World Mosquito Day: ಸೊಳ್ಳೆಗಳಿಗೂ ಒಂದು ದಿನ! ಇವುಗಳ ಕುರಿತ 7 ಸುಳ್ಳುಗಳಿಗೆ ಇಲ್ಲಿದೆ ಉತ್ತರ! - Vistara News

ಆರೋಗ್ಯ

World Mosquito Day: ಸೊಳ್ಳೆಗಳಿಗೂ ಒಂದು ದಿನ! ಇವುಗಳ ಕುರಿತ 7 ಸುಳ್ಳುಗಳಿಗೆ ಇಲ್ಲಿದೆ ಉತ್ತರ!

World Mosquito Day: ಸೊಳ್ಳೆಗಳು ನಮಗೆಲ್ಲರಿಗೂ ಗೊತ್ತಿವೆ. ಆದರೆ ಅವುಗಳ ಬಗೆಗಿನ ಕೆಲವು ಮಿಥ್ಯೆಗಳು ನಮ್ಮ ಸುತ್ತ ಹರಡಿವೆ ಎಂಬುದು ನಮಗೆ ಗೊತ್ತಿಲ್ಲ. ವಿಶ್ವ ಸೊಳ್ಳೆ ದಿನದ (ಆಗಸ್ಟ್‌ 20) ನೆಪದಲ್ಲಿ ಈ ಸಣ್ಣ ಜೀವಿಗಳ ಬಗೆಗಿನ ಕೆಲವು ತಪ್ಪು ಕಲ್ಪನೆಗಳನ್ನು ದೂರ ಮಾಡುವ ಹೆಚ್ಚುವರಿ ಮಾಹಿತಿಗಳು ಇಲ್ಲಿವೆ.

VISTARANEWS.COM


on

Mosquitoes Bite
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ವಿಶ್ವ ಸೊಳ್ಳೆ ದಿನ. ಹಾಗೆ ನೋಡಿದರೆ, ವರ್ಷದ ಅಷ್ಟೂ ದಿನವೂ ಸೊಳ್ಳೆ ದಿನವೇ (World Mosquito Day) ಎಂಬಂತಾಗಿದೆ! ಮಲೇರಿಯ ಮತ್ತು ಸೊಳ್ಳೆಯ ನಡುವಣ ನಂಟನ್ನು ಪತ್ತೆ ಹಚ್ಚಿ, ಮಾರಕ ಮಲೇರಿಯ ನಿಯಂತ್ರಣಕ್ಕೆ ಬುನಾದಿ ಹಾಕಿದ ಸರ್‌ ರೊನಾಲ್ಡ್‌ ರಾಸ್‌ ಅವರ ಸಂಶೋಧನೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಣ್ಣ ಜೀವಿಗಳೆಂದು ಉಪೇಕ್ಷೆ ಮಾಡದೆ, ಅವುಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರಿಂದ ಬಹಳಷ್ಟು ರೀತಿಯ ರೋಗಗಳನ್ನು ಮಟ್ಟ ಹಾಕಬಹುದೆಂಬುದು ನಮಗೆಂದೋ ಅರಿವಾಗಿದೆ. ಆದರೂ, ಸೊಳ್ಳೆಗಳ ಸುತ್ತಮುತ್ತ ಹಲವು ರೀತಿಯ ಮಿಥ್ಯೆಗಳು, ತಪ್ಪು ಕಲ್ಪನೆಗಳು ಹೆಣೆದುಕೊಂಡಿವೆ. ಇದರಿಂದ ರೋಗ ನಿಯಂತ್ರಣಕ್ಕೆ ತೊಡಕಾಗಬಹುದು. ಈ ಹಿನ್ನೆಲೆಯಲ್ಲಿ, ಸೊಳ್ಳೆಗಳ ಸುತ್ತಲಿನ ಸುಳ್ಳಿನ ಬಲೆಯನ್ನು ತೆಗೆಯೋಣ.

Home Remedies For Mosquito Bite

ಎಲ್ಲಾ ಸೊಳ್ಳೆಗಳೂ ಮನುಷ್ಯರಿಗೆ ಕಚ್ಚುತ್ತವೆ?

ಇಲ್ಲ. ಸೊಳ್ಳೆಗಳಲ್ಲಿ 3,500 ಜಾತಿಗಳಿದ್ದು, ಅವುಗಳಲ್ಲಿ ಕೆಲವು ಮಾತ್ರವೇ ಮಾನವರಿಗೆ ಕಚ್ಚುತ್ತವೆ. ಕೆಲವು ಜಾತಿಯ ಸೊಳ್ಳೆಗಳು ಪ್ರಾಣಿಗಳ ರಕ್ತವನ್ನು ಹೀರುತ್ತವೆ. ಬಹಳಷ್ಟು ಜಾತಿಯ ಸೊಳ್ಳೆಗಳು, ಅದರಲ್ಲೂ ಗಂಡು ಸೊಳ್ಳೆಗಳು ಹೂವು-ಗಿಡಗಳ ರಸಗಳನ್ನು ಹೀರಿ ಬದುಕುತ್ತವೆ. ತಮ್ಮ ಮೊಟ್ಟೆಗಳ ಬೆಳವಣಿಗೆಗೆ ಬೇಕು ಎನ್ನುವ ಕಾರಣಕ್ಕಾಗಿ ಹೆಣ್ಣು ಸೊಳ್ಳೆಗಳು ಮಾತ್ರ ಮಾನವರ ರಕ್ತವನ್ನು ಹೀರುವಂಥವು!

ಸೊಳ್ಳೆಗಳು ಬೆವರಿನತ್ತ ಆಕರ್ಷಿತವಾಗುತ್ತವೆ?

ಕೆಲವರಿಗೆ ಮಾತ್ರವೇ ಸೊಳ್ಳೆಗಳು ಕಚ್ಚುವುದು ಹೆಚ್ಚು, ಹಾಗಾಗಿ ಅವರ ಬೆವರಿನ ವಾಸನೆಗೆ ಸೊಳ್ಳೆಗಳು ಹತ್ತಿರ ಬರುತ್ತವೆ ಎಂಬ ಭಾವನೆಗಳು ಪ್ರಚಲಿತವಿದೆ. ನಿಜವೆಂದರೆ, ಆ ಕೆಲವರಿಗೆ ಸೊಳ್ಳೆ ಕಚ್ಚುವುದಿಲ್ಲ ಎಂದಲ್ಲ, ಕಚ್ಚುವುದು ತಿಳಿಯುವುದಿಲ್ಲ! ಬೆವರಿನಲ್ಲಿರುವ ರಾಸಾಯನಿಕಗಳು ಸೊಳ್ಳೆಗಳನ್ನು ಆಕರ್ಷಿಸುವುದಕ್ಕಿಂತಲೂ, ಮಾನವರು ಉಸಿರಿನಲ್ಲಿ ಬಿಡುವ ಇಂಗಾಲದ ಡೈ ಆಕ್ಸೈಡ್‌ ಮತ್ತು ಶರೀರದ ಉಷ್ಣತೆಯತ್ತ ಸೊಳ್ಳೆಗಳು ಸೆಳೆಯಲ್ಪಡುತ್ತವೆ. ಚೆನ್ನಾಗಿ ಬೆವರಿದಾಗ ದೇಹದ ಶಾಖವೂ ಹೆಚ್ಚುವುದು ಹೌದಲ್ಲವೇ? ಹಾಗಾಗಿ ಬೆವರೇ ಸೊಳ್ಳೆಗಳನ್ನು ಕರೆಯುತ್ತದೆಂಬ ಭಾವ ಬರಬಹುದು.

