Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ! - Vistara News

ಪ್ರವಾಸ

Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ!

ಮುದಿತನದಲ್ಲೂ ಜೀವನ ಸುಂದರವಾಗಬಹುದು ಎಂಬುದಕ್ಕೆ ಈ ಅಜ್ಜಿಯೇ ನಿದರ್ಶನ. ಇಳಿವಯಸ್ಸಿನಲ್ಲಿ ಮೊಮ್ಮಗನ ಜತೆ ಪ್ರವಾಸ ಆರಂಭ ಮಾಡಿದ ಈಕೆ ಬರೋಬರಿ 50 ಸಾವಿರ ಮೈಲಿ ಸುತ್ತಾಡಿದಳು.

VISTARANEWS.COM


on

jaoy rally1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಯಸ್ಸಾದಾಗ ನೀವು ಹೇಗೆ ಜೀವಿಸಲು ಇಷ್ಟ ಪಡುತ್ತೀರಿ ಎಂದು ಯಾರನ್ನಾದರೂ ಪ್ರಶ್ನಿಸಿದಾಗ ದಕ್ಕುವ ಉತ್ತರ ನೀರಸವೇ ಆಗಿರುತ್ತದೇನೋ. ಎಲ್ಲದರಿಂದ ನಿವೃತ್ತಿ ಹೊಂದಿ ಬೇಕಾದಷ್ಟು ಸಮಯ ಸಿಕ್ಕಾಗ, ನಾವಾದರೆ ಏನೆಲ್ಲ ಮಾಡುತ್ತಿದ್ದೆವು ಎಂದು ಕಲ್ಪನೆ ಮಾಡಿಕೊಳ್ಳುವುದು ಸುಲಭವೇನೋ. ಆದರೆ, ಆ ವಯಸ್ಸಿಗೆ ಬಂದಾಗ ದೇಹದಲ್ಲಿ ಯೌವನದ ಕಸುವು ಕಡಿಮೆಯಾದಾಗ ಅಂದುಕೊಂಡದ್ದನ್ನು ಮಾಡುವುದು ಕಷ್ಟವೇ. ಇನ್ನು ಯಾವುದೂ ಬೇಡ ಎಂಬ ನಿರಾಸಕ್ತಿ, ವೈರಾಗ್ಯ ಆ ಹಿರಿ ವಯಸ್ಸಿನಲ್ಲಿ ಸಾಮಾನ್ಯವೇ. ಆದರೆ, ಅಪರೂಪಕ್ಕೊಮ್ಮೆ ಉತ್ಸಾಹದ ಚಿಲುಮೆಯಂತಹ ಹಿರಿ ಜೀವಗಳು ಕಾಣಸಿಕ್ಕಾಗ, ತಮ್ಮ ವಯಸ್ಸಿಗೆ ಮೀರಿದ ಸಾಧನೆ ಮಾಡಿದಾಗ, ಅಥವಾ ಆ ವಯಸ್ಸಿನಲ್ಲೂ ಯುವಜನರನ್ನೂ ನಾಚಿಸುವಂತೆ ಬದುಕನ್ನು ಅನುಭವಿಸುವವರು ಕಂಡಾಗ ಎಂಥವರ ಜೀವದಲ್ಲೂ ಮಿಂಚಿನ ಸಂಚಾರವಾಗುತ್ತದೆ. ಈ ಅಜ್ಜಿಯೂ ಅಂಥದ್ದೇ ಒಂದು ಜೀವ!

೨೦೧೫ಕ್ಕೂ ಮೊದಲು ಅಜ್ಜಿ ಜಾಯ್‌ ಜೀವನ ಅಂಥ ಆಸಕ್ತಿಕರವಾಗಿರಲಿಲ್ಲ. ಎಲ್ಲರಂತೆ, ಅಮ್ಮನಾಗಿ ಅಜ್ಜಿಯಾಗಿ ೨೦ ರ್ಷದ ಹಿಂದೆ ವಿಧವೆಯಾಗಿ ಲೋಕ ಒಪ್ಪುವಂತೆ ತಕ್ಕಮಟ್ಟಿನ ನೆಮ್ಮದಿಯ ಜೀವನ ಸಾಗಿಸುತ್ತಿದ್ದಳು. ಆದರೆ, ತನ್ನ ಮೊಮ್ಮಗ ರ‍್ಯಾನ್‌ ಹೇಳುತ್ತಿದ್ದ ಪ್ರವಾಸದ, ಚಾರಣದ ಕಥೆಗಳನ್ನು ಕೇಳುತ್ತಲೇ, ತಾನು ಅಂಥದ್ದನ್ನೆಲ್ಲ ನೋಡಿಯೇ ಇಲ್ಲ ಎಂಬ ಕೊರಗನ್ನು ಆಜ್ಜಿ ಹೇಳಿಕೊಂಡಿದ್ದಳು. ಇದರ ಫಲವೇ ಅಜ್ಜಿ ಮೊಮ್ಮಗನ ಬೊಂಬಾಟ್‌ ಪ್ರವಾಸ.

jaoy rally

ಎಲ್ಲಿಗೂ ಪ್ರವಾಸ ಮಾಡಿರದ, ಹತ್ತಿರದಿಂದ ಬೆಟ್ಟಗುಡ್ಡಗಳನ್ನೂ ನೋಡಿರದ ಅಜ್ಜಿಯನ್ನು ತಾನು ಪ್ರವಾಸ ಕರೆದುಕೊಂಡು ಹೋದರೆ ಹೇಗೆ ಎಂದು ಒಹಾಯೋ ಸ್ಟೇಟ್‌ ಯುನಿವರ್ಸಿಟಿ ಕಾಲೇಜ್‌ ಆಫ್‌ ವೆಟರ್ನರಿಯಲ್ಲಿ ಓದುತ್ತಿದ್ದ ಆ ಮೊಮ್ಮಗ ರ‍್ಯಾನ್‌ಗೆ ಅನಿಸಿದ್ದೇ ತಡ ೨೦೧೭ಕ್ಕೆ ಈ ಕನಸಿಗೆ ಜಾಲನೆಯನ್ನೂ ಕೊಟ್ಟ. ಇದೀಗ ಈ ಅಜ್ಜಿ ಮೊಮ್ಮಗ ಜೋಡಿ ಯುಎಸ್‌ನ ೬೨ ನ್ಯಾಷನಲ್‌ ಪಾರ್ಕುಗಳನ್ನೂ ನೋಡಿ ಬಂದಿದೆ. ಇನ್ನು ಒಂದೇ ಒಂದು ನ್ಯಾಷನಲ್‌ ಪಾರ್ಕು ನೋಡಿದರೆ ಯುಎಸ್‌ನ ಎಲ್ಲ ನ್ಯಾಷನಲ್‌ ಪಾರ್ಕನ್ನೂ ನೋಡಿದ ಹೆಮ್ಮೆ ಈ ಜೋಡಿಯದ್ದು.

