Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ - Vistara News

ಪ್ರಮುಖ ಸುದ್ದಿ

Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

Paris Paralympics : ಆಂಧ್ರಪ್ರದೇಶದ ಅರ್ಷದ್ ಶೇಖ್ ಪ್ಯಾರಾ ಸೈಕ್ಲಿಂಗ್​​ನಲ್ಲಿ ಪ್ಯಾರಾಲಿಂಪಿಕ್ಸ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ರೋಡ್ ಪ್ಯಾರಾ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಪುರುಷರ ಎಲೈಟ್ ವೈಯಕ್ತಿಕ ಟೈಮ್ ಟ್ರಯಲ್ ಸಿ 2 ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅರ್ಷದ್ ಪ್ಯಾರಿಸ್​​ನಲ್ಲಿ ತಮ್ಮ ಕೋಟಾವನ್ನು ಭದ್ರಪಡಿಸಿಕೊಂಡಿದ್ದರು. ಅವರ ಸಾಧನೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ; ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯ ನ್​ಶಿಪ್​​ನಲ್ಲಿ ಸಿ 2 15 ಕಿ.ಮೀ ಸ್ಕ್ರಾಚ್ ಫೈನನ್​​ಲ್ಲಿ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ.

VISTARANEWS.COM


on

Paris Paralympics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್​​ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ (Paris Paralympics) ಭಾರತವು ಮೂರು ಹೊಸ ಕ್ರೀಡೆಗಳಲ್ಲಿ ಸ್ಪರ್ಧಿಸಲು ಸಜ್ಜಾಗಿದೆ, ಇದು ಜಾಗತಿಕ ಈವೆಂಟ್​ನಲ್ಲಿ ಭಾರತದ ಉಪಸ್ಥಿತಿಯ ಗಮನಾರ್ಹ ಬೆಳವಣಿಗೆಯಾಗಿದೆ. ಪ್ಯಾರಾ ಸೈಕ್ಲಿಂಗ್, ಪ್ಯಾರಾ ರೋಯಿಂಗ್ ಮತ್ತು ಅಂಧ ಜೂಡೋ ದಲ್ಲಿ ಭಾರತ ಈ ಬಾರಿ ಹೆಚ್ಚುವರಿಯಾಗಿ ಸ್ಪರ್ಧಿಸಲಿದೆ. ಹೀಗೆ ಭಾರತವು ಈಗ 12 ಕ್ರೀಡೆಗಳಲ್ಲಿ ಭಾಗವಹಿಸಲಿ. ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಬುಧವಾರ ಈ ಮಾಹಿತಿಯನ್ನು ಘೋಷಿಸಿದೆ.

ಆಂಧ್ರಪ್ರದೇಶದ ಅರ್ಷದ್ ಶೇಖ್ ಪ್ಯಾರಾ ಸೈಕ್ಲಿಂಗ್​​ನಲ್ಲಿ ಪ್ಯಾರಾಲಿಂಪಿಕ್ಸ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ರೋಡ್ ಪ್ಯಾರಾ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಪುರುಷರ ಎಲೈಟ್ ವೈಯಕ್ತಿಕ ಟೈಮ್ ಟ್ರಯಲ್ ಸಿ 2 ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅರ್ಷದ್ ಪ್ಯಾರಿಸ್​​ನಲ್ಲಿ ತಮ್ಮ ಕೋಟಾವನ್ನು ಭದ್ರಪಡಿಸಿಕೊಂಡಿದ್ದರು. ಅವರ ಸಾಧನೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ; ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯ ನ್​ಶಿಪ್​​ನಲ್ಲಿ ಸಿ 2 15 ಕಿ.ಮೀ ಸ್ಕ್ರಾಚ್ ಫೈನನ್​​ಲ್ಲಿ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಭಾರತೀಯ ಸೇನೆಯ ಮಾಜಿ ಸೈನಿಕ ಆಂಧ್ರಪ್ರದೇಶದ ಕೊಂಗನಪಲ್ಲಿ ನಾರಾಯಣ ಪ್ಯಾರಾ ರೋಯಿಂಗ್ ನಲ್ಲಿ ಸ್ಪರ್ಧಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲಬಾಂಬ್ ಸ್ಫೋಟದಿಂದಾಗಿ ನಾರಾಯಣ ಅವರು ತಮ್ಮ ಎಡಗಾಲನ್ನು ಮೊಣಕಾಲಿನ ಕೆಳಗೆ ಕಳೆದುಕೊಂಡರು. ಈ ಜೀವನವನ್ನು ಬದಲಾಯಿಸುವ ಗಾಯದ ಹೊರತಾಗಿಯೂ, ಅವರು ಅಪಾರ ದೃಢನಿಶ್ಚಯವನ್ನು ತೋರಿಸಿದ್ದಾರೆ. ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2022 ರ ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಅನಿತಾ ಅವರೊಂದಿಗೆ ಪಿಆರ್ 3 ಮಿಶ್ರ ಡಬಲ್ಸ್ ಸ್ಕ ಲ್​​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಅಂಧರ ಜೂಡೋದಲ್ಲಿ ಹರಿಯಾಣದ ಕೋಕಿಲಾ ಕೌಶಿಕ್ ಆಡಲಿದ್ದಾರೆ. ಚೀನಾದ ಗುವಾಂಗ್ಝೌನಲ್ಲಿ ನಡೆದ 2022 ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಜೂಡೋ ಮಹಿಳೆಯರ 48 ಕೆ.ಜಿ ಜೆ 2 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೃಷ್ಟಿ ವಿಕಲಚೇತನ ಪ್ಯಾರಾ-ಅಥ್ಲೀಟ್ ಕೋಕಿಲಾ ಪ್ಯಾರಾಲಿಂಪಿಕ್ಸ್ ಕೋಟಾ ಪಡೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ, ಅವರು 2019 ರಲ್ಲಿ ಕಾಮನ್ವೆಲ್ತ್ ಜೂಡೋ ಚಾಂಪಿಯನ್​ಶಿಪ್​ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಇದನ್ನೂ ಓದಿ: National Cricket Academy : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನೀರಜ್ ಚೋಪ್ರಾರಂಥ ಬೇರೆ ಕ್ರೀಡೆಯ ಅಥ್ಲೀಟ್​ಗಳು ಅಭ್ಯಾಸ ಮಾಡಬಹುದು