Alternative Of Mosquito Repellents

ಸೊಳ್ಳೆಗಳಿಗೆ ಎಚ್ಚರವಾಗುವುದು ರಾತ್ರಿ ಮಾತ್ರ?

ಸೊಳ್ಳೆಗಳೇನು ನಿಶಾಚರಿಗಳಲ್ಲ. ಆದರೆ ಕೆಲವು ಜಾತಿಯ ಸೊಳ್ಳೆಗಳು, ಮುಸ್ಸಂಜೆ ಮತ್ತು ನಸುಕಿನಲ್ಲಿ ಹೆಚ್ಚು ಚುರುಕಾಗುತ್ತವೆ ಎಂಬುದು ನಿಜ. ಹೆಚ್ಚಿನ ಜಾತಿಯ ಸೊಳ್ಳೆಗಳು ಹಗಲು ಹೊತ್ತೇ ರಕ್ತ ಹೀರಲು ಬರುತ್ತವೆ. ಈಗ ಪ್ರಚಲಿತವಿರುವ ಡೆಂಗು, ಜಿಕಾ ಮುಂತಾದ ರೋಗ ತರುವ ಸೊಳ್ಳೆಗಳು ಕಚ್ಚುವುದು ಹಗಲಿನಲ್ಲೇ ಅಧಿಕ. ಹಾಗಾಗಿ ಹಗಲು- ರಾತ್ರಿ ಎಂಬ ವ್ಯತ್ಯಾಸವಿಲ್ಲದೆ, ಸೊಳ್ಳೆಗಳು ಯಾವಾಗ ಬೇಕಿದ್ದರೂ ಕಚ್ಚಬಹುದು.

ಇವು ಉಷ್ಣವಲಯದಲ್ಲಿ ಮಾತ್ರ ಜೀವಿಸುವಂಥವೆ?

ಸೊಳ್ಳೆಗಳು ಉಷ್ಣ ಮತ್ತು ಸಮಶೀತೋಷ್ಣ ವಲಯಗಳಿಗೆ ಗುತ್ತಿಗೆಗೆ ಹೋದವಲ್ಲ! ಅವು ಯಾವುದೇ ಹವಾಮಾನದಲ್ಲೂ ಬದುಕಬಲ್ಲವು, ಬದುಕುತ್ತವೆ ಮತ್ತು ಕಚ್ಚುತ್ತವೆ. ಅವು ಹಲವರು ರೀತಿಯ ವಾತಾವರಣಗಳಿಗೆ ಹೊಂದಿಕೊಳ್ಳಬಲ್ಲವು. ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಇವು ಹೆಚ್ಚು ಮತ್ತು ಸೊಳ್ಳೆಗಳಿಂದ ಉಂಟಾಗುವ ರೋಗಗಳು ಸಹ ಹೆಚ್ಚು ಎಂಬುದು ನಿಜವಾದರೂ, ಜಿಕಾ ಮತ್ತು ವೆಸ್ಟ್‌ ನೈಲ್‌ ಜ್ವರಗಳು ಯುರೋಪ್‌ ಮತ್ತು ಉತ್ತರ ಅಮೇರಿಕದ ಹಲವು ಭಾಗಗಳಲ್ಲಿವೆ.

Mosquitoes Bite

ಬಟ್ಟೆಯ ಮೇಲೂ ಸೊಳ್ಳೆಗಳು ಕಚ್ಚುತ್ತವೆಯೇ?

ಇದು ಅರ್ಧ ಸತ್ಯ. ಸೊಳ್ಳೆಗಳು ಹೆಚ್ಚಾಗಿ ಅರಸುವುದು ಚರ್ಮದ ಭಾಗವನ್ನೇ. ಕೆಲವೊಮ್ಮೆ ತೆಳ್ಳಗಿನ ವಸ್ತ್ರಗಳ ಮೇಲೂ ಕಚ್ಚಬಹುದು. ಅದಿಲ್ಲದಿದ್ದರೆ, ತೀರಾ ಬಿಗಿಯಾದ ಉಡುಪಿನ ಮೇಲೆ ಕಚ್ಚಬಹುದು. ಆದರೆ ದಪ್ಪನೆಯ ಮತ್ತು ಸಡಿಲವಾದ ವಸ್ತ್ರಗಳ ಮೇಲೆ ಕುಳಿತು ಕಚ್ಚುವುದಕ್ಕೆ ಅವುಗಳಿಗೆ ಆಗದು. ಹಾಗಾಗಿ ಸೊಳ್ಳೆ ಇರುವಲ್ಲಿ ಉದ್ದವಾದ ದಪ್ಪನೆಯ ವಸ್ತ್ರಗಳನ್ನು ಮೈ ತುಂಬಾ ಧರಿಸುವುದರಿಂದ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.

ಕೆಲವು ಆಹಾರಗಳನ್ನು ತಿನ್ನುವುದರಿಂದ ಸೊಳ್ಳೆ ಹತ್ತಿರ ಬರುವುದಿಲ್ಲ?

ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು ಮುಂತಾದ ಯಾವ್ಯಾವುದೋ ಆಹಾರಗಳನ್ನು ತಿನ್ನುವುದರಿಂದ ಸೊಳ್ಳೆಗಳು ಹತ್ತಿರ ಬರುವುದಿಲ್ಲ ಎಂಬುದು ನಿಜವಲ್ಲ. ಇಂಥ ಕೆಲವು ಆಹಾರಗಳನ್ನು ತಿನ್ನುವುದರಿಂದ ನೈಸರ್ಗಿಕ ತನುಗಂಧ ಬದಲಾಗುವುದು ನಿಜ. ಆದರೆ ಇದರಿಂದ ಸೊಳ್ಳೆಗಳನ್ನ ಹತ್ತಿರಕ್ಕೆ ಬಾರದಂತೆ ಓಡಿಸಬಹುದು ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಇಂಥ ಪ್ರಯೋಗಗಳನ್ನು ಮಾಡಿ ಸೊಳ್ಳೆ ಕಚ್ಚಿಸಿಕೊಳ್ಳುವ ಬದಲು, ಒಳ್ಳೆಯ ರಿಪೆಲ್ಲೆಂಟ್‌ ಬಳಸಿ.

ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ಸೊಳ್ಳೆಗಳು ಎಲ್ಲಾ ರೋಗಗಳನ್ನೂ ಹರಡುತ್ತವೆಯೆ?

ಇಲ್ಲ, ದೇಹದಲ್ಲಿ ಯಾವುದೇ ವೈರಸ್‌ ಇದ್ದರೂ ಆ ಸೋಂಕನ್ನೆಲ್ಲ ಸೊಳ್ಳೆಗಳು ಇತರರಿಗೆ ಹರಡುವುದಿಲ್ಲ. ಕೆಲವು ವೈರಸ್‌ಗಳ ಸೋಂಕನ್ನು ಮಾತ್ರವೇ ಸೊಳ್ಳೆಗಳು ಒಬ್ಬರಿಂದೊಬ್ಬರಿಗೆ ಹರಡಬಲ್ಲವು. ಮಲೇರಿಯ, ಡೆಂಗು, ಚಿಕುನ್‌ಗುನ್ಯ, ಜಿಕಾ ಮುಂತಾದ ವೈರಸ್‌ಗಳನ್ನು ಮಾತ್ರವೇ ಹರಡಬಲ್ಲವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

World Senior Citizens Day: ವಿಶ್ವ ಹಿರಿಯ ನಾಗರಿಕರ ದಿನದ ಪ್ರಯುಕ್ತ ವೈದ್ಯರಿಂದ ಉಚಿತ ಸಮಾಲೋಚನೆ

ವಿಶ್ವ ಹಿರಿಯ ನಾಗರಿಕರ ದಿನದ (World Senior Citizens Day) ಪ್ರಯುಕ್ತ ಹಿರಿಯರ ಆರೋಗ್ಯದ ಬಗೆಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಆಗಸ್ಟ್‌ 21ರಂದು ಬೆಂಗಳೂರಿನ ವಾಸವಿ ಆಸ್ಪತ್ರೆಯು ವಿಶೇಷವಾದ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

World Senior Citizens Day
ಸಾಂದರ್ಭಿಕ ಚಿತ್ರ.
Koo

ಬೆಂಗಳೂರು: ವಿಶ್ವ ಹಿರಿಯ ನಾಗರಿಕರ ದಿನದ (World Senior Citizens Day) ಪ್ರಯುಕ್ತ ಹಿರಿಯರ ಆರೋಗ್ಯದ ಬಗೆಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಆಗಸ್ಟ್‌ 21 ರಂದು ವಾಸವಿ ಆಸ್ಪತ್ರೆಯು ವಿಶೇಷವಾದ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿ ವರ್ಷ ಆಗಸ್ಟ್‌ 21 ಅನ್ನು ವಿಶ್ವ ನಾಗರಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಅನುಭವಿ ವೈದ್ಯರಿಂದ ಉಚಿತ ಸಮಾಲೋಚನೆ, ಲ್ಯಾಬ್‌ ಪರೀಕ್ಷೆಯಲ್ಲಿ ಶೇ.20ರಷ್ಟು ರಿಯಾಯಿತಿ ಮತ್ತು ರೇಡಿಯಾಲಜಿ ಸೇವೆಗಳಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Kannada New Movie: ʼಲಂಗೋಟಿ ಮ್ಯಾನ್ʼ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ನಟ ಶರಣ್

58 ವರ್ಷ ಮೇಲ್ಪಟ್ಟ ಹಿರಿಯರು ಈ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ವಯೋಮಿತಿಯನ್ನು ದೃಢಪಡಿಸುವ ಯಾವುದೇ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ವಾಸವಿ ಆಸ್ಪತ್ರೆಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದು.

ಇದನ್ನೂ ಓದಿ: Kannada New Movie: ಮಧುಸೂದನ್ ಹವಾಲ್ದಾರ್ ನಿರ್ದೇಶನದ ʼಕಾಖಂಡಕಿ ಶ್ರೀ ಮಹಿಪತಿದಾಸರುʼ ಚಿತ್ರದ ಹಾಡುಗಳ ಅನಾವರಣ

ನಗರದ ವಾಸವಿ ಆಸ್ಪತ್ರೆಯು ನುರಿತ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಅಲ್ಲದೆ ಹಿರಿಯ ನಾಗರಿಕರ ಆರೋಗ್ಯದ ಕಾಳಜಿಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ.ಸಂಖೈ: 080 71500500/504 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಆರೋಗ್ಯ

Use Of Paneer Water: ಪನೀರ್‌ ಮಾಡುವಾಗ ಉಳಿದ ನೀರನ್ನು ಚೆಲ್ಲಬೇಡಿ; ಹೀಗೆ ಬಳಸಿ ಪೋಷಕಾಂಶ ಪಡೆಯಿರಿ!

Use Of Paneer Water: ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸುಲಭವಾಗಿ ದಕ್ಕಬಹುದಾದ ಆಯ್ಕೆಗಳ ಪೈಕಿ ಪನೀರ್‌ ಕೂಡ ಒಂದು. ಇಷ್ಟಪಟ್ಟು ತಿನ್ನಬಹುದಾದ ಈ ಪನೀರ್‌ ಅನ್ನು ಕೆಲವರು ಮನೆಯಲ್ಲೇ ಮಾಡಿಕೊಂಡು ತಿಂದರೆ, ಇನ್ನೂ ಕೆಲವರು ಹೊರಗಿನಿಂದ ನೇರವಾಗಿ ಖರೀದಿಸಿ ತರುವುದು ಸಾಮಾನ್ಯ. ಪ್ಯಾಕೆಟ್ಟುಗಳಲ್ಲಿ ಅಥವಾ ಡೈರಿಗಳಲ್ಲಿ ತಾಜಾ ಪನೀರ್‌ ಕೂಡ ಇಂದು ಲಭ್ಯ ಇವೆ. ಪನೀರ್‌ ಮಾಡುವಾಗ ಉಳಿದ ನೀರನ್ನು ಸಮರ್ಥವಾಗಿ ಬಳಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Paneer test
Koo