ಕಳೆದ ಏಳು ವರ್ಷಗಳಲ್ಲಿ ಸುಮಾರು ೫೦,೦೦೦ ಮೈಲಿಗಳಷ್ಟು ದೂರ ಜೊತೆಗೆ ಪ್ರಯಾಣ ಮಾಡಿರುವ ಈ ಜೋಡಿ, ೨೦೧೭ರಲ್ಲಿ ʻಗೋ ಫಂಡ್‌ ಮಿʼ ಎಂಬ ಪೇಜ್‌ ಮೂಲಕ ತಮ್ಮ ರೋಡ್‌ ಟ್ರಿಪ್‌ಗೆ ಸಹಾಯವನ್ನು ಪಡೆಯುತ್ತಾರೆ. ೨೦೨೧ರಲ್ಲಿ ಈ ಜೋಡಿ, ಅಲಾಸ್ಕಾದ ರಾಷ್ಟ್ರೀಯ ಉದ್ಯಾನಕ್ಕೆ ಹೋಗಿದ್ದಾಗ ಅಲ್ಲಿ ಸಾಹಸಮಯ ವೈಟ್‌ ವಾಟರ್‌ ರ‍್ಯಾಫ್ಟಿಂಗ್‌ ಕೂಡಾ ಮಾಡಿದೆ. ಹಲವಾರು ಪ್ರಾಣಿಗಳನ್ನು ನೋಡಿದ್ದೂ, ಅಲ್ಲದೆ ನೀರ್ಗಲ್ಲುಗಳವರೆಗೆ ಚಾರಣವನ್ನೂ ಮಾಡಿದ್ದಾರೆ!

ಇದನ್ನೂ ಓದಿ | Life tour | ಆನ್‌ಲೈನ್‌ ಕ್ಲಾಸ್‌ ಬಿಡಿಸಿ ಪ್ರವಾಸದ ಮೂಲಕ ಬದುಕಿನ ಪಾಠ ಹೇಳಿದ ಅಮ್ಮ!

ರ‍್ಯಾನ್‌ ತನ್ನ ಈ ವಿಶೇಷ ಪ್ರವಾಸದ ಕುರಿತು ಹೇಳುತ್ತಾ, ʻನಮ್ಮದೇ ಕುಟುಂಬಸ್ಥರ ಜೊತೆಗೆ ಪ್ರವಾಸ ಮಾಡುವುದು ಕೊಡುವ ಸಂತೋಷ ಅಷ್ಟಿಷ್ಟಲ್ಲ. ಆದರೆ ಇಂಥ ಪ್ರವಾಸದಲ್ಲಿ ಹಲವು ಚಾಲೆಂಜುಗಳೂ ಇವೆ. ನಾವಿಬ್ಬರೂ ಯಾವತ್ತೂ ಮಾತಾಡದಷ್ಟು ಪ್ರಯಾಣದುದ್ದಕ್ಕೂ ಮಾತಾಡಿದ್ದೇವೆ. ನಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೇವೆ. ಇದರಲ್ಲಿ ಕೇವಲ ಸಂತೋಷದ ಸಂಗತಿಗಳು ಮಾತ್ರವಲ್ಲ, ದುಃಖದ ಸನ್ನಿವೇಶಗಳೂ ಸೇರಿವೆ ಎಂದಿದ್ದಾರೆ. ಸದ್ಯ ರ‍್ಯಾನ್‌ ವಾಷಿಂಗ್ಟನ್‌ ಡಿಸಿಯಲ್ಲಿದ್ದಾರೆ. ಅಜ್ಜಿ ಜಾಯ್‌ ಹೇಳುವಂತೆ, ʻಚಂದನೆಯ ದೃಶ್ಯಗಳನ್ನು ನೋಡುತ್ತಾ ಪ್ರಯಾಣ ಮಾಡುವುದೇ ಒಂದು ಅನುಭವ. ಪ್ರಕೃತಿ ನನ್ನನ್ನು ಹಿಪ್ನೊಟೈಸ್‌ ಮಾಡಿದೆ. ಇದೊಂದು ಶಾಂತಿ, ನೆಮ್ಮದಿಯ ಕಡೆಗಿನ ಪಯಣʼ ಎನ್ನುತ್ತಾರೆ.

jaoy rally

ಈ ಇಬ್ಬರ ಸ್ಪೂರ್ತಿದಾಯಕ ಪ್ರವಾಸದ ವಿವರಗಳು ಅವರದೇ ಆದ ಫೇಸ್‌ಬುಕ್‌ ಹಾಗೂ ಇನ್ಸ್‌ಟಾ ಅಕೌಂಟುಗಳಲ್ಲೂ ಸಿಗುತ್ತವೆ. ಇವರಿಗೆ ಸದ್ಯ ೬೦ ಸಾವಿರಕ್ಕೂ ಮಿಕ್ಕಿ ಫಾಲೋವರ್‌ಗಳಿದ್ದಾರೆ.

ಸದ್ಯ ಈ ಅಜ್ಜಿಗೆ ೯೨ ಹಾಗೂ ರ್ಯಾನ್‌ಗೆ ೪೧ ವರ್ಷ ವಯಸ್ಸು. ಮೊದಲು ಮೊಮ್ಮಗನೇ ಅಜ್ಜಿಗೆ ಸ್ಪೂರ್ತಿಯಾದರೆ, ಈಗ ಅಜ್ಜಿಯೇ ಮೊಮ್ಮಗನಿಗೆ ಸ್ಪೂರ್ತಿಯಂತೆ. ʻಈಕೆಯಂತೆ ಬಹುಕಾಲ ಉತ್ಸಾಹದ ಚಿಲುಮೆಯಾಗಿ ಬಾಳಬೇಕು ಎಂಬುದಷ್ಟೇ ಆಸೆ. ೯೧ರ ಹರೆಯದ ಅಜ್ಜಿಯ ಜೊತೆಗೆ ಸಾಹಸಮಯ ವೈಟ್‌ ವಾಟರ್‌ ರ‍್ಯಾಫ್ಟಿಂಗ್‌ ಮಾಡಿದ್ದೇ ಒಂದು ಅದ್ಭುತ ಜೀವನಾನುಭ ನನಗೆ. ಹಾಗಾಗಿ ಯಾವುದಕ್ಕೂ ಯಾವಾಗಲೂ ಯಾವುದೇ ಅಡೆತಡೆಗಳಿಲ್ಲ, ಎಲ್ಲವೂ ಸಾಧ್ಯತೆಗಳೇʼ ಎನ್ನುತ್ತಾರೆ ರ್ಯಾನ್‌. ಮೊಮ್ಮಗನ ಜೊತೆ ಪ್ರವಾಸ ಮಾಡುತ್ತಾ ಮಾಡುತ್ತಾ, ʻಯಾವುದೇ ಕನಸೂ ಸಾಧ್ಯವಿಲ್ಲ ಎಂಬ ಮಾತಿಲ್ಲʼ ಎಂದು ಅರಿತುಕೊಂಡಿದ್ದಾರೆ.

