Puneeth Parva | ಗಂಧದ ಗುಡಿಗೆ ಅಮಿತಾಭ್‌ ಬಚ್ಚನ್ ಹಾರೈಕೆ, ಸಂಭ್ರಮದೊಂದಿಗೆ ʼಪುನೀತ ಪರ್ವʼ ಸಮಾರೋಪ - Vistara News

ಪುನೀತ ಪರ್ವ

Puneeth Parva | ಗಂಧದ ಗುಡಿಗೆ ಅಮಿತಾಭ್‌ ಬಚ್ಚನ್ ಹಾರೈಕೆ, ಸಂಭ್ರಮದೊಂದಿಗೆ ʼಪುನೀತ ಪರ್ವʼ ಸಮಾರೋಪ

ಪುನೀತ್‌ ರಾಜಕುಮಾರ್‌ ಅವರ ಕೊನೆಯ ಚಿತ್ರ ಗಂಧದಗುಡಿಯ ಪ್ರಿ ಇವೆಂಟ್‌ ಆದ ಪುನೀತ ಪರ್ವವು ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿ ಪುನೀತ್‌ ಅವರನ್ನು ಸ್ಮರಿಸಿದರು.

VISTARANEWS.COM


on

Puneeth Parva
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಕ್ಟೋಬರ್‌ 21ರಂದು ನಡೆದ ʻಪುನೀತ ಪರ್ವʼ (Puneeth Parva) ಕಾರ್ಯಕ್ರಮ ಹಲವು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಹಲವು ಗಣ್ಯರು, ನಟ ನಟಿಯರು ಸಾಕ್ಷಿಯಾದರು. ಪುನೀತ್‌ ಅವರ ಜತೆ ಕಳೆದ ನೆನಪುಗಳನ್ನು, ಅವರ ನಟನೆ, ಮಾನವೀಯತೆ ಗುಣ ಸೇರಿ ಹಲವು ವಿಷಯಗಳನ್ನು ಗಣ್ಯರು ಮೆಲುಕು ಹಾಕಿದರು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹಾಗೂ ನಟ ಕಮಲ್‌ ಹಾಸನ್‌ ವಿಡಿಯೊ ಮೂಲಕ ಸಂದೇಶ ರವಾನಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಸವರಾಜ್‌ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

ಪುನೀತ್‌ ಅವರು ಅಭಿಮಾನಿಗಳನ್ನು ಸದಾ ನಗುತ್ತೀರಿ ಎಂದು ಹೇಳುತ್ತಲೇ ಇರುತ್ತಾರೆ. ಹಾಗಾಗಿ ಸರ್‌ಪ್ರೈಸ್ ಒಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಎಂದು ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಹೇಳಿದ್ದಾರೆ.

ಅಮಿತಾಭ್‌ ಬಚ್ಚನ್‌ ವಿಡಿಯೊ ಮೂಲಕ ಮಾತನಾಡಿ ʻʻಡಾ ರಾಜ್‌ ಮಾಡಿದ ನೆರವನ್ನು ನನ್ನ ಕುಟುಂಬ ಮರೆಯಲು ಸಾಧ್ಯವಿಲ್ಲ. ರಾಜ್‌ ಕುಟುಂಬ ನನ್ನ ಕುಟುಂಬಕ್ಕೆ ತುಂಬಾ ಹತ್ತಿರ. ಪುನೀತ್‌ ಅವರನ್ನು ನಾನು ಮೊದಲು ಅವರು ಚಿಕ್ಕವರಿದ್ದಾಗ ಭೇಟಿ ಮಾಡಿದ್ದೆ. ಯಾವಾಗಲೂ ನಾನು ಭೇಟಿ ಮಾಡುವಾಗಲೂ ಅವರು ನಗುತ್ತಿದ್ದರು. ಅವರ ಅಗಲಿಕೆ ತುಂಬಾ ಬೇಸರದ ಸಂಗತಿ. ಗಂಧದ ಗುಡಿ ಮ್ಯಾಜಿಕಲ್‌ ಜರ್ನಿ ಆಗಿದೆ. ಗಂಧದ ಗುಡಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರುʼʼಎಂದರು.

Puneeth Parva

ಇದನ್ನೂ ಓದಿ | Puneeth Parva | ಅಪ್ಪು ಸ್ಮರಣಾರ್ಥ ರಾಜ್ಯದ 25 ಜಿಲ್ಲೆಗಳಿಗೆ ಆಂಬ್ಯುಲೆನ್ಸ್‌, ಯಶ್‌ ಮಹತ್ವದ ಘೋಷಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Puneeth Rajkumar: ಪೋಸ್ಟರ್‌ಗೆ ಸೀಮಿತವಾಯಿತು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಸ್ಫೂರ್ತಿ ದಿನ

ಪುನೀತ್‌ ರಾಜಕುಮಾರ್‌ (Puneeth Rajkumar) ತೆರೆಯ ಮೇಲೆ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜತೆಗೆ ನಿಜ ಜೀವನದಲ್ಲೂ ಸೇವೆ ಮಾಡುತ್ತಿದ್ದರು.

VISTARANEWS.COM


on

puneeth rajkumar inspiration day
Koo

ಬೆಂಗಳೂರು: ಚಲನಚಿತ್ರಗಳಲ್ಲಿ ಸಾಮಾಜಿಕ ಸಂದೇಶಗಳ ಮೂಲಕ ಹಾಗೂ ನಿಜ ಜೀವನದಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದವರು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌(Puneeth Rajkumar). ಅವರ ಜನ್ಮದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಕಳೆದ ವರ್ಷ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.

ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರದಾನ ಮಾಡಿ ಗೌರವಿಸಲಾಯಿತು. ಅವರ ಕಾರ್ಯಗಳು ಯುವಕರಿಗೆ ಸ್ಫೂರ್ತಿ ಎಂದು ತಿಳಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸ್ಫೂರ್ತಿ ದಿನವನ್ನಾಗಿ ಆಚರಿಸಬೇಕು ಎಂದು ತಿಳಿಸಿದ್ದರು.

ಇದೀಗ ಚುನಾವಣೆಗಳು ಹತ್ತಿರವಾಗಿದ್ದು, ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದಲ್ಲಿ ಆಸಕ್ತಿ ಉಳಿದಿಲ್ಲ. ಇನ್ನು ಕೇವಲ ಏಳೆಂಟು ದಿನದಲ್ಲೆ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗಲಿದೆ. ನಂತರ ಟಿಕೆಟ್‌ ಘೊಷಣೆ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಲಿ, ಯುವಜನ ಸಬಲೀಕರಣ ಇಲಾಖೆಗಾಗಲಿ ಸಿಎಂ ಸೂಚನೆ ನೀಡಿಲ್ಲ.

ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಅವರ ಸಾಮಾಜಿಕ ಜಾಲತಾಣದಲ್ಲಿ ಪುನೀತ್‌ ರಾಜಕುಮಾರ್‌ ಜನ್ಮದಿನದಂದು ಶುಭಾಶಯ ಕೋರಿದ್ದಾರೆ. “ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. ಅಪ್ಪು ಸದಾ ಅಜರಾಮರ” ಎಂದಿದ್ದಾರೆ.

ಶುಭಾಶಯ ಕೋರುವ ಪೋಸ್ಟರ್‌ನಲ್ಲಿ ಸ್ಫೂರ್ತಿ ದಿನ ಎಂದು ನಮೂದಿಸಲಾಗಿದೆ. ಅದನ್ನು ಹೊರತುಪಡಿಸಿ ಸ್ಫೂರ್ತಿ ದಿನಕ್ಕೆ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ.

ಇದನ್ನೂ ಓದಿ: Puneeth Rajkumar: ಅಪ್ಪು ಸಮಾಧಿ ದರ್ಶನಕ್ಕೆ ಬಂದ 80ರ ವೃದ್ಧ, 19 ದಿನಗಳ ನವಜಾತ ಶಿಶು ಜತೆ ಬಂದ ತಾಯಿ!

Continue Reading

ಕರ್ನಾಟಕ

Gandhada gudi | ಶಿವಮೊಗ್ಗದಲ್ಲಿ ಗಂಧದ ಗುಡಿ ವೀಕ್ಷಿಸಿದ ಬಿಎಸ್‌ವೈ: ಮಗುವಿಗೆ ಶೇಕ್‌ಹ್ಯಾಂಡ್‌, ಸೆಲ್ಫಿಗೆ ಮುತ್ತಿಗೆ!

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಿವಮೊಗ್ಗದಲ್ಲಿ ಗಂಧದ ಗುಡಿ ಸಿನಿಮಾ ವೀಕ್ಷಿಸಿದರು. ಅವರಿಗೆ ಪುತ್ರ ರಾಘವೇಂದ್ರ ಮತ್ತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸಾಥ್‌ ನೀಡಿದ್ದರು.