“ನಮ್ಮ ಪ್ಯಾರಾಲಿಂಪಿಕ್ಸ್ ಪಟ್ಟಿಗೆ ಮೂರು ಹೊಸ ಕ್ರೀಡೆಗಳ ಸೇರ್ಪಡೆಯು ನಮ್ಮ ಪ್ಯಾರಾಲಿಂಪಿಕ್ ಸಮುದಾಯದಲ್ಲಿ ಹೆಚ್ಚುತ್ತಿರುವ ಆಳ ಮತ್ತು ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ” ಎಂದು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

VVS Laxman : ಹಣ ತಂದುಕೊಡುವ ಐಪಿಎಲ್​ ಬಿಟ್ಟು ಬೇರೆ ಹಳೇ ಹುದ್ದೆಯನ್ನೇ ಅಪ್ಪಿಕೊಂಡ ವಿವಿಎಸ್​ ಲಕ್ಷ್ಮಣ್​

VVS Laxman :

VISTARANEWS.COM


on

VVS Laxman
Koo

ಬೆಂಗಳೂರು : ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯನ್ನು ಕನಿಷ್ಠ ಒಂದು ವರ್ಷ ವಿಸ್ತರಿಸಲು ಸಜ್ಜಾಗಿದ್ದಾರೆ ಎಂದು ಇಎಸ್​ಪಿಎನ್​ ಕ್ರಿಕ್ಇನ್ಫೋ ವರದಿ ಮಾಡಿದೆ. ಲಕ್ಷ್ಮಣ್ 2021 ರ ಡಿಸೆಂಬರ್​ನಲ್ಲಿ ಮೂರು ವರ್ಷಗಳ ಅವಧಿಗೆ ಎನ್ಸಿಎ ಮುಖ್ಯಸ್ಥರಾದರು. ಅವರ ಒಪ್ಪಂದವು ಈ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳಬೇಕಿತ್ತು. ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಲಕ್ಷ್ಮಣ್ ಅವರ ಸೇವೆಗಳನ್ನು ಪಡೆಯಲು ಎದುರು ನೋಡುತ್ತಿತ್ತು, ಆದರೆ ಎನ್​ಸಿಎ ಮುಖ್ಯಸ್ಥರಾಗಿ ಅವರು ಮಾಡಬೇಕಾಗಿರುವ ಕರ್ತವ್ಯಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಅವರು ಅಲ್ಲೇ ಮುಂದುವರಿಯಲು ಸಜ್ಜಾಗಿದ್ದಾರೆ.

