Navaratri 2022 | ನವತ್ವವನ್ನು ಉಂಟು ಮಾಡುವ ನವರಾತ್ರಿ ಹಬ್ಬ - Vistara News

ದಸರಾ ಸಂಭ್ರಮ

Navaratri 2022 | ನವತ್ವವನ್ನು ಉಂಟು ಮಾಡುವ ನವರಾತ್ರಿ ಹಬ್ಬ

ಇಂದಿನಿಂದ ನವರಾತ್ರಿ ಹಬ್ಬ (Navaratri 2022 ) ಆರಂಭಗೊಂಡಿದೆ. ವಿಜಯ ದಶಮಿಯೂ ಸೇರಿ ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬ ಅತಿ ದೀರ್ಘ ಕಾಲ ನಡೆಯುವ ಉತ್ಸವ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಹಬ್ಬದ ಮಹತ್ವವನ್ನು ತಿಳಿಸುವ ಲೇಖನ ಇಲ್ಲಿದೆ.

VISTARANEWS.COM


on

Navaratri 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Navaratri 2022

ವಿದ್ವಾನ್ ಬಿ. ಜಿ. ಅನಂತ
ಸನಾತನ ಆರ್ಯ ಭಾರತೀಯರ ಹಬ್ಬ-ಹರಿದಿನಗಳ ಸಾಲಿನಲ್ಲಿ ಅತ್ಯಂತ ಮುಖ್ಯವಾಗಿರುವ ಪರ್ವ – ನವರಾತ್ರಿ ಮಹೋತ್ಸವ (Navaratri 2022). ವರ್ಣ ಭೇದವಿಲ್ಲದೆ ಸಮಸ್ತ ಭಾರತೀಯರೂ ಗತಿಸಿಹೋದ ತಮ್ಮ ತಮ್ಮ ಪಿತೃಗಳಿಗೆ ಪೂಜೆ ದಾನ-ತರ್ಪಣಗಳನ್ನು ಮಹಾಲಯ ಪಕ್ಷದ ಹದಿನೈದು ದಿನಗಳ ಪರ್ಯಂತ ಕೊಟ್ಟಿರುತ್ತಾರೆ. ಅದರ ಕೊನೆಯ ದಿವಸವಾದ ಮಹಾಲಯ ಅಮಾವಾಸ್ಯೆಯಂದು ಈ ಪಿತೃ ಪೂಜೆಯು ಉತ್ತುಂಗವನ್ನು ಕಂಡು ಸಂಪೂರ್ಣವಾಗಿರುತ್ತದೆ. ಅಂದಿನ ಅಮಾವಾಸ್ಯೆ ಮುಗಿದ ನಂತರ ಪ್ರಾರಂಭವಾಗುವ ಆಶ್ವಯುಜ ಮಾಸದ ಶುಕ್ಲಪಕ್ಷದ ಪ್ರತಿಪತ್ತಿನ ದಿವಸ ಮೊದಲುಗೊಂಡು ನವರಾತ್ರಿ ಪರ್ವವು ಪ್ರಾರಂಭವಾಗುತ್ತದೆ.  

ಪಿತೃದೇವತೆಗಳು ದೇವತಾ ಶಕ್ತಿಗಳಿಗೂ ಹಿಂದೆ ನಿಂತು ಕೆಲಸ ಮಾಡುವವರು. ಪಿತೃಗಳೆಂದರೆ ಅದು ಸಮಸ್ತ ಸೃಷ್ಟಿಗೂ, ಸೃಷ್ಟಿಯ ಭಾಗವಾದ ದೇವತೆಗಳಿಗೂ ಮೂಲವಾದ ಶಕ್ತಿವಿಶೇಷ. ಅವರನ್ನು ಪೂಜಿಸಿದ, ಸಂತೃಪ್ತಿಪಡಿಸಿದ ನಂತರ ದೇವತಾ ಶಕ್ತಿಗಳನ್ನು ಪೂಜಿಸುವ ಕಾಲವೇ ಈ ನವರಾತ್ರಿ ಮಹೋತ್ಸವ (Navaratri 2022).

ಭಾರತದ ಎಲ್ಲ ಭಾಗಗಳಲ್ಲಿಯೂ ವಿಶೇಷವಾಗಿ ಆಚರಿಸಲ್ಪಡುವ ಹಬ್ಬವಿದು. ಎಲ್ಲ ವರ್ಣ, ಎಲ್ಲ ಆಶ್ರಮಗಳಿಗೆ ಸೇರಿದವರು ಮತ್ತು ಪೂರ್ಣವಾಗಿ ಆರ್ಯಧರ್ಮಕ್ಕೆ ಸೇರದಿರುವ ಮ್ಲೇಚ್ಛರೂ ಕೂಡ ಆಚರಿಸಲು ಅಧಿಕಾರವಿರುವ ಪರ್ವವೂ ಕೂಡ ಇದಾಗಿದೆ ಎಂಬುದಾಗಿ ಹಿರಿಯರು ಅಪ್ಪಣೆ ಕೊಡಿಸಿರುತ್ತಾರೆ. ಶೈವ ವೈಷ್ಣವ ಶಾಕ್ತ ಸೌರ ಗಾಣಪತ್ಯ ಮತ್ತು ಕೌಮಾರ ಎಂಬ ಭಕ್ತಪಂಥಗಳು ಪ್ರಸಿದ್ಧವಷ್ಟೇ. ಆ ಎಲ್ಲ ಬೇರೆ ಬೇರೆ ಭಕ್ತ ವರ್ಗದವರೂ ಕೂಡಾ ಆಚರಣೆ ಮಾಡಲು ಬರುವ ಹಬ್ಬ ಈ ನವರಾತ್ರಿ.

ನವರಾತ್ರಿಕಾಲದ ಆರಾಧ್ಯದೇವತೆ

ಏಕೆಂದರೆ ಈ ಪರ್ವದಲ್ಲಿ ವಿಶೇಷವಾಗಿ ಪೂಜಿಸಲ್ಪಡುವವಳು – ಶಕ್ತಿ.
“ಸಂಜೀವಯತ್ಯಖಿಲಶಕ್ತಿಧರಸ್ಸ್ವಧಾಮ್ನಾʼʼ ಎಂದು ಶ್ರೀಮದ್ಭಾಗವತವು ಹೇಳುವಂತೆ ಭಗವಂತನು ಶಕ್ತಿ ವಿಶಿಷ್ಟನೇ ಆಗಿದ್ದಾನೆ. ಹಾಗಿರುವ ಅವನ ಶಕ್ತಿಯ ಅಂಶವನ್ನು ವಿಶೇಷವಾಗಿ ಆರಾಧಿಸುವ ಹಬ್ಬವಿದು. ಎಲ್ಲ ಒಂಬತ್ತು ದಿನಗಳಲ್ಲಿ ಆಚರಿಸಲು ಸಾಧ್ಯವಾಗದಿದ್ದರೆ ಕೊನೆಯ ನಾಲ್ಕು ದಿನಗಳು, 3 ದಿನಗಳು, 2 ದಿನಗಳು ಅಥವಾ ಒಂದು ದಿನವಾದರೂ ಅವಶ್ಯವಾಗಿ ಆಚರಿಸಲೇ ಬೇಕಾದ ಹಬ್ಬವಿದು. ಕೇವಲ ಮಹಾಷ್ಟಮೀ ಅಥವಾ ಮಹಾನವಮಿಯನ್ನಾದರೂ ಆಚರಿಸಬೇಕೇ ಹೊರತು ಮಹೋತ್ಸವ. ಖಂಡಿತವಾಗಿಯೂ ಹಬ್ಬದ ಲೋಪವನ್ನು ಮಾಡಬಾರದು ಎಂದು ಹಿರಿಯರು ಅನುಶಾಸನ ಮಾಡಿರುವ ಮಹಾಪರ್ವ ನವರಾತ್ರಿ.

