Raksha Bandhan | ಅಣ್ಣ ತಂಗಿಯರ ಬಾಂಧವ್ಯ ಬಲಪಡಿಸುವ ಹಬ್ಬ - Vistara News

ಧಾರ್ಮಿಕ

Raksha Bandhan | ಅಣ್ಣ ತಂಗಿಯರ ಬಾಂಧವ್ಯ ಬಲಪಡಿಸುವ ಹಬ್ಬ

ಶ್ರಾವಣ ಮಾಸದ ಪೌರ್ಣಿಮೆಯಂದು ಆಚರಿಸಲ್ಪಡು ರಕ್ಷಾಬಂಧನ (Raksha Bandhan) ಒಡಹುಟ್ಟಿದವರ ಸಂಬಂಧ ಬೆಸೆಯುವ ಹಬ್ಬ. ಈ ಹಬ್ಬದ ಮಹತ್ವವನ್ನು ತಿಳಿಸುವ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Raksha Bandhan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾ. ಸುಧಾ ಹೆಚ್ ಎಸ್
ಸಂಸ್ಕೃತ ಉಪನ್ಯಾಸಕರು, ಮೈಸೂರು.
ಭೂಮಿಯ ಮೇಲೆ ಕೆಲವು ಸಂಬಂಧಗಳಿಗೆ ಬೆಲೆಕಟ್ಟಲಾಗುವುದಿಲ್ಲ. ಅಂತಹ ಒಂದು ಸಂಬಂಧವೆಂದರೆ ಸೋದರ ಸಂಬಂಧ. ಈ ಶ್ರಾವಣಮಾಸವು ನಮಗೆ ಇಂತಹ ಸಂಬಂಧಗಳ ಉಳಿಸಿ ಬೆಳೆಸುವಂತಹ ಒಂದು ಪವಿತ್ರ ಮಾಸವಾಗಿದೆ.

Raksha Bandhan
ಡಾ. ಸುಧಾ ಹೆಚ್ ಎಸ್

ಮೊನ್ನೆ ತಾನೇ ಶ್ರಾವಣದ ಮೊದಲ ಹಬ್ಬ ಅಣ್ಣ-ತಂಗಿಯರ ಹಬ್ಬ ಎಂದೇ ಕರೆಯಲ್ಪಡುವ ನಾಗರಪಂಚಮಿಯನ್ನು ಅದ್ಧೂರಿಯಾಗಿ ಆಚರಿಸಿದ್ದೇವೆ. ಅಣ್ಣ ತಂಗಿಗೆ ಆಗಷ್ಟೇ ಪಂಚಮಿ ಹಂಬಕ್ಕೆ ಉಡುಗೊರೆ ಕೊಟ್ಟು ಮುಗಿಸಿದ್ದಾನೆ. ಆಗಲೇ ನಾನೂ ಬಂದೆ ಅಂತ ಓಡೋಡಿ ಬಂದಿಂದೆ “ರಕ್ಷಾ ಬಂಧನ” (Raksha Bandhan). ಈ ಹಬ್ಬದಲ್ಲಿಯಂತೂ ಅಣ್ಣ ತಂಗಿಗೆ ಉಡುಗೊರೆ ಕೊಡಲೇಬೇಕು. ತಂಗಿಯರಿಂದ ಪವಿತ್ರವಾದ ರಾಖಿ ಕಟ್ಟಿಸಿಕೊಂಡು ಸಂಭ್ರಮಪಡುವ ಅಣ್ಣಂದಿರು ತಂಗಿಯನ್ನು ಹಾಗೇ ಒಳ್ಳೆ ಉಡುಗೊರೆಯಿಂದ ಖುಷಿಪಡಿಸುತ್ತಾರೆ ಎನ್ನುವುದಂತೂ ನಿಜ.

ರಾಖಿ ಹಬ್ಬದ ಮಹತ್ವವೇನು?
ಈ ರಾಖಿ ಹಬ್ಬ ಬಂದಿದ್ದಾದರೂ ಹೇಗೆ? ಏನಿದರ ಮಹತ್ವ? ಯಾಕೆ ಇದನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತೇವೆ? ಎಂಬ ಈ ಎಲ್ಲ ಪ್ರಶ್ನೆಗಳಿಗೂ ಹಲವಾರು ಕಥೆಗಳು ನಮ್ಮ ಪುರಾಣಕಾಲದಿಂದಲೂ ಇವೆ. ಹಾಗಾದರೆ ಈ ಒಂದು ದಾರಕ್ಕೆ ಇಷ್ಟು ಮಹತ್ವವೇ ? ಎನ್ನುವುದಕ್ಕೆ ಕೆಲವು ನಿದರ್ಶನಗಳನ್ನು ನೋಡೋಣ.

