University | ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ಡೀಲ್; ಭ್ರಷ್ಟಾಚಾರ ಬಾಂಬ್ ಸಿಡಿಸಿದ ಯತ್ನಾಳ್ - Vistara News

ಪ್ರಮುಖ ಸುದ್ದಿ

University | ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ಡೀಲ್; ಭ್ರಷ್ಟಾಚಾರ ಬಾಂಬ್ ಸಿಡಿಸಿದ ಯತ್ನಾಳ್

ಜಿಲ್ಲೆಗೊಂದು ವಿಶ್ವವಿದ್ಯಾಲಯ (University )ಸ್ಥಾಪಿಸುವ ಬಿಜೆಪಿ ಸರಕಾರದ ಚಿಂತನೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರೋಧ ವ್ಯಕ್ತಪಡಿಸಿದ್ದಾರೆ.

VISTARANEWS.COM


on

yathnala
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯಪುರ: ವಿಶ್ವವಿದ್ಯಾಲಯಲ್ಲಿ (University) ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ಡೀಲ್ ನಡೆಯುತ್ತದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಮಾಹಿತಿ ಸಿಡಿಸಿದ್ದಾರೆ.

ಜಿಲ್ಲೆಗೊಂದು ವಿಶ್ವವಿದ್ಯಾಲಯ ಪರಿಕಲ್ಪನೆಯನ್ನು ವಿರೋಧಿಸಿರುವ ಯತ್ನಾಳ್‌, ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಒಂದು ವಿವಿ ಇದೆ. ಈಗ ಇನ್ನೊಂದು ವಿಶ್ವವಿದ್ಯಾಲಯ ಮಾಡುವುದು ಏಕೆ? ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೊಂದು ವಿವಿ ಮಾಡಬಾರದು. ಇದರಿಂದ ಎರಡೆರಡು ಸಾವಿರ ಕೋಟಿ ವಿವಿಗೆ ಹಾಕುತ್ತೀರಿ. ಅದು ವ್ಯರ್ಥವಾಗುತ್ತದೆ ಎಂದು ತಮ್ಮದೇ ಸರ್ಕಾರದ ಚಿಂತನೆಯನ್ನು ಟೀಕಿಸಿದರು.

ನಮ್ಮ ಸರ್ಕಾರ ಇದ್ದರೆ ಅವರು ಹೇಳಿದ್ದಕ್ಕೆಲ್ಲ ಹೌದಪ್ಪಗಳಿಗೆ ಹೌದಪ್ಪ ಅನ್ನಬೇಕಂತಿದೆಯೇನು ಎಂದು ಪ್ರಶ್ನೆ ಮಾಡಿದ ಅವರು, ಜಿಲ್ಲೆಯಲ್ಲಿ ಚೆನ್ನಮ್ಮ ವಿವಿ, ಅಕ್ಕಮಹಾದೇವಿ ವಿವಿ ಇವೆ. ವಿದ್ಯಾರ್ಥಿಗಳ ಸಂಖ್ಯೆ, ಸಾಮರ್ಥ್ಯದ ಮೇಲೆ ಮುಂದೆ ಬೇಕಾದರೆ ವಿಶ್ವವಿದ್ಯಾಲಯ ಮಾಡಲಿ. ಹೊಸ ಶಿಕ್ಷಣ ನೀತಿ ಪ್ರಕಾರ ಏನು ಆಗಬೇಕು ಆಗಲಿ ಎಂದರು.

ಕೋಟಿ ಕೋಟಿ ಕೊಟ್ಟೆ ಉಪಕುಲಪತಿ ಆಗೋದು!

ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಯಾವ ಅವ್ಯವಹಾರ ನಡೆಯುತ್ತದೆ ಎಂಬುದು ತಿಳಿದಿದೆ. ಮಂಗಳೂರು ವಿವಿ, ಮೈಸೂರು ವಿವಿ, ಬೀದರ್ ವಿವಿ, ಯುಟಿಯುಯಲ್ಲೂ ಅವ್ಯವಹಾರ ಇದ್ದೇ ಇದೆ. ಉಪಕುಲಪತಿ ಆಗಬೇಕಾದರೆ ನಾಲ್ಕೈದು ಕೋಟಿ ಕೊಟ್ಟೆ ಬಂದಿರುತ್ತಾರೆ. ಆ ಬಳಿಕ ಅವರು ಅದನ್ನು ವಾಪಸ್‌ ತೆಗೆದುಕೊಳ್ಳಬೇಕಲ್ಲ? ಅವರೇನು ಶಿಕ್ಷಣ ನೀಡುತ್ತಾರೆ? ವಿಸಿ ನೇಮಕದಲ್ಲಿ ಪಾರದರ್ಶಕ ಆಗಬೇಕು. ಒಳ್ಳೆ, ಪ್ರಾಮಾಣಿಕ ವಿಸಿ ನೇಮಕ ಆಗಬೇಕು ಎಂದರು.

