Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ! - Vistara News

ದೇಶ

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Independence Day 2024: ಪ್ರಸ್ತುತ ನಾವು ಬಳಸುವ ರೂಪಾಯಿಗೂ (Indian Currency) ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ.

VISTARANEWS.COM


on

Independence Day 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ನಾಣ್ಯ, ನೋಟುಗಳು (Indian Currency) ಚಲಾವಣೆಗೆ ಬಂದು ಹಲವು ಶತಮಾನಗಳೇ ಕಳೆದಿವೆ. ಇದರ ಬಹುದೊಡ್ಡ ಇತಿಹಾಸವೇ ಇದೆ. “ರೂಪಾಯಿ” (Rupee) ಪದದ ಮೂಲ ಸಂಸ್ಕೃತ ಪದ ‘ರೂಪ್ಯ’ದಿಂದ (Rupya) ಬಂದಿದೆ. ಇದರರ್ಥ ಆಕಾರ, ಮುದ್ರೆಯೊತ್ತಲ್ಪಟ್ಟ, ಪ್ರಭಾವಿತ ಅಥವಾ ನಾಣ್ಯ ಎಂಬುದಾಗಿದೆ. ಸಂಸ್ಕೃತ ಪದ “ರೌಪ್ಯ” ಅಂದರೆ ಬೆಳ್ಳಿಯಿಂದ ಮುದ್ರಿಸಲ್ಪಟ್ಟದ್ದು ಎಂಬ ಅರ್ಥವನ್ನು ಹೊಂದಿದೆ.

ನಾವು ಪ್ರಸ್ತುತ ಬಳಸುವ ರೂಪಾಯಿಗೂ ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನೆಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು (British govt) ಮೊದಲ ಬಾರಿಗೆ ಕಾಗದದ ಕರೆನ್ಸಿಯನ್ನು ಪರಿಚಯಿಸಿದರು. 1861ರ ಕಾಗದದ ಕರೆನ್ಸಿ ಕಾಯಿದೆಯು ಬ್ರಿಟಿಷ್ ಭಾರತದ ವಿಶಾಲವಾದ ವಿಸ್ತಾರದ ಉದ್ದಕ್ಕೂ ನೀಡಲಾದ ನೋಟಿನ ಏಕಸ್ವಾಮ್ಯವನ್ನು ಸರ್ಕಾರಕ್ಕೆ ನೀಡಿತು.

ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ:

ಭಾರತದಲ್ಲಿ ನಾಣ್ಯಗಳನ್ನು ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಮುದ್ರಿಸಲಾಯಿತು. ಆಗ ಇದನ್ನು ಕರ್ಷಪಣಗಳು ಅಥವಾ ಪಣಗಳು ಎಂದು ಕರೆಯಲಾಗುತ್ತಿತ್ತು. ಈ ನಾಣ್ಯಗಳು ಅನಿಯಮಿತ ಆಕಾರ, ಪ್ರಮಾಣಿತ ತೂಕವನ್ನು ಹೊಂದಿತ್ತು.

ಬ್ರಿಟಿಷರ ಕಾಲದ ನಾಣ್ಯಗಳು

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಸಮಯದಲ್ಲಿ ಅಂದರೆ 1600ರಲ್ಲಿ ಮೊಘಲ್ ಕರೆನ್ಸಿಯು ಜನಪ್ರಿಯವಾಗಿತ್ತು. ಆದರೆ 1717ಎ.ಡಿನಲ್ಲಿ ಮೊಘಲ್ ಚಕ್ರವರ್ತಿ ಫರೂಖ್ ಸಿಯಾರ್ ಅವರು ಬ್ರಿಟಿಷರಿಗೆ ಬಾಂಬೆ ಟಂಕಸಾಲೆಯಲ್ಲಿ ಮೊಘಲ್ ಹಣವನ್ನು ನಾಣ್ಯ ಮಾಡಲು ಅನುಮತಿ ನೀಡಿದರು. ಅನಂತರ ಬ್ರಿಟಿಷರು ಚಿನ್ನದ ನಾಣ್ಯಗಳನ್ನು ಕ್ಯಾರೊಲಿನಾ ಎಂಬ ಹೆಸರಿನಲ್ಲಿ ತಂದರು. ಬೆಳ್ಳಿಯ ನಾಣ್ಯಗಳನ್ನು ಏಂಜಲೀನಾ ಎಂದು, ತಾಮ್ರದ ನಾಣ್ಯಗಳನ್ನು ಕಪ್ಪೆರೂನ್ ಮತ್ತು ತವರ ನಾಣ್ಯಗಳನ್ನು ಟಿನ್ನಿ ಎಂದು ಕರೆಯಲಾಯಿತು.


ಮೊದಲ ನೋಟು

18ನೇ ಶತಮಾನದಲ್ಲಿ ಬಂಗಾಳದಲ್ಲಿರುವ ಬ್ಯಾಂಕ್ ಆಫ್ ಹಿಂದೂಸ್ತಾನ್ ಜನರಲ್ ಬ್ಯಾಂಕ್ ಮತ್ತು ಬಂಗಾಳ ಬ್ಯಾಂಕ್ ಪೇಪರ್ ಕರೆನ್ಸಿಯನ್ನು ವಿತರಿಸಿದ ಭಾರತದ ಮೊದಲ ಬ್ಯಾಂಕುಗಳಾಗಿವೆ. 1812ರ ಸೆಪ್ಟೆಂಬರ್ 3ರಂದು ಬ್ಯಾಂಕ್ ಆಫ್ ಬೆಂಗಾಲ್ ಮೂಲಕ ಬ್ರಿಟಿಷರು ಇವುಗಳನ್ನು ಹೊರತಂದರು. ಇದು ಎರಡು ನೂರ ಐವತ್ತು ಸಿಕ್ಕಾ ರೂಪಾಯಿ ನೋಟಾಗಿತ್ತು.

ನಾಣ್ಯಗಳ ಕಾಯಿದೆ

1835ರ ನಾಣ್ಯಗಳ ಕಾಯಿದೆಯೊಂದಿಗೆ ದೇಶಾದ್ಯಂತ ಏಕರೂಪದ ನಾಣ್ಯವು ಚಲಾವಣೆಗೆ ಬಂದಿತ್ತು. 1858ರಲ್ಲಿ ಮೊಘಲ್ ಸಾಮ್ರಾಜ್ಯವು ಕೊನೆಗೊಂಡಿತು ಮತ್ತು ಬ್ರಿಟಿಷರು ನೂರು ರಾಜಪ್ರಭುತ್ವದ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಬಳಿಕ ನಾಣ್ಯಗಳ ಮೇಲೆ ಗ್ರೇಟ್ ಬ್ರಿಟನ್ ಪ್ರಭುತ್ವದ ರಾಜನ ಚಿತ್ರವನ್ನು ಮುದ್ರಿಸಲಾಯಿತು.

