PAK vs BNG: ಪಾಕ್​ಗೆ ತವರಿನಲ್ಲೇ 10 ವಿಕೆಟ್​ ಹೀನಾಯ ಸೋಲು; ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾ - Vistara News

ಕ್ರೀಡೆ

PAK vs BNG: ಪಾಕ್​ಗೆ ತವರಿನಲ್ಲೇ 10 ವಿಕೆಟ್​ ಹೀನಾಯ ಸೋಲು; ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾ

PAK vs BNG: ಬಾಂಗ್ಲಾದೇಶ ಪಾಕಿಸ್ತಾನದಲ್ಲಿ ಇದುವರೆಗೆ 13 ಟೆಸ್ಟ್​ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14 ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ

VISTARANEWS.COM


on

PAK vs BNG
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾವಲ್ಪಿಂಡಿ: ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಎನ್ನುವ ನಾಣ್ಣುಡಿಯಂತೆ ಪಾಕಿಸ್ತಾನ(PAK vs BNG) ತಂಡ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್​(PAK vs BNG 1st Test) ಪಂದ್ಯದಲ್ಲಿ ಹೀನಾಯ 10 ವಿಕೆಟ್​ಗಳ ಸೋಲು ಕಂಡಿದೆ. ಬಾಂಗ್ಲಾದೇಶ ತಂಡ ಪಾಕ್​ ನೆಲದಲ್ಲಿ ಇದೇ ಮೊದಲ ಗೆಲುವು ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದೆ.

ರಾವಲ್ಪಿಂಡಿಯಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ 6 ವಿಕೆಟ್​ಗೆ 448 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 565 ರನ್‌ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ ಅಂತಿಮ ದಿನದಾಟದಲ್ಲಿ ಕೇವಲ 146 ರನ್​ಗೆ ಸರ್ವ ಪತನ ಕಂಡಿತು. ಗೆಲುವಿಗೆ 28 ರನ್​ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್​ ನಷ್ಟವಿಲ್ಲದೆ 30 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್​ ತಂಡದ ಸೋಲಿಗೆ ಕಾರಣವಾಯಿತು. ಮೊದಲ ಇನಿಂಗ್ಸ್​ನಲ್ಲಿ ಡಿಕ್ಲೇರ್‌ ಮಾಡದೇ ಇರುತ್ತಿದ್ದರೆ ಕನಿಷ್ಠ ಪಂದ್ಯವನ್ನು ಡ್ರಾ ಮಾಡುವ ಅವಕಾಶ ದೊರಕುತ್ತಿತ್ತು. ಇದೀಗ ಸೋಲು ಕಂಡು ಪೇಚಿಗೆ ಸಿಲುಕಿದೆ.

ಐತಿಹಾಸಿಕ ಗೆಲುವು


ಬಾಂಗ್ಲಾದೇಶ ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇದುವರೆಗೆ 13 ಟೆಸ್ಟ್​ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14 ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸಾಧನೆ ಮಾಡಿದೆ.

ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್​ಗೆ 4 ವಿಕೆಟ್​ ಉಡಾಯಿಸಿದರೆ, ಅನುಭವಿ ಶಕಿಬ್​ ಅಲ್​ ಹಸನ್​, 3 ವಿಕೆಟ್​ ಕಡೆವಿದರು. ಬ್ಯಾಟಿಂಗ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ 191 ರನ್‌ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಉಳಿದಂತೆ ಮೆಹಿದಿ ಹಸನ್ 77, ಶಾದ್ಮನ್ ಇಸ್ಲಾಂ 93 ರನ್​ ಬಾರಿಸಿದ್ದರು.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿಯೂ ಪ್ರಗತಿ ಸಾಧಿಸಿದ ಬಾಂಗ್ಲಾ


ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2023-25 ​​ಅಂಕಗಳ ಪಟ್ಟಿಯಲ್ಲಿ ಜಂಟಿ-ಐದನೇ ಸ್ಥಾನಕ್ಕೆ ಏರಿತು. ಮತ್ತೊಂದೆಡೆ, ಶಾನ್ ಮಸೂದ್ ನಾಯಕತ್ವದಲ್ಲಿ ಆಡಿದ ಎಲ್ಲಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ ಇದೀಗ ಎರಡನೇ-ಕೊನೆಯ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಂತಿಮ ಟೆಸ್ಟ್​ ಆಗಸ್ಟ್​ 30ರಿಂದ ಆರಂಭಗೊಳ್ಳಲಿದೆ. ಈ ಪಂದ್ಯವನ್ನು ಸೋತರೆ ಪಾಕ್​ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಎದುರಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paul Valthaty : ಅಮೆರಿಕದ ಕ್ರಿಕೆಟ್‌ ತಂಡದ ಕೋಚಿಂಗ್ ಹುದ್ದೆ ವಹಿಸಿಕೊಂಡ ಐಪಿಎಲ್ ಸ್ಟಾರ್‌ ಪಾಲ್ ವಾಲ್ತಾಟಿ