ಇದನ್ನೂ ಓದಿ | ಯತ್ನಾಳ್ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಲಿ: ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಪಂಥಾಹ್ವಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Happy Independence Day : ನೀರಜ್​ನಿಂದ ಹಿಡಿದು ರೋಹಿತ್​ ಶರ್ಮಾ ; ಭಾರತೀಯ ಅಥ್ಲೀಟ್​​ಗಳ ಸ್ವಾತಂತ್ರ್ಯೋತ್ಸವ ಆಚರಣೆಯ ಪೋಸ್ಟ್​ಗಳು ಇಲ್ಲಿವೆ…

Happy Independence Day :

VISTARANEWS.COM


on

Happy Independence Day
Koo

ಬೆಂಗಳೂರು: ಭಾರತವು ತನ್ನ 78 ನೇ ಸ್ವಾತಂತ್ರ್ಯ ದಿನಾಚರಣೆ (Happy Independence Day) ಸಂಭ್ರಮದಲ್ಲಿದೆ. ರಾಷ್ಟ್ರ ವ್ಯಾಪಿ ದೇಶಭಕ್ತಿಯ ಭಾವದಲ್ಲಿ ತುಂಬಿಕೊಂಡಿದೆ. ಅಂತೆಯೇ ಭಾರತದ ಕ್ರೀಡಾ ಭ್ರಾತೃತ್ವವು ಸ್ವಾತಂತ್ರ್ಯ ದಿನವನ್ನು ಸಂಭ್ರದಿಂದ ಆಚರಿಸಿದೆ. ಪ್ರಖ್ಯಾತ ಕ್ರೀಡಾಪಟುಗಳು ದೇಶ ಭಕ್ತಿಯ ಸಾರವನ್ನು ಸಾರಿದ್ದಾರೆ. ದೇಶದ ಜನರಿಗೆ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ರೋಹಿತ್ ಶರ್ಮಾ, ನೀರಜ್ ಚೋಪ್ರಾ, ಭಾರತ ತಂಡದ ನೂತ ಗೌತಮ್ ಗಂಭೀರ್ ಸೇರಿದಂತೆ ಎಲ್ಲರೂ ದೇಶ ಪ್ರೇಮದ ಭಾವವನ್ನು ಸ್ಪುರಿಸಿದ್ದಾರೆ. ‘

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಗೋಲ್ಡನ್ ಬಾಯ್ ಮತ್ತು ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ರಾಷ್ಟ್ರಧ್ವಜವನ್ನು ಹಿಡಿದಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ, ಐತಿಹಾಸಿಕ ಟಿ 20 ವಿಶ್ವಕಪ್ 2024 ರ ಗೆಲುವಿನ ಸಮಯದಲ್ಲಿ ಬಾರ್ಬಡೋಸ್​ನಲ್ಲಿ ತ್ರಿವರ್ಣಧ್ವಜವನ್ನು ಎತ್ತಿ ಹಿಡಿದಿರುವ ಚಿತ್ರವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ. ಭಾರತೀಯ ಕ್ರೀಡಾಪಟುಗಳಿಗೆ ವಿದೇಶ ನೆಲದಲ್ಲಿ ಸೇರಿದಂತೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತದ ಧ್ವಜವೇ ಪ್ರೇರಣೆಯಾಗಿರುತ್ತದೆ. ಭಾರತಕ್ಕಾಗಿ ಆಡುವ ಮತ್ತು ಗೆದ್ದು ಧ್ವಜ ಹಿಡಿದು ಸಂಭ್ರಮಿಸುವ ಕನಸು ಅವರದ್ದಾಗಿರುತ್ತದೆ. ಹೀಗಾಗಿ ಕ್ರೀಡಾಪಟುಗಳು ದೇಶದ ಧ್ವಜದ ಬಗ್ಗೆ ಅಪಾರ ಅಭಿಮಾನ ಹೊಂದಿರುತ್ತಾರೆ. ಅಂತೆಯೇ ಸ್ವಾತಂತ್ರ್ಯ ದಿನದಂದೂ ಧ್ವಜದೊಂದಿಗೆ ಸಂಭ್ರಮಿಸಿದ್ದಾರೆ.