ಶಿತಾಂಶು ಕೋಟಕ್, ಸಾಯಿರಾಜ್ ಬಹುತುಲೆ ಮತ್ತು ಹೃಷಿಕೇಶ್ ಕಾನಿಟ್ಕರ್ ಸೇರಿದಂತೆ ಭಾರತದ ಪ್ರಮುಖ ದೇಶೀಯ ಆಟಗಾರರು ಲಕ್ಷ್ಮಣ್ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಉದ್ಘಾಟನೆಗೂ ಮುನ್ನ ಲಕ್ಷ್ಮಣ್ ಅವರ ಅವಧಿ ವಿಸ್ತರಣೆಯಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಲಕ್ಷ್ಮಣ್ ಅವರು ಫೆಬ್ರವರಿ 2022 ರಲ್ಲಿ ಹೊಸ ಎನ್​ಸಿಎ ಸೌಲಭ್ಯಕ್ಕೆ ಅಡಿಪಾಯ ಹಾಕಿದ್ದರು. ಕರ್ನಾಟಕದ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿರುವ ಎನ್​ಸಿಎ ಪ್ರಸ್ತುತ ಕ್ಯಾಂಪಸ್ ಅನ್ನು ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಂಭಾವ್ಯ ಸದಸ್ಯರಾಗಿ ಗುರುತಿಸಲ್ಪಟ್ಟ ಯುವ ಕ್ರಿಕೆಟಿಗರಿಗೆ ತರಬೇತಿ ನೀಡಲು ಬಿಸಿಸಿಐನ ಕ್ರಿಕೆಟ್ ಸೌಲಭ್ಯವಾಗಿ 2000 ರಲ್ಲಿ ಸ್ಥಾಪಿಸಲಾಗಿತ್ತು.

ಆಟಗಾರರು ಗಾಯಕ್ಕೆ ಒಳಗಾದಾಗ ಇದನ್ನು ಪುನಶ್ಚೇತನಕ್ಕಾಗಿಯೂ ಬಳಸಲಾಗುತ್ತದೆ. ವಿವಿಎಸ್ ಲಕ್ಷ್ಮಣ್ ಪ್ರಸ್ತುತ ಎನ್ಸಿಎ ಮುಖ್ಯಸ್ಥರಾಗಿದ್ದಾರೆ. ಎನ್ಸಿಎ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಲಕ್ಷ್ಮಣ್ ತಮ್ಮ ಹಿಂದಿನ ರಾಹುಲ್ ದ್ರಾವಿಡ್ ರೂಪಿಸಿದ ವಿವಿಧ ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗಿರುವ ಭಾರತ ಎ ಪ್ರವಾಸ ಕಾರ್ಯಕ್ರಮದ ಸರಣಿಯನ್ನು ಮರುಸ್ಥಾಪಿಸುವುದು ಅವರಿಗೆ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ದ್ರಾವಿಡ್ ಅವರ ಆಡಳಿತದಲ್ಲಿ, ಭಾರತ ಎ ತಂಡದ ತವರು ಮತ್ತು ವಿದೇಶ ಪ್ರವಾಸಗಳು ಆಗಾಗ್ಗೆ ನಡೆಯುತ್ತಿದ್ದವು. ಇದು ರಾಷ್ಟ್ರೀಯ ತಂಡಕ್ಕೆ ಹೊಸ ಆಟಗಾರರನ್ನು ತಂದುಕೊಡುತ್ತಿತ್ತು.

ಇದನ್ನೂ ಓದಿ: Pro Kabaddi League : ತೆಲುಗು ಟೈಟನ್ಸ್ ತಂಡ ಸೇರಿಕೊಂಡ ಪವನ್ ಸೆಹ್ರಾವತ್​​; ಶಾಡ್ಲೋಯಿಗೆ 2.07 ಕೋಟಿ ರೂ.

ಲಕ್ಷ್ಮಣ್ 134 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. 225 ಇನ್ನಿಂಗ್ಸ್ಗಳಲ್ಲಿ 45.97 ಸರಾಸರಿಯಲ್ಲಿ 8,781 ರನ್ ಗಳಿಸಿದ್ದಾರೆ. ಅವರು ತಮ್ಮ ಬ್ಯಾಟ್​​ನಿಂದ ದ 17 ಶತಕಗಳು ಮತ್ತು 56 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಟೆಸ್ಟ್​​ ಸ್ವರೂಪದಲ್ಲಿ ಅವರ ಅತ್ಯುತ್ತಮ ಸ್ಕೋರ್ 281. 86 ಏಕದಿನ ಪಂದ್ಯಗಳನ್ನು ಆಡಿರುವ ಅವರು 30.76 ಸರಾಸರಿಯಲ್ಲಿ 2,338 ರನ್ ಗಳಿಸಿದ್ದಾರೆ. ಅವರು ಈ ಸ್ವರೂಪದಲ್ಲಿ ಆರು ಶತಕಗಳು ಮತ್ತು ಹತ್ತು ಅರ್ಧಶತಕಗಳನ್ನು ಗಳಿಸಿದ್ದಾರೆ. 131 ಅವರ ಅತ್ಯುತ್ತಮ ಸ್ಕೋರ್​.

