Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ? - Vistara News

ಆರೋಗ್ಯ

Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ?

Hair Oil Tips: ನಮ್ಮ ತಲೆಗೂದಲು ಹೇಗಿದೆ? ಉದ್ದ, ಗಿಡ್ಡ, ದಪ್ಪ, ಸಪೂರ, ಕಪ್ಪು, ಕೆಂಚು- ಇಂಥ ಉತ್ತರಗಳೇ ಬರಬಹುದು, ತಪ್ಪೇನಿಲ್ಲ. ಆದರೆ ನಮ್ಮ ಕೂದಲಿಗೆ ಎಂಥಾ ತೈಲ ಸರಿಹೊಂದುತ್ತದೆ ಎಂಬುದು ನಮಗೆ ತಿಳಿದಿದೆಯೇ? ತಲೆಯ ಚರ್ಮದ ಹೇಗಿದ್ದರೆ, ಅದಕ್ಕೆ ಯಾವ ತೈಲ ಒಳ್ಳೆಯದು ಗೊತ್ತೇ? ಗೊತ್ತಿಲ್ಲದಿದ್ದರೆ, ಇಲ್ಲಿದೆ ವಿವರಗಳು.

VISTARANEWS.COM


on

Hair Oil Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಸರ್ವ ರೋಗಕ್ಕೆ ಒಂದೇ ಮದ್ದುʼ ಅಂತ ಆಗುವುದುಂಟೇ? ಕೆಲವೊಮ್ಮೆ ಉಂಟು! ಉದಾ, ತಲೆಕೂದಲ ಸಮಸ್ಯೆ ಏನೇ ಇದ್ದರೂ ನಮ್ಮ ಅಜ್ಜಿಯರ ಕಾಲದಲ್ಲಿ ಇರುತ್ತಿದ್ದುದು ಒಂದೇ ಮದ್ದು- ತಲೆಗೆ ಹದವಾದ ಎಣ್ಣೆ ಮಸಾಜ್‌ ಮಾಡುವುದು! ನಿಜ, ತಲೆ ನೋವಿನಿಂದ ಪ್ರಾರಂಭವಾಗಿ, ಕೂದಲು ಉದುರುವುದಕ್ಕೆ, ತಲೆ ಹೊಟ್ಟಿಗೆ, ಸೀಳುಗೂದಲಿಗೆ, ಬಾಲನೆರೆಗೆ- ಹೀಗೆ ಎಲ್ಲದಕ್ಕೂ ಎಣ್ಣೆ ಮಸಾಜ್‌ ಅವರ ಉತ್ತರವಾಗಿತ್ತು. ಆದರೆ ಎಣ್ಣೆಗಳನ್ನು ಅವರೇ ತಯಾರು ಮಾಡುತ್ತಿದ್ದರಿಂದ, ಯಾವ ಸಮಸ್ಯೆಗೆ ಎಂಥಾ ಎಣ್ಣೆ ಬೇಕು ಎನ್ನುವುದು ಅವರಿಗೆ ಗೊತ್ತಿರುತ್ತಿತ್ತು. ನಮಗೀಗ ಗೊತ್ತಿಲ್ಲವಲ್ಲ, ಇದು ಸಮಸ್ಯೆ. ಎಂಥಾ ಕೂದಲಿಗೆ ಯಾವ ರೀತಿಯ ಎಣ್ಣೆ ಸೂಕ್ತ? (Hair Oil Tips) ವಿವರಗಳು ಈ ಲೇಖನದಲ್ಲಿವೆ.

ಯಾವ ರೀತಿಯ ಕೂದಲು?

Hair Oil Tips

ನೇರ ಕೂದಲು

ಯಾವುದೇ ಗುಂಗುರು, ಸುರುಳಿಗಳಿಲ್ಲದೇ ನೇರವಾಗಿ ಇಳಿಬೀಳುವ ಕೂದಲುಗಳಿವು. ಇವು ನೋಡುವುದಕ್ಕೆ ಮೃದುವಾದ, ಹೊಳೆಯುವ ಗುಚ್ಛದಂತೆ ಕಾಣುವ ಕೇಶಗಳು. ಪರಿಣಾಮವಾಗಿ, ಕೂದಲಿಗೆ ಸ್ವಲ್ಪ ಎಣ್ಣೆ ಹಾಕಿದರೂ, ತೈಲವನ್ನು ಹಿಡಿದಿಟ್ಟುಕೊಳ್ಳದೆ ಹೊರಸೂಸುತ್ತವೆ, ಅಂಟಾಗಿ ಜಿಡ್ಡಾಗಿ ಕಾಣುತ್ತವೆ. ಇವುಗಳಿಗೆ ಹೆಚ್ಚು ಜಿಡ್ಡಿಲ್ಲದ ಲಘುವಾದ ತೈಲಗಳು ಸೂಕ್ತ. ಬಾದಾಮಿ ಎಣ್ಣೆ, ಜೊಜೂಬಾ ಎಣ್ಣೆ, ಆರ್ಗಾನ್‌ ಎಣ್ಣೆಯಂಥವು ಇದಕ್ಕೆ ಸೂಕ್ತ.