ಕ್ರೀಡಾಪಟುಗಳು ದೇಶದ ಹೆಮ್ಮೆಯ ಕಲಿಗಳು. ಭಾರತದಲ್ಲಿ ಅವರ ಮೇಲೆ ದೊಡ್ಡ ಪ್ರಮಾಣದ ನಿರೀಕ್ಷೆಗಳ ಇರುತ್ತವೆ. ಕ್ರೀಡಾಪಟುಗಳು ತಾವು ಕೇವಲ ತಮಗಾಗಿ ಸ್ಪರ್ಧಿಸುತ್ತಿಲ್ಲ. ಶತಕೋಟಿ ಜನರ ಭರವಸೆಗಳು ಮತ್ತು ಆಕಾಂಕ್ಷೆಗಳಿಗಾಗಿ ಆಡುತ್ತಾರೆ. ಈ ಗುರಿಯು ಅವರ ಮಿತಿಗಳನ್ನು ಮೀರಲು, ಸವಾಲುಗಳನ್ನು ಜಯಿಸಲು ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಪಡೆಯಲು ನೆರವಾಗುತ್ತದೆ.

ಇದನ್ನೂ ಓದಿ: Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

ಒಲಿಂಪಿಕ್ಸ್​​ನಂಥ ಜಾಗತಿಕ ಕ್ರಿಡಾಕೂಟಲ್ಲಿ ಭಾರತವನ್ನು ಪ್ರತಿನಿಧಿಸುವುದು ಕ್ರೀಡಾಪಟುಗಳಿಗೆ ವಿಶೇಷ ಭಾವವಾಗಿದೆ. ದೇಶದ ಗೌರವನ್ನು ವಿಶ್ವ ವೇದಿಕೆಗೆ ಏರಿಸಲು ಅವರಿಗೆ ಅವಕಾಶ ಸಿಗುತ್ತದೆ. ಈ ಕ್ಷೇತ್ರಗಳಲ್ಲಿನ ಯಶಸ್ಸು ರಾಷ್ಟ್ರದ ಖ್ಯಾತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಂದಿನ ಪೀಳಿಗೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತದೆ. ಭಾರತೀಯ ಕ್ರೀಡಾಪಟುಗಳಿಗೆ, ತಮ್ಮ ದೇಶವನ್ನು ಪ್ರತಿನಿಧಿಸುವ ಗೌರವವು ಹೆಮ್ಮೆಯ ಸಂಕೇತವಾಗಿದೆ.

Continue Reading

ದೇಶ

Bomb Threat: ಅಸ್ಸಾಂನ 19 ಕಡೆಗಳಲ್ಲಿ ಬಾಂಬ್‌ ಇರಿಸಿ, ಬಳಿಕ ನಿಷ್ಕ್ರೀಯಗೊಳಿಸುವಂತೆ ಮನವಿ ಮಾಡಿದ ಉಲ್ಫಾ ಉಗ್ರರು

Bomb Threat: ಗುರುವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅಡ್ಡಿಪಡಿಸಲು ಅಸ್ಸಾಂನಾದ್ಯಂತ 19 ಬಾಂಬ್‌ಗಳನ್ನು ಇರಿಸಿದ್ದೇವೆ ULFA-I ಎಂದು ಹೇಳಿಕೊಂಡಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಮೇಲ್ಭಾಗದ ಅಸ್ಸಾಂನ ಶಿವಸಾಗರ್, ದಿಬ್ರುಗಢ ಮತ್ತು ಗುವಾಹಟಿ ಮತ್ತು ಲೋವರ್ ಅಸ್ಸಾಂನ ಹಲವಾರು ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಸಂಘಟನೆಯು ಹೇಳಿದೆ. ಇದರ

VISTARANEWS.COM


on

Bomb threat
Koo

ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆ(Independence Day)ಗೆ ಅಡ್ಡಿಪಡಿಸುವ ನಿಟ್ಟಿನಲ್ಲಿ ನಿಷೇಧಿತ ದಂಗೆಕೋರರ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ULFA-I) ಅಸ್ಸಾಂನ 19 ಕಡೆಗಳಲ್ಲಿ ಬಾಂಬ್‌ ಇಟ್ಟಿರುವ ಘಟನೆ ವರದಿಯಾಗಿದೆ. ವಿವಿಧೆಡೆಯಲ್ಲಿ ಬಾಂಬ್‌(Bomb Threat) ಇರಿಸಿ ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿತ್ತು.

ಗುರುವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅಡ್ಡಿಪಡಿಸಲು ಅಸ್ಸಾಂನಾದ್ಯಂತ 19 ಬಾಂಬ್‌ಗಳನ್ನು ಇರಿಸಿದ್ದೇವೆ ULFA-I ಎಂದು ಹೇಳಿಕೊಂಡಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಮೇಲ್ಭಾಗದ ಅಸ್ಸಾಂನ ಶಿವಸಾಗರ್, ದಿಬ್ರುಗಢ ಮತ್ತು ಗುವಾಹಟಿ ಮತ್ತು ಲೋವರ್ ಅಸ್ಸಾಂನ ಹಲವಾರು ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಸಂಘಟನೆಯು ಹೇಳಿದೆ. ಇದರ ಬೆನ್ನಲ್ಲೇ ಕಾರ್ಯಪ್ರವೃತರಾ ಪೊಲೀಸರು ಮತ್ತು ಸೇನೆ ಬಾಂಬ್‌ ಪತ್ತೆಗೆ ಮುಂದಾಯಿತು. ಏತನ್ಮಧ್ಯೆ, ಶಿವಸಾಗರ್ ಮತ್ತು ನಾಗಾನ್ ಸೇರಿದಂತೆ ಅನೇಕ ಸ್ಥಳಗಳಿಂದ “ಅನುಮಾನಾಸ್ಪದ ವಸ್ತುಗಳನ್ನು” ಪತ್ತೆಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ರಾಜ್ಯಾದ್ಯಂತ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ವಿವಿಧೆಡೆ ಬಾಂಬ್ ಸ್ಫೋಟ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಲು ಬಯಸಿದ್ದೇವೆ ಎಂದು ಉಗ್ರಗಾಮಿ ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಉಲ್ಫಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಸಾರ್ವಜನಿಕರಿಗೆ ಅಪಾಯವಾಗದಂತೆ ಸ್ಫೋಟಕಗಳನ್ನು ಪತ್ತೆಹಚ್ಚಿ ಮತ್ತು ನಿಷ್ಕ್ರಿಯಗೊಳಿಸುವಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಂಘಟನೆಯು ವಿನಂತಿಸಿದೆ.

DTO ಆಫೀಸ್, ONGC ನಂಬರ್ 5 ಗೇಟ್, ದಿಬ್ರುಗಢ್ ಲಕುವಾ ತಿನಾಲಿ, ASTC, ಲಖಿಂಪುರ ASTC, SP ಆಫೀಸ್, ಲಾಲುಕ್ ಡೈಲಿ ಮಾರ್ಕೆಟ್, ಬರ್ಘಾಟ್ ಪೊಲೀಸ್ ಔಟ್‌ಪೋಸ್ಟ್, ನಂಗಾವ್ ವೈದ್ಯಕೀಯ ಕಾಲೇಜು, ಗುವಾಹಟಿ ದಿಸ್‌ಪುರ್ ಲಾಸ್ಟ್ ಗೇಟ್, ಗಾಂಧಿ ಮಂಟಪ, ನರೇಂಗಿ ಸೇನಾ ಶಿಬಿರ , ಪಾನ್ ಬಜಾರ್, ಜೋರಾಬತ್ ಮೇಲ್ಸೇತುವೆ, ಭೇಟಪಾರಾ, ಮಾಲಿಗಾಂವ್, ರಾಜ್‌ಗಢ್, ನಲ್ಬರಿ, ಮತ್ತು ಅಸ್ಸಾಂನ ಶಿವಸಾಗರ್ ಜಿಲ್ಲೆಯ ರಂಗಿಯಾ ಪ್ರದೇಶದಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಉಲ್ಫಾ ಹೇಳಿದೆ.

ಪಾನಿಟೋಲಾ ಸೇರಿದಂತೆ ಟಿನ್ಸುಕಿಯಾ ಜಿಲ್ಲೆಯ ಮೂರು ಸ್ಥಳಗಳಲ್ಲಿ, ದಿಬ್ರುಗಢ್ ಜಿಲ್ಲೆಯ ಒಂದು ಸ್ಥಳ ಮತ್ತು ಗೋಲಾಘಾಟ್ ಮತ್ತು ಸೊರುಪಥರ್‌ನಲ್ಲಿ ತಲಾ ಒಂದು ಸ್ಥಳದಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಉಲ್ಫಾ ಮಾಹಿತಿ ನೀಡಿದೆ.