ಪನೀರ್‌ ಎಂಬ ಪ್ರೊಟೀನ್‌ಯುಕ್ತ ಆಹಾರ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಉಪಯೋಗಿಸಿರುತ್ತೀರಿ. ತೂಕ ಇಳಿಸುವ, ಫಿಟ್‌ನೆಸ್‌ ಪ್ರಿಯರ ಮನೆಗಳಲ್ಲಂತೂ ಪನೀರ್‌ ಖಂಡಿತ ಇದ್ದೇ ಇರುತ್ತದೆ. ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸುಲಭವಾಗಿ ದಕ್ಕಬಹುದಾದ ಆಕೆಗಳ ಪೈಕಿ ಪನೀರ್‌ ಕೂಡ ಒಂದು. ಇಷ್ಟಪಟ್ಟು ತಿನ್ನಬಹುದಾದ ಈ ಪನೀರ್‌ ಅನ್ನು ಕೆಲವರು ಮನೆಯಲ್ಲೇ ಮಾಡಿಕೊಂಡು ತಿಂದರೆ, ಇನ್ನೂ ಕೆಲವರು ಹೊರಗಿನಿಂದ ನೇರವಾಗಿ ಖರೀದಿಸಿ ತರುವುದು ಸಾಮಾನ್ಯ. ಪ್ಯಾಕಟ್ಟುಗಳಲ್ಲಿ ಅಥವಾ ಡೈರಿಗಳಲ್ಲಿ ತಾಜಾ ಪನೀರ್‌ ಕೂಡಾ ಇಂದು ಲಭ್ಯವಿವೆ. ಮನೆಯಲ್ಲೇ ಮಾಡುವುದಾದರೆ, ಹಾಲು ಕುದಿಸಿಕೊಂಡು ಅದು ಕುದಿಯುತ್ತಿರುವಾಗಲೇ ಅದಕ್ಕೆ ನಿಂಬೆಹಣ್ಣು ಹಿಂಡಿದರೆ, ಹಾಲು ಒಡೆಯುತ್ತದೆ. ಇದನ್ನೊಂದು ಬಟ್ಟೆಯಲ್ಲಿ ಸೋಸಿಕೊಂಡರೆ, ಇದರ ನೀರು ಪ್ರತ್ಯೇಕವಾಗಿ ಬಟ್ಟೆಯಲ್ಲಿ ಕೇವಲ ಪನೀರ್‌ ಉಳಿಯುತ್ತದೆ. ಪನೀರ್‌ ಅನ್ನು ಹಿಂಡಿಕೊಂಡು ಬಳಸಿದರೆ, ಉಳಿದ ನೀರನ್ನು ಅನೇಕರು ಚೆಲ್ಲಿ ಬಿಡುವುದು ರೂಢಿ. ಆದರೆ, ಈ ನೀರಿನಲ್ಲೂ ಸಾಕಷ್ಟು ಪ್ರೊಟೀನ್‌ ಇದೆ. ಅನೇಕ ಪೋಷಕಾಂಶಗಳೂ ಇವೆ. ಇವನ್ನು ಚೆಲ್ಲಿದರೆ ಪೋಷಕಾಂಶಗಳು ನಷ್ಟವಾಗುತ್ತವೆ. ಹಾಗಾಗಿ, ಈ ಉಳಿದುಕೊಂಡ ನೀರು ಅಂದರೆ, ವೇ ವಾಟರ್‌ ಅನ್ನು ನೀವು ಅನೇಕ ವಿಧಗಳಲ್ಲಿ ಬಳಸಬಹುದು. ಅದರಲ್ಲಿರುವ ಪೋಷಕಾಂಶ ನಮ್ಮ ದೇಹಕ್ಕೆ ಲಭ್ಯವಾಗುವಂತೆ ಮಾಡಬಹುದು. ಬನ್ನಿ, ವೇ ವಾಟರ್‌ ಅನ್ನು ಯಾವೆಲ್ಲ ವಿಧಾನಗಳಿಂದ ಬಳಸಬಹುದು (Use Of Paneer Water) ಎಂಬುದನ್ನು ನೋಡೋಣ.

Ghee roast Dosa and Idli

ಕರ್ರಿಗಳು ಹಾಗೂ ಗ್ರೇವಿಗಳು

ಪನೀರ್‌ನ ಉಳಿದ ನೀರು ನೀವು ಮಾಡುವ ಕರ್ರಿ ಹಾಗೂ ಗ್ರೇವಿಗಳಿಗೆ ಸೇರಿಸುವುದು ಅತ್ಯುತ್ತಮ ಉಪಾಯ. ಕೇವಲ ನೀವು ಸಾಮಾನ್ಯ ನೀರನ್ನು ಬಳಸುವಲ್ಲಿ ಪನೀರ್‌ನ ಉಳಿದ ನೀರನ್ನು ಸೇರಿಸಬಹುದು. ಶಾಹಿ ಪನೀರ್‌, ಪನೀರ್‌ ಬಟರ್‌ ಮಸಾಲ, ಪಾಲಕ್‌ ಪನೀರ್‌ ಅಥವಾ ಸಾಮಾನ್ಯವಾದ ದಾಲ್‌ ತಡ್ಕಾ ಕೂಡಾ ನೀವು ಮಾಡುತ್ತಿದ್ದರೆ ಈ ಪನೀರ್‌ನ ನೀರನ್ನು ಸೇರಿಸಬಹುದು. ಇದರಿಂದ ನೀವು ಮಾಡಿದ ಈ ಡಿಶ್‌ನ ರುಚಿ ಇನ್ನಷ್ಟು ಸಮೃದ್ಧವಾಗುತ್ತದೆ. ಇದರಲ್ಲಿ ಹೆಚ್ಚು ಪ್ರೊಟೀನ್‌ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.

ಲಸ್ಸಿ

ಕರ್ರಿ ಅಥವಾ ಗ್ರೇವಿಗಳನ್ನು ಮಾಡುವುದು ಕಡಿಮೆ ಎಂದಾದಲ್ಲಿ ಪನೀರ್‌ ನೀರನ್ನು ಬಳಸಿಕೊಳ್ಳಲ್ಲು ಬೇರೆ ಉಪಾಯಗಳೂ ಇವೆ, ಚಿಂತಿಸಬೇಡಿ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಪೇಯಗಳ ಪೈಕಿ ಲಸ್ಸಿ ಕೂಡಾ ಒಂದು. ಪನೀರ್‌ನ ನೀರನ್ನು ನೀವು ಲಸ್ಸಿ ಮಾಡುವಾಗ ಸೇರಿಸಬಹುದು. ಇದರಿಂದ ಲಸ್ಸಿ ಇನ್ನಷ್ಟು ರುಚಿಕರವಷ್ಟೇ ಅಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗುತ್ತದೆ. ಮೊಸರಿಗೆ ಪನೀರ್‌ನ ನೀರನ್ನು ಸೇರಿಸಿ, ಕೊಂಚ ಸಕ್ಕರೆಯನ್ನೋ ಜೇನುತುಪ್ಪವನ್ನೋ ಸೇರಿಸಿಕೊಂಡು ಅಥವಾ ಉಪ್ಪು ಸೇರಿಸಿಕೊಂಡೋ ಕುಡಿಯಬಹುದು. ಬೇಸಿಗೆಯ ಝಳಕ್ಕೆ ಸಮೃದ್ಧವಾದ ಪ್ರೊಬಯಾಟಿಕ್‌ ಪೇಯವಿದು. ದೇಹವನ್ನು ತಂಪಾಗಿಸುವ ದಿವ್ಯಾಮೃತವೂ ಕೂಡ.