ನವರಾತ್ರಿಗೆ ಯಾಕೆ ಈ ಹೆಸರು?
ನವರಾತ್ರಿ (Navaratri 2022), ದುರ್ಗೋತ್ಸವ ಎಂಬ ಎರಡು ಪ್ರಸಿದ್ಧವಾದ ಹೆಸರುಗಳಿಂದ ಈ ಹಬ್ಬವು ಕರೆಯಲ್ಪಡುತ್ತದೆ. ಹತ್ತನೆಯ ದಿನವಾದ ವಿಜಯದಶಮಿಯನ್ನು ಸೇರಿಸಿಕೊಂಡು ಇದನ್ನು “ದಶಾಹʼʼ ಅಥವಾ “ದಸರಾʼʼ ಎಂಬ ನಾಮಧೇಯ ದಿಂದಲೂ ಕರೆಯುತ್ತಾರೆ. 9 ರಾತ್ರಿಗಳಲ್ಲಿ ಅಥವಾ ಅಹೋರಾತ್ರಗಳಲ್ಲಿ ಸಂಪನ್ನ ವಾಗುವುದರಿಂದ ನವರಾತ್ರಿ ಎಂಬ ಹೆಸರು ಸಹ ಇದಕ್ಕೆ ಹೊಂದಿಕೆಯಾಗುತ್ತದೆ. ಆಶ್ವಯುಜಮಾಸದ ಶುಕ್ಲಪಕ್ಷದ ಪ್ರಥಮೆಯಿಂದ ಪ್ರಾರಂಭಿಸಿ ಒಂಬತ್ತು ದಿನಗಳು ಆಚರಿಸುವ ಪರ್ವವನ್ನು ವಸಂತ ನವರಾತ್ರಿ ಎಂದೂ, ಶರತ್ಕಾಲದ ಪ್ರಥಮೆಯಿಂದ ಪ್ರಾರಂಭಿಸಿ 9 ದಿನಗಳ ಕಾಲ ಆಚರಿಸುವ ಪರ್ವವನ್ನು ಶರನ್ನವರಾತ್ರಿ ಎಂದೂ ಕರೆಯುವುದು ಶಾಸ್ತ್ರೀಯವಾದದ್ದೇ ಆಗಿದೆ. ಆದರೆ ಶರತ್ಕಾಲದಲ್ಲಿ ಆಚರಿಸಲ್ಪಡುವ ನವರಾತ್ರಕ್ಕೆ ವಿಶೇಷ ಪ್ರಾಮುಖ್ಯ ಇರುವುದರಿಂದ ಅದನ್ನು ಮಾತ್ರವೇ ನವರಾತ್ರಿ ಮಹೋತ್ಸವ ಎಂದು ಕರೆಯುವ ವಾಡಿಕೆ ಬಂದಿದೆ.

“ಜೀವನದಲ್ಲಿ ನವತ್ವವನ್ನು ಉಂಟು ಮಾಡುವ ನವರಾತ್ರಿ ಇದು. ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳಲ್ಲಿ ಲಕ್ಷ್ಮಿಯೆಂದೂ, ಅನಂತರದ ಮೂರುದಿನಗಳಲ್ಲಿ ಸರಸ್ವತಿಯೆಂದೂ, ಕೊನೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗಿಯೆಂದೂ ಆರಾಧಿಸಿ ನಿಮ್ಮ ಪ್ರಕೃತಿಯನ್ನು ಶುದ್ಧಮಾಡಿಕೊಳ್ಳಿ. ಹೊರಗಡೆ ಪ್ರಕೃತಿಯಲ್ಲಿ ಮೋಡಗಳಿಲ್ಲದ ಶುದ್ಧವಾದ ಆಕಾಶ, ಒಳಗೂ ಶುದ್ಧವಾದ ಜ್ಞಾನಾಕಾಶ. ಹೊರಗೆ ಸರೋವರದಲ್ಲಿ ಅರಳಿರುವ ಕಮಲಗಳು, ಒಳಗೆ ಮಾನಸಸರೋವರದಲ್ಲಿ ಅರಳಿರುವ ಹೃದಯಾದಿ ಕಮಲಗಳು. ಅಲ್ಲಿ ಪರಮಾತ್ಮನ ಪರಾಪ್ರಕೃತಿಯಾಗಿರುವ ದೇವಿಯನ್ನು ಆರಾಧಿಸಿ ಶುದ್ಧ ಸತ್ವರಾಗಿರಿ. ಹೊರಗಡೆ ಧನಧಾನ್ಯ ಸಮೃದ್ಧಿ, ಒಳಗೆ ಆತ್ಮಧನ ಸಮೃದ್ಧಿ. ಹೊರಗೆ ವೀರ ಕ್ಷತ್ರಿಯರಿಂದ ಧರ್ಮ ವಿಜಯಕ್ಕಾಗಿ ಯಾತ್ರೆ, ಒಳಗೆ ಆತ್ಮ ವಿಜಯಕ್ಕಾಗಿ ಯಾತ್ರೆ – ಎಲ್ಲವೂ ಕೂಡಿಬರುವ ಮಹಾಪರ್ವವಿದು” ಎಂದು ಈ ಪರ್ವದ ವಿಶೇಷತೆಯನ್ನು ಸಾರಿಷ್ಠವಾದ ಸಂದೇಶದಲ್ಲಿ ಶ್ರೀರಂಗ ಮಹಾಗುರುಗಳು ಅಪ್ಪಣೆ ಕೊಡಿಸಿದ್ದರು ಎಂದು ಪೂಜ್ಯ ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ದಾಖಲಿಸಿದ್ದಾರೆ.

ಇದು ಎಲ್ಲ ದೇವತೆಗಳ ಧ್ಯಾನ – ಉಪಾಸನೆಗಳಿಗೆ ಶ್ರೇಷ್ಠವಾಗಿರುವ ಕಾಲವಾದರೂ ವಿಶೇಷವಾಗಿ ದೇವಿಯ ಪ್ರಸನ್ನತೆಯನ್ನು ಉಂಟುಮಾಡಲು ಸಹಾಯಕವಾಗಿರುವ ಕಾಲವಾಗಿದೆ. ವಿವಾಹ ಉಪನಯನ ಮುಂತಾದ ಶುಭಕರ್ಮಗಳಿಗೆ ತಿಥಿ ವಾರ ನಕ್ಷತ್ರ ಯೋಗ ಕರಣ ಗ್ರಹಮೈತ್ರ ಮುಂತಾದ ಎಲ್ಲಾ ಅನುಕೂಲತೆಗಳೂ ಇಲ್ಲದಿರುವಾಗಲೂ ಅದನ್ನು ಗಮನಿಸದೆ ಶರನ್ನವರಾತ್ರಿ ಸಮಯದಲ್ಲಿ ಆ ಶುಭ ಕರ್ಮಗಳನ್ನು ನಡೆಸುವ ವಾಡಿಕೆಯಿದೆ. ವಿಶೇಷವಾಗಿ ವಿಜಯದಶಮಿಗೆ ಆ ಮಹಾಮಹಿಮೆ ಇದೆಯೆಂದು ಹೇಳುತ್ತಾರೆ.

