Bhoomige Banda Bhagavantha: ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಮುಕ್ತಾಯ: ಅಂಕಿತಾ ಜಯರಾಮ್‌  ಭಾವುಕ ಪೋಸ್ಟ್‌! - Vistara News

ಕಿರುತೆರೆ

Bhoomige Banda Bhagavantha: ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಮುಕ್ತಾಯ: ಅಂಕಿತಾ ಜಯರಾಮ್‌  ಭಾವುಕ ಪೋಸ್ಟ್‌!

VISTARANEWS.COM


on

Bhoomige Banda Bhagavantha came to end
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ‘ಭೂಮಿಗೆ ಬಂದ ಭಗವಂತ’ಒಟ್ಟು 354 ಸಂಚಿಕೆಗಳನ್ನ ಪೂರೈಸಿದೆ. 2023ರ ಮಾರ್ಚ್ 20 ರಂದು ‘ಭೂಮಿಗೆ ಬಂದ ಭಗವಂತ’ (Bhoomige Banda Bhagavantha) ಸೀರಿಯಲ್ ಆರಂಭಗೊಂಡಿತ್ತು. ಕಳೆದ 2024ರ ಆಗಸ್ಟ್ 4 ರಂದು ‘ಭೂಮಿಗೆ ಬಂದ ಭಗವಂತ’ ಅಂತ್ಯವಾಗಿದೆ. ಮಧ್ಯಮ ವರ್ಗದ ವ್ಯಕ್ತಿಯನ್ನು ಶಿವನೇ ಮಾನವ ರೂಪದಲ್ಲಿ ಭೇಟಿಯಾಗಿ ಮಾರ್ಗದರ್ಶನ ಮಾಡುವ ಸಂದೇಶ ಉಳ್ಳ ಧಾರಾವಾಹಿ ಆಗಿತ್ತು. ಇದೀಗ ನಟಿ ಅಂಕಿತಾ ಜಯರಾಮ್‌ ಈ ಬಗ್ಗೆ ಸುದೀರ್ಘವಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ʻʻಎಲ್ಲರಿಗೂ ನಮಸ್ಕಾರಗಳು ʻಭೂಮಿಗೆಬಂದ ಭಗವಂತʼ ಧಾರವಾಹಿಯ ನಮ್ಮೆಲ್ಲರ ಪಯಣ ಇಂದು ಆಗಸ್ಟ್ 3 ಮತ್ತು ನಾಳೆ 4 ನೇ ತಾರೀಖಿನ ಸಂಚಿಕೆಯೊಂದಿಗೆ ಕೊನೆಗೊಳ್ಳುತ್ತಿದೆ. ಎಂದು ತಿಳಿಸಲು ಮನಸ್ಸು ಬಹಳ ಭಾರವಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಪ್ರತಿ ನಿತ್ಯ ನಡೆಯುವ ಘಟನೆಗಳನ್ನು ಆಧರಿಸಿ ತುಂಬಾ ಅಚ್ಚುಕಟ್ಟಾದ ನಿರೂಪಣೆಯೊಂದಿಗೆ ಭಗವಂತನ ಸಂದೇಶದೊಂದಿಗೆ ಎಲ್ಲರ ಮನ ಮನೆಗಳ ಮೆಚ್ಚಿನ ಧಾರಾವಾಹಿಯಾಗಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಪಡೆದ ಏಕೈಕ ಧಾರಾವಾಹಿ ಯೆಂದು ಹೆಸರು ಪಡೆದದ್ದು ಹೆಮ್ಮೆಯ ವಿಷಯವೆಂದು ಎಲ್ಲರಿಗೂ ತಿಳಿದಿದೆʼ. ಪ್ರಣೀತ ಎಂಬ ಪಾತ್ರಕ್ಕೆ ಹತ್ತಾರು ಮಕ್ಕಳ ಆಡಿಷನ್ ನಂತರದಲ್ಲೂ ಅಂತಿಮವಾಗಿ Ankitha ಈ ಪಾತ್ರಕ್ಕೆ ಸೂಕ್ತ ಎಂದು ಆಯ್ಕೆ ಮಾಡಿದ ನಿದೇ೯ಶಕರಾದ ಆರೂರು ಜಗದೀಶ್ ಸರ್ ರವರಿಗೂ ತುಂಬು ಹೃದಯದ ಧನ್ಯವಾದಗಳುʼʼ.