ಇಡ್ಲಿ, ದೋಸೆ ಹಿಟ್ಟು

ಹೌದು. ಪನೀರ್‌ನ ನೀರನ್ನು ಬಿಸಾಗಿ ವೇಸ್ಟ್‌ ಮಾಡುವ ಮೊದಲು ಹೀಗೂ ಬಳಸುವ ಸಾಧ್ಯತೆಗಳನ್ನು ಯೋಚಿಸಿ. ನಿತ್ಯವೂ ದೋಸೆ ಹಿಟ್ಟಂತೂ ನಿಮ್ಮಲ್ಲಿ ಮಾಡಿಯೇ ಇರುತ್ತೀರಿ. ಹುಳಿ ಬರಿಸಿದ ಹಿಟ್ಟನ್ನು ತೆಳುವಾಗಿಸಲು ನೀರು ಹಾಕುವ ಬದಲು ಪನೀರ್‌ನ ನೀರನ್ನು ಹಾಕಿ. ಅಥವಾ ಉದ್ದು ಹಾಗೂ ಅಕ್ಕಿಯನ್ನು ರುಬ್ಬುವ ಸಂದರ್ಭವೇ ನೀರಿನ ಬದಲು ಪನೀರ್‌ ನೀರನ್ನು ಹಾಕಿ. ಹುಳಿ ಬರುವ ಪ್ರಕ್ರಿಯೆ ಇನ್ನೂ ಸುಲಭವಾಗುತ್ತದೆ. ವೇ ವಾಟರ್‌ ಅಥವಾ ಈ ಪನೀರ್‌ನ ನೀರಿನಲ್ಲಿರುವ ಪೋಷಕಾಂಶಗಳೂ ಕೂಡಾ ಹಿಟ್ಟಿನ ಮೂಲಕ ದೋಸೆಯಾಗಿ, ಇಡ್ಲಿಯಾಗಿ ನಿಮ್ಮ ಹೊಟ್ಟೆ ಸೇರುತ್ತದೆ.

ಅಕ್ಕಿ ಬೇಯಿಸಲು

ಅಕ್ಕಿ ಅಥವಾ ಬೇಳೆ ಬೇಯಿಸಲೂ ಕೂಡಾ ನೀರಿನ ಬದಲು ಪನೀರ್‌ನ ನೀರನ್ನೇ ಬಳಸಬಹುದು. ಇದರಿಂದ ಅವುಗಳ ರುಚಿಯೂ ಇಮ್ಮಡಿಯಾಗುತ್ತದೆ. ಪನೀರ್‌ನ ನೀರಿನಲ್ಲಿರುವ ಪೋಷಕಾಂಶವೂ ನಷ್ಟವಾಗದು.

ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

ಚಪಾತಿ ಹಿಟ್ಟು ಕಲಸಲು

ಹೌದು. ಈವಾವುವೂ ಬೇಡ ಎಂದಾದರೆ, ಚಪಾತಿ ಹಿಟ್ಟು ಕಲಸಿಡಿ. ಮಾರನೇ ದಿನದ ನಿಮ್ಮ ಅಥವಾ ಮಕ್ಕಳ ಟಿಫನ್‌ ಬಾಕ್ಸಿಗೆ ಚಪಾತಿ ಹಿಟ್ಟು ಕಲಸುತ್ತಿದ್ದರೆ, ನೀರಿನ ಬದಲು ಪನೀರ್‌ ನೀರನ್ನು ಹಾಕಿ. ಇದರಿಂದ ಚಪಾತಿ ಚೆನ್ನಾಗಿ ಮೆದುವಾಗಿ ಉಬ್ಬಿಕೊಂಡು ಬರುವುದಲ್ಲದೆ, ರುಚಿಕರವಾಗಿಯೂ, ಪೋಷಕಾಂಶಗಳಿಂದ ಸಮೃದ್ಧವಾಗಿಯೂ ಇರುತ್ತದೆ.

Continue Reading

ಆರೋಗ್ಯ

Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

Sodium reduction: ನಮ್ಮ ದೇಹಕ್ಕೆ ಬೇಕಾಗುವ ಖನಿಜಾಂಶಗಳ ಪೈಕಿ ಸೋಡಿಯಂ ಕೂಡ ಒಂದು. ಸೋಡಿಯಂ ನಾವು ನಿತ್ಯವೂ ಸೇವಿಸುವ ಉಪ್ಪಿನ ಮೂಲಕ ನಮಗೆ ಲಭ್ಯವಾಗುತ್ತದೆ. ಈ ಖನಿಜಾಂಶ ಹೆಚ್ಚಾದರೂ ಸಮಸ್ಯೆಯೇ. ಕಡಿಮೆಯಾದರೂ ಸಮಸ್ಯೆಯೇ. ಇವುಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ದೇಹ ಅದನ್ನು ನಮಗೆ ತೋರಿಸುತ್ತದೆ. ದೇಹಕ್ಕೆ ಉಪ್ಪಿನ ಸೇವನೆ ಕಡಿಮೆಯಾದಾಗ ಏನಾಗುತ್ತದೆ? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

