ರಾಜ ಮಾರ್ಗ ಅಂಕಣ : ಗೊಂಬೆ ಹೇಳುತೈತೆ..: ಹಾಡುತ್ತಲೇ ಸಾವಿರಾರು ಮಕ್ಕಳ ಹೃದಯಕ್ಕೆ ಜೀವ ತುಂಬಿದ ಪಲಕ್‌ ಮುಚ್ಚಲ್‌! - Vistara News

ಅಂಕಣ

ರಾಜ ಮಾರ್ಗ ಅಂಕಣ : ಗೊಂಬೆ ಹೇಳುತೈತೆ..: ಹಾಡುತ್ತಲೇ ಸಾವಿರಾರು ಮಕ್ಕಳ ಹೃದಯಕ್ಕೆ ಜೀವ ತುಂಬಿದ ಪಲಕ್‌ ಮುಚ್ಚಲ್‌!

Raja Marga column : ಇದೊಂದು ನಿಜಕ್ಕೂ ಊಹಿಸಲೂ ಆಗದ ಯಶೋಗಾಥೆ. ಪುಟ್ಟ ಹುಡುಗಿಯೊಬ್ಬಳು ಹೃದಯ ತುಂಬಿದ ಮಹಾ ಕಥೆ. ಆಕೆಯ ಕೈಯಲ್ಲಿವೆ 2500 ಗೊಂಬೆಗಳು… ಆಕೆ ಮಾತಾಡಲ್ಲ.. ಎಲ್ಲವೂ ಗೊಂಬೆ ಹೇಳುತೈತೆ!

VISTARANEWS.COM


on

palak mucchal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA

ನನ್ನ ತರಬೇತಿಗಳಲ್ಲಿ ಮತ್ತು ಉಪನ್ಯಾಸಗಳಲ್ಲಿ ಅತೀ ಹೆಚ್ಚು ಬಾರಿ ಉಲ್ಲೇಖ ಪಡೆದ ಈಕೆಯ ಸಾಧನೆಯ ಬಗ್ಗೆ ನನಗೆ ಅಚ್ಚರಿ ಮತ್ತು ಅಭಿಮಾನ! ತುಂಬಾ ಚಂದವಾಗಿ ಹಾಡುವ ತನ್ನ ಪ್ರತಿಭೆಯನ್ನು ಬಂಡವಾಳವಾಗಿ ಮಾಡಿಕೊಂಡು ಆಕೆ ಮಾಡುತ್ತಿರುವ ಮಾನವೀಯ ಅಂತಃಕರಣದ ಸಮಾಜಸೇವೆಯನ್ನು ನೆನೆದಾಗ ನನಗೆ ನಿಜವಾಗಿಯೂ ಖುಷಿ ಮತ್ತು ರೋಮಾಂಚನ ಮೂಡುತ್ತದೆ.
ಆಕೆಯ ಹೆಸರು ಪಲಕ್ ಮುಚ್ಚಲ್! (Palak Mucchal)
ಆಕೆಯ ಸಾಧನೆಯನ್ನು ಆಕೆಯ ಮಾತುಗಳಲ್ಲಿಯೇ ಕೇಳುತ್ತಾ ಮುಂದೆ ಹೋಗೋಣ. ಓವರ್ ಟು ಪಲಕ್‌ ಮುಚ್ಚಲ್!

ನನ್ನ ಹೆಸರು ಪಲಕ್ ಮುಚ್ಚಲ್. ಮಧ್ಯಪ್ರದೇಶದ ಇಂದೋರ್ ನಗರದ ಸೆರಗಿನಲ್ಲಿ ಇದೆ ನನ್ನ ಸಣ್ಣ ಊರು. ನನಗೆ ಬಾಲ್ಯದಿಂದಲೂ ಸಂಗೀತ ಅಂದರೆ ಪ್ರಾಣ. ನನ್ನ ತಂದೆ ಮತ್ತು ತಾಯಿ ನನ್ನನ್ನು ಬಹಳ ಸಣ್ಣ ಪ್ರಾಯದಲ್ಲಿಯೇ ಸಂಗೀತ ಕಲಿಯಲು ಕಳುಹಿಸಿದರು. ಏಳನೇ ವಯಸ್ಸಿನಲ್ಲಿ ನಾನು ವೇದಿಕೆಗಳಲ್ಲಿ ಹಾಡಲು ಆರಂಭ ಮಾಡಿದ್ದೆ. ನಾನು ತುಂಬಾ ಚೆನ್ನಾಗಿ ಹಾಡುತ್ತೇನೆ ಎಂದು ಎಲ್ಲರೂ ಹೇಳುತ್ತಿದ್ದರು.

1999ರ ಹೊತ್ತಿಗೆ ದೇಶದಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಭಾರತವು ಈ ಯುದ್ಧವನ್ನು ಅದ್ಭುತ ಆಗಿ ಗೆದ್ದಿತು. ನನಗೆ ಯುದ್ಧ ಎಂದರೆ ಏನು ಎಂದು ಕೂಡ ಗೊತ್ತಿರಲಿಲ್ಲ. ಆದರೆ ಯುದ್ಧ ಮುಗಿದಾಗ ನೂರಾರು ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಸಾವಿರಾರು ಸೈನಿಕರು ತೀವ್ರವಾದ ಗಾಯಗಳನ್ನು ಪಡೆದರು. ನೂರಾರು ಕುಟುಂಬಗಳು ಸಂತ್ರಸ್ತವಾಗಿ ಬಿಟ್ಟಿದ್ದವು.

ಕಾರ್ಗಿಲ್ ಸಂತ್ರಸ್ತರ ಕುಟುಂಬಕ್ಕೆ ನೆರವಾದಾಗ ಆಕೆಗೆ 7 ವರ್ಷ!
ಆಗ ದೇಶದ ಪ್ರಧಾನಿಯಾಗಿದ್ದ ವಾಜಪೇಯಿಜೀ ಅವರು ಸೈನಿಕರ ಕುಟುಂಬಕ್ಕೆ ನೆರವಾಗಲು ಒಂದು ನಿಧಿಯನ್ನು ಸ್ಥಾಪನೆ ಮಾಡಿ ಅದಕ್ಕೆ ಧನಸಹಾಯ ಮಾಡಲು ದೇಶಕ್ಕೆ ಕರೆ ನೀಡಿದರು. ಅದು ದೇಶದ ಎಲ್ಲ ಪ್ರಮುಖ ಪತ್ರಿಕೆಗಳ ಮುಖಪುಟದ ಸುದ್ದಿ ಆಯಿತು.

ಏಳು ವರ್ಷದ ಹುಡುಗಿ ಬೀದಿಗೆ ಬಂದು ಹಾಡಿದ್ದಳು!
ಆಗ ನನಗೆ ಏಳು ವರ್ಷ ಪ್ರಾಯ! ನನಗೆ ದೇಶದ ಧೀರ ಸೈನಿಕರಿಗೆ ಏನಾದರೂ ಸಹಾಯ ಮಾಡಬೇಕು ಅಂತ ಅನ್ನಿಸಿತು. ಆದರೆ ಹೇಗೆ ಎಂದು ಗೊತ್ತಿರಲಿಲ್ಲ. ಹೋಗಿ ಅಮ್ಮನ ಹತ್ತಿರ ಹೇಳಿದಾಗ ಅಮ್ಮ ಹೇಳಿದ್ದು ಒಂದೇ ಮಾತು – ನಿನಗೆ ಸಂಗೀತ ಕಲಿಸಿದ್ದು ಯಾಕೆ? ಅದನ್ನು ಬಂಡವಾಳ ಮಾಡಿ ದುಡ್ಡು ಸಂಗ್ರಹ ಮಾಡು ಎಂದು!

ನನಗೆ ಎಲ್ಲವೂ ಅರ್ಥ ಆಗಿತ್ತು.
ಒಂದು ವಾರ ಶಾಲೆಗೆ ರಜೆ ಹಾಕಿ ನಾನು ಬೀದಿಗೆ ಇಳಿದಿದ್ದೆ. ರಸ್ತೆ ರಸ್ತೆಯಲ್ಲಿ, ಬೀದಿ ಬೀದಿಯಲ್ಲಿ ಮತ್ತು ಅಂಗಡಿಗಳ ಮುಂಭಾಗದಲ್ಲಿ ನಾನು ಮೈ ಮರೆತು ದೇಶಭಕ್ತಿಯ ಹಾಡುಗಳನ್ನು ಹಾಡಲು ತೊಡಗಿದೆ. ದುಡ್ಡಿಗಾಗಿ ಪ್ರಾರ್ಥನೆ ಮಾಡಿದೆ. ಆರಂಭದಲ್ಲಿ ಜನರು ಅಪಮಾನ ಮಾಡಿದರು. ಬೈದವರೂ ಇದ್ದಾರೆ. ಆದರೆ ಕ್ರಮೇಣ ಅವರಿಗೆ ನನ್ನ ಉದ್ದೇಶವು ಅರ್ಥ ಆಗಿತ್ತು. ಪ್ರತಿಯೊಬ್ಬರು ಯಥಾಶಕ್ತಿ ದುಡ್ಡಿನ ಸಹಾಯವನ್ನು ಮಾಡಿದರು. ಆ ಕಾಲಕ್ಕೆ ಸುಮಾರು 25,000 ರೂ. ನಿಧಿ ಸಂಗ್ರಹ ಆಗಿತ್ತು! ಅದನ್ನು ಪ್ರಧಾನಿಯವರ ನಿಧಿಗೆ ಕಳುಹಿಸಿ ಬಂದಾಗ ಏನೋ ಧನ್ಯತೆಯ ಭಾವ! ಮುಂದೆ ನನ್ನ ಜೀವನದ ದಾರಿಯು ಸ್ಪಷ್ಟ ಆಗಿತ್ತು.

ನನ್ನನ್ನು ಅಲ್ಲಾಡಿಸಿ ಬಿಟ್ಟ ಘಟನೆ ಅದು!
ನನ್ನ ಇಡೀ ಜೀವನವನ್ನು ಅಲ್ಲಾಡಿಸಿ ಬಿಟ್ಟ ಇನ್ನೊಂದು ಘಟನೆಯು ಮುಂದೆ ನಡೆಯಿತು.
ಆಗ ನನಗೆ ಕೇವಲ 14 ವರ್ಷ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಾ ಇದ್ದೆ. ಒಂದು ದಿನ ನನ್ನ ಒಬ್ಬ ಸಹಪಾಠಿ, ಲೋಕೇಶ್ ಎಂದು ಅವನ ಹೆಸರು, ಒಂದು ವಾರದಿಂದ ಶಾಲೆಗೆ ರಜೆ ಮಾಡಿದ್ದ. ಅವನು ಶಾಲೆಗೆ ಮತ್ತೆ ಬಂದಾಗ ಅಧ್ಯಾಪಕರು ಕಾರಣ ಕೇಳಿದರು.

ತನಗೆ ಎದೆ ನೋವು ಬಂದಿತ್ತು, ವೈದ್ಯರು ಪರೀಕ್ಷೆಯನ್ನು ಮಾಡಿ ಹೃದಯದಲ್ಲಿ ಒಂದು ರಂಧ್ರ ಕಂಡುಬಂದಿದೆ, ತುರ್ತಾಗಿ ಆಪರೇಶನ್ ಮಾಡಬೇಕು, ಆರು ಲಕ್ಷ ರೂ. ದುಡ್ಡು ಬೇಕು ಎಂದು ವೈದ್ಯರು ತಿಳಿಸಿದ್ದಾರೆ, ತನ್ನ ಅಪ್ಪ ಒಂದು ಶೂ ಅಂಗಡಿಯಲ್ಲಿ ಸಣ್ಣ ಕೆಲಸ ಮಾಡ್ತಾ ಇದ್ದಾರೆ. ನಮಗೆ ಅಷ್ಟೊಂದು ಹಣ ಹೊಂದಿಸುವುದು ಕಷ್ಟ ಎಂದು ಅಪ್ಪ ಹೇಳುತ್ತಿದ್ದಾರೆ ಅಂದ.