ಇದನ್ನೂ ಓದಿ: Independence Day 2024: ನಾಡಿನೆಲ್ಲೆಡೆ 78ನೇ ಸ್ವಾತಂತ್ರ್ಯ ದಿನಾಚರಣೆ; ಸಂಭ್ರಮದ ಕ್ಷಣಗಳು ಇಲ್ಲಿವೆ

Continue Reading

ಪ್ರಮುಖ ಸುದ್ದಿ

World Test Championship : ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​​ಗಳ ಮಧ್ಯೆ ಉತ್ತಮ ಅಂತರ: ಜಯ್ ಶಾ

World Test Championship : ಜಯ್ ಶಾ ಐಪಿಎಲ್ ಫೈನಲ್ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ 15 ದಿನಗಳ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಐಪಿಎಲ್ ವೇಳಾಪಟ್ಟಿಯನ್ನು ಲೆಕ್ಕಿಸದೆ ತಂಡವು ಯಾವಾಗಲೂ ಸಮಯಕ್ಕೆ ಸರಿಯಾಗಿ ಫೈನಲ್​ ಪಂದ್ಯಕ್ಕೆ ತಲುಪಿತ್ತು ಬಿಸಿಸಿಐ ಕಾರ್ಯದರ್ಶಿ ಶಾ ಸಮರ್ಥಿಸಿಕೊಂಡಿದ್ದರು. ಇಲ್ಲಿಯವರೆಗೆ ಎರಡೂ ಸಂದರ್ಭಗಳಲ್ಲಿ ಫೈನಲ್ ತಲುಪಿದ್ದಕ್ಕಾಗಿ ತಂಡವನ್ನು ಶ್ಲಾಘಿಸಿದ್ದಾರೆ.

VISTARANEWS.COM


on

World Test Championship
Koo

ಬೆಂಗಳೂರು : ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಸಾಕಷ್ಟು ಅಂತರ ಇರುವ ರೀತಿಯಲ್ಲಿ ಐಪಿಎಲ್ ಫೈನಲ್​ ಪಂದ್ಯ ಆಯೋಜಿಸಲಾಗುವುದು ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್​ ಶಾ ಹೇಳಿದ್ದಾರೆ. ಫೈನಲ್​​ನಲ್ಲಿ ಆಡಿ ಹೆಚ್ಚು ದಿನಗಳ ಅಂತರವಿಲ್ಲದೇ ಡಬ್ಲ್ಯುಟಿಸಿಗೆ ಹೋದ ಭಾರತವು ಗೆಲ್ಲಲು ವಿಫಲವಾದ ನಂತರ ಐಪಿಎಲ್ ವೇಳಾಪಟ್ಟಿಯನ್ನು ತೀವ್ರವಾಗಿ ಟೀಕೆಗೆ ಒಳಪಟ್ಟಿತ್ತು. ಹೀಗಾಗಿ ಬಿಸಿಸಿಐ ವೇಳಾಪಟ್ಟಿಯನ್ನು ಹೆಚ್ಚು ದಿನಗಳ ಅಂತರದೊಂದಿಗೆ ಮಾಡಲು ಮುಂದಾಗಿದೆ.

ಜಯ್ ಶಾ ಐಪಿಎಲ್ ಫೈನಲ್ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ 15 ದಿನಗಳ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಐಪಿಎಲ್ ವೇಳಾಪಟ್ಟಿಯನ್ನು ಲೆಕ್ಕಿಸದೆ ತಂಡವು ಯಾವಾಗಲೂ ಸಮಯಕ್ಕೆ ಸರಿಯಾಗಿ ಫೈನಲ್​ ಪಂದ್ಯಕ್ಕೆ ತಲುಪಿತ್ತು ಬಿಸಿಸಿಐ ಕಾರ್ಯದರ್ಶಿ ಶಾ ಸಮರ್ಥಿಸಿಕೊಂಡಿದ್ದರು. ಇಲ್ಲಿಯವರೆಗೆ ಎರಡೂ ಸಂದರ್ಭಗಳಲ್ಲಿ ಫೈನಲ್ ತಲುಪಿದ್ದಕ್ಕಾಗಿ ತಂಡವನ್ನು ಶ್ಲಾಘಿಸಿದ್ದಾರೆ.

ಹಿಂದಿನ ಎರಡು ಡಬ್ಲ್ಯುಟಿಸಿ ಫೈನಲ್ಸ್​​ಗೆ ತಂಡ ತಡವಾಗಿ ತಲುಪಿರಲಿಲ್ಲ. ನಮಗೆ ಬೇರೆ ಆಯ್ಕೆ ಇರಲಿಲ್ಲ. ಇಂದಿನಿಂದ, ಐಪಿಎಲ್ ಅಂತ್ಯ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ ನಾವು 15 ದಿನಗಳ ಅಂತರವನ್ನು ಪಡೆಯಲಿದ್ದೇವೆ. ನಾವು ಎರಡು ಬಾರಿ ಫೈನಲ್​​ಗೆ ಅರ್ಹತೆ ಪಡೆದಿದ್ದೇವೆ ಎಂಬ ಅಂಶವನ್ನು ನಾವು ಅರಿಯಬೇಕು ” ಎಂದು ಜಯ್ ಶಾ ಹೇಳಿದ್ದಾರೆ.