VISTARANEWS.COM


on

BSY gandhada gudi
ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಗಂಧದ ಗುಡಿ ಸಿನಿಮಾ ನೋಡಲು ಮಾಲ್‌ಗೆ ಆಗಮಿಸಿದಾಗ ಪುಟ್ಟ ಮಗುವಿನ ಕೈಕುಲುಕಿದರು
Koo

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಿವಮೊಗ್ಗದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ʻಗಂಧದ ಗುಡಿʼ ಚಿತ್ರವನ್ನು ವೀಕ್ಷಿಸಿದರು.

ನಗರದಲ್ಲಿರುವ ಶಿವಪ್ಪ ನಾಯಕ ಮಾಲ್‌ಗೆ ಭೇಟಿ ನೀಡಿದ ಅವರು ಚಿತ್ರವನ್ನು ವೀಕ್ಷಿಸಿದರು. ಅವರಿಗೆ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಅವರ ಪತ್ನಿ ತೇಜಸ್ವಿನಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ, ಡಿಸಿಸಿ ಅಧ್ಯಕ್ಷ ಎಂ ಬಿ ಚನ್ನವೀರಪ್ಪ ಮತ್ತಿತರರು ಸಾಥ್‌ ನೀಡಿದರು.

ಯಡಿಯೂರಪ್ಪ ಅವರು ಮಾಲ್‌ಗೆ ಬರುತ್ತಿದ್ದಂತೆಯೇ ಎದುರು ಸಿಕ್ಕ ಪುಟ್ಟ ಮಗುವಿನ ಕೈ ಹಿಡಿದು ಶೇಕ್‌ ಹ್ಯಾಂಡ್‌ ಮಾಡಿ ಖುಷಿಪಟ್ಟರು. ಹಲವಾರು ಮಂದಿ ಬಿಎಸ್‌ವೈ ಅವರ ಜತೆ ಸೆಲ್ಫಿಗೆ ತೆಗೆಸಿಕೊಳ್ಳಲು ಮುಗಿಬಿದ್ದರು. ಫೋಟೊ ತೆಗೆಸಿಕೊಳ್ಳಲು ಮುಂದಾದ ಪ್ರತಿಯೊಬ್ಬರಿಗೂ ಬಿಎಸ್‌ವೈ ಚೆನ್ನಾಗಿ ಸಹಕರಿಸಿದರು. ಭಾರತ್‌ ಮಲ್ಟಿಪ್ಲೆಕ್ಸ್‌ನಲ್ಲಿ ಅವರು ಚಿತ್ರ ವೀಕ್ಷಿಸಿದರು.

ಪುನೀತ್‌ ರಾಜ್‌ ಕುಮಾರ್‌ ಅವರ ಅಭಿನಯದ ಕೊನೆಯ ಚಿತ್ರ ಇದಾಗಿದ್ದು, ಕರ್ನಾಟಕದ ವನ್ಯ ಸಂಪತ್ತನ್ನು ಅಪೂರ್ವವಾಗಿ ತೋರಿಸಲಾಗಿದೆ. ಪುನೀತ್‌ ಬಗ್ಗೆ ಅಭಿಮಾನ ಹೊಂದಿರುವ ಬಿಎಸ್‌ವೈ ಅವರು ಎರಡೂ ಕಾರಣಕ್ಕಾಗಿ ಚಿತ್ರದ ವೀಕ್ಷಣೆಗೆ ತೆರಳಿದ್ದಾರೆ.

ಬಿಎಸ್‌ವೈ ಅವರಿಗೆ ಸಿನಿಮಾ ನೋಡುವಲ್ಲಿ ಸಾಕಷ್ಟು ಆಸಕ್ತಿ ಇದ್ದು, ಇತ್ತೀಚೆಗಷ್ಟೇ ಶರಣ್‌ ಅಭಿನಯದ ಗುರುಶಿಷ್ಯರು ಎಂಬ ಸಿನಿಮಾ ನೋಡಿದ್ದರು. ತನುಜಾ ಎಂಬ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿ ಪಾತ್ರದಲ್ಲೇ ನಟಿಸಿದ್ದರು.

