Paris Olympics 2024: 6 ಪದಕಗಳನ್ನು ಹೊರತುಪಡಿಸಿ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತದ ಸಾಧನೆಗಳು ಹಲವು... - Vistara News

ಪ್ರಮುಖ ಸುದ್ದಿ

Paris Olympics 2024: 6 ಪದಕಗಳನ್ನು ಹೊರತುಪಡಿಸಿ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತದ ಸಾಧನೆಗಳು ಹಲವು…

Paris Olympics 2024 : ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಅಶ್ವಾರೋಹಿ, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ನೌಕಾಯಾನ, ಶೂಟಿಂಗ್, ಈಜು, ಕುಸ್ತಿ, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್ 29 ಸದಸ್ಯರ ತಂಡದೊಂದಿಗೆ ಅತಿದೊಡ್ಡ ಭಾರತೀಯ ಪ್ರಾತಿನಿಧ್ಯವನ್ನು ಹೊಂದಿತ್ತು. ಶೂಟಿಂಗ್​​​ನಲ್ಲಿ ಭಾರತವು 21 ಶೂಟರ್​ಗಳ ಅತಿದೊಡ್ಡ ತಂಡವು ಸ್ಪರ್ಧಿಸಿತ್ತು.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಭಾರತ ಆರು ಪದಕ ಗೆದ್ದಿದೆ. ಇದು ಟೋಕಿಯೊ 2020 ರ ದಾಖಲೆಯ 7 ಪದಕಗಳಿಗಿಂತ ಒಂದು ಕಡಿಮೆ. ಅಲ್ಲೊಂದು ಚಿನ್ನವೂ ಇತ್ತು. ಆದಾಗ್ಯೂ, ಟೋಕಿಯೊ 2020 ಮತ್ತು ಲಂಡನ್ 2012 ಒಲಿಂಪಿಕ್ಸ್ ಬಳಿಕ ಒಲಿಂಪಿಕ್ಸ್​​ನಲ್ಲಿ ಭಾರತದ ಮೂರನೇ ಅತ್ಯುತ್ತಮ ಪ್ರದರ್ಶನ ಇದು. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಅಶ್ವಾರೋಹಿ, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ನೌಕಾಯಾನ, ಶೂಟಿಂಗ್, ಈಜು, ಕುಸ್ತಿ, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್ 29 ಸದಸ್ಯರ ತಂಡದೊಂದಿಗೆ ಅತಿದೊಡ್ಡ ಭಾರತೀಯ ಪ್ರಾತಿನಿಧ್ಯವನ್ನು ಹೊಂದಿತ್ತು. ಶೂಟಿಂಗ್​​​ನಲ್ಲಿ ಭಾರತವು 21 ಶೂಟರ್​ಗಳ ಅತಿದೊಡ್ಡ ತಂಡವು ಸ್ಪರ್ಧಿಸಿತ್ತು. ಭಾರತ ಪದಕ ಗಳಿಸಿರುವುದು ಕಡಿಮೆಯಾದರೂ ಈ ಬಾರಿ ಭಾರತೀಯ ಅಥ್ಲೀಟ್​​ಗಳು ಕೆಲವೊಂದು ಕ್ರೀಡೆಯಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಅವುಗಳ ಬಗ್ಗೆ ಇಲ್ಲಿದೆ ವಿವರ.

ನೀರಜ್ ಚೋಪ್ರಾ ಬೆಳ್ಳಿ ಪದಕ

    ಪ್ಯಾರಿಸ್ 2024 ರಲ್ಲಿ ನೀರಜ್ ಚೋಪ್ರಾ 89.45 ಮೀಟರ್ ಜಾವೆಲಿನ್ ಎಸೆಯುವ ಮೂಲಕ ವೃತ್ತಿಜೀವನದ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತವನ್ನು ದಾಖಲಿಸಿದರು. ಆದರೆ ಅರ್ಷದ್ ನದೀಮ್ ಅವರು 92.97 ಮೀಟರ್ ಹೊಸ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದ ಕಾರಣ ನೀರಜ್​ಗೆ ಬೆಳ್ಳಿ ಲಭಿಸಿತು. ಒಲಿಂಪಿಕ್ ಬೆಳ್ಳಿ ಪದಕ ಗೆಲ್ಲುವುದು ಸಣ್ಣ ಸಾಧನೆಯಲ್ಲ. ಒಲಿಂಪಿಕ್ಸ್​ ಕ್ರೀಡಾಕೂಟದ ಅಥ್ಲೆಟಿಕ್ಸ್​​ನಲ್ಲಿ ಭಾರತದ ಎರಡನೇ ಪದಕ ಇದು. ಎರಡಕ್ಕೂ ನೀರಜ್ ವಾರಸ್ದಾರ.

    ಟೋಕಿಯೊ 2020 ಚಿನ್ನದ ಪದಕಕ್ಕೆ ಬೆಳ್ಳಿ ಸೇರಿಸಿದ ನಂತರ ಚೋಪ್ರಾ ಭಾರತದಿಂದ ಎರಡು ಬಾರಿ ಒಲಿಂಪಿಕ್ ಪದಕ ಗೆದ್ದ ಐದನೇ ವ್ಯಕ್ತಿ. ನಾರ್ಮನ್ ಪ್ರಿಚರ್ಡ್, ಸುಶೀಲ್ ಕುಮಾರ್, ಪಿ.ವಿ. ಸಿಂಧು ಮತ್ತು ಮನು ಭಾಕರ್ ಭಾರತದಿಂದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತರು.

    ಮನು ಭಾಕರ್ ಸಾಧನೆ

    ಜುಲೈ 28 ರಂದು ಪ್ಯಾರಿಸ್​​ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು. ಈ ಮೂಲಕ ಒಲಿಂಪಿಕ್ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್​​ನ ಫೈನಲ್​ಗೆ ಪ್ರವೇಶಿಸಿದ್ದರು. ಹೀಗಾಗಿ 2004 ರ ಅಥೆನ್ಸ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಫೈನಲ್ಸ್​​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ಮನು- ಸರಬ್ಜೋತ್ ಸಾಧನೆ

    ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 2024 ರಲ್ಲಿ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಶೂಟಿಂಗ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಇದು ಶೂಟಿಂಗ್​​ನಲ್ಲಿ ಭಾರತದ ಆರನೇ ಒಲಿಂಪಿಕ್ ಪದಕ..

    ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಶೂಟಿಂಗ್ ಜೋಡಿ ಕೊರಿಯಾದ ಓಹ್ ಯೆ ಜಿನ್ ಮತ್ತು ವೊನ್ಹೋ ಲೀ ಅವರನ್ನು 16-10 ಅಂತರದಿಂದ ಸೋಲಿಸಿತು. ಓಹ್ ಯೆ ಜಿನ್ ಕೆಲವಏ ದಿನಗಳ ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮನು ಭಾಕರ್ ಒಂದೇ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಮನು ಭಾಕರ್ ಒಲಿಂಪಿಕ್ಸ್​​ನ ಒಂದು ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    1900 ರಲ್ಲಿ ಪ್ಯಾರಿಸ್​​ನಲ್ಲಿ ಪುರುಷರ 200 ಮೀಟರ್ ಮತ್ತು ಪುರುಷರ 200 ಮೀಟರ್ ಹರ್ಡಲ್ಸ್​ನಲ್ಲಿ ಬೆಳ್ಳಿ ಗೆದ್ದ ನಾರ್ಮನ್ ಪ್ರಿಚರ್ಡ್ ಈ ಸಾಧನೆ ಮಾಡಿದ್ದರು.

    ಶೂಟಿಂಗ್​ಗೆ ಮೂರು ಪದಕ

      ಆಗಸ್ಟ್ 1ರಂದು ನಡೆದ ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳಲ್ಲಿ ಸ್ವಪ್ನಿಲ್ ಕುಸಾಳೆ ಕಂಚಿನ ಪದಕ ಗೆದ್ದರು. ಪ್ಯಾರಿಸ್ 2024 ರಲ್ಲಿ ಶೂಟಿಂಗ್​​ನಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಮೂರಕ್ಕೆ ಏರಿಸಿದರು. ಕ್ರೀಡಾಕೂಟದ ಯಾವುದೇ ಆವೃತ್ತಿಯಲ್ಲಿ ಭಾರತವು ಈ ಹಿಂದೆ ಒಂದೇ ಕ್ರೀಡೆಯಲ್ಲಿ ಮೂರು ಪದಕಗಳನ್ನು ಗೆದ್ದಿರಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಎರಡು ಪದಕ ಬಂದಿತ್ತು.

      ಮರ್ಯಾದೆ ಕಾಪಾಡಿದ ಅಮನ್​

      ಭಾರತ ಕುಸ್ತಿಯಲ್ಲಿ ಈ ಬಾರಿ ಹೆಚ್ಚಿನ ಲಾಭ ಪಡೆಯಲಿಲ್ಲ. ವಿನೇಶ್ ಫೋಗಟ್ ಅನರ್ಹಗೊಳ್ಳದೇ ಹೋಗಿದ್ದರೆ ಅವರಿಗೊಂದು ಪದಕ ಖಾತ್ರಿಯಿತ್ತು. ಆದರೆ, ಕೊನೆಯಲ್ಲಿ 21 ವರ್ಷದ ಅಮನ್​ ಕಂಚಿನ ಪದಕ ಗೆದ್ದರು. ಹೀಗಾಗಿ ಕುಸ್ತಿಯಲ್ಲಿ ಭಾರತದ ಮಾನ ಉಳಿಸಿದರು.

      ಹಾಕಿಯ ಸಾಧನೆಗಳು ಇವು

        ಪ್ಯಾರಿಸ್ 2024ರ ಒಲಿಂಪಿಕ್ಸ್​​ನಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಟೋಕಿಯೊದಲ್ಲಿ ಹಾಕಿಯಲ್ಲಿ ಕಂಚಿನ ಪದಕ ವಿಜೇತರಾದ ಮತ್ತೊಂದು ಸಾಧನೆ ಮಾಡಿತು. 1972 ರ ಮ್ಯೂನಿಚ್ ನಂತರ 52 ವರ್ಷಗಳಲ್ಲಿ ಮೊದಲ ಬಾರಿಗೆ ಹಾಕಿಯಲ್ಲಿ ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದು ಸಾಧನೆ ಮಾಡಿತು. ಇದು ಹಾಕಿಯಲ್ಲಿ ಭಾರತದ ದಾಖಲೆಯ 13 ನೇ ಪದಕವಾಗಿದೆ. ನಾಯಕ ಹರ್ಮನ್​ಪ್ರೀತ್ ಸಿಂಗ್ ಪ್ಯಾರಿಸ್ ನಲ್ಲಿ ಒಟ್ಟು 10 ಗೋಲು ಹೊಡೆದರೆ, ಗೋಲ್​ ಕೀಪರ್ ಶ್ರೀಜೇಶ್​ ಅವರ ಉಳಿಸಿದ ಗೋಲ್​ಗಳು ಅಷ್ಟೇ ಪ್ರಮುಖ.

        ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ

        ಪ್ಯಾರಿಸ್ 2024 ಒಲಿಂಪಿಕ್ಸ್​ನಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಅವರ ಗೋಲ್​ಗಳ ಬಲದಿಂದ ಟೋಕಿಯೊ 2020 ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು. 1972ರ ಬಳಿಕ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕೊನೇ ಬಾರಿ ಗೆದ್ದಿತ್ತು.

        ಪದಕ ಗೆಲ್ಲದಿದ್ದರೂ ಆರ್ಚರಿಯಲ್ಲಿ ವಿಶ್ವಾಸ

        ಮಿಶ್ರ ತಂಡ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ನಾಲ್ಕನೇ ಸ್ಥಾನ ಪಡೆದರು. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಆರ್ಚ ಪಟು ಭಾರತಕ್ಕೆ ಅತ್ಯುತ್ತಮ ಫಲಿತಾಂಶ ತಂದುಕೊಟ್ಟರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೆರಿಕದ ಬ್ರಾಡಿ ಎಲಿಸನ್ ಮತ್ತು ಕೇಸಿ ಕೌಫೊಲ್ಡ್ ವಿರುದ್ಧ ಬೊಮ್ಮದೇವರ ಮತ್ತು ಭಕತ್ 6-2 ಅಂತರದಲ್ಲಿ ಸೋತರು. ಇದೇ ಮೊದಲ ಬಾರಿಗೆ ಭಾರತೀಯ ಆರ್ಚರಿ ತಂಡ ಒಲಿಂಪಿಕ್ಸ್​ನ ಸೆಮಿಫೈನಲ್​ಗೆ ಏರಿದ್ದರು.