wavy hair

ಅಲೆಯಾದ ಕೂದಲು

“S” ಆಕಾರದಲ್ಲಿ ಕಾಣುವ ಕೂದಲುಗಳಿವು. ಅಲ್ಲಲ್ಲಿ ಸುರುಳಿಗಳಿದ್ದು ನೋಡುವುದಕ್ಕೆ ಸುಂದರ ಕೂದಲುಗಳಿವು. ಆದರೆ ಕೂದಲು ಒಣಗುವ ಮತ್ತು ಸಿಕ್ಕಾಗುವ ಸಾಧ್ಯತೆ ನೇರ ಕೂದಲಿಗಿಂತ ಅಧಿಕ. ಹಾಗಾಗಿ ಹೆಚ್ಚು ಉದುರಲೂಬಹುದು. ಇಂಥ ಕೂದಲಿಗೆ ಮಧ್ಯಮ ಪ್ರಮಾಣದಲ್ಲಿ ಜಿಡ್ಡಿರುವಂಥ ತೈಲಗಳು ಬೇಕು. ತೀರಾ ಲಘುವಾದ ತೈಲಗಳು ನಾಟುವುದೇ ಇಲ್ಲ. ಕೊಬ್ಬರಿ ಎಣ್ಣೆ ಇದಕ್ಕೆ ತಕ್ಕುದಾದದ್ದು. ಬೇರಾವುದೇ ತೈಲಗಳನ್ನು ಮಾಡಿಕೊಳ್ಳುವುದಾದರೂ ಅದಕ್ಕೆ ಆಧಾರವಾಗಿ ಕೊಬ್ಬರಿ ಎಣ್ಣೆಯನ್ನೇ ಉಪಯೋಗಿಸುವುದು ಸೂಕ್ತ.

Thick, curly hair

ದಪ್ಪ, ಗುಂಗುರು ಕೂದಲು

ಇಂಥ ಕೂದಲು ಹೆಚ್ಚು ಉದ್ದ ಬೆಳೆಯಲಾರದು. ಬದಲಿಗೆ ದಪ್ಪನಾಗಿ ಬೆಳೆದು, ಗುಂಗುರಾಗಿ ಭುಜಕ್ಕಿಂತ ಸ್ವಲ್ಪ ಕೆಳಗಿಳಿಯಬಲ್ಲದಷ್ಟೆ. ಇದನ್ನು ಸರಿಗಾಣಿಸಿ ಇರಿಸಿಕೊಳ್ಳುವುದು ಸವಾಲಿನ ಕೆಲಸ. ಇದಕ್ಕೆ ಘನವಾದ ತೈಲಗಳೇ ಬೇಕು. ಇಲ್ಲದಿದ್ದರೆ ಬಾಚಣಿಕೆ ಮೇಲಿಂದ ಕೆಳಕ್ಕಿಳಿಯುವುದೂ ಕಷ್ಟವಾಗಬಹುದು. ಹಾಗಾಗಿ ಆಲಿವ್‌ ಎಣ್ಣೆ, ಎಳ್ಳೆಣ್ಣೆ, ಹರಳೆಣ್ಣೆಯಂಥ ದಿವಿನಾದ ತೈಲಗಳ ಮೊರೆ ಹೋಗುವುದು ಒಳ್ಳೆಯದು. ಒಂದೊಮ್ಮೆ ಈ ತೈಲಗಳ ವಾಸನೆ ಇಷ್ಟವಾಗದಿದ್ದರೆ, ಕೊಬ್ಬರಿ ಎಣ್ಣೆಯನ್ನೇ ನಿತ್ಯವೂ ಲೇಪಿಸಬೇಕಾಗುತ್ತದೆ.

thin hair
Young Woman Takes Care of Her Hair Using Natural Oils and Conditioners for Hair Care

ಸಪೂರ ಕೂದಲು

ಇದು ಕೂದಲು ಉದುರಿ ತೆಳ್ಳಗಾಗಿದ್ದಲ್ಲ, ಇದ್ದಿದ್ದೇ ಸಪೂರ. ಇವು ಸಹ ಬೇಗ ತುಂಡಾಗಿ, ಶಕ್ತಿಹೀನವಾದಂತೆ ಕಾಣುತ್ತವೆ. ಇವುಗಳಿಗೂ ಲಘುವಾದ ತೈಲಗಳೇ ಸೂಕ್ತ. ಜೊಜೂಬಾ ತೈಲ, ತೆಂಗಿನ ಹಾಲಿನ ತೈಲ ಮುಂತಾದ ತೀರಾ ಜಿಡ್ಡಿಲ್ಲದ, ಅಂಟಾಗದಂಥ ಎಣ್ಣೆಗಳು ಇಂಥ ಕೂದಲಿಗೆ ಬೇಕಾಗುತ್ತದೆ. ಅಂಟಾಗುತ್ತದೆಂದು ಎಣ್ಣೆಯನ್ನೇ ಹಾಕದಿದ್ದರೆ ಕೂದಲ ಆರೋಗ್ಯ ಬಿಗಡಾಯಿಸುವುದು ನಿಶ್ಚಿತ.

ತಲೆಯ ಚರ್ಮದಲ್ಲೂ ವಿಧಗಳಿವೆ!: ನಿಮ್ಮದು ಹೇಗಿದೆ?

ಸಾಮಾನ್ಯ ಚರ್ಮ

ಇಂಥ ತಲೆಚರ್ಮಗಳಲ್ಲಿ ಅಧಿಕವಾದ ತೈಲ ಉತ್ಪಾದನೆ ಆಗುವುದಿಲ್ಲ. ತಲೆಸ್ನಾನ ಮಾಡುವುದು ಒಂದೆರಡು ದಿನ ಆಚೀಚೆಯಾದರೆ, ಕೂದಲೆಲ್ಲ ಅಂಟಾಗಿ, ಜಲೀಜಾಗಿ ಮುಂದ್ದೆಯಾಗುವುದಿಲ್ಲ. ಇಂಥವರಿಗೆ ಕೊಬ್ಬರಿ ಎಣ್ಣೆ ಒಳ್ಳೆಯ ಆಯ್ಕೆ.