Paul Valthaty : 40 ವರ್ಷದ ವಾಲ್ತಾಟಿ ಅವರನ್ನು ಮೈನರ್ ಲೀಗ್ ಕ್ರಿಕೆಟ್ ಫ್ರಾಂಚೈಸಿ ಸಿಯಾಟಲ್ ಥಂಡರ್‌ಬೋಲ್ಟ್ಸ್‌‌ನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. 2011ರ ಐಪಿಎಲ್‌‌ನಲ್ಲಿ ಸಿಎಸ್ಕೆ ವಿರುದ್ಧ ವಾಲ್ತಾಟಿ 63 ಎಸೆತಗಳಲ್ಲಿ 120 ರನ್ ಬಾರಿಸಿದ್ದರು. ಆ ಸಮಯದಲ್ಲಿ, ಇದು ಭಾರತೀಯ ಕ್ರಿಕೆಟಿಗರ ಪಾಲಿಗೆ ಎರಡನೇ ಅತಿ ಹೆಚ್ಚು ವೈಯಕ್ತಿಕ ಐಪಿಎಲ್ ಸ್ಕೋರ್ ಆಗಿತ್ತು. 2011ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡ ಪ್ಲೇ ಆಫ್ ಹಂತದಿಂದ ಹೊರಗುಳಿದಿತ್ತು.

VISTARANEWS.COM


on

Paul Valthaty
Koo

ಬೆಂಗಳೂರು: ಪಾಲ್ ವಾಲ್ತಾಟಿ (Paul Valthaty) ಎಂಬ ಕ್ರಿಕೆಟ್‌‌ ಪ್ರತಿಭೆ 2011ರಲ್ಲಿ ಐಪಿಎಲ್‌ನಲ್ಲಿ ಮಿಂಚಿದ್ದರು. ಅವರು ಆ ಆವೃತ್ತಿಯ 9ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಶತಕ ಬಾರಿಸಿದ್ದರು. ಪಂಜಾಬ್‌ ಕಿಂಗ್ಸ್ ತಂಡದ ಪರ ಅವರ ಪಾಲಿಗೆ ಅದೊಂದೇ ಅವರ ಗಮನ ಸೆಳೆಯುವ ಪ್ರದರ್ಶನ. ಬಳಿಕ ನಿಧಾನವಾಗಿ ಅವರು ಮರೆಯಾದರು. 2013ರಲ್ಲಿ ಕೊನೇ ಐಪಿಎಲ್‌ ಪಂದ್ಯವಾಡಿದ್ದರು. ಇದೀಗ ವಾಲ್ತಾಟಿ ಕೋಚಿಂಗ್ ಪಾತ್ರವನ್ನು ವಹಿಸಿಕೊಂಡು ಸುದ್ದಿಯಲ್ಲಿದ್ದಾರೆ. ಆದರೆ ಇದು ಭಾರತದಲ್ಲಿ ಅಲ್ಲ, ಅಮೆರಿಕದಲ್ಲಿ.

40 ವರ್ಷದ ವಾಲ್ತಾಟಿ ಅವರನ್ನು ಮೈನರ್ ಲೀಗ್ ಕ್ರಿಕೆಟ್ ಫ್ರಾಂಚೈಸಿ ಸಿಯಾಟಲ್ ಥಂಡರ್‌ಬೋಲ್ಟ್ಸ್‌‌ನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. 2011ರ ಐಪಿಎಲ್‌‌ನಲ್ಲಿ ಸಿಎಸ್ಕೆ ವಿರುದ್ಧ ವಾಲ್ತಾಟಿ 63 ಎಸೆತಗಳಲ್ಲಿ 120 ರನ್ ಬಾರಿಸಿದ್ದರು. ಆ ಸಮಯದಲ್ಲಿ, ಇದು ಭಾರತೀಯ ಕ್ರಿಕೆಟಿಗರ ಪಾಲಿಗೆ ಎರಡನೇ ಅತಿ ಹೆಚ್ಚು ವೈಯಕ್ತಿಕ ಐಪಿಎಲ್ ಸ್ಕೋರ್ ಆಗಿತ್ತು. 2011ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡ ಪ್ಲೇ ಆಫ್ ಹಂತದಿಂದ ಹೊರಗುಳಿದಿತ್ತು.