ಇದನ್ನೂ ಓದಿ | Guru Shishyaru | ಶರಣ್‌ ಅಭಿನಯದ ಗುರು ಶಿಷ್ಯರು ಸಿನಿಮಾ ವೀಕ್ಷಿಸಿದ ಯಡಿಯೂರಪ್ಪ, ಅಶೋಕ್‌

Continue Reading

ಕನ್ನಡ ರಾಜ್ಯೋತ್ಸವ

Appu Namana | ಅಪ್ಪುಗಾಗಿ 336 ಕಿ.ಮೀ. ನಡೆದೇ ಬೆಂಗಳೂರಿಗೆ ಬಂದ ಅಭಿಮಾನಿ; ಹುಕ್ಕೇರಿಯಲ್ಲಿ ಅಪ್ಪು ಹೆಸರಲ್ಲಿ ಬಾವುಟ ಹಂಚಿಕೆ

ಅಪ್ಪು ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಪುನೀತ್‌ ಅಗಲಿ 1 ವರ್ಷವಾದರೂ ಅವರ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಪುನೀತ್‌ ಅವರಿಗೆ ಕೊಡಮಾಡಲಾದ ಕರ್ನಾಟಕ ರತ್ನ ಪ್ರಶಸ್ತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

VISTARANEWS.COM


on

By

Appu namana
Koo

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ದಿ| ಪುನೀತ್ ರಾಜಕುಮಾರ್ (Appu Namana) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಿನ್ನೆಲೆಯಲ್ಲಿ ಅಪ್ಪುವಿಗಾಗಿ ದೂರದ ಹಾವೇರಿಯಿಂದ ಅಭಿಮಾನಿಯೊಬ್ಬ ಪಾದಯಾತ್ರೆ ಮಾಡಿದ್ದಾರೆ.

ಕೈಯಲ್ಲಿ ಅಪ್ಪು ಫೋಟೊ ಹಿಡಿದು ಹಾವೇರಿಯಿಂದ ಉದ್ಯಾನನಗರಿ ಬೆಂಗಳೂರಿಗೆ ಶಾಂತಯ್ಯ ಮಳೀಮಠ್ ಎಂಬುವವರು ನಡೆದುಕೊಂಡೇ ಬಂದಿದ್ದಾರೆ. ಅಕ್ಟೋಬರ್ 22ಕ್ಕೆ ಹಾವೇರಿಯಿಂದ ಹೊರಟ ಶಾಂತಯ್ಯ ಅಕ್ಟೋಬರ್ 31ಕ್ಕೆ ಬೆಂಗಳೂರು ತಲುಪಿದ್ದಾರೆ.

Appu Namana

ಪುನೀತ್ ರಾಜಕುಮಾರ್‌ಗಾಗಿ 10 ದಿನಗಳ ಏಕಾಂಗಿ ನಡಿಗೆ ನಡೆಸಿರುವ ಶಾಂತಯ್ಯ 336 ಕಿ.ಮೀ ಕ್ರಮಿಸಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ಬರೀ ಕಾಲಲ್ಲಿ ನಡೆದ ಪರಿಣಾಮ ಕಾಲಿನಲ್ಲಿ ಬೊಬ್ಬೆಯಾಗಿದೆ. ಆದರೂ ಅದರ ನಡುವೆಯೇ ಸೋಮವಾರ ಅಪ್ಪು ಮನೆಗೆ ಹೋಗಿ, ಅಶ್ವಿನಿ ಪುನೀತ್‌ ರಾಜಕುಮಾರ್‌ರನ್ನು ಭೇಟಿ ಮಾಡಿದರು. ಇವರ ಈ ಪ್ರಯತ್ನಕ್ಕೆ ಅಶ್ವಿನಿ ಅವರು ಧನ್ಯವಾದವನ್ನು ತಿಳಿಸಿದ್ದಾರೆ. ಮಂಗಳವಾರ ನಟ ಶಿವರಾಜಕುಮಾರ್‌ ಅವರನ್ನು ಭೇಟಿ ಮಾಡಿ ಮಾತನಾಡಿಸಿ ಹೋಗುತ್ತೇನೆ ಎಂದಿದ್ದಾರೆ.