ನನಗೆ ಅಮ್ಮ ಹೇಳಿದ ಮಾತು ಮತ್ತೆ ನೆನಪಾಯಿತು. ನಾನು ನನ್ನ ಗೆಳೆಯರು ಸೇರಿ ಒಂದು ಸಂಗೀತ ಕಛೇರಿ ನಡೆಸಲು ಮುಂದಾದೆವು. ಒಂದು ಸಭಾಂಗಣ ಬುಕ್ ಮಾಡಿದೆವು. ನನ್ನ ಗೆಳೆಯರು ಇಂದೋರ್ ನಗರದ ಗಲ್ಲಿ ಗಲ್ಲಿಗಳಲ್ಲಿ ಟಿಕೆಟ್ ಮಾರಿದರು. ಉದ್ದೇಶ ಚೆನ್ನಾಗಿ ಇದ್ದ ಕಾರಣ ಜನಸಾಗರವೇ ಹರಿದು ಬಂದಿತು. ನಾನು ವೇದಿಕೆಯಲ್ಲಿ ಅಂದು ಮೈ ಮರೆತು ಹಾಡಿದ್ದೆ. ನನ್ನ ಕೊನೆಯ ಹಾಡಿನ ಮೊದಲು ನಾನು ಪ್ರೇಕ್ಷಕರನ್ನು ಮತ್ತೆ ವಿನಂತಿ ಮಾಡಿದೆ. ನನ್ನ ಗೆಳೆಯನ ನೆರವಿಗೆ ನಿಲ್ಲಲು ಕೈ ಜೋಡಿಸಿ ಪ್ರಾರ್ಥನೆ ಮಾಡಿದೆ.

ನನ್ನ ಸಹಪಾಠಿಗಳು ಖಾಲಿ ಬಕೆಟ್ ಹಿಡಿದು ಜನರ ಮಧ್ಯೆ ಹೋದರು. ಅರ್ಧ ಗಂಟೆಯ ಅವಧಿಯಲ್ಲಿ ಬಕೆಟ್ ದುಡ್ಡಿನಿಂದ ತುಂಬಿ ತುಳುಕಿತು. ಟಿಕೆಟ್ ಹಣ ಮತ್ತು ಬಕೆಟ್ ಹಣ ಸೇರಿ ಆರು ಲಕ್ಷ ಸಂಗ್ರಹ ಆಗಿತ್ತು! ಅದನ್ನು ನಾನು ಅದೇ ವೇದಿಕೆಯಲ್ಲಿ ನನ್ನ ಗೆಳೆಯನಿಗೆ ಡೊನೇಟ್ ಮಾಡಿದ್ದೆ.

ಇದು ಎಲ್ಲಾ ಪತ್ರಿಕೆಗಳ ಹೆಡ್ ಲೈನ್ ನ್ಯೂಸ್ ಆಗಿತ್ತು. ರಾಷ್ಟ್ರ ಮಟ್ಟದ ನ್ಯೂಸ್ ಚಾನಲ್‌ಗಳು ಜಿದ್ದಿಗೆ ಬಿದ್ದು ಈ ಮಾನವೀಯ ನೆಲೆಯ ಈ ವಾರ್ತೆಯನ್ನು ಪ್ರಕಟ ಮಾಡಿದರು. ಈ ನ್ಯೂಸ್ ಆಗ ಬೆಂಗಳೂರಿನಲ್ಲಿದ್ದ ಖ್ಯಾತ ಹೃದಯ ತಜ್ಞರಾದ ಡಾಕ್ಟರ್ ದೇವಿ ಶೆಟ್ಟಿ ಅವರಿಗೆ ತಲುಪಿತು. ಅವರ ಮನಸ್ಸು ಕರಗಿತು. ಅವರು ಆ ಹುಡುಗನನ್ನು ಸ್ವತಃ ಬೆಂಗಳೂರಿಗೆ ಕರೆಸಿಕೊಂಡು ತಮ್ಮದೇ ಆಸ್ಪತ್ರೆಯಲ್ಲಿ ಉಚಿತವಾದ ಹೃದಯದ ಶಸ್ತ್ರ ಚಿಕಿತ್ಸೆಯನ್ನು ಮಾಡಿದರು. ಲೋಕೇಶ್ ಬದುಕಿ ಬಂದ. ಆ ಆರು ಲಕ್ಷ ರೂಪಾಯಿ ನನಗೆ ವಾಪಸ್ ಕೊಟ್ಟ!

ಈಗ ನನ್ನ ನಿಜವಾದ ಸಮಸ್ಯೆ ಆರಂಭ ಆಯಿತು. ಈ ದುಡ್ಡು ಏನು ಮಾಡುವುದು? ದಾನಿಗಳು ಯಾರೂ ದುಡ್ಡು ಹಿಂದೆ ತೆಗೆದುಕೊಳ್ಳಲು ಒಪ್ಪಲಿಲ್ಲ.

ಆಗ ನಾನು ನನ್ನ ಗುರುಗಳ ಸಲಹೆ ಪಡೆದು ಒಂದು ಪತ್ರಿಕಾ ಜಾಹೀರಾತು ಕೊಟ್ಟೆ. ಹತ್ತು ವರ್ಷದ ಒಳಗಿನ ಯಾವುದೇ ಮಗುವಿಗೆ ಹೃದಯ ಸಮಸ್ಯೆ ಇದ್ದರೆ ನಾವು ಖರ್ಚು ಭರಿಸಿ ಶಸ್ತ್ರಚಿಕಿತ್ಸೆ ಮಾಡಲು ರೆಡಿ ಇದ್ದೇವೆ. ಅಗತ್ಯ ಇದ್ದವರು ಸಂಪರ್ಕ ಮಾಡಿ ಎಂದು.

ಒಟ್ಟು ಎಂಟು ನೊಂದ ಬಡ ಕುಟುಂಬಗಳು ನನ್ನನ್ನು ಸಂಪರ್ಕ ಮಾಡಿದವು. ಎಲ್ಲವೂ ಅದೇ ರೀತಿಯ ಸಮಸ್ಯೆಯನ್ನು ಹೊಂದಿದ್ದ ಕುಟುಂಬಗಳು. ನಮ್ಮ ಹತ್ತಿರ ಅಷ್ಟು ದುಡ್ಡು ಇರಲಿಲ್ಲ. ಆಗ ಮತ್ತೆ ನನ್ನ ಶಾಲೆಯ ಗುರುಗಳು ಹೊಸ ಯೋಚನೆಯ ಜೊತೆಗೆ ನನ್ನ ನೆರವಿಗೆ ನಿಂತರು.

ಅವರ ಸಲಹೆಯಂತೆ ನಾನು ಇಂದೋರ್ ನಗರದಲ್ಲಿ ಇದ್ದ ಎಲ್ಲಾ ಸಂಘ ಸಂಸ್ಥೆಗಳನ್ನು ಸಂಪರ್ಕ ಮಾಡಿದೆ. ನನಗಾಗಿ ನಿಧಿ ಸಂಗ್ರಹ ಸಂಗೀತ ಕಾರ್ಯಕ್ರಮ ನಡೆಸಿ ಕೊಡಿ, ನಾನು ಬಂದು ಉಚಿತವಾಗಿ ಹಾಡುತ್ತೇನೆ, ನನಗೆ ಒಂದು ಗೊಂಬೆಯನ್ನು ಕೊಟ್ಟರೆ ಸಾಕು ಎಂದು ವಿನಂತಿ ಮಾಡಿದೆ. ಇದರ ಹಿಂದೆ ಇದ್ದ ಉದ್ದೇಶವು ಎಲ್ಲರಿಗೂ ಕನೆಕ್ಟ್ ಆಯಿತು. ಎಲ್ಲರೂ ನಮ್ಮ ನೆರವಿಗೆ ನಿಂತರು. ಆ ಎಂಟು ಮಕ್ಕಳ ಶಸ್ತ್ರಚಿಕಿತ್ಸೆಗಳು ಯಶಸ್ವೀ ಆದವು. ನನ್ನ ಶೋಕೇಸಲ್ಲಿ ಹತ್ತಾರು ಚಂದದ ಗೊಂಬೆಗಳು ಬಂದು ಕೂತವು!

ಇಂದೋರ್ ನಗರದಲ್ಲಿ ಅಂದು ಇತಿಹಾಸ ನಿರ್ಮಾಣ ಆಗಿತ್ತು!
ಮಾಧ್ಯಮಗಳು ನನ್ನ ಬಗ್ಗೆ ತುಂಬಾನೇ ವಿಸ್ತಾರವಾಗಿ ಬರೆದವು. ಆಗ ಹುಟ್ಟಿದ್ದೇ ‘ಪಲಕ್ ಹಾರ್ಟ್ ಫೌಂಡೇಶನ್ ‘ ಎಂಬ ಚಾರಿಟಿ ಫೌಂಡೇಶನ್! ಪ್ರಚಾರ ದೊರೆತಂತೆ ನೂರಾರು ಹೃದಯ ರೋಗಿ ಬಡ ಮಕ್ಕಳ ಕುಟುಂಬಗಳು ನನ್ನನ್ನು ಸಂಪರ್ಕ ಮಾಡಿದವು. ನಾನು ಕಷ್ಟ ಪಟ್ಟು ಭಾರತದ 17 ಭಾಷೆಗಳನ್ನು ಕಲಿತೆ. ಕಾಲಿಗೆ ಚಕ್ರ ಕಟ್ಟಿದ ಹಾಗೆ ನಾನು ಇಡೀ ಭಾರತದಾದ್ಯಂತ ಓಡಾಡಿದೆ. ಬೆಂಗಳೂರಿಗೆ ಕೂಡ ಬಂದಿದ್ದೆ. ಸಂಗೀತ ಕಛೇರಿ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮಗಳು ಜೊತೆ ಜೊತೆ ಆಗಿ ನಡೆದವು.

ನಾನು ಲಂಡನ್, ದುಬಾಯಿ, ಬ್ಯಾಂಕಾಕ್, ಬೆಲ್ಜಿಯಂ ಮೊದಲಾದ ಹೊರದೇಶಕ್ಕೂ ಹೋಗಿ ಬಂದೆ. ಎಲ್ಲಾ ಕಡೆ ನನ್ನ ಸಂಗೀತ ಕಾರ್ಯಕ್ರಮಗಳು ನಡೆದವು. ನನ್ನ ತಮ್ಮ ಕೂಡ ನನ್ನ ಕಾರ್ಯಕ್ರಮಗಳಲ್ಲಿ ಮಿಮಿಕ್ರಿಯನ್ನು ಮಾಡಿ ನೆರವಿಗೆ ನಿಂತ. ಸಾವಿರಾರು ಬಡ ಮಕ್ಕಳ ಹೃದಯದ ಚಿಕಿತ್ಸೆಗಳು ಯಶಸ್ವೀ ಆಗಿ ನಡೆದವು. ನನ್ನ ಉದ್ದೇಶ ಅರ್ಥ ಮಾಡಿಕೊಂಡು ದೊಡ್ಡ ಆಸ್ಪತ್ರೆಗಳು ಕೂಡ ನನ್ನ ಫಲಾನುಭವಿಗಳಿಗೆ ರಿಯಾಯಿತಿಯನ್ನು ನೀಡಿದವು. ನಮ್ಮ ‘ಫಲಕ್ ಹಾರ್ಟ್ ಫೌಂಡೇಶನ್’ ದೇಶದಾದ್ಯಂತ ಸಂಚಲನ ಉಂಟು ಮಾಡಿತು.

ಸರಿಗಮಪ ವೇದಿಕೆಯಲ್ಲಿ

ಹಾಡಲು ಹೋದ ನನ್ನನ್ನು ಜಜ್ ಆಗಿ ಕೂರಿಸಿದರು!
ಇದರಿಂದ ನನಗೆ ಭಾರೀ ಜನಪ್ರಿಯತೆಯು ಬಂತು. ಸರಿಗಮಪ ವೇದಿಕೆಯಲ್ಲಿ ನಾನು ಹಾಡಲು ಹೋದಾಗ ನನಗೆ ಹಾಡಲು ಅವಕಾಶ ಕೊಡದೆ ನನ್ನನ್ನು ಸೆಲೆಬ್ರಿಟಿ ಜಜ್ ಆಗಿ ಕೂರಿಸಿದರು! ಅಬ್ದುಲ್ ಕಲಾಂ, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಶೇಖರ್ ಕಪೂರ್ ನನ್ನ ಕಾರ್ಯಕ್ರಮಕ್ಕೆ ಬಂದು ಬೆನ್ನು ತಟ್ಟಿ ಹೋದರು. ನನಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರವು’ ದೊರೆಯಿತು ಎಂದು ಹೇಳುತ್ತ ಫಲಕ್ ಮಾತು ಮುಗಿಸಿದರು. ಇನ್ನು ಸಾಯುವ ತನಕ ಇದೇ ಉದ್ದೇಶಕ್ಕೆ ಹಾಡುತ್ತೇನೆ ಎಂದು ಆಕೆ ವೇದಿಕೆಯಲ್ಲಿ ಹೇಳಿದ್ದಾರೆ.