Young Woman Takes Care of Her Hair Using Natural Oils and Conditioners for Hair Care
Young Woman Takes Care of Her Hair Using Natural Oils and Conditioners for Hair Care

ಎಣ್ಣೆ ಚರ್ಮ

ತಲೆಯ ಚರ್ಮದಲ್ಲಿ ತೈಲ ಅಥವಾ ಸೇಬಂ ಅತಿಯಾಗಿ ಉತ್ಪಾದನೆ ಆಗುತ್ತದೆ ಕೆಲವರಿಗೆ. ಬೇಗನೆ ಕೂದಲು ಕೊಳೆಯಾಗುವುದು, ಅಂಟಾಗುವುದು, ಜೀವವೇ ಇಲ್ಲದಂತೆ ಕಾಣುವುದು, ಹೊಟ್ಟಾಗುವುದೆಲ್ಲ ಇದರ ಅಡ್ಡ ಪರಿಣಾಮಗಳು. ಇಂಥವರು ಲಘುವಾದ ಎಣ್ಣೆಗಳನ್ನೇ ಕೂದಲಿಗೆ ಲೇಪಿಸಬೇಕು. ಜೊಊಬಾ ಎಣ್ಣೆ, ಟೀಟ್ರೀ ಎಣ್ಣೆ, ಗ್ರೇಪ್‌ಸೀಡ್‌ ಎಣ್ಣೆಯಂಥವು ಸೂಕ್ತ.

ಇದನ್ನೂ ಓದಿ: Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

ಒಣ ಚರ್ಮ

ಇವರಲ್ಲಿ ತಲೆಯ ಚರ್ಮಕ್ಕೆ ಹೆಚ್ಚು ತೇವವೇ ಇರುವುದಿಲ್ಲ; ಹಾಗಾಗಿ ಒಣಗಿ ಜೀವವಿಲ್ಲದಂತೆ ಕಾಣುತ್ತದೆ. ಇದರಿಂದಾಗಿ ತಲೆಯಲ್ಲಿ ಹೊಟ್ಟಾಗುವುದು, ತುರಿಕೆ, ಕಿರಿಕಿರಿ ಮಾಮೂಲಾಗುತ್ತದೆ. ಹಾಗೆಯೇ ಬಿಟ್ಟರೆ ಎಕ್ಸಿಮಾ, ಸೋರಿಯಾಸಿಸ್‌ನಂಥ ತೊಂದರೆಗಳು ಬರಬಹುದು. ಹಾಗಾಗಿ ಕೊಬ್ಬರಿ ಎಣ್ಣೆ, ಅವಕಾಡೊ ಎಣ್ಣೆ, ಆಲಿವ್‌ ಎಣ್ಣೆಯಂಥವು ಇವರಿಗೆ ಒಳ್ಳೆಯದ ಆಯ್ಕೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Colon cancer : ಕರುಳಿನ ಕ್ಯಾನ್ಸರ್‌ ಬಗ್ಗೆ ನಿರ್ಲಕ್ಷ್ಯ ಬೇಡ, ಮುಂಜಾಗೃತಿ ಇರಲಿ ಎಂದು ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರದ ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಸಂತೋಷ್ ಚಿಕ್ಕ್‌ರೆಡ್ಡಿ ತಿಳಿಸಿದ್ದಾರೆ.

VISTARANEWS.COM


on

By

Colon cancer is on the rise‌ Those above 50 years of age are targeted
ಸಾಂದರ್ಭಿಕ ಚಿತ್ರ
Koo

ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ಹಲವು ಕ್ಯಾನ್ಸರ್‌ ನಮ್ಮನ್ನು ಕಾಡಲಾರಂಭಿಸಿವೆ. ಅದರಲ್ಲಿ ಇದೀಗ ಕರುಳಿನ ಕ್ಯಾನ್ಸರ್‌ (Colon cancer ) ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ಕೂಡ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ. ನಮ್ಮ ಪಚನಕ್ರಿಯೆಯನ್ನು ಸಮತೋಲದಲ್ಲಿ ಇಟ್ಟುಕೊಳ್ಳುವ ಕರುಳಿನ ಆರೋಗ್ಯ ಹದಗೆಟ್ಟರೆ ಇಡೀ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಾವು ತಿನ್ನುವ ಆಹಾರ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಕರುಳಿನ ಕ್ಯಾನ್ಸರ್‌ ಅಭಿವೃದ್ಧಿಗೊಳ್ಳಲಿದೆ. ಕರುಳಿನ ಕ್ಯಾನ್ಸರ್‌ಗೆ ಕಾರಣ ಹಾಗೂ ಅದಕ್ಕೆ ಪರಿಹಾರದ ಕುರಿತು ವೈದ್ಯರು ವಿವರಿಸಿದ್ದಾರೆ.

ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಯಲ್ಪಡುವ ಕರುಳಿನ ಕ್ಯಾನ್ಸರ್‌, ದೊಡ್ಡ ಕರುಳಿನ (ಕೊಲೊನ್ ಮತ್ತು ಗುದನಾಳ) ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಇದು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್‌ ಹೆಚ್ಚಾಗಿ ಕಂಡು ಬರಲಿದೆ. ವಯಸ್ಸಾದಂತೆ ಪಚನಕ್ರಿಯೆ ನಿಧಾನವಾಗುವುದರಿಂದ ಕರುಳಿನ ಆರೋಗ್ಯವೂ ಕ್ಷೀಣಿಸುತ್ತಾ ಬರಲಿದೆ. ಹೀಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕರುಳಿನ ಕ್ಯಾನ್ಸರ್‌ನ ನಿಯಮಿತ ಸ್ಕ್ರೀನಿಂಗ್‌ಗಳು ಮತ್ತು ತಪಾಸಣೆಗೆ ಒಳಗಾಗುವುದು ಅತ್ಯವಶ್ಯಕವಾಗಿದೆ.

ಅನುವಂಶಿಕ ಪರೀಕ್ಷೆಗೆ ಒಳಗಾಗಿ

ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚಾಗಿ ಕುಟುಂಬದ ಇತಿಹಾಸ ಹೊಂದಿರುವವರಲ್ಲಿಯೂ ಕಾಣಿಸಿಕೊಳ್ಳಲಿದೆ. ಫ್ಯಾಮಿಲಿ ಅಡೆನೊಮ್ಯಾಟಸ್ ಪಾಲಿಪೊಸಿಸ್ (FAP) ಅಥವಾ ಲಿಂಚ್ ಸಿಂಡ್ರೋಮ್‌ನಂತಹ ಕೆಲವು ಆನುವಂಶಿಕ ಪರಿಸ್ಥಿತಿಗಳು, ರೋಗವನ್ನು ಅಭಿವೃದ್ಧಿ ಪಡಿಸಲಿದೆ. ನಿಮ್ಮ ಕುಟುಂಬದಲ್ಲಿಯೂ ಯಾರಿಗಾದರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರೆ, ನೀವು ಸಹ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ಅನುವಂಶಿಕ ಪರೀಕ್ಷೆಗೆ ಒಳಗಾಗುವುದು ಉತ್ತಮ

ಕರುಳಿನ ಕ್ಯಾನ್ಸರ್‌ಗೆ ಇತರೆ ಕಾರಣಗಳೇನು?

ಉರಿಯೂತದ ಕರುಳಿನ ಕಾಯಿಲೆ (IBD), ಟೈಪ್ 2 ಮಧುಮೇಹ ಮತ್ತು ಬೊಜ್ಜು ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕರುಳಿನ ಕ್ಯಾನ್ಸರ್ ಸಾಮಾನ್ಯವಾಗಿ ಆನುವಂಶಿಕ ಮತ್ತು ಪರಿಸರ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ, ಇದು ಕರುಳಿನಲ್ಲಿ ಪಾಲಿಪ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ. ಪತ್ತೆ ಮಾಡದೆ ಬಿಟ್ಟರೆ, ಈ ಪಾಲಿಪ್ಸ್ ಕ್ಯಾನ್ಸರ್ ಆಗಬಹುದು. ಹೀಗಾಗಿ ಕ್ಯಾನ್ಸರ್‌ನ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಕ್ಯಾನ್ಸರ್‌ನ ಲಕ್ಷಣಗಳೇನು?

  • ಮಲದಲ್ಲಿನ ರಕ್ತ, ಕಡಿಮೆ ಪ್ರಮಾಣದಲ್ಲಿ ಮಲವಿಸರ್ಜನೆ
  • ಕರುಳಿನ ಚಲನೆಗಳಲ್ಲಿನ ಬದಲಾವಣೆಗಳು (ಅತಿಸಾರ ಅಥವಾ ಮಲಬದ್ಧತೆ),
  • ಹೊಟ್ಟೆ ನೋವು ಅಥವಾ ಸೆಳೆತ,
  • ದೌರ್ಬಲ್ಯ, ಆಯಾಸ,
  • ತೂಕ ನಷ್ಟ ಮತ್ತು ಹಸಿವು ಆಗದೇ ಇರುವುದು
  • ಕೆಲವು ತೋಟಗಳಿಗೆ ಸಿಂಪಡಿಸುವ ಕೆಲವು ಕೀಟನಾಶ ಕಣಗಳು ದೇಹಕ್ಕೆ ಸೇರುವುದರಿಂದ

ಕ್ಯಾನ್ಸರ್‌ ತಡೆಗಟ್ಟಲು ಈ ಅಭ್ಯಾಸವಿರಲಿ

ನಾವು ಪ್ರತಿನಿತ್ಯ ತಿನ್ನುವ ಆಹಾರದಿಂದಲೇ ಕೊಲೊರೆಕ್ಟಲ್ ಕ್ಯಾನ್ಸರ್ ಅಭಿವೃದ್ಧಿ ಹೊಂದಲಿದೆ. ಹೌದು, ಕೆಂಪು ಮತ್ತು ಸಂಸ್ಕರಿಸಿದ ಮಾಂಸದಲ್ಲಿ ಹೆಚ್ಚಿನ ಆಹಾರ, ಕಡಿಮೆ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಕರುಳಿನ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು. ಜಡ ಜೀವನಶೈಲಿಯು ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹಣ್ಣು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಹೆಚ್ಚು ಆಯಿಲ್‌ಯುಕ್ತ ಆಹಾರ ಸೇವನೆ, ಜಂಕ್‌ ಫುಡ್‌ ಸೇವನೆಯೂ ಸಹ ನಮ್ಮ ಕರುಳಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಉತ್ತಮ ಆಹಾರ ಸೇವನೆಯ ಜೊತೆಗೆ ನಿಯಮಿತ ವ್ಯಾಯಾಮವೂ ಅತ್ಯವಶ್ಯಕ. ವ್ಯಾಯಾಮ, ಯೋಗ, ಧ್ಯಾನ ಇತರೆ ದೈಹಿಕ ಚಟುವಟಿಕೆಯನ್ನು ದಿನದಲ್ಲಿ ಕನಿಷ್ಠ ೩೦ ನಿಮಿಷಗಳು ಮಾಡುವುದರಿಂದ ಈ ಕ್ಯಾನ್ಸರ್‌ನ ಅಪಾಯದಿಂದ ಪಾರಾಗಬಹುದು. ಅನುವಂಶಿಕ ಹಿನ್ನೆಲೆ ಇದ್ದರೂ ಸಹ ಉತ್ತಮ ಜೀವನಶೈಲಿ ಹೊಂದಿದ್ದರೆ, ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದು.