Navaratri 2022

ಭವತಾರಿಣೀ ದುರ್ಗೇ
ಈ ನವರಾತ್ರಿ ಉತ್ಸವಕ್ಕೆ ದುರ್ಗೋತ್ಸವ ಎಂಬ ಮತ್ತೊಂದು ಹೆಸರೂ ಇದೆ. ದುರ್ಗಾ ಎಂದರೆ ಸಂಕಷ್ಟ ಅಥವಾ ಸಮಸ್ಯೆ ಎಂಬ ಅರ್ಥವೂ ಇದೆ. ಇಂತಹ ಎಲ್ಲ ದುರ್ಗಗಳನ್ನೂ ದಾಟಿಸುವ ದುರ್ಗಾದೇವಿಯ ವಿಶೇಷವಾದ ಸಾನ್ನಿಧ್ಯವಿರುವ ಕಾಲವಾದ್ದರಿಂದ ನವರಾತ್ರಿಗೆ ಈ ಅಗ್ಗಳಿಕೆ. ದುರ್ಗಗಳನ್ನು ದಾಟಿಸುವವಳು ಅಥವಾ ದುರ್ಗತಿಯನ್ನು ತಪ್ಪಿಸುವವಳು ಎಂದು ದುರ್ಗಾ ಶಬ್ದಕ್ಕೆ ಅರ್ಥ ನಿಷ್ಪತ್ತಿಯನ್ನು ಹೇಳುತ್ತಾರೆ. (ದುರ್ಗಾಂ ದುರ್ಗತಿ ನಾಶಿನೀಮ್- ಎಂದು). ಜಗನ್ಮಾತೆಯಾದ ಪಾರ್ವತಿಗೆ ಭವತಾರಿಣೀ (ಸಂಸಾರಸಾಗರವನ್ನು ದಾಟಿಸುವವಳು) ಎಂಬ ನಾಮಾಂತರವೂ ಇದೆಯಷ್ಟೇ.

ಶರನ್ನವರಾತ್ರಿ ಮಹೋತ್ಸವದಲ್ಲಿ ಪ್ರಧಾನವಾಗಿ ಆರಾಧಿಸಲ್ಪಡುವ ದೇವತೆ – ಶಕ್ತಿ. ಉತ್ಸವದ ಒಂಬತ್ತು ದಿವಸಗಳಲ್ಲಿ ಮೊದಲ ಮೂರು ದಿವಸಗಳಲ್ಲಿ ಲಕ್ಷ್ಮೀ ರೂಪದಲ್ಲಿಯೂ ಎರಡನೆಯ ಮೂರು ದಿವಸಗಳಲ್ಲಿ ಸರಸ್ವತೀ ರೂಪದಲ್ಲಿಯೂ ಮತ್ತು ಕೊನೆಯ ಮೂರು ದಿವಸಗಳಲ್ಲಿ ದುರ್ಗಾ, ಪಾರ್ವತೀ ರೂಪದಲ್ಲಿಯೂ ಪೂಜಿಸಬೇಕು ಎಂದು ಜ್ಞಾನಿಗಳು ತಿಳಿಸಿರುತ್ತಾರೆ. ಆದರೆ ಎಲ್ಲ ಕಡೆಗಳಲ್ಲಿಯೂ ಕಾರ್ಯ ಕಾರಣವನ್ನು ಭಾವಿಸುವ ನಮ್ಮ ಮನಸ್ಸಿಗೆ ಸಂಶಯವೊಂದು ಕಾಡುತ್ತದೆ. ಏನೆಂದರೆ, ಶಕ್ತಿದೇವತೆಯು ಘೋರವಾದ ಆಕಾರವುಳ್ಳವಳು, ಮದ್ಯ ಮಾಂಸಾದಿಗಳಿಂದ ಆಕೆಯ ಪೂಜೆಯು ನಡೆಯುತ್ತದೆ. ಆದ್ದರಿಂದ ಸಾತ್ವಿಕರು ಆಕೆಯನ್ನು ಆರಾಧಿಸಬಾರದು ಎಂಬುದೇ ಆ ಸಂದೇಹ.

ಸಾತ್ವಿಕರು ಘೋರ ದುರ್ಗೇಆರಾಧಿಸಬಹುದೆ ? ಪೂಜ್ಯ ಶ್ರೀ ಶ್ರೀ ರಂಗಪ್ರಿಯ ಶ್ರೀಪಾದಂಗಳವರು ತೃಪ್ತಿಕರವಾದ ಸಮಾಧಾನವನ್ನು ಕೊಟ್ಟಿರುತ್ತಾರೆ. ಅದು ಹೀಗಿದೆ- “ಕೆಲವು ದೇವತೆಗಳ ವಿಗ್ರಹಗಳು ಹೊರಗಣ್ಣಿಗೆ ಘೋರವಾಗಿ ಕಂಡರೂ ಧ್ಯಾನದಲ್ಲಿ ಮುಳುಗಿ ನೋಡಿದಾಗ ಅವು ರಮಣೀಯವಾಗಿಯೂ, ಆನಂದಪ್ರದ ವಾಗಿಯೂ, ಶಾಂತಪ್ರದವಾಗಿಯೂ ಅನುಭವಕ್ಕೆ ಬರುತ್ತವೆ. ಇದು ಆಧುನಿಕ ಸಾಹಿತಿಗಳು ಹೇಳುವ ‘ರುದ್ರ ಸೌಂದರ್ಯ’ ವಲ್ಲ. ಬದಲಿಗೆ ಯೋಗಿಗಳು, ಪರಮ ನಯನೋತ್ಸವ ಕಾರಣಂ (ಕಣ್ಣುಗಳಿಗೆ ಹಬ್ಬ) ಎಂದು ವರ್ಣಿಸುವ ದಿವ್ಯಮೂರ್ತಿ.

ಇದಲ್ಲದೆ ಪರಾ ದೇವತೆಗಳು ವಾಸ್ತವವಾಗಿ ಅಮೃತಾನಂದವನ್ನು ಮಾತ್ರ ಸೇವಿಸುವವರು. ಭಕ್ತರು ತಮ್ಮ ಪ್ರಕೃತಿಗೆ ಅನುಗುಣವಾಗಿ ಫಲಪುಷ್ಪ ಸಸ್ಯಾಹಾರ ಮಾಂಸಾಹಾರ ಯಾವುದನ್ನೇ ಅರ್ಪಿಸಿದರೂ ಅದು ಅಮೃತ ರೂಪವನ್ನು ಪಡೆದೇ ದೇವತೆಗಳಿಗೆ ಅರ್ಪಿತವಾಗುತ್ತದೆ. ರಾಕ್ಷಸ ತಾಮಸ ಭಕ್ತರು ಮದ್ಯ ಮಾಂಸಾದಿಗಳಿಂದ ದೇವಿಯನ್ನು ಪೂಜಿಸಿದರೆ, ಸಾತ್ವಿಕಭಕ್ತರು ಮಾತ್ರ ಜಪ, ಯಜ್ಞ ಮತ್ತು ನಿರಾಮಿಷವಾದ (ಮಧ್ಯ ಮಾಂಸಗಳಿಂದ ರಹಿತವಾದ) ನೈವೇದ್ಯ ಇತ್ಯಾದಿಗಳಿಂದಲೇ ಆಕೆಯನ್ನು ಆರಾಧಿಸಬೇಕು.