        ಪದಕ ಗೆಲ್ಲದಿದ್ದರೂ ಉತ್ತಮ ಸಾಧನೆ ಮಾಡಿದ ಲಕ್ಷ್ಯ

        ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾಗಿದ್ದಾರೆ. ಪುರುಷರ ಸಿಂಗಲ್ಸ್​​ನಲ್ಲಿ ಸ್ಪರ್ಧಿಸಿದ ಅವರು ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸುವ ಮೂಲಕ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 16ರ ಸುತ್ತಿನಲ್ಲಿ ಸಹ ಆಟಗಾರ ಎಚ್.ಎಸ್.ಪ್ರಣಯ್ ಅವರನ್ನು ಸೋಲಿಸಿದರು ಮತ್ತು ನಂತರ ಕ್ವಾರ್ಟರ್ ಫೈನಲ್​​ನಲ್ಲಿ ಚೌ ಟಿಯೆನ್-ಚೆನ್ ಅವರನ್ನೂ ಮಣಿಸಿದ್ದರು. ಸೆಮಿಫೈನಲ್​​ನಲ್ಲಿ ಚಾಂಪಿಯನ್ ಡೆನ್ಮಾರ್ಕ್​​ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೋತ ಅವರು ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಸೋಲು ಕಂಡರು.

        ಮಣಿಕಾ ಭಾತ್ರಾಗೆ ಜಸ್ಟ್​ ಮಿಸ್​

        ಮಣಿಕಾ ಬಾತ್ರಾ ಟೇಬಲ್​ ಟೆನಿಸ್​ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 18 ನೇ ಶ್ರೇಯಾಂಕದ ಮಣಿಕಾ 64ನೇ ಸುತ್ತಿನಲ್ಲಿ ವಿಶ್ವದ 103ನೇ ಶ್ರೇಯಾಂಕಿತ ಆಟಗಾರ್ತಿ ಗ್ರೇಟ್ ಬ್ರಿಟನ್ನ ಅನ್ನಾ ಹರ್ಸಿ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವ ಮೂಲಕ ಅವರು ತಮ್ಮ ಅಭಿಯಾನ ಆರಂಭಿಸಿದ್ದರು. ಅವರು 32 ನೇ ಸುತ್ತಿನಲ್ಲಿ ಫ್ರಾನ್ಸ್ ನ ಪೃಥ್ವಿಕಾ ಪವಾಡೆ ಅವರನ್ನು ಸೋಲಿಸಿದರು. ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ 8ನೇ ಶ್ರೇಯಾಂಕದ ಜಪಾನಿನ ಮಿಯು ಹಿರಾನೊ ವಿರುದ್ಧ 4-1 ಅಂತರದಿಂದ ಸೋತ ಮಣಿಕಾ ಅವರ ಅಭಿಯಾನ ಕೊನೆಗೊಂಡಿತು.

        ಇದನ್ನೂ ಓದಿ: Marnus Labuschagne : ವಿಶ್ವ ಕಪ್​ನಲ್ಲಿ ಭಾರತವನ್ನು ಸೋಲಿಸಲು ನೆರವಾದ ಬ್ಯಾಟ್​ಗೆ ವಿದಾಯ ಹೇಳಿದ ಮರ್ನಸ್​ ಲಾಬುಶೇನ್​​

        ಒಲಿಂಪಿಕ್ ಚೊಚ್ಚಲ ಆಟಗಾರ್ತಿ ಶ್ರೀಜಾ ಅಕುಲಾ ಜುಲೈ 30ರಂದು ನಡೆದ 16 ನೇ ಸುತ್ತಿನಲ್ಲಿ ಸ್ವೀಡನ್​​ ಕ್ರಿಸ್ಟಿನಾ ಕಾಲ್ಬರ್ಗ್ ವಿರುದ್ಧ 4-0 ಮತ್ತು 32 ನೇ ಸುತ್ತಿನಲ್ಲಿ ಸಿಂಗಾಪುರದ ಜೆಂಗ್ ಜಿಯಾನ್ ವಿರುದ್ಧ 4-2 ಅಂತರದಿಂದ ಗೆದ್ದರು. ಆದರೆ, ತಮ್ಮ 26 ನೇ ಹುಟ್ಟುಹಬ್ಬದಂದು ಟೋಕಿಯೊ 2020 ಬೆಳ್ಳಿ ಪದಕ ವಿಜೇತ ಚೀನಾದ ಸನ್ ಯಿಂಗ್ಶಾ ವಿರುದ್ಧ 16 ನೇ ಸುತ್ತಿನಲ್ಲಿ ಸೋತರು.

          ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
          ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
          Continue Reading
          Click to comment

          Leave a Reply

          Your email address will not be published. Required fields are marked *

          ಕ್ರೀಡೆ

           Emmanuel Macron : ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಭಾರತದ ಉತ್ಸಾಹಕ್ಕೆ ಬೆಂಬಲ ನೀಡಿದ ಫ್ರಾನ್ಸ್​ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರೋನ್

          Emmanuel Macron : ಭಾರತ ಮತ್ತು ಈಜಿಪ್ಟ್ ಎರಡೂ ಈ ಹಿಂದೆ ಒಲಿಂಪಿಕ್ಸ್ ಅನ್ನು ಆಯೋಜಿಸಿಲ್ಲ/ ಎರಡೂ ದೇಶಗಳು ತಮ್ಮ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಆದ್ಯತಾ ಕ್ರಮವೆಂದು ಲೆಕ್ಕಹಾಕಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸುವುದು ತೀವ್ರ ಸ್ಪರ್ಧೆಯಾಗಿದೆ ಎಂದು ಒಪ್ಪಿಕೊಂಡ ಅವರು, ಭಾರತವು ತನ್ನ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದರು. 2024ರ ಒಲಿಂಪಿಕ್ಸ್​ಗೆ ಬಿಡ್ ಮಾಡುವಾಗ ಅಮೆರಿಕದೊಂದಿಗಿನ ಸ್ಪರ್ಧೆಯನ್ನು ಅವರು ನೆನಪಿಸಿಕೊಂಡರು.