ʻʻಕುಮಾರ್_ಕೆರಗೋಡು ಸರ್ ಚಿತ್ರೀಕರಣದ ಪ್ರತಿಯೊಂದು ಹಂತದಲ್ಲೂ ನೀವು ನೀಡಿದ ಸಹಕಾರ ಶ್ಲಾಘನೀಯಶಾಲೆಗೆ ತೊಂದರೆಯಾಗದಂತೆ ಹೆಚ್ಚಿಗೆ ರಜಾ ದಿನಗಳಲ್ಲಿ ಚಿತ್ರೀಕರಣದ ಸಮಯವನ್ನು ಹೊಂದಿಸಿಕೊಂಡು ತುಂಬಾ ಅನಿವಾರ್ಯತೆಯ ಸಮಯದಲ್ಲಿ ಮಧ್ಯಾಹ್ನದ ನಂತರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ನೀವು ನೀಡಿದ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು. ಅಣ್ಣಾವ್ರು ಮಾತಲ್ಲಿ ಹೇಳುವುದಾದರೆ ನಿಮಾ೯ಪಕರು ಕಲಾವಿದರ ಅನ್ನದಾತರು. ತಾಂಡವ ಪ್ರೊಡಕ್ಷನ್ ನ ನಿರ್ಮಾತೃ #ತಾಂಡವರಾಮ್ ರವರು ಈ ಧಾರಾವಾಹಿ ಮುಖಾಂತರ ಹತ್ತಾರು ಕಲಾವಿದರಿಗೆ ತಂತ್ರಜ್ಞರಿಗೆ ನಿಮ್ಮ ನಿರ್ಮಾಣದ ಈ ಧಾರಾವಾಹಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಅನ್ನದಾತರಿಗೆ ತುಂಬು ಹೃದಯದ ಧನ್ಯವಾದಗಳು🙏 ಧಾರಾವಾಹಿಯ ನಾಯಕರಾದ ಪ್ರೀತಿಯ ನವೀನ್ಕೃಷ್ಣ ಸರ್ ಸೆಟ್ ನಲ್ಲಿ
ಪ್ರತಿಯೊಂದು ಸಮಯದಲ್ಲೂ ನೀವು ತೋರಿದ ಪ್ರೀತಿ ಕಾಳಜಿ, ಹಾಗೂ ಅಂಕಿತಳ ಕೀಟಲೆಗಳನ್ನೆಲ್ಲ ಸಹಿಸಿಕೊಂಡ ನಿಮ್ಮ ಸಂಯಮಕ್ಕೆ ಶರಣು ಬಹುಶಃ ನಿಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಸಲುಗೆಯಿಂದ ಮಾತನಾಡುತ್ತಿದ್ದ ಅಂಕಿತಗೆ ನೀವು ನೀಡಿದ ಪ್ರೀತಿಯೇ ಮುಖ್ಯ ಕಾರಣ. (ಕಡೆಯದಾಗಿ ನನಗೆ ಹೆಣ್ಣು ಮಗಳಿಲ್ಲ ವೆಂಬ ಕೊರಗನ್ನು ನಿಮ್ಮ ಮಗಳು ಅಂಕಿತ ನೀಗಿಸಿದ್ದಾಳೆಂಬ ನಿಮ್ಮ ಮಾತು ಕೇಳಿ ಹೃದಯ ತುಂಬಿ ಬಂತು. ನಿಮ್ಮ ಈ ಪ್ರೀತಿಗೆ ಸದಾ ಆಭಾʼʼ ರಿ.