ಜಗನ್ಮಾತೆಯು, ಸಾತ್ವಿಕ- ರಾಜಸಿಕ ಮತ್ತು ತಾಮಸಿಕ ಎಂಬ ಮೂರು ವಿಧಾನಗಳಿಂದ ಪೂಜೆಯನ್ನು ಕೈಗೊಳ್ಳುವವಳಾಗಿದ್ದಾಳೆ. ಅದರಲ್ಲಿ ಸಾತ್ವಿಕ ಭಕ್ತರು ಜಪಯಜ್ಞ, ಸಾತ್ವಿಕವಾದ ನೈವೇದ್ಯಾದಿಗಳಿಂದ ಮಾತ್ರ ಆಕೆಯನ್ನು ಆರಾಧಿಸಬೇಕು ಎಂಬ ಸ್ಕಾಂದ ಭವಿಷ್ಯ ಪುರಾಣದ ಮಾತನ್ನು ಪ್ರಮಾಣವಾಗಿ ನೋಡಬಹುದಾಗಿದೆ. ಹಾಗಾಗಿ ಸಾತ್ವಿಕರು ಶಕ್ತಿದೇವತೆಯನ್ನು ಆರಾಧಿಸ ಬಾರದು ಎಂಬ ಸಲಹೆಯು ನ್ಯಾಯ ಸಂಗತವಾಗುವುದಿಲ್ಲ.”

ನವರಾತ್ರಿ ಆಚರಣೆ ಹೇಗೆ?
ನವರಾತ್ರಿ ಕಾಲದಲ್ಲಿ ಆರಾಧಿಸಲ್ಪಡುವ ದೇವದೇವಿಯರ ಪೂಜಾ ವಿಧಿಗಳು ಅನೇಕವಾಗಿವೆ. ದೇಶದ ನಾನಾ ಪ್ರಾಂತಗಳಲ್ಲಿ ಸಂಪ್ರದಾಯಗಳು ಹಲವಾರು ಇವೆ. ಅವುಗಳನ್ನು ಅತ್ಯಂತ ಸಂಕ್ಷೇಪಿಸಿ ನೋಡುವುದಾದರೆ- ವಿಶೇಷವಾಗಿ ಈ ದಿನಗಳಲ್ಲಿ ರಾಮಾಯಣದ ಪಾರಾಯಣ, ದೇವಿಸ್ತುತಿ ಗ್ರಂಥಗಳ ಪಾರಾಯಣ, ಮೂಲಾ ನಕ್ಷತ್ರದಲ್ಲಿ ಶ್ರೀ ಸರಸ್ವತೀ ದೇವಿಯ ಪೂಜೆ, ಅಷ್ಟಮಿಯಂದು ದುರ್ಗಾ ದೇವಿಯ ಪೂಜೆ, ಮಹಾನವಮಿಯಂದು ವಿದ್ಯಾಧಿದೇವತೆಯಾದ ಶ್ರೀ ಹಯಗ್ರೀವ ದೇವರು ಮತ್ತು ಶ್ರೀ ಸರಸ್ವತೀ ದೇವಿಯ ಪೂಜೆ, ಸಂಗೀತದ ಉಪಕರಣಗಳಾದ ವೀಣಾ ವೇಣು ಮೃದಂಗಗಳ ಪೂಜೆ, ಆಯುಧ- ಗಜ – ಪೂಜೆ, ಕೊನೆಯ ದಿನವಾದ ವಿಜಯದಶಮಿಯಂದು ಈ ಎಲ್ಲ ದೇವರನ್ನೂ ವಿಶೇಷವಾಗಿ ಪೂಜಿಸಿ ಪಾರಾಯಣಕ್ಕೆ ಮಂಗಳವನ್ನು ಮಾಡಿ, ಅಧ್ಯಯನವನ್ನು ಹೊಸದಾಗಿ ಪ್ರಾರಂಭಿಸುವ ರೂಢಿಯಿದೆ.

ವಿಶೇಷವಾಗಿ ಕ್ಷತ್ರಿಯರಿಂದ ಶಮೀ ( ಬನ್ನೀ) ವೃಕ್ಷದಲ್ಲಿ ದೇವಿಯಪೂಜೆ, ವಿಜಯ ಯಾತ್ರೆಗಾಗಿ ಹೊರಡುವುದು ಇತ್ಯಾದಿಗಳನ್ನು ಸಾಮಾನ್ಯವಾಗಿ ಎಲ್ಲ ಪ್ರಾಂತಗಳಲ್ಲಿ, ಮತ್ತು ಎಲ್ಲ ಸಂಪ್ರದಾಯಗಳಲ್ಲಿಯೂ ಕಾಣಬಹುದಾಗಿದೆ. ಇವುಗಳೊಂದಿಗೆ ಅನ್ನದಾನವೇ ಮೊದಲಾದ ಬಗೆಬಗೆಯ ದಾನಗಳು, ಸುವಾಸಿನೀ ಪೂಜೆ ಮತ್ತು ಕುಮಾರೀ ಪೂಜೆ ಇವುಗಳನ್ನು ಕೂಡ ತಮ್ಮ ತಮ್ಮ ಕುಲಾಚಾರದಂತೆ ನಡೆಸುವುದನ್ನು ಕಾಣುತ್ತೇವೆ.

ಇನ್ನು ಮನೆಗಳಲ್ಲಿ ಈ ಹತ್ತು ದಿವಸವೂ ಅಹೋರಾತ್ರ (ಹಗಲು ಮತ್ತು ರಾತ್ರಿಯಲ್ಲಿ) ಅಖಂಡ ದೀಪವನ್ನು ಪ್ರತಿಷ್ಠೆ ಮಾಡಿ ಬೆಳಗಿಸಬೇಕು ಎಂದು ಶಾಸ್ತ್ರವು ವಿಧಿಸುತ್ತದೆ.

ಒಂದೊಮ್ಮೆ ಅಶೌಚ ಬಂದರೆ ಆಚರಣೆಯನ್ನು ಬಿಡುವ ಬದಲು, ಬ್ರಾಹ್ಮಣರ ಮೂಲಕ ಪೂಜೆಯನ್ನು ಮಾಡಿಸಬೇಕು. ದಶಮಿಯಂದು ಪಾರಾಯಣದಿಂದ ವ್ರತವನ್ನು ವಿಸರ್ಜನೆ ಮಾಡಬೇಕು. ಅಂದು ಅಪರಾಜಿತಾ ದೇವಿಯ ಪೂಜೆ, ಗ್ರಾಮ – ನಗರಗಳ ಎಲ್ಲೆಯನ್ನು ದಾಟುವಿಕೆ, ಸೀಮೋಲ್ಲಂಘನ, ಶಮೀ ಪೂಜೆ ಮತ್ತು ವಿಜಯಯಾತ್ರೆ ಅಥವಾ ದೇಶಾಂತರ ಯಾತ್ರೆಗಳಿಗಾಗಿ ಹೊರಟುಬರುವಿಕೆ ಇತ್ಯಾದಿಗಳನ್ನು ಮಾಡುವುದುಂಟು. ಹಿಂದಿನ ದಿವಸ ಪೂಜಿಸಿದ್ದ ಆಯುಧಗಳನ್ನು ದಶಮಿಯ ದಿವಸ ಬಳಸುವ ಸಂಪ್ರದಾಯವು ಜನಜನಿತವಾಗಿದೆ. ದಶಮಿಯಂದು ವಿಶೇಷವಾಗಿ ಸರಸ್ವತಿಯ ಪೂಜೆಯನ್ನು ಮಾಡಿ, ಯಾವುದಾದರೂ ಒಂದು ಹೊಸ ವಿದ್ಯೆಯನ್ನು ಕಲಿಯಲು ಆರಂಭ ಮಾಡುವುದು ಕೂಡ ಪ್ರಸಿದ್ಧವಾಗಿದೆ.