Koo

ನಮ್ಮ ದೇಹದ ವ್ಯವಸ್ಥೆಯೇ ಬಹಳ ಸಂಕೀರ್ಣ. ಇದು ಎಲ್ಲ ಬಗೆಯ ಪೋಷಕಾಂಶಗಳು, ಖನಿಜಾಂಶಗಳಿಂದ ಪೋಷಣೆ ಬಯಸುತ್ತದೆ. ನಮ್ಮ ಆರೋಗ್ಯದ ಕೀಲಿ ಕೈ ಇರುವುದು ಪೋಷಕಾಂಶಗಳಲ್ಲಿಯೇ. ನಾವು ಸರಿಯಾದ ಆಹಾರ, ಸರಿಯಾದ ಸಮಯಕ್ಕೆ ಸೇವಿಸುತ್ತಿದ್ದರೆ, ದೇಹಕ್ಕೆ ಬೇಕಾದ ಎಲ್ಲ ಪೋಷಕ ತತ್ವಗಳೂ ಸಿಗುತ್ತದೆ. ಆದರೆ, ಯಾವುದಾದರೊಂದರ ಕೊರತೆಯೂ ಸಾಕು, ಆರೋಗ್ಯ ಹದಗೆಡಲು. ನಮ್ಮ ದೇಹಕ್ಕೆ ಹೀಗೆ ಬೇಕಾಗುವ ಖನಿಜಾಂಶಗಳ ಪೈಕಿ ಸೋಡಿಯಂ ಕೂಡಾ ಒಂದು. ಸೋಡಿಯಂ ನಾವು ನಿತ್ಯವೂ ಸೇವಿಸುವ ಉಪ್ಪಿನ ಮೂಲಕ ನಮಗೆ ಲಭ್ಯವಾಗುತ್ತದೆ. ಈ ಖನಿಜಾಂಶ ಹೆಚ್ಚಾದರೂ ಸಮಸ್ಯೆಯೇ. ಕಡಿಮೆಯಾದರೂ ಸಮಸ್ಯೆಯೇ. ಇವುಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ದೇಹ ಅದನ್ನು ನಮಗೆ ತೋರಿಸುತ್ತದೆ. ದೇಹಕ್ಕೆ ಉಪ್ಪಿನ ಸೇವನೆ ಕಡಿಮೆಯಾದಾಗ ಏನಾಗುತ್ತದೆ ಗೊತ್ತೇ? ಬನ್ನಿ, ನಮ್ಮ ದೇಹದಲ್ಲಿ ಸೋಡಿಯಂ ಕಡಿಮೆಯಾದರೆ ಏನೆಲ್ಲ ಸಮಸ್ಯೆಗಳ ಮೂಲಕ ಅದು ನಮಗೆ ತಿಳಿಯುತ್ತದೆ ಎಂಬುದನ್ನು ನೋಡೋಣ. ಸೋಡಿಯಂ ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಮುಖ್ಯವಾದ ಎಲೆಕ್ಟ್ರೋಲೈಟ್.‌ ಇದು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ.ದು ನಮ್ಮ ದೇಹದಲ್ಲಿ ತಾನೇ ತಾನಾಗಿ ಉತ್ಪತ್ತಿಯಾಗುವುದಿಲ್ಲ. ಮೊಟ್ಟೆ, ಮಾಂಸ, ಹಾಲು ಇತ್ಯಾದಿಗಳ ಮೂಲಕ ದೇಹಕ್ಕೆ ಸೋಡಿಯಂ ಲಭ್ಯವಾದರೂ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಮಗೆ ಸೋಡಿಯಂ ಸಿಗುವುದು ನಿತ್ಯವೂ ಆಹಾರದ ಮೂಲಕ ನಾವು ಸೇವಿಸುವ ಉಪ್ಪಿನ ಮೂಲಕ. ಸೋಡಿಯಂ ಕ್ಲೋರೈಡ್‌ ಆಗಿರುವ ಉಪ್ಪಿನಲ್ಲಿ ಶೇಕಡಾ ೪೦ರಷ್ಟು ಸೋಡಿಯಂ ಹಾಗೂ ಶೇಕಡಾ 60ರಷ್ಟು ಕ್ಲೋರೈಡ್‌ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಚಮಚ ಉಪ್ಪಿನಲ್ಲಿ ಸುಮಾರಿ ೨೩೦೦ ಎಂಜಿ ಗಿಂತಲೂ ಹೆಚ್ಚು ಸೋಡಿಯಂ ಇದೆ ಎನ್ನುತ್ತದೆ. ಅತಿಯಾದ ಉಪ್ಪಿನ ಸೇವನೆ ಸಮಸ್ಯೆಗಳನ್ನು ತಂದೊಡ್ಡುವುದು ನಿಜವೇ ಆದರೂ, ಉಪ್ಪು ದೇಹಕ್ಕೆ ಕಡಿಮೆಯೂ ಆಗಬಾರದು. ಇದು ಕಡಿಮೆಯಾದರೆ, ಮಾನಿಸಕ ಒತ್ತಡ, ಖಿನ್ನತೆ, ಸುಸ್ತು, ವಾಂತಿ, ತಲೆನೋವು, ಗೊಂದಲ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.

Have a headache Ashwagandha Herb Benefits

ತಲೆನೋವು

ದೇಹದಲ್ಲಿ ಸೋಡಿಯಂ ಕಡಿಮೆಯಾದಾಗ ಕಾಣುವ ಲಕ್ಷಣಗಳಲ್ಲಿ ಪ್ರಮುಖವಾದದ್ದು ಇದು. ತಲೆನೋವು ಪದೇ ಪದೇ ಕಾಡುತ್ತಿದ್ದರೆ, ನಿಮ್ಮ ಸೋಡಿಯಂ ಮಟ್ಟ ಸರಿಯಾಗಿದೆಯೇ ಎಂಬುದನ್ನೂ ನೀವು ಪರಿಗಣಿಸಬೇಕು.

ವಾಂತಿ, ತಲೆಸುತ್ತು

ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾದಾಗ ದೇಹದಲ್ಲಿರುವ ನೀರಿನ ಮಟ್ಟದಲ್ಲೂ ಏರುಪೇರಾಗುತ್ತದೆ. ಇದರಿಂದ ತಲೆಸುತ್ತು, ವಾಂತಿಯೂ ಸಾಮಾನ್ಯ.

Unexplained frequent headaches Excessive Use Of Electronic Gadgets

ಗೊಂದಲ

ನಮ್ಮ ನರಮಂಡಲ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಸೋಡಿಯಂ ಬೇಕೇ ಬೇಕು. ಇದು ಸರಿಯಾದ ಮಟ್ಟದಲ್ಲಿದ್ದರೆ ನರಮಂಡಲ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಸೋಡಿಯಂ ಮಟ್ಟ ಕಡಿಮೆಯಾದಾಗ, ಮಿದುಳಿಗೆ ನರಮಂಡಲ ಸರಿಯಾದ ಸಂದೇಶಗಳನ್ನು ಕಳುಹಿಸಲು ಅಸಮರ್ಥವಾಗಿ ಹೀಗೆ ಗೊಂದಲಗಳನ್ನು ಹುಟ್ಟುಹಾಕುತ್ತದೆ.

ಮಾಂಸಖಂಡಗಳಲ್ಲಿ ಸೆಳೆತ

ಸೋಡಿಯಂ ಮಟ್ಟ ದೇಹದಲ್ಲಿ ಕಡಿಮೆಯಾದಾಗ, ದೇಹದಿಂದ ಬೇಡವಾದ ಕಶ್ಮಲಗಳೂ ಹೊರಹೋಗುವುದು ಕಡಿಮೆಯಾಗುತ್ತದೆ. ಇದರಿಂದ ಈ ಕಶ್ಮಲಗಳು ದೇಹದಲ್ಲಿ ಮಾಂಸಖಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೋವು, ಸೆಳೆತ ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: How Much Protein in an Egg: ನಮಗೆ ಏಕೆ ಪ್ರೊಟಿನ್‌ ಬೇಕು? ಒಂದು ಮೊಟ್ಟೆಯಿಂದ ಎಷ್ಟು ಪ್ರೊಟೀನ್‌ ಪಡೆಯಬಹುದು?

ಶಕ್ತಿಹೀನತೆ

ಸೋಡಿಯಂ ದೇಹದಲ್ಲಿ ಕಡಿಮೆಯಾದಾಗ, ರಕ್ತವು ದೇಹದ ಅಂಗಾಂಗಗಳಿಗೆ ಪೋಷಕಾಂಶಗಳನ್ನು ಹಂಚುವಿಕೆಯ ಕೆಲಸವನ್ನೂ ನಿಧಾನ ಮಾಡುತ್ತದೆ. ಇದರಿಂದ ಪೋಷಕಾಂಶಗಳು ಸರಿಯಾಗಿ ತಲುಪದೆ, ಶಕ್ತಿಹೀನತೆ ಬರುತ್ತದೆ. ಸುಸ್ತು, ನಿಶಃಕ್ತಿ ಕಾಡುತ್ತದೆ.