ಇನ್ನೂ ಹೆಚ್ಚು ಹೆಚ್ಚು ಪ್ರವಾಸದ ಯೋಜನೆಗಳನ್ನು ಹಾಕಿಕೊಂಡಿರುವ ಈ ಇಬ್ಬರೂ ಇನ್ನೂ ಅನೇಕ ಟ್ರಾವೆಲ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ಅಜ್ಜಿಗೆ ಐರ್ಲೆಂಡ್‌ಗೆ ಹೋಗುವ ಕನಸಿದ್ದರೆ, ಮೊಮ್ಮಗನಿಗೆ ಅಜ್ಜಿಯ ಜೊತೆ ಆಫ್ರಿಕಾಕ್ಕೆ ಹೋಗುವ ಆಸೆಯಿದೆಯಂತೆ.

ಇದನ್ನೂ ಓದಿ | Jungle safari tips | ಕಾಡಿನ ಸಫಾರಿಗೆ ಹೊರಡುವ ಮುನ್ನ ಇವಿಷ್ಟು ಗೊತ್ತಿರಲಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Solo Trip: ಒಂಟಿಯಾಗಿ ಪ್ರವಾಸ ಹೊರಡುವ ಯೋಚನೆಯೇ? ಹಾಗಿದ್ದರೆ ಇಲ್ಲಿಗೊಮ್ಮೆ ಭೇಟಿ ನೀಡಿ!

Solo Trip: ಸ್ನೇಹಿತರ ಗುಂಪಿನೊಂದಿಗೆ ಪ್ರಯಾಣ ಮಾಡುವುದು ಸಾಕಷ್ಟು ನೆನಪುಗಳಿಗೆ ತುಂಬಿ ಕೊಡುತ್ತದೆ. ಆದರೆ ಹೆಚ್ಚು ಬಾರಿ ಸ್ನೇಹಿತರು ತಮ್ಮ ಯೋಜನೆಗಳನ್ನು ಕೈಚೆಲ್ಲುತ್ತಾರೆ. ಏಕವ್ಯಕ್ತಿ ಮಹಿಳಾ ಪ್ರಯಾಣಿಕರು ನೀವಾಗಿದ್ದರೆ ಮೊದಲ ಬಾರಿಗೆ ಏಕಾಂಗಿಯಾಗಿ ಪ್ರವಾಸ ಮಾಡಬೇಕು ಎಂದು ಯೋಚಿಸುತ್ತಿದ್ದರೆ ನಿರಾತಂಕವಾಗಿ ಪ್ರಯಾಣಿಸಬಹುದಾದ ಕೆಲವು ತಾಣಗಳ ಕುರಿತ ಮಾಹಿತಿ ಇಲ್ಲಿದೆ. ಇಲ್ಲಿ ಸುರಕ್ಷಿತ ರಜೆಯನ್ನು ಕಳೆದು ಬರಬಹುದು.

VISTARANEWS.COM


on

By

Solo Trip
Koo

ಪ್ರವಾಸ (tour) ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ? ಸ್ನೇಹಿತರನ್ನು (friends) ಗುಂಪು ಹಾಕಿಕೊಂಡು ಹೋಗುವ ಪ್ರವಾಸ ಒಂದು ರೀತಿಯ ಅನುಭವವಾದರೆ ಏಕಾಂಗಿಯಾಗಿ ಪ್ರವಾಸ (Solo Trip) ಮಾಡುವುದು ಇನ್ನೊಂದು ರೀತಿಯ ಅನುಭವ ಕೊಡುತ್ತದೆ. ಆದರೆ ಏಕಾಂಗಿಯಾಗಿ ಹೊರಡುವ ಪ್ರವಾಸ ಕೆಲವೊಮ್ಮೆ ತುಂಬಾ ಅಪಾಯಕಾರಿ ಆಗಬಹುದು. ಹೀಗಾಗಿ ಬಹುತೇಕ ಹೆಣ್ಣುಮಕ್ಕಳು (Women Solo Travellers) ಆಸೆ ಇದ್ದರೂ ಒಂಟಿಯಾಗಿ ಪ್ರವಾಸ ಮಾಡಲು ಹಿಂಜರಿಯುತ್ತಾರೆ.

ಸ್ನೇಹಿತರ ಗುಂಪಿನೊಂದಿಗೆ ಪ್ರಯಾಣ ಮಾಡುವುದು ಸಾಕಷ್ಟು ನೆನಪುಗಳಿಗೆ ತುಂಬಿ ಕೊಡುತ್ತದೆ. ಆದರೆ ಹೆಚ್ಚು ಬಾರಿ ಸ್ನೇಹಿತರು ತಮ್ಮ ಯೋಜನೆಗಳನ್ನು ಕೈಚೆಲ್ಲುತ್ತಾರೆ. ಏಕವ್ಯಕ್ತಿ ಮಹಿಳಾ ಪ್ರಯಾಣಿಕರು ನೀವಾಗಿದ್ದರೆ ಮೊದಲ ಬಾರಿಗೆ ಏಕಾಂಗಿಯಾಗಿ ಪ್ರವಾಸ ಮಾಡಬೇಕು ಎಂದು ಯೋಚಿಸುತ್ತಿದ್ದರೆ ನಿರಾತಂಕವಾಗಿ ಪ್ರಯಾಣಿಸಬಹುದಾದ ಕೆಲವು ತಾಣಗಳ ಕುರಿತು ಮಾಹಿತಿ ಇಲ್ಲಿದೆ. ಇಲ್ಲಿ ಸುರಕ್ಷಿತ ರಜೆಯನ್ನು ಕಳೆದು ಬರಬಹುದು.