          VISTARANEWS.COM


          on

          Emmanuel Macron
          Koo

          ಬೆಂಗಳೂರು: ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಸಾಮರ್ಥ್ಯದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನಂಬಿಕೆ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಜಾಗತಿಕ ಕ್ರೀಡಾಕೂಟ ಆಯೋಜಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. 2036 ರಲ್ಲಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ವಹಿಸುವುದಕ್ಕಾಗಿ ಭಾರತ ಯತ್ನಿಸುತ್ತಿದೆ. ಈ ನಡುವೆ ಜಿಯೋ ಸಿನೆಮಾಗೆ ನೀಡಿದ ಸಂದರ್ಶನದಲ್ಲಿ, ಮ್ಯಾಕ್ರನ್ ಭಾರತದ ಸಾಮರ್ಥ್ಯದ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ 2026ರ ಒಲಿಂಪಿಕ್ಸ್​​ ಭಾರತ ಮತ್ತು ಈಜಿಪ್ಟ್ ಸೇರಿದಂತೆ ಹಲವಾರು ದೇಶಗಳು ಬಿಡ್ ಸಲ್ಲಿಸಿವೆ.

          ಭಾರತ ಮತ್ತು ಈಜಿಪ್ಟ್ ಎರಡೂ ಈ ಹಿಂದೆ ಒಲಿಂಪಿಕ್ಸ್ ಅನ್ನು ಆಯೋಜಿಸಿಲ್ಲ. ಎರಡೂ ದೇಶಗಳು ತಮ್ಮ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಆದ್ಯತಾ ಕ್ರಮವೆಂದು ಲೆಕ್ಕಹಾಕಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸುವುದು ತೀವ್ರ ಸ್ಪರ್ಧೆಯಾಗಿದೆ ಎಂದು ಒಪ್ಪಿಕೊಂಡ ಅವರು, ಭಾರತವು ತನ್ನ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದರು. 2024ರ ಒಲಿಂಪಿಕ್ಸ್​ಗೆ ಬಿಡ್ ಮಾಡುವಾಗ ಅಮೆರಿಕದೊಂದಿಗಿನ ಸ್ಪರ್ಧೆಯನ್ನು ಅವರು ನೆನಪಿಸಿಕೊಂಡರು.

          ನಾನು ನಿಮ್ಮ ದೇಶ ಮತ್ತು ನಿಮ್ಮ ದೇಶದ ಭವಿಷ್ಯದ ಬಗ್ಗೆ ಬಲವಾದ ನಂಬಿಕೆ ಹೊಂದಿದ್ದೇನೆ. ನಿಮಗೆ ಒಲಿಂಪಿಕ್​ನಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವಿದೆ. ಇದು ತೀವ್ರ ಸ್ಪರ್ಧೆ ವಿಚಾರ ಎಂದು ನಾನು ಭಾವಿಸುತ್ತೇನೆ. ಆ ಸಂಗತಿಯನ್ನು ಕಡಿಮೆ ಅಂದಾಜು ಮಾಡಬಾರದು. ಏಳು ವರ್ಷಗಳ ಹಿಂದೆ ನಾವು ಲೌಸಾನ್ ಗೆ ಹೋದಾಗ, ನಾವು ಆ ಸಮಯದಲ್ಲಿ ಯುಎಸ್ ನೊಂದಿಗೆ ಸ್ಪರ್ಧಿಸಿದ್ದೆವು. ಬಿಡ್​ಗಾಗಿ ಸ್ಪರ್ಧಿಸುವುದು ಉತ್ತಮ ಸಿದ್ಧತೆ” ಎಂದು ಮಾರ್ಕಾನ್ ಜಿಯೋ ಸಿನೆಮಾಗೆ ತಿಳಿಸಿದರು.

          ಒಲಿಂಪಿಕ್ಸ್​​ ತಯಾರಿ ನಡೆಸುವಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವಿನ ಸಹಯೋಗದ ಪ್ರಯತ್ನಗಳನ್ನು ಮ್ಯಾಕ್ರನ್ ಎತ್ತಿ ತೋರಿಸಿದರು. ಸಿದ್ಧತೆಗಳಲ್ಲಿ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್​​ ತಾಂತ್ರಿಕ ತಂಡವನ್ನು ವಿನಂತಿಸಿದ್ದಾರೆ. ಭಾರತೀಯ ಅಧಿಕಾರಿಗಳು ತಮ್ಮ ಅನುಭವದಿಂದ ಕಲಿಯಲು ಫ್ರೆಂಚ್ ತಂಡಗಳನ್ನು ಭೇಟಿ ಮಾಡಿದ್ದಾರೆ. ಒಲಿಂಪಿಕ್ಸ್​ಗೆ ಭಾರತದ ಸಂಭಾವ್ಯ ಬಿಡ್ ಅನ್ನು ಬೆಂಬಲಿಸಲು ತಂತ್ರಜ್ಞಾನವನ್ನು ನೀಡುವುದಾಗಿ ಹೇಳಿದರು.

          ಇದಲ್ಲದೆ, ಒಲಿಂಪಿಕ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಕ್ರೀಡಾ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ರಾಜ್ಯ ಸೇರಿದಂತೆ ವಿವಿಧ ಮಧ್ಯಸ್ಥಗಾರರ ನಡುವೆ ಏಕತೆಯ ಮಹತ್ವವನ್ನು ಮ್ಯಾಕ್ರನ್ ಒತ್ತಿ ಹೇಳಿದರು. ಕಳೆದ ಏಳು ವರ್ಷಗಳಲ್ಲಿ ಈ ಕಾರ್ಯಕ್ರಮದಲ್ಲಿ ಫ್ರಾನ್ಸ್ ನ ಗಮನಾರ್ಹ ಹೂಡಿಕೆ ಮಾಡಿತ್ತು. ಸಿದ್ಧತೆ ಪ್ರಕ್ರಿಯೆಯಲ್ಲಿ ಉದ್ಭವಿಸುವ ಸವಾಲುಗಳನ್ನು ನಿವಾರಿಸುವಲ್ಲಿ ಸ್ಥಿರತೆ ಮತ್ತು ಬದ್ಧತೆ ನಿರ್ಣಾಯ ಎಂದು ನುಡಿದರು.

