Desserts For Tea Lovers: ಚಹಾ ಪ್ರಿಯರಿಗಾಗಿ ಇಲ್ಲಿವೆ ಬಗೆಬಗೆಯ ಡೆಸರ್ಟುಗಳು! ನೀವೂ ಟ್ರೈ ಮಾಡಿ ನೋಡಿ - Vistara News

ಆಹಾರ/ಅಡುಗೆ

Desserts For Tea Lovers: ಚಹಾ ಪ್ರಿಯರಿಗಾಗಿ ಇಲ್ಲಿವೆ ಬಗೆಬಗೆಯ ಡೆಸರ್ಟುಗಳು! ನೀವೂ ಟ್ರೈ ಮಾಡಿ ನೋಡಿ

Desserts For Tea Lovers: ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು ಇಲ್ಲಿವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಹಾ ಕುಡಿಯುವ ಗಮ್ಮತ್ತೇ ಬೇರೆ. ಬಿಸಿ ಬಿಸಿ ಹೊಗೆಯಾಡುವ ಬಗೆಬಗೆಯ ಚಹಾವನ್ನು ನಾವು ಲೋಟಗಟ್ಟಲೇ ದಿನವಿಡೀ ಕುಡಿದೇವು ಎಂದು ಚಹಾಪ್ರಿಯರು ತಮ್ಮ ಚಹಾಪ್ರೇಮದ ಬಗ್ಗೆ ವ್ಯಾಖ್ಯಾನ ನೀಡಬಹುದು. ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು ಇಲ್ಲಿವೆ. ನಿಮ್ಮ ಚಹಾಪ್ರೇಮಕ್ಕೆ ಕಳಶವಿಟ್ಟಂತೆ ಈ ಚಿತ್ರವಿಚಿತ್ರ ಚಹಾದ ಡೆಸರ್ಟ್‌ಗಳು ಇಂದು ಕೆಲವೆಡೆ ವಿಶೇಷವಾಗಿ ಲಭ್ಯ ಇವೆ. ಬನ್ನಿ ಚಹಾದ ಈ ಚಿತ್ರವಿಚಿತ್ರ ಡೆಸರ್ಟ್‌ಗಳ ಹೆಸರು ಕೇಳಿ ನೀವೂ (Desserts For Tea Lovers) ಮನೆಯಲ್ಲಿ ಪ್ರಯತ್ನಿಸಿ.

Masala tea ice cream
Cutting Chai Kulfi

ಮಸಾಲಾ ಚಹಾ ಐಸ್‌ಕ್ರೀಂ

ಐಸ್‌ಕ್ರೀಂ ಅನ್ನು ಯಾರಾದರೂ ಬೇಡ ಎನ್ನುತ್ತಾರೆಯೋ. ಖಂಡಿತ ಇಲ್ಲ. ಆದರೆ ಇದು ಮಸಾಲೆ ಚಹಾ ಐಸ್‌ ಕ್ರೀಂ. ಎಲ್ಲಿಯ ಚಹಾ ಎಲ್ಲಿಯ ಐಸ್‌ಕ್ರೀಂ ಎನ್ನಬೇಡಿ. ಬಿಸಿಬಿಸಿಯಾದ ಚಹಾದ ಬದಲಿಗೆ ಬಾಯಲ್ಲಿಟ್ಟರೆ ಕರಗುವ ಮಸಾಲೆ ಚಹಾದ ರುಚಿಯ ಐಸ್‌ಕ್ರೀಂ ರೂಪದ ಡೆಸರ್ಟ್‌ ನಿಮಗೆ ಸಿಕ್ಕರೆ?! ವಾಹ್‌ ಎನಿಸೀತೇ? ಹಾಗಿದ್ದರೆ ಒಮ್ಮೆ ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಬಹುದು. ಈಗ ಸಾಕಷ್ಟು ಟ್ರೆಂಡ್‌ನಲ್ಲಿರುವ ಈ ಹೊಸ ಐಸ್‌ಕ್ರೀಂ ಹುಡುಕಿ ತಿನ್ನಿ, ಇಲ್ಲವೇ ಮನೆಯಲ್ಲೇ ಟ್ರೈ ಮಾಡಿ ತಿನ್ನಿ!

ಮಸಾಲಾ ಚಹಾ ಕೇಕ್

ಮಸಾಲೆ ಚಹಾದ ರುಚಿಯಿರುವ ಘಮವಿರುವ ಕೇಕ್‌ ಕೂಡಾ ತಯಾರಿಸಬಹುದು. ಚಹಾ ಪ್ರಿಯರಿಗೆ ಇದು ಖಂಡಿತ ಇಷ್ಟವಾಗಲೂಬಹುದು. ಕಾಫಿ ಫ್ಲೇವರ್‌ನ ಕೇಕ್‌ನಂತೆ ಈಗ ಚಹಾ ಪ್ರಿಯರಿಗೆ ಚಹಾ ಫ್ಲೇವರಿನ ಕೇಕುಗಳೂ ಕೆಲವೆಡೆ ಲಭ್ಯವಾಗುತ್ತಿವೆಯಂತೆ. ಹಾಗಾಗಿ ನೀವೂ ಕೇಕ್‌ ತಜ್ಞರಾಗಿದ್ದರೆ, ಮಾಡುವ ಅಭ್ಯಾಸ ನಿಮಗಿದ್ದರೆ ಒಮ್ಮೆ ಈ ರುಚಿಯನ್ನು ಪ್ರಯತ್ನಿಸಿ. ಈ ಕೇಕ್‌ ಅನ್ನು ರಬ್ಡೀ ಜೊತೆಗೆ ಸವಿದರೆ ಇನ್ನೂ ರುಚಿಯಂತೆ!