Indian Currency
Indian Currency


6ನೇ ಕಿಂಗ್ ಜಾರ್ಜ್ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಮೇಲಿನ ವಿನ್ಯಾಸಗಳನ್ನು ಬದಲಿಸಿದರು. ಆದರೆ 1857ರ ದಂಗೆಯ ನಂತರ, ಅವರು ವಸಾಹತುಶಾಹಿ ಭಾರತದ ಅಧಿಕೃತ ಕರೆನ್ಸಿಯಾಗಿ ರೂಪಾಯಿಯನ್ನು ಮಾಡಿದರು.
1862ರಲ್ಲಿ ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ, ವಿಕ್ಟೋರಿಯಾ ಭಾವಚಿತ್ರದೊಂದಿಗೆ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಸರಣಿಯನ್ನು ಬಿಡುಗಡೆ ಮಾಡಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ

ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು 1935ರಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರದ ನೋಟುಗಳನ್ನು ವಿತರಿಸಲು ಅಧಿಕಾರ ನೀಡಲಾಯಿತು. ಇದು ಮೊದಲಿಗೆ 10,000 ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಿತ್ತು. ಆದರೆ ಸ್ವಾತಂತ್ರ್ಯದ ಅನಂತರ ಇದನ್ನು ಅಮಾನ್ಯಗೊಳಿಸಲಾಯಿತು.


ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ನೋಟು

ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ಕಾಗದದ ಕರೆನ್ಸಿ 1938ರ ಜನವರಿಯಲ್ಲಿ 6ನೇ ಕಿಂಗ್ ಜಾರ್ಜ್ ಆವರ ಭಾವಚಿತ್ರವನ್ನು ಹೊಂದಿರುವ 5 ರೂಪಾಯಿ ನೋಟಾಗಿತ್ತು.


ಸ್ವಾತಂತ್ರ್ಯ ಅನಂತರದ ನೋಟು

1947ರಲ್ಲಿ ಸ್ವಾತಂತ್ರ್ಯ ಪಡೆದ ಅನಂತರ ಮತ್ತು 1950ರ ದಶಕದಲ್ಲಿ ಭಾರತ ಗಣರಾಜ್ಯವಾದಾಗ ಭಾರತದ ಆಧುನಿಕ ರೂಪಾಯಿಯ ವಿನ್ಯಾಸ ಪಡೆಯಿತು. ಪೇಪರ್ ಕರೆನ್ಸಿಗೆ ಆಯ್ಕೆ ಮಾಡಲಾದ ಚಿಹ್ನೆಯು ಸಾರಾನಾಥದಲ್ಲಿರುವ ಸಿಂಹದ ಚಿಹ್ನೆಯನ್ನು ಒಳಗೊಂಡಿತ್ತು. ಇದು 6ನೇ ಜಾರ್ಜ್ ನ ಬ್ಯಾಂಕ್ ನೋಟುಗಳನ್ನು ಬದಲಾಯಿಸಿತು. ಆದ್ದರಿಂದ, ಸ್ವತಂತ್ರ ಭಾರತವು ಮುದ್ರಿಸಿದ ಮೊದಲ ನೋಟು 1 ರೂಪಾಯಿ ನೋಟು.

1 ರೂಪಾಯಿ ನೋಟಿನ ಇತಿಹಾಸ ಹೀಗಿದೆ

ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1917ರ ನವೆಂಬರ್ 30ರಂದು ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಯಿತು. ಅದೂ ಮೊದಲನೇ ಮಹಾಯುದ್ಧದ ಸಮಯದಲ್ಲಿ.


ಆ ಕಾಲದಲ್ಲಿ ಒಂದು ರೂಪಾಯಿ ನಾಣ್ಯ ಬೆಳ್ಳಿಯದ್ದಾಗಿತ್ತು. ಆದರೆ ಯುದ್ಧದ ಕಾರಣ ಪರಿಸ್ಥಿತಿ ಹದಗೆಟ್ಟಿತು ಮತ್ತು ಒಂದು ರೂಪಾಯಿ ಬೆಳ್ಳಿಯ ನಾಣ್ಯವನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಮೊದಲ ಬಾರಿಗೆ ಜನರ ಮುಂದೆ ಒಂದು ರೂಪಾಯಿ ನೋಟು ಬಿಡುಗಡೆಯಾಯಿತು. ಇದರಲ್ಲಿ 5ನೇ ಜಾರ್ಜ್ ನ ಚಿತ್ರವನ್ನು ನೋಟಿನಲ್ಲಿ ಅಳವಡಿಸಲಾಗಿತ್ತು. ಇಂಗ್ಲೆಂಡಿನಲ್ಲಿ ಮುದ್ರಿತವಾಗಿರುವ ಈ ಒಂದು ರೂಪಾಯಿ ನೋಟಿನ ಮೌಲ್ಯ ಇತರ ನೋಟುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು.

ನೋಟುಗಳ ಮೈಲುಗಲ್ಲು

1917-1918ರಲ್ಲಿಯೂ ಹೈದರಾಬಾದ್ ನಿಜಾಮರು ತಮ್ಮ ಸ್ವಂತ ಕರೆನ್ಸಿಯನ್ನು ಮುದ್ರಿಸಿ ಬಿಡುಗಡೆ ಮಾಡುವ ಸೌಲಭ್ಯ ಹೊಂದಿದ್ದರು. ಮೊದಲನೆಯ ಮಹಾಯುದ್ಧದಲ್ಲಿ ಲೋಹದ ಕೊರತೆಯಿಂದಾಗಿ ಮೊರ್ವಿ ರಾಜಪ್ರಭುತ್ವದ ರಾಜ್ಯಗಳು ಹರ್ವಾಲಾ ಎಂದು ಕರೆಯಲ್ಪಡುವ ಸೀಮಿತ ಹೊಣೆಗಾರಿಕೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದ್ದವು.