ರಕ್ಷಾ ಬಂಧನ ಇದರಲ್ಲಿ ಎರಡು ಪದಗಳಿವೆ ಒಂದು ʼರಕ್ಷಾʼ ಮತ್ತೊಂದು ʼಬಂಧನʼ. ರಕ್ಷಾ ಎಂದರೆ ರಕ್ಷಣೆ ಬಂಧನ ಎಂದರೆ ಅನುಬಂಧ, ಜೋಡಿಸುವಿಕೆ, ಗಾಢತೆ ಎಂದೆಲ್ಲಾ ಅರ್ಥ ಮಾಡಿಕೊಳ್ಳಬಹುದು. ಸೋದರಿ ತನ್ನ ಸೋದರನಿಗೆ ತಮ್ಮ ಒಂದು ಅನುಬಂಧ ಶಾಶ್ವತವಾಗಿರಲೆಂದು; ಅಣ್ಣನಾಗಿ ನನ್ನ ಎಲ್ಲ ಅನುವು ಆಪತ್ತುಗಳಿಗೆ ರಕ್ಷಣೆ ಕೊಡಬೇಕೆಂದು ಬಯಸಿ ಯಾವತ್ತಿಗೂ ಕೊನೆಯಾಗದ ಪ್ರೀತಿ ನಮ್ಮದಾಗಲಿ ಎಂದು ಪ್ರೀತಿಯಿಂದ ಕಟ್ಟುವ ಹಾಗೂ ತನ್ನ ಅಣ್ಣನಿಗೂ ಸಹ ಎಂದಿಗೂ ಆಪತ್ತು ಬಾರದಿರಲಿ ಎಂದು ದೇವಿಯನ್ನು ಪ್ರಾರ್ಥಿಸಿ ಕಟ್ಟುವ ಒಂದು ರೇಷ್ಮೆಯ ದಾರ. ಇತ್ತೀಚೆಗೆ ಇದನ್ನು ಎಲ್ಲರೂ ಒಬ್ಬರಿಗೊಬ್ಬರು ಕಟ್ಟಿಕೊಳ್ಳುತ್ತಾರೆ.

Raksha Bandhan

ಇನ್ನು ಪೌರಾಣಿಕ ಹಿನ್ನೆಲೆ ನೋಡುವುದಾದರೆ ಇಂದ್ರನಿಗೆ ವ್ರತ್ರಾಸುರನಿಂದ ಸೋಲುಂಟಾಗಿ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದ ಸಂದರ್ಭದಲ್ಲಿ ಗುರು ಬೃಹಸ್ಪತಿಗಳು ರಕ್ಷಾ ಬಂಧನ ಕಟ್ಟಿಕೊಳ್ಳಬೇಕು ಆಗ ರಕ್ಷಣೆ ಸಿಗುತ್ತದೆ ಎನ್ನುತ್ತಾರೆ. ಅವರ ಮಾತಿನಂತೆ ಶಚೀ ದೇವಿ ಇಂದ್ರನಿಗೆ ಈ ಪವಿತ್ರ ದಾರವನ್ನು ಶತ್ರುವಿನಿಂದ ರಕ್ಷಿಸಲು ಕಟ್ಟುತ್ತಾಳೆ ಎಂದು ಭವಿಷ್ಯತ್ ಪುರಾಣವು ಹೇಳುತ್ತದೆ. ಇನ್ನೊಂದು ಪುರಾಣದ ಕಥೆಯ ಪ್ರಕಾರ ಬಲಿ ಎಂಬ ರಾಕ್ಷಸನು ವಿಷ್ಣುವನ್ನು ತನ್ನೊಂದಿಗೆ ಇರಬೇಕೆಂದು ವರ ಕೇಳಿ ಪಡೆದು ವಿಷ್ಣುವನ್ನು ಕರೆದುಕೊಂಡು ಹೋಗುತ್ತಾನೆ. ವಿಷ್ಣುವು ದೀರ್ಘಕಾಲ ವೈಕುಂಠಕ್ಕೆ ಬಾರದಿರಲು ಲಕ್ಷ್ಮೀ ದೇವಿಯು ಚಿಂತಾಕ್ರಾಂತಳಾಗಿ ಕುಳಿತಿದ್ದಾಗ ತ್ರಿಲೋಕ ಸಂಚಾರಿ ನಾರದರು ಬರುತ್ತಾರೆ. ಆಗ ಲಕ್ಷ್ಮೀ ದೇವಿಗೆ ಬಲಿಯ ಕೈಯಿಗೆ ಸಹೋದರತ್ವದ ಸಂಕೇತವಾದ ಈ ಬಂಧನವನ್ನು ಕಟ್ಟಿ ವಿಷ್ಣುವನ್ನು ಹಿಂದಿರುಗಿ ಪಡೆಯಬಹುದು ಎಂಬ ಉಪಾಯವನ್ನು ಹೇಳುತ್ತಾರೆ.

ಅಂತೆಯೇ ಲಕ್ಷ್ಮೀ ದೇವಿಯು ಬಲಿಯ ಕೈಯಿಗೆ ಪವಿತ್ರ ರಕ್ಷೆಯನ್ನು ಕಟ್ಟಿ ಅವನನ್ನು ಸಹೋದರನನ್ನಾಗಿ ಮಾಡಿಕೊಂಡು ವಿಷ್ಣುವನ್ನು ತನಗೆ ನೀಡಬೇಕೆಂದು ಕೇಳಿಕೊಳ್ಳುತ್ತಾಳೆ. ಸಹೋದರಿಯ ಮಾತಿಗೆ ಕಟ್ಟುಬಿದ್ದು ಬಲಿಯು ವಿಷ್ಣುವನ್ನು ಲಕ್ಷ್ಮೀ ದೇವಿಗೆ ಹಿಂದಿರುಗಿಸುತ್ತಾನೆ.