Cutting Chai Kulfi
Cutting Chai Kulfi

ಕಟ್ಟಿಂಗ್‌ ಚಾಯ್‌ ಕುಲ್ಫಿ

ನೀವು ಮುಂಬೈಯ ಕಟ್ಟಿಂಗ್‌ ಚಾಯ್‌ ಪ್ರಿಯರಾಗಿದ್ದಲ್ಲಿ ಈ ಬಗೆಯ ಕುಲ್ಫಿ ಟ್ರೈ ಮಾಡಬಹುದು. ಕಟ್ಟಿಂಗ್‌ ಚಾಯ್‌ ತಯಾರಿಸಿ ಕುಲ್ಫಿ ಮೌಲ್ಡ್‌ಗಳಲ್ಲಿ ಹಾಕಿಟ್ಟು, ಅದಕ್ಕೆ ಇನ್ನೂ ಆಕರ್ಷಕವಾಗಿಸಲು ಗುಲಾಬಿದಳಗಳು, ಪಿಸ್ತಾ ಹಾಗೂ ಬಾದಾಮಿ ಚೂರುಗಳು ಮತ್ತಿತರ ಬೀಜಗಳನ್ನೂ ಸೇರಿಸಬಹುದು. ನಿಮ್ಮ ಚಹಾ ಕುಲ್ಫಿ ರೆಡಿ. ಬಗೆಬಗೆಯ ಫ್ಲೇವರ್‌ಗಳ ಕುಲ್ಫಿಗಳ ಜೊತೆಗೆ ಈಗ ಈ ಕಟ್ಟಿಂಗ್‌ ಚಾಯ್‌ ಕುಲ್ಫಿ ಕೂಡಾ ಟ್ರೆಂಡ್‌ನಲ್ಲಿದೆ. ಯುವಜನರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: Homemade Tofu Recipe: ಸೋಯಾ ಹಾಲಿನ ತೋಫು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ?

ಮಸಾಲಾ ಚಾಯ್‌ ಕುಕ್ಕೀಸ್‌

ನಿಮ್ಮ ಚಹಾ ಟೈಮ್‌ಗೆ ನೀವು ತಿನ್ನುವ ಕುಕ್ಕೀಸ್‌ ಕೂಡಾ ಚಹಾ ಫ್ಲೇವರ್‌ನದ್ದೇ ಆಗಿದ್ದರೆ!? ವಾಹ್‌, ಎಂಥಾ ಐಡಿಯಾ ಎನ್ನುತ್ತೀರಾ? ಚಹಾ ಘಮವಿರುವ ಕುಕ್ಕೀಸ್‌ ಕೂಡಾ ತಯಾರು ಮಾಡಬಹುದು. ಸಂಜೆಯ ಹೊತ್ತು ಕೂತು ಚಹಾವನ್ನೂ ಜೊತೆಗೆ ಚಹಾದ ಘಮವಿರುವ ಕುಕ್ಕೀಸನ್ನೂ ಸವಿಯಬಹುದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಆಹಾರ/ಅಡುಗೆ

Krishna janmastami 2024: ಕೃಷ್ಣ ಜನ್ಮಾಷ್ಟಮಿಗೆ ಏನೆಲ್ಲ ಸಿಹಿ ತಿನಿಸು ತಯಾರಿಸಬಹುದು? ಇಲ್ಲಿದೆ ಟಿಪ್ಸ್‌

ನಾಲಿಗೆಯ ರುಚಿಯನ್ನು ತೃಪ್ತಿಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ (Krishna janmastami 2024) ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಧಾರಾಳವಾಗಿ ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.