Continue Reading

ಆರೋಗ್ಯ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

VISTARANEWS.COM


on

By

Dengue is now an epidemic
Koo

ಬೆಂಗಳೂರು: ಡೆಂಗ್ಯೂ ಜ್ವರವನ್ನು (Dengue Fever) ಸಾಂಕ್ರಾಮಿಕ ರೋಗ (Epidemic Diseases) ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆ 2020 ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಉಲ್ಲಂಘನೆಗೂ ದಂಡ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ನೀಡಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕ್ರಮವಹಿಸಲಾಗಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ.

ಡಿಸಿಗಳಿಗೆ ಅಧಿಕಾರ

ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಪಟ್ಟಿಗೆ ಸೇರಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜನರಿಗೆ ಇದುವರೆಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದವಿ. ಆದರೆ ಇದುವರೆಗೆ ನಮಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ಮಾತ್ರ ಪಾಲಿಕೆಗಳು ಕೆಲ ಕ್ರಮ ತೆಗೆದುಕೊಳ್ಳುವ ಅವಕಾಶ ಇತ್ತು, ಬೇರೆ ಕಡೆ ಇರಲಿಲ್ಲ. ಇದೀಗ ಡೆಪ್ಯುಟಿ ಕಮೀಷನರ್‌, ಡಿಸಿಗಳು ಇನ್ನು ಮುಂದೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದ್ದೇವೆ. ಮನೆ, ಸಂಸ್ಥೆ, ಕಟ್ಟಡಗಳು, ನಿರ್ಮಾಣ ಹಂತದ ಸೈಟ್, ಹೋಟೆಲ್ ಹೀಗೆ ಹಲವು ಸ್ಥಳಗಳ ಸುತ್ತಮುತ್ತ ಸರಿಯಾದ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

ಆ ಪ್ರಕಾರ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 200 ರೂ. ದಂಡ, ನಗರ ಪ್ರದೇಶಗಳ ಮನೆಗಳಿಗೆ 400 ರೂ., ನಗರ ಪ್ರದೇಶದ ವಾಣಿಜ್ಯ ಪ್ರದೇಶ, ಮಾಲ್, ಮಾರುಕಟ್ಟೆಗಳಿಗೆ 1 ಸಾವಿರ ರೂ, ಗ್ರಾಮೀಣ ಪ್ರದೇಶಗಳಲ್ಲಿ 500 ರೂವರೆಗೆ ದಂಡ ಇರಲಿದೆ. ಖಾಲಿ ಸ್ಥಳ, construction ಸೈಟ್ ( ನಗರ ಪ್ರದೇಶ) 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ ದಂಡ ಇರಲಿದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Amla For Your Hair: ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನೆಲ್ಲಿಕಾಯಿಯ ಇನ್ನಷ್ಟು ಉಪಯೋಗಗಳ ಬಗ್ಗೆ, ಹೇರ್‌ಮಾಸ್ಕ್‌ ಮಾಡುವ ಬಗ್ಗೆಯೂ ಇಲ್ಲಿವೆ ವಿವರ.

VISTARANEWS.COM


on

Hair Care Habits
Koo

ಆಯುರ್ವೇದದಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿ ತನ್ನ ವಿಶೇಷ ಸತ್ವಗಳಿಂದ ಈಗ ವಿಶ್ವದೆಲ್ಲೆಡೆ ಹೆಸರಾಗಿದೆ. ವಿಟಮಿನ್‌-ಸಿಯಂಥ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಇದು, ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಉಪಯುಕ್ತ ಸತ್ವಗಳನ್ನು ಹೊಂದಿದೆ. ಮಧುಮೇಹ ನಿಯಂತ್ರಣಕ್ಕೆ ಮತ್ತು ತೂಕ ಇಳಿಕೆಗೆ ಅನುಕೂಲಕರವಾಗಿದೆ. ಜೊತೆಗೆ, ಹಲವು ರೀತಿಯ ಜೀವಸತ್ವಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ಇಡೀ ದೇಹಕ್ಕೆ ಬೇಕಾದಂಥ ಸತ್ವಗಳನ್ನು ಒದಗಿಸಬಲ್ಲವು. ಹೀಗೆ ಬಹೂಪಯೋಗಿ ಎನಿಸಿರುವ ನೆಲ್ಲಿಕಾಯಿಯಿಂದ ಆಗುವಂಥ ಅನುಕೂಲಗಳನ್ನು ಒಮ್ಮೆ ಗಮನಿಸೋಣ. ಜೊತೆಗೆ ಹಲವು ಬಗೆಯ ಹೇರ್‌ಮಾಸ್ಕ್‌ಗಳನ್ನು ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ನಳನಳಿಸುವ (Amla For Your Hair) ಕೂದಲು ನಿಮ್ಮದಾಗಲಿ.