ಕಸೋಲ್, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿರುವ ಕಸೋಲ್ ರಜೆಯನ್ನು ಕಳೆಯಲು ಅತ್ಯುತ್ತಮ ತಾಣವಾಗಿದೆ. ಇಲ್ಲಿನ ಬೆರಗುಗೊಳಿಸುವ ದೃಶ್ಯಾವಳಿಗಳು ಪ್ರತಿಯೊಬ್ಬರ ಮನ ಸೆಳೆಯುತ್ತದೆ. ಖೀರ್ಗಂಗಾ ಟ್ರೆಕ್, ಮಲಾನಾ ಟ್ರೆಕ್, ಚಲಾಲ್ ಟ್ರೆಕ್, ಟೋಶ್ ಟ್ರೆಕ್ ಮತ್ತು ಸಾರ್ ಪಾಸ್ ಟ್ರೆಕ್ ಸೇರಿದಂತೆ ಇನ್ನು ಹಲವು ಚಾರಣಗಳಿಗೂ ಇಲ್ಲಿ ಅವಕಾಶವಿದೆ. ದೆಹಲಿ ಮತ್ತು ಚಂಡೀಗಢದಿಂದ ಎಚ್‌ಆರ್‌ಟಿಸಿ ಬಸ್‌ಗಳಲ್ಲಿ ಇಲ್ಲಿಗೆ ಪ್ರಯಾಣಿಸಬಹುದು.


ಕೋಲ್ಕತ್ತಾ, ಪಶ್ಚಿಮ ಬಂಗಾಳ

“ಸಿಟಿ ಆಫ್ ಜಾಯ್” ಎಂದು ಪ್ರಸಿದ್ಧವಾಗಿರುವ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಭೇಟಿ ನೀಡಲೇಬೇಕು. ಬೆಂಗಾಲಿ ಪಾಕಪದ್ಧತಿ ಮತ್ತು ಭಾವಪೂರ್ಣ ಸಂಗೀತ, ಅತ್ಯಾಕರ್ಷಕ ವಾಸ್ತುಶಿಲ್ಪಗಳಿಂದ ಸಮ್ಮೋಹನಗೊಳಿಸುವ ಗಂಗಾ ಘಾಟ್ ನಗರವು ಸಂದರ್ಶಕರನ್ನು ಬೆರಗುಗೊಳಿಸುತ್ತದೆ. ಪ್ರಸಿದ್ಧ ಸ್ಥಳಗಳಲ್ಲಿ ಹೌರಾ ಸೇತುವೆ, ವಿಕ್ಟೋರಿಯಾ ಸ್ಮಾರಕ, ಫೋರ್ಟ್ ವಿಲಿಯಂ ಕೋಲ್ಕತ್ತಾ, ಭಾರತೀಯ ವಸ್ತು ಸಂಗ್ರಹಾಲಯ, ಬೇಲೂರು ಮಠ, ದಕ್ಷಿಣೇಶ್ವರ ದೇವಾಲಯ ಮತ್ತು ಬಿರ್ಲಾ ಪ್ಲಾನೆಟೋರಿಯಂ ಸೇರಿವೆ.


ರಿಷಿಕೇಶ, ಉತ್ತರಾಖಂಡ

“ವಿಶ್ವದ ಯೋಗ ರಾಜಧಾನಿ” ಉತ್ತರಾಖಂಡದ ಋಷಿಕೇಶವು ಸಮ್ಮೋಹನಗೊಳಿಸುವ ತಾಣವಾಗಿದೆ. ಸ್ನೇಹಪರ ಸ್ಥಳೀಯರು ಮತ್ತು ಕೈಗೆಟುಕುವ ದರದಲ್ಲಿ ವಸತಿ ಮತ್ತು ಆಹಾರದೊಂದಿಗೆ ರೋಮಾಂಚಕ ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್, ಕ್ಲಿಫ್ ಜಂಪಿಂಗ್ ಮತ್ತು ಕ್ಯಾಂಪಿಂಗ್ ಅನ್ನು ಆನಂದಿಸಬಹುದು. ಬೆಳಗ್ಗೆ ಮತ್ತು ಸಂಜೆ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಬಹುದು.


ಪಾಂಡಿಚೇರಿ

ಪಾಂಡಿಚೇರಿ ಅಥವಾ ಪುದುಚೇರಿಯು ದಕ್ಷಿಣ ಭಾರತದ ಅತ್ಯಂತ ಸುಂದರ ನಗರವಾಗಿದ್ದು ಹಿಂದಿನ ಫ್ರೆಂಚ್ ವಸಾಹತುಶಾಹಿ ಆಳ್ವಿಕೆಯು ತನ್ನ ನೆನಪುಗಳನ್ನು ಇಲ್ಲಿ ಹಾಗೇ ಬಿಟ್ಟು ಹೋಗಿದೆ. ಶಾಂತಿಯುತ ಕಡಲತೀರಗಳು ಮತ್ತು ಆಹ್ಲಾದಕರವಾದ ಸ್ಕೂಬಾ ಡೈವಿಂಗ್ ಜೊತೆಗೆ, ಪ್ಯಾರಡೈಸ್ ಬೀಚ್, ಶ್ರೀ ಅರಬಿಂದೋ ಆಶ್ರಮ, ಆರೋವಿಲ್ಲೆ, ಪ್ರೊಮೆನೇಡ್ ಬೀಚ್, ಸೆರಿನಿಟಿ ಬೀಚ್ ಮತ್ತು ಅರಿಕಮೇಡು ಇಲ್ಲಿ ಭೇಟಿ ನೀಡಲೇಬೇಕಾದ ಕೆಲವು ಸ್ಥಳಗಳಾಗಿವೆ.


ಇದನ್ನೂ ಓದಿ: Bhubaneswar Tour: ಭುವನೇಶ್ವರಕ್ಕೆ ಪ್ರವಾಸ ಮಾಡಿದಾಗ ಏನೆಲ್ಲ ನೋಡಬಹುದು?

ಗೋವಾ

ವಿದೇಶಿ ಮತ್ತು ಯುವ ಪ್ರಯಾಣಿಕರಿಂದ ತುಂಬಿರುವ ಗೋವಾದಲ್ಲಿ ಏಕಾಂಗಿಯಾಗಿ ಕೂಡ ಸುತ್ತಾಡಬಹುದು. ಪೋರ್ಚುಗೀಸ್ ವಾಸ್ತುಶಿಲ್ಪ ಇಲ್ಲಿನ ಆಕರ್ಷಣೆಯಾಗಿದೆ. ಗೋವಾವು ಬಾಗಾ ಬೀಚ್, ಕ್ಯಾಲಂಗುಟ್ ಬೀಚ್ ಮತ್ತು ಕ್ಯಾಂಡೋಲಿಮ್ ಬೀಚ್‌ನಂತಹ ಪ್ರಾಚೀನ ಕಡಲತೀರಗಳನ್ನು ಹೊಂದಿದೆ ಮತ್ತು ಗ್ರ್ಯಾಂಡ್ ಐಲ್ಯಾಂಡ್, ದೂಧ್‌ಸಾಗರ್ ಜಲಪಾತಗಳು, ಫೋರ್ಟ್ ಅಗುಡಾ, ಟಿಟೊಸ್ ಸ್ಟ್ರೀಟ್ ಇನ್ನು ಹಲವು ಆಕರ್ಷಕ ತಾಣಗಳಿವೆ.