ಇದನ್ನೂ ಓದಿ: Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

ʻʻನಮ್ಮ ಕಾರ್ತಿಕ್ ಸಮಾಗ ರವರು ಚಿತ್ರೀಕರಣದಲ್ಲಿ ಅಪರೂಪಕ್ಕೆ ಒಮ್ಮೆ ಭೇಟಿಯಾದ ಸಮಯದಲ್ಲೆಲ್ಲ ಪ್ರೀತಿಯಿಂದ ಕಂದಮ್ಮ ಅಂತ ಕರೆಯುತ್ತಾ ಬಾಯಿ ಸಿಹಿ ಮಾಡ್ಕೋ ಅಂತ ಕ್ಯಾಟ್ಬರಿ ಚಾಕಲೇಟ್ ನೀಡಿ ನೀವು ತೋರುತ್ತಿದ್ದ ನಿಷ್ಕಲ್ಮವಾದ ಮಗುವಿನ ಪ್ರೀತಿಗೆ ಹಾಗೂ ಭಗವಂತನ ಪಾತ್ರಕ್ಕೆ ನೀವು ನಿಮ್ಮದೇ ಆದ ಕೆಲವು ನಿಯಮ ನಿಷ್ಠೆಗಳನ್ನು ಅಳವಡಿಸಿಕೊಂಡು ಶಿವನ ಪಾತ್ರಕ್ಕೆ ಮತ್ತಷ್ಟು ಮೆರಗು ನೀಡಿದ್ದಿರಿ. ಅಭಿಮಾನಿಗಳ ಪಾಲಿಗೆ ನೀವು ಸಾಕ್ಷಾತ್ ಪರಮೇಶ್ವರ. ನಿಮ್ಮ ಜೊತೆಯಲ್ಲಿ ಅಭಿನಯಿಸುವ ಅವಕಾಶ ನೀಡಿದ ಶಿವನ ಪಾದಕ್ಕೆ ನಮೋ ನಮಃ.
ಕೃತಿಕಾ ತಮಗೆ ನೀಡಿದ ಪಾತ್ರದಲ್ಲಿ ಅತ್ಯಂತ ಸಹಜಾಭಿನಯವಾಗಿ ನಟಿಸಿ ಎಲ್ಲರ ಮನಗೆದ್ದು ,ಅಂಕಿತಳಿಗೆ ಗಿರಿಜಮ್ಮ ಳಾಗಿ ತಾಯಿಯ ಪ್ರೀತಿಯನ್ನು ತೋರಿ, ಧಾರಾವಾಹಿಯ ಪ್ರೇಕ್ಷಕರ ವರ್ಗ
(ಅಮ್ಮ ಮಗಳ ರೀಲ್ಸ್ ನೋಡೋದೇ ತುಂಬಾ ಖುಷಿಯಾಗುತ್ತೆ ಅಂತ ಹೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕೆಲವೊಮ್ಮೆ ಸರಿ ತಪ್ಪುಗಳ ಬಗ್ಗೆ ತಿಳಿ ಹೇಳುತ್ತಾ ‘ ಸದಾ ಕಾಲ ಪ್ರೀತಿ ತೋರಿ. ಕೆಲವು ಸಲಹೆ ಸೂಚನೆಗಳನ್ನು ನೀಡುತ್ತಿದ್ದನಿಮಗೆ ತುಂಬು ಹೃದಯದ ಧನ್ಯವಾದಗಳು ಸಿಸ್ಟರ್. ಧಾರವಾಹಿಯ ಹಿರಿಯ ಕಲಾವಿದರಾದ #ಉಮೇಶ್ ಸರ್ ರವರು ಅಂಕಿತಗೆ #ತಾತನಿಲ್ಲ ವೆಂಬ ಕೊರಗನ್ನು ನೀಗಿಸಿದ್ದ ನಿಮಗೆ ಶರಣು🙏🙏🙏
ಚಿಕ್ಕಮ್ಮ ಚಿಕ್ಕಪ್ಪ ಪಾತ್ರದಾರಿಗಳಾದ #ಅಶ್ವಿನಿಬಬ್ಲೂ ಹಾಗೂ #ಶೋಧನ್ ಸರ್ ರವರಿಗೂ ತುಂಬು ಹೃದಯದ ಧನ್ಯವಾದಗಳು.
ʻʻಧಾರಾವಾಹಿಯ ಪುಟ್ಟ ತಮ್ಮನ ಪಾತ್ರಧಾರಿ ಅನುರಾಗ್ (ಸ್ಕಂದ) ಹೊರಗಡೆ ಎಲ್ಲಾ ಅಂಕಿತಳಿಗೆ ನಿಜವಾದ ತಮ್ಮನೆಂದೇ ಭಾವಿಸುವಷ್ಟು ಅಂದರೆ (ಮಹಾಥ೯ ಜೊತೆಗಿದ್ದರೂ ಸಹ) ನಿನ್ನ ತಮ್ಮ ಎಲ್ಲಿ ಎಂದು ಎಲ್ಲರೂ ಕೇಳುವಷ್ಟರ ಮಟ್ಟಿಗೆ ನಿಮ್ಮ ಪ್ರೀತಿಯ ಬಾಂಧವ್ಯ ಮೂಡಿ ಬಂದಿದೆ. ನಿನ್ನ ಮುಂದಿನ ಭವಿಷ್ಯ ಉಜ್ಬಲವಾಗಿರಲಿ.
ಪರದೆಯ ಮೇಲೆ ಚಂದವಾಗಿ ಕಾಣುವಂತೆ ಮಾಡಿದ ಮಾಡಿದ ನಾಗೇಂದ್ರ ಸರ್ ಹಾಗೂ ಸಂಧ್ಯಾ ದಂಪತಿಗಳಿಗೂ ತುಂಬು ಹೃದಯದ ಧನ್ಯವಾದಗಳು. ಅಸೋಸಿಯೇಟ್ directors ಸೂರ್ಯ ರಾಕೇಶ್ ಶ್ರವಣ ಪ್ರತಿಯೊಬ್ಬರು ಪ್ರೀತಿಯಿಂದ ತಂಗ್ಯಮ್ಮ ಎಂದು ಕರೆಯುತ್ತಾ scene explain ಮಾಡುತ್ತಿದ್ದ ರೀತಿ ನಿಮ್ಮ ಆತ್ಮೀಯತೆಗೆ ಅಪರೂಪದ ತಂಡಕ್ಕೆ. ಪ್ರತಿಯೊಂದು ಕುಂದು ಕೊರತೆಗಳನ್ನು ನಿಭಾಯಿಸಿದ ಮ್ಯಾನೇಜರ್ ಮಂಜುನಾಥ್ ರವರಿಗೂ
ನಮ್ಮ ಚಾಲಕ ತಂಡದ. ನಾಗರಾಜ್ ಸರ್ ನೀವು ತೋರಿದ ಪ್ರೀತಿಗೆ. ಪ್ರೊಡಕ್ಷನ್ ಡಿಪಾಟ್ ಮೆಂಟ್ ನ ಪ್ರವೀಣ್. ಮತ್ತು ಶಂಕರ್ ಹಾಗೂ ಮಮತ ರವರು ಅಚ್ಚುಕಟ್ಟಾಗಿ ಊಟ ಉಪಚಾರ ನೋಡಿಕೊಂಡ ನಿಮಗೆ ಧನ್ಯವಾದಗಳು
ಕಡೆಯ ದಿನ ಒಟ್ಟಾಗಿ ನಿಮ್ಮನ್ನೆಲ್ಲನ್ನೆಲ್ಲ ಬಿಟ್ಟು ಬರುವಾಗ ಮನಸ್ಸು ನಮ್ಮವರನ್ನೆಲ್ಲ ಬಿಟ್ಟು ದೂರ ಹೋಗುತ್ತಿರುವ ಭಾವನೆಗಳಿಂದ ಭಾರವಾಗಿತ್ತು.
ಜೀಕನ್ನಡ ಆಯೋಜಿಸುತ್ತಿದ್ದ ಇವೆಂಟ್‌ ಗಳಲ್ಲಿ ಸಮಯಕ್ಕೆ ಸರಿಯಾಗಿ ಕರೆಸಿಕೊಂಡು, ಸೂಕ್ತವಾದ ವ್ಯವಸ್ಥೆಯೊಂದಿಗೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದ ಕ್ಲಸ್ಟರ್ ಹೆಡ್ ಆದಂತಹ ಪೃಥ್ವಿ ಸರ್ ರವರ ಕಾಯ೯ ವೈಖರಿ ನಿಜಕ್ಕೂ ಶ್ಲಾಘನೀಯ. ಕಿರು ಪರದೆಯ ಮೇಲೆ ಅತ್ಯಂತ ಸುಂದರವಾಗಿ ಫ್ರೆಂಮ್ ಟು ಫ್ರೆಂ ಮ್ ಕಾಣುವಂತೆ ಮಾಡಿದ ನಮ್ಮ ಕ್ಯಾಮರಾಮ್ಯಾನ್ ಕಾಂತರಾಜು ಹಾಗೂ ರಘು ರವರಿಗೂ ತುಂಬು ಹೃದಯದ ಧನ್ಯವಾದಗಳು.
ಅಪರೂಪಕ್ಕೆ ಭೇಟಿಯಾಗುತ್ತಿದ್ದ.