Continue Reading

ಪ್ರಮುಖ ಸುದ್ದಿ

Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

Rahul Gandhi : ಕ್ಯಾಬಿನೆಟ್ ದರ್ಜೆಯನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರೋಟೋಕಾಲ್ ಹೇಳುತ್ತದೆ. ಈ ವರ್ಷ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್.ಜೈಶಂಕರ್ ಈ ಸಾಲಿನಲ್ಲಿದ್ದರು. ಆದರೆ, ರಾಹುಲ್ ಗಾಂಧಿಗೆ ಭಾರತೀಯ ಒಲಿಂಪಿಕ್ ಪದಕ ವಿಜೇತರ ಹಿಂದಿನ ಸೀಟು ನಿಗದಿ ಮಾಡಿದ್ದರು.

VISTARANEWS.COM


on

Rahul Gandhi
Koo

ಬೆಂಗಳೂರು: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಲೋಕ ಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಎರಡನೇ ಕೊನೆಯ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿದ್ದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಹೊಸ ಜಟಾಪಟಿ ಶುರುವಾಗಿದೆ. ಬೆಳಿಗ್ಗೆಯ ಸಮಾರಂಭ ಮುಗಿಯುವ ಮೊದಲು, ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರಿಂದ ಆಕ್ರೋಶದ ಪ್ರತಿಭಟನೆಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿದವು. ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ರಕ್ಷಣಾ ಸಚಿವಾಲಯವು ಕೊನೆಗೆ ಸ್ಪಷ್ಟೀಕರಣವನ್ನು ನೀಡಿತು. ಆದರೆ ಟೀಕೆಗಳು ಮುಂದುವರಿದವು.

ಕ್ಯಾಬಿನೆಟ್ ದರ್ಜೆಯನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರೋಟೋಕಾಲ್ ಹೇಳುತ್ತದೆ. ಈ ವರ್ಷ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್.ಜೈಶಂಕರ್ ಈ ಸಾಲಿನಲ್ಲಿದ್ದರು. ಆದರೆ, ರಾಹುಲ್ ಗಾಂಧಿಗೆ ಭಾರತೀಯ ಒಲಿಂಪಿಕ್ ಪದಕ ವಿಜೇತರ ಹಿಂದಿನ ಸೀಟು ನಿಗದಿ ಮಾಡಿದ್ದರು. ಭಾರತದ ಸ್ಟಾರ್ ಶೂಟರ್ ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್, ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಸೇರಿದಂತೆ ಹಾಕಿ ಆಟಗಾರರು ಅವರಿಗಿಂತ ಮುಂದೆ ಕುಳಿತಿದ್ದರು.

ಕಾರ್ಯಕ್ರಮಗಳಲ್ಲಿ ಆಸನ ವ್ಯವಸ್ಥೆ ಆದ್ಯತೆಯ ನಿಯಮ ಅನ್ನು ಅನುಸರಿಸುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. “ಈ ವರ್ಷ, ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರನ್ನು ಗೌರವಿಸಲು ನಿರ್ಧರಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರ ಹಿಂದೆ ಕೆಲವು ಕೇಂದ್ರ ಸಚಿವರು ಸಹ ಕುಳಿತಿದ್ದರು ಎಂಬುದನ್ನು ಗಮನಿಸಬಹುದು” ಎಂಬುದಾಗಿ ಬಿಜೆಪಿ ಸಮರ್ಥಿಸಿಕೊಂಡಿದೆ.