Continue Reading

ಪ್ರವಾಸ

Araku Valley Tour: ಆಂಧ್ರಪ್ರದೇಶದ ಅರಕು ವ್ಯಾಲಿ; ಹಲವು ಅದ್ಭುತಗಳ ಸಂಗಮ

Araku Valley Tour: ಆಂಧ್ರಪ್ರದೇಶದಲ್ಲಿರುವ ಅರಕು ಕಣಿವೆಯು ವಾರಾಂತ್ಯದಲ್ಲಿ ಭೇಟಿ ನೀಡುವವರಿಗೆ ಉತ್ತಮವಾದ ಸ್ಥಳವಾಗಿದೆ. ಇಲ್ಲಿನ ರಮಣೀಯವಾದ ಪ್ರಕೃತಿ ಸೌಂದರ್ಯವು ನಿಮ್ಮನ್ನು ಬೇರೊಂದು ಜಗತ್ತಿಗೆ ಕರೆದುಕೊಂಡು ಹೋಗುತ್ತದೆ.

VISTARANEWS.COM


on

Araku Valley Tour
Koo

ಜೀವನದ ಜಂಜಾಟದಿಂದ ಬೇಸತ್ತ ಜನರು ತಮ್ಮ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಾರೆ. ಅದಕ್ಕಾಗಿ ಸುಂದರವಾದ, ಪ್ರಶಾಂತವಾದ ಸ್ಥಳಗಳನ್ನು ಹುಡುಕುತ್ತಿರುತ್ತಾರೆ. ಅಂಥವರು ಒಮ್ಮೆ ಭಾರತದ ಸುಂದರವಾದ ಮತ್ತು ರಮಣೀಯವಾದ ಪೂರ್ವ ಘಟ್ಟಗಳ ನಡುವಿನ ಶಾಂತಿಯುತವಾದ ಸ್ಥಳ ಅರಕು ಕಣಿವೆಗೆ (Araku Valley Tour) ಭೇಟಿ ನೀಡಬಹುದು.

ಆಂಧ್ರಪ್ರದೇಶದಲ್ಲಿರುವ ಈ ಸಣ್ಣ ಕಣಿವೆಯು ನೈಸರ್ಗಿಕ ಸೌಂದರ್ಯದ ಮೂಲಕ ನಿಮ್ಮನ್ನು ರೋಮಾಂಚನಗೊಳಿಸುವಂತಹ ಸ್ಥಳವಾಗಿದೆ. ಇಲ್ಲಿನ ಹಸಿರು ತಾಣಗಳು, ಜಲಪಾತಗಳು ಮತ್ತು ಇಲ್ಲಿ ಸಿಗುವಂತಹ ರುಚಿಕರವಾದ ತಿನಿಸು ಪ್ರಯಾಣಿಕರನ್ನು ಈ ಸ್ಥಳಕ್ಕೆ ಸೆಳೆಯುತ್ತದೆ. ಹಾಗಾಗಿ ಅರಕು ಕಣಿವೆಯ ಈ ರಮಣೀಯ ಸ್ಥಳಗಳ ಬಗ್ಗೆ ತಿಳಿಯಿರಿ. ಇದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 111 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ 20 ಗಂಟೆಗಳ ಪ್ರಯಾಣ.

Araku Valley Tour

ಬೊರ್ರಾ ಗುಹೆಗಳು

ಇದು ಭಾರತದ ಅತಿದೊಡ್ಡ ಗುಹೆಗಳಲ್ಲಿ ಒಂದು. ಇದು ಸಾಹಸಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಇದು ಸುಣ್ಣದ ಕಲ್ಲುಗಳಿಂದ ಮಾಡಿದ ಗುಹೆಯಾಗಿದೆ. ಇದು ಸುಂದರವಾದ ಸ್ಟಾಲಾಕ್ಟೈಟ್ ಗಳು ಮತ್ತು ಸ್ಟಾಲಗ್ಮೈಟ್ ಗಳಿಂದ ಅಲಂಕರಿಸಲ್ಪಟ್ಟಿದೆ. ಇವುಗಳ ಮೂಲಕ ಗುಹೆಗೆ ಪ್ರವೇಶಿಸುವಾಗ ನೀವು ಮಂತ್ರಮುಗ್ಧರಾಗುವುದಂತು ಖಂಡಿತ.

Araku Valley Tour

ಕಟಿಕಿ ಜಲಪಾತ

ಸೊಂಪಾದ ಕಾಡುಗಳ ಆಳದಲ್ಲಿ ಅಡಗಿರುವ ಈ ಜಲಪಾತ ನಿಮಗೆ ಉಲ್ಲಾಸದಾಯಕ ಅನುಭವವನ್ನು ನೀಡುತ್ತದೆ. ಈ ಜಲಪಾತಕ್ಕೆ ಹೋಗಲು ಕಾಡುಗಳ ನಡುವೆ ನೀವು ಚಾರಣ ಮಾಡಬೇಕಾಗುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಖುಷಿಯನ್ನು ನೀಡುತ್ತದೆ. ಇಲ್ಲಿನ ಜಲಪಾತದ ಕೆಳಗಿನ ಕೊಳದಲ್ಲಿ ಜಲಕ್ರೀಡೆ ಆಡಬಹುದು.

Araku Valley Tour

ಪದ್ಮಪುರಂ ಉದ್ಯಾನ

ಅರಕು ಕಣಿವೆಯ ಹೃದಯ ಭಾಗದಲ್ಲಿರಿವ ಪದ್ಮಪುರಂ ಉದ್ಯಾನದಲ್ಲಿ ಪರಿಮಳಯುಕ್ತವಾದ ಬಣ್ಣ ಬಣ್ಣದ ಹೂಗಳನ್ನು ನೋಡಬಹುದು. ಇದನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಸುಂದರವಾದ ಉದ್ಯಾನ, ಸಸ್ಯಗಳು, ಮತ್ತು ನಡೆಯಲು ನಿರ್ಮಿಸಿದ ಆಕರ್ಷಕವಾದ ಫುಟ್ ಪಾತ್ ಗಳಲ್ಲಿ ನಿಮ್ಮ ಕುಟುಂಬದವರ ಜೊತೆ ವಾಕ್ ಮಾಡಬಹುದು. ಇಲ್ಲಿ ಆಟಿಕೆ ರೈಲಿನಲ್ಲಿ ಸವಾರಿ ಮಾಡುವ ಮೂಲಕ ಉದ್ಯಾನವನದ ನೋಟವನ್ನು ಕಣ್ತುಂಬಿಕೊಳ್ಳಬಹುದು.