          ಇದನ್ನೂ ಓದಿ: Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

          ನನ್ನ ಪ್ರಕಾರ, ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಪ್ರಮುಖವಾದುದು ಸಮಗ್ರತೆ. ಸ್ಥಳೀಯ ಸಮುದಾಯಗಳು, ಸ್ಥಳೀಯ ಕ್ಷೇತ್ರಗಳು ಮತ್ತು ನಿಸ್ಸಂಶಯವಾಗಿ ರಾಜ್ಯಗಳ ನೆರವು ಬೇಕು. ಭದ್ರತೆಯಿಂದ ಸಂಘಟನೆಯವರೆಗೆ ಎಲ್ಲವೂ ವಿಶೇಷ.” ಎಂದು ಮ್ಯಾಕ್ರನ್ ಹೇಳಿದ್ದಾರೆ.

          Continue Reading

          ಪ್ರಮುಖ ಸುದ್ದಿ

          Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

          Paris Olympics 2024 : ಪ್ಯಾರಿಸ್​ನಲ್ಲಿ ಭಾರತದ ಪದಕ ವಿಜೇತರ ಜತೆ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದರು. ವೇದಿಕೆ ಏರಿದ್ದ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ವ್ಯಕ್ತಡಪಡಿಸಿದ್ದರು. ಕುಸ್ತಿ ಫೈನಲ್​ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮೋದಿ ಟ್ವೀಟ್ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್ಗಳು 6 ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನ ಸಮೇತ 7 ಪದಕ ಗೆದ್ದಿದ್ದರೆ, ಈ ಬಾರಿ ಭಾರತೀಯ ತಂಡವು 5 ಕಂಚಿನ ಪದಕಗಳು ಮತ್ತು ಒಂದು ಬೆಳ್ಳಿಯೊಂದಿಗೆ ಮರಳಿದೆ.

          VISTARANEWS.COM


          on

          Paris Olympics 2024
          Koo

          ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಸ್ಪರ್ಧಿಸಿದ್ದ ಭಾರತದ ಅಥ್ಲೀಟ್​ಗಳ ನಿಯೋಗವನ್ನು ಭೇಟಿಯಾಗಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಿಎಂ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಆಗಸ್ಟ್ 15 ರಂದು ನಡೆಯಲಿರುವ ಸಮಾರಂಭದಲ್ಲಿ 117 ಕ್ರೀಡಾಪಟುಗಳ ಸಂಪೂರ್ಣ ಭಾರತೀಯ ತಂಡ ಭಾಗವಹಿಸುವ ನಿರೀಕ್ಷೆಯಿದೆ. ಬೆಳಗ್ಗಿನ ಕಾರ್ಯಕ್ರಮದ ನಂತರ ಪ್ರಧಾನಿ ಒಲಿಂಪಿಕ್ಸ್​​ನ ಭಾರತಕ್ಕೆ 6 ಪದಕಗಳನ್ನು ಮರಳಿ ತಂದ ಕ್ರೀಡಾಪಟುಗಳನ್ನು ಭೇಟಿ ಮಾಡಲಿದ್ದಾರೆ.

          ಪ್ಯಾರಿಸ್​ನಲ್ಲಿ ಭಾರತದ ಪದಕ ವಿಜೇತರ ಜತೆ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದರು. ವೇದಿಕೆ ಏರಿದ್ದ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ವ್ಯಕ್ತಡಪಡಿಸಿದ್ದರು. ಕುಸ್ತಿ ಫೈನಲ್​ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮೋದಿ ಟ್ವೀಟ್ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್ಗಳು 6 ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನ ಸಮೇತ 7 ಪದಕ ಗೆದ್ದಿದ್ದರೆ, ಈ ಬಾರಿ ಭಾರತೀಯ ತಂಡವು 5 ಕಂಚಿನ ಪದಕಗಳು ಮತ್ತು ಒಂದು ಬೆಳ್ಳಿಯೊಂದಿಗೆ ಮರಳಿದೆ.

          ಪ್ಯಾರಿಸ್ 2024 ಒಲಿಂಪಿಕ್ಸ್​ನಲ್ಲಿ ಭಾರತದ ಪ್ರದರ್ಶನವು ಸಾಧನೆಗಳು ಮತ್ತು ನಿರಾಶೆಗಳ ಮಿಶ್ರಣವಾಗಿದೆ. ಈ ಒಲಿಂಪಿಕ್ಸ್​ನಲ್ಲಿ ಭಾರತವು 10 ಪದಕಗಳ ಮೈಲುಗಲ್ಲು ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ಕ್ರೀಡಾಪಟುಗಳು ನಾಲ್ಕನೇ ಸ್ಥಾನ ಪಡೆದಿದ್ದರಿಂದ ಅದು ಸಾಧ್ಯವಾಗಲಿಲ್ಲ.

          ಟೋಕಿಯೊ 2020 ರಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ನೇತೃತ್ವದ ದೇಶದ ಅಥ್ಲೆಟಿಕ್ಸ್ ತಂಡವು ಗಮನಾರ್ಹ ಹೈಲೈಟ್ ಆಗಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿಯೊಂದಿಗೆ ಚೋಪ್ರಾ ಅಥ್ಲೆಟಿಕ್ಸ್​​ನಲ್ಲಿ ಭಾರತದ ಏಕೈಕ ಪದಕ ಗೆದ್ದರು, ಒಲಿಂಪಿಕ್ಸ್​​ನಲ್ಲಿ ಅಥ್ಲೆಟಿಕ್ಸ್​​ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು.