Navaratri 2022

ವಿಜಯದಶಮೀ, ಮಹಾನವಮೀ
ಒಟ್ಟು ಹತ್ತು ದಿವಸಗಳ ಪರ್ಯಂತ ನಡೆಯುವ ಉತ್ಸವ ಮಾಲಿಕೆಯಲ್ಲಿ ಅತ್ಯಂತ ಮುಖ್ಯವಾದವುಗಳು ಕೊನೆಯ ಎರಡು ದಿವಸಗಳು- ಮಹಾನವಮೀ ಮತ್ತು ವಿಜಯದಶಮೀ. ಈ ಎರಡು ಮಹಾಪರ್ವ ದಿವಸಗಳ ಕುರಿತು ಕೆಲವು ಸಮಾರೋಪದ ಮಾತುಗಳೊಂದಿಗೆ ಈ ಲೇಖನಮಾಲೆಯು ಮಂಗಳವನ್ನು ಕಾಣುತ್ತದೆ.

ಪ್ರಾರಂಭ ಮಾಡಿದ ಕಾರ್ಯದ ಸಿದ್ಧಿಯನ್ನು ಉಂಟು ಮಾಡಿಕೊಡುವ ‘ವಿಜಯ’ ಎಂಬ ಹೆಸರಿನ ಮುಹೂರ್ತವೊಂದು ವಿಜಯದಶಮಿಯ ಸಾಯಂ ಸಂಧ್ಯಾಕಾಲದಲ್ಲಿ ಕೂಡಿಬರುತ್ತದೆ. ವಿಜಯದಶಮಿಗೆ ಆ ಹೆಸರು ಬರಲು ಇದೂ ಒಂದು ಪ್ರಧಾನವಾದ ಕಾರಣ. ಧರ್ಮಪ್ರಭುವಾದ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯಕ್ಕಾಗಿ ದಂಡಯಾತ್ರೆಯನ್ನು ನಡೆಸಿದ್ದು ವಿಷ್ಣುದೇವತಾಕವಾದ ಶ್ರವಣ ನಕ್ಷತ್ರದಿಂದ ಕೂಡಿದ ವಿಜಯದಶಮಿಯಲ್ಲಿ. ಇದು ಭಗವದ್ಭಕ್ತರಲ್ಲಿ ವಿಜಯದಶಮಿಯ ಕುರಿತು ಪುಳಕವನ್ನು ಉಂಟುಮಾಡುವ ಮತ್ತೊಂದು ವಿಷಯ.

ಮಹತ್ತತ್ತ್ವ : ಇನ್ನು ಮಹತ್ ಎಂಬುದೊಂದು ತತ್ತ್ವ. ತ್ರಿಗುಣಗಳು ಆಗತಾನೇ ಹುಟ್ಟಿಕೊಂಡ ಸ್ಥಿತಿ ಅದು. ಹಾಗಿದ್ದರೂ ತ್ರಿಗುಣಗಳು ವಿಶೇಷವಾಗಿ ಕೆಲಸಮಾಡದ ಸ್ಥಿತಿಯೂ ಹೌದು. “ಮಹತ್ತತ್ವದವರೆಗೆ ಮುಟ್ಟಿದವನನ್ನೇ ಮಹಾತ್ಮಾ ಎಂದು ಕರೆದಿದ್ದಾರಪ್ಪಾ” ಎಂಬುದು ಸನಾತನಾರ್ಯ ಭಾರತರ ಹೃದಯವೇದ್ಯರಾದ ಶ್ರೀರಂಗ ಮಹಾಗುರುಗಳ ವಾಣಿ. ಅಂತಹ ಮಹತ್ತತ್ತ್ವವನ್ನು ದಾಟಿದವನು ಜ್ಞಾನಿ ಎನಿಸಿಕೊಂಡು ಕೃತಕೃತ್ಯನಾಗುತ್ತಾನೆ. ಅಂತಹ ಸುಕೃತಿ ಚೇತನಗಳಿಗೆ ಪುನಃ ಸಂಸಾರದ ಬಂಧನವಿಲ್ಲ ಎನ್ನುತ್ತವೆ ಯೌಗಿಕ ಸಾಹಿತ್ಯಗಳು.

ಮಹಾನವಮಿಯನ್ನು ಕುರಿತು ಶ್ರೀಗುರುವು, “ಮಹತ್ತತ್ತ್ವವನ್ನು ಸಾಧಿಸಿಕೊಳ್ಳಲು ಕಾಲಚಕ್ರದಲ್ಲಿ ಅನುಕೂಲವು ಕೂಡಿಬರುವ ಪರ್ವದಿವಸವೇ ಮಹಾನವಮೀ” -ಎಂದು ಅಪ್ಪಣೆ ಕೊಡಿಸಿದ್ದನ್ನು ಮಹಾಗುರುವಿನ ಆದ್ಯಶಿಷ್ಯರಲ್ಲಿ ಒಬ್ಬರಾದ ಪೂಜ್ಯ ಕೃಷ್ಣಮಾಚಾರ್ಯರು ಸ್ಮರಿಸಿಕೊಂಡಿದ್ದಾರೆ. ಶ್ರೀರಂಗ ಮಹಾಗುರುವನ್ನೂ, ಮಹತ್ತತ್ತ್ವವನ್ನೂ, ಮಹಾನವಮಿಯನ್ನೂ, ವಿಜಯದಶಮಿಯನ್ನೂ ಮತ್ತೆ ಮತ್ತೆ ಸ್ಮರಿಸುತ್ತಾ ಅವುಗಳಿಗೆ ಅಭಿಮುಖರಾಗೋಣ.

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Navratri 2022 | ಮೊದಲನೇ ದಿನ ಯಾವ ದೇವಿಯನ್ನು ಪೂಜಿಸಬೇಕು? ಬಿಳಿಯ ವಸ್ತ್ರಧಾರಣೆ ಏಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Mysore Dasara: ಚೆಕ್‌ ಬೌನ್ಸ್‌; ದಸರಾ ಕಲಾವಿದರಿಗೆ ಅವಮಾನ ಎಂದು ಯತ್ನಾಳ್‌ ಕಿಡಿ

Mysore Dasara: ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

VISTARANEWS.COM


on

Basanagouda Patil Yatnal
Koo

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮುಕ್ತಾಯವಾದರೂ ಕಲಾವಿದರ ಅಸಮಾಧಾನ ನಿಂತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಬಹುಮಾನದ ಚೆಕ್‌ ಬೌನ್ಸ್‌ ಆಗಿರುವುದರಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಚೆಕ್‌ ವಾಪಸ್‌ ಬಂದರೂ ಬ್ಯಾಂಕ್‌ ಖಾತೆಯಲ್ಲಿ ಹಣ ಕಡಿತವಾಗಿರುವುದಕ್ಕೆ ಕಲಾವಿದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದಿಂದ ಕಲಾವಿದರಿಗೆ ಅವಮಾನವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿ ಕಾರಿದ್ದಾರೆ.

ಅ.26 ರಂದು ಮೈಸೂರಿನ ಹವ್ಯಾಸಿ ಛಾಯಾಚಿತ್ರಗಾರ ಎನ್.ಜಿ. ಸುಧೀರ್‌ಗೆ 7 ಸಾವಿರ ರೂ. ಬಹುಮಾನದ ಚೆಕ್ ನೀಡಲಾಗಿತ್ತು‌. ಅ.27 ರಂದು ಸುದೀರ್ ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ ಅ.30ರಂದು ಚೆಕ್ ವಾಪಸ್ ಆಗಿದೆ. ಈ ವೇಳೆ ಅಕೌಂಟ್‌ನಿಂದ 118 ರೂ. ಕಟ್ ಮಾಡಲಾಗಿದೆ.