Araku Valley Tour

ಬುಡಕಟ್ಟು ವಸ್ತು ಸಂಗ್ರಹಾಲಯ (ಟ್ರೈಬಲ್ ಮ್ಯೂಸಿಯಂ)

ಈ ಬುಡಕಟ್ಟು ವಸ್ತು ಸಂಗ್ರಹಾಲಯವು ಬುಡಕಟ್ಟು ಪರಂಪರೆಯನ್ನು ಸಾರುತ್ತದೆ. ಇದು ಸ್ಥಳೀಯ ಜನರ ಜೀವನ ಮತ್ತು ಪದ್ಧತಿಗಳನ್ನು ಪ್ರತಿನಿಧಿಸುತ್ತದೆ. ಈ ವಸ್ತು ಸಂಗ್ರಾಹಾಲಯದಲ್ಲಿ ಬುಡಕಟ್ಟು ಆಚರಣೆಗಳು, ಸಂಪ್ರದಾಯಗಳು ಮತ್ತು ಕೌಶಲ್ಯಗಳನ್ನು ಒಳಗೊಂಡ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ಕಾಣಬಹುದು.

Araku Valley Tour

ಅನಂತಗಿರಿ ಬೆಟ್ಟಗಳು

ಇಲ್ಲಿ ದಟ್ಟವಾದ ಕಾಡುಗಳು ಮತ್ತು ಮಂಜಿನ ಮೋಡಗಳಿಂದ ಆವೃತವಾದ ಬೆಟ್ಟಗಳಿಂದ ಸುತ್ತುವರಿದ ಗಿರಿಧಾಮವಿದೆ. ಇಲ್ಲಿ ಸಾಹಸಮಯ ಚಾರಣವನ್ನು ಮಾಡಬಹುದು. ಇಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ನೋಡಬಹುದಂತೆ.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Araku Valley Tour

ಚಾಪಾರೈ ವಾಟರ್ ಕ್ಯಾಸ್ಕೇಡ್

ಪ್ರಕೃತಿಯ ಮಧ್ಯೆ ಶಾಂತಿಯುತವಾಗಿ ಇರಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹರಿಯುವ ನೀರು ಮತ್ತು ಸೊಂಪಾದ ಹಸಿರು ನಿಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಇದು ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳ.
ಹಾಗಾಗಿ ಕುಟುಂಬದೊಂದಿಗೆ ಅರಕು ಕಣಿವೆಯ ಈ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಿ.

Continue Reading

ದೇಶ

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಜೋಶಿಮಠ ತಹಸಿಲ್ (Joshimath Teshil Now Jyotirmath) ಅನ್ನು ಮರುನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆ ಮಾತನ್ನು ಅವರು ಈಗ ಪೂರ್ಣಗೊಳಿಸಿದ್ದಾರೆ.

VISTARANEWS.COM


on

By

Joshimath Teshil Now Jyotirmath
Koo

ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ಜೋಶಿಮಠ ತಾಲೂಕು (Joshimath tehsil) ಅನ್ನು ‘ಜ್ಯೋತಿರ್ಮಠ’ (Joshimath Teshil Now Jyotirmath) ಎಂಬ ಹೊಸ ಹೆಸರಿನಿಂದ ಕರೆಯಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಜ್ಯೋತಿರ್ಮಠವು ಜೋಶಿಮಠದ ಪ್ರಾಚೀನ ಹೆಸರಾಗಿದೆ.

ತಹಸಿಲ್‌ನ ಹೆಸರು ಬದಲಾವಣೆ ಕುರಿತು ಉತ್ತರಾಖಂಡ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದೆ.

ಸ್ಥಳೀಯರಿಂದ ಸ್ವಾಗತ

ಜೋಶಿಮಠ ತಹಸಿಲ್ ಅನ್ನು ‘ಜ್ಯೋತಿರ್ಮಠ’ ಎಂದು ಹೆಸರು ಬದಲಾವಣೆ ಮಾಡಿರುವುದನ್ನು ಜೋಶಿಮಠದ ನಿವಾಸಿಗಳು ಸ್ವಾಗತಿಸಿದ್ದಾರೆ. ಯಾಕೆಂದರೆ ತಹಸಿಲ್ ಅನ್ನು ಅದರ ಮೂಲ ಹೆಸರಿಗೆ ಹಿಂತಿರುಗಿಸುವುದರಿಂದ ಅದರ ಪ್ರಾಚೀನ ಮೂಲವನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲದೆ ಅದರ ವಿಶಾಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುತ್ತದೆ ಎಂದಿದ್ದಾರೆ.

ಕಳೆದ ವರ್ಷ ಚಮೋಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಹಸಿಲ್ ಅನ್ನು ಮರುನಾಮಕರಣ ಮಾಡುವ ಸರ್ಕಾರದ ನಿರ್ಣಯದ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಮಾಡಿದರು. ಆ ಮೂಲಕ ಅದರ ಐತಿಹಾಸಿಕ ವೈಭವವನ್ನು ಮರುಸ್ಥಾಪನೆಗೆ ಯೋಚಿಸಿರುವುದಾಗಿ ಹೇಳಿದ್ದರು.

ಬಹುಕಾಲದ ಬೇಡಿಕೆ

ಜೋಶಿ ಮಠದ ಸ್ಥಳೀಯರು ಬಹಳ ಹಿಂದಿನಿಂದಲೂ ಹೆಸರು ಬದಲಾವಣೆಗೆ ಒತ್ತಾಯಿಸುತ್ತಿದ್ದರು. ಜನರ ಭಾವನೆಗಳಿಗೆ ಸ್ಪಂದಿಸಿ ಧಾಮಿ ಸರ್ಕಾರ ತಹಸಿಲ್ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬುಧವಾರ ಅನುಮೋದನೆ ಪಡೆದಿದೆ.

ಇದನ್ನೂ ಓದಿ: Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!