ಒಂದಿಡೀ ಊರಿಗೆ ಅಪ್ಪು ಹೆಸರಲ್ಲಿ ಬಾವುಟ ಹಂಚಿಕೆ
ಕರ್ನಾಟಕ ರಾಜ್ಯೋತ್ಸವ ಹಾಗೂ ದಿವಂಗತ ಡಾ.‌ಪುನೀತ್ ರಾಜಕುಮಾರ ಅವರಿಗೆ ಕರ್ನಾಟಕ ರತ್ನ‌ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರೆಲ್ಲ ಸೇರಿ ಪ್ರತಿ ಮನೆಗೆ ಕನ್ನಡ ಧ್ವಜ‌ ನೀಡಿ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

Appu Namana

ಗ್ರಾಮದ ಪ್ರತಿ ಮನೆಗಳಿಗೂ ಕನ್ನಡದ ಧ್ವಜ ನೀಡಿ ಧ್ವಜಾರೋಹಣ ಮಾಡುವ ಕಾರ್ಯವನ್ನು ನೇರಲಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗಿದೆ. ರಾಜ್ಯೋತ್ಸವ ದಿನದಂದು ನೇರಲಿ ಗ್ರಾಮದ ಪ್ರತಿ ಮನೆ ಮನೆಗಳಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿತ್ತು. ಪವರ್ ಸ್ಟಾರ್ ಪುನೀತ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ ಎಂದು ಗ್ರಾಮ‌ ಪಂಚಾಯಿತಿ ಅಧಿಕಾರಿಗಳು ಖುಷಿ ಹಂಚಿಕೊಂಡಿದ್ದಾರೆ.

Appu Namana

ಕರ್ನಾಟಕ ರಾಜ್ಯೋತ್ಸವದಲ್ಲೂ ಅಪ್ಪು ಸ್ಮರಣೆ
ವಿಜಯಪುರದ ಗುಮ್ಮಟನಗರಿಯ ದರ್ಗಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಈ ವೇಳೆ ಪುನೀತ್‌ರನ್ನು ಸ್ಮರಿಸಲಾಯಿತು. ದರ್ಗಾ ಪ್ರದೇಶದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರು, ಅಪ್ಪು ಭಾವಚಿತ್ರ ಇರಿಸಿ, ಅದಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್‌, ಜ್ಯೂ.ಎನ್‌ಟಿಆರ್‌ ಭಾಗಿ

Continue Reading

ಕನ್ನಡ ರಾಜ್ಯೋತ್ಸವ

Appu Namana | ʼಕಲಿಯುಗದ ಮಾರ್ಕಂಡೇಯ, ಪ್ರಹ್ಲಾದ, ನಚಿಕೇತʼ: ಅಪ್ಪು ಕುರಿತು ರಜನಿ ಭಾವುಕ ನುಡಿ

ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಶುರುವಾದ ಜಿಟಿಜಿಟಿ ಮಳೆಯ ನಡುವೆಯೇ ಗಣ್ಯರೆಲ್ಲರೂ ತ್ವರಿತ ಗತಿಯಲ್ಲಿ ಮಾತು ಮುಗಿಸಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

VISTARANEWS.COM


on

rajanikanth karnataka rathna
Koo

ಬೆಂಗಳೂರು: ಒಂದೊಂದು ಯುಗದಲ್ಲಿ ಭೂಮಿಯಲ್ಲಿ ಜನಿಸಿ ನಮ್ಮೊಂದಿಗಿದ್ದು ಸಂತೋಷ ನೀಡಿ ಮತ್ತೆ ದೇವರ ಬಳಿಗೆ ಸಾಗುವ ದೇವರ ಮಗನಾಗಿ ಕಲಿಯುಗದಲ್ಲಿ ಪುನೀತ್‌ ರಾಜಕುಮಾರ್‌ ಜನಿಸಿದ್ದರು ಎಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಭಾವುಕವಾಗಿ ನುಡಿದಿದ್ದಾರೆ.

ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡಿದ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಆರಂಭವಾದ ಜಿಟಿಜಿಟಿ ಮಳೆಯ ನಡುವೆಯೇ ಮಾತನಾಡಿದ ರಜನಿಕಾಂತ್‌, ಕರ್ನಾಟಕದ ಎಲ್ಲರೂ ಸಹೋದರರಾಗಿ ಇರಬೇಕೆಂದು ರಾಜರಾಜೇಶ್ವರಿ, ಅಲ್ಲಾಹ್‌, ಜೀಸಸ್‌ನಲ್ಲಿ ಕೇಳಿಕೊಳ್ಳುತ್ತೇನೆ. ಅಪ್ಪು ಅವರು ಮಾರ್ಕಂಡೇಯ, ಪ್ರಹ್ಲಾದ, ನಚಿಕೇತನ ರೀತಿ ಕಲಿಯುಗದಲ್ಲಿ ಅಪ್ಪು ಜನಿಸಿದ್ದಾರೆ. ಅಪ್ಪು ದೇವರ ಮಗು. ನಮ್ಮಲ್ಲಿ ಸ್ವಲ್ಪ ದಿನ ಇದ್ದು ಮತ್ತೆ ದೇವರ ಬಳಿ ಸೇರಿದೆ. ಆ ಮಗುವಿನ ಆತ್ಮ ನಮ್ಮ ಸುತ್ತಲೇ ಇದೆ ಎಂದರು.