1959ರಲ್ಲಿ ಭಾರತೀಯ ಹಜ್ ಯಾತ್ರಿಕರಿಗೆ ಹತ್ತು ರೂಪಾಯಿ ಮತ್ತು ನೂರು ರೂಪಾಯಿಗಳ ನೋಟನ್ನು ಬಿಡುಗಡೆ ಮಾಡಲಾಯಿತು. ಇದನ್ನು ಅವರು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5 ಮತ್ತು 10 ರೂ. ನೋಟುಗಳ ಮೇಲೆ ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವದ ಸ್ಮರಣಾರ್ಥದ ವಿನ್ಯಾಸವನ್ನು ಮಾಡಿ ಬಿಡುಗಡೆ ಮಾಡಿತ್ತು.


ನಾಣ್ಯಗಳ ಬದಲಿಗೆ ಟೋಕನ್

ಎರಡನೇ ಮಹಾಯುದ್ಧದ ಸಮಯದಲ್ಲಿ ಲೋಹದ ಕೊರತೆಯಿಂದಾಗಿ 36 ರಾಜಪ್ರಭುತ್ವದ ರಾಜ್ಯಗಳು ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಸಿಂಧ್, ಬಲೂಚಿಸ್ತಾನ್ ಮತ್ತು ಕೇಂದ್ರ ಪ್ರಾಂತ್ಯಗಳು ನಾಣ್ಯಗಳ ಬದಲಿಗೆ ಕಾಗದದ ಟೋಕನ್‌ಗಳನ್ನು ನೀಡಿದವು!


ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರ

ಅಂತಿಮವಾಗಿ 1996ರಲ್ಲಿ ಮಹಾತ್ಮಾ ಗಾಂಧಿ ಚಿತ್ರವನ್ನು ಹೊಂದಿರುವ ಕಾಗದದ ನೋಟುಗಳನ್ನು ಪರಿಚಯಿಸಲಾಯಿತು.

ಛಾಯಾಗ್ರಾಹಕನೊಬ್ಬ ತೆಗೆದ ಗಾಂಧಿಯ ಚಿತ್ರ

ಪ್ರಸ್ತುತ ನೋಟಿನಲ್ಲಿರುವ ಮಹಾತ್ಮ ಗಾಂಧಿಯವರ ನಗುಮುಖದ ಚಿತ್ರ ವ್ಯಂಗ್ಯಚಿತ್ರವೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಈ ಚಿತ್ರವನ್ನು 1946ರಲ್ಲಿ ಅಜ್ಞಾತ ಛಾಯಾಗ್ರಾಹಕರೊಬ್ಬರು ತೆಗೆದಿದ್ದು, ಅದನ್ನು ಕತ್ತರಿಸಿ ಮುದ್ರಿಸಲಾಗಿದೆ.


ರಾಜಕಾರಣಿ ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ಮಹಿಳಾ ಮತದಾರರ ಚಳವಳಿಯ ನಾಯಕರಾಗಿದ್ದ ಲಾರ್ಡ್ ಫ್ರೆಡ್ರಿಕ್ ವಿಲಿಯಂ ಪೆಥಿಕ್-ಲಾರೆನ್ಸ್ ಅವರ ಪಕ್ಕದಲ್ಲಿ ನಿಂತಿದ್ದ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಪ್ರಸ್ತುತ ರಾಷ್ಟ್ರಪತಿ ಭವನ ಎಂದು ಕರೆಯಲ್ಪಡುವ ಹಿಂದಿನ ವೈಸರಾಯ್ ಹೌಸ್‌ನಲ್ಲಿ ತೆಗೆಯಲಾಗಿತ್ತು. ಈ ಚಿತ್ರವನ್ನು 1996ರಲ್ಲಿ ಆರ್‌ಬಿಐ ಪರಿಚಯಿಸಿದ ಮಹಾತ್ಮ ಗಾಂಧಿ ಸರಣಿಯ ಬ್ಯಾಂಕ್ ನೋಟುಗಳಲ್ಲಿ ಬಳಸಲಾಗಿದೆ.


ವಿಭಿನ್ನ ಚಿತ್ರ ಬಳಕೆ

1981ರಲ್ಲಿ 10 ರೂ. ನೋಟು ಸಿಂಹದ ಲಾಂಛನ ಮತ್ತು ರಾಷ್ಟ್ರೀಯ ಪಕ್ಷಿಯಾದ ನವಿಲಿನ ಚಿತ್ರವನ್ನು ಹೊಂದಿತ್ತು.

1983- 84ರಲ್ಲಿ ಮುದ್ರಿಸಿರುವ 20 ರೂಪಾಯಿಯ ಬ್ಯಾಂಕ್ ನೋಟಿನ ಹಿಂಭಾಗದಲ್ಲಿ ಬೌದ್ಧರ ಚಕ್ರವನ್ನು ಒಳಗೊಂಡಿತ್ತು.

1996 ಜೂನ್‌ನಲ್ಲಿ ಮುದ್ರಿಸಲಾದ 100 ರೂ.ನ ನೋಟಿನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ ಹಿಂಭಾಗದಲ್ಲಿ ಹಿಮಾಲಯ ಪರ್ವತಗಳನ್ನು ಚಿತ್ರಿಸಲಾಗಿದೆ.


1996ರ ಜೂನ್‌ನಲ್ಲಿ 10 ರೂ. ನೋಟಿನ ಮುಂಭಾಗದಲ್ಲಿ ಗಾಂಧಿ ಮತ್ತು ಹಿಂಭಾಗದಲ್ಲಿ ಜೀವವೈವಿಧ್ಯವನ್ನು ಸಂಕೇತಿಸುವ ಭಾರತದ ಪ್ರಾಣಿಗಳನ್ನು ಪ್ರತಿನಿಧಿಸುವ ಚಿತ್ರವನ್ನು ಚಿತ್ರಿಸಲಾಯಿತು.

1997ರ ಮಾರ್ಚ್‌ನಲ್ಲಿ ಮುದ್ರಿಸಲಾದ 50 ರೂ.ಗಳ ನೋಟಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಭಾರತೀಯ ಸಂಸತ್ತು ಮತ್ತು ಮಹಾತ್ಮ ಗಾಂಧಿಯವರ ಚಿತ್ರವನ್ನು ನೀಡಲಾಗಿದೆ.


1997ರ ಅಕ್ಟೋಬರ್‌ನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರವಿರುವ 500 ರೂ.ಗಳನ್ನು ನೀಡಲಾಯಿತು ಮತ್ತು ಅದರ ಹಿಂಭಾಗದಲ್ಲಿ ದಂಡಿ ಮೆರವಣಿಗೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿತ್ತು.