ಆಕೆಯ ಸಂಗ್ರಹದಲ್ಲಿ ಇವೆ 2500 ಗೊಂಬೆಗಳು!
ಆಕೆಗೆ ಈಗ 30 ವರ್ಷ. ಏಳನೇ ವರ್ಷದಿಂದ ಈವರೆಗೆ ಆಕೆ ಚಾರಿಟಿಯ ಉದ್ದೇಶಕ್ಕೆ ಪ್ರತೀ ದಿನ ಎಂಬಂತೆ ಹಾಡಿದ್ದಾರೆ. ಅದರಿಂದ ಬಂದ ದುಡ್ಡಿನ ಮೂಲಕ ಆಕೆ ಇದುವರೆಗೆ 2500 ಬಡ ಮಕ್ಕಳ ಹೃದಯದ ಚಿಕಿತ್ಸೆಗೆ ನೆರವಾಗಿದ್ದಾರೆ!

ಅವರ ಈ ಸಾಧನೆ ಲಿಮ್ಕಾ ಮತ್ತು ಗಿನ್ನೆಸ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆ ಆಗಿದೆ. ಆಕೆಯ ಶೋಕೇಸಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳ ಹೊತ್ತಿಗೆ 2500ಕ್ಕೂ ಅಧಿಕ ಚಂದವಾದ ಗೊಂಬೆಗಳು ಸಂಗ್ರಹ ಆಗಿವೆ! ಪ್ರತೀ ಒಂದು ಗೊಂಬೆ ಕೂಡ ಒಂದೊಂದು ಮಾನವೀಯ ಅಂತಃಕರಣದ ಮಹಾ ಯಶೋಗಾಥೆಯನ್ನು ನೆನಪು ಮಾಡುತ್ತದೆ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸ್ವಚ್ಛ ಭಾರತ: ಗಾಂಧಿ ಕಂಡ ಕನಸು, ಮೋದಿ ಕಾಲದಲ್ಲೂ ನನಸಾಗುತ್ತಿಲ್ಲ; ಅಡ್ಡಿ ಆಗಿರುವುದು ಯಾರೆಂದರೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಜಗತ್ತಿನ ಯಾರ ಪ್ರೀತಿಯೂ ಇವರ ಪ್ರೀತಿಗೆ ಸಮನಲ್ಲ!

ರಾಜಮಾರ್ಗ ಅಂಕಣ: ಇವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

VISTARANEWS.COM


on

ರಾಜಮಾರ್ಗ ಅಂಕಣ love story
Koo

ರಾಬರ್ಟ್ ಬ್ರೌನಿಂಗ್ ಮತ್ತು ಎಲಿಜೆಬೆತ್ ಬ್ಯಾರೆಟ್ ಪರಸ್ಪರ ಭೇಟಿ ಆಗದೆ ವರ್ಷಾನುಗಟ್ಟಲೆ ಪ್ರೀತಿ ಮಾಡಿದರು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಪ್ರೀತಿಗೆ ಕಣ್ಣಿಲ್ಲ (Love is blind) ಅಂತಾರೆ. ಆದರೆ ಇಟಲಿಯಲ್ಲಿ (Italy) ಇರುವ ಅವರ ಸಮಾಧಿಯ ಮೇಲೆ ʼಪ್ರೀತಿ ಕುರುಡಲ್ಲ’ ಎಂದು ಬರೆದಿರುವುದು ಯಾಕೆ? ಇದೆಲ್ಲವೂ ಅರ್ಥ ಆಗಬೇಕಾದರೆ ಈ ಪ್ರೀತಿಯ ಪರಾಕಾಷ್ಠೆಯ ಕಥೆಯನ್ನು ಒಮ್ಮೆ ಫೀಲ್ ಮಾಡಿಕೊಂಡು ಓದಿ.

ಅದು ಲಂಡನ್ ನಗರ. ಆಕೆ ಎಲಿಜೆಬೆತ್ ಬ್ಯಾರೇಟ್ (Elizabeth Barrett). ಆ ಕಾಲಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕವಯಿತ್ರಿ. ವಯಸ್ಸು 39ರ ಆಸುಪಾಸು. ಅವಿವಾಹಿತೆ. ಆಕೆಯ ತಂದೆ ಅತ್ಯಂತ ಶ್ರೀಮಂತ ಜಮೀನುದಾರರು. ಅಪ್ಪ ಅಮ್ಮನ 12 ಮಕ್ಕಳಲ್ಲಿ ಆಕೆಯೂ ಒಬ್ಬರು. ಅಪ್ಪನ ಪ್ರೀತಿಯ ಮಗಳು.

ಹದಿಹರೆಯದಿಂದಲೂ ಆಕೆಗೆ ತೀವ್ರ ಅನಾರೋಗ್ಯ ಮತ್ತು ದೇಹವೆಲ್ಲ ನೋವು. ಉಸಿರಾಟದ ತೊಂದರೆ. ಮನೆಯಿಂದಾಚೆ ಹೋಗಲು ಸಾಧ್ಯವೇ ಆಗದ ಸ್ಥಿತಿ. ಆಕೆ ಅಂತರ್ಮುಖಿ. ತನ್ನ ಸ್ಟಡಿ ರೂಮಿನಲ್ಲಿ ಕುಳಿತು ಓದುವುದು ಮತ್ತು ಬರೆಯುವುದು ಬಿಟ್ಟರೆ ಆಕೆಗೆ ಬೇರೆ ಪ್ರಪಂಚವೇ ಇರಲಿಲ್ಲ!

ಆತನು ರಾಬರ್ಟ್ ಬ್ರೌನಿಂಗ್

ಅವನೂ ಲಂಡನ್ ನಗರದವನು. ವಯಸ್ಸು 32. ಆತ ಕೂಡ ಕವಿ ಮತ್ತು ನಾಟಕಕಾರ. ಆತ ಆಕೆಯನ್ನು ಎಂದಿಗೂ ಭೇಟಿ ಮಾಡಿರಲೇ ಇಲ್ಲ. ಆಕೆಯ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ. ಆದರೆ ಆಕೆಯ ಕವಿತೆಗಳ ಆರಾಧಕ. ಒಂದು ದಿನ ಧೈರ್ಯ ಮಾಡಿ ಅವಳ ವಿಳಾಸವನ್ನು ಪಡೆದುಕೊಂಡು ‘ನಾನು ನಿಮ್ಮ ಕವಿತೆಗಳನ್ನು ಪ್ರೀತಿ ಮಾಡುತ್ತೇನೆ ‘ಎಂದು ಧೈರ್ಯವಾಗಿ ಪತ್ರ ಬರೆದನು. ಆಶ್ಚರ್ಯ ಪಟ್ಟ ಎಲಿಜೆಬೆತ್ ಧನ್ಯವಾದಗಳು ಎಂದು ಎರಡು ಸಾಲಿನ ಪತ್ರ ಬರೆದಳು. ಯಾರೋ ಒಬ್ಬ ಅಭಿಮಾನಿ ಎಂದು ಆಕೆ ಭಾವಿಸಿದ್ದಳು. ಆದರೆ ರಾಬರ್ಟ್ (Robert Browning) ಬಿಡಬೇಕಲ್ಲ. ಮರುದಿನವೇ ಇನ್ನೊಂದು ಪತ್ರ ಬರೆದು ಪೋಸ್ಟ್ ಮಾಡಿದನು.

ಹೀಗೆ ಮುಂದಿನ 20 ತಿಂಗಳ ಕಾಲ ಅವರಿಬ್ಬರೂ 600 ಪತ್ರಗಳನ್ನು ವಿನಿಮಯ ಮಾಡಿಕೊಂಡರು! ಒಬ್ಬರನ್ನೊಬ್ಬರು ಅಭಿನಂದಿಸಿ ಕೊಂಡರು. ಕವಿತೆಗಳ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಎಲ್ಲಿಯೂ ಪ್ರೀತಿಯನ್ನು ಪ್ರಪೋಸ್ ಮಾಡಲಿಲ್ಲ! ಅಥವಾ ಫೋನ್ ಮಾಡಿ ಮಾತನಾಡಲೇ ಇಲ್ಲ!

ಆ ಪತ್ರಗಳ ಪ್ರಭಾವದಿಂದ ಎಲಿಜೆಬೆತ್ ಆರೋಗ್ಯ ಸುಧಾರಣೆ ಆಯ್ತು!

ದೀರ್ಘ ಅವಧಿಗೆ ಅದೃಶ್ಯ ಅಭಿಮಾನಿಯ ಪ್ರೀತಿಪೂರ್ವಕ ಪತ್ರಗಳನ್ನು ಓದುತ್ತಾ, ಅವುಗಳಿಗೆ ಉತ್ತರ ಬರೆಯುತ್ತ ಎಲಿಜೆಬೆತ್ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಯ್ತು! ಆಕೆ ಅಫೀಮ್ ಮತ್ತು ಮಾರ್ಫಿನ್ ಡ್ರಗ್ಸ್ ಸೇವನೆಯಿಂದ ನಿಧಾನವಾಗಿ ಹೊರಬಂದಳು. ಒಂದು ದಿನ ಧೈರ್ಯವಾಗಿ ಆತನಿಗೆ ಪತ್ರ ಬರೆದಳು – ನನ್ನಲ್ಲಿ ತುಂಬಾ ಆರೋಗ್ಯ ಸುಧಾರಣೆ ಆಗಿದೆ. ನಾನು ಈಗ ಆರು ವರ್ಷಗಳ ಕತ್ತಲೆಯ ಕೋಣೆಯಿಂದ ಹೊರಬರಬೇಕು ಎಂದು ಆಸೆ ಪಡುತ್ತಾ ಇದ್ದೇನೆ. ನಿನ್ನನ್ನೊಮ್ಮೆ ಭೇಟಿ ಆಗಿ ಥ್ಯಾಂಕ್ಸ್ ಹೇಳಬೇಕು ಅನ್ನಿಸ್ತಿದೆ. ಸಿಗ್ತಿಯಾ?

ಆತ ಒಪ್ಪಿದನು. ಅವರಿಬ್ಬರೂ ಮೊದಲ ಬಾರಿಗೆ ಭೇಟಿ ಆದರು. ʼನಾನು ನಿಮ್ಮನ್ನು ಮದುವೆ ಆಗುತ್ತೇನೆ. ನಿಮ್ಮ ಒಪ್ಪಿಗೆ ಇದೆಯಾ? ‘ಎಂದು ಆಗ ರಾಬರ್ಟ್ ನೇರವಾಗಿ ಕೇಳಿದನು. ಅದನ್ನವಳು ನಿರೀಕ್ಷೆ ಮಾಡಿರಲಿಲ್ಲ. ಈಗ ಎಲಿಜೆಬೆತ್ ಬೆವರಲು ಆರಂಭಿಸಿದಳು.

ಆಕೆಯ ಅಪ್ಪ ಪ್ರೇಮವಿವಾಹಕ್ಕೆ ವಿರೋಧ ಇದ್ದರು

ಆಕೆಯು ಬೆವರಲು ಕಾರಣ ಆಕೆಯ ಅಪ್ಪ ಹಾಕಿದ ನಿರ್ಬಂಧ. ಅವನ ಎರಡು ಮಕ್ಕಳು ಪ್ರೀತಿ ಮಾಡಿ ಓಡಿಹೋಗಿ ಮದುವೆ ಆಗಿದ್ದರು. ಆ ಸಿಟ್ಟಿನಲ್ಲಿ ಆತನು ಎಲಿಜಬೆತ್ ಮಗಳಿಗೆ ಪ್ರೀತಿ ಮಾಡಲೇ ಬಾರದು ಎಂಬ ನಿರ್ಬಂಧವನ್ನು ಹಾಕಿದ್ದನು. ಆಕೆಯ ಸಂದಿಗ್ದವು ರಾಬರ್ಟನಿಗೆ ಅರ್ಥ ಆಯಿತು. ಅವನು ಎಷ್ಟು ಧೈರ್ಯ ತುಂಬಿಸಿದರೂ ಅಪ್ಪನ ಎದುರು ಹೋಗಿ ನಿಂತು ಮಾತಾಡುವ ಧೈರ್ಯ ಅವಳಿಗೆ ಕೊನೆಗೂ ಬರಲಿಲ್ಲ. ಕೊನೆಗೆ 1845ರ ಸೆಪ್ಟೆಂಬರ್ 12ರಂದು ಅವರಿಬ್ಬರೂ ರಹಸ್ಯವಾಗಿ ಮದುವೆ ಆದರು.

ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದ ಅಪ್ಪ

ಹೇಗೋ ಮದುವೆಯ ರಹಸ್ಯವು ಅಪ್ಪನಿಗೆ ಗೊತ್ತಾಯಿತು. ನಿಮಗೆ ಆಸ್ತಿಯಲ್ಲಿ ಒಂದು ಡಾಲರ್ ಕೂಡ ಕೊಡುವುದಿಲ್ಲ. ಎಲ್ಲಿ ಬೇಕಾದರೂ ಹೋಗಿ ಎಂದು ಗರ್ಜಿಸಿದನು. ಮದುಮಕ್ಕಳನ್ನು ಮನೆಯ ಹೊರಗೆ ನಿಲ್ಲಿಸಿ ದಢಾರ್ ಎಂದು ಬಾಗಿಲು ಹಾಕಿದನು.

ರಾಬರ್ಟ್ ಮತ್ತು ಎಲಿಜಬೆತ್ ಇಬ್ಬರೂ ಬೇಸರ ಮಾಡಿಕೊಳ್ಳಲಿಲ್ಲ. ಬರವಣಿಗೆಯ ಮೂಲಕ ಬದುಕುವ ಶಕ್ತಿ ಇಬ್ಬರಿಗೂ ಇತ್ತು. ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅವರಿಬ್ಬರೂ ಉಟ್ಟ ಬಟ್ಟೆಯಲ್ಲಿ ಲಂಡನ್ ನಗರವನ್ನು ಬಿಟ್ಟು ಪ್ರೀತಿಯ ಊರಾದ ಇಟಲಿಗೆ ಬಂದರು. ಪೀಸಾದ ವಾಲುವ ಗೋಪುರದ ಮುಂದೆ ನಿಂತು ದಂಪತಿಗಳು ಮೊಟ್ಟಮೊದಲ ಬಾರಿಗೆ ಕಿಸ್ ಮಾಡಿದರು. ಪ್ರೀತಿಯ ಉತ್ಕಟತೆಯನ್ನು ಫೀಲ್ ಮಾಡಿದರು. ಅಲ್ಲಿಯೇ ಮನೆ ಮಾಡಿ ಸಾಹಿತ್ಯದ ಕೆಲಸದಲ್ಲಿ ಮುಳುಗಿದರು.

ಅಲ್ಲಿ ರಾಬರ್ಟ್ ತನ್ನ ಅದ್ಭುತ ಕವಿತೆ ‘ಸಾನೆಟ್ಸ್ ಫ್ರಮ್ ಪೋರ್ಚುಗೀಸ್ ‘ ಬರೆದು ಹೆಂಡತಿಗೆ ಪ್ರೆಸೆಂಟ್ ಮಾಡುತ್ತಾನೆ. ಅದು ಲೋಕಪ್ರಸಿದ್ಧಿ ಪಡೆಯಿತು.

ಆಕೆಯು ಅಷ್ಟೇ ಪ್ರೀತಿಯಿಂದ ʼಪೊಯೆಮ್ಸ್ ಬಿಫೋರ್ ಕಾಂಗ್ರೆಸ್’ ಕವಿತೆಯನ್ನು ಬರೆದು ಅವನಿಗೆ ಅರ್ಪಿಸುತ್ತಾಳೆ. ಗಂಡನ ಪ್ರೀತಿಯಲ್ಲಿ ಮುಳುಗಿ ʼಆರೋರಾ’ ಎಂಬ ಪ್ರೇಮಗ್ರಂಥವನ್ನು ಬರೆದು ಪ್ರಕಟಣೆ ಮಾಡುತ್ತಾಳೆ. ಅವರ ಪ್ರೀತಿಯ ಪ್ರತೀಕವಾಗಿ ಅವರಿಗೆ ವೀಡ್ಮನ್ ಬ್ಯಾರೆಟ್ ಎಂಬ ಮಗನು ಹುಟ್ಟುತ್ತಾನೆ.

1861ರಲ್ಲಿ ರಾಬರ್ಟ್ ತನ್ನ ಮಹತ್ವಾಕಾಂಕ್ಷೆಯ ಕೃತಿ ʼಮೆನ್ ಅಂಡ್ ವಿಮೆನ್’ ಪೂರ್ತಿ ಮಾಡಿ ಪತ್ನಿಯ ಕೈಯ್ಯಲ್ಲಿ ಇಟ್ಟು ಬಿಡುಗಡೆ ಮಾಡುತ್ತಾನೆ. 15 ವರ್ಷಗಳ ಶ್ರೇಷ್ಟ ದಾಂಪತ್ಯದ ಅನುಪಮ ಪ್ರೀತಿಯನ್ನು ಆಸ್ವಾದಿಸಿದ ನಂತರ 1861ರ ಜೂನ್ 29ರಂದು ಎಲಿಜೆಬೆತ್ ತನ್ನ ಗಂಡನ ತೋಳುಗಳಲ್ಲೇ ಉಸಿರು ನಿಲ್ಲಿಸುತ್ತಾಳೆ. ಕೆಲವೇ ವರ್ಷಗಳಲ್ಲಿ ರಾಬರ್ಟ್ ಕೂಡ ನಿಧನ ಹೊಂದುತ್ತಾನೆ.

ಅವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

ರಾಜಮಾರ್ಗ ಅಂಕಣ: ಯಶಸ್ಸು ಗಳಿಸಲು ಬೇಕಾದ್ದು ಗುರಿ, ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಎಚ್ಚರ. ಇತ್ಯಾದಿ. ನಿಮ್ಮನ್ನು ಗೆಲುವಿನ ಕಡೆಗೆ ಒಯ್ಯುವ 25 ಸೂತ್ರಗಳು ಇಲ್ಲಿವೆ.

VISTARANEWS.COM


on

winning tips ರಾಜಮಾರ್ಗ ಅಂಕಣ
Koo

ಗೆಲ್ಲಲು ಹೊರಟವರಿಗೆ ನಿಜವಾದ ಬೂಸ್ಟರ್ ಡೋಸ್ ಈ ಸೂತ್ರಗಳು

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಗೆಲ್ಲುವುದು (Winning) ಯಾರಿಗೆ ಬೇಡ ಹೇಳಿ? ಸೋಲಲು ಯಾರೂ ಬಯಸುವುದಿಲ್ಲ. ದಿಗಂತದ ಕಡೆಗೆ ದೃಷ್ಟಿ ನೆಟ್ಟು ಸಾಧನೆಯ (achievement) ಹಸಿವು ಮತ್ತು ಕನಸಿನ ಕಸುವುಗಳನ್ನು ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ 25 ಸೂತ್ರಗಳು (Success Tips) ನಿಮ್ಮನ್ನು ಗೆಲ್ಲಿಸುತ್ತವೆ.

1) ಗಮ್ಯ (Aim) – ನಾವು ತಲುಪಬೇಕಾದ ಸ್ಥಳದ ಸರಿಯಾದ ಅರಿವು.

2) ದಾರಿ (Way)- ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ.

3) ಆತ್ಮವಿಶ್ವಾಸ (confidence) – ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆಯು ನಮಗೆ ಇಂಧನ ಆಗುತ್ತದೆ.

4) ಎಚ್ಚರ – ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ

5) ಮಾರ್ಗದರ್ಶಕರು – ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ.

6) ಇಚ್ಛಾ ಶಕ್ತಿ – ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್.

7) ಪಾಸಿಟಿವ್ ಥಿಂಕಿಂಗ್ (Positive thinking)- ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು.

8) ಕಾಳಜಿ – ನಮ್ಮ ಜೊತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.

9) ಸ್ಟಾಟರ್ಜಿ – ದುರ್ಗಮವಾದ ಹಾದಿಯಲ್ಲಿ ಹೆಜ್ಜೆಯಿಟ್ಟು ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.

10) ತಾಳ್ಮೆ – ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರಮೆಂಟ್.

11) ಫೋಕಸ್ – ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡ ದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿ ಮನಸ್ಸು.

12) ಅಹಂ ರಾಹಿತ್ಯ – ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿಕ್ಷಿಪ್ತ ಭಾವನೆ.

13) ನಿರಂತರತೆ – ಯಾವ ಏರು,ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ.

14) ಕಾಂಪಿಟೆನ್ಸಿ – ಯಾವ ರೀತಿಯ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.

15) ನಮ್ಮ ಕಾಂಪಿಟಿಟರ್ – ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆವ ಉತ್ಸಾಹ ತುಂಬುತ್ತಾರೆ.

16) ಸವಾಲುಗಳು – ನಾವು ಒಳ್ಳೆಯ ಚಾಲಕ ಆಗಬೇಕು ಎಂದು ನೀವು ನಿರ್ಧರಿಸಿದರೆ ದೊಡ್ಡ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು!

17) ಆದ್ಯತೆಗಳು – ಹೊರಳು ದಾರಿಯಲ್ಲಿ ಸರಿಯಾದದ್ದನ್ನು ಮತ್ತು ಸೂಕ್ತವಾದದ್ದನ್ನು ನಮ್ಮ ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.

18) ಉತ್ಕೃಷ್ಟತೆ – ಯಾವಾಗಲೂ ಉತ್ತಮವಾದದ್ದನ್ನು ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.

19)ಪ್ಲಾನಿಂಗ್ – ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.

business man
business man

20) ಉದ್ದೇಶದ ಸ್ಪಷ್ಟತೆ – ನಮ್ಮ ಪ್ರಯಾಣದ ಉದ್ದೇಶವು ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ. ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ ಆಗುತ್ತದೆ.

21) ಅನುಭವಗಳಿಂದ ಪಾಠ ಕಲಿಯುವುದು – ನಮ್ಮ ತಪ್ಪುಗಳಿಂದ ಪಾಠ ಕಲಿಯುವಷ್ಟು ನಮ್ಮ ಆಯಸ್ಸು ದೊಡ್ಡದಲ್ಲ. ಬೇರೆಯವರ ತಪ್ಪುಗಳಿಂದ ಕೂಡ ಪಾಠ ಕಲಿಯಬಹುದು.

22) ಟೀಮ್ ವರ್ಕ್ – ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ.

23) ಸ್ವಯಂ ಶಿಸ್ತು – ನಮಗೆ ನಾವೇ ಹಾಕಿಕೊಂಡ ಶಿಸ್ತು ಮತ್ತು ಅನುಶಾಸನಗಳ ಗೆರೆಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.

24) ವಾಸ್ತವದ ಪ್ರಜ್ಞೆ – ನಮ್ಮ ಭ್ರಮೆಗಳಿಂದ ಹೊರಬಂದು ವಾಸ್ತವದ ಪ್ರಜ್ಞೆಯೊಂದಿಗೆ ಮುನ್ನಡೆಯುವುದು ನಮ್ಮ ಗೆಲುವನ್ನು ಸುಲಭ ಮಾಡುತ್ತದೆ.

25) ಅವಲೋಕನ- ಒಮ್ಮೆ ನಾವು ಪ್ರಯಾಣ ಮಾಡಿದ ದಾರಿಯನ್ನು ಹಿಂತಿರುಗಿ ನೋಡಿ ಮತ್ತೆ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.

ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ. ಗೆಲುವು ನಿಮ್ಮದಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

Continue Reading

ಅಂಕಣ

ಕೇರಂ ಬೋರ್ಡ್‌ ಅಂಕಣ: ಮಲೆನಾಡಿನ ಮಳೆಯಲ್ಲಿ ಶ್ರೀರಾಮ ಏನಾದ?

ಕೇರಂ ಬೋರ್ಡ್:‌ ಸೀತೆಯನ್ನು ಕಳೆದುಕೊಂಡು ವಿರಹತಪ್ತನಾದ ಶ್ರೀರಾಮ ಮಳೆಗಾಲದ ನಾಲ್ಕು ತಿಂಗಳುಗಳನ್ನು ಪರ್ವತದ ಗುಹೆಯೊಂದರಲ್ಲಿ ಕಳೆಯಬೇಕಾಗುತ್ತದೆ. ಈ ಮಳೆಕಾಡಿದ ಮುಂಗಾರಿನ ವನವಾಸ ರಾಮನಿಗೆ ಮಾಡಿದ್ದೇನು?

