ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ? - Vistara News

ಅಂಕಣ

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?

ರಾಜಮಾರ್ಗ ಅಂಕಣ: ಕೆಲವೊಮ್ಮೆ ನಮ್ಮ ಸಾವು ನಮಗೆ ತಿಳಿಯುವುದೇ ಇಲ್ಲ. ಆದರೆ ವ್ಯಕ್ತಿಗಳ ಬದುಕಿನ ಚೈತನ್ಯಮಯಿ ಕ್ಷಣಗಳ ನಾಶ ನಾನಾ ಬಗೆಯಲ್ಲಿ ಸಾಧ್ಯ. ಅವು ಹೇಗೆ ಅಂತ ಇಲ್ಲಿ ನೋಡೋಣ.

VISTARANEWS.COM


on

change ರಾಜಮಾರ್ಗ ಅಂಕಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬನ್ನಿ ಬದಲಾಗೋಣ. ಆಗದಿದ್ದರೆ ಅದಕ್ಕೆ ನಾವೇ ಹೊಣೆ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: 1) ನಾನು ಏನು ಬರೆದರೂ ಜನರು ಓದುತ್ತಾರೆ ಎಂದು ನಂಬಲು ತೊಡಗಿದ ಕ್ಷಣಕ್ಕೆ ಒಬ್ಬ ಬರಹಗಾರ ಸಾಯುತ್ತಾನೆ.

2) ತಾನು ಏನು ಮಾಡಿದರೂ ಜನರು ಓಟು ಹಾಕ್ತಾರೆ ಎಂದು ನಂಬಿದ ಕ್ಷಣಕ್ಕೆ ಓರ್ವ ರಾಜಕಾರಣಿ ನಾಶವಾಗುತ್ತಾನೆ.

3) ತಾನು ಎಲ್ಲವೂ ಕಲಿತಾಗಿದೆ, ಹೊಸದಾಗಿ ಕಲಿಯುವುದು ಏನಿಲ್ಲ ಎಂದು ನಂಬಿದ ಕ್ಷಣಕ್ಕೆ ಒಬ್ಬ ಗುರುವು ಸಾವನ್ನು ಕಾಣುತ್ತಾನೆ.

4) ತಾನು ಉಪದೇಶ ಮಾಡುವುದರಿಂದ ಜಗತ್ತು ಬದಲಾಗುತ್ತದೆ ಎಂದು ನಂಬಿದ ಕ್ಷಣಕ್ಕೆ ಓರ್ವ ಧರ್ಮಗುರುವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

5) ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೇ ಸುದ್ದಿ ಎಂದು ನಿರ್ಧಾರ ಮಾಡಿದ ಕ್ಷಣಕ್ಕೆ ಓರ್ವ ಪತ್ರಕರ್ತನು ನಾಶವಾಗುತ್ತಾನೆ.

6) ನಾನು ಪ್ರಯತ್ನ ಮಾಡದೆ ಎಲ್ಲರನ್ನೂ ದೇವರೇ ಗುಣಪಡಿಸುತ್ತಾನೆ ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ವೈದ್ಯನು ತನ್ನ ಮೌಲ್ಯ ಕಳೆದುಕೊಳ್ಳುತ್ತಾನೆ.

7) ಪರಿಶ್ರಮವಿಲ್ಲದೆ ಕೀರ್ತಿ ಬರಲಿ ಎಂದು ಹಾರೈಸಿದ ಕ್ಷಣಕ್ಕೆ ಒಂದು ಪ್ರತಿಭೆಯು ಸಾಯುತ್ತದೆ.

8) ತಾನಿರುವುದೇ ಆದೇಶ ನೀಡಲು, ಉಳಿದವರೆಲ್ಲರೂ ನನ್ನನ್ನು ಫಾಲೋ ಮಾಡಬೇಕು ಎಂದು ನಂಬಿದ ಕ್ಷಣಕ್ಕೆ ಒಬ್ಬ ಲೀಡರ್ ಸಾಯುತ್ತಾನೆ.

9) ತಾನು ಕಂಫರ್ಟ್ ವಲಯದಲ್ಲಿ ಇರ್ತೇನೆ, ರಿಸ್ಕ್ ಯಾರಿಗೆ ಬೇಕು? ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ಉದ್ಯಮಿಯು ನಾಶವಾಗುತ್ತಾನೆ.

10) ಸೃಜನಶೀಲವಾಗಿ ಯೋಚನೆ ಮಾಡುವುದನ್ನು ಬಿಟ್ಟ ಕ್ಷಣದಲ್ಲಿ ಓರ್ವ ಕಲಾವಿದನು ಸಾಯುತ್ತಾನೆ.

11) ತನ್ನ ಸಾಮರ್ಥ್ಯವನ್ನು ನಂಬದೆ ಬೇರೆಯವರನ್ನು ಅನುಕರಣೆ ಮಾಡುತ್ತಾ ಹೋದಾಗ ಓರ್ವ ಸಾಧಕನು ನಿಧಾನವಾಗಿ ನಾಶವಾಗುತ್ತಾನೆ.

12) ತನ್ನ ಉತ್ಪನ್ನಗಳಲ್ಲಿ ನಂಬಿಕೆ ಇಡದೆ ಜಾಹೀರಾತುಗಳನ್ನು ನಂಬಿ ಕೂತಾಗ ಓರ್ವ ವ್ಯಾಪಾರಿಯು ಖಾಲಿ ಆಗುತ್ತಾನೆ.

13) ಕ್ಷಣ ಕ್ಷಣಕ್ಕೆ ಅಪ್ಡೇಟ್ ಆಗದೇ ಅದೇ ಸವಕಲು ಮಾದರಿಗಳನ್ನು ನಂಬಿ ಕೂತಿರುವ ಸಂಶೋಧಕನು ಔಟ್ ಡೇಟ್ ಆಗುವುದು ಖಂಡಿತ.

14) ತನಗೆ ಬಂದ ಸೋಲುಗಳಿಗೆ ಆತ್ಮಾವಲೋಕನ ಮಾಡಿಕೊಳ್ಳದೆ ಬೇರೆಯವರನ್ನು ದೂರುತ್ತಾ ಕೂತಾಗ ಒಬ್ಬ ಮ್ಯಾನೇಜರ್ ಸಾಯುತ್ತಾನೆ.

15) ಗುರುಗಳ ಮೇಲೆ ನಂಬಿಕೆ ಇಲ್ಲದೆ ಎಲ್ಲವನ್ನೂ ನಾನೇ ಕಲಿಯುತ್ತೇನೆ ಎಂದು ಹೊರಡುವ ಶಿಷ್ಯ ಸೋಲುವುದು ಖಂಡಿತ.

16) ಗೆಲುವಿನ ದಾರಿಯನ್ನು ಹೇಳಿಕೊಡದೆ ಕೇವಲ ಮೋಟಿವೇಶನ್ ಮಾತ್ರ ಮಾಡುತ್ತಾ ಹೋಗುವ ತರಬೇತುದಾರನು ನಿಧಾನಕ್ಕೆ ಖಾಲಿ ಆಗುತ್ತಾನೆ.

17) ತನಗೆ ದೊರೆತ ಪ್ರತೀಯೊಂದು ಅವಕಾಶವನ್ನು ವ್ಯರ್ಥ ಮಾಡುತ್ತಾ ಇನ್ನೊಂದು ಅವಕಾಶ ಬೇಕಿತ್ತು ಎಂದು ಕಾಯುತ್ತಾ ಕುಳಿತ ಕ್ರೀಡಾಪಟುವು ನಿಧಾನವಾಗಿ ಮೌಲ್ಯ ಕಳೆದುಕೊಳ್ಳುತ್ತಾನೆ.

Morning sun light and get up early
Morning sun light and get up early

18) ತನ್ನ ಮತದಾನದ ಹಕ್ಕನ್ನು ಸರಿಯಾಗಿ ಚಲಾವಣೆ ಮಾಡದೆ ಸರಕಾರ ಸರಿಯಿಲ್ಲ ಎಂದು ಟೀಕೆ ಮಾಡುವ ಮತದಾರನು ತಾನು ನಾಶವಾಗುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ನಾಶಕ್ಕೆ ಕೂಡ ಕಾರಣ ಆಗುತ್ತಾನೆ.

19) ಬೇರೆಯವರ ಮಾತುಗಳನ್ನು ಆಲಿಸದೇ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನಿರ್ಧಾರ ಮಾಡುವ ಅರಸನು ನಿಧಾನವಾಗಿ ನಾಶವಾಗುತ್ತಾನೆ.

20) ತನ್ನ ಸಾಮರ್ಥ್ಯಗಳ ಮೇಲೆ ನಂಬಿಕೆ ಇಡದೆ ಯಾರ್ಯಾರನ್ನೋ ಅವಲಂಬನೆ ಮಾಡುವ ಬಾಸ್ ನಿಧಾನವಾಗಿ ನಾಶವಾಗಿ ಬಿಡುತ್ತಾನೆ.

21) ಬೇರೆ ಯಾರನ್ನೂ ಬೆಳೆಸದೆ ತಾನು ಮಾತ್ರ ಬೆಳೆದರೆ ಸಾಕು ಎಂದು ಯೋಚಿಸುವ ವ್ಯಕ್ತಿಯು ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

22) ತಾನು ಆಡುವ ಮಾತುಗಳು ಬೇರೆಯವರಿಗೆ, ತನ್ನ ಅನುಷ್ಠಾನಕ್ಕೆ ಅಲ್ಲ ಎಂದು ನಂಬುತ್ತ ಕೂತರೆ ಒಬ್ಬ ಭಾಷಣಕಾರ ನಾಶವಾಗಲು ಹೆಚ್ಚು ಸಮಯ ಬೇಕಾಗಿಲ್ಲ.