Continue Reading

ಆರೋಗ್ಯ

Myths About Asthma: ಇವು ಅಸ್ತಮಾ ಕುರಿತು ಇರುವ 9 ಸುಳ್ಳುಗಳು!

Myths About Asthma: ಉಸಿರಾಟದ ಸಮಸ್ಯೆಯ ಸುತ್ತ ಹಲವಾರು ತಪ್ಪು ತಿಳಿವಳಿಕೆಗಳಿವೆ. ಹಲವು ಸುಳ್ಳು ನಂಬಿಕೆಗಳು ಇದರ ಸುತ್ತ ಸುತ್ತಿಕೊಂಡು ಇದನ್ನೊಂದು ಪಿಡುಗನ್ನಾಗಿ ಪರಿವರ್ತಿಸಿರುವುದೂ ಹೌದು. ಅಸ್ತಮಾದ ಲಕ್ಷಣಗಳನ್ನು ಮೊದಲೇ ಅರಿತುಕೊಂಡರೆ ಇದನ್ನು ತೀವ್ರಸ್ವರೂಪಕ್ಕೆ ಬದಲಾಗುವುದನ್ನು ತಡೆಯಬಹುದು. ಬನ್ನಿ, ಅಸ್ತಮಾ ಎಂಬ ಕಾಯಿಲೆಯ ಸುತ್ತ ಹಬ್ಬಿ ನಿಂತಿರುವ ತಪ್ಪು ತಿಳಿವಳಿಕೆಗಳೇನು, ಸತ್ಯ ಏನು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Woman Using an Asthma Inhaler
Koo

ಅಸ್ತಮಾ ಎಂಬುದು ಸಾಮಾನ್ಯವಾದ ಕಾಯಿಲೆ ಎಂದುಕೊಂಡರೂ, ಗಂಭೀರ ಸ್ವರೂಪದಲ್ಲಿ ಜೀವನವಿಡೀ ಬಾಧಿಸುವ ಸಮಸ್ಯೆಯೂ ಹೌದು. ಈ ಉಸಿರಾಟದ ಸಮಸ್ಯೆಯ ಸುತ್ತ ಹಲವಾರು ತಪ್ಪು ತಿಳಿವಳಿಕೆಗಳಿವೆ. ಹಲವು ಸುಳ್ಳು ನಂಬಿಕೆಗಳು ಇದರ ಸುತ್ತ ಸುತ್ತಿಕೊಂಡು ಇದನ್ನೊಂದು ಪಿಡುಗನ್ನಾಗಿ ಪರಿವರ್ತಿಸಿರುವುದೂ ಹೌದು. ಅಸ್ತಮಾದ ಲಕ್ಷಣಗಳನ್ನು ಮೊದಲೇ ಅರಿತುಕೊಂಡರೆ ಇದನ್ನು ತೀವ್ರಸ್ವರೂಪಕ್ಕೆ ಬದಲಾಗುವುದನ್ನು ತಡೆಯಬಹುದು. ಬನ್ನಿ, ಅಸ್ತಮಾ ಎಂಬ ಕಾಯಿಲೆಯ ಸುತ್ತ ಹಬ್ಬಿ ನಿಂತಿರುವ ತಪ್ಪು ತಿಳಿವಳಿಕೆಗಳೇನು ಹಾಗೂ ಸತ್ಯ ಏನು (Myths About Asthma) ಎಂಬುದನ್ನು ಅರಿಯೋಣ.

Young Woman Having Asthma Attack at Home
Asthma Treatment

ಅಸ್ತಮಾ ಕೇವಲ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ನಂಬಿಕೆಯಿದೆ. ಆದರೆ ಅದು ಹಾಗಲ್ಲ. ಬಾಲ್ಯದಲ್ಲೇ ಶುರುವಾಗುವ ಸಮಸ್ಯೆ ಇದಾದರೂ, ಯಾವುದೇ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆ. ಹಾಗಾಗಿ, ಯಾವುದೇ ವಯಸ್ಸಿನಲ್ಲಾದರೂ ಬರಬಹುದಾದ ಅಸ್ತಮಾದ ಆರಂಭಿಕ ಲಕ್ಷಣಗಳು ಏನು ಎಂಬ ಬಗ್ಗೆ ಅರಿವು ಅತ್ಯಂತ ಅಗತ್ಯ.

ಅಸ್ತಮಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂಬ ನಂಬಿಕೆಯಿದೆ. ಆದರೆ ಇದು ಹರಡುವ ರೋಗವಲ್ಲ. ಇದು ಪರಿಸರ ಹಾಗೂ ವಂಶವಾಹಿನಿಯಿಂದ ಬರುವ ಸಮಸ್ಯೆ.

Outdoor Exercise
Asthma Treatment

ಅಸ್ತಮಾ ಇರುವ ಮಂದಿ ವ್ಯಾಯಾಮ ಮಾಡಬಾರದು ಎಂಬ ನಂಬಿಕೆಯಿದೆ. ಆದರೆ ಇದು ಸುಳ್ಳು. ಕೆಲವು ಅಸ್ತಮಾ ರೋಗಿಗಳಿಗೆ ಕೆಲವು ವ್ಯಾಯಾಮದಿಂದ ಸಮಸ್ಯೆಗಳಾಗಬಹುದು. ಹಾಗಾಗಿ ಅಸ್ತಮಾ ಇದೆ ಅಂದಾಕ್ಷಣ ವ್ಯಾಯಾಮ ಬಿಡುವುದಲ್ಲ. ಕೆಲವು ವ್ಯಾಯಾಮಗಳಿಂದ ಅಸ್ತಮಾ ರೋಗಿಗಳ ಒಟ್ಟು ಆರೋಗ್ಯ ವೃದ್ಧಿಸಿ, ಶ್ವಾಸಕೋಶದ ಕಾರ್ಯವೈಖರಿಯೂ ವೃದ್ಧಿಸುತ್ತದೆ.

ಅಸ್ತಮಾ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆ ಇದೆ. ಆದರೆ ಇದು ಸುಳ್ಳು. ಅಸ್ತಮಾ ಒಂದು ದೈಹಿಕವಾದ ಸಮಸ್ಯೆ. ಇದು ಉಸಿರಾಟದ ಸಮಸ್ಯೆ. ಆದರೆ, ಒತ್ತಡ, ಉದ್ವೇಗದಂತಹ ಸಮಸ್ಯೆಗಳು ಅಸ್ತಮಾವನ್ನು ಇನ್ನಷ್ಟು ಹೆಚ್ಚಿಸಬಹುದು.