ಮೂಗೂರು ಸುಂದರ್ ಸರ್ . ಕಾತಿ೯ಕ್ ಜಯರಾಂ . ಪವನ್ ಸರ್ . ದೇಶಪಾಂಡೆ . ದಾನಪ್ಪ. ಚಕ್ರವತಿ೯, ಮಹೇಶ್ ಆಚಾರ್ಯ. ಸುಮತಿ ಹಾಗೂ ಅತಿಥಿ ಪಾತ್ರಧಾರಿಗಳಾಗಿ ಬಂದ ಎಲ್ಲ ಕಲಾವಿದರಿಗೂ ಪ್ರೀತಿಸಿ, ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ʼʼಎಂದು ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Bigg Boss Kannada: ಈ ಬಾರಿ ʻಬಿಗ್‌ ಬಾಸ್‌ ಕನ್ನಡʼ ಹೋಸ್ಟ್‌ ಮಾಡ್ತಿದ್ದಾರಂತೆ ರಿಷಬ್‌ ಶೆಟ್ಟಿ; ಕಿಚ್ಚ ಸುದೀಪ್ ಔಟ್‌?

Bigg Boss Kannada: ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

VISTARANEWS.COM


on

Bigg Boss Kannada host by rishab shetty sudeep Out
Koo

ಬೆಂಗಳೂರು: ಈಗಾಗಲೇ ಬಿಗ್‌ ಬಾಸ್‌ (Bigg Boss Kannada) ಹಿಂದಿ ಒಟಿಟಿ ಸೀಸನ್‌ ಮುಕ್ತಾಯವಾಗಿದೆ. ಕನ್ನಡದಲ್ಲಿ ಯಾವಾಗ ಸೀಸನ್‌ ಶುರು ಎಂಬ ಚರ್ಚೆ ಜೋರಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೀಘ್ರದಲ್ಲಿಯೇ ಶುರು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಶೋ ಆರಂಭವಾಗುತ್ತದೆ. ಈ ಬಾರಿ ಅದೇ ರೀತಿ ಪ್ಲ್ಯಾನ್ ಮಾಡಲಾಗುತ್ತಿದೆ. ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ವೈರಲ್ ಆಗುತ್ತಿದೆ. ಈ ಬಾರಿ ಸುದೀಪ್‌ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್‌ ಅವರು ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೋಸ್ಟ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ, ರಮೇಶ್‌ ಅರವಿಂದ ಈಗಾಗಲೇ ಮಹಾನಟಿ ಶೋ ಮೂಲಕ ವೀಕ್ಷಕರನ್ನು ತಲುಪಿದಿದ್ದಾರೆ. ಈಗಾಗಲೆ ಕೋಟ್ಯಾಧಿಪತಿ ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿ ರಮೇಶ್ ಅರವಿಂದ್‌ ಹೋಸ್ಟ್‌ ಮಾಡಿದ್ದಾರೆ.ಇನ್ನು ರಿಷಬ್‌ ಕೂಡ ಮಾಡಬಹುದು ಎನ್ನಲಾಗಿದೆ.

ಸೆಪ್ಟೆಂಬರ್‌ನಲ್ಲೇ ಈ ಬಾರಿ ಸೀಸನ್ 11 ಶುರುವಾಗುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಹಲವರು ದೊಡ್ಮನೆ ಪ್ರವೇಶಿಸಲಿದ್ದಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಮನೆ ಒಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ʼ 10 (Bigg Boss Kannada OTT)ರ ಚಾಂಪಿಯನ್‌ ಆಗಿ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದರೆ, ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ರನ್ನರ್‌ ಅಪ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10 ಭರ್ಜರಿ ಟಿಆರ್‌ಪಿಯನ್ನು ಪಡೆದು ವೀಕ್ಷಕರ ಮನ ಸೆಳೆದಿತ್ತು. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ.. ‘ಡ್ರೋನ್’ ಪ್ರತಾಪ್, ಸೋನು ಶ್ರೀನಿವಾಸ್ ಗೌಡ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: Bigg Boss Kannada: ಈ ಬಾರಿ ಬಿಗ್ ಬಾಸ್ ಮನೆಗೆ ʻಪಾರುʼ ಹೋಗ್ತಾರಾ? ನಟಿ ಹೇಳಿದ್ದೇನು?

ಈ ಬಾರಿ ಯಾರು ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿ ಆಗಿತ್ತು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವರ್ತೂರು ಸಂತೋಷ್ ಅವರು ಒಂದಷ್ಟು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ತನಿಷಾ ಕುಪ್ಪಂಡ ಅವರು ಒಂದು ಸಮುದಾಯಕ್ಕೆ ಬೇಸರ ತರಿಸುವ ಮಾತಾಡಿದರು ಎಂಬ ದೂರು ಕೇಳಿ ಬಂತು.

Continue Reading

ಕಿರುತೆರೆ

Bigg Boss Tamil 8: ಬಿಗ್​ ಬಾಸ್​ ಸೀಸನ್ 8​ರ ಹೋಸ್ಟ್​ ನಾನಲ್ಲ ಎಂದ ಕಮಲ್‌ ಹಾಸನ್‌; ಕಾರಣ ಬಿಚ್ಚಿಟ್ಟ ನಟ!

Bigg Boss Tamil 8: ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರವನ್ನೂ ನೀಡಿದ ವಿಜಯ್ ಟಿವಿಗೆ ಧನ್ಯವಾದ ಎಂದಿರುವ ಕಮಲ್ ಹಾಸನ್,ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ನಿರೂಪಣೆ ಮಾಡುತ್ತಿಲ್ಲ ಎಂದಿದ್ದಾರೆ

VISTARANEWS.COM


on

Bigg Boss Tamil 8 Kamal Haasan Bids Farewell As Host
Koo

ಬೆಂಗಳೂರು: ಈಗಾಗಲೇ ತಮಿಳು ಬಿಗ್‌ ಬಾಸ್‌ ಶೀಘ್ರದಲ್ಲಿ ಬರಲಿದೆ ಎಂದು ವರದಿಯಾಗಿದೆ. ಆದರೆ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಕಮಲ್‌ ಹಾಸನ್‌ (Bigg Boss Tamil 8) ಮಾಡುತ್ತಿಲ್ಲ. ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮದ ಹೊಣೆ ಹೊರಲು ಸಾಧ್ಯ ಇಲ್ಲ ಅಂದಿದ್ದಾರೆ. ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರವನ್ನೂ ನೀಡಿದ ವಿಜಯ್ ಟಿವಿಗೆ ಧನ್ಯವಾದ ಎಂದಿರುವ ಕಮಲ್ ಹಾಸನ್,ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ನಿರೂಪಣೆ ಮಾಡುತ್ತಿಲ್ಲ ಎಂದಿದ್ದಾರೆ