23) ರಾಷ್ಟ್ರಕ್ಕೆ ತನ್ನ ನಿಷ್ಠೆಯನ್ನು ಮರೆತು, ರಾಷ್ಟ್ರ ಮೊದಲು ಎಂದು ನಂಬಿಕೆ ಇಲ್ಲದ ಸೈನಿಕನು ಯುದ್ಧವನ್ನು ಮಾಡದೆ ಸಾಯುತ್ತಾನೆ.

ಯೋಚಿಸಿ ಮತ್ತು ಬದಲಾಗಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

ನನ್ನ ದೇಶ ನನ್ನ ದನಿ ಅಂಕಣ: ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

VISTARANEWS.COM


on

chamanlal book ನನ್ನ ದೇಶ ನನ್ನ ದನಿ ಅಂಕಣ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

:: ಮಂಜುನಾಥ ಅಜ್ಜಂಪುರ

ನನ್ನ ದೇಶ ನನ್ನ ದನಿ ಅಂಕಣ: ನಮ್ಮದು ಅತಿ-ವಿಶಿಷ್ಟ ಸಾಂಸ್ಕೃತಿಕ (Cultural) ಪರಂಪರೆ. ಭಾರತವನ್ನು – ಭಾರತದ ಆತ್ಮವನ್ನು (soul of India) ಅರ್ಥ ಮಾಡಿಕೊಳ್ಳಲು, ಪಾಶ್ಚಾತ್ಯ ಮಾನಸಿಕತೆಯನ್ನು ಮತ್ತು ಆ ವಾಹಿನಿಯಿಂದ ಬಂದ ಸಾಮ್ರಾಜ್ಯಶಾಹಿ ಪರಿಕಲ್ಪನೆಗಳನ್ನು ಪಕ್ಕಕ್ಕಿರಿಸಿ, ಸಾಂಸ್ಕೃತಿಕ ಭಾರತವನ್ನು ಕಣ್ಮುಂದೆ ತಂದುಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ, ನಮ್ಮ ಅಸ್ಮಿತೆ – ನಮ್ಮ ವೈಶಿಷ್ಟ್ಯಗಳು ಆತ್ಮಗತವಾಗುತ್ತವೆ.

ಆಕ್ರಮಣಕಾರಿ ಅಬ್ರಹಾಮಿಕ್ ಮತಗಳಿಂದ ನಮಗೆ ಬಹಳ ದೊಡ್ಡ ಆಘಾತವೇ ಮುಗಿಬಿದ್ದಿದೆ. ಲಕ್ಷ ಲಕ್ಷ ಗ್ರಂಥಗಳು ಜಿಹಾದಿಗಳಿಂದ ನಾಶವಾಗಿಹೋಗಿವೆ. ನಮ್ಮ ಪರಂಪರೆಯ ಸರಿಯಾದ ಚಿತ್ರವೇ ಇನ್ನೂ ಸಿಕ್ಕಿಲ್ಲ. ನಮ್ಮ ಇತಿಹಾಸದ, ನಮ್ಮ ಪರಂಪರೆಯ ತುಂಬ ತುಂಬ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಸಂಶೋಧಿಸುವ ಮಹತ್ಕಾರ್ಯ ಇನ್ನೂ ಆರಂಭವಾಗಿಯೇ ಇಲ್ಲ.

ನಮಗೆ ಗ್ರಂಥನಾಶಕ್ಕಿಂತ ದೊಡ್ಡ ಪೆಟ್ಟು ಬಿದ್ದದ್ದು ಮೆಕಾಲೆವಾದಿ – ಜಿಹಾದೀ – ಕಮ್ಯೂನಿಸ್ಟ್ ದೇಶದ್ರೋಹಿ ಇತಿಹಾಸಕಾರರಿಂದ. ಇವರೆಲ್ಲಾ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಬರೀ ಅನೃತವನ್ನೇ ತುಂಬಿದುದರಿಂದ, ಸತ್ಯಕಥನಗಳಿಗಾಗಿ ಬೇರೆ ಬೇರೆ ಸಾಕ್ಷ್ಯಾಧಾರಗಳನ್ನು ನಾವೀಗ ಆಶ್ರಯಿಸಬೇಕಾಗಿದೆ. ಜಗತ್ತಿನ ಶ್ರೇಷ್ಠ ಇತಿಹಾಸಕಾರರಾದ ವಿಲ್ ಡ್ಯೂರಾಂಟ್ ಭಾರತವನ್ನು ಅರ್ಥ ಮಾಡಿಕೊಂಡವರಲ್ಲಿ ಒಬ್ಬರು. ಇಸ್ಲಾಮೀ ದುರಾಕ್ರಮಣಗಳಿಂದ ರಕ್ತಸಿಕ್ತವಾಗಿಹೋಗಿದ್ದ ಭಾರತಕ್ಕಾಗಿ ಅವರು ಮಿಡಿದಿದ್ದರು.

“ಭಾರತವು ನಮ್ಮ ಜನಾಂಗದ ಮಾತೃಭೂಮಿ. ಸಂಸ್ಕೃತ ಭಾಷೆಯು ಯೂರೋಪಿನ ಭಾಷೆಗಳ ತಾಯಿ. ನಮ್ಮ ತತ್ತ್ವಶಾಸ್ತ್ರ, ಗಣಿತ, ಸ್ವಯಮಾಡಳಿತ ಮತ್ತು ಜನತಂತ್ರಗಳ ಪರಿಕಲ್ಪನೆಯ ಮೂಲವು ಭಾರತವೇ. ಅನೇಕ ರೀತಿಯಲ್ಲಿ ಭಾರತವೇ ನಮ್ಮೆಲ್ಲರ ತಾಯಿ” ಎಂದಿದ್ದರು ವಿಲ್ ಡ್ಯೂರಾಂಟ್.

ಈ ಮಾತುಗಳಿಂದ ಪ್ರೇರಣೆ ಪಡೆದ ಭಿಕ್ಷು ಚಮನ್ ಲಾಲ್ ಅವರು “India Mother of us all” (ಪ್ರಕಟಣೆ 1968) ಎಂಬ ಮಹತ್ತ್ವದ ಕೃತಿಯನ್ನು ನೀಡಿದ್ದಾರೆ. ಎಲ್.ವಿ. ಶಾಂತಕುಮಾರಿ ಅವರು “ನಮ್ಮೆಲ್ಲರ ತಾಯಿ ಭಾರತ” ಎಂಬ ತುಂಬ ಚಂದದ ಕನ್ನಡಾನುವಾದವನ್ನು ನೀಡಿದ್ದಾರೆ. ಬೇರೆಬೇರೆ ದೇಶಗಳ ಅನೇಕ ವಿದ್ವಾಂಸರ ಅಭಿಮತ ಮತ್ತು ಸತ್ಯನಿಷ್ಠ ಮೆಚ್ಚುಗೆಗಳನ್ನು ಇಲ್ಲಿ ದಾಖಲಿಸಲಾಗಿದೆ.

“ಭಾರತದ ಜನರು ಧಾರ್ಮಿಕರು, ವಾತ್ಸಲ್ಯಮಯ ವ್ಯಕ್ತಿತ್ವದವರು, ಅತಿಥಿ ಸತ್ಕಾರ ಮಾಡುವವರು, ಸ್ನೇಹಪರರು, ಮುಚ್ಚುಮರೆಯಿರದ ಸರಳಜೀವಿಗಳು. ಭಾರತೀಯರು ಪ್ರಾಂಜಲ ಸ್ವಭಾವದವರು, ವೈಜ್ಞಾನಿಕ ಸಂಶೋಧನೆಗಳಲ್ಲಿ ನಿರತರಾಗಿರುವವರು, ಜೀವನದಲ್ಲಿ ಕಠಿಣ ನಿಯಮಗಳನ್ನು ಅನುಸರಿಸುವವರು, ನ್ಯಾಯಾನ್ವೇಷಿಗಳು, ತೃಪ್ತರು, ಉದ್ಯಮಶೀಲರು, ವ್ಯವಹಾರ ಸಮರ್ಥರು, ನಿಷ್ಠರು, ಸತ್ಯಸಂಧರು ಮತ್ತು ಸ್ಥಿರವಾಗಿ ನಿಲ್ಲುವವರು. ಈ ಜನಗಳ ನಿಜವಾದ ಜೀವನಮೌಲ್ಯವು ವಿಪತ್ಕಾಲದಲ್ಲಿ ಎದ್ದುತೋರುತ್ತದೆ. ಇಲ್ಲಿನ ಯೋಧರಿಗೆ ರಣರಂಗದಿಂದ ಹಿಮ್ಮೆಟ್ಟುವುದು ಗೊತ್ತೇ ಇಲ್ಲ. ಯುದ್ಧರಂಗದಲ್ಲಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಅವರು ಕುದುರೆಗಳಿಂದ ಕೆಳಗಿಳಿದು ತಮ್ಮ ಜೀವಗಳನ್ನೇ ಅಪಾಯಕ್ಕೆ ಒಡ್ಡಿಕೊಂಡು ದೃಢನಿರ್ಧಾರ ತೆಗೆದುಕೊಳ್ಳುತ್ತಾರೆ. ಯುದ್ಧಭೂಮಿಯಿಂದ ಓಡಿಹೋಗುವುದು ಸಾವಿಗಿಂತಲೂ ಹೆಚ್ಚು ಭಯಂಕರವಾದುದು, ಎಂದು ಭಾರತೀಯರು ಪರಿಗಣಿಸುತ್ತಾರೆ” ಎಂದು ತನ್ನ “ಐನ್ ಈ ಅಕ್ಬರಿ” ಕೃತಿಯಲ್ಲಿ, ಸಾಮಾನ್ಯ ಯುಗದ 16ನೆಯ ಶತಮಾನದ ಮುಸ್ಲಿಂ ಇತಿಹಾಸಕಾರ ಅಬು ಫಝಲ್ ಅಲ್ಲಮಿ ದಾಖಲಿಸಿದ್ದಾನೆ.