ಅಲೆಕ್ಸಾಂಡರ್‌ನ ಉಳಿಸಿದ ರಾಖಿ
ಇತಿಹಾಸದ ಒಂದು ದಂತಕಥೆಯ ಪ್ರಕಾರ ಸೋಲೇ ಅರಿಯದ ದೊರೆ ಅಲೆಕ್ಸಾಂಡರ್‌ನು ಭಾರತಕ್ಕೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯವಾಗಿ ಎದುರಿಸಿದವನು ಪೋರಸ್ ಒಬ್ಬನೇ. ಆಗ ಅವರಿಬ್ಬರ ನಡುವೆ ಭೀಕರ ಕದನ ಪ್ರಾರಂಭವಾಗುತ್ತದೆ. ಇದೇ ಸಮಯದಲ್ಲಿ ಅಲೆಕ್ಸಾಂಡರ್‌ನ ಪತ್ನಿ ರೊಕ್ಸಾನ್‌ಳನಿಗೆ ಅಲೆಕ್ಸಾಂಡರ್‌ ಯುದ್ಧದಲ್ಲಿ ಕೊಲ್ಲಲ್ಪಡುವ ಭೀತಿ ಉಂಟಾಗುತ್ತದೆ. ಆಕೆ ಭಾರತದ ರಕ್ಷಾ ಬಂಧನದ ಕುರಿತು ತಿಳಿದುಕೊಂಡು, ಪೋರಸನಿಗೆ ಪವಿತ್ರ ರಾಖಿಯನ್ನು ರೇಷ್ಮೆ ಬಟ್ಟೆಯೊಡನೆ ಸುತ್ತಿ ಅದರೊಂದಿಗೆ “ತನ್ನ ಪತಿಯನ್ನು ಕೊಲ್ಲಬಾರದೆಂಬ” ಮನವಿಯನ್ನು ಕಳುಹಿಸಿರುತ್ತಾಳೆ. ಹಾಗಾಗಿ ಮುಂದೆ ನಡೆದ ಯುದ್ಧದಲ್ಲಿ ಅಲೆಕ್ಸಾಂಡರನನ್ನು ಕೊಲ್ಲಬಹುದಾಗಿದ್ದ ಪೋರಸನು ರುಕ್ಸಾನ್‌ಳ ಕಳುಹಿಸಿದ ರಾಖಿಯನ್ನು ಕೈಯಲ್ಲಿ ನೋಡಿಕೊಳ್ಳುತ್ತಾ ಸಹೋದರಿಗಾಗಿ ಹಾಗೂ ಆಕೆ ಕಳುಹಿಸಿದ ಈ ಪವಿತ್ರ ರಕ್ಷಾ ಬಂಧನಕ್ಕಾಗಿ ನಿನ್ನನ್ನು ಜೀವಂತ ಉಳಿಸಿದ್ದೇನೆ ಎಂದು ಹೇಳಿ ಅಲೆಕ್ಸಾಂಡರನನ್ನು ಕೊಲ್ಲದೇ ಬಿಟ್ಟು ಕಳುಹಿಸುತ್ತಾನೆ.

ಇಂತಹ ಒಂದು ಪವಿತ್ರ ಇತಿಹಾಸವನ್ನು ಹೊಂದಿದ ಹಬ್ಬವು ಶ್ರಾವಣದ ಪೌರ್ಣಿಮೆಯಂದು ಆಚರಿಸಲ್ಪಡುತ್ತದೆ. ಆ ದಿನ ತಂಗಿಯು ಅಣ್ಣನಿಗೆ ಹಣೆಗೆ ತಿಲಕವಿಟ್ಟು ಕೈಗೆ ರಾಖಿ ಕಟ್ಟಿ, ಬಾಯಿಗೆ ಸಿಹಿ ತಿನ್ನಿಸಿ, ಆರತಿ ಎತ್ತಿ ಆಯುರಾರೋಗ್ಯ ಕೊಡುವಂತೆ ದೇವಿಯನ್ನು ಪ್ರಾರ್ಥಿಸುತ್ತಾ ಅಣ್ಣನನ್ನು ಮನದುಂಬಿ ಹರಸುತ್ತಾಳೆ.

ಮೀನುಗಾರರಲ್ಲಿಯೂ ಆಚರಣೆ
ಇನ್ನೊಂದೆಡೆ ಈ ಹಬ್ಬವನ್ನು ಮೀನುಗಾರ ಸಮುದಾಯದವರು ತುಂಬಾ ವಿಜೃಂಭಣೆಯಿದ ಆಚರಿಸುತ್ತಾರೆ. ವರುಣದೇವನಿಗೆ ರಾಖಿ ಅರ್ಪಿಸುತ್ತಾ ತಮ್ಮ ಕಾಯಕಕ್ಕೆ ರಕ್ಷಣೆಯನ್ನು ಕೋರುತ್ತಾರೆ. ಪುರಾಣದ ಪ್ರಕಾರ ಕಥೆಗಳು ಏನೇ ಇದ್ದರೂ ಸಹ ಅದರ ಆಚರಣೆಯು ನಮ್ಮಲ್ಲಿನ ಬಂಧನವನ್ನು ಬೆಸೆದು ಹೊಸ ಅನುಭೂತಿಯನ್ನು ತರುವುದಂತೂ ಖಂಡಿತವಾಗಿಯೂ ಹೌದು. ನಮ್ಮ ಸನಾತನ ಧರ್ಮದ ಹಬ್ಬಗಳ ಆಚರಣೆಗಳು ಅವುಗಳದ್ದೇ ಆದ ಮಹತ್ವವನ್ನು ಪಡೆದಿವೆ. ರಕ್ಷಾ ಬಂಧನವು ಸಹ ಪವಿತ್ರ ಸಹೋದರತ್ವದ ಸಂಕೇತವಾಗಿ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