          ಶೂಟಿಂಗ್ ಸಾಧನೆ

          ಭಾರತದ ಶೂಟಿಂಗ್ ತಂಡವೂ ಗಮನಾರ್ಹ ಪ್ರಗತಿ ಸಾಧಿಸಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು, ಒಲಿಂಪಿಕ್ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಪದಕವನ್ನು ಗೆದ್ದಿದ್ದರೆ. ಒಲಿಂಪಿಕ್ಸ್​​ನ ಒಂದು ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

          ಇದನ್ನೂ ಓದಿ: Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

          ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿದ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಸತತವಾಗಿ ಪದಕಗಳನ್ನು ಗೆದ್ದಿದೆ. ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಭಾರತ ಒಲಿಂಪಿಕ್ಸ್ ನಲ್ಲಿ ದಾಖಲೆಯ 13ನೇ ಹಾಕಿ ಪದಕ ಜಯಿಸಿದೆ.

          ಟೇಬಲ್ ಟೆನಿಸ್ನಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಬಾತ್ರಾ ಒಲಿಂಪಿಕ್ ಕ್ರೀಡಾಕೂಟದ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಅಕುಲಾ 16 ನೇ ಸುತ್ತು ಪ್ರವೇಶಿಸಿದ್ದರು.

          Continue Reading

          ಪ್ರಮುಖ ಸುದ್ದಿ

          Broadcasting Services Bill : ಸಾರ್ವಜನಿಕರ ಆಕ್ಷೇಪ; ಪ್ರಸಾರ ಸೇವೆಗಳ ಕರಡು ಬಿಲ್​ ವಾಪಸ್​ ಪಡೆದ ಕೇಂದ್ರ ಸರ್ಕಾರ

          Broadcasting Services Bill : ಕರಡು ಮಸೂದೆಯನ್ನು ಸಮಾಲೋಚನೆಗಾಗಿ ನವೆಂಬರ್ 11, 2023 ರಂದು ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ, ಕರಡಿನ ಪರಿಷ್ಕೃತ ಆವೃತ್ತಿಯನ್ನು ಕೆಲವು ಆಯ್ದ ಪಾಲುದಾರಿಗೆ “ರಹಸ್ಯವಾಗಿ” ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸರ್ಕಾರ್ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಎತ್ತಿದ್ದಾರೆ.

          VISTARANEWS.COM


          on

          Broadcasting Services Bill
          Koo

          ಬೆಂಗಳೂರು: ಈಗಾಗಲೇ ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿರುವ ಉದ್ದೇಶಿತ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಹೊಸ ಕರಡನ್ನು (Broadcasting Services Bill) ವಾಪಸ್ ಪಡೆದು ಹೊಸದನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಮಸೂದೆಯ ಕೆಲವು ನಿಬಂಧನೆಗಳು ಆನ್​​ಲೈನ್​ ಕಂಟೆಂಟ್​ ಕ್ರಿಯೇಟರ್​ಗಳಲ್ಲಿ ಕಳವಳ ಹುಟ್ಟುಹಾಕಿದ ನಂತರ ಸರ್ಕಾರ ಕ್ರಮ ಕೈಗೊಂಡಿದೆ. ತಮ್ಮನ್ನು ಒಟಿಟಿ ಅಥವಾ ಡಿಜಿಟಲ್ ಸುದ್ದಿ ಪ್ರಸಾರಕರೊಂದಿಗೆ ಸೇರಿಸಲು ಪ್ರಯತ್ನಿಸಿದ್ದಾರೆ ಎಂದು ಕಂಟೆಂಟ್ ಕ್ರಿಯೇಟರ್​ಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

          ಪ್ರತಿಕ್ರಿಯೆಯಾಗಿ, ವಿವಿಧ ಸಂಘಗಳಿಂದ ಸೇರಿದಂತೆ ಅನೇಕ ಶಿಫಾರಸುಗಳು, ಕಾಮೆಂಟ್​ಗಳು, ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕರಡು ಮಸೂದೆಯ ಬಗ್ಗೆ ಸಚಿವಾಲಯವು ಪಾಲುದಾರರ ಜತೆ ಸರಣಿ ಸಮಾಲೋಚನೆಗಳನ್ನು ನಡೆಸುತ್ತಿದೆ. ಅಕ್ಟೋಬರ್ 15 ರವರೆಗೆ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೋರಲು ಹೆಚ್ಚುವರಿ ಸಮಯ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ವಿವರವಾದ ಸಮಾಲೋಚನೆಗಳ ನಂತರ ಹೊಸ ಕರಡು ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.

          ಕರಡು ಮಸೂದೆಯನ್ನು ಸಮಾಲೋಚನೆಗಾಗಿ ನವೆಂಬರ್ 11, 2023 ರಂದು ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ, ಕರಡಿನ ಪರಿಷ್ಕೃತ ಆವೃತ್ತಿಯನ್ನು ಕೆಲವು ಆಯ್ದ ಪಾಲುದಾರಿಗೆ “ರಹಸ್ಯವಾಗಿ” ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸರ್ಕಾರ್ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಎತ್ತಿದ್ದಾರೆ.

          ಮಸೂದೆಯ ವಿಷಯಗಳು ಚಲಾವಣೆಯಲ್ಲಿವೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್​ಗಳು ಪ್ರಕಟಗೊಂಡಿವೆ.

          ಹೊಸ ವರ್ಗೀಕರಣ

          ವರದಿಗಳ ಪ್ರಕಾರ, ಪರಿಷ್ಕೃತ ಕರಡು ಮಸೂದೆಯು ಇನ್ಸ್ಟಾಗ್ರಾಮ್ ಇನ್​ಫ್ಲ್ಯುಯೆನ್ಸರ್​ಗಳು ಮತ್ತು ಯೂಟ್ಯೂಬರ್​ಗಳನ್ನು ಅವರ ಬಳಕೆದಾರರ ನೆಲೆಯನ್ನು ವ್ಯಾಖ್ಯಾನಿಸಲು “ಡಿಜಿಟಲ್ ಸುದ್ದಿ ಪ್ರಸಾರಕರು” ಎಂದು ವರ್ಗೀಕರಿಸಲು ಪ್ರಯತ್ನಿಸುತ್ತದೆ. ಕಂಟೆಂಟ್​ ಪರಿಶೀಲನೆಗಾಗಿ ಅವರು ಸರ್ಕಾರದೊಂದಿಗೆ ಪೂರ್ವ ನೋಂದಣಿ ಪಡೆಯಬೇಕಾಗುತ್ತದೆ ಎಂದಿತ್ತು. ಇದು ವಾಕ್ ಸ್ವಾತಂತ್ರ್ಯದ ಬಗ್ಗೆ ಕಳವಳ ಹುಟ್ಟುಹಾಕಿತು.