ಶಂಕರಾಚಾರ್ಯರಿಗೂ ಇದೆ ನಂಟು

8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದಿದ್ದರು ಎಂಬುದು ಸ್ಥಳೀಯರ ನಂಬಿಕೆ. ಅವರು ಅಮ6ರ ಕಲ್ಪ ವೃಕ್ಷದ ಕೆಳಗೆ ತಪಸ್ಸು ಕೈಗೊಂಡರು ಎಂದು ಹೇಳಲಾಗುತ್ತದೆ. ಇದರಿಂದಾಗಿ ದೈವಿಕ ಜ್ಞಾನೋದಯ ಮತ್ತು ಜ್ಞಾನವನ್ನು ಸಾಧಿಸಿದರು. ಈ ಸ್ಥಳವನ್ನು ಮೂಲತಃ ಜ್ಯೋತಿರ್ಮಠ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಇದು ಜೋಶಿಮಠ ಎಂಬ ಬೇರೆ ಹೆಸರಿನಲ್ಲಿ ಜನಪ್ರಿಯತೆಯನ್ನು ಗಳಿಸಿತು.

ಜ್ಯೋತಿರ್ಮಠವು 6,150 ಅಡಿ ಅಂದರೆ ಸರಿಸುಮಾರು 1,875 ಮೀಟರ್ ಎತ್ತರದಲ್ಲಿದೆ. ಹಲವಾರು ಹಿಮಾಲಯ ಪರ್ವತಾರೋಹಣ, ಚಾರಣ ಮತ್ತು ಬದರಿನಾಥದಂತಹ ಯಾತ್ರಾ ಕೇಂದ್ರಗಳಿಗೆ ಇದು ಹೆಬ್ಬಾಗಿಲಾಗಿದೆ.

Continue Reading

Latest

Bhubaneswar Tour: ಭುವನೇಶ್ವರಕ್ಕೆ ಪ್ರವಾಸ ಮಾಡಿದಾಗ ಏನೆಲ್ಲ ನೋಡಬಹುದು?

Bhubaneswar Tour: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿನಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದಾಗ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಕೆಲವೊಂದು ಪ್ರದೇಶಗಳ ಆಹಾರ, ಸಂಪ್ರದಾಯ, ಆಚರಣೆಗಳು ಎಲ್ಲವೂ ವಿಭಿನ್ನವಾಗಿರುತ್ತದೆ. ಪ್ರವಾಸಕ್ಕೆ ಹೋಗುವಾಗ ಈ ಅಂಶಗಳ ಕುರಿತು ನಾವು ಹೆಚ್ಚಿನ ನಿಗಾ ವಹಿಸಬೇಕು. ಇಲ್ಲಿ ಒಡಿಶಾದ ಭುವನೇಶ್ವರಕ್ಕೆ ಭೇಟಿ ನೀಡುವಾಗ ಗಮನಿಸಬೇಕಾದ ವಿಷಯಗಳ ಕುರಿತ ಮಾಹಿತಿ ಇದೆ.

VISTARANEWS.COM


on

Bhubaneswar Tour
Koo

ಭುವನೇಶ್ವರ ಇದು ಒಡಿಶಾ ರಾಜ್ಯದ ರಾಜಧಾನಿಯಾಗಿದೆ. ಮಹಾನದಿ ಮುಖಜಭೂಮಿಯ ಉದ್ದಕ್ಕೂ ನೆಲೆಸಿರುವ ಭುವನೇಶ್ವರ ಪುರಾತನ ದೇವಾಲಯಗಳ ನಗರವಾಗಿದೆ. ಇದು ಕಳಿಂಗ ರಾಜವಂಶದ ಕುಶಲತೆಯಿಂದ ಪ್ರೇರಿತವಾದ ಸಂಕೀರ್ಣವಾದ ಕಲಾತ್ಮಕ ಪಾಂಡಿತ್ಯವನ್ನು ಚಿತ್ರಿಸುವ ಭವ್ಯವಾದ ಕಲ್ಲಿನ ದೇವಾಲಯಗಳನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡುವವರು ಒಮ್ಮೆ ಈ ಸ್ಥಳದ ಬಗೆಗಿನ ವಿವರಗಳನ್ನು ತಿಳಿದುಕೊಳ್ಳಿ. ಇಲ್ಲಿನ ಹವಾಮಾನದ ವಿವರ, ದೇವಾಲಯಗಳು, ಪಾಕವಿಧಾನಗಳ ಬಗ್ಗೆ ತಿಳಿದುಕೊಂಡು ಈ ಸ್ಥಳಕ್ಕೆ ಭೇಟಿ ನೀಡಿದರೆ ಉತ್ತಮ. ಇದರಿಂದ ನಿಮ್ಮ ಪ್ರವಾಸ ಆರಾಮದಾಯಕವಾಗಿರುತ್ತದೆ.

ಭುವನೇಶ್ವರದ ಹವಾಮಾನದ ವಿವರ

ಈ ಸ್ಥಳ ಆರ್ದ್ರ ಉಪೋಷ್ಣವಲಯದ ಹವಾಮಾನ ವಲಯದ ಅಡಿಯಲ್ಲಿ ಬರುತ್ತದೆ. ಇದು ಬಿಸಿ ಆರ್ದ್ರ ಬೇಸಿಗೆ, ಮಧ್ಯಮ ಮಳೆ ಹಾಗೂ ಹದವಾದ ಚಳಿಯನ್ನು ಹೊಂದಿರುವ ಪ್ರದೇಶವಾಗಿದೆ. ಬೇಸಿಗೆ(ಏಪ್ರಿಲ್- ಜೂನ್ )ಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲ(ಜುಲೈ-ಸೆಪ್ಟೆಂಬರ್)ದಲ್ಲಿ ಧಾರಾಕಾರ ಮಳೆಯಾಗುತ್ತದೆ. ಬಿಸಿಲಿನ ಬೇಗೆಯಿಂದ ಸುಟ್ಟ ಮರಗಳು ಮಳೆಗಾಲದಲ್ಲಿ ಚಿಗುರಿ ಹಸಿರಾಗುತ್ತವೆ. ಚಳಿಗಾಲ(ನವೆಂಬರ್- ಫೆಬ್ರವರಿ)ದಲ್ಲಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ. ಡಿಸೆಂಬರ್,ಜನವರಿಯಲ್ಲಿ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಕ್ಕೆ ಇಳಿಯುತ್ತದೆ. ಹಾಗಾಗಿ ಭುವನೇಶ್ವರಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್ ಅತ್ಯುತ್ತಮ ಸಮಯವಾಗಿದೆ.