ಅನೀತಿಯುತವಾದ ಭಾರತ-ವಿರೋಧೀ ಪರಿಕಲ್ಪನೆಗಳ ವಿಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತ ನಮಗೆಲ್ಲಾ ಈ ದಾಖಲೆಗಳು “ನಿಜವೇ?” ಎಂಬ ವಿಸ್ಮಯವನ್ನು ಹುಟ್ಟಿಸುತ್ತವೆ. ಕಳೆದ ಎರಡು ಶತಮಾನಗಳ ಕಾಲಾವಧಿಯ, ಬ್ರಿಟಿಷರ ಮತ್ತು ಅವರ “ಪ್ರೀತಿಪಾತ್ರರ” ದುರಾಡಳಿತದಲ್ಲಿ ನಮ್ಮ ಸಮಾಜವು ಹೇಗಿದೆಯೆಂದರೆ, ಈ ಜೀವನಮೌಲ್ಯಗಳು ಹಿಂದೆ ನಮ್ಮಲ್ಲಿ ಇದ್ದವೇ, ಎಂಬ ಅನುಮಾನವು ನಮ್ಮಲ್ಲಿಯೇ ಮೂಡುತ್ತದೆ.

ಸಾಮಾನ್ಯಯುಗಪೂರ್ವ 4ನೆಯ ಶತಮಾನದ ಗ್ರೀಕ್ ಇತಿಹಾಸಕಾರ ಮತ್ತು ಜನಾಂಗಶಾಸ್ತ್ರಜ್ಞ ಮೆಗಾಸ್ತನೀಸ್ ಭಾರತೀಯ ಪುರುಷರ ಧೈರ್ಯವನ್ನು, ಸ್ತ್ರೀಯರ ಪರಿಶುದ್ಧತೆಯನ್ನು ಮತ್ತು ಮುಖ್ಯವಾಗಿ ಗುಲಾಮಗಿರಿಯ ಅನುಪಸ್ಥಿತಿಯನ್ನು ಗುರುತಿಸಿದ್ದಾನೆ. “ಪರಾಕ್ರಮದಲ್ಲಿ ಏಷಿಯಾದ ಉಳಿದೆಲ್ಲರನ್ನೂ ಮೀರಿಸಿದ ಭಾರತೀಯರು ಶಾಂತಚಿತ್ತರು, ಉದ್ಯಮಶೀಲರು, ಉತ್ತಮ ರೈತರು ಮತ್ತು ಕುಶಲ ಕಸಬುದಾರರು. ಅವರು ಎಂದೂ ದಾವೆ, ಖಟ್ಲೆಗಳನ್ನು ಅವಲಂಬಿಸಿದವರಲ್ಲ ಮತ್ತು ತಮ್ಮ ಸ್ಥಳೀಯ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಶಾಂತಿಯಿಂದ ಜೀವಿಸುತ್ತಿದ್ದರು” ಎಂದು ಸಹ ಗಮನಿಸಿದ್ದಾನೆ, ಮೆಚ್ಚಿದ್ದಾನೆ.

ಇನ್ನೋರ್ವ ಗ್ರೀಕ್ ತತ್ತ್ವಶಾಸ್ತ್ರಜ್ಞ ಎಪಿಕ್ಟೆಟಸ್ ಶಿಷ್ಯ ಅರ್ರೇನ್ (ಸಾಮಾನ್ಯ ಯುಗದ 2ನೆಯ ಶತಮಾನ) “ಪ್ರಾಚೀನ ಭಾರತದಲ್ಲಿ ಕಳ್ಳತನವೆಂಬುದು ಇರಲೇ ಇಲ್ಲ. ಜನರು ಪರಿಪೂರ್ಣ ಸುರಕ್ಷತೆಯಿಂದ ಜೀವಿಸುತ್ತಿದ್ದರು. ಹಿಂದೂಗಳು ಎಷ್ಟು ಪ್ರಾಮಾಣಿಕರೆಂದರೆ, ಅವರ ಮನೆಯ ಬಾಗಿಲುಗಳಿಗೆ ಬೀಗದ ಆವಶ್ಯಕತೆಯಿರಲಿಲ್ಲ. ಪರಸ್ಪರರಲ್ಲಿ ಅವರು ಮಾಡಿಕೊಳ್ಳುತ್ತಿದ್ದ ಒಪ್ಪಂದಗಳನ್ನು ಖಾತ್ರಿಪಡಿಸಲು ಲಿಖಿತ ಪುರಾವೆಗಳ ಆವಶ್ಯಕತೆಯೂ ಅವರಿಗಿರಲಿಲ್ಲ. ಯಾವೊಬ್ಬ ಭಾರತೀಯನೂ ಅಸತ್ಯವಾಡಿದ್ದನ್ನು ಎಂದೂ ಕಂಡಿಲ್ಲ, ಕೇಳಿಲ್ಲ” ಎಂದು ಮೆಚ್ಚಿ ದಾಖಲಿಸಿದ್ದಾನೆ.

ಚೀನಾದ ಯಾತ್ರಿಕರಲ್ಲಿ ಅತ್ಯಂತ ಪ್ರಸಿದ್ಧನಾದವನು, ಸಾಮಾನ್ಯ ಯುಗದ 7ನೆಯ ಶತಮಾನಕ್ಕೆ ಸೇರಿದ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂಎನ್ ತ್ಸಾಂಗ್ ಎನ್ನಲಾಗುತ್ತಿತ್ತು). ಅವನು “ಭಾರತೀಯರು ತಮ್ಮ ನಿಷ್ಕಪಟ ನೇರ ನಡೆನುಡಿ ಮತ್ತು ಪ್ರಾಮಾಣಿಕ ಚಾರಿತ್ರ್ಯದಿಂದಾಗಿ ಪ್ರಸಿದ್ಧರಾಗಿದ್ದಾರೆ. ಸಂಪತ್ತಿಗೆ ಸಂಬಂಧಿಸಿದಂತೆ ಅವರು ಏನನ್ನೂ ಅನ್ಯಾಯವಾಗಿ ತೆಗೆದುಕೊಳ್ಳುವುದಿಲ್ಲ. ನ್ಯಾಯವನ್ನು ಅವರು ಗೌರವಿಸುತ್ತಾರೆ. ನೇರ ನಡವಳಿಕೆ ಅವರ ಆಡಳಿತದ ಮುಖ್ಯ ಲಕ್ಷಣವಾಗಿದೆ” ಎಂದು ಮೆಚ್ಚಿದ್ದಾನೆ.

gurukula Shikshana
gurukula Shikshana

ಡಿಸೆಂಬರ್ 1861ರ “ದಿ ಕೊಲ್ಕತ್ತಾ ರಿವ್ಯೂ” ಹೀಗೆ ಹೇಳುತ್ತದೆ: ” ಹಿಂದಿನ ಕಾಲದಲ್ಲಿ ಹಿಂದೂಗಳು ವ್ಯವಹಾರನಿಪುಣರಾಗಿದ್ದರು. ಭಾರತದ ಮಗ್ಗಗಳಲ್ಲಿನ ಪರಿಶ್ರಮವನ್ನು ಜಗತ್ತಿನೆಲ್ಲೆಡೆ ಗೌರವಿಸಲಾಗುತ್ತಿತ್ತು ಮೆಚ್ಚಲಾಗುತ್ತಿತ್ತು, ಎನ್ನುವುದಕ್ಕೆ ಹೇರಳವಾದ ಸಾಕ್ಷ್ಯಾಧಾರಗಳಿವೆ. ಪ್ರಾಚೀನ ಕಾಲದಿಂದಲೇ ಹಿಂದೂಗಳು ರೇಷ್ಮೆಯನ್ನು ತಯಾರಿಸುತ್ತಿದ್ದಾರೆ. ಭಾರತೀಯರು ಅತ್ಯಂತ ಪ್ರಾಜ್ಞರು, ಅಧ್ಯಾತ್ಮಜ್ಞಾನದಲ್ಲಿ ಅತ್ಯಂತ ಶ್ರೇಷ್ಠರು. ಖಗೋಳ ಶಾಸ್ತ್ರ ಹಾಗೂ ಅಂಕಗಣಿತದಲ್ಲಿಯೂ ಅಷ್ಟೇ ಪರಿಣತರು, ಎಂದು ಗ್ರೀಕ್ ಲೇಖಕರು ಹೇಳಿದ್ದಾರೆ”.

ಭಾರತೀಯರ ಬಗೆಗೆ ಡಯೋನಿಸಿಯಸ್ ಹೀಗೆ ಹೇಳಿದ್ದಾನೆ: “ಅವರು ಮೊದಲು ಸಾಗರವನ್ನು ಪರಿಶೋಧಿಸಿದರು. ಗೊತ್ತಿರದ ತೀರಗಳಿಗೂ ಸರಕುಗಳನ್ನು ಸಾಗಿಸಿದರು. ಭಾರತೀಯರು ಮೊದಲು ತಾರಾಮಂಡಲವನ್ನು ಅರಿತು ಅರಗಿಸಿಕೊಂಡರು. ಅವುಗಳ ಚಲನೆಯನ್ನು ಗುರುತಿಸಿದರು ಮತ್ತು ಬೇರೆ ಬೇರೆ ಹೆಸರುಗಳಲ್ಲಿ ಅವುಗಳನ್ನು ಕರೆದರು. ಪುರಾತನ ಕಾಲದಿಂದಲೂ, ಹಿಂದೂಸ್ತಾನವು ವಿಶ್ವದಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರವಾದ ದೇಶಗಳಲ್ಲಿ ಒಂದು, ಎಂದು ಪ್ರಖ್ಯಾತಿ ಹೊಂದಿದೆ.