ಶಬರಿ ಮಲೆ ಯಾತ್ರೆಯೊಂದರ ಸಂದರ್ಭವನ್ನು ನೆನೆದ ರಜನಿಕಾಂತ್‌, ಶಬರಿ ಮಲೆ ಯಾತ್ರೆಯಲ್ಲಿ ಘೋಷಣೆಗಳನ್ನು ವೀರಮಣಿ ಎಂಬ ದೊಡ್ಡ ಗಾಯಕರು ಹೇಳುತ್ತಿದ್ದಾರೆ. 1979ರಲ್ಲಿ ಒಂದು ಚಿಕ್ಕ ಮಗು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕೂಗಿತು. ಎಲ್ಲರಿಗೂ ಇದನ್ನು ಕೇಳಿ ರೋಮಾಂಚನ ಆಯಿತು.

ಆಗ ರಾಜಕುಮಾರ್‌ ಮಡಿಲಲ್ಲಿ ಅಪ್ಪು ಎಂಬ ಮಗು ಚಂದ್ರನಂತಹ ಕಳೆ, ನಕ್ಷತ್ರದಂತಹ ಕಣ್ಗಳಿಂದ ಕುಳಿತಿತ್ತು. ಆ ಮಗುವನ್ನು ಅಣ್ಣಾವ್ರು ಹೆಗಲ ಮೇಲೆ ಕೂರಿಸಿಕೊಂಡು ನಡೆದರು. ನಾನು ನೋಡಿದ ಆ ಮಗು ಬೆಳೆಯಿತು. ಅಪ್ಪು ಸಿನಿಮಾ ಬಂದಿದೆ, ನೋಡುತ್ತೀರ ಎಂದು ಅಣ್ಣಾವ್ರು ಕೇಳಿದರು. ಅಪ್ಪು ಸಿನಿಮಾದಲ್ಲಿ ಅವರ ಡ್ಯಾನ್ಸ್‌, ಫೈಟ್‌ ನೋಡಿದೆ. 100 ದಿನ ಈ ಚಿತ್ರ ಸಾಗಿದರೆ ನೀವೇ ಶೀಲ್ಡ್‌ ಕೊಡಬೇಕು ಎಂದು ಅಣ್ಣಾವ್ರು ಹೇಳಿದ್ದರು. ಸಿನಿಮಾ 100 ದಿನ ಆದ ನಂತರ ಅಂಬೇಡ್ಕರ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನೇ ಶೀಲ್ಡ್‌ ನೀಡಿದೆ ಎಂದರು.