ಇದನ್ನೂ ಓದಿ | Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಜಿ. ಸುಧೀರ್, ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118 ರೂ. ದಂಡ ಬಿದ್ದಿದೆ. ಇಂತಹ ಬೇಜಾವ್ದಾರಿತನ ಏಕೆ? ತಮ್ಮಂತೆ ಸಾಕಷ್ಟು ಕಲಾವಿದರಿಗೆ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

ದಸರಾ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಕಲಾವಿದರಿಗೆ ನೀಡಿದ್ದ ಬಹುಮಾನದ ಚೆಕ್‌ಗಳು ನಗದಾಗಿ ಪರಿವರ್ತನೆ ಆಗದೆ ವಾಪಸ್‌ ಆಗುತ್ತಿವೆ. ಅಧಿಕಾರಿಗಳ ಸಹಿಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣವಾಗಿದೆ. ಉಪಸಮಿತಿಯ ಈ ಹಿಂದಿನ ಕಾರ್ಯಾಧ್ಯಕ್ಷ, ಕಾರ್ಯದರ್ಶಿಗಳ ಸಹಿಗಳೇ ಚೆಕ್‌ ಮೇಲೆ ಇದ್ದಿದ್ದರಿಂದ ಚೆಕ್‌ ಬೌನ್ಸ್‌ ಆಗಿವೆ ಎನ್ನಲಾಗಿದೆ. ಚೆಕ್ ವಾಪಸ್‌ ಆಗಿರುವುದು ತಿಳಿದುಬರುತ್ತಿದ್ದಂತೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Politics : ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್.‌ ರಾಜಣ್ಣ

ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್‌ ಆಕ್ರೋಶ

ಕಲಾವಿದರಿಗೆ ನೀಡಿದ್ದ ಚೆಕ್‌ ಬೌನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ದಸರಾ ಹಬ್ಬದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಕಲಾವಿದರಿಗೆ ಮಾಡಿದ ಅವಮಾನ. ಗಾಯದ ಮೇಲೆ ಬರೆ ಇಟ್ಟಂತೆ ಬೌನ್ಸ್ ಆದ ಚೆಕ್ ಬ್ಯಾಂಕ್‌ಗೆ ನೀಡಿದ್ದಕ್ಕೆ ಕಲಾವಿದರಿಗೆ ಬ್ಯಾಂಕ್ ದಂಡ ಹಾಕಿದೆ. ದಸರಾ ಹಾಗೂ ಮೈಸೂರು ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ಕಲಾವಿದರಿಗೆ ಬೇಷರತ್ ಕ್ಷಮೆ ಕೇಳಿ ಲಲಿತಕಲೆ ಹಾಗೂ ಕರಕುಶಲ ಉಪಸಮಿತಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಉತ್ತರದಾಯಿತ್ವವಿಲ್ಲದೆ, ಬೇಜವಾಬ್ದಾರಿ ವರ್ತನೆಯಿಂದ ಕೆಲಸ ಮಾಡುವವರಿಗೆ ಸರ್ಕಾರ ಶಿಸ್ತು ಕ್ರಮ ಜರುಗಿಸಲಿ. ಉಸ್ತುವಾರಿ ಸಚಿವರ ದುರಾಡಳಿತದಿಂದ ದಸರಾ ಸಂಭ್ರಮದಲ್ಲಿ ವಿದ್ಯುತ್ ಬೇಲಿ ಹಾರಿ ಬಂದು ಭದ್ರತಾ ವೈಫಲ್ಯವೆಸಗಿದ್ದು, ಈಗ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್ ನೀಡಿ ಸರಣಿ ವೈಫಲ್ಯಗಳು ಆಗಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.

Continue Reading

ಕರ್ನಾಟಕ

Mysore Dasara: ಮೈಸೂರು ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳಿವು

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ

VISTARANEWS.COM


on

Dasara sambhrama
Koo

ಮೈಸೂರು: ಅ.15ರಂದು ಆರಂಭವಾದ ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ, ವಿಜಯದಶಮಿ ದಿನವಾದ ಮಂಗಳವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯವಾಯಿತು. ಕೊನೆಯ ದಿನ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರಗಳ ಮೆರವಣಿಗೆ, ಜಂಬೂ ಸವಾರಿ, ಪಂಜಿನ ಕವಾಯತು ಅದ್ಧೂರಿಯಾಗಿ ನೆರವೇರಿದ್ದು, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ದಸರಾ ಸಂಭ್ರಮದ ಸ್ಮರಣೀಯ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ | Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Continue Reading

ಕರ್ನಾಟಕ

Mysore Dasara : ಕಣ್ಮನ ಸೆಳೆದ ಪಂಜಿನ ಕವಾಯತು; ಮೈಸೂರು ದಸರಾ ಅದ್ಧೂರಿಯಾಗಿ ಮುಗಿಯಿತು!

Mysore Dasara : ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು.

VISTARANEWS.COM


on

Torch Light Parade 2023
Koo

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಇಡೀ ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ (Jumboo Savari) ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ (Torch Light Parade 2023) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governor Thaawar Chand Gehlot) ಚಾಲನೆ ನೀಡಿದರು. ಪೊಲೀಸ್‌ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಮೊದಲು ರಾಷ್ಟ್ರಗೀತೆಯನ್ನು (National Anthem) ನುಡಿಸುವ ಮೂಲಕ ಕವಾಯತು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಳಿ ಬಂದ ಕಿಂಗ್‌ ಪವರ್‌ ಅಶ್ವರೂಢ ಖಡ್ಗಧಾರಿ ಪ್ರಧಾನ ದಳಪತಿ ಕವಾಯತು ವರದಿಯನ್ನು ಅತಿಥಿಗಳಿಗೆ ಸಮರ್ಪಿಸಿದರು. ತರುವಾಯ ನಿಶ್ಚಳ ದಳಗಳ ಪರಿವೀಕ್ಷಣೆಗಾಗಿ ರಾಜ್ಯಪಾಲರನ್ನು ಆಹ್ವಾನಿಸಿದರು.

ಆಹ್ವಾನವನ್ನು ಒಪ್ಪಿ ಅಲಂಕೃತ ತೆರೆದ ವಾಹನವನ್ನು ಹತ್ತಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿವಿಧ ಸೇವಾದಳಗಳ ನಿಶ್ಚಳದಳಗಳ ಪರಿವೀಕ್ಷಣೆಯನ್ನು ನಡೆಸಿದರು. ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಿ. ಅವರು ರಾಜ್ಯಪಾಲರಿಗೆ ವ್ಯಕ್ತಿಪರಿವೀಕ್ಷಕರಾಗಿದ್ದರು.

ಇದಾದ ಬಳಿಕ 21 ಕುಶಾಲತೋಪುಗಳನ್ನು ಮೂರು ಹಂತಗಳಲ್ಲಿ ಸಿಡಿಸಲಾಯಿತು. ನಿಶ್ಚಳದ ದಳ ಅಶ್ವಪಡೆಗಳ ಒಂದೊಂದಾಗಿ ಮೂರು ಕುದುರೆಗಳು ಒಂದು ಸುತ್ತು ಸುತ್ತಿ ಬಂದ ಬಳಿಕ ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮತ್ತೊಮ್ಮೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.