Raksha Bandhan

ಇದೊಂದು ಪವಿತ್ರ ಪ್ರೀತಿಯ ಸಂಕೇತ. ರಾಖಿ ಕಟ್ಟಿಸಿಕೊಂಡು ಅಣ್ಣನು ತಂಗಿಯ ರಕ್ಷಣೆ ಮಾಡಿಯೇ ತೀರಬೇಕೆಂದು ಪೂರ್ವಜರು ಇಂತಹ ಒಂದು ಆಚರಣೆಗಳ ಕಟ್ಟುಪಾಡನ್ನು ಇಟ್ಟಿದ್ದಾರೆ. ಇಂದಿನ ಈ ಕಂಪ್ಯೂಟರ್ ಯುಗದಲ್ಲಿ ನಮ್ಮ ಆಚರಣೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಆದರೆ ಒಂದು ಸಮಾಧಾನ ಎಂದರೆ ಈಗಿನ ಸೆಲ್ಫಿ ಹುಚ್ಚಿಗಾದರೂ ರಾಖಿಯನ್ನು ಕೈತುಂಬಾ ಕಟ್ಟಿಕೊಳ್ಳುವವರು ಇದ್ದಾರೆ ಎನ್ನುವುದು, ತಂಗಿಯ ರಕ್ಷಣೆ ಎರಡನೇ ಮಾತು. ಅದು ಮಾಡುತ್ತಾರೋ ಬಿಡುತ್ತಾರೋ ಎನ್ನುವುದನ್ನು ಕಾಲಕ್ಕೆ ಬಿಟ್ಟುಬಿಡೋಣ. ಸಧ್ಯಕ್ಕೆ ಆಚರಣೆಯನ್ನು ಆ ದಿನದ ಒಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ಳಲಾದರೂ ಮಾಡುತ್ತಾರಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾ ಈ ಪವಿತ್ರ ರಕ್ಷಾ ಬಂಧನವು ಎಲ್ಲ ಸಹೋದರರಿಗೂ ದೀರ್ಘ ಆಯುಸ್ಸು ಆರೋಗ್ಯ ಸುಖ ಸಮೃದ್ಧಿ ತರಲಿ ಎಂದು ಹಾರೈಸೋಣ.

ಇದನ್ನೂ ಓದಿ| Rakhi Fashion | ರಕ್ಷಾಬಂಧನಕ್ಕೆ 5 ಟ್ರೆಂಡಿ ಔಟ್‌ಫಿಟ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜ್ಞಾನ

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

ಪವಾಡಗಳ ಬಗ್ಗೆ ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಇಲ್ಲಿ ನಡೆದಿರುವ ಪವಾಡ ಮಾತ್ರ ನಂಬಲು ಅಸಾಧ್ಯವಾಗಿರುವುದು. ಇದನ್ನು ಕೇಳಿ ಎಲ್ಲರೂ ಇದು ಖಂಡಿತಾ ಸಾಧ್ಯವಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಇದು ನಿಜವಾಗಿಯೂ ನಡೆದಿದೆ. ತಲೆಯನ್ನೇ ಕಳೆದುಕೊಂಡ ಕೋಳಿ (Headless Chicken) 18 ತಿಂಗಳ ಕಾಲ ಬದುಕಿದೆ. ಇದು ಈಗ ವಿಜ್ಞಾನಕ್ಕೂ ಸವಾಲಾಗಿ ಕಾಣುತ್ತಿದೆ.

VISTARANEWS.COM


on

By

Headless Chicken
Koo

ಪವಾಡಗಳು (Miracle) ಜೀವನದ (life) ಭಾಗವಾಗಿದೆ. ವಿಜ್ಞಾನದ (science) ಪ್ರಶ್ನೆಗೂ ನಿಲುಕದ ಕೆಲವೊಂದು ಸಂಗತಿಗಳು ಘಟಿಸುತ್ತವೆ. ಯಾರ ಬಳಿಯೂ ಉತ್ತರವಿರುವುದಿಲ್ಲ. ಈ ವಿಷಯಗಳನ್ನು ಅಲೌಕಿಕ (supernatural) ವಿದ್ಯಮಾನದ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಈ ಕೋಳಿಯೂ (Headless Chicken) ಒಂದು. ಇದು ಊಹೆಗೂ ನಿಲುಕದಂತಿದೆ. ನಂಬಲು ಕಷ್ಟ ಮತ್ತು ಆಶ್ಚರ್ಯಕರವಾಗಿದೆ.

ಇದೀಗ ಒಂದು ಪವಾಡ ಪ್ರಕರಣವೊಂದು ವರದಿಯಾಗಿದೆ. ಇದರಲ್ಲಿ ‘ಮೈಕ್’ ಎಂಬ ಕೋಳಿ (Miracle Mike) ತನ್ನ ಉಳಿದ 18 ತಿಂಗಳ ಸುದೀರ್ಘ ಜೀವನವನ್ನು ತಲೆಯಿಲ್ಲದೇ ಕಳೆದಿದೆ.