ಇದು 1930ರ ಮಾರ್ಚ್ 12ರಂದು ಪ್ರಾರಂಭಿಸಿದ ಉಪ್ಪಿನ ಸತ್ಯಾಗ್ರಹವನ್ನು ಪ್ರತಿಬಿಂಬಿಸುತ್ತದೆ. ಗಾಂಧೀಜಿ ಅವರು ಆರಂಭಿಸಿದ ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಇದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉಪ್ಪಿನ ಮೇಲೆ ಬ್ರಿಟಿಷ್‌ ಪ್ರಾಬಲ್ಯದ ವಿರುದ್ಧ ಗಾಂಧೀಜಿ ತಮ್ಮ ಅನುಯಾಯಿಗಳೊಂದಿಗೆ ಅಹಮದಾಬಾದ್ ಬಳಿಯ ಅವರ ಸಬರಮತಿ ಆಶ್ರಮದಿಂದ ನವಸಾರಿ ಜಿಲ್ಲೆ ಗುಜರಾತ್‌ನ ಕರಾವಳಿ ಗ್ರಾಮವಾದ ದಂಡಿಗೆ ಮೆರವಣಿಗೆ ನಡೆಸಿದರು. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಉಪ್ಪನ್ನು ತಯಾರಿಸಿದರು. ಈ ರೀತಿಯಲ್ಲಿ 1930ರ ಏಪ್ರಿಲ್ 5ರಂದು ಗಾಂಧಿಯವರು ಉಪ್ಪಿನ ಕಾನೂನನ್ನು ಮುರಿದರು.


2000ರ ನವೆಂಬರ್‌ನಲ್ಲಿ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ 1000 ರೂ.ಯನ್ನು ನೀಡಲಾಯಿತು. ಅದರ ಹಿಂಭಾಗದಲ್ಲಿ ಧಾನ್ಯ ಕೊಯ್ಲು ಅಂದರೆ ಕೃಷಿ ವಲಯ, ತೈಲ ಸಂಸ್ಕರಣೆ ಇತ್ಯಾದಿ ಹೊಂದಿರುವ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿದೆ.

2001ರ ಆಗಸ್ಟ್‌ನಲ್ಲಿ ಗಾಂಧಿಯವರ ಚಿತ್ರದೊಂದಿಗೆ 20 ರೂ. ನೀಡಲಾಯಿತು. ಇದರಲ್ಲಿ ತಾಳೆ ಮರಗಳ ಚಿತ್ರವನ್ನು ಹಿಂಭಾಗದಲ್ಲಿ ಮುದ್ರಿಸಲಾಯಿತು.

ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

2001ರ ನವೆಂಬರ್ ನಲ್ಲಿ 5 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಹಿಂಭಾಗದಲ್ಲಿ ಕೃಷಿ ಯಾಂತ್ರೀಕರಣದ ಚಿತ್ರವನ್ನು ಚಿತ್ರಿಸಲಾಯಿತು.

2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರುವ ಸಲುವಾಗಿ ಹಿಂದಿನ 500 ಮತ್ತು 1000 ರೂ. ನೋಟುಗಳನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದರು. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದರು. ಮುಂದೆ 500 ರೂ.ಯ ಹೊಸ ಮಾದರಿ ನೋಟುಗಳೂ ಬಂದವು. ಬಳಿಕ ಇದೀಗ 2000 ರೂ. ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದ್ದು, ಚಲಾವಣೆಯಲ್ಲಿರುವ ಅದನ್ನು ಆರ್‌ಬಿಐ ಹಿಂಪಡೆದಿದೆ. 2024ರ ಅಕ್ಟೋಬರ್ ಬಳಿಕ ಈ 2000 ರೂ. ನೋಟುಗಳು ಅಧಿಕೃತವಾಗಿ ಇತಿಹಾಸದ ಪುಟವನ್ನು ಸೇರಲಿದೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

Sheikh Hasina : ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ನಾಯಕತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರವಾಗಿ ಸ್ವಾಭಿಮಾನವನ್ನು ಗಳಿಸಿದ್ದೆವು. ಸ್ವಯಂ ಗುರುತನ್ನು ಪಡೆದುಕೊಂಡಿದ್ದೆವು. ಸ್ವತಂತ್ರ ದೇಶವನ್ನು ಪಡೆದಿದ್ದೇವೆ. ಈಗ ಅವರನ್ನು ತೀವ್ರವಾಗಿ ಅವಮಾನಿಸಲಾಗಿದೆ” ಎಂದು ಹಸೀನಾ ತಮ್ಮ ಮಗ ಸಜೀಬ್ ವಾಜೀದ್ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

VISTARANEWS.COM


on

Sheikh Hasina
Koo

ಬೆಂಗಳೂರು ; ಬಾಂಗ್ಲಾದೇಶ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡು ಬಳಿಕ ಅಲ್ಲಿಂದ ಪರಾರಿಯಾಗಿ ಭಾರತಕ್ಕೆ ಬಂದಿರುವ ಪ್ರಧಾನಿ ಶೇಖ್ ಹಸೀನಾ (Sheikh Hasina) ಮಂಗಳವಾರ ತಮ್ಮ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವಾಮಿ ಲೀಗ್ ವಿರುದ್ಧದ ದಂಗೆಯನ್ನು ತನ್ನ ತಂದೆ, ಬಾಂಗ್ಲಾದೇಶದ ಸ್ಥಾಪಕ ಅಧ್ಯಕ್ಷ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಮತ್ತು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅನೇಕ ಹುತಾತ್ಮರಿಗೆ ಮಾಡಿದ ಗಂಭೀರ ಅವಮಾನ ಎಂದು ಹೇಳಿಕೆ ನೀಡಿದ್ದಾರೆ.

ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ನಾಯಕತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರವಾಗಿ ಸ್ವಾಭಿಮಾನವನ್ನು ಗಳಿಸಿದ್ದೆವು. ಸ್ವಯಂ ಗುರುತನ್ನು ಪಡೆದುಕೊಂಡಿದ್ದೆವು. ಸ್ವತಂತ್ರ ದೇಶವನ್ನು ಪಡೆದಿದ್ದೇವೆ. ಈಗ ಅವರನ್ನು ತೀವ್ರವಾಗಿ ಅವಮಾನಿಸಲಾಗಿದೆ” ಎಂದು ಹಸೀನಾ ತಮ್ಮ ಮಗ ಸಜೀಬ್ ವಾಜೀದ್ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ಲಕ್ಷಾಂತರ ಹುತಾತ್ಮರ ತ್ಯಾಗವನ್ನು ಅವಮಾನಿಸಿದ್ದಾರೆ. ನಾನು ದೇಶವಾಸಿಗಳಿಂದ ನ್ಯಾಯವನ್ನು ಬಯಸುತ್ತೇನೆ” ಎಂದು ಹಸೀನಾ ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಹೊರಹಾಕಿದ ಹಿಂದಿನ ಶಕ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಶೇಖ್ ಮುಜಿಬುರ್ ರಹಮಾನ್ ಅವರ ಹತ್ಯೆಯಾದ ದಿನದ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 15 ರಂದು ರಾಷ್ಟ್ರೀಯ ಶೋಕಾಚರಣೆ ದಿನ ಆಚರಿಸುವಂತೆ ಅವಾಮಿ ಲೀಗ್ ಮುಖ್ಯಸ್ಥರು ಬಾಂಗ್ಲಾದೇಶದ ಪ್ರಜೆಗಳನ್ನು ಒತ್ತಾಯಿಸಿದ್ದಾರೆ.

ಆಗಸ್ಟ್ 15 ರಂದು ರಾಷ್ಟ್ರೀಯ ಶೋಕ ದಿನವನ್ನು ಸೂಕ್ತ ಘನತೆ ಮತ್ತು ಗಂಭೀರತೆಯಿಂದ ಆಚರಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ಬಂಗಬಂಧು ಭವನದಲ್ಲಿ ಹೂವಿನ ಹಾರಗಳನ್ನು ಅರ್ಪಿಸುವ ಮೂಲಕ ಮತ್ತು ಪ್ರಾರ್ಥಿಸುವ ಮೂಲಕ ಎಲ್ಲರಿಗೂ ಪ್ರಾರ್ಥಿಸಿ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

“ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸರು, ಪತ್ರಕರ್ತರು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಮುಗ್ಧ ಪ್ರೇಕ್ಷಕರು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನನ್ನಂತೆ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನೊಂದಿಗೆ ಬದುಕುತ್ತಿರುವವರಿಗೆ ನನ್ನ ಆಳ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಹಸೀನಾ ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಸೀನಾ ಒತ್ತಾಯಿಸಿದ್ದಾರೆ. ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್ ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿ ಆಗಸ್ಟ್ 5 ರಂದು ಹಠಾತ್ತನೆ ಕೊನೆಗೊಂಡಿತು. ಪ್ರಸ್ತುತ, ಹಸೀನಾ ಭಾರತದಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ವರದಿಯಾಗಿದೆ.

Continue Reading

ಪ್ರಮುಖ ಸುದ್ದಿ

Physical Abuse : ತಪಾಸಣೆಗೆ ಬಂದ ರೋಗಿಗಳಿಬ್ಬರನ್ನು ಅತ್ಯಾಚಾರ ಮಾಡಿದ ಸರ್ಕಾರಿ ವೈದ್ಯ; ಜೂನಿಯರ್​ ವೈದ್ಯರ ಪೆಟ್ಟು ತಿಂದು ಐಸಿಯು ಸೇರಿದ ಆರೋಪಿ

Physical Abuse : ಮಂಗಳಬಾಗ್ ಪೊಲೀಸ್ ಠಾಣೆಗೆ ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರು ನೀಡಿದ್ದರು. ಅದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ ಅನಿಲ್ ಮಿಶ್ರಾ) ತಿಳಿಸಿದ್ದಾರೆ. ನಿವಾಸಿ ವೈದ್ಯರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

VISTARANEWS.COM


on

Physical Abuse
Koo

ಕಟಕ್: ಕೋಲ್ಕತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮಹಿಳಾ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ವ್ಯಕ್ತಗೊಳ್ಳುತ್ತಿರುವ ನಡುವೆಯೇ ಒಡಿಶಾದ ಕಟಕ್​​ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳಿಬ್ಬರಿಗೆ ಅಲ್ಲಿನ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ (Physical Abuse) ಪ್ರಕರಣ ನಡೆದಿದೆ. ಆದರೆ, ವಿಷಯ ತಿಳಿದ ತಕ್ಷಣವೇ ಜೂನಿಯರ್ ವೈದ್ಯರುಗಳು ಆತನಿಗೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ಆತ ಐಸಿಯು ಸೇರಿದ್ದಾನೆ.

ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯ ತಾಯಿ ಮತ್ತು ಚಿಕ್ಕಮ್ಮ ಶುಕ್ರವಾರ ತಪಾಸಣೆಗಾಗಿ ಹೃದ್ರೋಗ ವಿಭಾಗಕ್ಕೆ ಹೋಗಿದ್ದಾಗ ಆರೋಪಿ ವೈದ್ಯ ಕೃತ್ಯ ಎಸಗಿದ್ದಾನೆ. ಇಬ್ಬರು ಮಹಿಳೆಯರಿಗೆ ಎಕೋಕಾರ್ಡಿಯೋಗ್ರಾಮ್​ಗೆ ಸಲಹೆ ನೀಡಲಾಗಿತ್ತು ಕಾರ್ಡಿಯಾಲಜಿ ಎಂಡಿ ವಿದ್ಯಾರ್ಥಿಯಾಗಿರುವ ಪುರುಷ ವೈದ್ಯ ಇಸಿಜಿ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. .

ವಿಷಯ ತಿಳಿದ ಕಿರಿಯ ವೈದ್ಯರ ಸಂಘದ ಸದಸ್ಯರು ಆರೋಪಿ ವೈದ್ಯನಿಗೆ ಚೆನ್ನಾತಿ ಥಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿದಿದ್ದರು. ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಮಧ್ಯಪ್ರವೇಶಿಸಿ ಹಾಗೆ ಮಾಡಲು ಮನವೊಲಿಸಿದ ನಂತರ ಅವರು ಎಫ್ಐಆರ್ ದಾಖಲಿಸಿದ್ದಾರೆ.

ಮಂಗಳಬಾಗ್ ಪೊಲೀಸ್ ಠಾಣೆಗೆ ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರು ನೀಡಿದ್ದರು. ಅದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ ಅನಿಲ್ ಮಿಶ್ರಾ) ತಿಳಿಸಿದ್ದಾರೆ. ನಿವಾಸಿ ವೈದ್ಯರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಆರೋಪಿಯನ್ನು ರೋಗಿಗಳ ಕೆಲವು ಸಂಬಂಧಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ಮಿಶ್ರಾ ಹೇಳಿದರು.