“ಆತ್ಮೀಯ ವೀಕ್ಷಕರೇ, ಭಾರವಾದ ಹೃದಯದಿಂದ, 7 ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಪ್ರಯಾಣದಿಂದ ನಾನು ಸಣ್ಣ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಸಿನಿಮಾಗಳ ಕಮಿಟ್‌ಮೆಂಟ್‌ನಿಂದಾಗಿ ಬಿಗ್ ಬಾಸ್ ತಮಿಳಿನ ಮುಂಬರುವ ಸೀಸನ್‌ಗೆ ಹೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ. .”
ನಿಮ್ಮ ಮನೆಗಳಲ್ಲಿ ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ನನಗೆ ಧಾರೆ ಎರೆದಿದ್ದೀರಿ, ಅದಕ್ಕಾಗಿ ನಿಮಗೆ ನನ್ನ ಚಿರ ಕೃತಜ್ಞತೆ ಇದೆ. ಇಲ್ಲಿ ನಾನು ನನ್ನ ಕಲಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ. ಈ ಕಲಿಕೆಯ ಅನುಭವಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮತ್ತು ಸ್ಪರ್ಧಿಗಳಿಗೂ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು. ಕೊನೆಯದಾಗಿ, ವಿಜಯ್ ಟಿವಿಯಲ್ಲಿನ ಅದ್ಭುತ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಜೊತೆಗೆ ಈ ಉದ್ಯಮವನ್ನು ಒಂದು ದೊಡ್ಡ ಯಶಸ್ಸನ್ನು ಮಾಡುವಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

ಕಮಲ್ ಹಾಸನ್ ಅವರು 2007 ರಲ್ಲಿ ‘ಬಿಗ್ ಬಾಸ್ ತಮಿಳು’ ನಿರೂಪಣೆ ಮಾಡಿದರು.ನಟ ‘ಬಿಗ್ ಬಾಸ್ ತಮಿಳು’ ನ ಪ್ರತಿ ಸೀಸನ್ ಅನ್ನು ನಿರಂತರವಾಗಿ ಹೋಸ್ಟ್ ಮಾಡಿದ್ದಾರೆ. ‘ಬಿಗ್ ಬಾಸ್ ತಮಿಳು 8’ ಹೊಸ ಹೋಸ್ಟ್ ಯಾರೆಂದು ಇನ್ನೂ ಘೋಷಿಸಲಾಗಿಲ್ಲ.

ಕಳೆದ ಸೀಸನ್‌ನಲ್ಲಿ ವಿಶೇಷ ಎಂದರೆ ಅರ್ಚನಾ ರವಿಚಂದ್ರನ್ ಅವರು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು. ಇದೀಗ ವೈಲ್ಡ್ ಕಾರ್ಡ್ ಮೂಲಕ ಬಂದು ಚಾಂಪಿಯನ್‌ ಆಗುವ ಮೂಲಕ ಅವರು ಅಪರೂಪದ ಸಾಧನೆ ಮಾಡಿದ್ದರು.  ಇನ್ನು ಡ್ಯಾನ್ಸರ್‌ ಮಾಯಾ ಕೃಷ್ಣನ್‌ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದರು. ಮತ್ತೋರ್ವ ವೈಲ್ಡ್ ಕಾರ್ಡ್ ಎಂಟ್ರಿ ದಿನೇಶ್ ಮೂರನೇ ರನ್ನರ್ ಅಪ್ ಆಗಿದ್ದರು.

Continue Reading

ಕಿರುತೆರೆ

Rashami Desai: ಡಿವೋರ್ಸ್‌ ಬಳಿಕ ಮನೆ ಇಲ್ಲದೆ, ರೋಡ್‌ ಸೈಡ್‌ ಊಟ ತಿಂದು ಕಾರಿನಲ್ಲಿ ಮಲಗಿದ್ದರಂತೆ ʻಮುದ್ದು ಬಂಗಾರʼ ಖ್ಯಾತ ನಟಿ!

Rashami Desai: ಕಿರುತೆರೆಯ ಸೂಪರ್ ಹಿಟ್ ನಟಿಯಾಗಿದ್ದರೂ ಕೂಡ ರಶ್ಮಿ ದೇಸಾಯಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಕಂಡಿದ್ದಾರೆ. ಡಿವೋರ್ಸ್‌ ಮತ್ತು ಬಾಯ್‌ಫ್ರೆಂಡ್‌ ಜತೆ ಬ್ರೇಕಪ್‌, ಎರಡರ ಬಗ್ಗೆ ತಮ್ಮ ಮನಸ್ಸಿನ ನೋವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.ಮದ್ದು ಬಂಗಾರ ಧಾರಾವಾಹಿಯಲ್ಲಿ ವೀರ್ ಪಾತ್ರದಲ್ಲಿ ನಟಿಸಿರುವ ನಂದೀಶ್​ ಸಿಂಗ್​ ಸಂಧು ಅವರನ್ನೇ ನಿಜ ಜೀವನದಲ್ಲೂ ಮದುವೆಯಾಗಿದ್ದರು.