ಜೂನ್ 18 ರಿಂದ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ 2021ಗಾಗಿ ಭಾರತ ಜೂನ್ 3 ರಂದು ಇಂಗ್ಲೆಂಡ್ ತಲುಪಿತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ತಂಡವು ಪಂದ್ಯಕ್ಕೆ ಮುಂಚಿತವಾಗಿ ಇಂಟ್ರಾ ಸ್ಕ್ವಾಡ್ ಪಂದ್ಯವನ್ನು ಆಡಿತ್ತು . ಆದಾಗ್ಯೂ, ಫೈನಲ್​ನಲ್ಲಿ ಎಂಟು ವಿಕೆಟ್​ಗಳಿಂದ ಸೋತು ಟೆಸ್ಟ್ ಕ್ರಿಕೆಟ್​​ನ ಮೊದಲ ಚಾಂಪಿಯನ್ ಪಟ್ಟ ಪಡೆಯುವ ಅವಕಾಶವನ್ನು ಅವರು ಕಳೆದುಕೊಂಡಿತ್ತು.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಭಾರತಕ್ಕೆ ಅಗ್ರಸ್ಥಾನ

2023 ರಲ್ಲಿ ಆಡಿದ ಎರಡನೇ ಫೈನಲ್​​ನಲ್ಲಿ ಆಟಗಾರರು ಐಪಿಎಲ್ ಪ್ಲೇಆಫ್​ನಿಂ ತಮ್ಮ ತಂಡದ ನಾಕೌಟ್ ಪಂದ್ಯಗಳನ್ನು ಅವಲಂಬಿಸಿ ಬ್ಯಾಚ್​ಗಳಲ್ಲಿ ಇಂಗ್ಲೆಂಡ್ ತಲುಪಿದ್ದರು ಜೂನ್ 7ರಿಂದ ಫೈನಲ್ ಪ್ರಾರಂಭಗೊಂಡಿತ್ತು ಹಾಗೂ 2021 ಕ್ಕೆ ಹೋಲಿಸಿದರೆ ತಯಾರಿ ನಡೆಸಲು ಕಡಿಮೆ ಸಮಯ ಸಿಕ್ಕಿತು. ರೋಹಿತ್ ಶರ್ಮಾ ನೇತೃತ್ವದ ತಂಡವು 209 ರನ್​​ಗಳಿಂದ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನು ಕಳೆದುಕೊಂಡಿತು. ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲುವ ಸತತ ಎರಡನೇ ಅವಕಾಶವನ್ನು ವ್ಯರ್ಥ ಮಾಡಿಕೊಂಡಿತು.

ಇದನ್ನೂ ಓದಿ: Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

ಡಬ್ಲ್ಯುಟಿಸಿ ಫೈನಲ್ 2025 ರ ದಿನಾಂಕ ಪ್ರಕಟಗೊಂಡಿಲ್ಲ. ಆದರೆ ಪಂದ್ಯವು ಜೂನ್​​ನಲ್ಲಿ ನಡೆಯುವ ಸಾಧ್ಯತೆಯಿದೆ. 68.51 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಮತ್ತೊಮ್ಮೆ ಫೈನಲ್ ತಲುಪುವ ನೆಚ್ಚಿನ ತಂಡವಾಗಿದೆ. ಸತತ ಮೂರನೇ ಬಾರಿಗೆ ಅರ್ಹತೆ ಪಡೆದರೆ ಟೀಮ್ ಇಂಡಿಯಾ ದೊಡ್ಡ ಪಂದ್ಯಕ್ಕೆ ತಮ್ಮನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ದೊರೆಯಬಹುದು.