ಸಿಆರ್ಪಿಸಿಯ ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆಗಸ್ಟ್ 11ರಂದು ಈ ಘಟನೆ ನಡೆದಿದೆ. ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಪ್ರಕರಣವು ಸೂಕ್ಷ್ಮವಾಗಿರುವುದರಿಂದ, ನಾವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಹೆಚ್ಚುವರಿ ಡಿಸಿಪಿ ಅನಿಲ್ ಮಿಶ್ರಾ ಹೇಳಿದ್ದಾರೆ.

ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!

ಧಾರವಾಡ: ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Hindenburg Report : ಸೆಬಿ ಅಧ್ಯಕ್ಷರ ವಜಾಗೆ ಆಗ್ರಹಿಸಿದ ಕಾಂಗ್ರೆಸ್​ನಿಂದ ಆಗಸ್ಟ್​​ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ

ಆಗಸ್ಟ್ 8 ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗೂ ಹಾಕಿದ್ದು, ಹಲವರು ಬೇರೆ ಗ್ರೂಪ್‌ಗೆ ಶೇರ್‌ ಮಾಡಿದ್ದಾರೆ.

ಸದ್ಯ ಯುವಕನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬೇರೆ ಬೇರೆ ಗ್ರೂಪ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಸದ್ಯ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Continue Reading

ತಂತ್ರಜ್ಞಾನ

Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ (Independence day 2024) ವಾಟ್ಸ್ ಆಪ್ ಮೂಲಕ ಸ್ನೇಹಿತರು, ಬಂಧುಗಳಿಗೆ ಶುಭ ಹಾರೈಸಿ. ಇದಕ್ಕಾಗಿ ಸ್ಟಿಕ್ಕರ್‌, ಸಂದೇಶ ಅಥವಾ ಚಿತ್ರಗಳನ್ನು ಎಲ್ಲಿಂದ, ಹೇಗೆ ಪಡೆಯಬಹುದು ಎನ್ನುವ ಕುರಿತ ಮಾಹಿತಿ ಇಲ್ಲಿದೆ. ಇದನ್ನು ಬಳಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಸ್ನೇಹಿತರು ಮತ್ತು ಬಂಧುಗಳೊಂದಿಗೆ ಹಂಚಿಕೊಳ್ಳಿ.

VISTARANEWS.COM


on

By

Independence day 2024
Koo

ಭಾರತದ 78ನೇ ಸ್ವಾತಂತ್ರ್ಯ ದಿನದ (Independence day 2024) ಸಂಭ್ರಮ ಈಗಾಗಲೇ ಎಲ್ಲೆಲ್ಲೂ ರಂಗು ತುಂಬಲಾರಂಭಿಸಿದೆ. ಆಗಸ್ಟ್ 15ರಂದು ಇದರ ಆಚರಣೆಗೆ ಸಜ್ಜಾಗುತ್ತಿರುವ ಅನೇಕರು ಈ ಮಹತ್ವದ ದಿನದ ಸಂತೋಷವನ್ನು (joy of this significant day) ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಲು ವಿವಿಧ ದಾರಿಗಳನ್ನು ಹುಡುಕುತ್ತಿರುತ್ತಾರೆ. ಈ ಬಾರಿ ವಿಶೇಷವಾಗಿ ವಾಟ್ಸ್ ಆಪ್ (whatsapp) ಸ್ಟಿಕ್ಕರ್‌ಗಳು, ಶುಭಾಶಯ ಸಂದೇಶಗಳ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭಾಶಯಗಳನ್ನು ಕೋರಬಹುದು. ವಾಟ್ಸ್ ಆಪ್ ಸ್ಟಿಕ್ಕರ್‌ , ಮೆಸೆಜ್‌ ಮತ್ತು ಚಿತ್ರಗಳ ಬಳಕೆ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಹೇಗೆ ಹೆಚ್ಚಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ವಾಟ್ಸ್‌ಆಪ್ ಸ್ಟಿಕ್ಕರ್‌ಗಳು

ಶುಭಾಶಯಗಳನ್ನು ಹಂಚಿಕೊಳ್ಳಲು ಆಧುನಿಕ ಮಾರ್ಗವಾಗಿರುವ ವಾಟ್ಸ್ ಆಪ್ ಸ್ಟಿಕ್ಕರ್‌ಗಳು ಶೀಘ್ರವಾಗಿ ಶುಭಾಶಯಗಳನ್ನು ಕಳುಹಿಸಲು ಅನುಕೂಲಕರವಾದ ಮಾರ್ಗವಾಗಿದೆ. ವಾಟ್ಸ್ ಆಪ್‌ನಲ್ಲಿ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

Google Play Store ಅಥವಾ Apple ಆಪ್ ಸ್ಟೋರ್‌ನಲ್ಲಿ “Sticker.ly” ಅಥವಾ “ಭಾರತೀಯ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳು” (indian independence day stickers)ನಂತಹ ಅಪ್ಲಿಕೇಶನ್‌ ಅನ್ನು ಹುಡುಕಿ. ಈ ಅಪ್ಲಿಕೇಶನ್‌ಗಳು ವಿವಿಧ ಸ್ವಾತಂತ್ರ್ಯ ದಿನದ ವಿಷಯದ ಸ್ಟಿಕ್ಕರ್ ಪ್ಯಾಕ್‌ಗಳನ್ನು ನೀಡುತ್ತವೆ.

ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ ತೆರೆಯಿರಿ. ಬಳಿಕ ಅದರಲ್ಲಿ ನೀವು ಇಷ್ಟಪಡುವ ಸ್ಟಿಕ್ಕರ್ ಅನ್ನು ಆಯ್ಕೆ ಮಾಡಿ ಮತ್ತು ವಾಟ್ಸ್ ಆಪ್‌ಗೆ ಸೇರಿಸಲು ಟ್ಯಾಪ್ ಮಾಡಿ. ಇದು ವಾಟ್ಸ್ ಆಪ್ ಖಾತೆಗೆ ಸ್ಟಿಕ್ಕರ್‌ಗಳನ್ನು ಸಂಯೋಜಿಸುತ್ತದೆ. ಬಳಿಕ ವಾಟ್ಸ್ ಆಪ್‌ನಲ್ಲಿ ಯಾವುದೇ ಚಾಟ್ ತೆರೆಯಿರಿ. ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡಿ ಸ್ಟಿಕ್ಕರ್ ಟ್ಯಾಬ್ ಆಯ್ಕೆ ಮಾಡಿ. ಇಲ್ಲಿ ಹೊಸದಾಗಿ ಸೇರಿಸಲಾದ ಸ್ವಾತಂತ್ರ್ಯ ದಿನದ ಸ್ಟಿಕ್ಕರ್‌ಗಳನ್ನು ಕಾಣಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು.