VISTARANEWS.COM


on

ಕೇರಂ ಬೋರ್ಡ್‌ rama and laxmana
Koo

ʼರಾಮಾಯಣ ದರ್ಶನಂʼ ಕಾಣಿಸಿದ ಒಂದು ದರ್ಶನ

kerum board

ಮಳೆಗಾಲ (Monsoon) ಎಂದರೆ ನೆನಪಾಗುವುದು ಬಾಲ್ಯದ ಮಲೆನಾಡಿನ ಎಡೆಬಿಡದ ಮುಂಗಾರು; ನಂತರ ಅದೇ ಮೈಯಾಂತು ಬಂದಂತೆ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಕುವೆಂಪು (Kuvempu) ಕಾಣಿಸಿದ ಕಾರ್ಗಾಲ. ಅದು ಅಂತಿಂಥ ಕಾವಳದ ಕಾಲವಲ್ಲ. ಮಲೆಗಳಲ್ಲಿ ಮದುಮಗಳು, ಕಾನೂರು ಕಾದಂಬರಿಗಳಲ್ಲೂ  ಅವರ ‘ಕದ್ದಿಂಗಳು ಕಗ್ಗತ್ತಲು’ ಮೊದಲಾದ ಪದ್ಯಗಳಲ್ಲೂ  ಅದರ ಝಲಕ್ ಇದೆ. ರಾಮಾಯಣ ದರ್ಶನಂನಲ್ಲಿ ಕತೆಯ ಭಾಗವಾಗಿ, ಶ್ರೀ ರಾಮನ (Sri Rama) ಮನಸ್ಸಿನ ಭಾವರೂಪಕವಾಗಿ, ಸೀತಾವಿರಹದ ವಸ್ತುಪ್ರತಿರೂಪವಾಗಿ ಅದು ಬರುತ್ತದೆ.

ಅದು ಶುರುವಾಗುವುದು ಹೀಗೆ: ವನವಾಸದ ವೇಳೆ ಸೀತೆಯನ್ನು ಕಳೆದುಕೊಂಡ ರಾಮ ಪಂಚವಟಿಯಿಂದ ಮುಂದೊತ್ತಿ ಬಂದು ಕಿಷ್ಕಿಂಧೆಯಲ್ಲಿ ಸುಗ್ರೀವನ ಸಖ್ಯ ಬೆಳೆಸಿ, ವಾಲಿವಧೆ ಮಾಡುತ್ತಾನೆ. ಅಷ್ಟರಲ್ಲಿ ಮಳೆಗಾಲ ಸಮೀಪಿಸುತ್ತದೆ. ವನವಾಸವಾದ್ದರಿಂದ ಅವನಿಗೆ ಪುರಪ್ರವೇಶವಿಲ್ಲ. ಹೀಗಾಗಿ ಪ್ರಸ್ರವಣ ಪರ್ವತದ ಗುಹೆಯೊಂದರಲ್ಲಿ ತಂಗುತ್ತಾನೆ. ಮುಂಗಾರಿಗಾಗಿ ತಿರೆ ಬಾಯಾರಿದೆ- ಸೀತೆಯ ವಿರಹತಪ್ತ ರಾಮನ ಹಾಗೆ. ದಿಗಂತದಂಚಲ್ಲಿ ಮೇಘಸ್ತೋಮ ಮೇಲ್ಮೇಲೆದ್ದು ಬರುತ್ತದೆ-

ಸೀತೆಗೆ ರಾಮನಂತೆ, ಮುಂಗಾರ್ಗೆ ತಿರೆ
ಬಾಯಾರುತಿರೆ, ಓ ಆ ದಿಗಂತದೆಡೆ, ವರದಂತೆವೋಲ್
ಕಾಣಿಸಿತು ವರ್ಷಶಾಪಂ, ರವಿಸಂಗಿ, ಶರಧಿಶಿಶು,
ನೀರದಸ್ತೂಪನೀಲಂ, ಶಿವನ ಜಟೆಯಂತೆವೋಲ್
ಶಿಖರಾಕೃತಿಯಿನುಣ್ಮಿ, ಮೇಲೆಮೇಲಕ್ಕೇರ್ದು
ಶೈಲಾಕೃತಿಯಿನುರ್ಬ್ಬಿ, ತೆಕ್ಕನೆ ಕದದ್ದತ್ತು.
ಕುಣಿವ ಕಾಳಿಯ ಕರಿಯ ಮುಡಿ ಬಿರ್ಚ್ಚಿ ಪರ್ವುವೋಲ್,
ಸಂಜೆಬಾನಂ ಮುಸುಕಿ ಮುಚ್ಚಿ. ಮೇಣ್ ಕಾರ್ಗಾಳಿ
ಬೀಸಿದುದು ಮಲೆಯ ಮಂಡೆಯ ಕಾಡುಗೂದಲಂ
ಪಿಡಿದಲುಬಿ ತೂಗಿ, ನೋವಿಂಗೊರಲಿದತ್ತಡವಿ :
ಹಳೆಮರಗಳುರುಳಿ ; ಮರಕೆ ಮರವುಜ್ಜಿ ; ಕೊಂಬೆಗೆ
ಕೊಂಬೆ ತೀಡಿ ; ಮಳೆಯೊಳ್ ಬಿದಿರು ಕರ್ಕಶವುಲಿಯ
ಕೀರಿ, ಸಿಡಿರೋಷದಿಂ ಕಿಡಿಯಿಡುವ ಮಸಿನವಿರ
ಪುರ್ಬ್ಬಿನಾ ಕಾರ ರಾಕ್ಷಸಿಯಕ್ಷಿಯಲೆವಂತೆ

ಈ ಮುಂಗಾರು ‘ವರ್ಷಶಾಪಂ’. ವಿರಹಾಗ್ನಿದಗ್ಧ ರಾಮನಂತಃಕರಣದ ಕ್ಷೋಭೆಯಂತೆ ಇಲ್ಲಿ ಕಾಣುವುದೆಲ್ಲ ಕರಾಳ ಪ್ರತಿಮೆಗಳು- ತಲೆಕುಚ್ಚು ಹಿಡಿದಲುಗಿಸುವ, ನೋವಿಗೆ ಒರಲುವ, ಕರ್ಕಶ ಕೀರುವ ಬಿದುರಿನ, ಕಡುಗಪ್ಪುಗೂದಲಿನ ಹುಬ್ಬಿನ ಯಕ್ಷಿರಾಕ್ಷಸಿ ಇತ್ಯಾದಿ. ಮಳೆ ಶುರುವಾಗುತ್ತದೆ:

ಮಿಂಚಿತು ಮುಗಿಲಿನಂಚು, ಸಂಘಟ್ಟಣೆಗೆ ಸಿಡಿಲ್
ಗುಡುಗಿದವು ಕಾರ್ಗಲ್ ಮುಗಿಲ್‌ಬಂಡೆ, ತೋರ ಹನಿ
ಮೇಣಾಲಿಕಲ್ ಕವಣೆವೀಸಿದುವು. ಬಿಸಿಲುಡುಗಿ,
ದೂಳುಂಡೆಗಟ್ಟಿ, ಮಣ್‌ತೊಯ್ದು, ಕಮ್ಮನೆ ಸೊಗಸಿ
ತೀಡಿದುದು ನೆಲಗಂಪು ನಲ್, ಝಣನ್ನೂಪುರದ
ಸುಸ್ವರದ ಮಾಧುರ್ಯದಿಂ ಕನತ್ಕಾಂತಿಯಿಂ
ಝರದ ಝಲ್ಲರಿಯ ಜವನಿಕೆಯಾಂತು ನರ್ತಿಸುವ
ಯೌವನಾ ಯವನಿಯ ಕರದ ಪೊಂಜುರಿಗೆಯಂತೆ
ಸುಮನೋಜ್ಞಮಾದುದಾ ಭೀಷ್ಮ ಸೌಂದರ್ಯದಾ
ಮುಂಗಾರ್ ಮೊದಲ್.

ಹಿಂಗಿದುದು ಬಡತನಂ ತೊರೆಗೆ,
ಮೊಳೆತುದು ಪಸುರ್‌ ತಿರೆಗೆ, ಪೀತಾಂಬರಕೆ
ಜರತಾರಿಯೆರಚುವೋಲಂತೆ ಕಂಗೊಳಿಸಿದುದು
ಹಸುರು ಗರುಕೆಯ ಪಚ್ಚೆವಾಸಗೆಯೊಳುದುರಿರ್ದ
ಪೂವಳದಿ ಪೊನ್, ಬಂಡೆಗಲ್ ಬಿರುಕಿನಿಂದಾಸೆ
ಕಣ್ದೆರೆಯುವಂತೆ ತಲೆಯೆತ್ತಿದುದು ಸೊಂಪುವುಲ್.
ಮಿಂದು ನಲಿದುದು ನಗಂ : ಮೇದು ತಣಿದುದು ಮಿಗಂ ;
ಗರಿಗೊಂಡೆರಂಕೆಗೆದರುತೆ ಹಾಡಿ ಹಾರಾಡಿ
ಹಣ್ಣುಂಡು ಹಿಗ್ಗಿದುದು ಹಕ್ಕಿಯ ಮರಿಯ ಸೊಗಂ.
ಮಳೆ ಹಿಡಿದುದತಿಥಿಯಾಗೈತಂದವಂ ಮನೆಗೆ
ತನ್ನೊಡೆತನವನೊಡ್ಡಿ ನಿಲ್ವಂತೆ.

ಮಳೆ ಹಿಡಿದದ್ದು ಮನೆಗೆ ಬಂದ ಅತಿಥಿ ಮನೆಗೇ ಒಡೆತನವನ್ನೊಡ್ಡಿದಂತಾಯ್ತು- ಭಿಕ್ಷೆ ಬೇಡಲು ಬಂದವನು ಗೃಹಿಣಿಯನ್ನೇ ಅಪಹರಿಸಿದಂತೆ! ಇಲ್ಲಿಂದ ರಾಮನ ಏಕಾಂತದುರಿಯ, ಭಗ್ನಮಾನಸದ ದುರ್ದಿನಗಳು ಆರಂಭವಾಗುತ್ತವೆ:

ದುರ್ದಿನಂ ದ್ರವರೂಪಿಯಾಗಿ ಕರಕರೆಯ ಕರೆದುದನಿಶಂ
ದೂರವಾದುದು ದಿನಪದರ್ಶನಂ,

(ದಿನಪಕುಲಜನಿಗೆ ದಿನಪದರ್ಶನ ದುರ್ಲಭವಾಯಿತು)

ಕವಿದುದಯ್
ಕರ್ಮುಗಿಲ ಮರ್ಬ್ಬಿನ ಮಂಕು ಪಗಲಮ್. ಇರುಳಂ
ಕರುಳನಿರಿದುದು ಕೀಟಕೋಟಿಯ ಕಂಠವಿಕೃತಿ.

ಸುಖದ ದಿನಗಳಲ್ಲಿ ಜೋಗುಳವೆನಿಸಬಹುದಾಗಿದ್ದ ಇರುಳ ಕೀಟಗಳ ದನಿಯೀಗ ಕಂಠವಿಕೃತಿ. ಇಲ್ಲಿಂದಾಚೆ ಮಲೆನಾಡಿನವರಿಗೆ ಸುಲಭವಾಗಿ ಅರ್ಥವಾಗಬಹುದಾದ ಚಿತ್ರಗಳು. ಗಟ್ಟಿ ಹಿಡಿದು ಸುರಿಯುವ ಮಳೆಗೆ ಮುದುಡುವ ಜೀವರಾಜಿಯ ನೋಟಗಳು.

ramayana forest
rama laxmana

ಗರಿ ತೊಯ್ದು ಮೆಯ್ದಂಟಿ ಕಿರಿಗೊಂಡ ಗಾತ್ರದಿಂ
ಮುದುರಿದೊದ್ದೆಯ ಮುದ್ದೆಯಾಗಿ ಕುಗುರಿತು ಹಕ್ಕಿ
ಹೆಗ್ಗೊಂಬನೇರಿ, ಕಾಡಂಚಿನಾ ಪಸಲೆಯಂ
ನಿಲ್ವಿರ್ಕೆ ಗೈದು, ರೋಮಂದೊಯ್ದಜಿನದಿಂದ
ಕರ್ಪು ಬಣ್ಣಂಬಡೆದವೋಲಿರ್ದು, ಹರಹರೆಯ
ಕೊಂಬಿನಿಂದಿಂಬೆಸೆವ ಮಂಡೆಯ ಮೊಗವನಿಳುಹಿ,
ಜಡಿಯ ಜಿನುಗಿಗೆ ರೋಸಿ, ತನ್ನ ಹಿಂಡಿನ ನಡುವೆ
ನಿಂದುದು ಮಳೆಗೆ ಮಲೆತು, ಕೆಸರು ಮುಚ್ಚಿದ ಖುರದ
ಕಾಲ್ಗಳ ಮಿಗದ ಹೋರಿ.