ಎಲ್ಲ ಜ್ಞಾನಶಾಖೆಗಳಲ್ಲಿಯೂ ಪಾಶ್ಚಾತ್ಯರ ಹಳಸಲನ್ನೇ ತಿಂದು ಅದನ್ನೇ ವಿದ್ಯಾರ್ಥಿಗಳ ಮೇಲೆ ವಾಂತಿ ಮಾಡಿಕೊಳ್ಳುವ ನಮ್ಮ ಅಕೆಡೆಮಿಕ್ ಪ್ರಭೃತಿಗಳಿಗೆ, ಪ್ರಾಚೀನ ಹಿಂದೂ ಭಾರತದ ಯಾವ ಸಾಧನೆಗಳೂ – ಯಾವ ಚಿತ್ರಗಳೂ ಪಥ್ಯವಾಗುವುದಿಲ್ಲ. ಹಿಂದೆ ನಮ್ಮಲ್ಲಿದ್ದುದು ಬರೀ ಅಸ್ಪೃಶ್ಯತೆ, ಜಾತೀಯತೆ, ಸ್ತ್ರೀ ಅಸಮಾನತೆ, ಸತಿ ಸಹಗಮನ, ಮೂಢನಂಬಿಕೆಗಳು ಅಷ್ಟೇ, ಎನ್ನುತ್ತಾರೆ. ಮೇಲೆ ಹೇಳಿದ ಯಾವ ಸಂಗತಿಗಳನ್ನು ಪ್ರಸ್ತಾಪಿಸಿದರೂ ಅದೊಂದು ಜೋಕೆಂಬಂತೆ ಗಹಗಹಿಸಿ ನಗುತ್ತಾರೆ.

ಹಿರೋಷಿಮಾ ಮೇಲೆ ಅಣುಬಾಂಬ್ ಆಸ್ಫೋಟವಾದ ದುರ್ದಿನ ಆಗಸ್ಟ್ 6. ಮನುಕುಲದ ಮಹಾದುರಂತದ ದಿನವಿದು.

ವಿವೇಕಾನಂದರ, ಮಹರ್ಷಿ ಅರವಿಂದರ, ರವೀಂದ್ರರ, ಬಂಕಿಮ ಚಂದ್ರರ, ಸುಭಾಷರ, ಸತ್ಯಜಿತ್ ರಾಯ್ ಅಂತಹವರ ಅತ್ಯದ್ಭುತ ಪರಂಪರೆ – ಸಂಸ್ಕೃತಿ – ಸಂಗೀತ – ಸಾಹಿತ್ಯ – ಚಲನಚಿತ್ರ – ನೃತ್ಯಗಳ ಬಂಗಾಳ ಬಾಂಗ್ಲಾಗಳು ಕಳೆದ ನೂರು ವರ್ಷಗಳಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಿಬಿಟ್ಟಿವೆ. ಈಗ ಅಲ್ಲಿ ಕೇವಲ ಕಲ್ಲೆಸೆಯುವವರೇ ತುಂಬಿಕೊಂಡುಬಿಟ್ಟಿದ್ದಾರೆ.

ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

Continue Reading

ಅಂಕಣ

ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!

VISTARANEWS.COM


on

gratitude ರಾಜಮಾರ್ಗ ಅಂಕಣ
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಧನ್ಯವಾದ (Thanks) ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ. ಯಾರಿಗೆ ಗೊತ್ತು ನಾಳೆ ಅವರು ಮಾಡಿದ ಒಳ್ಳೆಯ ಕೆಲಸವು ಅವರಿಗೇ ಮರೆತು ಹೋಗಿರಬಹುದು!

ನೀವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಇಂದೇ ಕ್ಷಮೆ ಕೇಳಿಬಿಡಿ. ಏಕೆಂದರೆ ಅವರು ನಿಮ್ಮ ಹಾಗೆ ಕಣ್ಣೀರು ಸುರಿಸುತ್ತಾ ದೂರದಲ್ಲಿ ಕುಳಿತಿರಬಹುದು!

ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!

ನೀವು ಯಾರಿಗಾದರೂ ‘ ಆಲ್ ದ ಬೆಸ್ಟ್’ (All the Best) ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಾಭಾಷ್ ಹೇಳಲು ಕಾಯುತ್ತಿರಬಹುದು!

ನೀವು ಯಾರಿಗಾದರೂ ನಿಮ್ಮ ಪ್ರೀತಿಪಾತ್ರರಿಗೆ ಗುಟ್ಟುಗಳನ್ನು ಶೇರ್ ಮಾಡಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದ್ರೆ ಮುಂದೆ ಅದು ಬೇರೆಯವರ ಮೂಲಕ ಗೊತ್ತಾದರೆ ಅವರಿಗೆ ತುಂಬ ನೋವಾಗಬಹುದು!

ನಿಮ್ಮ ತಲೆಯಲ್ಲಿ ಏನಾದರೂ ಹೊಸ ಐಡಿಯಾ ಫ್ಲಾಶ್ ಆದರೆ ಅದನ್ನು ಬರೆದಿಡಿ ಮತ್ತು ತಕ್ಷಣ ಅನುಷ್ಟಾನಿಸಿ. ಏಕೆಂದರೆ ನಿಮ್ಮ ಐಡಿಯಾಗಳಿಗೆ ಕಾಪಿ ರೈಟ್ ಇರುವುದಿಲ್ಲ!

ನಿಮಗೆ ಯಾರಿಗಾದರೂ ಸಾರಿ ಹೇಳಲು ಬಾಕಿ ಇದ್ದರೆ ಇಂದೆ ಹೇಳಿಬಿಡಿ, ಯಾಕೆಂದರೆ ಆ ನಾಳೆ ಬಾರದೆ ಹೋಗಬಹುದು. ಬಂದರೂ ಅವರು ನಿಮಗೆ ಸಿಗದೇ ಹೋಗಬಹುದು!

ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!

ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ ಇದ್ದರೆ ಇಂದೆ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!

ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಮೋಹ ಹೆಚ್ಚಾಗಬಹುದು!

ಯಾರದಾದರೂ ಆಳುವ ಕಣ್ಣೀರಿಗೆ ನಿಮ್ಮ ಹೆಗಲು ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!

ನೀವು ಯಾರಿಗಾದರೂ ಬೆಸ್ಟ್ ಫ್ರೆಂಡಗೆ ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!

ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!

ನೀವು ಯಾವುದೇ ಹುಡುಗಿಗೆ ಪ್ರೊಪೋಸ್ ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರೊಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ‘ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ’ ಎಂದು ಹೇಳಬಹುದು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

Continue Reading

ಅಂಕಣ

ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

ರಾಜಮಾರ್ಗ ಅಂಕಣ: ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಹಾಮಾರಿಗೆ ಸಂತ್ರಸ್ತಳಾದ, ಕಪ್ಪು ಚರ್ಮ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾಸಾಧನೆಗಳ ಮೂಲಕ ಇತಿಹಾಸವನ್ನೇ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಗೌರವಿಸಿತು.

VISTARANEWS.COM


on

wilma rudolph ರಾಜಮಾರ್ಗ ಅಂಕಣ
Koo

ʼಕಪ್ಪು ಜಿಂಕೆ’ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಪ್ಯಾರಿಸ್ ನಗರದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Olympics) ಸುದ್ದಿಗಳು ಸಮುದ್ರದ ಅಲೆಗಳಂತೆ ತೇಲಿ ಬರುತ್ತಿರುವ ಈ ಹೊತ್ತಲ್ಲಿ ಇನ್ನೋರ್ವ ಮಹಾನ್ ಕ್ರೀಡಾ ಸಾಧಕಿಯ ಪರಿಚಯವು ನಿಮ್ಮ ಮುಂದೆ. ಹಾಗೆಯೇ ಜಗತ್ತಿನ ವರ್ಣ ದ್ವೇಷದ ಬೆಂಕಿಯ ಕುಲುಮೆಯಲ್ಲಿ ಚಂದವಾಗಿ ಅರಳಿದ ಒಂದು ಅದ್ಭುತ ಕ್ರೀಡಾ ಪ್ರತಿಭೆಯನ್ನು ತಮಗೆ ಪರಿಚಯಿಸಲು ಹೆಮ್ಮೆ ಪಡುತ್ತಿರುವೆ.

ಆಕೆಯನ್ನು ಜಗತ್ತು ‘ಕಪ್ಪು ಜಿಂಕೆ’ ಎಂದು ಕರೆಯಿತು

ಆಕೆಯ ಸಾಧನೆಯು ಮುಂದೆ ಸಾವಿರ ಸಾವಿರ ಕಪ್ಪು ವರ್ಣದ ಸಾಧಕರಿಗೆ ಪ್ರೇರಣೆ ನೀಡಿತು. ಆಕೆ ವಿಲ್ಮಾ ರುಡಾಲ್ಫ್ (Wilma Rudolph).