Continue Reading

ಕ್ರೀಡೆ

Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

Happy Independence day 2024 : ನನ್ನ ಪ್ರೀತಿಯ ದೇಶದ ನಾಗರಿಕರೇ, ಇಂದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಯುವ ಪಡೆಯನ್ನು ನಾವು ಹೊಂದಿದ್ದೇವೆ. 140 ಕೋಟಿ ಭಾರತೀಯರ ಪರವಾಗಿ ನಮ್ಮ ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸಲು ನಾನು ಬಯಸುತ್ತೇನೆ. ನಾವು ಹೊಸ ಕನಸುಗಳು ಮತ್ತು ಸಂಕಲ್ಪಗಳೊಂದಿಗೆ ಮುಂದುವರಿಯುತ್ತೇವೆ. ಕೆಲವೇ ದಿನಗಳಲ್ಲಿ ನಮ್ಮ ಪ್ಯಾರಾ-ಅಥ್ಲೀಟ್​ಗಳು ಪ್ಯಾರಾಲಿಂಪಿಕ್ಸ್​ಗಾಗಿ ಪ್ಯಾರಿಸ್​ಗೆ ಹಾರಲಿದ್ದಾರೆ, ನಾನು ಅವರಿಗೂ ಶುಭ ಹಾರೈಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

VISTARANEWS.COM


on

Happy Independence day 2024
Koo

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿ ಪರಾಕ್ರಮ ಮೆರೆದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು (Happy Independence day 2024) ಭೇಟಿಯಾಗಿ ಅಭಿನಂದಿಸಿದರು. ತಮ್ಮ ನಿವಾಸಕ್ಕೆ ಭಾರತೀಯ ಪುರುಷರ ಹಾಕಿ ತಂಡ, ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್, ಸರಬ್ಜೋತ್ ಸಿಂಗ್ ಮತ್ತು ಅಮನ್ ಸೆಹ್ರಾವತ್ ಸೇರಿದಂತೆ ಒಲಿಂಪಿಕ್ ಸಾಧಕರನ್ನು ಆಹ್ವಾನಿಸಿ ಶ್ಲಾಘಿಸಿದರು. ಇದೇ ವೇಳೆ ಭಾರತೀಯ ಪುರುಷರ ಹಾಕಿ ತಂಡವು ಸಹಿ ಮಾಡಿದ ಜರ್ಸಿಯನ್ನು ಉಡುಗೊರೆಯಾಗಿ ಮೋದಿ ಅವರಿಗೆ ನೀಡಿದರು.

ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಲೆ, ಭಾರತೀಯ ಪುರುಷರ ಹಾಕಿ ತಂಡ ಮತ್ತು ನೀರಜ್ ಚೋಪ್ರಾ ಸೇರಿದಂತೆ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಿದ್ದಾರೆ. “ನನ್ನ ಪ್ರೀತಿಯ ದೇಶದ ನಾಗರಿಕರೇ, ಇಂದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಯುವ ಪಡೆಯನ್ನು ನಾವು ಹೊಂದಿದ್ದೇವೆ. 140 ಕೋಟಿ ಭಾರತೀಯರ ಪರವಾಗಿ ನಮ್ಮ ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸಲು ನಾನು ಬಯಸುತ್ತೇನೆ. ನಾವು ಹೊಸ ಕನಸುಗಳು ಮತ್ತು ಸಂಕಲ್ಪಗಳೊಂದಿಗೆ ಮುಂದುವರಿಯುತ್ತೇವೆ. ಕೆಲವೇ ದಿನಗಳಲ್ಲಿ ನಮ್ಮ ಪ್ಯಾರಾ-ಅಥ್ಲೀಟ್​ಗಳು ಪ್ಯಾರಾಲಿಂಪಿಕ್ಸ್​ಗಾಗಿ ಪ್ಯಾರಿಸ್​ಗೆ ಹಾರಲಿದ್ದಾರೆ, ನಾನು ಅವರಿಗೂ ಶುಭ ಹಾರೈಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಶೂಟಿಂಗ್​ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ಪಿಸ್ತೂಲ್ ಶೂಟರ್ ಮನು ಭಾಕರ್ ಮತ್ತು ಭಾರತೀಯ ಹಾಕಿ ತಂಡದ ಸದಸ್ಯರು ಸೇರಿದಂತೆ ಹಲವಾರು ಉನ್ನತ ಕ್ರೀಡಾಪಟುಗಳು ಗುರುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಸ್ಟಾರ್ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಕೂಡ ಒಬ್ಬರಾಗಿದ್ದರು.