1945 ರ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ (United States) ಕೊಲೊರಾಡೋದ (Colorado) ಫ್ರೂಟಾದಲ್ಲಿ ವಾಸಿಸುತ್ತಿದ್ದ ಓಲ್ಸೆನ್ ಕುಟುಂಬವು ಸಂಜೆಯ ಊಟಕ್ಕಾಗಿ ಚಿಕನ್ ತಯಾರಿಸಲು ಯೋಚನೆ ಮಾಡುತ್ತಿತ್ತು. ಅದಕ್ಕಾಗಿ ರೈತ ಲಾಯ್ಡ್ ಓಲ್ಸೆನ್ ಮನೆಗೆ ತಾಜಾ ಮಾಂಸವನ್ನು ತರಲು ಹೊಲಕ್ಕೆ ಹೋಗುತ್ತಾನೆ.

ಅಲ್ಲಿ ಆತ ‘ಮೈಕ್’ ಎಂದು ಗುರುತಿಸಲ್ಪಟ್ಟ ಐದೂವರೆ ತಿಂಗಳ ಗಂಡು ವಯಾಂಡೊಟ್ಟೆ ಕೋಳಿಯನ್ನು ಎತ್ತಿಕೊಂಡು ತರುತ್ತಾನೆ. ಅದನ್ನು ಎಷ್ಟೇ ಕೊಲ್ಲಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲಿಲ್ಲ. ತಲೆಯನ್ನೇ ಕತ್ತರಿಸಿದರೂ ಅದು ಉಸಿರು ಚೆಲ್ಲಲಿಲ್ಲ. ಅದೊಂದು ಅಭೂತಪೂರ್ವ ಘಟನೆಯಾಗಿದ್ದು, ವಿಶ್ವವೇ ಬೆರಗಾಗುವಂತೆ ಮಾಡಿತು.


18 ತಿಂಗಳು ಹೇಗೆ ಬದುಕಿತು?

ಲಾಯ್ಡ್ ಕೋಳಿಯ ಶಿರಚ್ಛೇದ ಮಾಡಿದ. ಕತ್ತಿಯ ಏಟು ಅದರ ತಲೆಯ ಹೆಚ್ಚಿನ ಭಾಗಗಳನ್ನು ಕತ್ತರಿಸಿದರೂ ಅದು ಕುತ್ತಿಗೆ ಮತ್ತು ಗಂಟಲಿಗೆ ಸಂಬಂಧಿಸಿದ ಕಂಠನಾಳವನ್ನು ಸೀಳುವಲ್ಲಿ ವಿಫಲವಾಯಿತು. ಹೀಗಾಗಿ ಅದು ಬದುಕುಳಿಯಿತು. ಒಂದು ಕಿವಿ ಮತ್ತು ಮೆದುಳಿನ ಹೆಚ್ಚಿನ ಕಾಂಡವು ಹಾನಿಗೊಳಗಾದರೂ ಅದು ಸಾಯಲಿಲ್ಲ. ರಕ್ತ ವೇಗವಾಗಿ ಹೆಪ್ಪುಗಟ್ಟಿದ್ದರಿಂದ ಅತಿಯಾದ ರಕ್ತದ ನಷ್ಟವಾಗಲಿಲ್ಲ.

ಬಳಿಕ ಲಾಯ್ಡ್ ಮೈಕ್‌ ಗೆ ಹೊಸ ಜೀವನ ನೀಡಲು ಮುಂದಾದ. ಕೋಳಿಯನ್ನು ಮನೆಗೆ ತಂದು ಸಂಪೂರ್ಣ ಆರೈಕೆ ಮಾಡಲು ನಿರ್ಧರಿಸಿದರು.

ಲಾಯ್ಡ್ ಅದಕ್ಕೆ ಹಾಲು ಮತ್ತು ನೀರಿನ ಮಿಶ್ರಣವನ್ನು ಒಳಗೊಂಡಿರುವ ಆಹಾರವನ್ನು ತಯಾರಿಸಿದ. ಐಡ್ರಾಪರ್ ಮೂಲಕ ಅದಕ್ಕೆ ಆಹಾರವನ್ನು ನೀಡಿದ. ಕೆಲವು ಹುಳು ಮತ್ತು ಜೋಳವನ್ನು ನೀಡಿದನು.

ಮೈಕ್ ಗಳಿಸಿದ ಖ್ಯಾತಿ

ಈ ಘಟನೆಯು ಜಗತ್ತಿಗೇ ಸುದ್ದಿಯಾಗುವಷ್ಟು ವಿಸ್ಮಯಕಾರಿಯಾಗಿತ್ತು. ಮೈಕ್ ಭಾರೀ ಜನಮನಗೆದ್ದಿತು ಮತ್ತು ಸಂಶೋಧನೆಯ ವಿಷಯವಾಯಿತು.

ಹಲವಾರು ನಿಯತಕಾಲಿಕೆಗಳಿಗೆ ಇದನ್ನು ವರದಿ ಮಾಡಿತ್ತು. ಅನೇಕ ಪತ್ರಿಕೆಗಳಿಗೆ ಇದು ಮುಖಪುಟದ ವಿಷಯವಾಯಿತು. ಮೈಕ್ ಅನ್ನು 25 ಸೆಂಟ್ಸ್ ವೆಚ್ಚದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಯಿತು.

“ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ” ಅನ್ನು 1999 ರಿಂದ ಕೊಲೊರಾಡೋದ ಫ್ರೂಟಾದಲ್ಲಿ ಪ್ರತಿ ಮೇ ತಿಂಗಳ ಮೂರನೇ ವಾರಾಂತ್ಯದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಮೈಕ್ ನಿಂದ ಕೋಳಿ ಮಾಲೀಕ ತಿಂಗಳಿಗೆ ಸುಮಾರು 45,000 ಡಾಲರ್ ಆದಾಯ ಗಳಿಸಿದ. ಈ ಅದ್ಭುತ ಕೋಳಿ ಮೌಲ್ಯ ಆಗ 10,000 ಡಾಲರ್ ಆಗಿತ್ತು.