ಆಕೆ ಹುಟ್ಟಿದ್ದು ಅಮೆರಿಕಾದ ಸೈಂಟ್ ಬೆಥ್ಲೆಹೆಮ್ ಎಂಬ ಪುಟ್ಟ ನಗರದಲ್ಲಿ. ಅವಳು Premature Baby ಆಗಿ ಹುಟ್ಟಿದವಳು. ಹುಟ್ಟುವಾಗ ಅವಳ ತೂಕ ನಾಲ್ಕೂವರೆ ಪೌಂಡ್ ಮಾತ್ರ ಆಗಿತ್ತು. ಮಗು ಬದುಕುವ ಭರವಸೆ ವೈದ್ಯರಿಗೇ ಇರಲಿಲ್ಲ! ಅವಳ ಅಪ್ಪ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿದ್ದರು. ತೀವ್ರ ಬಡತನ. ಜೊತೆಗೆ ಅಪ್ಪನಿಗೆ ಎರಡು ಮದುವೆಯಾಗಿದ್ದು ಹುಟ್ಟಿದ್ದು ಒಟ್ಟು 22 ಮಕ್ಕಳು! ಅದರಲ್ಲಿ ವಿಲ್ಮಾ 20ನೆಯ ಮಗು! ಆದ್ದರಿಂದ ಅವಳು ಅಪ್ಪನಿಗೆ ಬೇಡವಾದ ಮಗಳು. ಅಮ್ಮನ ಮುದ್ದಿನ ಮಗಳು.

ಬಾಲ್ಯದಲ್ಲಿಯೇ ಆಕೆಗೆ ಕಾಡಿತ್ತು ಪೋಲಿಯೋ!

ಅಂತಹ ಹುಡುಗಿಗೆ ಬಾಲ್ಯದಲ್ಲಿ ಸಾಲು ಸಾಲು ಕಾಯಿಲೆಗಳ ಸರಮಾಲೆಯೇ ಎದುರಾಯಿತು. ಎರಡು ವರ್ಷದಲ್ಲಿ ಪುಟ್ಟ ಮಗುವಿಗೆ ನ್ಯೂಮೋನಿಯಾ ಬಂದು ಅವಳ ಅರ್ಧ ಶಕ್ತಿಯನ್ನು ತಿಂದು ಹಾಕಿತ್ತು. ಚೇತರಿಸಲು ಅವಕಾಶ ಕೊಡದೆ ನಂತರ ಬಂದದ್ದು ಸ್ಕಾರ್ಲೆಟ್ ಜ್ವರ. ಮೈ ಮೇಲೆ ರಕ್ತ ವರ್ಣದ ಗುಳ್ಳೆಗಳು ಬಂದು ಕೀವು ತುಂಬುವ ಖಾಯಿಲೆ ಅದು. ಅಮ್ಮ ಮಗಳ ಆರೈಕೆ ಮಾಡಿ ಹೈರಾಣಾಗಿ ಬಿಟ್ಟರು! ಸರಿಯಾಗಿ ಐದನೇ ವರ್ಷ ತುಂಬುವ ಹೊತ್ತಿಗೆ ಮಗುವಿಗೆ ಮತ್ತೆ ತೀವ್ರ ಜ್ವರ ಬಂತು. ಪರೀಕ್ಷೆ ಮಾಡಿದಾಗ ವೈದ್ಯರು ಪತ್ತೆ ಹಚ್ಚಿದ್ದು ಪೋಲಿಯೋ ಎಂಬ ಮಹಾ ಕಾಯಿಲೆ! ಆಗಿನ ಕಾಲದಲ್ಲಿ ಭಯ ಹುಟ್ಟಿಸುವ ಕಾಯಿಲೆ ಅದು!

ಅವಳ ವಯಸ್ಸಿನ ಬೇರೆ ಮಕ್ಕಳು ಶಾಲೆಗೆ ಹೋಗಲು ಆರಂಭ ಮಾಡಿದ್ದರು. ಆದರೆ ವಿಲ್ಮಾ ನೆಲದಲ್ಲಿ ತೆವಳುತಿದ್ದಳು. ವಾಶ್ ರೂಮಿಗೆ ಅವಳನ್ನು ಅಮ್ಮ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ಅವರಿದ್ದ ನಗರದಲ್ಲಿ ಆಗ ಕಪ್ಪು ವರ್ಣದವರಿಗೆ ಆಸ್ಪತ್ರೆಗಳಿಗೆ ಪ್ರವೇಶ ಇರಲಿಲ್ಲ. ಎಲ್ಲವೂ ಬಿಳಿ ಚರ್ಮದವರಿಗೆ ಮೀಸಲು. ಆದ್ದರಿಂದ ಅವಳ ಚಿಕಿತ್ಸೆಗೆ ಅಮ್ಮ ಅವಳನ್ನು 50 ಮೈಲು ದೂರದ ನಗರಕ್ಕೆ ಹೋಗಿ ಬರಬೇಕಾಯಿತು. ಅದೂ ಸತತ ಎರಡು ವರ್ಷ! ಏಳು ವರ್ಷದ ಮಗಳನ್ನು ಆ ಮಹಾತಾಯಿಯು ಸೊಂಟದ ಮೇಲೆ ಕೂರಿಸಿ ಆಸ್ಪತ್ರೆಯ ವಾರ್ಡಗಳಿಗೆ ಎಡತಾಕುವುದನ್ನು ನೋಡಿದವರಿಗೆ ‘ಅಯ್ಯೋ ಪಾಪ’ ಅನ್ನಿಸುತಿತ್ತು.

ʼಅಮ್ಮಾ, ನನ್ನ ಮಂಚವನ್ನು ಕಿಟಕಿಯ ಪಕ್ಕ ಸರಿಸು’

‘ಹೊರಗೆ ಮಕ್ಕಳು ಆಡುವುದನ್ನು ನಾನು ನೋಡಬೇಕು ಅಮ್ಮಾ ‘ ಎಂದು ಹೇಳಿದಾಗ ಪ್ರೀತಿಯ ಅಮ್ಮ ಹಾಗೆ ಮಾಡಿದ್ದರು. ಈ ಹುಡುಗಿ ಕಿಟಕಿಯಿಂದ ಹೊರಗೆ ಮೈದಾನದಲ್ಲಿ ಮಕ್ಕಳು ಆಡುವುದನ್ನು, ಓಡುವುದನ್ನು ನೋಡುತ್ತಾ ಸಂಭ್ರಮಿಸುವುದು, ಖುಷಿ ಪಡುವುದನ್ನು ನೋಡುತ್ತಾ ಅಮ್ಮನ ಮುಖದಲ್ಲಿ ಅಪರೂಪದ ನಗುವಿನ ಗೆರೆಯು ಚಿಮ್ಮುತ್ತಿತ್ತು! ಮನೆಯ ಒಳಗೆ ಗೋಡೆ ಹಿಡಿದುಕೊಂಡು ನಡೆಯಲು ಮೊದಲು ಪ್ರಯತ್ನ ನಡೆಯಿತು. ಅದರೊಂದಿಗೆ ಹಲವು ತಿಂಗಳು ಆರ್ಥೋಪೆಡಿಕ್ ಚಿಕಿತ್ಸೆಗಳು ನಡೆದವು. ಮುಂದೆ ದೀರ್ಘ ಕಾಲ ಫಿಸಿಯೋ ತೆರೆಪಿ ನಡೆದು ಬಲಗಾಲಿನ ಶಕ್ತಿಯು ಮರಳಿತು. ಆದರೆ ಎಡಗಾಲಿನ ಶಕ್ತಿ ಇನ್ನೂ ಕುಂಠಿತವಾಗಿತ್ತು. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಅವಳ ಪಾದಗಳು ಅಸಮ ಆಗಿದ್ದವು. ಅವಳ ಸೈಜಿನ ಶೂಗಳು ಎಲ್ಲಿಯೂ ಸಿಗುತ್ತಿರಲಿಲ್ಲ.

ಈ ಸಮಸ್ಯೆಗಳ ನಡುವೆ ಅಮ್ಮನಿಗೆ ಮಗಳ ಶಾಲೆಯ ಚಿಂತೆ. ಅವಳು ಏಳು ವರ್ಷ ಪ್ರಾಯದಲ್ಲಿ ನೇರವಾಗಿ ಎರಡನೇ ತರಗತಿಗೆ ಸೇರ್ಪಡೆ ಆದವಳು. ಎಡಗಾಲನ್ನು ಕೊಂಚ ಎಳೆದುಕೊಂಡು ನಡೆಯುವ ರೀತಿಯನ್ನು ನೋಡಿ ಅವಳ ಓರಗೆಯ ಮಕ್ಕಳಿಗೆ ಒಂಥರಾ ತಮಾಷೆ ಅನ್ನಿಸುತ್ತಿತ್ತು. ಅವರು ಅಣಕು, ಕೀಟಲೆ ಮಾಡಿ ಅವಳ ಕಣ್ಣಲ್ಲಿ ನೀರು ತರಿಸುತ್ತಿದ್ದರು.

ಇದರಿಂದ ನೊಂದುಕೊಂಡ ವಿಲ್ಮಾ ತರಗತಿಗಳಿಗೆ ಚಕ್ಕರ್ ಹೊಡೆದು ಮೈದಾನದಲ್ಲಿ ಹೆಚ್ಚು ಹೊತ್ತನ್ನು ಕಳೆಯುವುದನ್ನು ಅಭ್ಯಾಸ ಮಾಡಿದಳು.ಅದೇ ರೀತಿ ಎಡಗಾಲಿಗೆ ಆಧಾರವನ್ನು ಕೊಡುವ ‘ಲೆಗ್ ಬ್ರೇಸ್’ ಹಾಕಿ ವೇಗವಾಗಿ ನಡೆಯಲು ಆರಂಭ ಮಾಡಿದಳು. ಅವಳ ಒಳಗೆ ಅದಮ್ಯವಾದ ಒಂದು ಚೈತನ್ಯ ಇರುವುದನ್ನು ಒಬ್ಬ ಕೋಚ್ ದಿನವೂ ನೋಡುತ್ತಿದ್ದರು. ಅವರ ಹೆಸರು ಎಡ್ ಟೆಂಪಲ್.