“ಒಲಿಂಪಿಯನ್​ಗಳ ಮೇಲಿನ ಗೌರವದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ರಕ್ಷಣಾ ಸಚಿವಾಲಯದ ದುರ್ಬಲ ವಿವರಣೆಯು ಸರಿಯಾಗಿಲ್ಲ. . ಒಲಿಂಪಿಯನ್​ಗಳು ಪ್ರತಿಯೊಂದು ಗೌರವಕ್ಕೂ ಅರ್ಹರಾಗಿದ್ದರೂ, ಅಮಿತ್ ಶಾ ಅಥವಾ ನಿರ್ಮಲಾ ಸೀತಾರಾಮನ್ ಅವರಂತಹ ಕ್ಯಾಬಿನೆಟ್ ಮಂತ್ರಿಗಳು ಅವರಿಗಿಂತ ಮುಂದೆ ಮುಂದಿನ ಸಾಲಿನ ಆಸನಗಳನ್ನು ಹೇಗೆ ಪಡೆಯುತ್ತಾರೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

ಪ್ರೋಟೋಕಾಲ್ ಪ್ರಕಾರ, ಉಭಯ ಸದನಗಳ ಪ್ರತಿಪಕ್ಷ ನಾಯಕರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು. ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಸನಗಳು 5 ನೇ ಸಾಲಿನಲ್ಲಿದ್ದವು. ಇದು ಹುದ್ದೆಗೆ ಮಾಡಿದ ಅವಮಾನ . ಇದು ಸಂಸತ್ತಿನಲ್ಲಿ ರಾಹುಲ್ ಜಿ ಪ್ರತಿನಿಧಿಸುವ ಭಾರತದ ಜನರಿಗೆ ಮಾಡಿದ ಅವಮಾನ ಎಂದು ವೇಣುಗೋಪಾಲ್ ಹೇಳಿದರು.

‘ನಾವು ಒಲಿಂಪಿಯನ್ ಗಳನ್ನು ಗೌರವಿಸಲು ಬಯಸಿದ್ದರಿಂದ ಈ ರೀತಿ ಮಾಡಲಾಗಿದೆ’ ಎಂದು ರಕ್ಷಣಾ ಸಚಿವಾಲಯದಿಂದ ತಪ್ಪು ಹೇಳಿಕೆ ಬಂದಿದೆ. ಅವರನ್ನು ಗೌರವಿಸಬೇಕು. ಆದರೆ ಅಮಿತ್ ಶಾ, ಜೆಪಿ ನಡ್ಡಾ, ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಅವರ ಮೇಲೆ ಗೌರವ ಇಲ್ಲವೇ ” ಎಂದು ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರವು ಆಗಿನ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮುಂದಿನ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿತ್ತು.

Continue Reading

ಪ್ರಮುಖ ಸುದ್ದಿ

Vinesh Phogat : ಕ್ರೀಡಾ ಕೋರ್ಟ್ ಅನರ್ಹತೆ ಬಳಿಕ ಚಿತ್ರ ಹಾಕಿ ಮೊದಲ ಪ್ರತಿಕ್ರಿಯೆ ನೀಡಿದ ವಿನೇಶ್ ಫೋಗಾಟ್​

Vinesh Phogat :

VISTARANEWS.COM


on

Vinesh Phogat
Koo

ನವದೆಹಲಿ: ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಿಂದ ಅನರ್ಹತೆ ಮತ್ತು ಜಂಟಿ ಬೆಳ್ಳಿ ಪದಕದ ಬೇಡಿಕೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (CAS) ಬುಧವಾರ ವಜಾಗೊಳಿಸಿತ್ತು. ಆ ಬಗ್ಗೆ ಗುರುವಾರ ವಿನೇಶ್​ ಫೋಗಟ್​ ಈ ಬಗ್ಗೆ ತಮ್ಮದೇ ಚಿತ್ರ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಮಹಿಳಾ ಫ್ರೀಸ್ಟೈಲ್ 50 ಕೆ.ಜಿ. ವಿಭಾಗದ ಫೈನಲ್​ಗೆ ಮೊದಲು ಅವರ ತೂಕದ ಹೆಚ್ಚಳದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.

ಸಿಎಎಸ್ ತೀರ್ಪಿನ ನಂತರ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 6ರಂದು ನಡೆದ ಮಹಿಳಾ ಫ್ರೀಸ್ಟೈಲ್ 50 ಕೆ.ಜಿ ಕುಸ್ತಿ ಪಂದ್ಯದ 16 ನೇ ಸುತ್ತಿನಲ್ಲಿ ಜಪಾನ್​​ನ ಯುಯಿ ಸುಸಾಕಿ ವಿರುದ್ಧ ಗೆಲುವು ಸಾಧಿಸಿದಾಗ ತಾವು ತೋರಿದ ಪ್ರತಿಕ್ರಿಯೆಯನ್ನು ಫೋಟೋವನ್ನು ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ, ವಿನೇಶ್​ ತಮ್ಮ ಮುಖದ ಮೇಲೆ ಅಂಗೈಗಳನ್ನು ಇಟ್ಟುಕೊಂಡು ಕುಸ್ತಿ ಮ್ಯಾಟ್​ ಮೇಲೆ ಮಲಗಿ ಸಂಭ್ರಮಿಸುತ್ತಿದ್ದಾರೆ. ಅವರು ತಮ್ಮ ಚಿತ್ರಕ್ಕೆ ಪೂರಕವಾಗಿ ಭಾವನಾತ್ಮಕ ಬಿ ಪ್ರಾಕ್ ಹಾಡು ‘ರಬ್ಬಾ ವೆ’ಯ ಜತೆಗೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ. ಫೋಟೋ ಹಾಕಿದ ತಕ್ಷಣ ಅವರಿಗೆ ಕಾಮೆಂಟ್​ಗಳು ಬರಲಾರಂಭಿಸಿವೆ. ಅನೇಕರು ಅವರನ್ನು “ಚಾಂಪಿಯನ್” ಮತ್ತು “ಗೋಲ್ಡನ್ ಗರ್ಲ್” ಎಂದು ಕರೆದಿದ್ದಾರೆ.