Skin Health Cucumber Benefits

ಚರ್ಮಕ್ಕೆ ಕಾಂತಿ

ಇದರಲ್ಲಿರುವ ವಿಟಮಿನ್‌ ಸಿ ಅಂಶವು ಕೊಲಾಜಿನ್‌ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಬರುವುದು ಕಡಿಮೆಯಾಗಿ, ತಾರುಣ್ಯಭರಿತ ತ್ವಚೆಯನ್ನು ಹೊಂದಬಹುದು. ಜೊತೆಗೆ, ಚರ್ಮದ ಹೊಳಪು ಹೆಚ್ಚಿಸಿ, ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆಯುತ್ತದೆ. ಹಾಗಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಈ ಮೂಲಕ ನೆರವಾಗುತ್ತದೆ.

Image Of Egg Benefits For Hair

ಕೂದಲು ಸೊಂಪು

ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೂ ಪೋಷಣೆ ನೀಡುತ್ತದೆ.

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ಜೀವಸತ್ವ ನೆಲ್ಲಿಕಾಯಿಯಲ್ಲಿ ಅತ್ಯಧಿಕವಾಗಿದೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್‌ ಸಿ ದೊರೆಯಬೇಕಾದ್ದು ಅಗತ್ಯ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಫ್ಲೆವನಾಯ್ಡ್‌ಗಳು, ಪಾಲಿಫೆನಾಲ್‌ಗಳು ನೆಲ್ಲಿಕಾಯಿಯಲ್ಲಿ ವಿಫುಲವಾಗಿವೆ. ಇವು ದೇಹದಲ್ಲಿ ಉರಿಯೂತ ಶಮನ ಮಾಡುವುದಕ್ಕೆ ಸಹಕಾರಿ. ಜೊತೆಗೆ, ಬೀಡಾಡಿಗಳಂತೆ ಅಲೆದುಕೊಂಡಿರುವ ಮುಕ್ತ ಕಣಗಳನ್ನು ನಿರ್ಬಂಧಿಸಲು ಇವು ಅಗತ್ಯ. ಇದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂಥ ರೋಗಗಳ ಭೀತಿ ದೂರವಾಗುತ್ತದೆ.

Improves digestion Peach Benefits

ಜೀರ್ಣಾಂಗಗಳು ಚುರುಕು

ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ನೆಲ್ಲಿಕಾಯಿ ಪ್ರಚೋದನೆ ನೀಡುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ಆಹಾರ ಸುಲಲಿತವಾಗಿ ಪಚನವಾಗುತ್ತವೆ ಎಂಬುದಷ್ಟೇ ಅಲ್ಲ, ಸತ್ವಗಳನ್ನೂ ಚೆನ್ನಾಗಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ. ಲಘುವಾದ ವಿರೇಚನದ ಗುಣವನ್ನೂ ಆಮಲಕಿ ಹೊಂದಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

May support eye health Peach Benefits

ದೃಷ್ಟಿ ಉತ್ತಮ

ನೆಲ್ಲಿಕಾಯಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕ ಸತ್ವ. ಜೊತೆಗೆ, ಕೆರೊಟಿನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳು ದೃಷ್ಟಿ ಮಂದವಾಗದಂತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಯಸ್ಸಾದಂತೆ ಕಾಡುವ ಕ್ಯಾಟರಾಕ್ಟ್‌ ನಂಥ ಸಮಸ್ಯೆಗಳು ಬಾರದಂತೆ ಮುಂದೂಡುತ್ತವೆ.

ನೆಲ್ಲಿಕಾಯಿ ಎಣ್ಣೆ:

ಅಗಲವಾದ ಬಾಯಿಯ ಪಾತ್ರೆಯಲ್ಲಿ ಒಂದು ಕಪ್‌ ನೆಲ್ಲಿಕಾಯಿ ಪುಡಿಯನ್ನು ಎರಡು ಕಪ್‌ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ. ಇದನ್ನು ಮಂದವಾದ ಉರಿಯಲ್ಲಿ ಕುದಿಯುವುದಕ್ಕೆ ಬಿಡಿ. ಸುಮಾರು ೧೦-೧೫ ನಿಮಿಷಗಳ ನಂತರ ತಿಳಿಯಾದ ಹಸಿರು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಇದನ್ನು ಸೋಸಿ, ಗಾಜಿನ ಬಾಟಲಿಗೆ ತುಂಬಿಟ್ಟುಕೊಳ್ಳಿ. ಈ ನೆಲ್ಲಿಕಾಯಿ ಎಣ್ಣೆಯನ್ನು ನಿಯಮಿತವಾಗಿ ತಲೆಕೂದಲಿಗೆ ಉಪಯೋಗಿಸುವುದರಿಂದ ಆರೋಗ್ಯಕರ ಕೇಶರಾಶಿಯನ್ನು ಹೊಂದಲು ಸಾಧ್ಯ.