ಕ್ರೀಡಾ ತರಬೇತಿ ಆರಂಭವಾಯಿತು

ಅವಳಿಗೆ ದೇವರು ಅದ್ಭುತ ಎತ್ತರವನ್ನು ಕೊಟ್ಟಿದ್ದರು (5 ಅಡಿ 11 ಇಂಚು). ಪ್ರೌಢಶಾಲೆಯ ಹಂತಕ್ಕೆ ಬಂದಾಗ ಎಡಗಾಲಿನ ಶಕ್ತಿ ಮರಳಿತ್ತು. ನಡೆಯುವಾಗ ಒಂದು ಸಣ್ಣ ಜರ್ಕ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವು ಕಾಣುತ್ತಿರಲಿಲ್ಲ. ಮೊದಲ ಬಾರಿಗೆ ಪ್ರತಿಷ್ಠಿತ ಕಾಲೇಜಿನ ಬಾಸ್ಕೆಟ್ಬಾಲ್ ಟೀಮಿಗೆ ಅವಳು ಆಯ್ಕೆಯಾದಾಗ ಕುಣಿದು ಸಂಭ್ರಮ ಪಟ್ಟಿದ್ದಳು. ಬಾಸ್ಕೆಟ್ಬಾಲ್ ಕೋರ್ಟಲ್ಲಿ ಅವಳು ಮಿಂಚಿನಂತೆ ಓಡುವುದನ್ನು ನೋಡಿದ ಕೋಚ್ ಅವಳನ್ನು ಅಥ್ಲೆಟಿಕ್ಸ್ ತಂಡಕ್ಕೆ ಸೇರಿಸಿ ಕೋಚಿಂಗ್ ಆರಂಭಿಸಿದರು. ಎಡ್ ಟೆಂಪಲ್ ಎಂಬ ಆ ಕೋಚ್ ಅವಳಲ್ಲಿ ಇದ್ದ ಅದ್ಭುತವಾದ ಕ್ರೀಡಾಪ್ರತಿಭೆಯನ್ನು ಪುಟವಿಟ್ಟ ಚಿನ್ನದಂತೆ ಹೊರತಂದರು. ಅವಳು ಮೊದಲ ಬಾರಿಗೆ ಭಾಗವಹಿಸಿದ ಓಪನ್ ಕ್ರೀಡಾಕೂಟದಲ್ಲಿ ಎಲ್ಲಾ ಒಂಬತ್ತು ಸ್ಪರ್ದೆಗಳಲ್ಲಿ ಕೂಡ ಚಿನ್ನದ ಪದಕವನ್ನು ಗೆದ್ದಿದ್ದಳು. ಅವಳ ಒಳಗೆ ಎಂದಿಗೂ ದಣಿಯದ, ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದ, ಬಿದ್ದಲ್ಲಿಂದ ಪುಟಿದು ಮತ್ತೆ ಎದ್ದುಬರುವ ಚೈತನ್ಯ ಶಕ್ತಿ ಇತ್ತು!

1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕಣದಲ್ಲಿ ಅವಳು!

ಅಲ್ಲಿ ವಿಲ್ಮಾ ರುಡಾಲ್ಫ್ ಅಮೇರಿಕಾವನ್ನು ಪ್ರತಿನಿಧಿಸಿ ರಿಲೇ ಓಟದಲ್ಲಿ ಒಂದು ಕಂಚಿನ ಪದಕ ಮಾತ್ರ ಗೆದ್ದಳು. ಆಗ ಅವಳಿಗೆ ಕೇವಲ 16 ವರ್ಷ! ಮತ್ತೆ ಸ್ಪಷ್ಟ ಗುರಿಯೊಂದಿಗೆ ನಾಲ್ಕು ವರ್ಷ ಪ್ರಾಕ್ಟೀಸ್ ಮಾಡಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಪ್ರವೇಶ ಪಡೆದಳು. ಅವಳು ಎಲ್ಲ ನೋವುಗಳನ್ನೂ ಮರೆತು, ಬಾಲ್ಯದ ಕಹಿ ನೆನಪುಗಳನ್ನು ಮರೆತು ಟ್ರಾಕನಲ್ಲಿ ಓಡುವಾಗ ಯಾರಿಗಾದರೂ ರೋಮಾಂಚನ ಆಗುತ್ತಿತ್ತು.

1960ರ ರೋಮ್ ಒಲಿಂಪಿಕ್ಸ್ – ವಿಲ್ಮಾ ವಿಶ್ವದಾಖಲೆ ಬರೆದಳು!

ಜಗತ್ತಿನಾದ್ಯಂತ ಟಿವಿಯ ಕವರೇಜ್ ಆಗ ತಾನೆ ಆರಂಭ ಆಗಿತ್ತು. ಆದ್ದರಿಂದ ಸಹಜವಾಗಿ ಒಲಿಂಪಿಕ್ಸ್ ಕ್ರೇಜ್ ಹೆಚ್ಚಿತ್ತು. ಮೈದಾನದಲ್ಲಿ ಕೂಡ 43 ಡಿಗ್ರಿ ಉಷ್ಣತೆ ಇತ್ತು! ಆ ಒಲಿಂಪಿಕ್ಸ್ ಕಣದಲ್ಲಿ ವಿಲ್ಮಾ ರುಡಾಲ್ಫ್ ಬಿರುಗಾಳಿಯ ಹಾಗೆ ಓಡಿದಳು. 100 ಮೀಟರ್ ಚಿನ್ನದ ಪದಕ, ಜಗತ್ತಿನ ಅತ್ಯಂತ ವೇಗದ ಮಹಿಳೆ ಎಂಬ ಕೀರ್ತಿ ಆಕೆಗೆ ಒಲಿಯಿತು! ಟೈಮಿಂಗ್ 11.2 ಸೆಕೆಂಡ್ಸ್! ಅದು ಕೂಡ ವಿಶ್ವದಾಖಲೆಯ ಓಟ! 200 ಮೀಟರ್ ಓಟದಲ್ಲಿ ಮತ್ತೆ ವಿಶ್ವ ದಾಖಲೆಯ ಜೊತೆಗೆ ಚಿನ್ನದ ಪದಕ! ಟೈಮಿಂಗ್ 22.9 ಸೆಕೆಂಡ್ಸ್! ಮತ್ತೆ 4X100 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ! ಹೀಗೆ ಮೂರು ಚಿನ್ನದ ಪದಕ ಒಂದೇ ಕೂಟದಲ್ಲಿ ಪಡೆದ ವಿಶ್ವದ ಮೊದಲ ಮಹಿಳಾ ಅತ್ಲೇಟ್ ಎಂಬ ಕೀರ್ತಿಯು ಅವಳಿಗೆ ದೊರೆಯಿತು!

ವಿಲ್ಮಾ ರುಡಾಲ್ಫ್ ಸ್ಥಾಪಿಸಿದ ಎರಡು ವಿಶ್ವ ಮಟ್ಟದ ದಾಖಲೆಗಳು ಮುಂದೆ ಹಲವು ವರ್ಷಗಳ ಕಾಲ ಅಬಾಧಿತವಾಗಿ ಉಳಿದವು. ಆ ಎತ್ತರದ ಸಾಧನೆಯ ನಂತರ ವಿಲ್ಮಾ ವಿಶ್ವಮಟ್ಟದ ಹಲವು ಕೂಟಗಳಲ್ಲಿ ನಿರಂತರವಾಗಿ ಓಡಿದಳು ಮತ್ತು ಓಡಿದ್ದಲ್ಲೆಲ್ಲ ಪದಕಗಳನ್ನು ಸೂರೆ ಮಾಡಿದಳು.

22ನೆಯ ವರ್ಷಕ್ಕೆ ಕ್ರೀಡಾ ನಿವೃತ್ತಿ

ತನ್ನ 22ನೆಯ ವರ್ಷದಲ್ಲಿ ಕೀರ್ತಿಯ ಶಿಖರದಲ್ಲಿ ಇರುವಾಗಲೇ ವಿಲ್ಮಾ ಕ್ರೀಡೆಗೆ ವಿದಾಯ ಕೋರಿದಳು ! 1964ರ ಟೋಕಿಯೋ ಒಲಿಂಪಿಕ್ಸನಲ್ಲಿ ಭಾಗವಹಿಸುವ ಅವಕಾಶ ಇದ್ದರೂ ಕೂಡ ಸ್ಪರ್ಧೆ ಮಾಡಲೇ ಇಲ್ಲ.

ಭರತ ವಾಕ್ಯ

ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಹಾಮಾರಿಗೆ ಸಂತ್ರಸ್ತಳಾದ, ಕಪ್ಪು ಚರ್ಮ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾಸಾಧನೆಗಳ ಮೂಲಕ ಇತಿಹಾಸವನ್ನೇ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಗೌರವಿಸಿತು. ಅವಳ ಆತ್ಮಚರಿತ್ರೆಯಾದ ‘ Wilma – The Story of Wilma Rudolph’ ಲಕ್ಷಾಂತರ ಮಂದಿಗೆ ಪ್ರೇರಣೆಯನ್ನು ಕೊಟ್ಟಿತು. ಅವಳ ಸಾಧನೆಗಳ ಬಗ್ಗೆ 21 ಪ್ರಸಿದ್ಧ ಲೇಖಕರು ಪುಸ್ತಕಗಳನ್ನು ಬರೆದಿದ್ದಾರೆ. ಅವಳ ಬದುಕಿನ ಕಥೆ ಅಮೆರಿಕ ಮತ್ತು ಇತರ ದೇಶಗಳ ಕಾಲೇಜಿನ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯಿತು!