ಕಲ್ಲರೆಯನೇರಿದುದು
ಕಟ್ಟಿರುಂಪೆಯ ಪೀಡೆಗಾರದ ಮೊಲಂ, ಜಿಗಣೆ,
ನುಸಿ, ಹನಿಗಳಿಗೆ ಹೆದರಿ ಹಳುವನುಳಿಯುತ್ತೆ ಹುಲಿ
ಹಳು ಬೆಳೆಯದತ್ತರದ ಮಲೆಯ ನೆತ್ತಿಯನರಸಿ
ಚರಿಸಿದುದು. ಜೀರೆಂಬ ಕೀ‌ದನಿಯ ಚೀ‌ರ್‌ಚೀರಿ
ಪಗಲಿರುಳ ಗೋಳಗರೆದುದಯ್ ಝಿಲ್ಲಿಕಾ ಸೇನೆ :
ಬೇಸರದೇಕನಾದಮಂ ಓ ಬೇಸರಿಲ್ಲದೆಯೆ
ಬಾರಿಸುತನವರತಂ ಬಡಿದುದು ಜಡಿಯ ಸೋನೆ !

ಹೀಗೆ ಸಾಮಾನ್ಯರಿಗೂ ಮಂಕು ಹಿಡಿಸುವ ಕಾರ್ಗಾಲ, ಜೀವನದ ಗಾಢ ವಿಷಣ್ಣಕಾಲದಲ್ಲಿರುವವನಿಗೆ ಇನ್ನು ಹೇಗಿರಬಹುದು. ಒಂದೊಂದೇ ಮಾಸ ಯಾವಾಗ ಮುಗಿಯುತ್ತದೆ, ಯಾವಾಗ ಬಿಸಿಲೇಳುತ್ತದೆ ಎಂದು ಕಾಯುವ ಕರ್ಮ.

ಕಳೆದುದಯ್ ಜೇಷ್ಠಮಾಸಂ. ತೊಲಗಿತಾಷಾಢಮುಂ.
ತೀರ್ದುದಾ ಶ್ರಾವಣಂ. ಭಾದ್ರಪದ ದೀರ್ಘಮುಂ,
ಶಿವಶಿವಾ, ಕೊನೆಮುಟ್ಟಿದತ್ತೆಂತೊ ! ದಾಶರಥಿ ತಾಂ
ಮಾಲ್ಯವತ್ ಪರ್ವತ ಗುಹಾಶ್ರಮದಿ ಕೇಳ್, ಶ್ರಮದಿಂದ
ನೂಂಕುತಿರ್ದನ್ ಮಳೆಯ ಕಾಲಮಂ, ಕಾಲಮಂ
ಸತಿಯ ಚಿಂತೆಗೆ ಸಮನ್ವಯಿಸಿ, ಬೈಗು ಬೆಳಗ
ಮೇಣ್ ಪಗಲಿರುಳಂ ದಹಿಸಿತಗಲಿಕೆವೆಂಕೆ :
ಪಡಿದೋರ್ದುದಾ ವಿರಹಮಿಂದ್ರಗೋಪಂಗಳಿಂ ಮೇಣ್
ಮಿಂಚುಂಬುಳುಗಳಿಂ; ಇರುಳ್, ಅಣ್ಣತಮ್ಮದಿ‌ರ್
ಗವಿಯೊಳ್ ಮಲಗಿ, ನಿದ್ದೆ ಬಾರದಿರೆ, ನುಡಿಯುವರ್

ಹಗಲು ಕಾಮನಬಿಲ್ಲುಗಳು ವಿರಹವನ್ನು ವೆಗ್ಗಳಿಸುವುವು. ಇರುಳು ಅಗಲಿಕೆ ಬೆಂಕಿ ದಹಿಸಿ ನಿದ್ದೆ ಬಾರದು. ಅಣ್ಣ ತಮ್ಮಂದಿರು ಕತ್ತಲನ್ನು ದಿಟ್ಟಿಸುತ್ತಾ ಮಾತನಾಡುವರು. ಮಾತಿನಲ್ಲಿ ಅಸ್ಪಷ್ಟ ಭವಿಷ್ಯದ ಚಿತ್ರ.

ಕಡೆಯುವರ್ ತಮ್ಮ ಮುಂದಣ ಕಜ್ಜವಟ್ಟೆಯಂ.
ಕಾರಿರುಳ್‌. ಹೆಪ್ಪುಗಟ್ಟಿದ ಕಪ್ಪು, ಕಲ್ಲಂತೆವೋಲ್.
ಹೊರಗೆ, ಮಳೆ ಕರಕರೆಯ ಕರೆಯುತಿದೆ. ಕಪ್ಪೆ ಹುಳು
ಹಪ್ಪಟೆಯ ಕೊರಳ ಸಾವಿರ ಹಲ್ಲ ಗರಗಸಂ
ಗರ್ಗರನೆ ಕೊರೆಯುತಿದೆ ನಿಶೆಯ ನಿಶ್ಯಬ್ದತೆಯ
ಖರ್ಪರವನಾಲಿಸಿದ ಕಿವಿ ಮೂರ್ಛೆವೋಪಂತೆ :

ಸಹ್ಯಾದ್ರಿಯ ಇರುಳಮಳೆ ಎಂದರೆ ಕಪ್ಪೆ ಇತ್ಯಾದಿ ಕೀಟಕೋಟಿಯ ಘೋಷಗಳೂ ಸೇರಿದ ಸಹಸ್ರ ದಂತ ಗರಗಸದ ಕೊರೆತ!

“ಏನ್ ವೃಷ್ಟಿ ಘೋಷಮಿದು, ಆಲಿಸಾ, ಸೌಮಿತ್ರಿ !
ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ
ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ.
ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ
ನಾವ್ ಮನುಜರತ್ಯಲ್ಪ ಕೃತಿ ! ನಮ್ಮಹಂಕಾರ
ರೋಗಕಿಂತಪ್ಪ ಬೃಹದುಗ್ರತಾ ಸಾನ್ನಿಧ್ಯಮೇ
ದಿವ್ಯ ಭೇಷಜಮೆಂಬುದೆನ್ನನುಭವಂ. ಇಲ್ಲಿ,
ಈ ಗರಡಿಯೊಳ್ ಸಾಧನೆಯನೆಸಗಿದಾತಂಗೆ
ದೊರೆಕೊಳ್ವುದೇನ್ ದುರ್ಲಭಂ ಪಾರ್ವತಸ್ಥಿರತೆ ?
ಸಾಕ್ಷಿಯದಕಿರ್ಪನಾಂಜನೇಯಂ !..”

ಆಗ ರಾಮನ ಮನದಲ್ಲಿ ಮೂಡುವ ಮೂರ್ತಿ ಆಂಜನೇಯ. ಇಂಥ ಪ್ರ‌ಕೃತಿಯಾಟೋಪದ ಬೃಹದುಗ್ರತಾಸಾನಿಧ್ಯವೇ ನಮ್ಮ ಅಹಂಕಾರಗಳು ಅಳಿಯಲು ಸೂಕ್ತ ಮದ್ದು. ಇಂಥ ಗರಡಿಯ ಸಾಧನೆಯಲ್ಲಿಯೇ ಹನುಮನಂಥ ಪರ್ವತಸ್ಥಿರ ವ್ಯಕ್ತಿತ್ವ ರೂಪುಗೊಂಡೀತು ಎಂಬ ಕಾಣ್ಕೆ ಅವನದು. ಆಮೇಲೆ ನಳ ನೀಲ ಮುಂತಾದ ವಾನರವೀರರ ಕುರಿತೂ ಮಾತಾಗುತ್ತದೆ.

ಆದರೆ ಮಳೆಗಾಲದ ಐದು ತಿಂಗಳು ಕಳೆಯುತ್ತ ಬಂದರೂ ಸುಗ್ರೀವನ ಸುಳಿವಿಲ್ಲ. ವಾನರವೀರರನ್ನು ಕರೆದುಕೊಂಡು ಬಂದು ಸೀತಾನ್ವೇಷಣೆಗೆ ನೆರವಾಗುತ್ತೇನೆ ಎಂದಿದ್ದ ಕಪಿವೀರನ ಸದ್ದಿಲ್ಲ. ಆತಂಕ ಒಳಗೊಳಗೇ ಮಡುಗಟ್ಟುತ್ತದೆ. ಮರೆತನೇನು? ಲಕ್ಷ್ಮಣ ನಾನೇ ಹೋಗಿ ಸುಗ್ರೀವನ ಕಂಡು ಬರುವೆ ಎಂದು ಹೂಂಕರಿಸುತ್ತಾನೆ. ಆದರೆ ರಾಮನೇ ಅವನನ್ನು ಸುಮ್ಮನಿರಿಸುತ್ತಾನೆ. ಈ ಭಯಂಕರ ಮಳೆಯಲ್ಲಿ ಯಾರು ಎಲ್ಲಿ ಹೇಗೆ ಓಡಾಡಲು ಸಾಧ್ಯ? ಮಳೆ ಕಳೆದ ಮೇಲೆ ಬಾ ಎಂದು ನಾನೇ ಅವನಿಗೆ ಹೇಳಿದ್ದಾನೆ ಎನ್ನುತ್ತಾನೆ. ಅಷ್ಟರಲ್ಲಿ ಬಂತು ಅಶ್ವಯುಜ ಮಾಸ!

ನುಗ್ಗುತಿರ್ದ್ದತ್ತಾಶ್ವಯುಜ ವರ್ಷಾಶ್ವದಳದ
ಹೇಷಾರವದ ಘೋಷಂ !… ಆಲಿಸುತ್ತಿದ್ದಂತೆ,
ಅರಳಿದುವು ಕಣ್ಣಾಲಿ : ಘೋರಾಂಧಕಾರದಾ
ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್,
ಮಿಂಚುಂಬುಳೊಂದೊಯ್ಯನೊಯ್ಯನೆಯೆ ಪೊಕ್ಕುದಾ
ಕಗ್ಗತ್ತಲೆಯ ಗವಿಗೆ, ತೇಲುತೀಜುತ ಮೆಲ್ಲ
ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ,
ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ ಸೋರ್ವ
ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ
ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ ಮೂಡಿ,
ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ
ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ.
ಸಾಮಾನ್ಯಮಂ, ಆ ಅನಿರ್ವಚನೀಯ ದೃಶ್ಯಮಂ !

rama laxmana
rama laxmana

ಕಗ್ಗತ್ತಲು ಕವಿದ ರಾಮನ ಬದುಕಿಗೆ ಭರವಸೆಯ ಬೆಳಕು ಬಂದುದು ಒಂದು ಸಣ್ಣ ಮಿಂಚುಹುಳದ ಮೂಲಕ! ವಾಲ್ಮೀಕಿಯಂಥ ಆದಿಕವಿಗೂ ಹೊಳೆಯದ ದೃಶ್ಯವೊಂದು ಮಲೆನಾಡಿನ ಈ ಕವಿಗೆ ಝಗ್ಗನೆ ಹೊಳೆದುಬಿಟ್ಟಿದೆ. ಕಾರ್ಗತ್ತಲಲ್ಲಿ ತಡಕಾಡುತ್ತಿರುವವನಿಗೆ ಅಶ್ವಯುಜ ಮಾಸದ ಮಳೆ ಇಳಿಯುತ್ತ ಬಂದ ಆ ರಾತ್ರಿಯಲ್ಲಿ ಗವಿಯೊಳಗೆ ಮೆಲ್ಲಮೆಲ್ಲನೆ ಹಾರಾಡುತ್ತ ಬಂದ ಮಿಂಚುಹುಳವೊಂದು ಆಸೆಯ ಹಣತೆಗೆ ಕಿಡಿಹಚ್ಚಿತು. ನೋಡಿದ ರಾಮನ ಕಣ್ಣು ಹನಿಗೂಡಿತು, ಆತ್ಮವನ್ನು ಶಾಂತಿ ತುಂಬಿತು. ಅನಿರ್ವಚನೀಯ ದೃಶ್ಯವನ್ನು ಮತ್ತೆ ಮತ್ತೆ ನೋಡಿದ, ಕೆನ್ನೆ ತೋಯಿಸಿಕೊಂಡ.

ಕುಳ್ಳಿರ್ದ ಮಳೆಗಾಲಮೆದ್ದು ನಿಂತುದು ತುದಿಯ
ಕಾಲಿನಲಿ, ನೂಲ್‌ಸೋನೆಯಾ ತೆರೆಮರೆಯನೆತ್ತಲ್ಕೆ
ಶೈಲವರನಕೊ, ಕಾಣಿಸಿತ್ತಾತನೆರ್ದೆಗೊರಗಿ
ರಮಿಸಿರ್ದ ಕಾನನ ವಧೂ ಶ್ಯಾಮಲಾಂಬರಂ !