VISTARANEWS.COM


on

By

Krishna janmastami 2024
Koo

ಕೃಷ್ಣ ಜನ್ಮಾಷ್ಟಮಿ (Krishna janmastami 2024) ಎಂದರೆ ದೇವರಿಗೆ ನೈವೇದ್ಯ ಮಾಡಲು, ಬಂದಂಥ ಅತಿಥಿಗಳನ್ನು ಸತ್ಕರಿಸಲು ಮನೆಯಲ್ಲಿ ಬಗೆಬಗೆಯ ಖಾದ್ಯ, ಸಿಹಿ ತಿಂಡಿಗಳನ್ನು (sweets) ಮಾಡಲೇಬೇಕು. ಹಾಗಂತ ಹಬ್ಬದ ಸಂದರ್ಭದಲ್ಲಿ ಆರೋಗ್ಯವನ್ನೂ ಕಡೆಗಣಿಸುವಂತಿಲ್ಲ. ಹೀಗಾಗಿ ಈ ಬಾರಿ ಜನ್ಮಾಷ್ಟಮಿಯಲ್ಲಿ (janmastami) ಸಿಹಿ ಜೊತೆಗೆ ಆರೋಗ್ಯಕರವಾದ (Healthy Sweets) ಖಾದ್ಯಗಳನ್ನು ಮನೆಯಲ್ಲೇ ಮಾಡಲು ಟ್ರೈ ಮಾಡಿನೋಡಬಹುದು.

ನಾಲಿಗೆಯ ರುಚಿಯನ್ನು ತೃಪ್ತಿ ಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.


ಖರ್ಜೂರ ಮತ್ತು ಒಣ ಹಣ್ಣಿನ ಲಡ್ಡು

ಖರ್ಜೂರದ ನೈಸರ್ಗಿಕ ಮಾಧುರ್ಯವನ್ನು ವಿವಿಧ ಒಣ ಹಣ್ಣುಗಳೊಂದಿಗೆ ಸವಿಯಬಹುದು. ಖರ್ಜೂರದ ಬೀಜಗಳನ್ನು ತೆಗೆದು ಹಾಲಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ಇಡಿ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳಂತಹ ಬೀಜಗಳನ್ನು ಖರ್ಜೂರದೊಂದಿಗೆ ಸೇರಿಸಿ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಫ್ರಿಜ್‌ನಲ್ಲಿ ಇಡಿ. ಜನ್ಮಾಷ್ಟಮಿಗೆ ಪರಿಪೂರ್ಣವಾದ ಆರೋಗ್ಯಕರ, ಶಕ್ತಿ-ಉತ್ತೇಜಿಸುವ ಲಡ್ಡು ಇದಾಗಿದೆ.

Krishna janmashtami
Krishna janmashtami


ಸೀಡ್ಸ್ ಲಡ್ಡು

ಚಿಯಾ, ಫ್ಲಾಕ್ಸ್ ಮತ್ತು ಸೂರ್ಯಕಾಂತಿಗಳಂತಹ ಬೀಜಗಳ ಮಿಶ್ರಣವನ್ನು ಲಘುವಾಗಿ ಹುರಿದು ಪುಡಿ ಮಾಡಿ. ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಲಡ್ಡು ಮಾಡಿ. ಪೋಷಕಾಂಶಗಳಿರುವ ಈ ಲಡ್ಡಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ ಸಮೃದ್ಧವಾಗಿವೆ.

Krishna janmashtami
Krishna janmashtami


ಫ್ರೂಟ್ ಸಲಾಡ್

ಬಾಳೆಹಣ್ಣು, ಸೇಬು, ದ್ರಾಕ್ಷಿ ಮತ್ತು ದಾಳಿಂಬೆಗಳಂತಹ ತಾಜಾ ಹಣ್ಣುಗಳನ್ನು ಕತ್ತರಿಸಿ ಹಾಲಿನ ಕೆನೆಯೊಂದಿಗೆ ಸೇರಿಸಿ. ಜೇನುತುಪ್ಪ ಬೆರೆಸಿ ಸಿಹಿಗೊಳಿಸಿ. ಈ ತಿಳಿ ಮತ್ತು ಕೆನೆ ಖಾದ್ಯವು ರುಚಿಕರವಾದದ್ದು ಮಾತ್ರವಲ್ಲದೆ ಅಗತ್ಯವಾದ ಜೀವಸತ್ವ, ಖನಿಜಾಂಶಗಳನ್ನು ಹೊಂದಿದೆ.


ಡ್ರೈ ಫ್ರೂಟ್ ಚಿಕ್ಕಿ

ಒಣ ಹಣ್ಣುಗಳಾದ ಶೇಂಗಾ, ಬಾದಾಮಿ ಮತ್ತು ಎಳ್ಳನ್ನು ಬೆಲ್ಲದೊಂದಿಗೆ ಹುರಿದು ಬೆರೆಸಿ ಡ್ರೈಫ್ರೂಟ್ ಚಿಕ್ಕಿ ತಯಾರಿಸಿ. ಮಿಶ್ರಣವನ್ನು ತುಪ್ಪ ಹಚ್ಚಿದ ಟ್ರೇಗೆ ಸುರಿಯಿರಿ. ಅದನ್ನು ತಣ್ಣಗಾಗಲು ಬಿಡಿ, ತದನಂತರ ತುಂಡುಗಳಾಗಿ ಕತ್ತರಿಸಿ. ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

ಇದನ್ನೂ ಓದಿ: Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!