VISTARANEWS.COM


on

Rashami Desai Homeless Rashami Desai lived in an Audi
Koo

ಬೆಂಗಳೂರು: ಹಿಂದಿ ಕಿರುತೆರೆ ಜನಪ್ರಿಯ ನಟಿ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ʻಮುದ್ದು ಬಂಗಾರʼ ಖ್ಯಾತಿಯ ನಟಿ ರಶ್ಮಿ ದೇಸಾಯಿ (Rashami Desai) ಬಿಗ್ ಬಾಸ್ ಹಿಂದಿ ಸೀಸನ್‌ 13ರಲ್ಲಿ ಭಾಗವಹಿಸಿದ್ದರು. ಕಿರುತೆರೆಯ ಸೂಪರ್ ಹಿಟ್ ನಟಿಯಾಗಿದ್ದರೂ ಕೂಡ ರಶ್ಮಿ ದೇಸಾಯಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಕಂಡಿದ್ದಾರೆ. ಡಿವೋರ್ಸ್‌ ಮತ್ತು ಬಾಯ್‌ಫ್ರೆಂಡ್‌ ಜತೆ ಬ್ರೇಕಪ್‌, ಎರಡರ ಬಗ್ಗೆ ತಮ್ಮ ಮನಸ್ಸಿನ ನೋವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ನಟಿ ನಂದೀಶ್ ಸಂಧು ಅವರ ಜತೆ ವಿಚ್ಛೇದನದ ನಂತರ, ಭಾರಿ ಆರ್ಥಿಕ ತೊಂದರೆಗಳನ್ನು ಎದುರಿಸಿದರು. ಮದ್ದು ಬಂಗಾರ ಧಾರಾವಾಹಿಯಲ್ಲಿ ವೀರ್ ಪಾತ್ರದಲ್ಲಿ ನಟಿಸಿರುವ ನಂದೀಶ್​ ಸಿಂಗ್​ ಸಂಧು ಅವರನ್ನೇ ನಿಜ ಜೀವನದಲ್ಲೂ ಮದುವೆಯಾಗಿದ್ದರು. ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿಯ ವೈವಾಹಿಕ ಜೀವನ ತುಂಬಾ ಸಮಯ ಉಳಿಯಲಿಲ್ಲ.
3.5 ಕೋಟಿ ರೂ. ಸಾಲ ಸೇರಿದಂತೆ, ಮನೆಯಿಲ್ಲದೇ ಅವರ ಕಾರಿನಲ್ಲಿ ಮಲಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಮದುವೆ ಸಮಯದಲ್ಲಿ ಕಿರುತೆರೆ ನಟಿಯಾಗಿದ್ದರು. ಮದುವೆ ನಂತರ ಕೊಂಚ ಫೇಮ್ ಕಡಿಮೆ ಆಗಿತ್ತು. ಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿಬಿಟ್ಟರು. ಅದಾದ ಮೇಲೆ ಬಾಯ್‌ಫ್ರೆಂಡ್‌ ಉದ್ಯಮಿ ಅರ್ಹಾನ್ ಖಾನ್‌ ಜೊತೆಗಿದ್ದರು…ಅದು ಕೂಡ ವರ್ಕೌಟ್ ಆಗುತ್ತಿಲ್ಲ ಎಂದು ಬ್ರೇಕಪ್ ಮಾಡಿಕೊಂಡರು.

ನಟಿ ಮಾತನಾಡಿ ʻʻನಾನು ಮನೆ ಖರೀದಿಸಿದೆ. ಸುಮಾರು 3.25-3.5 ಕೋಟಿ ರೂ, ಸಾಲ ಇತ್ತು. ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು. ಬಳಿಕ ನಾಲ್ಕು ದಿನ ನಾನು ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು. ನನ್ನ ಬಳಿ ಇದ್ದ ಆಡಿ 6 ಕಾರಿನಲ್ಲಿ ಮಲಗುವ ಪರಿಸ್ಥಿತಿ ಎದುರಾಗಿತ್ತು ಅಲ್ಲದೆ ಊಟ ಹಣವಿಲ್ಲದ ಕಾರಣ ರಸ್ತೆಯಲ್ಲಿ ಸಿಗುವ 20 ರೂಪಾಯಿ ಊಟವನ್ನು ತಿನ್ನುತ್ತಿದ್ದೆ. ನನ್ನ ಕುಟುಂಬದಿಂದ ಸಂಪೂರ್ಣವಾಗಿ ದೂರವಿದ್ದೆ. ಆಟೋ ಡ್ರೈವರ್‌ಗಳು ತಿನ್ನುತ್ತಿದ್ದ ಜಾಗದಲ್ಲಿ ತಿನ್ನುತ್ತಿದ್ದೆ. ನನ್ನ ಬಟ್ಟೆಗಳಿಗೆ ಜಾಗವಿಲ್ಲದ ಕಾರಣ ನನ್ನ ಮ್ಯಾನೇಜರ್‌ ಮನೆಯಲ್ಲಿ ಇಟ್ಟಿದೆ. ನಾನು ನಿದ್ದೆ ಮಾಡುತ್ತಿರಲಿಲ್ಲ.”ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ʻʻವಿಚ್ಛೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲವಿತ್ತು ಅದನ್ನು ತೀರಿಸಲು ಸಹಾಯ ಮಾಡಿದ್ದು ದಿಲ್ ಸೇ ದಿಲ್ ತಕ್ ಎನ್ನುವ ಧಾರಾವಾಹಿ. ಅಲ್ಲಿಂದ ನನ್ನ ಜರ್ನಿ ಅದ್ಭುತವಾಗಿ ಇತ್ತು. ಬಿಗ್ ಬಾಸ್‌ವರೆಗೂ ಬಂದು ನಿಂತಿದೆʼʼ ಎಂದು ರಶ್ಮಿ ದೇಸಾಯಿ ಮಾತನಾಡಿದ್ದಾರೆ.