ಹಗಲಾಯಿತು. ನೂಲಿನಂತೆ ಸುರಿಯುತ್ತಿದ್ದ ಸೋನೆಮಳೆಯ ತೆರೆಯನ್ನು ಸರಿಸಿದಾಗ ಕಂಡದ್ದು ಮಹಾ ಪರ್ವತವೆಂಬ ವರ! ಅವನ ತೆಕ್ಕೆಗೆ ಒರಗಿದ ಹಸಿರು ವನರಾಜಿಯೆಂಬ ವಧು! ಹೆಂಡತಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ರಾಮನಿಗೆ ಇಂಥ ಚೇತೋಹಾರಿ ದೃಶ್ಯ ಇನ್ನೊಂದು ಇದ್ದೀತೆ?

ಲಂಬಮಾನಂ ಸೋರ್ವ ಮುತ್ತಿನ ಸರಗಳಂತೆ
ಕಾವಿಯನುಳಿದ ಮಲೆಯ ತೊರೆಯ ನೀರ್‌ಬೀಳಗಳು
ಕಣ್‌ಸೆಳೆದುವಲ್ಲಲ್ಲಿ.

ಅಬ್ಬರದ ಮಳೆಯಿಂದಾಗಿ ಮಣ್ಣುನೀರು ತುಂಬಿಕೊಂಡು ಕೆಂಪಾಗಿ ಹರಿಯುತ್ತಿದ್ದ ಕಾಡಿನ ತೊರೆಗಳು ಈಗ ʼಕಾವಿ ತೊರೆದುʼ ಮುತ್ತಿನ ಸರಗಳಂತೆ ಕಾಣಿಸತೊಡಗಿದವು. ಅಂದರೆ ರಾಮನಿಗೂ ಕಾವಿ ತೊರೆಯುವ ಕಾಲ ಬಂತು.

ಕೇದಗೆಗೆ ಮುಪ್ಪಡಸಿ,
ಬೀತುದೆ ಸೀತಾಳಿ ಹೂ, ಬಾನ್‌ಬಯಲೊಳಿರ್ದ
ಮೋಡಮೋರೆಗೆ ಕರ್ಪುವೋಗಿ, ಬೆಳ್ಳಿನ ನೆಳಲ್
ಸುಳಿದುದಲ್ಲಲ್ಲಿ. ನಿಸ್ತೇಜನಾಗಿರ್ದ ರವಿ
ಘನವನಾಂತರ ವಾಸಮಂ ಮುಗಿಸಿ ಮರುಳುತಿರೆ,
ಮೇಘಸಂಧಿಗಳಿಂದೆ, ಮುಸುಕೆತ್ತಿ, ನಸುನಾಣ್ಣಿ,
ಮೊಗಕೆ ನಾಣ್‌ಬೆಟ್ಟೇರಿದಪರಿಚಿತಳಂತೆವೋಲ್
ಇಣಿಕಿತು ಗತೋಷ್ಣಾತಪಂ.

ಸೂರ್ಯನಿಗೆ ವನಾಂತರ ವಾಸ ಮುಗಿಯಿತು. ರಾಮನಿಗೆ ಇನ್ನೂ ಮುಗಿದಿಲ್ಲ. ಆದರೆ ಮುಗಿಯುವ ಸೂಚನೆ ನೀಡಿತು. ಸಂದಿದ್ದ ಬೆಚ್ಚಗಿನ ಹವೆ ಮೆಲ್ಲಗೆ ಮೈದೋರಿತು- ಮುಸುಕೆತ್ತಿ ಮುಖಕ್ಕೆ ನಸುನಾಚಿಕೆಯಿಂದ ಬೆರಳನ್ನು ಕುತ್ತಿದ ಮುಗುದೆಯಂತೆ.

ಪಾಲ್ತುಂಬಿ ತುಳ್ಕಿ
ಗರುಕೆಪಚ್ಚೆಗೆ ಸೋರ್ವ ಕೊಡಗೆಚ್ಚಲಿನ ಗೋವು
ಹೊಸಬಿಸಿಲ ಸೋಂಕಿಂಗೆ ಸೊಗಸಿ ಮೆಯ್ ಕಾಯಿಸುತೆ
ಗಿರಿಸಾನು ಶಾದ್ವಲದಿ ನಿಂತು, ಬಾಲವನೆತ್ತಿ
ಕುಣಿದೋಡಿ ಬಂದು ತನ್ನೆಳಮುದ್ದುಮೋರೆಯಂ
ತಾಯ್ತನಕೆ ಪಡಿಯೆಣೆಯ ಮೆತ್ತೆಗೆಚ್ಚಲ್ಗಿಡಿದು,
ಜೊಲ್ಲುರ್ಕೆ, ಚಪ್ಪರಿಸಿ ಮೊಲೆಯನುಣ್ಬ ಕರುವಂ
ನೆಕ್ಕಿತಳ್ಕರೆಗೆ. ಲೋಕದ ಕಿವಿಗೆ ದುರ್ದಿನಂ
ಕೊನೆಮುಟ್ಟಿದತ್ತೆಂಬ ಮಂಗಳದ ವಾರ್ತೆಯಂ
ಡಂಗುರಂಬೊಯ್ಸಿದುದು ಪಕ್ಷಿಗೀತಂ.

ಮಳೆಗಾಲದ ಕೊನೆಯ ದಿನಗಳು ಸುಭಿಕ್ಷದ, ಹಸುರಿನ, ಹಾಲು ತುಂಬಿ ತುಳುಕುವ ಕೊಡಗೆಚ್ಚಲಿನ ಗೋವುಗಳ ಕಾಲ. ದುರ್ದಿನಗಳು ಮುಗಿದವು ಎಂಬ ಘೋಷವನ್ನು ಪಕ್ಷಿಗೀತೆಗಳು ಡಂಗುರ ಸಾರಿದವು.

ಹೀಗೆ ಮಳೆಗಾಲದ ವರ್ಣನೆ ಕೊನೆಯಾಗುತ್ತದೆ. ಇಲ್ಲಿಂದ ಮುಂದೆ ಸುಗ್ರೀವಾಜ್ಞೆ, ವಾನರವೀರರ ದಿಟ್ಟ ಹೋರಾಟದ ಸುಂದರ ಪುಟಗಳು ತೆರೆದುಕೊಳ್ಳುತ್ತವೆ. ಅಯೋಧ್ಯೆಯ ನಗರವಾಸಿ ರಾಮ, ಕರ್ನಾಟಕದ ಸಹ್ಯಾದ್ರಿಯ ಮಲೆಗಳ ನಡುವೆ ಗುಹೆಯಲ್ಲಿ, ಮುಂಗಾರಿನ ಬಿರುಹೊಯ್ಲಿನ, ಕಾರ್ಗತ್ತಲಿನ, ಸೋನೆಮಳೆಯ, ಮಿಂಚುಹುಳಗಳ, ದಿನಗಳ ನಡುವೆ ಆಶೆನಿರಾಶೆಗಳ ರಾಟವಾಳದಲ್ಲಿ ಕುಳಿತು ಏರಿಳಿಯುತ್ತಾನೆ. ಮಳೆಗಾಲ ಮುಗಿದಾಗ ಅವನು ಕತ್ತಲ ಗವಿಯನ್ನು ದಾಟಿ ಹೊಸ ಬೆಳಕನ್ನು ಕಾಣುತ್ತಿರುವ ಹೊಸ ಮನುಷ್ಯನಾಗಿದ್ದಾನೆ.

ಈತ ವಾಲ್ಮೀಕಿಗೆ ಕಾಣಿಸಿರದ, ಕುವೆಂಪುಗೆ ಮಾತ್ರ ಕಾಣಿಸಬಹುದಾದ ರಾಮ.

ಇದನ್ನೂ ಓದಿ: ಕೇರಂ ಬೋರ್ಡ್‌ | ಗಾಂಧಿಕ್ಲಾಸಿನಲ್ಲಿ ಕುಳಿತು ಒಂದೆರಡು ನೋಟ

Continue Reading

ಅಂಕಣ

ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

ರಾಜಮಾರ್ಗ ಅಂಕಣ: ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

VISTARANEWS.COM


on

golden memory ರಾಜಮಾರ್ಗ ಅಂಕಣ
Koo

ಮೆಮೊರಿ ಒಂದು ಮಿರಾಕಲ್

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ನೆನಪು (Memory) ಒಂದು ವಿಸ್ಮಯಕಾರಿ ಆದ ವಿದ್ಯಮಾನ. ಒಳ್ಳೆಯ ಮೆಮೊರಿ ಪವರ್ (memory Power) ಇದ್ದವರು ಜಗತ್ತನ್ನು ಗೆಲ್ಲಬಹುದು. ಪರೀಕ್ಷೆಗಳಲ್ಲಿ ಟಾಪರ್ (Exam Topper) ಆಗಲು, ಉದ್ಯೋಗವನ್ನು ಚೆನ್ನಾಗಿ ಮಾಡಲು, ವ್ಯಕ್ತಿಗಳನ್ನು ಸರಿಯಾಗಿ ಗುರುತಿಸಲು, ಹಣಕಾಸಿನ ವ್ಯವಹಾರ ಚಂದವಾಗಿ ಮಾಡಲು, ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲು, ಒಳ್ಳೆಯ ಲೇಖಕರಾಗಲು, ಉತ್ತಮ ಭಾಷಣಕಾರರಾಗಲು ಎಲ್ಲದಕ್ಕೂ ಮೆಮೊರಿ ಬೇಕು. ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

1) ಅರ್ಥ ಮಾಡಿಕೊಂಡು ಕಲಿಯಿರಿ. ಬಾಯಿಪಾಠವು ಲಾಂಗ್ ರೇಂಜಿನಲ್ಲಿ ಸೋಲುತ್ತದೆ.

2) ಯಾಕೆ ಓದಬೇಕು? ಎನ್ನುವುದು ಮೂಲಭೂತವಾದ ಪ್ರಶ್ನೆ. ಅದು ಕಲಿಕೆಯ ಉದ್ದೇಶ (PURPOSE). ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ನಾನು ಜ್ಞಾನಕ್ಕಾಗಿ ಓದುತ್ತೇನೆ. ಇನ್ನೂ ಕೆಲವರು ಖುಷಿಗಾಗಿ ಓದುತ್ತಾರೆ. ಮತ್ತೂ ಕೆಲವರು ಓದಿದ ಅಂಶಗಳನ್ನು ಬೇರೆಯವರಿಗೆ ಹಂಚಲು ಓದುತ್ತಾರೆ. ವಿದ್ಯಾರ್ಥಿಗಳು ಉತ್ತಮ ಮಾರ್ಕ್ ಪಡೆಯಲು ಓದುತ್ತಾರೆ ಇತ್ಯಾದಿ.

3) ಕಲಿಯಬೇಕಾದ ವಿಷಯಗಳನ್ನು ವ್ಯವಸ್ಥಿತವಾಗಿ ಜೋಡಿಸಿ. ಅಂದರೆ ಸುಲಭವಾದ ವಿಷಯಗಳನ್ನು ಮೊದಲು ಕಲಿಯುವುದು, ಕಷ್ಟವಾದ ವಿಷಯಗಳನ್ನು ನಂತರ ಕಲಿಯುವುದು ಇತ್ಯಾದಿ.

4) ಶಬ್ದಗಳು ಬೇಗನೇ ಮರೆತು ಹೋಗುತ್ತವೆ. ಆದರೆ ಚಿತ್ರಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತವೆ. ದೀರ್ಘಕಾಲದ ಮೆಮೊರಿಗೆ ಚಿತ್ರಗಳ ನೆರವು ಪಡೆಯಿರಿ.

5) ನಾನು ನೆನಪು ಇಡಬಲ್ಲೆ ಎಂಬ ಆತ್ಮವಿಶ್ವಾಸವು ನಿಮ್ಮನ್ನು ಗೆಲ್ಲಿಸುತ್ತದೆ. ಆತ್ಮವಿಶ್ವಾಸವು ನಿಮ್ಮ ಅಷ್ಟೂ ಧನಾತ್ಮಕ ಯೋಚನೆಗಳ (POSSITIVE THINKING) ಉತ್ಪನ್ನ ಆಗಿರುತ್ತದೆ.

