಾದಗಳನ್ನು ಎತ್ತರದಲ್ಲಿ ಇರಿಸುವುದು

ಪಾದಗಳನ್ನು ಎತ್ತರದಲ್ಲಿ ಇಟ್ಟುಕೊಳ್ಳುವುದು ರಕ್ತ ಪರಿಚಲನೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ವಿಶ್ರಾಂತಿ ಪಡೆಯುವಾಗ ಅಥವಾ ನಿದ್ರಿಸುವಾಗ ದಿಂಬುಗಳನ್ನು ಇತ್ತು ಪಾದಗಳನ್ನು ಹೃದಯ ಮಟ್ಟದಿಂದ ಮೇಲಕ್ಕೆತ್ತಿ. ಇದು ಪಾದಗಳಲ್ಲಿ ದ್ರವದ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಹಲವಾರು ಬಾರಿ ನಿಮ್ಮ ಪಾದಗಳನ್ನು 15- 30 ನಿಮಿಷಗಳ ಕಾಲ ಎತ್ತರದಲ್ಲಿ ಇರಿಸಿ ಇದು ಉರಿಯೂತ, ನೋವನ್ನು ನಿವಾರಿಸುತ್ತದೆ.

Health Tips
Health Tips


ಬೆಚ್ಚಗಿನ ಎಣ್ಣೆ ಮಸಾಜ್

ಮೃದುವಾಗಿ ಬೆಚ್ಚಗಿನ ಎಣ್ಣೆ ಮಸಾಜ್ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಊತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಸಾಸಿವೆ ಎಣ್ಣೆ, ಎಳ್ಳಿನ ಎಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ನಂತಹ ಬೆಚ್ಚಗಿನ ಎಣ್ಣೆಗಳನ್ನು ಬಳಸಿ ವೃತ್ತಾಕಾರವಾಗಿ ಪಾದಗಳಿಗೆ ಎಣ್ಣೆಯನ್ನು ನಿಧಾನವಾಗಿ ಮಸಾಜ್ ಮಾಡಿ. ಉಷ್ಣತೆ ಮತ್ತು ಮಸಾಜ್ ಕ್ರಿಯೆಯು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಬಿಗಿತವನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡಿ.

Health Tips
Health Tips


ಪಾದದ ವ್ಯಾಯಾಮಗಳು

ಸರಳವಾದ ಕಾಲು ವ್ಯಾಯಾಮಗಳನ್ನು ಮಾಡುವುದರಿಂದ ಊತವನ್ನು ಕಡಿಮೆ ಮಾಡಬಹುದು.
ಕುಳಿತಿರುವಾಗ ಪದಗಳನ್ನು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ವೃತ್ತಗಳಲ್ಲಿ ತಿರುಗಿಸಿ. ಪ್ರತಿ ಪಾದದಲ್ಲಿ ಸುಮಾರು 1 ನಿಮಿಷ ಇದನ್ನು ಮಾಡಿ.

ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡಲು ಕಾಲ್ಬೆರಳುಗಳನ್ನು ಪದೇ ಪದೇ ಬಗ್ಗಿಸಿ.

Health Tips
Health Tips


ನೀರು, ಆಹಾರ

ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಕಾಲು ಊತವನ್ನು ನಿರ್ವಹಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

ಹಣ್ಣು, ತರಕಾರಿಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಬಾಳೆಹಣ್ಣುಗಳಂತಹ ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳು ದೇಹದಲ್ಲಿ ದ್ರವವನ್ನು ಸಮತೋಲನಗೊಳಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Continue Reading
Advertisement
Women's T20 World Cup
ಪ್ರಮುಖ ಸುದ್ದಿ14 mins ago

Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

Bangladesh Protest
ವಿದೇಶ34 mins ago

Bangladesh Protest: ಶೇಖ್‌ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದಲ್ಲಿ 4 ಹಿಂದು ದೇಗುಲಗಳ ಧ್ವಂಸ; ಹಿಂದು ಕೌನ್ಸಿಲರ್‌ ಹತ್ಯೆ!

ಪ್ರಮುಖ ಸುದ್ದಿ2 hours ago

Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಪ್ರಮುಖ ಸುದ್ದಿ2 hours ago

Gowri Movie: ‘ಗೌರಿ’ ಚಿತ್ರದ ಟ್ರೈಲರ್ ಅನಾವರಣ ಮಾಡಿದ ಕಿಚ್ಚ ಸುದೀಪ್

Bangladesh Protest
ದೇಶ2 hours ago

Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Independence Day 2024
ಸಿನಿಮಾ2 hours ago

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

CM Siddaramaiah instructs to provide immediate relief to those affected by heavy rains
ಕರ್ನಾಟಕ2 hours ago

CM Siddaramaiah: ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ತಕ್ಷಣ ಪರಿಹಾರ; ಸಿದ್ದರಾಮಯ್ಯ ಸೂಚನೆ

ಪ್ರಮುಖ ಸುದ್ದಿ2 hours ago

Vinod Kambli : ಹದಗೆಟ್ಟಿದೆ ಮಾಜಿ ಕ್ರಿಕೆಟರ್​ ವಿನೋದ್ ಕಾಂಬ್ಳಿ ಆರೋಗ್ಯ ; ಸಚಿನ್ ಜತೆಗಾರನಿಗೆ ಈಗ ಕೈ ಹಿಡಿದುಕೊಂಡು ನಡೆಯುವ ಪರಿಸ್ಥಿತಿ!

Urban local bodies
ಪ್ರಮುಖ ಸುದ್ದಿ3 hours ago

Urban local bodies: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ; ಇಲ್ಲಿದೆ ಪಟ್ಟಿ

ವಿಸ್ತಾರ ಗ್ರಾಮ ದನಿ
ಪರಿಸರ3 hours ago

ವಿಸ್ತಾರ ಗ್ರಾಮ ದನಿ: ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ; ನಮ್ಮ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಕೃಷಿಕರಿಗಾಗಿ ಏನು ಮಾಡಬಹುದು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