ಆ ಸಮಾರಂಭ ಅಪ್ಪುಗೆ ಸೇರಿದ್ದು. ಈ ಸಮಾರಂಭವೂ ಅಪ್ಪು ಸಮಾರಂಭ, ಅವನೇ ನಾಯಕ. ಅವನು ನಮ್ಮೊಂದಿಗೆ ಇಲ್ಲ ಎಂದು ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನವಾದಾಗ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿ ಐಸಿಯುನಲ್ಲಿದ್ದೆ. ಆಗ ನನಗೆ ಯಾರೂ ವಿಷಯ ಹೇಳಿರಲಿಲ್ಲ. ಇದನ್ನು ಕೇಳಿದ ನಂತರ ನನಗೆ ನಂಬಲು ಆಗಲೇ ಇಲ್ಲ. ಈ ಕಷ್ಟವನ್ನು ಪುನೀತ್‌ ಪತ್ನಿ ಅಶ್ವಿನಿ ಹೇಗೆ ತಡೆದುಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಅಪ್ಪು ನಿಧನರಾದಾಗ ಅಷ್ಟು ಜನರು ಏಕೆ ಬಂದರು? ಆತನ ಮನುಷ್ಯತ್ವಕ್ಕೆ, ದಾನ ಮಾಡುವ ಗುಣಕ್ಕೆ ಆಗಮಿಸಿದರು. ಒಂದು ಕೈಯಲ್ಲಿ ಮಾಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಎಂದು ಅಪ್ಪು ದಾನ ಮಾಡಿದ್ದರು. ನಟ ನಿಜ ಜೀವನದಲ್ಲಿ ಹೇಗೆ ಬಾಳುತ್ತಾನೆ ಎನ್ನುವುದರ ಆಧಾರದಲ್ಲಿ ಆತ ಜನರ ಮನಸ್ಸಿನಲ್ಲಿ ಉಳಿಯುತ್ತಾನೆ ಎಂದು ತಮಿಳುನಾಡಿನ ಎಂಜಿಆರ್‌ ಹೇಳಿದ್ದರು. ಅದೇ ರೀತಿ ಅಪ್ಪು ನಡೆದುಕೊಂಡರು. ಅದೇ ರೀತಿ ಎನ್‌ಟಿಆರ್‌ ಬಾಳಿದರು. ಅದೇ ರೀತಿ ಡಾ. ರಾಜಕುಮಾರ್‌ ಸಹ ಜನರ ಆರಾಧ್ಯ ದೈವವಾಗಿದ್ದರು. ಅವರೆಲ್ಲರೂ ಅರವತ್ತು-ಎಪ್ಪತ್ತು ವರ್ಷದಲ್ಲಿ ಮಾಡಿದ ಸಾಧನೆಯನ್ನು ಕೇವಲ 21 ವರ್ಷದಲ್ಲಿ ಮಾಡಿ ಹೋಗಿದ್ದಾನೆ. ಅಪ್ಪು ಯಾವಾಗಲೂ ನಮ್ಮ ಜತೆಯಲ್ಲೇ ಇರುತ್ತಾನೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಇದೇ ವೇದಿಕೆಯಲ್ಲಿ ರಾಜಕುಮಾರ್‌ ಅವರಿಗೆ ನೀಡಲಾಗಿತ್ತು. ಅಂದಿನ ದಿನವೂ ಮಳೆ ಬಂದಿತ್ತು ಎಂದು ಕೇಳಲ್ಪಟ್ಟಿದ್ದೇನೆ. ಇಂದು ಮಳೆ ಆಗಮಿಸುತ್ತಿದೆ. ಈ ಪ್ರಶಸ್ತಿ ನೀಡಿದ ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಪುನೀತ್‌ ರಾಜ್‌ ಕುಮಾರ್‌ ಅವರೇ ಕರ್ನಾಟಕ ರತ್ನ
ಜೂನಿಯರ್‌ ಎನ್‌ಟಿಆರ್‌ ಮಾತನಾಡಿ, ಇಡೀ ಕರ್ನಾಟಕ ರಾಜ್ಯಕ್ಕೆ ಹಾಗೂ ಪ್ರಪಂಚಾದ್ಯಂತ ಇರುವ ಎಲ್ಲ ಕನ್ನಡ ಜನರಿಗೆ ರಾಜ್ಯೋತ್ಸವ ಶುಭಾಶಯಗಳು. ಪರಂಪರೆ ಹಾಗೂ ಉಪನಾಮ ಹಿರಿಯರಿಂದ ಬರುತ್ತದೆ, ಆದರೆ ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸ್ವಂತ ಸಂಪಾದನೆ. ಅಹಂಕಾರ, ಅಹಂ ಇಲ್ಲದೆ ತಮ್ಮ ನಗುವಿನಿಂದ ಒಂದು ರಾಜ್ಯವನ್ನೇ ಗೆದ್ದ ರಾಜಕುಮಾರ ಇದ್ದರೆ ಅದು ಪುನೀತ್‌ ರಾಜಕುಮಾರ್‌ ಮಾತ್ರ.