ಡ್ರೈಫ್ರೂಟ್ ಲಡ್ಡು

ವಾಲ್‌ನಟ್ಸ್, ಬಾದಾಮಿ, ಗೋಡಂಬಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳಾಗಿ ಆಕಾರ ಮಾಡಿ ಮತ್ತು ತಣ್ಣಗಾಗಿಸಿ. ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಇದು ನೈಸರ್ಗಿಕ ಸಿಹಿಯನ್ನು ನೀಡುತ್ತದೆ.

Continue Reading

ಆಹಾರ/ಅಡುಗೆ

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

ಆರೋಗ್ಯದ ಕಾಳಜಿಯಿಂದ, ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು (Non Vegetarian Population) ಹೊಂದಿದೆ.

VISTARANEWS.COM


on

By

Non Vegetarian Population
Koo

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Continue Reading

ಆಹಾರ/ಅಡುಗೆ

Homemade Tofu Recipe: ಸೋಯಾ ಹಾಲಿನ ತೋಫು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ?

Homemade Tofu Recipe: ನಮಗೆ ಪನೀರ್‌ ಮಾಡುವುದು ಗೊತ್ತು. ಆದರೆ ಅದರಂತೆಯೇ ಕಾಣುವ ತೋಫು ಮಾಡುವುದು ಹೇಗೆ? ಅಂಗಡಿಯಿಂದ ತರುವುದಕ್ಕೆ ಏನೆಲ್ಲಾ ಮಿಶ್ರ ಮಾಡಿರುತ್ತಾರೊ ಏನೊ? ನಾವೇ ಮನೆಯಲ್ಲಿ ಮಾಡಿಕೊಳ್ಳುವುದಾದರೆ ಸೋಯಾ ಹಾಲಿನ ತೋಫು ಮಾಡುವುದು ಹೇಗೆ ಎಂಬುದನ್ನು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Tofu
Koo

ಸೋಯಾ ಹಾಲಿನಿಂದ (Homemade Tofu Recipe) ತಯಾರಾಗುವ, ನೋಡುವುದಕ್ಕೆ ಪನೀರ್‌ನಂತೆಯೇ ಕಾಣುವ, ತೋಫು ಈಗ ಮೊದಲಿನಷ್ಟು ಅಪರಿಚಿತವಲ್ಲ. ಇದೊಂದು ಸಂಪೂರ್ಣ ಪ್ರೊಟೀನ್‌ ಆಹಾರ ಎಂಬುದು ಪ್ರಚಾರ ಪಡೆಯುತ್ತಿದೆ. ರುಚಿಯಲ್ಲಿ ಪನೀರ್‌ನಂತೆ ಅಲ್ಲವಾದರೂ, ಅಂತೆಯೇ ಬಳಕೆ ಮಾಡಬಹುದು. ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ಆದರೆ ನಿಯಮಿತವಾಗಿ ಪನೀರ್‌, ತೋಫು ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್‌ ಕೊರತೆಯನ್ನು ನೀಗಿಸಿಕೊಳ್ಳಬಹುದು. ಅರ್ಧ ಕಪ್‌ ತೋಫುವಿನಲ್ಲಿ ೧೮೧ ಕ್ಯಾಲೊರಿಗಳು, 21.8 ಗ್ರಾಂನಷ್ಟು ಪ್ರೊಟೀನ್‌, 11 ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್‌ ತೋಫುವಿನಲ್ಲಿ ದೊರೆಯುತ್ತದೆ.

Health Benefits Of Tofu

ಹೇಗೆ ಮಾಡುವುದು?

ನಮಗೆ ಪನೀರ್‌ ಮಾಡುವುದು ಗೊತ್ತು. ಆದರೆ ತೋಫು ಮಾಡುವುದು ಹೇಗೆ? ಮನೆಯಲ್ಲೇ ಮಾಡಿಕೊಳ್ಳಲು ಸಾಧ್ಯವೇ? ಅಂಗಡಿಯಿಂದ ತರುವುದಕ್ಕೆ ಏನೆಲ್ಲಾ ಮಿಶ್ರ ಮಾಡಿರುತ್ತಾರೊ ಎಂದು ಕಳವಳಿಸುವವರಿರುತ್ತಾರೆ. ನಾವೇ ಮನೆಯಲ್ಲಿ ಮಾಡಿಕೊಳ್ಳುವುದಾದರೆ ತೋಫು ಮಾಡುವುದು ಹೇಗೆ? ಇದನ್ನು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.