ಇದನ್ನೂ ಓದಿ: Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೇರ್‌ ಮಾಸ್ಕ್‌

ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಅಷ್ಟೇ ಪ್ರಮಾಣದ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ತಲೆಗೂದಲು ಬುಡದಿಂದ ತುದಿಯವರೆಗೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿ. ಹಾಗೆಯೇ, ಸಮ ಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ, ಮದರಂಗಿ ಪುಡಿ ಮತ್ತು ಮೊಸರನ್ನು ಮಿಶ್ರ ಮಾಡಿ ಪೇಸ್ಟ್‌ ಮಾಡಿ. ಇದನ್ನು ತಲೆಯ ರೋಮರೋಮಗಳಿಗೆ ಹಚ್ಚಿ, ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಿಂದ ತಲೆಸ್ನಾನ ಮಾಡಿ. ಇನ್ನೊಂದು ಉತ್ತಮ ಹೇರ್‌ ಮಾಸ್ಕ್‌ ಎಂದರೆ- ೪ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಕಪ್‌ ತೆಂಗಿನಕಾಯಿ ಹಾಲು ಸೇರಿಸಿ, ಹದವಾಗಿ ಪೇಸ್ಟ್‌ ತಯಾರಿಸಿ. ಇದನ್ನು ತಲೆಗೆಲ್ಲ ಆಮೂಲಾಗ್ರವಾಗಿ ಲೇಪಿಸಿ ಒಂದು ತಾಸು ಹಾಗೆಯೇ ಬಿಡಿ. ನಂತರ ಹದ ಉಷ್ಣತೆಯ ನೀರಿನಿಂದ ತೊಳೆಯಿರಿ.

Continue Reading

ಆರೋಗ್ಯ

Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

Home Remedies for Skin: ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Monsoon Skincare
Koo

ಪ್ರಾಯವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಎಂಬ ಬಗ್ಗೆ ಮಾನವನ ಶೋಧ ಕೊನೆಯರಿಯದ್ದು. ನಮ್ಮ ಆಹಾರ, ಜೀವನಶೈಲಿ, ವಂಶವಾಹಿಗಳೆಲ್ಲ ಸೇರಿ ನಮ್ಮ ಚರ್ಮದ ನಯ, ಹೊಳಪು, ಸುಕ್ಕು ಮುಂತಾದ ಬಹಳಷ್ಟನ್ನು ನಿರ್ಧರಿಸುತ್ತವೆ, ಎಂಬಲ್ಲಿಗೆ ನಮಗೆ ವಯಸ್ಸಾದಂತೆ ಕಾಣುವುದು ಅಥವಾ ಕಾಣದಿರುವುದನ್ನೂ ನಿರ್ಧರಿಸುತ್ತವೆ ಎಂದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು (Home Remedies for Skin) ಇಲ್ಲಿ ವಿವರಿಸಲಾಗಿದೆ.

beautiful asian young woman eating healthy food Sleep Tips

ಆಹಾರ

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಆಹಾರಗಳ ಸೇವನೆ ಅತಿಮುಖ್ಯ. ಇವುಗಳು ದೇಹದಲ್ಲಿ ಕೊಲಾಜಿನ್‌ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಮಾತ್ರವಲ್ಲ, ಕೀಲುಗಳು ಸವೆಯದಂತೆಯೂ ಕಾಪಾಡಿಕೊಳ್ಳಬಹುದು. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳು, ವಿಟಮಿನ್‌ ಸಿ ಅಧಿಕವಿರುವ ಹಣ್ಣು ತರಕಾರಿಗಳು, ವಿಟಮಿನ್‌ ಇ ಹೇರಳವಾಗಿರುವ ಕಾಯಿ-ಬೀಜಗಳು- ಇವೆಲ್ಲವೂ ದಿನವೂ ನಮ್ಮ ಆಹಾರದ ಭಾಗವಾಗಿರಬೇಕು.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಲೋಳೆಸರ

ಅಲೋವೇರಾ ಎಂದೇ ಕರೆಸಿಕೊಳ್ಳುವ ಇದನ್ನು ಯಾವುದೇ ಫೇಸ್‌ ಮಾಸ್ಕ್‌ಗೆ ಬಳಸುವ ಬದಲು, ಇದನ್ನೇ ಪ್ರತ್ಯೇಕವಾಗಿ ಮುಖಕ್ಕೆ ಲೇಪಿಸಬಹುದು. ಇದರಲ್ಲಿರುವ ಮ್ಯಾಲಿಕ್‌ ಆಮ್ಲವು ಚರ್ಮದ ಮೇಲೆ ಅತ್ಯಂತ ಪೂರಕ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಇದನ್ನು ಲೇಪಿಸಿ ಸುಮಾರು ೨೦ ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಟ್ಟೆ, ಜೇನುತುಪ್ಪದ ಮಾಸ್ಕ್‌

ಮೊಟ್ಟೆಯ ಬಿಳಿಯ ಭಾಗ ಇದಕ್ಕೆ ಸೂಕ್ತವಾದದ್ದು. ಇದರಲ್ಲಿರುವ ಅಲ್ಬುಮಿನ್‌ ಅಂಶವು ಚರ್ಮದಲ್ಲಿ ಕೊಲಾಜಿನ್‌ ಹೆಚ್ಚಳಕ್ಕೆ ನೆರವಾಗುತ್ತದೆ. ಜೊತೆಗೆ ಜೇನುತುಪ್ಪವು ಚರ್ಮದ ನೈಸರ್ಗಿಕ ತೇವಾಂಶ ನಾಶವಾಗದಂತೆ ನೋಡಿಕೊಳ್ಳುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆಲ್ಲ ಲೇಪಿಸಿ ಕನಿಷ್ಟ ೨೦ ನಿಮಿಷಗಳಾದರೂ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆದರಾಯ್ತು.