ಸಾವು ಹೇಗಾಯಿತು?

1947ರ ಮಾರ್ಚ್ ನಲ್ಲಿ ಜೋಳದ ತುಂಡು ಮೈಕ್ ನ ಗಂಟಲಲ್ಲಿ ಸಿಲುಕಿದ ನಂತರ ಅದು ಸಾವನ್ನಪ್ಪಿತು. ಪ್ರವಾಸದಿಂದ ಹಿಂದಿರುಗುವಾಗ ಲಾಯ್ಡ್ ಶುಚಿಗೊಳಿಸುವ ಸಿರಿಂಜ್‌ಗಳನ್ನು ಬಿಟ್ಟು ಬಂದಿದ್ದರಿಂದ ಮೈಕ್ ನನ್ನು ಬದುಕಿಸಲು ವಿಫಲರಾದರು.

Continue Reading

ಧಾರ್ಮಿಕ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

ನಮ್ಮ ದೈನಂದಿನ ಜೀವನದಲ್ಲಿ ವಾಸ್ತು ಶಾಸ್ತ್ರದ (Vastu Tips) ಪ್ರಭಾವವು ಗಾಢವಾಗಿದೆ. ಮನೆ ಅಥವಾ ಕಾರ್ಯಸ್ಥಳದೊಳಗೆ ಸರಿಯಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇರಿಸಿದಾಗ ಅವು ಶಕ್ತಿಯ ಹರಿವನ್ನು ಸಮನ್ವಯಗೊಳಿಸುತ್ತವೆ. ಉತ್ತಮ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಸಂತೋಷವನ್ನು ನೀಡುವ ಉಡುಗೊರೆಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವಾಗ ಹೆಚ್ಚು ಚಿಂತೆ ಮಾಡದೇ ಇವುಗಳನ್ನು ಆಯ್ಕೆ ಮಾಡಬಹುದು.

VISTARANEWS.COM


on

By

Vastu Tips
Koo

ಉಡುಗೊರೆಗಳನ್ನು (Gift) ಸ್ವೀಕರಿಸುವುದು ಯಾರಿಗೆ ಇಷ್ಟವಿಲ್ಲ? ಪ್ರತಿಯೊಬ್ಬರೂ ಉಡುಗೊರೆ ನೀಡುವಾಗ ಅದು ತೆಗೆದುಕೊಳ್ಳುವವರ ಮನಕ್ಕೆ ಇಷ್ಟವಾಗುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಉಡುಗೊರೆಗಳು ಪ್ರೀತಿಯ ಶುದ್ಧ ಸೂಚಕವಾಗಿದೆ ಮತ್ತು ಅವು ಭಾವನಾತ್ಮಕ ಮತ್ತು ಆಂತರಿಕ ಮೌಲ್ಯವನ್ನು ಹೊಂದಿರುತ್ತದೆ. ಹೀಗಾಗಿ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಆಯ್ಕೆ ಮಾಡುವಾಗ ಯೋಚನೆ ಕಾಡುವುದು ಸಹಜ.

ನಾವು ಕೊಡುವ ಉಡುಗೊರೆಯು ಸ್ವೀಕರಿಸುವವರ ಜೀವನಕ್ಕೆ ಸಮೃದ್ಧಿ (prosperity), ಸಕಾರಾತ್ಮಕತೆ (positivity) ಮತ್ತು ಸಾಮರಸ್ಯವನ್ನು (harmony) ತರುವಂತೆ ಇರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ (Vastu Tips). ಉಡುಗೊರೆಗಳನ್ನು ಆಯ್ಕೆ ಮಾಡಲು ವಾಸ್ತು ಶಾಸ್ತ್ರವು ಕೆಲವೊಂದು ಮಾರ್ಗದರ್ಶನವನ್ನು ನೀಡುತ್ತದೆ.

ವಾಸ್ತು ತತ್ತ್ವಗಳೊಂದಿಗೆ ಜೋಡಿಸಲಾದ ಉಡುಗೊರೆಯನ್ನು ಪ್ರೀತಿ ಪಾತ್ರರಿಗೆ ನೀಡಿದಾಗ ಇದು ಕೇವಲ ವಸ್ತುವನ್ನು ನೀಡುವುದಿಲ್ಲ. ಅದರೊಂದಿಗೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತೀರಿ.

ಸ್ವೀಕರಿಸುವವರ ಯೋಗಕ್ಷೇಮ ಮತ್ತು ಯಶಸ್ಸನ್ನು ಹೆಚ್ಚಿಸುವ ನಿರ್ದಿಷ್ಟ ಉಡುಗೊರೆಗಳನ್ನು ವಾಸ್ತು ಶಾಸ್ತ್ರವು ಸೂಚಿಸುತ್ತದೆ. ಈ ಉಡುಗೊರೆಗಳು ಯಾವುದೇ ಚಿಂತೆ ಇಲ್ಲದೆ ಆಯ್ಕೆ ಮಾಡಬಹುದು. ಇದು ಉಡುಗೊರೆ ಸ್ವೀಕರಿಸುವವರ ಪರಿಸರದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೀವನದ ವಿವಿಧ ಅಂಶಗಳಲ್ಲಿ ಅವರಿಗೆ ಅನುಕೂಲಕರವಾಗಿರುತ್ತದೆ.

ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರುವ 7 ಅದೃಷ್ಟದ ಉಡುಗೊರೆಗಳು

ಲಾಫಿಂಗ್ ಬುದ್ಧ

ಲಾಫಿಂಗ್ ಬುದ್ಧ ಅನೇಕರ ಕಚೇರಿ ಮತ್ತು ಮನೆಗಳಲ್ಲಿ ಕಂಡುಬರುವ ಜನಪ್ರಿಯ ಅಲಂಕಾರಿಕ ವಸ್ತುವಾಗಿದೆ. ಹರ್ಷಚಿತ್ತದ ವ್ಯಕ್ತಿ ಯಾವುದೇ ಜಾಗದಲ್ಲಿ ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಫೆಂಗ್ ಶೂಯಿ ತತ್ತ್ವಗಳ ಪ್ರಕಾರ ರೋಮಾಂಚಕ ಮತ್ತು ಮಂಗಳಕರ ಶಕ್ತಿಯನ್ನು ಇದು ಸೃಷ್ಟಿಸುತ್ತದೆ.


ಗಣೇಶ ವಿಗ್ರಹ

ಗಣೇಶ ಹೊಸ ಆರಂಭ ಮತ್ತು ಯಶಸ್ಸಿನ ದೇವರು. ಗಣೇಶನ ಪ್ರತಿಮೆಯನ್ನು ನೀಡುವುದು ಉಡುಗೊರೆ ಸ್ವೀಕರಿಸುವವರಿಗೆ ಆಶೀರ್ವಾದವನ್ನು ಕೊಡುತ್ತದೆ. ಈ ಪ್ರತಿಮೆಯು ಶಕ್ತಿ, ಬುದ್ಧಿವಂತಿಕೆ ಮತ್ತು ಜೀವನದಲ್ಲಿ ಸವಾಲುಗಳನ್ನು ಜಯಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.


ಶ್ರೀ ಮೇರು ಯಂತ್ರ

ಮೇರು ಶ್ರೀ ಯಂತ್ರವು ತನ್ನ ಆರಾಧಕರಿಗೆ ಶಾಂತಿ, ಸಂತೋಷ, ಜನಪ್ರಿಯತೆ, ಶಕ್ತಿ, ಅಧಿಕಾರ, ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ಸಮರ್ಪಣೆ ಮತ್ತು ನಂಬಿಕೆಯಿಂದ ಇದನ್ನು ಪೂಜಿಸಿದರೆ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.


ರಾಧಾ ಕೃಷ್ಣನ ವಿಗ್ರಹ

ಶುಭ ಸೂಚಕವಾಗಿ ರಾಧಾ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಜೀವನದಲ್ಲಿ ಆಳವಾದ ಶಾಂತಿ, ಸಮೃದ್ಧ ಪ್ರೀತಿ ಮತ್ತು ಬಲವಾದ ಸಮರ್ಪಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಆಮೆ

ಆಮೆಗಳು ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ಗಾಜಿನ ಅಥವಾ ಸ್ಫಟಿಕ ಆಮೆಯನ್ನು ಉಡುಗೊರೆಯಾಗಿ ನೀಡುವುದು ಅವರಿಗೆ ಮಾಡುವ ಯಾವುದೇ ಕೆಲಸದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಚೈಮ್ಸ್

ವಿಂಡ್ ಚೈಮ್ ಗಳು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ. ಅವುಗಳು ಅದೃಷ್ಟ, ಸಮೃದ್ಧಿ ಮತ್ತು ಪಾಲಿಸಬೇಕಾದ ನೆನಪುಗಳನ್ನು ಸಂಕೇತಿಸುತ್ತವೆ. ಅದರ ಸುಮಧುರ ರಾಗಗಳು ಮನಸ್ಸನ್ನು ಶಾಂತಗೊಳಿಸುತ್ತದೆ. ಉತ್ಸಾಹವನ್ನು ಹೆಚ್ಚಿಸುತ್ತವೆ. ಮನೆಗೆ ಧನಾತ್ಮಕ ಶಕ್ತಿ ಮತ್ತು ಶಾಂತಿಯುತ ವಾತಾವರಣವನ್ನು ತುಂಬುತ್ತದೆ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ


ಗೋಮತಿ ಚಕ್ರ ವೃಕ್ಷ

ಗೋಮತಿ ಚಕ್ರವನ್ನು ಉಡುಗೊರೆಯಾಗಿ ನೀಡುವುದು ಆಧ್ಯಾತ್ಮಿಕ ಮಹತ್ವದಿಂದ ತುಂಬಿದ ಅರ್ಥಪೂರ್ಣ ಸೂಚಕವಾಗಿದೆ. ಗೋಮತಿ ನದಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪವಿತ್ರ ಕಲ್ಲುಗಳು ಸಕಾರಾತ್ಮಕ ಶಕ್ತಿ ಮತ್ತು ರಕ್ಷಣಾತ್ಮಕ ಗುಣಗಳಿಂದ ಮೌಲ್ಯಯುತವಾಗಿವೆ. ಗೋಮತಿ ಚಕ್ರವನ್ನು ನೀಡುವುದು ಸ್ವೀಕರಿಸುವವರಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಶೀರ್ವಾದಿಸುತ್ತದೆ.