2002ರ ಅಂಡರ್-19 ವಿಶ್ವಕಪ್ ವೇಳೆ ವಾಲ್ತಾಟಿ ಕಣ್ಣಿಗೆ ಗಾಯವಾಗಿತ್ತು. ಅವರು ಜೂನ್ 18, 2023 ರಂದು ಪ್ರಥಮ ದರ್ಜೆ ಕ್ರಿಕೆಟ್‌‌ನಿಂದ ನಿವೃತ್ತಿ ಘೋಷಿಸಿದ್ದರು.

ಮೈನರ್ ಲೀಗ್ ಕ್ರಿಕೆಟ್ ಎಂದರೇನು?

ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌‌ಸಿ ) ಪ್ರಾರಂಭಿಸುವುದರ ಜೊತೆಗೆ, ಯುಎಸ್‌‌ ಕ್ರಿಕೆಟ್ 2021ರಲ್ಲಿ ಟಿ 20 ಲೀಗ್ ಮೈನರ್ ಲೀಗ್ ಕ್ರಿಕೆಟ್ (ಎಂಐಎಲ್‌ಸಿ ) ಅನ್ನು ಪ್ರಾರಂಭಿಸಿದೆ. ಎಂಐಎಲ್‌‌ಸಿ ಅನೇಕ ನಗರಗಳು ಮತ್ತು ರಾಜ್ಯಗಳಲ್ಲಿ ವಿಸ್ತರಿಸಿದೆ. 26 ತಂಡಗಳನ್ನು ಉತ್ತರ, ದಕ್ಷಿಣ, ಮಧ್ಯ ಮತ್ತು ಪಶ್ಚಿಮ ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ.

ವಾಲ್ತಾಟಿ ಅವರ ತಂಡ, ಸಿಯಾಟಲ್ ಥಂಡರ್ಬೋಲ್ಟ್ಸ್, 2022ರಲ್ಲಿ ಎಂಐಎಲ್ಸಿಯ ಎರಡನೇ ಋತುವನ್ನು ಈ ತಂಡ ಗೆದ್ದಿತು. ಅವರೀಗ ವೆಸ್ಟರ್ನ್‌ ಸಮ್ಮಿಟ್‌ನಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ: Fatima Sana: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಾಕ್​; 22 ವರ್ಷದ ಫಾತಿಮಾ ನಾಯಕಿ

ಸಿಯಾಟಲ್ ಥಂಡರ್ಬೋಲ್ಟ್ಸ್ ಕೋಚಿಂಗ್ ವಿಭಾಗದಲ್ಲಿ ದೊಡ್ಡ ಹಿಟ್ಟರ್ ಅನ್ನು ಸೇರಿಸಿದೆ! ಕಿಂಗ್ಸ್ ಇಲೆವೆನ್ ಪಂಜಾಬ್‌‌ನ ಮಾಜಿ ಸೆನ್ಸೇಷನ್ ಪಾಲ್ ವಾಲ್ತಾಟಿ ಈಗ ಮುಖ್ಯ ಕೋಚ್ ಆಗಿ ನಮ್ಮ ತಂಡವನ್ನು ಮುನ್ನಡೆಸುತ್ತಿದ್ದಾರೆ” ಎಂದು ತಂಡವು ಇನ್ಸ್ಟಾಗ್ರಾಮ್‌‌ನಲ್ಲಿ ತನ್ನ ಪ್ರಕಟಣೆ ಕೊಟ್ಟಿದೆ.