ಫೋಗಟ್ ಮೇಲ್ಮನವಿ

ಕಳೆದ ವಾರ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್​ ವೇಳೆ ತೂಕ ಇಳಿಸಲು ವಿಫಲವಾದ ಕಾರಣ ಪ್ಯಾರಿಸ್ ಒಲಿಂಪಿಕ್ಸ್​​ನ ಆಯೋಜಕರು ವಿಧಿಸಿದ ಅನರ್ಹತೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ವಜಾಗೊಳಿಸಿದೆ.

ಆಗಸ್ಟ್ 7 ರಂದು ಚಿನ್ನದ ಪದಕಕ್ಕಾಗಿ ಫೋಗಟ್ ಅಮೆರಿಕದ ಸಾರಾ ಹಿಲ್ಡೆಬ್ರಾಂಟ್ ಅವರನ್ನು ಎದುರಿಸಲು ಸಜ್ಜಾಗಿದ್ದರು ಆದರೆ ಹಸಿವಿನಿಂದ ಬಳಲುತ್ತಿದ್ದರೂ ಮತ್ತು ಹಿಂದಿನ ರಾತ್ರಿ ಸೌನಾದಲ್ಲಿ ಗಂಟೆಗಳ ಕಾಲ ಕಳೆದರೂ 100 ಗ್ರಾಂ (3.5 ಔನ್ಸ್) ಅಧಿಕ ತೂಕ ಹೊಂದಿರುವುದು ಕಂಡುಬಂದಿತ್ತು. ಅನರ್ಹತೆಯಿಂದಾಗಿ ಫೋಗಟ್ ಪದಕ ಕಳೆದುಕೊಂಡಿದ್ದರು. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮಾಡಿರುವ ನಿಯಮವನ್ನು ಪ್ರಶ್ನಿಸಿ ಅವರು ಕ್ರೀಡೆಯ ಅತ್ಯುನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

ಫೋಗಟ್ ಅವರು ಆಗಸ್ಟ್ 8 ರಂದು ಕ್ರೀಡೆಯಿಂದ ನಿವೃತ್ತರಾಗುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಹಿಂದಿಯಲ್ಲಿ ಬರೆಯಲಾದ ಪೋಸ್ಟ್​​ನ ಭಾಷಾಂತರ ಹೀಗಿದೆ: “ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್​ಬೈ ಕುಸ್ತಿ, 2001-2024.” ಎಂದು ಅವರು ಬರೆದುಕೊಂಡಿದ್ದರು.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಒಟ್ಟು ಆರು ಪದಕಗಳನ್ನು ಗೆದ್ದಿದೆ.

Continue Reading

ಪ್ರಮುಖ ಸುದ್ದಿ

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Gold Rate : ಜುಲೈನಲ್ಲಿ ಆಮದು ಪ್ರಮಾಣ ಶೇ.10.65ರಷ್ಟು ಇಳಿಕೆಯಾಗಿದ್ದು, 2 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಒಳಬರುವ ಚಿನ್ನದ ಪ್ರಮಾಣವು ಜೂನ್ (-38.66%) ಮತ್ತು ಮೇ (-9.76%) ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿತ್ತು. ಏಪ್ರಿಲ್​​ನಲ್ಲಿ ಆಮದು 2.61 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಇದು 2023 ರ ಏಪ್ರಿಲ್​​ನಲ್ಲಿ 86 ಸಾವಿರ ಕೋಟಿ ರೂಪಾಯಿ ಆಗಿತ್ತು.