ಭುವನೇಶ್ವರದ ಪ್ರಮುಖ ದೇವಾಲಯಗಳು

Bhubaneswar Tour

ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ಭುವನೇಶ್ವರದಲ್ಲಿ ರಾಜವಂಶಸ್ಥರು ನಿರ್ಮಿಸಿದ ಹಲವು ದೇವಾಲಯಗಳನ್ನು ನೋಡಬಹುದು. ಲಿಂಗರಾಜ ದೇವಾಲಯ, ರಾಜರಾಣಿ ದೇವಾಲಯ, ಮುಕ್ತೇಶ್ವರ ದೇವಾಲಯ, ಅನಂತ ವಾಸುದೇವ ದೇವಾಲಯಗಳಲ್ಲಿ ಸಂಕೀರ್ಣವಾದ ಕೆತ್ತನೆಗಳನ್ನು ನೋಡಬಹುದು.

ಬಾಯಿಯಲ್ಲಿ ನೀರುಣಿಸುವ ಪಾಕವಿಧಾನ

ಇಲ್ಲಿನ ಆಹಾರವು ನದಿ ಅಥವಾ ಸರೋವರದ ಸಿಹಿ ನೀರಿನ ಪದಾರ್ಥಗಳೊಂದಿಗೆ ಗಿಡಮೂಲಿಕೆಗಳು ಅಥವಾ ಕಾಡುಗಳ ಮಧ್ಯೆ ಬೆಳೆದ ಖಾದ್ಯ ಹೂಗಳನ್ನು ಒಳಗೊಂಡಿದೆ. ಇಲ್ಲಿನ ಒಂದೊಂದು ಅಡುಗೆಗಳು ವಿಭಿನ್ನ ರುಚಿಯನ್ನು ಹೊಂದಿದೆ. ಇಲ್ಲಿನ ಸಾಂಪ್ರದಾಯಿಕ ಭಕ್ಷ್ಯಗಳು ಹೀಗಿವೆ:

  • ಪಾಖಾಲಾ ಭಾತ್ – ಅನ್ನದ ಜೊತೆಗೆ ಪ್ಯಾನ್ ಫ್ರೈಡ್ ತರಕಾರಿಗಳು ಮತ್ತು ಮೊಸರನ್ನು ನೀಡಲಾಗುತ್ತದೆ.
  • ದಹಿ ಬೈಗಾನಾ – ಮೊಸರು ಮತ್ತು ಮಸಾಲೆ ಗ್ರೇವಿಯಲ್ಲಿ ಬೇಯಿಸಿದ ಬದನೆಕಾಯಿಯ ಖಾದ್ಯ ಇದಾಗಿದೆ
  • ಆಲೂ ಪೊಟಾಲ ರಸ – ಹುಣಸೆಹಣ್ಣು ಮತ್ತು ಬೆಲ್ಲದ ರುಚಿಯ ಗ್ರೇವಿಯಲ್ಲಿ ಆಲೂಗಡ್ಡೆಯನ್ನು ಮಸಾಲೆಯೊಂದಿಗೆ ಬೆರೆಸಿದ ಕರಿಯಾಗಿದೆ.

ಸಿಹಿ ಪದಾರ್ಥಗಳು:

  • ಪಿತಾ – ಬೆಲ್ಲ, ರವೆ ಮತ್ತು ಒಣ ಹಣ್ಣುಗಳಿಂದ ತುಂಬಿದ ಮೃದುವಾದ ಅಕ್ಕಿಯ ಕೇಕ್ ಗಳಾಗಿವೆ.
  • ಚೆನಾ ಪೋಡಾ – ನಯಾಗರ್ ಪ್ರದೇಶದ ಬೇಯಿಸಿದ ಚೀಸ್ ನ ಸಿಹಿತಿಂಡಿ ಇದಾಗಿದೆ.
  • ರಸಬಲಿ – ಸುವಾಸನೆಯಿಂದ ಕೂಡಿದ ಸಿಹಿಯಾದ ಕೇಸರಿ ಸಿಹಿ ಸಿರಪ್‌ ಗೆ ಹಾಲು ಮತ್ತು ಚೀಸ್ ನ ಉಂಡೆಗಳನ್ನು ಸೇರಿಸಿ ಮಾಡುವ ಖಾದ್ಯ

ಇದನ್ನೂ ಓದಿ: Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

ಈ ಎಲ್ಲಾ ಮಾಹಿತಿಗಳ ಮೂಲಕ ನೀವು ಭುವನೇಶ್ವರಕ್ಕೆ ಭೇಟಿ ನೀಡಿದರೆ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆರಾಮವಾಗಿ ನಿಮ್ಮ ಪ್ರವಾಸವನ್ನು ಮುಗಿಸಬಹುದು.

Continue Reading
Advertisement
Engineering Seats
ಶಿಕ್ಷಣ16 mins ago

Engineering Seats: ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಈ ಬಾರಿ ಹೆಚ್ಚು ಸೀಟುಗಳು ಲಭ್ಯ!

Pavithra Gowda Number 6024 in parappana jail
ಕ್ರೈಂ16 mins ago

Pavithra Gowda: ಪವಿತ್ರಾ ಗೌಡ ಈಗ ಕೈದಿ ನಂಬರ್ 6024; ಹೈಫೈ ಲೈಫ್ ಲೀಡ್ ಮಾಡಿದ್ದ ನಟಿ ಈಗ ಜೈಲು ಹಕ್ಕಿ!

assault Case
ಕ್ರೈಂ30 mins ago

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

ram mohan raju actor darshan
ಪ್ರಮುಖ ಸುದ್ದಿ34 mins ago

Actor Darshan: ದರ್ಶನ್‌ಗೆ 40 ಲಕ್ಷ ರೂ ನೀಡಿದ ವ್ಯಕ್ತಿ ಈಗ ನಾಪತ್ತೆ! ಯಾರೀ ಆಸಾಮಿ?

Darshan Arrested in IT trouble! Is the money paid to a MLA's friend
ಸ್ಯಾಂಡಲ್ ವುಡ್38 mins ago

Darshan Arrested: ದರ್ಶನ್‌ಗೆ ಕೊಲೆ ಆರೋಪದ ಜತೆಗೆ ಐಟಿ ಸಂಕಷ್ಟ! ಹಣ ಸಂದಾಯ ಮಾಡಿದ್ರಾ ಶಾಸಕರೊಬ್ಬರ ಆಪ್ತ?

IRCTC Ticket Booking
Latest54 mins ago

IRCTC Ticket Booking: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

Viral Video
Latest56 mins ago

Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Israel-Hamas Conflict
ವಿದೇಶ1 hour ago

Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Actor Darshan case sanjana galrani Reaction about ramya statement
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Liquor Price Karnataka
ಪ್ರಮುಖ ಸುದ್ದಿ2 hours ago

Liquor Price Karnataka: ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ನ್ಯೂಸ್‌; ಜುಲೈ 1ರಿಂದ ಬೆಲೆ ಇಳಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು4 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು4 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ5 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ7 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು7 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