          ಇದನ್ನೂ ಓದಿ: Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

          ಈ ಡಿಜಿಟಲ್ ಸುದ್ದಿ ಪ್ರಸಾರಕರು ಒಟಿಟಿ ಪ್ರಸಾರ ಸೇವೆಗಳು ಮತ್ತು ನೋಂದಾಯಿತ ಡಿಜಿಟಲ್ ಮಾಧ್ಯಮದಿಂದ ಪ್ರತ್ಯೇಕವಾಗಿರುತ್ತಾರೆ ಎಂದು ವರದಿಯಾಗಿದೆ. ಯಾವುದೇ ರೀತಿಯ ವಿಷಯವನ್ನು ರಚಿಸುವ ಸ್ವಾತಂತ್ರ್ಯವನ್ನು ಹೊಂದಿರುವ ಒಟಿಟಿ ಪ್ಲಾಟ್​ಫಾರ್ಮ್​ಗಳು ಪ್ರೋಗ್ರಾಂ ಕೋಡ್​ಗೆ ಬದ್ಧವಾಗಿರುತ್ತವೆ ಎಂದು ಮಸೂದೆಯ ಮೊದಲ ಕರಡು ಈಗಾಗಲೇ ಪ್ರಸ್ತಾಪಿಸಿತ್ತು.

          ಕಳೆದ ವಾರ, 90 ಕ್ಕೂ ಹೆಚ್ಚು ಡಿಜಿಟಲ್ ಸುದ್ದಿ ಪ್ರಕಾಶಕರನ್ನು ಪ್ರತಿನಿಧಿಸುವ ಸಂಸ್ಥೆಯಾದ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರತಿನಿಧಿಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಯ್ದ ಪಾಲುದಾರರೊಂದಿಗೆ ಸಮಾಲೋಚನೆಗಳನ್ನು ನಡೆಸಿದೆ. ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಸಂಘಗಳೊಂದಿಗೆ ದೊಡ್ಡ ಚರ್ಚೆಗಳು ಇಲ್ಲಿಯವರೆಗೆ ನಡೆದಿಲ್ಲ ಎಂದು ಹೇಳಿದರು. ಕರಡು ಮಸೂದೆಯ ಪ್ರತಿಗಳನ್ನು ಕೋರಿ ಅವರು ಸಚಿವಾಲಯಕ್ಕೆ ಪತ್ರ ಬರೆದಿದ್ದರು.

          Continue Reading

          ಪ್ರಮುಖ ಸುದ್ದಿ

          Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

          Train Accident : ಭಾನುವಾರ, ಉತ್ತರ ಪ್ರದೇಶದ ಸೋನ್ಭದ್ರದ ಶಕ್ತಿನಗರ ಪ್ರದೇಶದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್​ಗಳು ಮತ್ತು ಅದರ ಎಂಜಿನ್ ಹಳಿ ತಪ್ಪಿತ್ತು . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ರೈಲು ಖಾಡಿಯಾದಲ್ಲಿನ ನಾರ್ದರ್ನ್ ಕೋಲ್​ಫೀಲ್ಡ್ ಲಿಮಿಟೆಡ್ (ಎನ್ಸಿಎಲ್) ನಿಂದ ಅನ್ಪಾರಾ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಸಾಗಿಸುತ್ತಿತ್ತು.

          VISTARANEWS.COM


          on

          Koo

          ಬೆಂಗಳೂರು: ಮತ್ತೊಂದು ರೈಲು ದುರ್ಘಟನೆಯಲ್ಲಿ ರಾಣಿ ಕಮಲಾಪತಿ-ಸಹರ್ಸಾ ವಿಶೇಷ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಮಧ್ಯಪ್ರದೇಶದಲ್ಲಿ ಸೋಮವಾರ ಸಂಜೆ ಹಳಿ ತಪ್ಪಿವೆ (Train Accident ). ಸಂಜೆ 6:10 ಕ್ಕೆ ರೈಲು ಇಟಾರ್ಸಿ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ/ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈಲು ಪ್ಲಾಟ್ ಫಾರ್ಮ್ ಸಂಖ್ಯೆ 2 ಅನ್ನು ಪ್ರವೇಶಿಸುತ್ತಿದ್ದಾಗ ಅದರ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿ ತಪ್ಪಿದಾಗ ರೈಲು 5 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಸಂಭವನೀಯ ದುರಂತ ತಪ್ಪಿದೆ. ಅಪಘಾತ ಸಂಭವಿಸಿದ ಎರಡೂವರೆ ಗಂಟೆಗಳ ನಂತರವೂ ರೈಲು ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಜಂಕ್ಷನ್ನಲ್ಲಿ ನಿಂತಿತ್ತು.

          ಭಾನುವಾರ, ಉತ್ತರ ಪ್ರದೇಶದ ಸೋನ್ಭದ್ರದ ಶಕ್ತಿನಗರ ಪ್ರದೇಶದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್​ಗಳು ಮತ್ತು ಅದರ ಎಂಜಿನ್ ಹಳಿ ತಪ್ಪಿತ್ತು . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ರೈಲು ಖಾಡಿಯಾದಲ್ಲಿನ ನಾರ್ದರ್ನ್ ಕೋಲ್​ಫೀಲ್ಡ್ ಲಿಮಿಟೆಡ್ (ಎನ್ಸಿಎಲ್) ನಿಂದ ಅನ್ಪಾರಾ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಸಾಗಿಸುತ್ತಿತ್ತು.