Extra virgin olive oil Foods For Healthy Joints And Muscles

ಆಲಿವ್‌ ಎಣ್ಣೆ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಎ ಮತ್ತು ಇ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾತ್ರಿ ಮಲಗುವ ಮುನ್ನ, ಆಲಿವ್‌ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ಹಾಕಿಕೊಂಡು ಅದನ್ನು ಮುಖಕ್ಕೆಲ್ಲ ಲೇಪಿಸಿ. ಲಘುವಾಗಿ ವೃತ್ತಾಕಾರವಾಗಿ ಮುಖವನ್ನೆಲ್ಲ ಮಸಾಜ್‌ ಮಾಡುತ್ತಾ ಬನ್ನಿ. ಇದನ್ನು ರಾತ್ರಿಡೀ ಹಾಗೆಯೇ ಇರಿಸಿಕೊಂಡು ಮಲಗುವುದು ಸೂಕ್ತ. ಇದರಿಂದ ಚರ್ಮದ ಆರೈಕೆಗೆ ಅನುಕೂಲವಾಗುತ್ತದೆ.

Image Of Cucumber Benefits

ಸೌತೇಕಾಯಿ

ಈ ತರಕಾರಿಯಲ್ಲಿರುವ ನೀರಿನಂಶ ಮತ್ತು ಸಿಲಿಕಾಗಳು ಚರ್ಮದ ಬಿಗಿಯನ್ನು ಹೆಚ್ಚಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತವೆ. ತಾಜಾ ಸೌತೇಕಾಯಿ ತುರಿಯನ್ನು ಮುಖದ ಮೇಲೆಲ್ಲ ಲೇಪಿಸಿ, ಅರ್ಧ ತಾಸು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯುವುದರಿಂದ, ಇಡೀ ಮುಖದ ಚರ್ಮವೆಲ್ಲ ತಾಜಾ ಆಗುತ್ತದೆ.

ಇದನ್ನೂ ಓದಿ: Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?

ಅವಕಾಡೊ

ಬೆಣ್ಣೆ ಹಣ್ಣು ಚರ್ಮದ ಆರೈಕೆಯಲ್ಲಿ ಮಾತ್ರವೇ ಅಲ್ಲ, ಇಡೀ ಶರೀರಕ್ಕೆ ಬೇಕಾದ ಆರೈಕೆಯನ್ನೂ ಒದಗಿಸುವಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚರ್ಮಕ್ಕೆ ಬೇಕಾದ ಕೊಲಾಜಿನ್‌ ಉತ್ಪಾದನೆಗೆ ಅಗತ್ಯವಾದ ಸತ್ವಗಳನ್ನು ಇದು ನೀಡುತ್ತದೆ. ಆರೋಗ್ಯಕರವಾದ ಕೊಬ್ಬಿನಂಶ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಚರ್ಮಕ್ಕೆ ಒದಗಿಸುತ್ತದೆ. ಚೆನ್ನಾಗಿ ಹಣ್ಣಾದ ಅವಕಾಡೊವನ್ನು ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ. ಅರ್ಧ ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Continue Reading
Advertisement
Prosecution against Siddaramaiah Hc reserves verdict after hearing arguments
ಕೋರ್ಟ್1 hour ago

CM Siddaramaiah : ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿಸಿರಿದ ಹೈಕೋರ್ಟ್, ಮಧ್ಯಂತರ ತಡೆ ಮುಂದುವರಿಕೆ

Colon cancer is on the rise‌ Those above 50 years of age are targeted
ಆರೋಗ್ಯ2 hours ago

Colon cancer : ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ! ಈ ಆಹಾರಗಳನ್ನು ತಿನ್ನಲೇಬೇಡಿ

Suvarna Celebrity League a reality show launched on Star Suvarna
ಸಿನಿಮಾ3 hours ago

Suvarna Celebrity League : ವಾರಾಂತ್ಯದಲ್ಲಿ ಸೆಲೆಬ್ರಿಟಿಗಳ ಸಮರ; ಕಿರುತೆರೆಯಲ್ಲಿ ಶುರುವಾಗಲಿದೆ ಸುವರ್ಣ ಸೆಲೆಬ್ರಿಟಿ ಲೀಗ್

Self harming
ಬೆಂಗಳೂರು5 hours ago

Self Harming : ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

Actor darshan
ಸಿನಿಮಾ6 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್‌ಗೆ ಮತ್ತೊಂದು ದಿನ ಸೆರೆವಾಸ; ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್‌

CM Siddaramaiah
ರಾಜಕೀಯ6 hours ago

CM Siddaramaiah : ಸಿದ್ದರಾಮಯ್ಯ ವಿಷ್ಯದಲ್ಲಿ ಆತುರದ ನಿರ್ಣಯ; ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ- ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ

Road Accident
ಪ್ರಮುಖ ಸುದ್ದಿ8 hours ago

Road Accident : ಏರ್‌ಪೋರ್ಟ್‌ ರೋಡ್‌ನಲ್ಲಿ ಡೆಡ್ಲಿ ಹಿಟ್‌ ಆ್ಯಂಡ್‌ ರನ್‌; ಲಾಂಗ್‌ ಡ್ರೈವ್‌‌ ಬಂದಿದ್ದ ಮೂವರು ವಿದ್ಯಾರ್ಥಿಗಳು ಬಲಿ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರ ಅನುಮಾನವೇ ಸಂಬಂಧಗಳನ್ನು ಹಾಳು ಮಾಡುತ್ತೆ

Installation of Ganesha idol at home Muslim man preaches message of unity
ಗದಗ1 day ago

Ganesh Chaturthi: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ

karnataka weather Forecast
ಮಳೆ2 days ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್2 weeks ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