18 ತುಕಡಿಗಳಿಂದ ಪ್ರದರ್ಶನ

ಒಟ್ಟು 18 ತುಕಡಿಗಳು ಪ್ರದರ್ಶನ ತೋರಿದವು. ಈ ತುಕಡಿಗಳು ಹಲವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೂಲಕ ಕೆಲವು ದಿನಗಳಿಂದ ತಾಲೀಮು ನಡೆಸಿವೆ. ಲಯಬದ್ಧ ಸಂಗೀತಕ್ಕೆ ಶಿಸ್ತುಬದ್ಧ ಹೆಜ್ಜೆಯನ್ನು ಹಾಕುತ್ತಾ ಸಾಗುತ್ತಿರುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ ಇತ್ತು. ಎದೆ ಸೆಟೆದು ಕೈಬೀಸಿ ಕಾಲನ್ನು ಜೋರಾಗಿ ನೆಲಕ್ಕೆ ಗುದ್ದಿ ಧೂಳೆಬ್ಬಿಸುತ್ತಾ ಆರಕ್ಷಕ ದಳದವರು ವೀರ ನಡಿಗೆ ಸಾಗುತ್ತಿದ್ದರೆ ಸೇರಿದ್ದ ಜನಸ್ತೋಮ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಚಿವರಾದ ವೆಂಕಟೇಶ್‌, ಶಿವರಾಜ್‌ ತಂಗಡಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಣ್ತುಂಬಿದ ಲೈಟಿಂಗ್‌

ಧ್ವನಿ ಬೆಳಕಿನ ಸಂಭ್ರಮ ಇದೇ ವೇಳೆ ಅನಾವರಣಗೊಳಿಸಲಾಯಿತು. ಧ್ವನಿ ಮೊದಲೋ ಬೆಳಕೋ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಡಿಎನ್‌ಎ ಸಹಯೋಗದಲ್ಲಿ ಧ್ವನಿ – ಬೆಳಕಿನ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ಮನ ಮುಟ್ಟಿದ ನೃತ್ಯ ರೂಪಕ

ಡಿಎನ್‌ಎ ಸಮೂಹದ ಮೂಲಕ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಜರಂಗಿ ಮೋಹನ್‌ ಅವರು ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಈ ವೇಳೆ ಐಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಲಾಯಿತು. ಜತೆಗೆ ಶಂಕರ್‌ ನಾಗ್‌ ಅಭಿನಯದ ಗೀತಾ ಸಿನಿಮಾದ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ರವಿಚಂದ್ರನ್‌ ಅಭಿನಯದ ಮಲ್ಲ ಸಿನಿಮಾದ “ಕರುನಾಡೇ ಕೈ ಚಾಚಿದೆ ನೋಡೇ..” ಹಾಡುಗಳಿಗೆ ಹೆಜ್ಜೆ ಹಾಕಲಾಯಿತು. ಬಳಿಕ ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಸಿನಿಮಾದ “ಪೈಲ್ವಾನ್‌” ಹಾಡಿನಗೆ ಮಲ್ಲಕಂಭ ಸಾಹಸ ಪ್ರದರ್ಶನವನ್ನು ಮಾಡುವ ಮೂಲಕ ಡ್ಯಾನ್ಸ್‌ ಮಾಡಲಾಯಿತು. ಇದಲ್ಲದೆ, ಶಿವರಾಜ್‌ಕುಮಾರ್‌ ಅಭಿನಯದ ಶ್ರೀ ಆಂಜನೇಯಂ, ಪ್ರಸನ್ನಾಂಜನೇಯಂ ಹಾಗೂ ಪುನೀತ್‌ ರಾಜಕುಮಾರ್‌ ಅಭಿನಯದ ಯುವರತ್ನ ಸಿನಿಮಾದ “ಡಾನ್ಸ್‌ ವಿಥ್‌ ಅಪ್ಪು” ಹಾಡಿಗೂ ಹೆಜ್ಜೆ ಹಾಕಲಾಯಿತು. ಕೊನೆಯಲ್ಲಿ ಡಾ. ರಾಜಕುಮಾರ್‌ ಅಭಿನಯದ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಹಾಡು ನೋಡುಗರ ಮನ ಗೆಲ್ಲುವಲ್ಲಿ ಯಶ ಕಂಡಿತು.

ಗಮನ ಸೆಳೆದ ಸಾಹಸ ಪ್ರದರ್ಶನ

ಕೊನೆಯಲ್ಲಿ ಯೋಧರು ಮತ್ತು ಪೊಲೀಸರ ಬೈಕ್‌ ಸಾಹಸಗಳ ಪ್ರದರ್ಶನಗಳು ಸೇರಿದ್ದವರ ಮೈನವಿರೇಳುವಂತೆ ಮಾಡಿತು. ಕೆಲ ಕಾಲ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಗಮನ ಸೆಳೆದವು. ಅಂತಿಮವಾಗಿ ಸುಮಾರು 25 ನಿಮಿಷಗಳ ಕಾಲ ಪಂಜಿನ ಕವಾಯತು ನಡೆಯಿತು. ಈ ಕವಾಯತು ಪ್ರದರ್ಶನದ ಅಷ್ಟೂ ಸಮಯವು ನೋಡುಗರು ಉಸಿರು ಬಿಗಿಹಿಡಿದು ವೀಕ್ಷಣೆ ಮಾಡಿದ್ದು ಕಂಡು ಬಂತು. ಒಂದೊಂದು ರೀತಿಯ ವಿಶಿಷ್ಟ ಸಾಹಸ ಪ್ರದರ್ಶನಗಳಿಗೂ ಜೋರಾದ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು.

ನೂರಾರು ಜನ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು. ಇದೇ ವೇಳೆ ವೆಲ್‌ ಕಮ್‌ ಟು ಮೈಸೂರು ದಸರಾ, ಫೇರ್‌ ವೆಲ್‌ ಟು ದಸರಾ, ಸಿ ಯು ದಸರಾ ಇನ್ 2024 ಎಂಬಿತ್ಯಾದಿ ಸಂದೇಶಗಳು ಕಂಡು ಬಂದವು.

ಇದನ್ನೂ ಓದಿ: Mysore Dasara : ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ

ಜೋಶ್‌ ಹೆಚ್ಚಿಸಿದ ಪೊಲೀಸ್‌ ಬ್ಯಾಂಡ್‌

ಈ ಮಧ್ಯೆ ಪೊಲೀಸ್‌ ಬ್ಯಾಂಡ್‌ನವರು ಪೊಲೀಸ್‌ ಹಾಗೂ ಸೈನಿಕ ಗೀತೆಗಳನ್ನು ಪ್ರಸ್ತುತಿಪಡಿಸಿದರು. “ಸಾರೇ ಜಹಾಸೇ ಅಚ್ಚಾ” ಸೇರಿದಂತೆ ಇನ್ನೂ ಹಲವು ಗೀತೆಯನ್ನು ಪೊಲೀಸ್‌ ಬ್ಯಾಂಡ್‌ನವರು ನುಡಿಸಿ ಗಮನ ಸೆಳೆದರು. ಸೇರಿದ್ದವರಿಗೆಲ್ಲರಿಗೂ ಒಮ್ಮೆ ದೇಶಭಕ್ತಿ ಗೀತೆಯ ಬೀಟ್‌ಗಳು ಜೋಶ್‌ ಅನ್ನು ಹೆಚ್ಚಿಸುತ್ತಿದ್ದವು.