ಶುಭಾಶಯ ಸಂದೇಶ

ಸ್ಟಿಕ್ಕರ್‌ಗಳ ಹೊರತಾಗಿ ಪ್ರೀತಿಪಾತ್ರರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಅಥವಾ ಸಂದೇಶಗಳನ್ನೂ ಕಳುಹಿಸಬಹುದು. ಪಠ್ಯ, ಚಿತ್ರ ಮತ್ತು ಜಿಫ್‌ಗಳೊಂದಿಗೆ ಸಂದೇಶಗಳನ್ನು ಕಳುಹಿಸಲು ವಾಟ್ಸ್ ಆಪ್ ಅನುಮತಿ ನೀಡುತ್ತದೆ.

ಜಿಫ್ ಹುಡುಕಲು ವಾಟ್ಸ್ ಆಪ್ ತೆರೆಯಿರಿ. ಯಾವುದೇ ಸಂಪರ್ಕದೊಂದಿಗೆ ಚಾಟ್ ಪ್ರಾರಂಭಿಸಿ. ಎಮೋಜಿ ವಿಭಾಗದ ಪರದೆಯ ಕೆಳಗಿನ ಎಡಭಾಗದಲ್ಲಿರುವ ಎಮೋಜಿ ಐಕಾನ್ ಅನ್ನು ಟ್ಯಾಪ್ ಮಾಡಿ ಜಿಫ್ ಅನ್ನು ಆಯ್ಕೆ ಮಾಡಿ. ಜಿಫ್ ವಿಭಾಗದಲ್ಲಿ “ಸ್ವಾತಂತ್ರ್ಯ ದಿನ” ಜಿಫ್‌ಗಳನ್ನು ಹುಡುಕಲು ಹುಡುಕಾಟ ಪಟ್ಟಿಯನ್ನು ಬಳಸಿ. ನಿಮಗೆ ಇಷ್ಟವಾಗುವ ಜಿಫ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಂದೇ ಟ್ಯಾಪ್‌ನಲ್ಲಿ ಕಳುಹಿಸಿ.

Independence day 2024
Independence day 2024


ಚಿತ್ರಗಳು

ಚಿತ್ರ ಅಥವಾ ವೆಕ್ಟರ್ ಕಲೆಯನ್ನು ಹಂಚಿಕೊಳ್ಳಲು ಆದ್ಯತೆ ನೀಡುವವರಿಗೆ ಹಲವಾರು ಆಯ್ಕೆಗಳು ಲಭ್ಯವಿದೆ. ಆನ್‌ಲೈನ್‌ನಲ್ಲಿ ತ್ವರಿತ ಹುಡುಕಾಟ ನಡೆಸುವ ಮೂಲಕ ಉತ್ತಮ ಗುಣಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಚಿತ್ರಗಳನ್ನು ಪಡೆಯಬಹುದು.

ಇದನ್ನೂ ಓದಿ: Independence day 2024: ಕೆಂಪು ಕೋಟೆ ಮೇಲೆ ಭಾಷಣ; ನೆಹರೂ, ಇಂದಿರಾ ಬಳಿಕ ಮೋದಿ ಹೊಸ ದಾಖಲೆ!

ಅನೇಕ ವೆಬ್‌ಸೈಟ್‌ಗಳು ದೇಶಭಕ್ತಿಯ ಚಿತ್ರಗಳ ಉಚಿತ ಡೌನ್‌ಲೋಡ್‌ಗಳಿಗೆ ಅನುಮತಿ ನೀಡುತ್ತವೆ. ಅಲ್ಲದೇ ‘Canva’ ಮತ್ತು ‘Pixabay’ ನಂತಹ ಅಪ್ಲಿಕೇಶನ್‌ಗಳು ವಾಟ್ಸಾಪ್ ಅಥವಾ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರವಾಗಿ ಹಂಚಿಕೊಳ್ಳಬಹುದಾದ ಸ್ವಾತಂತ್ರ್ಯ ದಿನದ ಚಿತ್ರಗಳು ಮತ್ತು ವೆಕ್ಟರ್ ಕಲೆಯನ್ನು ಒದಗಿಸುತ್ತವೆ.

Continue Reading

ದೇಶ

Independence day 2024: ಆಗಸ್ಟ್ 15ರಂದು ಪ್ರಧಾನಿ ಮೋದಿ ಭಾಷಣವನ್ನು ಎಷ್ಟು ಹೊತ್ತಿಗೆ, ಎಲ್ಲಿ ವೀಕ್ಷಿಸಬಹುದು?

ದೇಶಾದ್ಯಂತ ಈಗ 78ನೇ ಸ್ವಾತಂತ್ರ್ಯ ದಿನಾಚರಣೆಯ (Independence day 2024) ಸಂಭ್ರಮ ಎದ್ದು ಕಾಣುತ್ತಿದೆ. ಎಲ್ಲೆಲ್ಲೂ ರಾಷ್ಟ್ರ ಭಕ್ತಿ ಗೀತೆಗಳ ಗಾಯನ ಮೊಳಗುತ್ತಿದೆ. ಆಗಸ್ಟ್ 15ರಂದು (Independence day 2024) ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಕಾತರರಾಗಿದ್ದಾರೆ. ಈ ದಿನ ಎಲ್ಲರ ಚಿತ್ತ ಕೆಂಪುಕೋಟೆಯ ಮೇಲಿರಲಿದೆ. ಯಾಕೆಂದರೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನಡೆಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಯಾವಾಗ, ಎಲ್ಲಿ ಪ್ರಸಾರವಾಗಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಭಾರತದಾದ್ಯಂತ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸಲು ಸಿದ್ಧತೆಗಳು ಜೋರಾಗಿವೆ. ಈ ದಿನ ಎಲ್ಲರ ಚಿತ್ತ ಕೆಂಪುಕೋಟೆಯ (delhi Red Fort) ಮೇಲಿರುತ್ತದೆ. ಯಾಕೆಂದರೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಧ್ವಜಾರೋಹಣ ನಡೆಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಆಗಸ್ಟ್‌ 15ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜವನ್ನು ಹಾರಿಸಿ, ಆ ಬಳಿಕ ದೇಶವನ್ನು ಉದ್ದೇಶಿಸಿ ಸತತ 11ನೇ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ.