VISTARANEWS.COM


on

Gold Rate
Koo

ಬೆಂಗಳೂರು: ದೇಶದ ವಿತ್ತೀಯ ಕೊರತೆ (ಸಿಎಡಿ) ಮೇಲೆ ಪರಿಣಾಮ ಬೀರುವಂಥ ಭಾರತದ ಚಿನ್ನದ (Gold Rate) ಆಮದು 2024-25ರ ಏಪ್ರಿಲ್-ಜುಲೈ ಅವಧಿಯಲ್ಲಿ 4.23% ರಷ್ಟು ಇಳಿದು 10 ಲಕ್ಷ ಕೋಟಿ ರೂಪಾಯಿಗೆ ನಿಂತಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. 2023ರ ಏಪ್ರಿಲ್-ಜುಲೈನಲ್ಲಿ ಆಮದು 11 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಜುಲೈನಲ್ಲಿ ಆಮದು ಪ್ರಮಾಣ ಶೇ.1.06ರಷ್ಟು ಇಳಿಕೆಯಾಗಿದ್ದು, 2 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಒಳಬರುವ ಚಿನ್ನದ ಪ್ರಮಾಣವು ಜೂನ್ (-38.66%) ಮತ್ತು ಮೇ (-9.76%) ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿತ್ತು. ಏಪ್ರಿಲ್​​ನಲ್ಲಿ ಆಮದು 61 ಸಾವಿರ ಕೋಟಿ ರೂಪಾಯಿಯಷ್ಟಿತ್ತು. ಇದು 2023 ರ ಏಪ್ರಿಲ್​​ನಲ್ಲಿ 86 ಸಾವಿರ ಕೋಟಿ ರೂಪಾಯಿ ಆಗಿತ್ತು.

ಆಭರಣ ವ್ಯಾಪಾರಿಯೊಬ್ಬರ ಪ್ರಕಾರ, ಬೆಲೆ ಏರಿಕೆಯು ಆಮದು ಕಡಿಮೆ ಮಾಡುತ್ತದೆ. ಆದರೆ ಭಾರತದಲ್ಲಿ ಹಬ್ಬದ ಋತುವು ಪ್ರಾರಂಭವಾಗುವುದರಿಂದ ಮತ್ತು ಆಮದು ಸುಂಕ ಕಡಿತದ ಪ್ರಯೋಜನವೂ ಇರುವುದರಿಂದ ಸೆಪ್ಟೆಂಬರ್ ನಿಂದ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಇಳಿಸಲಾಗಿದ್ದು ಇದರ ಪ್ರಯೋಜನ ಮಾರುಕಟ್ಟೆ ಮೇಲೆ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡಿದ್ದು ಆಗಸ್ಟ್ 14ರಂದು ಡೆಲ್ಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 300 ರೂ.ಏರಿಕೆಯಾಗಿದ್ದು ಒಟ್ಟು 73,150 ರೂಪಾಯಿಗೆ ತಲುಪಿದೆ. 2023-24ರಲ್ಲಿ ಭಾರತದ ಚಿನ್ನದ ಆಮದು ಶೇ.30ರಷ್ಟು ಏರಿಕೆಯಾಗಿ 3.8 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.

ಸ್ವಿಟ್ಜರ್ಲೆಂಡ್ ಚಿನ್ನದ ಆಮದಿನ ಅತಿದೊಡ್ಡ ಮೂಲವಾಗಿದ್ದು, ಸುಮಾರು 40% ಪಾಲನ್ನು ಹೊಂದಿದೆ. ನಂತರ ಯುಎಇ (16% ಕ್ಕಿಂತ ಹೆಚ್ಚು) ಮತ್ತು ದಕ್ಷಿಣ ಆಫ್ರಿಕಾ (ಸುಮಾರು 10%). ರಷ್ಟು ಚಿನ್ನವನ್ನು ಭಾರತಕ್ಕೆ ರಫ್ತು ಮಾಡುತ್ತದೆ. ದೇಶದ ಒಟ್ಟು ಆಮದಿನಲ್ಲಿ ಈ ಚಿನ್ನದ ಪಾಲು ಶೇ.5ರಷ್ಟಿದೆ.

ಚಿನ್ನದ ಆಮದಿನಲ್ಲಿ ಕುಸಿತದ ಹೊರತಾಗಿಯೂ, ದೇಶದ ವ್ಯಾಪಾರ ಕೊರತೆ (ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ) ಜುಲೈನಲ್ಲಿ 23.5 ಬಿಲಿಯನ್ ಡಾಲರ್ ಮತ್ತು ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 85.58 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಬಳಕೆದಾರ ರಾಷ್ಟ್ರವಾಗಿದೆ. ಆಮದುಗಳು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ನೋಡಿಕೊಳ್ಳುತ್ತವೆ.