“3 ಅರ್ಧಶತಕಗಳು ಮತ್ತು ಒಂದು ಶತಕವನ್ನು ತನ್ನ ಕಿಟ್ ಬ್ಯಾಗ್‌ನಲ್ಲಿ ಹೊಂದಿರುವ ವಾಲ್ತಾಟಿಗೆ ಸಿಂಗಲ್ಸ್ ಅನ್ನು ಬೌಂಡರಿ ಮತ್ತು ಸಿಕ್ಸರ್‌ಗಳಾಗಿ ಹೇಗೆ ಪರಿವರ್ತಿಸುವುದು ಎಂದು ತಿಳಿದಿದೆ. ಪಾಲ್ ನಾಯಕತ್ವದಲ್ಲಿ ನಾವು ಅದನ್ನು ಗುರಿಯನ್ನು ಹೊಂದಿರುವುದರಿಂದ ಶಕ್ತಿ ತುಂಬಿದ ಋತುವಿಗೆ ಸಿದ್ಧರಾಗಿ!” ಎಂದು ಅವರು ಹೇಳಿದ್ದಾರೆ.

Continue Reading

ಕ್ರೀಡೆ

Fatima Sana: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಾಕ್​; 22 ವರ್ಷದ ಫಾತಿಮಾ ನಾಯಕಿ

Fatima Sana: ಬೌಲಿಂಗ್​ ಆಲ್​ರೌಂಡರ್​ ಆಗಿರುವ ಫಾತಿಮಾ, ಪಾಕ್​ ಪರ ಇದುವರೆಗೆ 41 ಏಕದಿನ ಮತ್ತು 40 ಟಿ20 ಪಂದ್ಯಗಳನ್ನು ಗಳಲ್ಲಿ ಆಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ದೇಶೀಯ ತಂಡಗಳನ್ನು ಮುನ್ನಡೆಸಿದ್ದ ಅನುಭವ ಹೊಂದಿದ್ದಾರೆ.

VISTARANEWS.COM


on

Koo

ಕರಾಚಿ: ಮುಂಬರುವ ಮಹಿಳಾ ಟಿ20 ವಿಶ್ವಕಪ್(Women’s T20 World Cup)​ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್​ ಮಂಡಳಿ(Pakistan Cricket Board ) 22 ವರ್ಷದ ಫಾತಿಮಾ ಸನಾ(Fatima Sana) ಅವರನ್ನು ನೂತನ ನಾಯಕಿಯನ್ನಾಗಿ ನೇಮಿಸಿದೆ. ಅಕ್ಟೋಬರ್ 3-20ರ ತನಕ ಯುಎಇಯಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕ್​ ತಂಡವನ್ನು ಫಾತಿಮಾ ಸನಾ ಮುನ್ನಡೆಸಲಿದ್ದಾರೆ ಎಂದು ಭಾನುವಾರ ಪಿಸಿಬಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಈ ಹಿಂದೆ ತಂಡದ ನಾಯಕಿಯಾಗಿದ್ದ 37ರ ಹರೆಯದ ನಿದಾ ದಾರ್(Nida Dar) ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ. ನಿದಾ ದಾರ್ ನಾಯಕತ್ವದಲ್ಲಿ ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಮಹಿಳೆಯರ ಏಷ್ಯಾ ಕಪ್‌ನಲ್ಲಿ ಪಾಕ್​ ತಂಡ ಸೆಮಿಫೈನಲ್​ನಲ್ಲಿ ನಿರ್ಗಮಿಸಿತ್ತು. ಇದಕ್ಕು ಮುನ್ನ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಕ್​ ತಂಡ ಸೋಲು ಅನುಭವಿಸಿತ್ತು. ಹೀಗಾಗಿ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಆದರೆ ಟಿ20 ವಿಶ್ವಕಪ್​ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

ಬೌಲಿಂಗ್​ ಆಲ್​ರೌಂಡರ್​ ಆಗಿರುವ ಫಾತಿಮಾ, ಪಾಕ್​ ಪರ ಇದುವರೆಗೆ 41 ಏಕದಿನ ಮತ್ತು 40 ಟಿ20 ಪಂದ್ಯಗಳನ್ನು ಗಳಲ್ಲಿ ಆಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ದೇಶೀಯ ತಂಡಗಳನ್ನು ಮುನ್ನಡೆಸಿದ್ದ ಅನುಭವ ಹೊಂದಿದ್ದಾರೆ. ಕಳೆದ ವರ್ಷ(2023) ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದ ಗೆಲುವಿನ ವೇಳೆ ತಂಡದ ಹಂಗಾಮಿ ನಾಯಕರಾಗಿದ್ದರು.