ಈಗ ಹೇಳಿ ವಿಲ್ಮಾ ಗ್ರೇಟ್ ಹೌದಾ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಗತ್ತಿನ ಯಾರ ಪ್ರೀತಿಯೂ ಇವರ ಪ್ರೀತಿಗೆ ಸಮನಲ್ಲ!

Continue Reading

ಅಂಕಣ

ರಾಜಮಾರ್ಗ ಅಂಕಣ: ಜಗತ್ತಿನ ಯಾರ ಪ್ರೀತಿಯೂ ಇವರ ಪ್ರೀತಿಗೆ ಸಮನಲ್ಲ!

ರಾಜಮಾರ್ಗ ಅಂಕಣ: ಇವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

VISTARANEWS.COM


on

ರಾಜಮಾರ್ಗ ಅಂಕಣ love story
Koo

ರಾಬರ್ಟ್ ಬ್ರೌನಿಂಗ್ ಮತ್ತು ಎಲಿಜೆಬೆತ್ ಬ್ಯಾರೆಟ್ ಪರಸ್ಪರ ಭೇಟಿ ಆಗದೆ ವರ್ಷಾನುಗಟ್ಟಲೆ ಪ್ರೀತಿ ಮಾಡಿದರು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಪ್ರೀತಿಗೆ ಕಣ್ಣಿಲ್ಲ (Love is blind) ಅಂತಾರೆ. ಆದರೆ ಇಟಲಿಯಲ್ಲಿ (Italy) ಇರುವ ಅವರ ಸಮಾಧಿಯ ಮೇಲೆ ʼಪ್ರೀತಿ ಕುರುಡಲ್ಲ’ ಎಂದು ಬರೆದಿರುವುದು ಯಾಕೆ? ಇದೆಲ್ಲವೂ ಅರ್ಥ ಆಗಬೇಕಾದರೆ ಈ ಪ್ರೀತಿಯ ಪರಾಕಾಷ್ಠೆಯ ಕಥೆಯನ್ನು ಒಮ್ಮೆ ಫೀಲ್ ಮಾಡಿಕೊಂಡು ಓದಿ.

ಅದು ಲಂಡನ್ ನಗರ. ಆಕೆ ಎಲಿಜೆಬೆತ್ ಬ್ಯಾರೇಟ್ (Elizabeth Barrett). ಆ ಕಾಲಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕವಯಿತ್ರಿ. ವಯಸ್ಸು 39ರ ಆಸುಪಾಸು. ಅವಿವಾಹಿತೆ. ಆಕೆಯ ತಂದೆ ಅತ್ಯಂತ ಶ್ರೀಮಂತ ಜಮೀನುದಾರರು. ಅಪ್ಪ ಅಮ್ಮನ 12 ಮಕ್ಕಳಲ್ಲಿ ಆಕೆಯೂ ಒಬ್ಬರು. ಅಪ್ಪನ ಪ್ರೀತಿಯ ಮಗಳು.

ಹದಿಹರೆಯದಿಂದಲೂ ಆಕೆಗೆ ತೀವ್ರ ಅನಾರೋಗ್ಯ ಮತ್ತು ದೇಹವೆಲ್ಲ ನೋವು. ಉಸಿರಾಟದ ತೊಂದರೆ. ಮನೆಯಿಂದಾಚೆ ಹೋಗಲು ಸಾಧ್ಯವೇ ಆಗದ ಸ್ಥಿತಿ. ಆಕೆ ಅಂತರ್ಮುಖಿ. ತನ್ನ ಸ್ಟಡಿ ರೂಮಿನಲ್ಲಿ ಕುಳಿತು ಓದುವುದು ಮತ್ತು ಬರೆಯುವುದು ಬಿಟ್ಟರೆ ಆಕೆಗೆ ಬೇರೆ ಪ್ರಪಂಚವೇ ಇರಲಿಲ್ಲ!

ಆತನು ರಾಬರ್ಟ್ ಬ್ರೌನಿಂಗ್

ಅವನೂ ಲಂಡನ್ ನಗರದವನು. ವಯಸ್ಸು 32. ಆತ ಕೂಡ ಕವಿ ಮತ್ತು ನಾಟಕಕಾರ. ಆತ ಆಕೆಯನ್ನು ಎಂದಿಗೂ ಭೇಟಿ ಮಾಡಿರಲೇ ಇಲ್ಲ. ಆಕೆಯ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ. ಆದರೆ ಆಕೆಯ ಕವಿತೆಗಳ ಆರಾಧಕ. ಒಂದು ದಿನ ಧೈರ್ಯ ಮಾಡಿ ಅವಳ ವಿಳಾಸವನ್ನು ಪಡೆದುಕೊಂಡು ‘ನಾನು ನಿಮ್ಮ ಕವಿತೆಗಳನ್ನು ಪ್ರೀತಿ ಮಾಡುತ್ತೇನೆ ‘ಎಂದು ಧೈರ್ಯವಾಗಿ ಪತ್ರ ಬರೆದನು. ಆಶ್ಚರ್ಯ ಪಟ್ಟ ಎಲಿಜೆಬೆತ್ ಧನ್ಯವಾದಗಳು ಎಂದು ಎರಡು ಸಾಲಿನ ಪತ್ರ ಬರೆದಳು. ಯಾರೋ ಒಬ್ಬ ಅಭಿಮಾನಿ ಎಂದು ಆಕೆ ಭಾವಿಸಿದ್ದಳು. ಆದರೆ ರಾಬರ್ಟ್ (Robert Browning) ಬಿಡಬೇಕಲ್ಲ. ಮರುದಿನವೇ ಇನ್ನೊಂದು ಪತ್ರ ಬರೆದು ಪೋಸ್ಟ್ ಮಾಡಿದನು.

ಹೀಗೆ ಮುಂದಿನ 20 ತಿಂಗಳ ಕಾಲ ಅವರಿಬ್ಬರೂ 600 ಪತ್ರಗಳನ್ನು ವಿನಿಮಯ ಮಾಡಿಕೊಂಡರು! ಒಬ್ಬರನ್ನೊಬ್ಬರು ಅಭಿನಂದಿಸಿ ಕೊಂಡರು. ಕವಿತೆಗಳ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಎಲ್ಲಿಯೂ ಪ್ರೀತಿಯನ್ನು ಪ್ರಪೋಸ್ ಮಾಡಲಿಲ್ಲ! ಅಥವಾ ಫೋನ್ ಮಾಡಿ ಮಾತನಾಡಲೇ ಇಲ್ಲ!

ಆ ಪತ್ರಗಳ ಪ್ರಭಾವದಿಂದ ಎಲಿಜೆಬೆತ್ ಆರೋಗ್ಯ ಸುಧಾರಣೆ ಆಯ್ತು!

ದೀರ್ಘ ಅವಧಿಗೆ ಅದೃಶ್ಯ ಅಭಿಮಾನಿಯ ಪ್ರೀತಿಪೂರ್ವಕ ಪತ್ರಗಳನ್ನು ಓದುತ್ತಾ, ಅವುಗಳಿಗೆ ಉತ್ತರ ಬರೆಯುತ್ತ ಎಲಿಜೆಬೆತ್ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಯ್ತು! ಆಕೆ ಅಫೀಮ್ ಮತ್ತು ಮಾರ್ಫಿನ್ ಡ್ರಗ್ಸ್ ಸೇವನೆಯಿಂದ ನಿಧಾನವಾಗಿ ಹೊರಬಂದಳು. ಒಂದು ದಿನ ಧೈರ್ಯವಾಗಿ ಆತನಿಗೆ ಪತ್ರ ಬರೆದಳು – ನನ್ನಲ್ಲಿ ತುಂಬಾ ಆರೋಗ್ಯ ಸುಧಾರಣೆ ಆಗಿದೆ. ನಾನು ಈಗ ಆರು ವರ್ಷಗಳ ಕತ್ತಲೆಯ ಕೋಣೆಯಿಂದ ಹೊರಬರಬೇಕು ಎಂದು ಆಸೆ ಪಡುತ್ತಾ ಇದ್ದೇನೆ. ನಿನ್ನನ್ನೊಮ್ಮೆ ಭೇಟಿ ಆಗಿ ಥ್ಯಾಂಕ್ಸ್ ಹೇಳಬೇಕು ಅನ್ನಿಸ್ತಿದೆ. ಸಿಗ್ತಿಯಾ?

ಆತ ಒಪ್ಪಿದನು. ಅವರಿಬ್ಬರೂ ಮೊದಲ ಬಾರಿಗೆ ಭೇಟಿ ಆದರು. ʼನಾನು ನಿಮ್ಮನ್ನು ಮದುವೆ ಆಗುತ್ತೇನೆ. ನಿಮ್ಮ ಒಪ್ಪಿಗೆ ಇದೆಯಾ? ‘ಎಂದು ಆಗ ರಾಬರ್ಟ್ ನೇರವಾಗಿ ಕೇಳಿದನು. ಅದನ್ನವಳು ನಿರೀಕ್ಷೆ ಮಾಡಿರಲಿಲ್ಲ. ಈಗ ಎಲಿಜೆಬೆತ್ ಬೆವರಲು ಆರಂಭಿಸಿದಳು.