ಬೇಕಾಗುವ ವಸ್ತುಗಳು

ಒಣಗಿದ ಸೋಯಾ ಕಾಳುಗಳು- 2 ಕಪ್‌, ನೀರು- 10 ಕಪ್‌, ವಿನೇಗರ್‌ ಅಥವಾ ನಿಂಬೆರಸ- 3 ದೊಡ್ಡ ಚಮಚ

Tofu Protein Foods

ವಿಧಾನ

ಸುಮಾರು 10-12 ತಾಸುಗಳಷ್ಟು ಕಾಲ ಸೋಯಾ ಕಾಳುಗಳನ್ನು ನೆನೆಸಿಡಿ. ಅವು ಉಬ್ಬಿದಂತಾಗಿ ಇರುವ ಗಾತ್ರಕ್ಕೆ ದುಪ್ಪಟ್ಟಾಗುತ್ತವೆ. ಅದನ್ನು ನೆನೆಸಿದ ನೀರನ್ನು ಚೆಲ್ಲಿ, ಕಾಳುಗಳನ್ನು ಚೆನ್ನಾಗಿ ತೊಳೆಯಿರಿ. ಇದಕ್ಕೆ ಒಂದೊಂದೇ ಕಪ್‌ ನೀರು ಹಾಕುತ್ತಾ ಮಿಕ್ಸಿಯಲ್ಲಿ ರುಬ್ಬುತ್ತಾ ಬನ್ನಿ. ಸಣ್ಣ ಗ್ರೈಂಡರ್‌ ಇದ್ದರೆ, ಅದನ್ನೂ ಉಪಯೋಗಿಸಬಹುದು. ಇದಿಷ್ಟೂ ಕಾಳುಗಳು ನಯವಾದ ಪೇಸ್ಟ್‌ ಆಗಿ, ಹಾಲಿನಂತಾಗುವುದಕ್ಕೆ ಸುಮಾರು 8-10 ಕಪ್‌ಗಳಷ್ಟು ನೀರು ಬೇಕಾಗುತ್ತದೆ.
ಈ ಹಾಲನ್ನು ಅಗಲ ಬಾಯಿಯ ಕಡಾಯಿಗೆ ಹಾಕಿ ಕುದಿಯುವುದಕ್ಕೆ ಇಡಿ. ಆಗಾಗ ಕೈಯಾಡಿಸದಿದ್ದರೆ ತಳ ಸೀದು ಹೋಗಬಹುದು. ಕುದಿಯಲು ಪ್ರಾರಂಭಿಸಿದ ೧೦ ನಿಮಿಷಗಳ ನಂತರ, ಇದನ್ನು ತೆಳುವಾದ ಮಲ್ಲಿನಂಥ ಬಟ್ಟೆಗೆ ಹಾಕಿ ಶೋಧಿಸಿಕೊಳ್ಳಿ. ಇದರಿಂದ ಸೋಯಾ ಕಾಳುಗಳ ಪಲ್ಪ್‌ ಬೇರೆಯಾಗುತ್ತದೆ. ಬಿಳಿ ಬಣ್ಣದ ದ್ರವ ಮಾತ್ರವೇ ಉಳಿದುಕೊಳ್ಳುತ್ತದೆ. ಇದನ್ನೇ ಸೋಯಾ ಹಾಲು ಎಂದು ಕರೆಯಲಾಗುತ್ತದೆ. ಪಲ್ಪ್‌ನಲ್ಲಿ ಉಳಿದ ಹಾಲನ್ನು ಸಹ ಹಿಂಡಿ ತೆಗೆದುಕೊಳ್ಳಿ. ಹೀಗೆ ಶೋಧಿಸಿ ತೆಗೆದ ಹಾಲನ್ನು ಮತ್ತೆ ಉರಿಯಲ್ಲಿಡಿ. ಆದರೆ ಕುದಿಯಲು ಪ್ರಾರಂಭಿಸುವ ಮುನ್ನವೇ ಇದಕ್ಕೆ ವಿನೇಗರ್‌ ಅಥವಾ ನಿಂಬೆ ರಸ ಸೇರಿಸಿ. ಚೆನ್ನಾಗಿ ಕೈಯಾಡಿಸಿ, ಉರಿಯಿಂದ ಪಾತ್ರೆಯನ್ನು ತೆಗೆಯಿರಿ. ೧೫ ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಪನೀರ್‌ ಮಾಡುವುದಕ್ಕೆ ಹಾಲು ಒಡೆಸಿದಂತೆಯೇ ಸೋಯಾ ಹಾಲು ಸಹ ಒಡೆದು ನೀರು ಪ್ರತ್ಯೇಕವಾಗಿರುತ್ತದೆ. ಇದರ ನೀರು ತೆಗೆಯುವುದಕ್ಕೆ ಬಟ್ಟೆಯಲ್ಲಿ ಕಟ್ಟಿ ನೇತಾಡಿಸಬಹುದು ಅಥವಾ ಇತರ ಯಾವುದೇ ಕ್ರಮ ಸೂಕ್ತವಾಗಿದ್ದಲ್ಲಿ ಅನುಸರಿಸಬಹುದು. ನಂತರ ಥೇಟ್‌ ಪನೀರ್‌ನಂತೆಯೇ ತಟ್ಟೆಯಲ್ಲಿ ಹರವಿ, ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು. ಮನೆಯಲ್ಲೇ ಮಾಡಿದ ತೋಫು ಈಗ ಸಿದ್ಧ. ಇದು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿ.

ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗಗಳಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್‌ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ. ತೋಫುವಿನ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್‌ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಮತ್ತು ಆಸ್ಟಿಯೊಪೊರೊಸಿಸ್‌ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮೀಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರುವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.