6) ಬಹುಮಾಧ್ಯಮ ಕಲಿಕೆಯು ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುತ್ತದೆ. ಅಂದರೆ ಬಣ್ಣದ ಚಿತ್ರಗಳ ಮೂಲಕ ಕಲಿಕೆ, ವಿಡಿಯೋಗಳ ಮೂಲಕ ಕಲಿಕೆ, ಮ್ಯೂಸಿಕ್ ಬಳಸಿಕೊಂಡು ಕಲಿಕೆ, ಆಡಿಯೋ ಬಳಸಿಕೊಂಡು ಕಲಿಕೆ ಇತ್ಯಾದಿ.

7) ಒತ್ತಡ ಇಲ್ಲದೆ ಕಲಿಯುವುದು ತುಂಬಾ ಮುಖ್ಯ. ಈ ಒತ್ತಡವು ನಿಮ್ಮ ಕಲಿಯುವ ಸಾಮರ್ಥ್ಯವನ್ನು ಮತ್ತು ಮೆಮೊರಿ ಪವರನ್ನು ಇಂಚಿಂಚು ಸಾಯಿಸುತ್ತದೆ.

8) ಭಾವನಾತ್ಮಕ ಕಲಿಕೆ ನಿಮ್ಮ ಮೆಮೊರಿ ಪವರನ್ನು ಹಲವು ಪಟ್ಟು ವೃದ್ಧಿಸುತ್ತದೆ. ಅಂದರೆ ನಾವು ಕಲಿಯುವ ವಿಷಯವನ್ನು ಪ್ರೀತಿ ಮಾಡುತ್ತಾ ಕಲಿಯುವುದು ಎಂದರ್ಥ. ಅದು ಹೇಗೆ ಎಂದು ಯೋಚಿಸಿ.

9) ಸಣ್ಣ ತರಗತಿಗಳಲ್ಲಿ ಗಟ್ಟಿಯಾಗಿ ಓದುವುದು (Loud Reading) ಹೆಚ್ಚು ಅನುಕೂಲಕರ. ಆದರೆ ಪ್ರೌಢಶಾಲೆಯ ಹಂತಕ್ಕೆ ಬಂದಾಗ ಮೌನ ಓದು (Silent Reading) ನಿಮಗೆ ಹೆಚ್ಚು ಫಲಿತಾಂಶ ನೀಡುತ್ತದೆ.

10) ಪ್ಯಾಸಿವ್ ರೀಡಿಂಗ್ (PASSIVE READING) ಮಾಡುವುದಕ್ಕಿಂತ ಕ್ರಿಯೇಟಿವ್ ರೀಡಿಂಗ್ ಹೆಚ್ಚು ಮೆಮೊರಿಯನ್ನು ಖಾತ್ರಿ ಪಡಿಸುತ್ತದೆ. ಅಂದರೆ ಹೊಸ ಹೊಸ ರೀತಿಯಿಂದ ಕಲಿಯಲು ತೊಡಗುವುದು.

11) ಹೆಚ್ಚು ಏಕಾಗ್ರತೆಯಿಂದ ಓದುವುದು ತುಂಬಾ ಮುಖ್ಯ. ಪ್ರಶಾಂತವಾದ ಮನಸ್ಸು ಹೆಚ್ಚು ಮೆಮೊರಿಯನ್ನು ಉತ್ತೇಜನ ಮಾಡುತ್ತದೆ.

reading hobby
golden memory

13) ನಮ್ಮ ಮೆದುಳಿನಲ್ಲಿ ಮೆಮೊರಿಯನ್ನು ಉತ್ತೇಜನ ಮಾಡುವ SEROTONIN ಎಂಬ ಹಾರ್ಮೋನ್ ಉತ್ಪತ್ತಿ ಆಗ್ತಾ ಇರುತ್ತದೆ. ಮೆದುಳಿಗೆ ಸರಿಯಾದ ವಿಶ್ರಾಂತಿ ಕೊಟ್ಟಾಗ, ದಿನಕ್ಕೆ ಕನಿಷ್ಟ 6-8 ಘಂಟೆ ನಿದ್ರೆ ಮಾಡಿದಾಗ, ಮೆದುಳಿಗೆ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳನ್ನು ಕೊಟ್ಟಾಗ, ಉತ್ತಮ ಹವ್ಯಾಸಗಳನ್ನು ರೂಡಿ ಮಾಡಿದಾಗ ಆ ಹಾರ್ಮೋನ್ ಮಿರಾಕಲಸ್ ಮೆಮೊರಿ ಕ್ರಿಯೇಟ್ ಮಾಡುತ್ತದೆ.

14) ಮುಖ್ಯಾಂಶಗಳನ್ನು ಬರೆಯುವ ಅಭ್ಯಾಸವು ತುಂಬಾ ಒಳ್ಳೆಯದು. ಚೆಂದವಾಗಿ ಬರೆಯುವುದರಿಂದ ನಿಮ್ಮ ಬಲ ಮೆದುಳು (ರೈಟ್ ಬ್ರೈನ್) ಹೆಚ್ಚು ಚುರುಕು ಆಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಹಾಗೆಯೇ ಪ್ರತೀ ದಿನವೂ ದಿನಚರಿ (ಡೈರಿ) ಬರೆಯುವುದು ಕೂಡ ನಿಮ್ಮ ಮೆಮೊರಿಗೆ ಪೂರಕ.

15) ಯೋಗಾಸನ, ಪ್ರಾಣಾಯಾಮ , ಧ್ಯಾನ, ಪೌಷ್ಟಿಕ ಆಹಾರದ ಸೇವನೆ, ಮೌನವಾದ ವಾಕಿಂಗ್ ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುವ ಚಟುವಟಿಕೆಗಳು. ಮೆದುಳಿಗೆ ಹೆಚ್ಚು ರಕ್ತ ಸರಬರಾಜು ಆಗುವ ಆಸನಗಳನ್ನು ಒಳ್ಳೆಯ ಗುರುಗಳ ಮೂಲಕ ಕಲಿಯಲು ಪ್ರಯತ್ನಿಸಿ.

16) ಓದಲು ಆರಂಭಿಸುವ ಮೊದಲು 10-15 ನಿಮಿಷ ಕ್ಲಾಸಿಕಲ್ ಸಂಗೀತ ಅಥವಾ INSTRUMENTAL MUSIC (ಸಿತಾರ್, ವೀಣೆ, ವಯಲಿನ್ ಇತ್ಯಾದಿ) ಕೇಳುವುದರಿಂದ ನಿಮ್ಮ ಓದುವ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಮೆಮೊರಿ ಪವರ್ ಕೂಡ ಹೆಚ್ಚುತ್ತದೆ.

golden memory
golden memory

17) ನೀವು ಓದಿದ್ದನ್ನು ಇನ್ನೊಬ್ಬರಿಗೆ ವಿವರಿಸುವಾಗ ಅದು ನಿಮ್ಮ ಮೆಮೊರಿ ಪವರನ್ನು ಉತ್ತೇಜನ ಮಾಡುತ್ತದೆ. ಆದ್ದರಿಂದ ಗ್ರೂಪ್ ಸ್ಟಡಿಯು ಮೆಮೊರಿ ಜಾಸ್ತಿ ಮಾಡಲು ಅತ್ಯುತ್ತಮ ವಿಧಾನ ಎಂದು ಮಾನ್ಯತೆ ಪಡೆದಿದೆ.

18) ಮೆಮೊರಿ ಹೆಚ್ಚು ಮಾಡಲು ಪುನರ್ ಮನನ (Recalling) ಅತ್ಯುತ್ತಮ ವಿಧಾನ. ರಾತ್ರಿ ಮಲಗುವ ಮೊದಲು ಒಂದು ಹತ್ತು ನಿಮಿಷ ಬಿಡುವು ಮಾಡಿಕೊಂಡು ಇಂದು ನಾನು ಯಾವುದನ್ನು ಯಾವ ಅನುಕ್ರಮದಲ್ಲಿ ಕಲಿತೆ? ಯಾರನ್ನು ಇಂದು ಭೇಟಿ ಮಾಡಿದೆ? ಯಾವ ಹೊಸ ಅನುಭವ ಪಡೆದುಕೊಂಡೆ? ಇತ್ಯಾದಿ ರಿಕಾಲ್ ಮಾಡುತ್ತಾ ಹೋದಾಗ ನಿಮ್ಮ ಮೆಮೊರಿ ನೂರು ಪಟ್ಟು ವೃದ್ಧಿ ಆಗುತ್ತದೆ. ಹಾಗೆಯೇ ಪ್ರತೀ ಒಂದು ಘಂಟೆಯ ಓದಿನ ನಂತರ 5-10 ನಿಮಿಷ ರಿಕಾಲ್ ಮಾಡುತ್ತಾ ಹೋದರೆ ಮೆಮೊರಿ ಗೆಲ್ಲುತ್ತದೆ.

19) ನಿಮ್ಮ ಮೆದುಳಿನಲ್ಲಿ ಜಂಕ್ (ತಂಗಳು) ಸಂಗತಿಗಳು ಹೆಚ್ಚು ಪ್ರವೇಶ ಮಾಡದ ಹಾಗೆ ಪ್ಲಾನ್ ಮಾಡಿಕೊಳ್ಳಿ. ಉದಾಹರಣೆಗೆ ಅನಗತ್ಯವಾದ ಇಸವಿಗಳು, ಉದ್ದುದ್ದವಾದ ಮೊಬೈಲ್ ನಂಬರು ಅನಗತ್ಯವಾದ ಕ್ರಿಕೆಟ್ ದಾಖಲೆಗಳು, ನೋವು ಕೊಡುವ ಸಂಗತಿಗಳು ಇತ್ಯಾದಿ.

20) ಮೆಮೊರಿ ಹೇಗೆ ಸಹಜವೋ ಮರೆಯುವುದು (Forgetting) ಕೂಡಾ ಅಷ್ಟೇ ಸಹಜ! ಯಾವ ಮೆಮೊರಿ ನಿಮಗೆ ಮುಂದೆ ಅಗತ್ಯ ಬೀಳುವುದಿಲ್ಲವೋ ಅವುಗಳನ್ನು ನಿಮ್ಮ ಮೆದುಳು ಚಂದವಾಗಿ ಒರೆಸುತ್ತಾ (Erasing) ಮುಂದೆ ಹೋಗುತ್ತದೆ. ಆದ್ದರಿಂದ ಏನಾದರೂ ಸಣ್ಣ ಪುಟ್ಟ ಮರೆವು ಉಂಟಾದರೆ ಆತಂಕ ಮಾಡದೇ ಮುಂದೆ ಹೋಗುವುದೇ ಒಳ್ಳೇದು.

ಅದ್ಭುತವಾದ ಗೋಲ್ಡನ್ ಮೆಮೊರಿ ನಿಮ್ಮದಾಗಲಿ ಎಂಬುದು ನಮ್ಮ ಹಾರೈಕೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

Continue Reading
Advertisement
karnataka Weather Forecast
ಮಳೆ11 seconds ago

Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

Paris Olympics: Satwik-Chirag duo Failed To Reach Semi Final, Lose In quarter Final
ಕ್ರೀಡೆ5 mins ago

Paris Olympics: ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಗೆ ಆಘಾತಕಾರಿ ಸೋಲು

MS Dhoni
ಪ್ರಮುಖ ಸುದ್ದಿ13 mins ago

MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

MLA Belur Gopalakrishna visits and inspects flood affected areas in hosanagara taluk
ಶಿವಮೊಗ್ಗ13 mins ago

Hosanagara News: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ

State Level hasiru nairmalya shala abhyudaya Award for Hadlubailu Government School
ಶಿವಮೊಗ್ಗ14 mins ago

Hosanagara News: ಹಡ್ಲುಬೈಲು ಸರ್ಕಾರಿ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ

Viral Video
Latest16 mins ago

Viral Video: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

Viral Video
Latest24 mins ago

Viral Video: ಪ್ರೀತಿಸಿದ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕ; ಗಾಬರಿಗೊಳಿಸುವ ವಿಡಿಯೊ

New Traffic Rules
ಕರ್ನಾಟಕ29 mins ago

New Traffic Rules: ಹೆದ್ದಾರಿಯಲ್ಲಿ ವೇಗದ ಮಿತಿ 130 ಕಿ.ಮೀ ದಾಟಿದರೆ ದಂಡ, ಜೈಲು ಶಿಕ್ಷೆ; ಇಂದಿನಿಂದಲೇ ಹೊಸ ರೂಲ್ಸ್‌

Wayanad Tragedy
Latest40 mins ago

Wayanad Tragedy: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್‌ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ

murder case
ಬೆಂಗಳೂರು43 mins ago

Murder Case : ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