ಕರ್ನಾಟಕದ ಸೂಪರ್‌ ಸ್ಟಾರ್‌, ಉತ್ತಮ ಪತಿ, ನಟ, ಸ್ನೇಹಿತ ಹಾಗೂ ಮಾನವೀಯ ವ್ಯಕ್ತಿತ್ವ ಅಪ್ಪುವಿನದ್ದು. ಅವರ ನಗುವಿನಲ್ಲಿದ್ದ ಶ್ರೀಮಂತಿಕೆಯನ್ನು ಎಲ್ಲಿಯೂ ನೋಡಲು ಸಿಗುವುದಿಲ್ಲ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅವರಿಗೆ ನೀಡುವುದಲ್ಲ, ಕರ್ನಾಟಕ ರತ್ನದ ಅರ್ಥವೇ ಪುನೀತ್‌ ರಾಜಕುಮಾರ್‌. ಈ ಗೌರವ ನೀಡಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ನನ್ನನ್ನು ತಮ್ಮ ಕುಟುಂಬದಂತೆ ಭಾವಿಸಿದ್ದಕ್ಕೆ ಧನ್ಯವಾದಗಳು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ದೇವರು ಮಳೆಯ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡುತ್ತಿದ್ದಾನೆ. ಅಪ್ಪುಗೆ ಇಡೀ ಕರ್ನಾಟಕದಲ್ಲಿ, ಪ್ರತಿ ಗ್ರಾಮದಲ್ಲಿ ಆಚರಣೆ ಆಗುತ್ತಿದೆ. ಪ್ರಶಸ್ತಿ ನೀಡುತ್ತಿರುವುದು ನನ್ನ, ಸರ್ಕಾರದ ಪುಣ್ಯ ಭಾಗ್ಯ. ಇಂತಹ ಸೌಭಾಗ್ಯ ನಮಗೆ ಸಿಕ್ಕಿದೆ. ಪುನೀತ್‌ ಕೆಳಗೆ ಬಂದು ನೋಡಿ, ಜನರು ಎಷ್ಟು ಅಭಿಮಾನಿಗಳು ಬಂದಿದ್ದಾರೆ. ಇಲ್ಲಿ ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಬಾ ಎಂದು ಆಶಿಸುತ್ತೇವೆ. ಅಪ್ಪು ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದು ಭಾವುಕವಾಗಿ ನುಡಿದರು.

ಇದನ್ನೂ ಓದಿ | Appu Namana | ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಜನಸಾಗರ, ಮೋಡಿ ಮಾಡಿದ ವಿಜಯಪ್ರಕಾಶ್‌ ಗಾಯನ

Continue Reading
Advertisement
mlc election congress candidate gift boxes
ಬೆಂಗಳೂರು20 mins ago

MLC Election: ಮತದಾರರಿಗೆ ಬೆಂಗಳೂರು ಕಾಂಗ್ರೆಸ್‌ ಅಭ್ಯರ್ಥಿ ಆಮಿಷ? ಸಾವಿರಾರು ಗಿಫ್ಟ್‌ ಬಾಕ್ಸ್‌ಗಳು ಪತ್ತೆ

Pakistan
ವಿದೇಶ22 mins ago

Pakistan: “ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ, ಆದರೆ ನಾವು..” ಪಾಕ್‌ ಸಂಸದನ ಭಾಷಣ ವೈರಲ್‌

Kangana Ranaut's Emergency gets postponed again
ಬಾಲಿವುಡ್32 mins ago

Kangana Ranaut: ಲೋಕಸಭಾ ಚುನಾವಣೆ: ಕಂಗನಾ ʻಎಮರ್ಜೆನ್ಸಿʼ ಸಿನಿಮಾ ಮತ್ತೆ ಪೋಸ್ಟ್‌ಪೋನ್‌!

T20 World Cup 2024
ಕ್ರೀಡೆ40 mins ago

KMF Nandini Logo: ನಂದಿನಿ ಲೋಗೋ ಇರುವ ಜೆರ್ಸಿ ಅನಾವರಣಗೊಳಿಸಿದ ಸ್ಕಾಟ್ಲೆಂಡ್

Job Alert
ಉದ್ಯೋಗ41 mins ago

Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

IPL 2024 Points Table
ಕ್ರೀಡೆ1 hour ago

IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

Indian Railway
ಮಹಿಳೆ1 hour ago

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

pes students self harming
ಕ್ರೈಂ1 hour ago

Student Self harming: ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ, ಪೋಷಕರ ಪ್ರತಿಭಟನೆ; ಟಾಪರ್‌ಗಳೇ ಸಾಯ್ತಿರೋದ್ಯಾಕೆ?

Sachin Tendulkar
ದೇಶ1 hour ago

Sachin Tendulkar: ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

777 Charlie Dog Gives Birth To 6 Puppies Rakshit Shetty on live
ಸಿನಿಮಾ1 hour ago

777 Charlie: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್‌ ಶೆಟ್ಟಿ ಸರ್‌ಪ್ರೈಸ್‌ ಲೈವ್‌ !

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