Continue Reading

ಕರ್ನಾಟಕ

Anekal Dasara : ಆನೇಕಲ್‌ನಲ್ಲಿ ಜಂಬೂ ಸವಾರಿಗೆ ಮೆರುಗು ನೀಡಿದ ಕೇರಳದ ಸಾಧು ಆನೆ

Anekal Dasara : ಬೆಂಗಳೂರು ಹೊರವಲಯದ ಆನೇಕಲ್ ಹಾಗೂ ಬನ್ನೇರುಘಟ್ಟದಲ್ಲಿ ವಿಜೃಂಭಣೆಯಿಂದ ಜಂಬೂ ಸವಾರಿ ಜರುಗಿತು. ಮಿನಿ ಮೈಸೂರು ಖ್ಯಾತಿಯ ಆನೇಕಲ್‌ನಲ್ಲಿ ಚೌಡೇಶ್ವರಿ ಜಂಬೂಸವಾರಿಗೆ ಕೇರಳದ ಸಾಧು ಆನೆ ಮೆರಗು ನೀಡಿತು.

VISTARANEWS.COM


on

By

Anekal Dasara 2023
Koo

ಆನೇಕಲ್‌: ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಆನೇಕಲ್‌ನಲ್ಲೂ (Anekal Dasara) ವಿಜಯದಶಮಿ ದಸರಾ ಉತ್ಸವ ಮತ್ತು ಜಂಬೂ ಸವಾರಿ (Jambu savari) ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಕೇರಳ ಮೂಲದ ಸಾಧು ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಜಂಬೂಸವಾರಿ ಮೂಲಕ ಆನೇಕಲ್ ದಸರಾ ಉತ್ಸವಕ್ಕೆ ಮೆರಗು ನೀಡಿತು. ರಾಜಗಾಂಭೀರ್ಯದಲ್ಲಿ ಗಜರಾಜ ಹೆಜ್ಜೆ ಹಾಕಿದ್ದು ಭಕ್ತ ಸಾಗರ ಅದ್ಧೂರಿ ದಸರಾ ಜಂಬು ಸವಾರಿಯನ್ನು ಕಂಡು ಪುನೀತರಾಗಿದ್ದಾರೆ.

Anekal And bannerughatta  Dasara 2023

ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲೂ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಸಾಧು ಆನೆ ಸವಾರಿ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು.

Anekal And bannerughatta  Dasara 2023

ದಿವ್ಯ ಜ್ಞಾನನಂದ ಸ್ವಾಮಿ ಹಾಗೂ ಶಾಸಕ ಬಿ.ಶಿವಣ್ಣ ಸೇರಿದಂತೆ ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆನೇಕಲ್ ‌ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿತು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಸಾಧು ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡರು.

ಇದನ್ನೂ ಓದಿ: Karnataka Weather : ಮಳೆಯಾಟ ಬಂದ್‌; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot

Anekal And bannerughatta  Dasara 2023

ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಂಡರು. ಎಂದಿನಂತೆ ತೋಗಟವೀರ ಜನಾಂಗದ ಸದಸ್ಯರು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಿದ್ದರು. ತಾಯಿ ಚೌಡೇಶ್ವರಿ ಸರ್ವರಿಗೂ ಒಳಿತು ಮಾಡಲಿ ಎಂದು ಶಾಸಕ ಬಿ ಶಿವಣ್ಣ ಪ್ರಾರ್ಥಿಸಿದರು.

Anekal And bannerughatta  Dasara 2023

ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಆನೇಕಲ್ ದಸರಾ ನಡೆಯುತ್ತಿದ್ದು, ಮಿನಿ ದಸರಾ ಎಂದೇ ಪ್ರಖ್ಯಾತಿಗಳಿಸುತ್ತಿದೆ. ಕಲಾತಂಡಗಳ ಜತೆಗೆ ಅಂಬಾರಿ ಸಾಗುವ ದೃಶ್ಯ ನೋಡುವುದೇ ಒಂದು ಹಬ್ಬವಾಗಿತ್ತು. ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದರು.

Anekal And bannerughatta  Dasara 2023

ಚಂಪಕಧಾಮಸ್ವಾಮಿ ಜಂಬೂ ಸವಾರಿ

ಬನ್ನೇರುಘಟ್ಟದಲ್ಲೂ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆದಿದೆ. ದೇವರ ಉತ್ಸವ ಮೂರ್ತಿ ಹೊತ್ತಿದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತ ಗಜರಾಜ ಬನ್ನೇರುಘಟ್ಟದ ರಾಜಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಜಾನಪದ ಕಲಾತಂಡಗಳ ಜತೆ ಹೆಜ್ಜೆ ಹಾಕಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತ ಸಾಗರ ಕಣ್ತುಂಬಿಕೊಂಡರು.

Anekal And bannerughatta  Dasara 2023

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
Lok Sabha Election
Latest12 mins ago

Lok Sabha Election : ಕಾಂಗ್ರೆಸ್​ ತೊರೆದ ಲವ್ಲಿ ಸೇರಿ ನಾಲ್ವರಿಂದ ಬಿಜೆಪಿ ಸೇರ್ಪಡೆ

Prajwal Revanna Case
ಪ್ರಮುಖ ಸುದ್ದಿ14 mins ago

Prajwal Revanna Case: ಎಚ್‌.ಡಿ.ರೇವಣ್ಣಗಿಲ್ಲ ನಿರೀಕ್ಷಣಾ ಜಾಮೀನು; ಬಂಧಿಸಲು ಸಿದ್ಧವಾದ ಎಸ್‌ಐಟಿ!

Physical abuse
ಮೈಸೂರು30 mins ago

Physical Abuse : ಮೊಬೈಲ್ ಕೊಡಿಸುವುದಾಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸೋದರ ಮಾವ

Lok Sabha Election
ಪ್ರಮುಖ ಸುದ್ದಿ30 mins ago

Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

Summer Tour
ಪ್ರವಾಸ37 mins ago

Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

Prajwal Revanna Case
ಕರ್ನಾಟಕ40 mins ago

Prajwal Revanna Case: ಹೊಳೆನರಸೀಪುರ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಸ್ಥಳ ಮಹಜರು; ಸಂತ್ರಸ್ತೆ ಹೇಳಿಕೆ ದಾಖಲು

Lok Sabha Election
ಪ್ರಮುಖ ಸುದ್ದಿ50 mins ago

Lok Sabha Election : ರಾಹುಲ್ ಪ್ರಧಾನಿಯಾಗುವುದು ಪಾಕಿಸ್ತಾನದ ಆಸೆ ಎಂದ ಮೋದಿ, ತಿರುಗೇಟು ಕೊಟ್ಟ ಪ್ರಿಯಾಂಕಾ

Prajwal Revanna Case
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್;‌ ರೇವಣ್ಣ ಪಿಎ ಮನೆಯಲ್ಲಿ ಸಂತ್ರಸ್ತೆಯ ರಕ್ಷಣೆ!

Hardik Pandya
ಕ್ರಿಕೆಟ್1 hour ago

IPL 2024 : ಹಾರ್ದಿಕ್​ ಪಾಂಡ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇರ್ಫಾನ್ ಪಠಾಣ್​​

karnataka weather Forecast
ಮಳೆ1 hour ago

Karnataka Weather: ಮೈಸೂರಲ್ಲಿ ಬಿರುಗಾಳಿಗೆ ಸಿಲುಕಿ ವೃದ್ಧೆ ಸಾವು; ಮತ್ತೆ ಗುಡುಗು ಸಹಿತ ಗಾಳಿ ಮಳೆಯ ಎಚ್ಚರಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