Continue Reading

ಬೆಳಗಾವಿ

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Belagavi News: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11 ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

VISTARANEWS.COM


on

11th Annual Mahotsav of Sri Annapurneswari Temple in Belagavi from 29th May
Koo

ಬೆಳಗಾವಿ: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ (Belagavi News) ತಿಳಿಸಿದ್ದಾರೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಮೇ 29 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರಿಗೆ ಕಲಶಾಭಿಷೇಕ, 8 ಕ್ಕೆ ನಾಗದೇವರ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ಸಂಜೆ 5 ರಿಂದ ರಂಗ ಪೂಜೆ ಶ್ರೀ ದೇವಿಯ ಪಲ್ಲಕ್ಕಿ- ಮೆರವಣಿಗೆ, ದೀಪೋತ್ಸವ ನಡೆಯಲಿದೆ.

ಮೇ 30 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, 8.30 ಕ್ಕೆ ಮಹಾ ಚಂಡಿಕಾ ಯಾಗ, ಸಂಜೆ 6 ಕ್ಕೆ ಕೀರ್ತನಾಕಾರರಿಂದ ಕೀರ್ತನೆ, ವ್ಯಾಖ್ಯಾನ ನಡೆಯಲಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಮೇ 31 ರಂದು ಬೆಳಗ್ಗೆ 9 ಕ್ಕೆ ದೇವಿಗೆ ವಿಶೇಷ ಅಲಂಕಾರ, ಪೂಜಾರಾಧನೆ, 10 ಕ್ಕೆ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 1 ರಿಂದ 3 ಗಂಟೆವರೆಗೆ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಬೆಂಗಳೂರು

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Basavanagudi News : ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಗಳಲ್ಲಿ ಪೂಜಾ ಸಾಮಗ್ರಿಗಳನ್ನು ಒನ್‌ ಟು ಡಬಲ್‌ ರೇಟ್‌ಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಭಕ್ತಾಧಿಗಳು ಹಾಗೂ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

VISTARANEWS.COM


on

By

Basavanagudi News
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ (Basavanagudi News) ಭಕ್ತಾದಿಗಳು ಹಾಗೂ ಮಳಿಗೆ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಯಲ್ಲಿ ಪೂಜಾ ಸಾಮಗ್ರಿಗಳು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳಿಂದ ಪೂಜಾ ಸಾಮಗ್ರಿಗಳ ಬೆಲೆ ಕೇಳಿ ಭಕ್ತಾದಿಗಳು ಶಾಕ್ ಆಗಿದ್ದರು. ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೂಡ ಕೇಳಿಬಂದಿತ್ತು. ಹೂವು, ಹಣ್ಣು, ಕಡ್ಡಿ, ಕರ್ಪೂರ ಸೇರಿದ 70-80 ರೂಪಾಯಿಯ ಒಂದು ಸಣ್ಣ ಕಿಟ್ ಅನ್ನು ಬರೋಬ್ಬರಿ 150 ರೂಪಾಯಿಗೆ ಸೇಲ್ ಮಾಡಲಾಗುತ್ತಿದೆ. ಇದೊಂಥರಾ ಹಗಲು ದರೋಡೆ ಅಂದರೆ ತಪ್ಪಾಗಲ್ಲ.

ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳು ಇದನ್ನೂ ಪ್ರಶ್ನಸಿದ್ದಾರೆ. ಈ ವೇಳೆ ಭಕ್ತರು ಹಾಗೂ ಮಳಿಗೆ ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಟೆಂಟರ್‌ಗೆ ಹೆಚ್ಚು ಹಣವನ್ನು ಕೊಟ್ಟಿದ್ದೀವಿ, ಹೀಗಾಗಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿವಿ. ಮಾರುಕಟ್ಟೆಯಲ್ಲಿ ಹೂ-ತೆಂಗಿನಕಾಯಿ ದಿನಕ್ಕೊಂದು ದರ ಇರುತ್ತದೆ, ನಾವೇನು ಮಾಡೋಣ ಎಂದು ಮಳಿಗೆ ವ್ಯಾಪಾರಿಗಳು ವಾದವಾಗಿದೆ.

ಇತ್ತ 2 ಬಾಳೆಹಣ್ಣು, ತೆಂಗಿನಕಾಯಿ, ಅಗರಬತ್ತಿ, ಹೂವಿ ಇರುವು ಪೂಜಾ ಸಾಮಗ್ರಿಗೆ ಬರೋಬ್ಬರಿ 150-300 ರೂ. ವ್ಯಾಪಾರಿಗಳು ಭಕ್ತರಿಂದ ಪಡೆಯುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಭಕ್ತರು, ವ್ಯಾಪಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದನ್ನು ಕೇಳಬೇಕಿದ್ದ ಮುಜರಾಯಿ ಕಣ್ಮುಚ್ಚಿ ಕುಳಿತಿದೆ. ಇದರ ಪರಿಣಾಮ ಭಕ್ತರ ಜೇಬು ಖಾಲಿ ಆಗುತ್ತಿದ್ದು, ವಿಧಿಯಿಲ್ಲದೆ ದುಬಾರಿ ಹಣ ತೆರಬೇಕಾಗುತ್ತಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Girlfriend
ದೇಶ1 hour ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ2 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ3 hours ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

T20 World Cup 2024
ಕ್ರೀಡೆ3 hours ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ3 hours ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ4 hours ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ4 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ4 hours ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ4 hours ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ5 hours ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