ಆಕೆಯ ಅಪ್ಪ ಪ್ರೇಮವಿವಾಹಕ್ಕೆ ವಿರೋಧ ಇದ್ದರು

ಆಕೆಯು ಬೆವರಲು ಕಾರಣ ಆಕೆಯ ಅಪ್ಪ ಹಾಕಿದ ನಿರ್ಬಂಧ. ಅವನ ಎರಡು ಮಕ್ಕಳು ಪ್ರೀತಿ ಮಾಡಿ ಓಡಿಹೋಗಿ ಮದುವೆ ಆಗಿದ್ದರು. ಆ ಸಿಟ್ಟಿನಲ್ಲಿ ಆತನು ಎಲಿಜಬೆತ್ ಮಗಳಿಗೆ ಪ್ರೀತಿ ಮಾಡಲೇ ಬಾರದು ಎಂಬ ನಿರ್ಬಂಧವನ್ನು ಹಾಕಿದ್ದನು. ಆಕೆಯ ಸಂದಿಗ್ದವು ರಾಬರ್ಟನಿಗೆ ಅರ್ಥ ಆಯಿತು. ಅವನು ಎಷ್ಟು ಧೈರ್ಯ ತುಂಬಿಸಿದರೂ ಅಪ್ಪನ ಎದುರು ಹೋಗಿ ನಿಂತು ಮಾತಾಡುವ ಧೈರ್ಯ ಅವಳಿಗೆ ಕೊನೆಗೂ ಬರಲಿಲ್ಲ. ಕೊನೆಗೆ 1845ರ ಸೆಪ್ಟೆಂಬರ್ 12ರಂದು ಅವರಿಬ್ಬರೂ ರಹಸ್ಯವಾಗಿ ಮದುವೆ ಆದರು.

ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದ ಅಪ್ಪ

ಹೇಗೋ ಮದುವೆಯ ರಹಸ್ಯವು ಅಪ್ಪನಿಗೆ ಗೊತ್ತಾಯಿತು. ನಿಮಗೆ ಆಸ್ತಿಯಲ್ಲಿ ಒಂದು ಡಾಲರ್ ಕೂಡ ಕೊಡುವುದಿಲ್ಲ. ಎಲ್ಲಿ ಬೇಕಾದರೂ ಹೋಗಿ ಎಂದು ಗರ್ಜಿಸಿದನು. ಮದುಮಕ್ಕಳನ್ನು ಮನೆಯ ಹೊರಗೆ ನಿಲ್ಲಿಸಿ ದಢಾರ್ ಎಂದು ಬಾಗಿಲು ಹಾಕಿದನು.

ರಾಬರ್ಟ್ ಮತ್ತು ಎಲಿಜಬೆತ್ ಇಬ್ಬರೂ ಬೇಸರ ಮಾಡಿಕೊಳ್ಳಲಿಲ್ಲ. ಬರವಣಿಗೆಯ ಮೂಲಕ ಬದುಕುವ ಶಕ್ತಿ ಇಬ್ಬರಿಗೂ ಇತ್ತು. ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅವರಿಬ್ಬರೂ ಉಟ್ಟ ಬಟ್ಟೆಯಲ್ಲಿ ಲಂಡನ್ ನಗರವನ್ನು ಬಿಟ್ಟು ಪ್ರೀತಿಯ ಊರಾದ ಇಟಲಿಗೆ ಬಂದರು. ಪೀಸಾದ ವಾಲುವ ಗೋಪುರದ ಮುಂದೆ ನಿಂತು ದಂಪತಿಗಳು ಮೊಟ್ಟಮೊದಲ ಬಾರಿಗೆ ಕಿಸ್ ಮಾಡಿದರು. ಪ್ರೀತಿಯ ಉತ್ಕಟತೆಯನ್ನು ಫೀಲ್ ಮಾಡಿದರು. ಅಲ್ಲಿಯೇ ಮನೆ ಮಾಡಿ ಸಾಹಿತ್ಯದ ಕೆಲಸದಲ್ಲಿ ಮುಳುಗಿದರು.

ಅಲ್ಲಿ ರಾಬರ್ಟ್ ತನ್ನ ಅದ್ಭುತ ಕವಿತೆ ‘ಸಾನೆಟ್ಸ್ ಫ್ರಮ್ ಪೋರ್ಚುಗೀಸ್ ‘ ಬರೆದು ಹೆಂಡತಿಗೆ ಪ್ರೆಸೆಂಟ್ ಮಾಡುತ್ತಾನೆ. ಅದು ಲೋಕಪ್ರಸಿದ್ಧಿ ಪಡೆಯಿತು.

ಆಕೆಯು ಅಷ್ಟೇ ಪ್ರೀತಿಯಿಂದ ʼಪೊಯೆಮ್ಸ್ ಬಿಫೋರ್ ಕಾಂಗ್ರೆಸ್’ ಕವಿತೆಯನ್ನು ಬರೆದು ಅವನಿಗೆ ಅರ್ಪಿಸುತ್ತಾಳೆ. ಗಂಡನ ಪ್ರೀತಿಯಲ್ಲಿ ಮುಳುಗಿ ʼಆರೋರಾ’ ಎಂಬ ಪ್ರೇಮಗ್ರಂಥವನ್ನು ಬರೆದು ಪ್ರಕಟಣೆ ಮಾಡುತ್ತಾಳೆ. ಅವರ ಪ್ರೀತಿಯ ಪ್ರತೀಕವಾಗಿ ಅವರಿಗೆ ವೀಡ್ಮನ್ ಬ್ಯಾರೆಟ್ ಎಂಬ ಮಗನು ಹುಟ್ಟುತ್ತಾನೆ.

1861ರಲ್ಲಿ ರಾಬರ್ಟ್ ತನ್ನ ಮಹತ್ವಾಕಾಂಕ್ಷೆಯ ಕೃತಿ ʼಮೆನ್ ಅಂಡ್ ವಿಮೆನ್’ ಪೂರ್ತಿ ಮಾಡಿ ಪತ್ನಿಯ ಕೈಯ್ಯಲ್ಲಿ ಇಟ್ಟು ಬಿಡುಗಡೆ ಮಾಡುತ್ತಾನೆ. 15 ವರ್ಷಗಳ ಶ್ರೇಷ್ಟ ದಾಂಪತ್ಯದ ಅನುಪಮ ಪ್ರೀತಿಯನ್ನು ಆಸ್ವಾದಿಸಿದ ನಂತರ 1861ರ ಜೂನ್ 29ರಂದು ಎಲಿಜೆಬೆತ್ ತನ್ನ ಗಂಡನ ತೋಳುಗಳಲ್ಲೇ ಉಸಿರು ನಿಲ್ಲಿಸುತ್ತಾಳೆ. ಕೆಲವೇ ವರ್ಷಗಳಲ್ಲಿ ರಾಬರ್ಟ್ ಕೂಡ ನಿಧನ ಹೊಂದುತ್ತಾನೆ.

ಅವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Continue Reading
Advertisement
Muhammad Yunus
ಪ್ರಮುಖ ಸುದ್ದಿ23 mins ago

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

murder case
ರಾಮನಗರ28 mins ago

Murder case : ರಾಮನಗರದಲ್ಲಿ ಸಂಬಂಧಿಕರಿಂದಲೇ ಯುವಕನ ಬರ್ಬರ ಹತ್ಯೆ

Gold Rate Today
ಚಿನ್ನದ ದರ51 mins ago

Gold Rate Today: ಕೊನೆಗೂ ಇಳಿಯಿತು ಬಂಗಾರದ ದರ; ಇಂದು ಚಿನ್ನ ಇಷ್ಟು ಅಗ್ಗ

Sexual Abuse
Latest1 hour ago

Sexual Abuse : ಸಾಲ ತೀರಿಸಲಾಗದೆ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

Dinesh Karthik
ಪ್ರಮುಖ ಸುದ್ದಿ1 hour ago

Dinesh Karthik : ದಕ್ಷಿಣ ಆಫ್ರಿಕಾದ ಲೀಗ್​ನಲ್ಲಿ ಪಾರ್ಲ್​ ರಾಯಲ್ಸ್​ ತಂಡ ಸೇರಿದ ದಿನೇಶ್ ಕಾರ್ತಿಕ್​

actor yash 1
ಸಿನಿಮಾ1 hour ago

Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

Bengaluru News
ಬೆಂಗಳೂರು1 hour ago

Bengaluru News : ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಚಲಾಕಿ ಕಳ್ಳ ಅರೆಸ್ಟ್‌

Wayanad Landslide
ದೇಶ1 hour ago

Wayanad Landslide: ವಯನಾಡು ಭೂಕುಸಿತದಲ್ಲಿ ಮೃತರ ಸಂಖ್ಯೆ 402: ಸರ್ವಧರ್ಮ ಪ್ರಾರ್ಥನೆ ಮೂಲಕ ಸಾಮೂಹಿಕ ಶವ ಸಂಸ್ಕಾರ

NEET PG
ಪ್ರಮುಖ ಸುದ್ದಿ2 hours ago

NEET PG : ನೀಟ್​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿಗಳು ಸೋರಿಕೆ, ಅಭ್ಯರ್ಥಿಗಳಿಗೆ ಆತಂಕ

Self Harming
ಬೆಂಗಳೂರು2 hours ago

Self Harming: ಅಪಾರ್ಟ್‌ಮೆಂಟ್‌ನ ಬಾಲ್ಕಿನಿಯಲ್ಲಿ ನೇಣು ಬಿಗಿದುಕೊಂಡ ಅಪರಿಚಿತ ಮಹಿಳೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