ಇದನ್ನೂ ಓದಿ ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲ್ಯಾಂಡ್​ ಮತ್ತು ಶ್ರೀಲಂಕಾ ತಂಡದೊಂದಿಗೆ ಕಾಣಿಸಿಕೊಂಡಿದೆ.

ಪಾಕಿಸ್ತಾನ ಮಹಿಳಾ ತಂಡ


ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ (ವಿಕೆಟ್ ಕೀಪರ್), ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ), ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ, ತಸ್ಮಿಯಾ ರುಬಾಬ್ ಮತ್ತು ತುಬಾ ಹಸನ್. ಟ್ರಾವೆಲಿಂಗ್ ಮೀಸಲು: ನಜಿಹಾ ಅಲ್ವಿ (ವಿಕೆಟ್-ಕೀಪರ್); ಮೀಸಲು ಆಟಗಾರ್ತಿ ರಮೀನ್ ಶಮೀಮ್ ಮತ್ತು ಉಮ್-ಎ-ಹನಿ.

 ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯ(ICC Women’s T20 World Cup) ಆತಿಥ್ಯವನ್ನು ಕಳೆದ ವಾರ ಐಸಿಸಿ ಯುಎಇ(UAE )ಗೆ ನೀಡಿತ್ತು. ಪಂದ್ಯಾವಳಿಯು ಯುಎಇಯ ಎರಡು ಸ್ಥಳಗಳಾದ ದುಬೈ ಮತ್ತು ಶಾರ್ಜಾದಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ.  

Continue Reading

ಕ್ರೀಡೆ

Virat Kohli: ಧವನ್‌ ವಿದಾಯದ ಕುರಿತು ವಿರಾಟ್​ ಕೊಹ್ಲಿ ಭಾವನಾತ್ಮಕ ಸಂದೇಶ

Virat Kohli: ಧವನ್​ ಐಸಿಸಿ ಟೂರ್ನಿಗಳಲ್ಲಿ ಸದಾ ಭಾರತಕ್ಕೆ ಶ್ರೇಷ್ಠ ಇನ್ನಿಂಗ್ಸ್​ ಒದಗಿಸುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಮಿಸ್ಟರ್​ ಐಸಿಸಿ ಎಂದು ಕರೆಯಲಾಗುತ್ತದೆ.

VISTARANEWS.COM


on

Virat Kohli
Koo

ಮುಂಬಯಿ: ಶನಿವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದ ಟೀಮ್​ ಇಂಡಿಯಾದ ಎಡಗೈ ಆರಂಭಿಕ ಬ್ಯಾಟರ್​ ಶಿಖರ್​ ಧವನ್​ಗೆ(shikhar dhawan) ಸಹ ಆಟಗಾರ ವಿರಾಟ್​ ಕೊಹ್ಲಿ(Virat Kohli) ಭಾವನಾತ್ಮಕ ಸಂದೇಶದ ಮೂಲಕ ನಿವೃತ್ತ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಶಿಖರ್​ ಧವನ್​ ಬಗ್ಗೆ ಬರೆದುಕೊಂಡಿರುವ ಕೊಹ್ಲಿ, ‘ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಭಯಮುಕ್ತ ಪ್ರದರ್ಶನ ನೀಡಿದ್ದೀರಿ. ಇದೇ ಕಾರಣಕ್ಕೆ ಭಾರತದ ಅತ್ಯಂತ ವಿಶ್ವಾಸಾರ್ಹ ಓಪನರ್‌ಗಳಲ್ಲಿ ಒಬ್ಬರಾಗಲು ಸಾಧ್ಯವಾಯಿತು. ನೀವು ನಮಗೆ ಪಾಲಿಸಲು ಲೆಕ್ಕವಿಲ್ಲದಷ್ಟು ನೆನಪುಗಳನ್ನು ನೀಡಿದ್ದೀರಿ. ಆಟದ ಮೇಲಿನ ನಿಮ್ಮ ಉತ್ಸಾಹ, ನಿಮ್ಮ ಕ್ರೀಡಾ ಮನೋಭಾವ ಮತ್ತು ನಿಮ್ಮ ಟ್ರೇಡ್‌ಮಾರ್ಕ್ ಸ್ಮೈಲ್ ತಪ್ಪಿಹೋಗುತ್ತದೆ. ಆದರೆ, ನಿಮ್ಮ ಪರಂಪರೆಯು ಜೀವಿಸುತ್ತದೆ. ನೆನಪುಗಳು, ಮರೆಯಲಾಗದ ಪ್ರದರ್ಶನಗಳು ಮತ್ತು ಯಾವಾಗಲೂ ನಿಮ್ಮ ಹೃದಯದಿಂದ ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು ಗಬ್ಬರ್. ಮೈದಾನದ ಹೊರಗೆ ನಿಮ್ಮ ಮುಂದಿನ ಇನ್ನಿಂಗ್ಸ್​ಗೆ ನಿಮಗೆ ಶುಭ ಹಾರೈಸುತ್ತೇನೆ!” ಎಂದು ಕೊಹ್ಲಿ ಭಾವನಾತ್ಮವಾಗಿ ಬರೆದುಕೊಂಡಿದ್ದಾರೆ. ಅಂಕಿ-ಅಂಶಗಳ ಪ್ರಕಾರ 2013ರ ಜೂನ್​ನಿಂದ 2019ರವರೆಗೆ ಧವನ್​ (23), ಕೊಹ್ಲಿ (49) ಮತ್ತು ರೋಹಿತ್​ (30) ಒಟ್ಟು 102 ಶತಕ ಸಿಡಿಸಿದ್ದರು.