Continue Reading

ಆರೋಗ್ಯ

Use Of Paneer Water: ಪನೀರ್‌ ಮಾಡುವಾಗ ಉಳಿದ ನೀರನ್ನು ಚೆಲ್ಲಬೇಡಿ; ಹೀಗೆ ಬಳಸಿ ಪೋಷಕಾಂಶ ಪಡೆಯಿರಿ!

Use Of Paneer Water: ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸುಲಭವಾಗಿ ದಕ್ಕಬಹುದಾದ ಆಯ್ಕೆಗಳ ಪೈಕಿ ಪನೀರ್‌ ಕೂಡ ಒಂದು. ಇಷ್ಟಪಟ್ಟು ತಿನ್ನಬಹುದಾದ ಈ ಪನೀರ್‌ ಅನ್ನು ಕೆಲವರು ಮನೆಯಲ್ಲೇ ಮಾಡಿಕೊಂಡು ತಿಂದರೆ, ಇನ್ನೂ ಕೆಲವರು ಹೊರಗಿನಿಂದ ನೇರವಾಗಿ ಖರೀದಿಸಿ ತರುವುದು ಸಾಮಾನ್ಯ. ಪ್ಯಾಕೆಟ್ಟುಗಳಲ್ಲಿ ಅಥವಾ ಡೈರಿಗಳಲ್ಲಿ ತಾಜಾ ಪನೀರ್‌ ಕೂಡ ಇಂದು ಲಭ್ಯ ಇವೆ. ಪನೀರ್‌ ಮಾಡುವಾಗ ಉಳಿದ ನೀರನ್ನು ಸಮರ್ಥವಾಗಿ ಬಳಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Paneer test
Koo

ಪನೀರ್‌ ಎಂಬ ಪ್ರೊಟೀನ್‌ಯುಕ್ತ ಆಹಾರ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಉಪಯೋಗಿಸಿರುತ್ತೀರಿ. ತೂಕ ಇಳಿಸುವ, ಫಿಟ್‌ನೆಸ್‌ ಪ್ರಿಯರ ಮನೆಗಳಲ್ಲಂತೂ ಪನೀರ್‌ ಖಂಡಿತ ಇದ್ದೇ ಇರುತ್ತದೆ. ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸುಲಭವಾಗಿ ದಕ್ಕಬಹುದಾದ ಆಕೆಗಳ ಪೈಕಿ ಪನೀರ್‌ ಕೂಡ ಒಂದು. ಇಷ್ಟಪಟ್ಟು ತಿನ್ನಬಹುದಾದ ಈ ಪನೀರ್‌ ಅನ್ನು ಕೆಲವರು ಮನೆಯಲ್ಲೇ ಮಾಡಿಕೊಂಡು ತಿಂದರೆ, ಇನ್ನೂ ಕೆಲವರು ಹೊರಗಿನಿಂದ ನೇರವಾಗಿ ಖರೀದಿಸಿ ತರುವುದು ಸಾಮಾನ್ಯ. ಪ್ಯಾಕಟ್ಟುಗಳಲ್ಲಿ ಅಥವಾ ಡೈರಿಗಳಲ್ಲಿ ತಾಜಾ ಪನೀರ್‌ ಕೂಡಾ ಇಂದು ಲಭ್ಯವಿವೆ. ಮನೆಯಲ್ಲೇ ಮಾಡುವುದಾದರೆ, ಹಾಲು ಕುದಿಸಿಕೊಂಡು ಅದು ಕುದಿಯುತ್ತಿರುವಾಗಲೇ ಅದಕ್ಕೆ ನಿಂಬೆಹಣ್ಣು ಹಿಂಡಿದರೆ, ಹಾಲು ಒಡೆಯುತ್ತದೆ. ಇದನ್ನೊಂದು ಬಟ್ಟೆಯಲ್ಲಿ ಸೋಸಿಕೊಂಡರೆ, ಇದರ ನೀರು ಪ್ರತ್ಯೇಕವಾಗಿ ಬಟ್ಟೆಯಲ್ಲಿ ಕೇವಲ ಪನೀರ್‌ ಉಳಿಯುತ್ತದೆ. ಪನೀರ್‌ ಅನ್ನು ಹಿಂಡಿಕೊಂಡು ಬಳಸಿದರೆ, ಉಳಿದ ನೀರನ್ನು ಅನೇಕರು ಚೆಲ್ಲಿ ಬಿಡುವುದು ರೂಢಿ. ಆದರೆ, ಈ ನೀರಿನಲ್ಲೂ ಸಾಕಷ್ಟು ಪ್ರೊಟೀನ್‌ ಇದೆ. ಅನೇಕ ಪೋಷಕಾಂಶಗಳೂ ಇವೆ. ಇವನ್ನು ಚೆಲ್ಲಿದರೆ ಪೋಷಕಾಂಶಗಳು ನಷ್ಟವಾಗುತ್ತವೆ. ಹಾಗಾಗಿ, ಈ ಉಳಿದುಕೊಂಡ ನೀರು ಅಂದರೆ, ವೇ ವಾಟರ್‌ ಅನ್ನು ನೀವು ಅನೇಕ ವಿಧಗಳಲ್ಲಿ ಬಳಸಬಹುದು. ಅದರಲ್ಲಿರುವ ಪೋಷಕಾಂಶ ನಮ್ಮ ದೇಹಕ್ಕೆ ಲಭ್ಯವಾಗುವಂತೆ ಮಾಡಬಹುದು. ಬನ್ನಿ, ವೇ ವಾಟರ್‌ ಅನ್ನು ಯಾವೆಲ್ಲ ವಿಧಾನಗಳಿಂದ ಬಳಸಬಹುದು (Use Of Paneer Water) ಎಂಬುದನ್ನು ನೋಡೋಣ.