Helps control asthma problem Jackfruit Benefits

ಅಸ್ತಮಾದ ಔಷಧಿಗೂ ಚಟವಾಗುತ್ತದೆ ಎಂಬ ಮಾತಿದೆ. ಆದರೆ ಇದೂ ಕೂಡಾ ಸುಳ್ಳೇ. ಅಸ್ತಮಾಕ್ಕೆ ಬಹಳಷ್ಟು ಮಂದಿ ಬಳಸುವ ಇನ್‌ಹೇಲ್‌ ಮಾಡುವ ಔಷಧಿಗಳು ಚಟವಾಗುವುದಿಲ್ಲ. ಬದಲಾಗಿ ಇದು ಅಸ್ತಮಾದಿಂದ ಹೊರಗೆ ಬರಲು, ಆರಾಮ ನೀಡಲು ಸಾಕಷ್ಟು ಸಹಾಯ ಮಾಡುತ್ತದೆ.

ಅಸ್ತಮಾ ಗಂಭೀರವಾದ ಸಮಸ್ಯೆಯಲ್ಲ ಎಂಬ ನಂಬಿಕೆಯಿದೆ. ಆದರೆ ಕೆಲವೊಮ್ಮೆ ಅಸ್ತಮಾ ಗಂಭೀರವಾಗಿ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಹಾಗಾಗಿ ಅಸ್ತಮಾಕ್ಕೆ ಸರಿಯಾದ ಚಿಕಿತ್ಸೆ ಬೇಕೇ ಬೇಕು.

Asthma Treatment

ಅಸ್ತಮಾ ಅಟ್ಯಾಕ್‌ ಆದಾಗ ಮಾತ್ರ ಇನ್‌ಹೇಲರ್‌ ಬೇಕಾಗುತ್ತದೆ ಎಂಬ ತಪ್ಪುತಿಳುವಳಿಕೆ ಇದೆ. ಅಸ್ತಮಾ ಸಮಸ್ಯೆ ಇರುವ ಮಂದಿಗೆ ಇದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಲು ನಿತ್ಯವೂ ಇನ್‌ಹೇಲರ್‌ನ ಉಪಯೋಗವಿರುತ್ತದೆ. ಅಟ್ಯಾಕ್‌ ಆದಾಗ ಒಡನೆಯೇ ಸಮಾಧಾನ ಸಿಗಲು ಇನ್‌ಹೇಲರ್‌ ಅವಶ್ಯವಾಗಿ ಬೇಕಾಗುತ್ತದೆ.

ಬೇರೆ ವಾತಾವರಣ/ಹವಾಮಾನ ಪರಿಸ್ಥಿತಿ ಇರುವ ಜಾಗಕ್ಕೆ ಹೋಗುವದರಿಂದ ಅಸ್ತಮಾ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ. ಸ್ಥಳ ಬದಲಾವಣೆಯಿಂದ ಅಸ್ತಮಾ ಗುಣವಾಗದು. ಕೆಲವು ಮಂದಿಗೆ ಇದರ ಲಕ್ಷಣಗಳು ಕಡಿಮೆಯಾಗಬಹುದು. ಆದರೆ, ಅಸ್ತಮಾ ಸಮಸ್ಯೆ ಸ್ಥಳಕ್ಕೆ ಹೊಂದಿಕೊಂಡ ಸಮಸ್ಯೆಯಲ್ಲ.

ಇದನ್ನೂ ಓದಿ: 5 Seeds for Weight Loss: ಈ 5 ಕಿರು ಬೀಜಗಳು ತೂಕ ಇಳಿಕೆಗೆ ಸಹಕಾರಿ

ಅಸ್ತಮಾದಿಂದ ಶಾಶ್ವತ ಮುಕ್ತಿ ಎಂಬುದಿಲ್ಲ. ಆದರೆ, ಕೆಲವು ಪರ್ಯಾಯ ಚಿಕಿತ್ಸೆಗಳಿಂದ ಇದರ ಲಕ್ಷಣಗಳು ಹತೋಟಿಗೆ ಬರಬಹುದೇ ಹೊರತು, ಪರ್ಯಾಯ ಚಿಕಿತ್ಸೆಗಳಿಂದ ಸಂಪೂರ್ಣವಾಗಿ ಅಸ್ತಮಾದಿಂದ ಹೊರಬರಬಹುದು ಎಂದು ಹೇಳಲಾಗುವುದಿಲ್ಲ.

Continue Reading
Advertisement
puttur stabbing case
ಕ್ರೈಂ7 mins ago

Stabbing Case: ಪುತ್ತೂರು ನಗರ ಉದ್ವಿಗ್ನತೆಗೆ ಕಾರಣವಾದ ವಿದ್ಯಾರ್ಥಿನಿಗೆ ಬ್ಲೇಡ್‌ ಇರಿತ ಪ್ರಕರಣ; ನಿಜಕ್ಕೂ ನಡೆದದ್ದೇನು?

Cincinnati Open
ಕ್ರೀಡೆ37 mins ago

ATP Cincinnati Open: ಚೊಚ್ಚಲ ಪ್ರಶಸ್ತಿ ಗೆದ್ದ ಜಾನಿಕ್‌ ಸಿನ್ನರ್‌, ಅರಿನಾ ಸಬಲೆಂಕಾ

students death
ಕ್ರೈಂ46 mins ago

Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್;‌ ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ

Agritech India 2024
ಬೆಂಗಳೂರು1 hour ago

Agritech India 2024: ಬೆಂಗಳೂರಿನಲ್ಲಿ ʼಅಗ್ರಿಟೆಕ್ ಇಂಡಿಯಾ 2024ʼಕ್ಕೆ ಆ. 22ರಂದು ಚಾಲನೆ

ajmer pocso case
ಕ್ರೈಂ1 hour ago

Ajmer Pocso Case: 32 ವರ್ಷ ಹಿಂದಿನ ಅಜ್ಮೀರ್‌ ಪೋಕ್ಸೋ ಕೇಸ್‌ನಲ್ಲಿ 6 ಮಂದಿಗೆ ಜೀವಾವಧಿ ಶಿಕ್ಷೆ

Imran Khan
ವಿದೇಶ1 hour ago

Imran Khan: ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಅರ್ಜಿ ಸಲ್ಲಿಸಿದ ಪಾಕ್‌ ಮಾಜಿ ಪ್ರಧಾನಿ!

Reliance Jio
ಕರ್ನಾಟಕ2 hours ago

Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

Kannada New Movie
ಕರ್ನಾಟಕ2 hours ago

Kannada New Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರ

EV charging
ಕರ್ನಾಟಕ2 hours ago

EV Charging: ಕರ್ನಾಟಕವೇ ಕಿಂಗ್;‌ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯ!

What is Lateral Entry?
ದೇಶ2 hours ago

What is Lateral Entry?: ಏನಿದು ಲ್ಯಾಟರಲ್ ಎಂಟ್ರಿ ವಿವಾದ? ಕಾಂಗ್ರೆಸ್‌ ಆರೋಪವೇನು? ಬಿಜೆಪಿಯ ವಾದವೇನು?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