ಇದನ್ನೂ ಓದಿ: Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

ಈ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ರತ್ನ ಮತ್ತು ಆಭರಣ ರಫ್ತು ಶೇಕಡಾ 7.45 ರಷ್ಟು ಕುಗ್ಗಿದ್ದು, 9.1 ಬಿಲಿಯನ್ ಡಾಲರ್​ಗೆ ತಲುಪಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಭಾರತವು 5.7 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ 0.6% ವಿತ್ತೀಯ ಕೊರತೆಯನ್ನು ದಾಖಲಿಸಿದೆ. 2024ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು 23.2 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ 0.7% ಕ್ಕೆ ಇಳಿದಿದೆ.

ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶವು ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳು ಮತ್ತು ಇತರ ಪಾವತಿಗಳ ಮೌಲ್ಯವು ಸರಕು ಮತ್ತು ಸೇವೆಗಳ ರಫ್ತು ಮತ್ತು ಆಮದಿನ ಮೌಲ್ಯವನ್ನು ಮೀರಿದಾಗ ವಿತ್ತೀಯ ಕೊರತೆ ಉಂಟಾಗುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಬೆಳ್ಳಿ ಆಮದು 2024 ರ ಏಪ್ರಿಲ್-ಜುಲೈ ಅವಧಿಯಲ್ಲಿ 648.44 ಮಿಲಿಯನ್ ಡಾಲರ್​ಗೆ ಏರಿದೆ.

Continue Reading
Advertisement
VVS Laxman
ಪ್ರಮುಖ ಸುದ್ದಿ22 mins ago

VVS Laxman : ಹಣ ತಂದುಕೊಡುವ ಐಪಿಎಲ್​ ಬಿಟ್ಟು ಬೇರೆ ಹಳೇ ಹುದ್ದೆಯನ್ನೇ ಅಪ್ಪಿಕೊಂಡ ವಿವಿಎಸ್​ ಲಕ್ಷ್ಮಣ್​

Independence Day 2024
ಬೆಂಗಳೂರು2 hours ago

Independence Day 2024: ಬಲಿಷ್ಠ ಭಾರತೀಯ ಸೇನೆ ಎದುರು ಯಾವ ಶತ್ರುವೂ ನಿಲ್ಲಲಾರ: ಕರ್ನಲ್‌ ವೆಂಕಟೇಶ್‌ ನಾಯಕ್

Independence Day 2024
ಬೆಂಗಳೂರು2 hours ago

Independence Day 2024: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ತಿರಂಗಾ ರ‍್ಯಾಲಿ

Rahul Gandhi
ಪ್ರಮುಖ ಸುದ್ದಿ2 hours ago

Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

Pro Kabaddi League
ಕ್ರೀಡೆ2 hours ago

Pro Kabaddi League : ತೆಲುಗು ಟೈಟನ್ಸ್ ತಂಡ ಸೇರಿಕೊಂಡ ಪವನ್ ಸೆಹ್ರಾವತ್​​; ಶಾಡ್ಲೋಯಿಗೆ 2.07 ಕೋಟಿ ರೂ.

Electric Shock
ಕರ್ನಾಟಕ3 hours ago

Electric Shock: ದಾವಣಗೆರೆ ಬಳಿ ವಿದ್ಯುತ್ ತಗುಲಿ ದಂಪತಿ ದುರ್ಮರಣ

Vinesh Phogat
ಪ್ರಮುಖ ಸುದ್ದಿ3 hours ago

Vinesh Phogat : ಕ್ರೀಡಾ ಕೋರ್ಟ್ ಅನರ್ಹತೆ ಬಳಿಕ ಚಿತ್ರ ಹಾಕಿ ಮೊದಲ ಪ್ರತಿಕ್ರಿಯೆ ನೀಡಿದ ವಿನೇಶ್ ಫೋಗಾಟ್​

Bengaluru Roads
ಕರ್ನಾಟಕ4 hours ago

Bengaluru Roads: ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸಚಿವ ಮನವಿ; ದರಿದ್ರ ನಾಲಾಯಕ್‌ ಸರ್ಕಾರ ಎಂದ ಅಶೋಕ್!

Wildlife
ಪರಿಸರ4 hours ago

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Karnataka Rain
ಮಳೆ4 hours ago

Karnataka Rain: ಗಂಗಾವತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಭತ್ತದ ಗದ್ದೆಗಳಿಗೆ ಹಾನಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