Ghee roast Dosa and Idli

ಕರ್ರಿಗಳು ಹಾಗೂ ಗ್ರೇವಿಗಳು

ಪನೀರ್‌ನ ಉಳಿದ ನೀರು ನೀವು ಮಾಡುವ ಕರ್ರಿ ಹಾಗೂ ಗ್ರೇವಿಗಳಿಗೆ ಸೇರಿಸುವುದು ಅತ್ಯುತ್ತಮ ಉಪಾಯ. ಕೇವಲ ನೀವು ಸಾಮಾನ್ಯ ನೀರನ್ನು ಬಳಸುವಲ್ಲಿ ಪನೀರ್‌ನ ಉಳಿದ ನೀರನ್ನು ಸೇರಿಸಬಹುದು. ಶಾಹಿ ಪನೀರ್‌, ಪನೀರ್‌ ಬಟರ್‌ ಮಸಾಲ, ಪಾಲಕ್‌ ಪನೀರ್‌ ಅಥವಾ ಸಾಮಾನ್ಯವಾದ ದಾಲ್‌ ತಡ್ಕಾ ಕೂಡಾ ನೀವು ಮಾಡುತ್ತಿದ್ದರೆ ಈ ಪನೀರ್‌ನ ನೀರನ್ನು ಸೇರಿಸಬಹುದು. ಇದರಿಂದ ನೀವು ಮಾಡಿದ ಈ ಡಿಶ್‌ನ ರುಚಿ ಇನ್ನಷ್ಟು ಸಮೃದ್ಧವಾಗುತ್ತದೆ. ಇದರಲ್ಲಿ ಹೆಚ್ಚು ಪ್ರೊಟೀನ್‌ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.

ಲಸ್ಸಿ

ಕರ್ರಿ ಅಥವಾ ಗ್ರೇವಿಗಳನ್ನು ಮಾಡುವುದು ಕಡಿಮೆ ಎಂದಾದಲ್ಲಿ ಪನೀರ್‌ ನೀರನ್ನು ಬಳಸಿಕೊಳ್ಳಲ್ಲು ಬೇರೆ ಉಪಾಯಗಳೂ ಇವೆ, ಚಿಂತಿಸಬೇಡಿ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಪೇಯಗಳ ಪೈಕಿ ಲಸ್ಸಿ ಕೂಡಾ ಒಂದು. ಪನೀರ್‌ನ ನೀರನ್ನು ನೀವು ಲಸ್ಸಿ ಮಾಡುವಾಗ ಸೇರಿಸಬಹುದು. ಇದರಿಂದ ಲಸ್ಸಿ ಇನ್ನಷ್ಟು ರುಚಿಕರವಷ್ಟೇ ಅಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗುತ್ತದೆ. ಮೊಸರಿಗೆ ಪನೀರ್‌ನ ನೀರನ್ನು ಸೇರಿಸಿ, ಕೊಂಚ ಸಕ್ಕರೆಯನ್ನೋ ಜೇನುತುಪ್ಪವನ್ನೋ ಸೇರಿಸಿಕೊಂಡು ಅಥವಾ ಉಪ್ಪು ಸೇರಿಸಿಕೊಂಡೋ ಕುಡಿಯಬಹುದು. ಬೇಸಿಗೆಯ ಝಳಕ್ಕೆ ಸಮೃದ್ಧವಾದ ಪ್ರೊಬಯಾಟಿಕ್‌ ಪೇಯವಿದು. ದೇಹವನ್ನು ತಂಪಾಗಿಸುವ ದಿವ್ಯಾಮೃತವೂ ಕೂಡ.