ಸ್ವಾತಂತ್ರ್ಯ ದಿನದ ನೇರ ಪ್ರಸಾರ ಎಲ್ಲಿ?

ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಸ್ತಾರ ನ್ಯೂಸ್‌ ಟಿವಿ ಮತ್ತು ವಿಸ್ತಾರ ನ್ಯೂಸ್‌ ಯುಟ್ಯೂಬ್‌ ಚಾನೆಲ್‌ ಮೂಲಕವೂ ಮೋದಿಯವರ ಭಾಷಣ ನೇರ ಪ್ರಸಾರ ನೋಡಬಹುದು.

ಅಲ್ಲದೇ ಕಾರ್ಯಕ್ರಮವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯೂಟ್ಯೂಬ್ ಚಾನೆಲ್‌ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್‌ನಲ್ಲಿ @PIB_India ಮತ್ತು PMO ಟ್ವಿಟರ್ ಹ್ಯಾಂಡಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ.


ಈ ಬಾರಿಯ ಥೀಮ್ ಏನು?

ಈ ಬಾರಿ ಸ್ವಾತಂತ್ರ್ಯ ದಿನದ ಥೀಮ್ “ವಿಕಸಿತ ಭಾರತ”. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ದೃಷ್ಟಿಕೋನವನ್ನು ಇದು ಸಾರುತ್ತದೆ. ಈ ವಿಷಯವು ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.


ಆಗಸ್ಟ್ 15ರಂದು ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಹಿಂದಿನ ಸಾಧನೆಗಳ ಕುರಿತು ವಿವರಿಸಿ, ಭವಿಷ್ಯದ ಗುರಿ ಮತ್ತು ನೀತಿಗಳನ್ನು ವಿವರಿಸುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಾರೆ. ಪ್ರಧಾನಿ ಭಾಷಣದ ಅನಂತರ ಭಾರತದ ಮಿಲಿಟರಿ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ವೇಳೆ ಪ್ರಮುಖ ಕಟ್ಟಡಗಳು, ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಹಬ್ಬದ ವಾತಾವರಣವನ್ನು ಹೆಚ್ಚಿಸಲಿದೆ.


ʼಹರ್ ಘರ್ ತಿರಂಗʼ ಅಭಿಯಾನ

‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಆಗಸ್ಟ್ 9ರಿಂದ 15ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಉಪಕ್ರಮವು ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹಿಸುವ ಮೂಲಕ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಭಿಯಾನದ ಮಹತ್ವವನ್ನು ತಿಳಿಸಿದ್ದು, ಪ್ರತಿಯೊಬ್ಬ ಭಾರತೀಯನೂ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹಿಸುವ ಮೂಲಕ ನಾಗರಿಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮನೋಭಾವವನ್ನು ಹುಟ್ಟುಹಾಕುವ ಉದ್ದೇಶವನ್ನು ಈ ಉಪಕ್ರಮವು ಹೊಂದಿದೆ ಎಂದು ಹೇಳಿದ್ದಾರೆ.

Independence day 2024
Independence day 2024


“ಏಕ್ ಪೇಡ್ ಮಾ ಕೆ ನಾಮ್” ಅಭಿಯಾನ

ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ, ರಕ್ಷಣಾ ಸಚಿವಾಲಯವು ‘ಏಕ್ ಪೇಡ್ ಮಾ ಕೆ ನಾಮ್’ ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನದ ಅಡಿಯಲ್ಲಿ ರಾಷ್ಟ್ರವ್ಯಾಪಿ ಮರ ನೆಡುವ ಅಭಿಯಾನವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Independence Day 2024: ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್‌ ಷಾ ಮೈದಾನ ಸಿದ್ಧ; ಪಾರ್ಕಿಂಗ್‌ ಮತ್ತಿತರ ವಿವರ ಇಲ್ಲಿದೆ

ಜೂನ್ 5ರಂದು ವಿಶ್ವ ಪರಿಸರ ದಿನದಂದು ಪ್ರಧಾನಿ ಮೋದಿ ಅವರು ಪ್ರಾರಂಭಿಸಿರುವ ಈ ಅಭಿಯಾನವು ಭಾರತದಾದ್ಯಂತ 1.5 ಕೋಟಿ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. ಈ ಪ್ರಯತ್ನವು ಮೂರು ಸಶಸ್ತ್ರ ಸೇವೆಗಳು ಮತ್ತು ಡಿಆರ್‌ಡಿಒ, ರಕ್ಷಣಾ ಪಿಎಸ್‌ಯುಗಳು, ಸಿಜಿಡಿಎ, ಎನ್‌ಸಿಸಿ, ಸೈನಿಕ ಶಾಲೆಗಳು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಗಳು ಸೇರಿದಂತೆ ವಿವಿಧ ಸಂಬಂಧಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

Continue Reading
Advertisement
Ashwini Ponnappa
ಪ್ರಮುಖ ಸುದ್ದಿ4 hours ago

Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

Sowmya Reddy
ರಾಜಕೀಯ4 hours ago

Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

Cricket News
ಪ್ರಮುಖ ಸುದ್ದಿ4 hours ago

Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

Koppala News
ಕೊಪ್ಪಳ4 hours ago

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

Koppala News
ಕರ್ನಾಟಕ5 hours ago

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Kannada New Movie
ಬೆಂಗಳೂರು5 hours ago

Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

Independence Day 2024
ದೇಶ5 hours ago

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Vinesh Phogat
ಪ್ರಮುಖ ಸುದ್ದಿ5 hours ago

Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

Cauvery Water Dispute
ಕರ್ನಾಟಕ5 hours ago

Cauvery Water Dispute: ಕಾವೇರಿ ನೀರು ನಿಗದಿಗಿಂತ ಹೆಚ್ಚು ಹರಿಸಿದರೂ ತಮಿಳುನಾಡು ಆಕ್ಷೇಪ!

Sheikh Hasina
ಪ್ರಮುಖ ಸುದ್ದಿ5 hours ago

Sheikh Hasina : ಬಾಂಗ್ಲಾದಿಂದ ಪಲಾಯನ ಮಾಡಿದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ಶೇಖ್​ ಹಸೀನಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