ರಶ್ಮಿ ದೇಸಾಯಿ ಅವರು ಅಸ್ಸಾಮಿಯಲ್ಲಿ ಅತಿಥಿ ಪಾತ್ರದ ಮೂಲಕ ನಟನೆಗೆ ಬಂದರು. ಕನ್ಯಾದಾನ (2002).ಧಾರಾವಾಹಿ ಮೂಲಕ ಖಯಾತಿ ಪಡೆದರು. ದಿಲ್ ಸೆ ದಿಲ್ ತಕ್, ಜರಾ ನಚ್ಕೆ ದಿಖಾ ಮುಂತಾದ ರಿಯಾಲಿಟಿ ಶೋಗಳಲ್ಲೂ ದೇಸಾಯಿ ಭಾಗವಹಿಸಿದ್ದರು

Continue Reading

ಕಿರುತೆರೆ

Anchor Shalini: ಅವತ್ತಿನ ಕಾಲಕ್ಕೆ ‘ಪಾಪ ಪಾಂಡು’ ಖ್ಯಾತಿಯ ಶಾಲಿನಿ ಪಡೆಯುತ್ತಿದ್ದ ಸಂಭಾವನೆ ಏಷ್ಟು?

Anchor Shalini: ಸತತ 5 ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಹೆಂಡತಿ ಅಂದ್ರೆ ಹೆದರುವ ಪುಕ್ಕಲು ಪಾಂಡು ಹಾಗೂ ಖಡಕ್ ಪತ್ನಿ ಶ್ರೀಮತಿ ನಡುವೆ ದಿನಕ್ಕೊಂದು ಕಥೆ ಹೇಳಿ ಧಾರವಾಹಿ ವೀಕ್ಷಕರನ್ನು ರಂಜಿಸಿತ್ತು. ಬಳಿಕ ಇದೇ ತರಹದ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು ಶಾಲಿನಿ. ಆ ಬಗ್ಗೆ ತಮಗೆ ಇನ್ನು ಬೇಸರವಿದೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.

VISTARANEWS.COM


on

Anchor Shalini reveals her paycheck per day for paapa pandu tv serial
Koo

ಬೆಂಗಳೂರು: ಸುವರ್ಣ ಸೂಪರ್ ಸ್ಟಾರ್ (suvarna superstar) ಕಾರ್ಯಕ್ರಮವನ್ನು ಶಾಲಿನಿ (Super Star Shalini) ನಡೆಸಿಕೊಡುತ್ತಿದ್ದಾರೆ. ಈ ಶೋ ನೋಡುವ ಬಹುತೇಕ ಮಹಿಳೆಯರಿಗೆ, ಶಾಲಿನಿ ಇವತ್ತು ಯಾವ ರೀತಿಯ ಬ್ಲೌಸ್‌ ಧರಿಸುತ್ತಾರೆ ಎಂಬುದೇ ಕುತೂಹಲ. ಆ ಕಾರ್ಯಕ್ರಮ ಮಹಿಳೆಯರದ್ದೇ ಆದರೂ ಕೂಡ ಶಾಲಿನಿ ಅವರ ಬ್ಲೌಸ್‌ (suvarna superstar shalini) ಪ್ರಮುಖ ಹೈಲೈಟ್‌. ಇದೀಗ ಶಾಲಿನಿ ಅವರು ಸಂದರ್ಶನವೊಂದರಲ್ಲಿ ತಮ್ಮ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. 23 ವರ್ಷಗಳ ಹಿಂದೆ ‘ಪಾಪ ಪಾಂಡು’ (Anchor Shalini) ಧಾರಾವಾಹಿಯ ಪಾತ್ರದಿಂದ ಮೋಡಿ (papa pandu old serial) ಮಾಡಿದ್ದರು. ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಧಾರಾವಾಹಿ ಅವತ್ತಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು.

ಸತತ 5 ವರ್ಷಗಳ ಕಾಲ ಈ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಹೆಂಡತಿ ಅಂದ್ರೆ ಹೆದರುವ ಪುಕ್ಕಲು ಪಾಂಡು ಹಾಗೂ ಖಡಕ್ ಪತ್ನಿ ಶ್ರೀಮತಿ ನಡುವೆ ದಿನಕ್ಕೊಂದು ಕಥೆ ಹೇಳಿ ಧಾರವಾಹಿ ವೀಕ್ಷಕರನ್ನು ರಂಜಿಸಿತ್ತು. ಬಳಿಕ ಇದೇ ತರಹದ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು ಶಾಲಿನಿ. ಆ ಬಗ್ಗೆ ತಮಗೆ ಇನ್ನು ಬೇಸರವಿದೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.

ಶಾಲಿನಿ ಮಾತನಾಡಿ ʻʻಶಿಖರ ಎನ್ನುವ ಧಾರಾವಾಹಿಯಲ್ಲಿ ನಾನು ಮತ್ತು ಸಿಹಿ ಕಹಿ ಚಂದ್ರು ಅವರು ಅಪ್ಪ ಮಗಳ ರೋಲ್‌ ಮಾಡುತ್ತಿದ್ದೇವು. ನಾನು ಮತ್ತು ಸಿಹಿ ಕಹಿ ಚಂದ್ರು ಅವರು ತುಂಬ ಪುಸ್ತಕಗಳನ್ನು ಓದುತ್ತಿದ್ದೆವು. ಅದರ ಬಗ್ಗೆ ಮಾತನಾಡುತ್ತಿದ್ದೆವು. ಒಂದು ದಿನ ಕಾಲ್‌ ಮಾಡಿ, ಒಂದು ಸೀರಿಯಲ್‌ ಮಾಡುತ್ತ ಇದ್ದೀನಿ. ಬರ್ತೀಯಾ ಎಂದು ಕೇಳಿದರು. ಆಮೇಲೆ ಹೋದೆ. ನಾನು ಹೋದಾಗ ಇದು ಕಾಮಿಡಿ ಸೀರಿಯಲ್ ಅಂದ್ರು. ನನಗೆ ಶಾಕ್ ಆಯಿತು. ಅಲ್ಲಿಯವರೆಗೂ ನಾನು ಗಂಭೀರ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದೆ. ನನಗೆ ಕಾಮಿಡಿ ಬರಲ್ಲ ಎಂದೆ. ನಿನಗೆ ಬರುತ್ತೆ ಮಾಡು ಎಂದರು. ಆಡಿಷನ್ ಬಳಿಕ ನೀನು ಸೆಲೆಕ್ಟ್ ಆಗಿದ್ದೀಯಾ. ನೀನೇ ಲೀಡ್ ರೋಲ್, ಶ್ರೀಮತಿ ಅಂತ ಪಾಂಡು ಹೆಂಡಿತಿ ಪಾತ್ರ ಎಂದುಬಿಟ್ಟರುʼʼಎಂದರು.