          ಆಗಸ್ಟ್ 9 ರಂದು ಉತ್ತರ ಪ್ರದೇಶದ ಅಲಿಗಢದ ಬಳಿ ಕಲ್ಲಿದ್ದಲು ಸೈಡಿಂಗ್​ನಲ್ಲಿ ಸರಕು ರೈಲಿನ ಎರಡು ಖಾಲಿ ವ್ಯಾಗನ್​ಗಳು ಹಳಿ ತಪ್ಪಿದ್ದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕುಮೇದ್ಪುರ ನಿಲ್ದಾಣದ ಬಳಿ ಸರಕು ರೈಲಿನ ಐದು ವ್ಯಾಗನ್ಗಳು ಹಳಿ ತಪ್ಪಿವೆ. ಬಿಹಾರದ ಕಟಿಹಾರ್ ಜಿಲ್ಲೆಯ ಕುಮೇದ್ಪುರ ಸೇತುವೆ ಬಳಿ ಸರಕು ರೈಲಿನ ಐದು ಟ್ಯಾಂಕ್ ವ್ಯಾಗನ್ಗಳು ಹಳಿ ತಪ್ಪಿವೆ. ಹಳಿ ತಪ್ಪಿದ ಕಾರಣ ಹಳಿಗೆ ಅಡ್ಡಿಯುಂಟಾಗಿದ್ದು, ಸುಗಮ ರೈಲು ಕಾರ್ಯಾಚರಣೆಗಾಗಿ ಮಾರ್ಗಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

          ಇದನ್ನೂ ಓದಿ: S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

          ಆಗಸ್ಟ್ 4 ರಂದು ಸಹರಾನ್ಪುರ ರೈಲ್ವೆ ನಿಲ್ದಾಣದಿಂದ ವಾಷಿಂಗ್ ಶೆಡ್​ಗೆ ಕರೆದೊಯ್ಯುವಾಗ ಖಾಲಿ ಸ್ಥಳೀಯ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ್ದವು. ಜುಲೈ 30 ರಂದು ಜಾರ್ಖಂಡ್​​ನ ಚಕ್ರಧರ್ಪುರ ಬಳಿ ಹೌರಾ-ಸಿಎಸ್ಎಂಟಿ ಎಕ್ಸ್​ಪ್ರೆಸ್​​ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಆರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಐವರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ದಿನ ಒಡಿಶಾದ ಸಂಬಲ್ಪುರ ವಿಭಾಗದ ಯಾರ್ಡ್ನಲ್ಲಿ ಖಾಲಿ ಗೂಡ್ಸ್ ರೈಲಿನ ಒಂದು ಟ್ರಾಲಿ ಹಳಿ ತಪ್ಪಿತ್ತು.

          Continue Reading
          Advertisement
          Emmanuel Macron
          ಕ್ರೀಡೆ3 hours ago

           Emmanuel Macron : ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಭಾರತದ ಉತ್ಸಾಹಕ್ಕೆ ಬೆಂಬಲ ನೀಡಿದ ಫ್ರಾನ್ಸ್​ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರೋನ್

          Paris Olympics 2024
          ಪ್ರಮುಖ ಸುದ್ದಿ3 hours ago

          Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

          Broadcasting Services Bill
          ಪ್ರಮುಖ ಸುದ್ದಿ4 hours ago

          Broadcasting Services Bill : ಸಾರ್ವಜನಿಕರ ಆಕ್ಷೇಪ; ಪ್ರಸಾರ ಸೇವೆಗಳ ಕರಡು ಬಿಲ್​ ವಾಪಸ್​ ಪಡೆದ ಕೇಂದ್ರ ಸರ್ಕಾರ

          ಪ್ರಮುಖ ಸುದ್ದಿ5 hours ago

          Train Accident : ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲಿನ ಎರಡು ಬೋಗಿ

          Pralhad Joshi
          ದೇಶ5 hours ago

          Pralhad Joshi: ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ; ಪ್ರಲ್ಹಾದ್‌ ಜೋಶಿ

          CM Siddaramaiah
          ಕರ್ನಾಟಕ5 hours ago

          CM Siddaramaiah: 6000ಕ್ಕೂ ಹೆಚ್ಚು ಗ್ರಂಥಾಲಯ ಮೇಲ್ಚಿಚಾರಕರು ಕನಿಷ್ಠ ವೇತನ ವ್ಯಾಪ್ತಿಗೆ; ಸಿದ್ದರಾಮಯ್ಯ ಮಹತ್ವದ ಘೋಷಣೆ

          Independence day speech in Kannada
          ದೇಶ5 hours ago

          Independence day speech in Kannada: ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧ ಭಾಷಣ!

          S Jaishankar's Maldives visit
          ಪ್ರಮುಖ ಸುದ್ದಿ5 hours ago

          S Jaishankar’s Maldives visit : ಚೀನಾ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ಗೆಲುವು, 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್​​

          Manu Bhaker
          ಕ್ರೀಡೆ6 hours ago

          Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

          Namma Metro
          ನೋಟಿಸ್ ಬೋರ್ಡ್6 hours ago

          Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

          Sharmitha Gowda in bikini
          ಕಿರುತೆರೆ10 months ago

          Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

          Kannada Serials
          ಕಿರುತೆರೆ10 months ago

          Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

          Bigg Boss- Saregamapa 20 average TRP
          ಕಿರುತೆರೆ10 months ago

          Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

          Kannada Serials
          ಕಿರುತೆರೆ11 months ago

          Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

          galipata neetu
          ಕಿರುತೆರೆ9 months ago

          Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

          Kannada Serials
          ಕಿರುತೆರೆ10 months ago

          Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

          Bigg Boss' dominates TRP; Sita Rama fell to the sixth position
          ಕಿರುತೆರೆ10 months ago

          Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

          geetha serial Dhanush gowda engagement
          ಕಿರುತೆರೆ8 months ago

          Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

          Kannada Serials
          ಕಿರುತೆರೆ11 months ago

          Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

          varun
          ಕಿರುತೆರೆ9 months ago

          Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

          karnataka Weather Forecast
          ಮಳೆ4 days ago

          Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

          Bellary news
          ಬಳ್ಳಾರಿ4 days ago

          Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

          Maravoor bridge in danger Vehicular traffic suspended
          ದಕ್ಷಿಣ ಕನ್ನಡ4 days ago

          Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

          Wild Animals Attack
          ಚಿಕ್ಕಮಗಳೂರು6 days ago

          Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

          Karnataka Weather Forecast
          ಮಳೆ6 days ago

          Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

          assault case
          ಬೆಳಗಾವಿ1 week ago

          Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

          karnataka rain
          ಮಳೆ1 week ago

          Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

          karnataka Rain
          ಮಳೆ2 weeks ago

          Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

          Karnataka Rain
          ಮಳೆ2 weeks ago

          Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

          karnataka Rain
          ಮಳೆ2 weeks ago

          Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

          ಟ್ರೆಂಡಿಂಗ್‌