2013ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಮೊಹಾಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸುವ ಮೂಲಕ ಶಿಖರ್​ ಧವನ್​ ಭಾರತದ ಕ್ರಿಕೆಟ್​ಗೆ ಹೆಚ್ಚು ಪರಿಚಿತರಾದರು. ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರಿಂದ ಟೆಸ್ಟ್​ ಕ್ಯಾಪ್​ ಪಡೆದುಕೊಂಡಿದ್ದ ಧವನ್​, 174 ಎಸೆತಗಳಲ್ಲಿ 33 ಬೌಂಡರಿ, 2 ಸಿಕ್ಸರ್​ ಸಹಿತ 187 ರನ್​ ಸಿಡಿಸಿದ್ದರು. 85 ಎಸೆತಗಳಲ್ಲೇ ಶತಕ ಪೂರೈಸುವ ಮೂಲಕ ಪದಾರ್ಪಣೆಯ ಟೆಸ್ಟ್​ನಲ್ಲಿ ಅತಿವೇಗದ ಶತಕ ಸಿಡಿಸಿದ ಸಾಧಕ ಎನಿಸಿದ್ದರು. ಅಲ್ಲದೆ ಪದಾರ್ಪಣೆಯ ಟೆಸ್ಟ್​ನಲ್ಲಿ ಭಾರತ ಪರ ಗರಿಷ್ಠ ರನ್​ ಸ್ಕೋರರ್​ ಎನಿಸಿದ್ದರು.

ಇದನ್ನೂ ಓದಿ Shikhar Dhawan: ಶಿಖರ ಸಾಧನೆಯ ವೀರ ಈ ಶಿಖರ್​ ಧವನ್​; ದಾಖಲೆ ಪಟ್ಟಿ ಹೀಗಿದೆ

38 ವರ್ಷದ ಧವನ್​ ಶನಿವಾರ ಬೆಳಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಧವನ್​ ಐಸಿಸಿ ಟೂರ್ನಿಗಳಲ್ಲಿ ಸದಾ ಭಾರತಕ್ಕೆ ಶ್ರೇಷ್ಠ ಇನ್ನಿಂಗ್ಸ್​ ಒದಗಿಸುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಮಿಸ್ಟರ್​ ಐಸಿಸಿ ಎಂದು ಕರೆಯಲಾಗುತ್ತದೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿ ಧವನ್​ ಪಾಲಿಗೆ ನೆಚ್ಚಿನ ಟೂರ್ನಿಯಾಗಿತ್ತು. 2013ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಗರಿಷ್ಠ 363 ರನ್​ ಸಿಡಿಸಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸರಣಿಶ್ರೇಷ್ಠರಾಗಿದ್ದರು. 2017ರ ಆವೃತ್ತಿಯಲ್ಲೂ ಗರಿಷ್ಠ 338 ರನ್​ ಸಿಡಿಸಿದ್ದರು.