Hardik Pandya: ಬ್ರಿಟಿಷ್​ ಸಿಂಗರ್ ಜತೆ ಹಾರ್ದಿಕ್​ ಪಾಂಡ್ಯ​ ಡೇಟಿಂಗ್​​? ಜಾಸ್ಮಿನ್ ವಾಲಿಯಾ ಬ್ರೇಕಪ್‌ ಲಿಸ್ಟ್‌ ಇಲ್ಲಿದೆ

ಪ್ಯಾರಿಸ್ ಒಲಿಂಪಿಕ್ಸ್​ನ್ಲ್ಲಿ ಭಾರತದ ಅಭಿಯಾನವು 5 ಕಂಚು ಮತ್ತು ಒಂದು ಬೆಳ್ಳಿ ಸೇರಿದಂತೆ ಒಟ್ಟು ಆರು ಪದಕಗಳೊಂದಿಗೆ ಕೊನೆಗೊಂಡಿತು. ಈ ಫಲಿತಾಂಶವು ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ಗಿಂತ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಟೋಕಿಯೊದಲ್ಲಿ ಭಾರತೀಯ ಕ್ರೀಡಾಪಟುಗಳು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಏಳು ಪದಕಗಳನ್ನು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ನಿರಾಶೆಯ ಹೊರತಾಗಿಯೂ, ಭಾರತವು ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದ ಅಂಚಿನಲ್ಲಿತ್ತು. ಭಾರತದ ಆರು ಸ್ಪರ್ಧಿಗಳು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದು ಪದಕವಾಗಿ ಪರಿವರ್ತನೆಗೊಂಡಿದ್ದರೆ ಉತ್ತಮ ಸಾಧನೆಯಾಗುತ್ತಿತ್ತು.

ಪುರುಷರ 10 ಮೀಟರ್ ಏರ್ ರೈಫಲ್ ಫೈನನ್​​ಲ್ಲಿ ಶೂಟರ್ ಅರ್ಜುನ್ ಬಬುಟಾ 208.4 ಅಂಕಗಳೊಂದಿಗೆ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟರು. ಒಲಿಂಪಿಕ್ಸ್​​ನ ರೈಫಲ್ ಶೂಟಿಂಗ್​​​ನಲ್ಲಿ ಪದಕಕ್ಕಾಗಿ ಭಾರತದ 12 ವರ್ಷಗಳ ಬರವನ್ನು ಕೊನೆಗೊಳಿಸುವ ಅವಕಾಶವನ್ನು 25 ವರ್ಷದ ಅವರು ಕಳೆದುಕೊಂಡರು.

Continue Reading
Advertisement
Benefits Of Onion Hair Oil
ಆರೋಗ್ಯ9 mins ago

Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ

Aman Sehrawat
ಕ್ರೀಡೆ37 mins ago

Aman Sehrawat : ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​ಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಬಡ್ತಿ

Job Alert
ಉದ್ಯೋಗ1 hour ago

Job Alert: ಹೆಸ್ಕಾಂನ 338 ಹುದ್ದೆಗಳಿಗೆ ಅರ್ಜಿ ಆಹ್ವಾನ

Vicky Kaushal Chhava teaser released
ಟಾಲಿವುಡ್1 hour ago

Vicky Kaushal: ವಿಕ್ಕಿ ಕೌಶಲ್ `ಛಾವಾ’ ಟೀಸರ್‌ ಔಟ್‌!

Hyena Movie
ಬೆಂಗಳೂರು1 hour ago

Hyena Movie: ಹೈನಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

Happy Independence Day
ಪ್ರಮುಖ ಸುದ್ದಿ1 hour ago

Happy Independence Day : ನೀರಜ್​ನಿಂದ ಹಿಡಿದು ರೋಹಿತ್​ ಶರ್ಮಾ ; ಭಾರತೀಯ ಅಥ್ಲೀಟ್​​ಗಳ ಸ್ವಾತಂತ್ರ್ಯೋತ್ಸವ ಆಚರಣೆಯ ಪೋಸ್ಟ್​ಗಳು ಇಲ್ಲಿವೆ…

ದೇಶ1 hour ago

Indian Flag: ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಧ್ವಜಾರೋಹಣಗಳ ಪ್ರಕ್ರಿಯೆ ಬೇರೆ ಬೇರೆ ಅನ್ನೋದು ಗೊತ್ತಾ?

Independence Day 2024
ಕರ್ನಾಟಕ1 hour ago

Independence Day 2024: ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ

Bomb threat
ದೇಶ1 hour ago

Bomb Threat: ಅಸ್ಸಾಂನ 19 ಕಡೆಗಳಲ್ಲಿ ಬಾಂಬ್‌ ಇರಿಸಿ, ಬಳಿಕ ನಿಷ್ಕ್ರೀಯಗೊಳಿಸುವಂತೆ ಮನವಿ ಮಾಡಿದ ಉಲ್ಫಾ ಉಗ್ರರು

Sangolli Rayanna Jayanthi
ಬೆಂಗಳೂರು1 hour ago

Sangolli Rayanna Jayanthi: ಮುಂದಿನ ವರ್ಷ ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ; ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