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ʻʻಪಾಪ ಪಾಂಡು ದಿನ ಬರುತ್ತೇ ಎಂದರು. ಗಂಡನ ಬಳಿ ಬಂದು ಹೇಳಿದೆ. ಪಾಪ ಪಾಂಡು ಹೆಸರು ಕೇಳಿ ಬೇಡ ಅಂದರು. 25 ದಿನ ಕೆಲಸ ಅಂದೆ. 2000 ಅಲ್ಲಿ ಆಫೀಸ್‌ ಕೆಲಸಕ್ಕೆ ಹೋಗೊ ತರ ಹೋಗ್ತಿದ್ದೆ. ಒಳ್ಳೆಯ ಸಂಬಳ ಕೂಡ ಇತ್ತು. ಸಿದ್ಲಿಂಗು ಡೈರೆಕ್ಟರ್ ವಿಜಯಪ್ರಸಾದ್ ಆಗ ಧಾರಾವಾಹಿ ನಿರ್ದೇಶಿಸುತ್ತಿದ್ದರು. ದಿನಕ್ಕೆ 1000 ರೂಪಾಯಿಯಿಂದ ಆರಂಭಿಸಿ ಮುಂದೆ ಹೋಗ್ತಾ 1700 ರೂಪಾಯಿವರೆಗೆ ಸಂಭಾವನೆ ಪಡೆಯುತ್ತಿದ್ದೆ. ಬರೋಬ್ಬರಿ 1000ಕ್ಕೂ ಅಧಿಕ ಎಪಿಸೋಡ್‌ಗಳಲ್ಲಿ ಧಾರಾವಾಹಿ ಪ್ರಸಾರವಾಯಿತು.5 ವರ್ಷಗಳ ಕಾಲ ಕಾಮಿಡಿ ಪಾತ್ರದಲ್ಲಿ ನೋಡಿದವರು ಬಳಿಕ ಗಂಭೀರ ಪಾತ್ರದಲ್ಲಿ ನೋಡಲು ಇಷ್ಟಪಡಲಿಲ್ಲ. ಆ ರೀತಿ ಸಂಪೂರ್ಣವಾಗಿ ನನ್ನನ್ನು ಹಾಸ್ಯಪಾತ್ರಕ್ಕೆ ಸೀಮಿತವಾಗಿ ಬಿಟ್ಟೆʼʼಎಂದರು.

Continue Reading
Advertisement
World Breastfeeding Week 2024
ಆರೋಗ್ಯ14 mins ago

World Breastfeeding Week 2024: ಹಾಲುಣಿಸುವುದು ನಿಲ್ಲಿಸಿದ ಮೇಲೆ ತಾಯಿಯ ತೂಕ ಹೆಚ್ಚುವುದೇಕೆ? ಆಗೇನು ಮಾಡಬೇಕು?

Actor Darshan
ಕ್ರೈಂ16 mins ago

Actor Darshan: ನಟ ದರ್ಶನ್‌ಗೆ ಮನೆಯೂಟ ನಿರಾಕರಿಸಿದ ಜೈಲಾಧಿಕಾರಿಗಳು; ಕೋರ್ಟ್‌ಗೆ ವರದಿ

IND vs SL 3rd ODI
ಕ್ರೀಡೆ20 mins ago

IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ

Paris Olympics
ಕ್ರೀಡೆ48 mins ago

Paris Olympics: ನಾಳೆ ನೀರಜ್​ ಚೋಪ್ರಾ ಫೈನಲ್​ ಸ್ಪರ್ಧೆ; ಕಂಚಿನ ಪದಕಕ್ಕೆ ಹಾಕಿ ತಂಡ ಹೋರಾಟ

Electric Vehicles
ಆಟೋಮೊಬೈಲ್1 hour ago

Electric Vehicles: ಎಲೆಕ್ಟ್ರಿಕ್‌ ಕಾರು ಖರೀದಿಸಿದವರಿಗೆ ಪೆಟ್ರೋಲ್, ಡೀಸೆಲ್‌ ಕಾರಿಗೆ ಮರಳುವ ಇಚ್ಛೆ; ಕಾರಣ ಏನು?

Wayanad Landslide
ಕರ್ನಾಟಕ1 hour ago

Wayanad Landslide: ಭೂಕುಸಿತ ಸಂತ್ರಸ್ತರಿಗೆ ನೆರವು; ಯುವ ಕಾಂಗ್ರೆಸ್‌ ಮುಖಂಡ ಧ್ರುವ ಜತ್ತಿ ಭೇಟಿ

Blazer Saree Fashion
ಫ್ಯಾಷನ್1 hour ago

Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

Waqf Act
ದೇಶ2 hours ago

Waqf Act: ನಾಳೆ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡನೆ; ಪರಮಾಧಿಕಾರ ರದ್ದು ಸೇರಿ ಏನೆಲ್ಲ ಬದಲು?

Headphone Side Effect
ಆರೋಗ್ಯ2 hours ago

Headphone Side Effect: ಹೆಡ್ ಫೋನ್ ಬಳಕೆಯಿಂದ ಮೆದುಳು, ಹೃದಯದ ಮೇಲೆ ಭೀಕರ ಪರಿಣಾಮ!

Utthana Essay Competition 2024
ಕರ್ನಾಟಕ2 hours ago

Utthana Essay Competition 2024: ಉತ್ಥಾನ ಪ್ರಬಂಧ ಸ್ಪರ್ಧೆಗೆ ಬರಹ ಕಳುಹಿಸಿ; 10,000 ರೂ. ಬಹುಮಾನ ಪಡೆಯಿರಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