Continue Reading

ಕ್ರೀಡೆ

Shakib Al Hasan: ಚೆಂಡೆಸೆದು ಪಾಕ್​ ಆಟಗಾರ ರಿಜ್ವಾನ್​ ಕೆಣಕಿದ ಶಕಿಬ್​ ಅಲ್​ ಹಸನ್; ವಿಡಿಯೊ ವೈರಲ್​

VISTARANEWS.COM


on

Shakib Al Hasan
Koo

ರಾವಲ್ಪಿಂಡಿ: ಬಾಂಗ್ಲಾದೇಶದ(Pakistan vs Bangladesh) ಹಿರಿಯ ಕ್ರಿಕೆಟ್​ ಆಟಗಾರ ಶಕಿಬ್​ ಅಲ್​ ಹಸನ್​(Shakib Al Hasan) ಮೈದಾನದಲ್ಲಿ ಅತಿರೇಕದ ವರ್ತನೆ​ ತೋರುವು ಅವರ ಸಾಮಾನ್ಯ ಗುಣ. ಹಲವು ಬಾರಿ ಅವರು ಈ ರೀತಿಯ ವರ್ತನೆ ತೋರಿ ಟೀಕಿಗೆ ಗುರಿಯಾಗಿದ್ದರು. ಇದೀಗ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿಯೂ ಶಕಿಬ್​ ತಾಳ್ಮೆ ಕಳೆದುಕೊಂಡ(Angry Shakib Al Hasan) ಘಟನೆ ನಡೆದಿದೆ.

ಪಾಕಿಸ್ತಾನದ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್(Mohammad Rizwan)​ ಕ್ರೀಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದರು. ಶಕಿಬ್​ ಬೌಲಿಂಗ್​ ನಡೆಸಲು ಮುಂದಾದ ವೇಳೆ ರಿಜ್ವಾನ್​ ಏಕಾಏಕಿ ಹಿಂದಕ್ಕೆ ತಿರುಗಿ ಫೀಲ್ಡರ್​ಗೆ ಏನೋ ಸನ್ನೆ ಮಾಡಿ ಬ್ಯಾಟಿಂಗ್​ ನಡೆಸಲು ಸಿದ್ಧರಾಗಲಿಲ್ಲ. ಸಿಟ್ಟಿಗೆದ್ದ ಶಕಿಬ್​​ ಚೆಂಡನ್ನು ನೇರವಾಗಿ ರಿಜ್ವಾನ್ ಕಡೆ ಎಸೆದರು. ಚೆಂಡು ರಿಜ್ವಾನ್ ತೆಲೆಯ ಪಕ್ಕಾದಲ್ಲೇ ಸಾಗಿ ಕೀಪರ್ ಕೈ ಸೇರಿತು. ಈ ವೇಳೆ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಮಧ್ಯ ಪ್ರವೇಶಿಸಿ ಶಬಿಕ್​ಗೆ ವಾರ್ನಿಂಗ್​ ನೀಡಿದರು. ಸದ್ಯ ಈ ವಿಡಿಯೊ ವೈರಲ್(viral video)​ ಆಗಿದೆ.

2 ವಾರಗಳ ಹಿಂದೆ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಸೂಪರ್ ಓವರ್(Shakib Al Hasan super over) ಆಡಲು ನಿರಾಕರಿಸಿದ ವಿವಾರವಾಗಿ ಶಕಿಬ್​ ಸುದ್ದಿಯಾಗಿದ್ದರು. ಇವರ ಈ ಕೆಟ್ಟ ನಿರ್ಧಾರದಿಂದ ತಂಡ ಟೂರ್ನಿಯಿಂದಲೇ ಹೊರಬಿದ್ದಿತ್ತು.

ಎಲಿಮಿನೇಟರ್ ಪಂದ್ಯವಾದ ಬಾಂಗ್ಲಾ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ತಂಡದ ನಾಯಕ ಶಕಿಬ್‌ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕನಿಷ್ಟ 5 ಓವರ್‌ ಆಡಿಸಬೇಕು ಎಂದು ಹಠ ಹಿಡಿದರು. ಇದಕ್ಕೆ ಒಪ್ಪದ ಆಯೋಜಕರು ಪಂದ್ಯವನ್ನೇ ರದ್ದುಗೊಳಿಸಿದರು. ಈ ಪರಿಣಾಮ ಬಾಂಗ್ಲಾ ಟಗರ್ಸ್‌ ತಂಡ ಟೂನಿಯಿಂದಲೇ ಹೊರಬಿದ್ದಿತ್ತು.

ಇದನ್ನೂ ಓದಿ Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಆಡಲಿಳಿದು ವಿಶ್ವಕಪ್‌ ಆಡಿದ್ದರು.

ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಆಪಾದಿತ ಕೊಲೆಗೆ ಸಂಬಂಧಿಸಿದಂತೆ 147 ಜನರಲ್ಲಿ ಶಕಿಬ್​ ಕೂಡ ಸೇರಿದ್ದಾರೆ ಎಂದು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ರಫೀಕುಲ್ ಇಸ್ಲಾಂ ಎನ್ನುವ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕಿಬ್​ ಅಲ್ ಹಸನ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಕಿಬ್ ಮಾತ್ರವಲ್ಲ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 500 ಮಂದಿಯನ್ನು ಇದರಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

Continue Reading
Advertisement
Karkala Physical Abuse
ಕರ್ನಾಟಕ10 mins ago

Karkala Physical Abuse: ಕಾರ್ಕಳದ ಅತ್ಯಾಚಾರ ಸಂತ್ರಸ್ತೆ ರಕ್ತದಲ್ಲಿ ಡ್ರಗ್ಸ್ ಪತ್ತೆ; ಆರೋಪಿಗಳ ರಿಪೋರ್ಟ್‌ ನೆಗೆಟಿವ್!

Paul Valthaty
ಪ್ರಮುಖ ಸುದ್ದಿ16 mins ago

Paul Valthaty : ಅಮೆರಿಕದ ಕ್ರಿಕೆಟ್‌ ತಂಡದ ಕೋಚಿಂಗ್ ಹುದ್ದೆ ವಹಿಸಿಕೊಂಡ ಐಪಿಎಲ್ ಸ್ಟಾರ್‌ ಪಾಲ್ ವಾಲ್ತಾಟಿ

Krishna Janmastami 2024
ಧಾರ್ಮಿಕ47 mins ago

Krishna Janmastami 2024: ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಏಕೆ?

KAS Prelims exam
ಕರ್ನಾಟಕ49 mins ago

KAS Prelims exam: ಕೆಎಎಸ್‌ ಪ್ರಿಲಿಮ್ಸ್ ಮುಂದೂಡಲು ರಾಜ್ಯಪಾಲರಿಗೆ ಅಭ್ಯರ್ಥಿಗಳ ನಿಯೋಗ ಮನವಿ

Crime News
ದೇಶ1 hour ago

Murder Case : ಭಕ್ತನ ಮೈಮೇಲೆ ದೆವ್ವ ಸೇರಿದೆ ಎಂದು ಚೆನ್ನಾಗಿ ಬಡಿದು ಕೊಂದ ಚರ್ಚ್‌ ಫಾದರ್‌!

Gruha Lakshmi Scheme
ಕರ್ನಾಟಕ2 hours ago

Gruha Lakshmi Scheme: ಗೃಹಲಕ್ಷ್ಮೀ ದುಡ್ಡಿನಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ರೇಷ್ಮೆ ಸೀರೆ ಕಳುಹಿಸಿದ ಲಕ್ಷ್ಮಿ ಹೆಬ್ಬಾಳ್ಕರ್

crime news
ಪ್ರಮುಖ ಸುದ್ದಿ2 hours ago

Crime News : ತನ್ನನ್ನು ಬಿಟ್ಟು ಹೆಂಡತಿಗೆ ಹೆಚ್ಚು ಹಣ ಕೊಡುತ್ತಿ ದ್ದ ಪ್ರಿಯತಮನ ಮರ್ಮಾಂಗ ಕತ್ತರಿಸಿದ ಮಹಿಳೆ

UGCET 2024
ಬೆಂಗಳೂರು2 hours ago

UGCET 2024 : ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್‌ಗಳ ಅಣುಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ

Actor Darshan
ಕರ್ನಾಟಕ3 hours ago

Actor Darshan: ದರ್ಶನ್‌ಗೆ ರಾಜಾತಿಥ್ಯ ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರು; ಜೈಲು ರೆಸಾರ್ಟ್‌ ಆಗಬಾರ್ದು ಎಂದು ಕಿಡಿ

Karnataka Rain House collapses due to heavy rains in Shivamogga
ಮಳೆ3 hours ago

Karnataka Rain : ಶಿವಮೊಗ್ಗದಲ್ಲಿ ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ; ನಾಳೆಗೂ ಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

ಮಳೆ1 day ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

ಟ್ರೆಂಡಿಂಗ್‌