ಇಡ್ಲಿ, ದೋಸೆ ಹಿಟ್ಟು

ಹೌದು. ಪನೀರ್‌ನ ನೀರನ್ನು ಬಿಸಾಗಿ ವೇಸ್ಟ್‌ ಮಾಡುವ ಮೊದಲು ಹೀಗೂ ಬಳಸುವ ಸಾಧ್ಯತೆಗಳನ್ನು ಯೋಚಿಸಿ. ನಿತ್ಯವೂ ದೋಸೆ ಹಿಟ್ಟಂತೂ ನಿಮ್ಮಲ್ಲಿ ಮಾಡಿಯೇ ಇರುತ್ತೀರಿ. ಹುಳಿ ಬರಿಸಿದ ಹಿಟ್ಟನ್ನು ತೆಳುವಾಗಿಸಲು ನೀರು ಹಾಕುವ ಬದಲು ಪನೀರ್‌ನ ನೀರನ್ನು ಹಾಕಿ. ಅಥವಾ ಉದ್ದು ಹಾಗೂ ಅಕ್ಕಿಯನ್ನು ರುಬ್ಬುವ ಸಂದರ್ಭವೇ ನೀರಿನ ಬದಲು ಪನೀರ್‌ ನೀರನ್ನು ಹಾಕಿ. ಹುಳಿ ಬರುವ ಪ್ರಕ್ರಿಯೆ ಇನ್ನೂ ಸುಲಭವಾಗುತ್ತದೆ. ವೇ ವಾಟರ್‌ ಅಥವಾ ಈ ಪನೀರ್‌ನ ನೀರಿನಲ್ಲಿರುವ ಪೋಷಕಾಂಶಗಳೂ ಕೂಡಾ ಹಿಟ್ಟಿನ ಮೂಲಕ ದೋಸೆಯಾಗಿ, ಇಡ್ಲಿಯಾಗಿ ನಿಮ್ಮ ಹೊಟ್ಟೆ ಸೇರುತ್ತದೆ.

ಅಕ್ಕಿ ಬೇಯಿಸಲು

ಅಕ್ಕಿ ಅಥವಾ ಬೇಳೆ ಬೇಯಿಸಲೂ ಕೂಡಾ ನೀರಿನ ಬದಲು ಪನೀರ್‌ನ ನೀರನ್ನೇ ಬಳಸಬಹುದು. ಇದರಿಂದ ಅವುಗಳ ರುಚಿಯೂ ಇಮ್ಮಡಿಯಾಗುತ್ತದೆ. ಪನೀರ್‌ನ ನೀರಿನಲ್ಲಿರುವ ಪೋಷಕಾಂಶವೂ ನಷ್ಟವಾಗದು.

ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

ಚಪಾತಿ ಹಿಟ್ಟು ಕಲಸಲು

ಹೌದು. ಈವಾವುವೂ ಬೇಡ ಎಂದಾದರೆ, ಚಪಾತಿ ಹಿಟ್ಟು ಕಲಸಿಡಿ. ಮಾರನೇ ದಿನದ ನಿಮ್ಮ ಅಥವಾ ಮಕ್ಕಳ ಟಿಫನ್‌ ಬಾಕ್ಸಿಗೆ ಚಪಾತಿ ಹಿಟ್ಟು ಕಲಸುತ್ತಿದ್ದರೆ, ನೀರಿನ ಬದಲು ಪನೀರ್‌ ನೀರನ್ನು ಹಾಕಿ. ಇದರಿಂದ ಚಪಾತಿ ಚೆನ್ನಾಗಿ ಮೆದುವಾಗಿ ಉಬ್ಬಿಕೊಂಡು ಬರುವುದಲ್ಲದೆ, ರುಚಿಕರವಾಗಿಯೂ, ಪೋಷಕಾಂಶಗಳಿಂದ ಸಮೃದ್ಧವಾಗಿಯೂ ಇರುತ್ತದೆ.

Continue Reading
Advertisement
Murder case
ಬೆಂಗಳೂರು2 ಗಂಟೆಗಳು ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

assault case
ಹಾವೇರಿ3 ಗಂಟೆಗಳು ago

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

Murder case
ದಾವಣಗೆರೆ4 ಗಂಟೆಗಳು ago

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

new serial
ಬೆಂಗಳೂರು6 ಗಂಟೆಗಳು ago

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

World Retinal Day 2024
ಪ್ರಮುಖ ಸುದ್ದಿ7 ಗಂಟೆಗಳು ago

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

MUda Scam
ರಾಜಕೀಯ8 ಗಂಟೆಗಳು ago

Muda Scam : ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್ಚಾದ ಒತ್ತಡ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಪ್ರತಿಭಟನೆ

Cancer Treatment AI
ಆರೋಗ್ಯ8 ಗಂಟೆಗಳು ago

Cancer Treatment : ವೈದ್ಯಕೀಯ ಲೋಕದಲ್ಲಿ ಎಐ; ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌!

Dina Bhavishya
ಭವಿಷ್ಯ8 ಗಂಟೆಗಳು ago

Dina Bhavishya :ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Self Harming
ಕೋಲಾರ1 ದಿನ ago

Self Harming : ಹೆಂಡ್ತಿ ಮನೆಯವರ ಕಿರುಕುಳ; ವಿಡಿಯೊ ಮಾಡಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ನೇಣಿಗೆ ಶರಣು

karnataka weather Forecast
ಮಳೆ2 ದಿನಗಳು ago

Karnataka Weather : ರಾಜ್ಯಾದ್ಯಂತ ವ್ಯಾಪಕ ಮಳೆ ; ಉಡುಪಿ, ಉತ್ತರ ಕನ್ನಡಕ್ಕೆ ರೆಡ್‌ ಅಲರ್ಟ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