ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ - Vistara News

ಅಂಕಣ

ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ

ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ ” ಗೋ ಸಂಪತ್ತುʼʼ ನಲ್ಲಿ ಈ ವಾರ ಪಂಚಗವ್ಯದ ಮಹತ್ವದ ಕುರಿತು ಚರ್ಚಿಸಲಾಗಿದೆ.

VISTARANEWS.COM


on

panchagavya importance of panchagavya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
go sampattu
column about cow

ಕಲಿಯುಗದ ಈ ಸಂಜೀವಿನಿ ಶೀತ, ನೆಗಡಿಯಂತಹ ಸಣ್ಣ ಕಾಯಿಲೆಗಳಿಂದ ಹಿಡಿದು ಏಡ್ಸ್, ಕ್ಯಾನ್ಸರ್ ಮತ್ತು ಅಬೋಲದಂತಹ ಮಾರಕ ಕಾಯಿಲೆಗಳನ್ನು ಹೊಡೆದೋಡಿಸುವ ಅದ್ಭುತ ಪರಿಣಾಮಕಾರಿ ಔಷಧಿಯಾಗಿ ಪಂಚಗವ್ಯ (panchagavya) ಇಂದು ಕಂಡು ಬಂದಿದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಪೃಥ್ವಿ, ಜಲ, ವಾಯು, ಅಗ್ನಿ ಮತ್ತು ಆಕಾಶ ಎಂಬ ಐದು ತತ್ವಗಳು ಬ್ರಹ್ಮಾಂಡದೊಳಗಿವೆ.

ಆ ಐದು ತತ್ವಗಳು ನಮ್ಮ ಶರೀರದೊಳಗೂ ಸಹ ಇವೆ. ಹೀಗೆ ಇರುವ ಈ ಐದು ತತ್ವಗಳು ಮನುಷ್ಯನ ಸಂತುಲತೆಯನ್ನು ಕಾಪಾಡುತ್ತ, ದೇಹದಲ್ಲಿನ ವಾತಾ, ಪಿತ್ತ ಮತ್ತು ಕಫ ಎಂಬ ಅಂಶವನ್ನು ಸಮತೋಲನದಲ್ಲಿಟ್ಟು, ನಮ್ಮ ದೇಹಕ್ಕೆ ಯಾವುದೇ ಅನಾರೋಗ್ಯ ಬಾಧಿಸದಂತೆ ನೋಡಿಕೊಳ್ಳುತ್ತವೆ. ಇಂತಹ ಆ ಐದು ತತ್ವಗಳು ಮತ್ತು ಆ ಮೂರು ಅಂಶಗಳು ಕಲಿಯುಗದ ಸಂಜೀವಿನಿ ಎಂದು ಕರೆಯಲ್ಪಡುವ ಪಂಚಗವ್ಯದಲ್ಲಿವೆ.

ಇಂತಹ ಪಂಚಗವ್ಯವನ್ನು ಪರಮಾತ್ಮನ ಪರಮೋನ್ನತ ಔಷಧಿಯೆಂದೂ ಹೇಳಲಾಗುತ್ತದೆ. ಮನುಷ್ಯನಿಗೆ ಸಾಯುವ ಮುನ್ನ ಬರುವ ಎಲ್ಲಾ ರೋಗಗಳಿಗೂ ಇದುವೇ ಸಂಜೀವಿನಿ. ಮೃತ್ಯುವೊಂದನ್ನು ಬಿಟ್ಟು ಬೇರೆಲ್ಲ ರೋಗಗಳಿಗೂ ಈ ಸಂಜೀವಿನಿ ಅತ್ಯಂತ ಪರಿಣಾಮಕಾರಿಯಾದ ಔಷಧಿ. ಇದರ ಸೇವನೆಯಿಂದ ದೇಹ ಮತ್ತು ಆತ್ಮ ಶುದ್ಧಿಯಾಗುತ್ತದೆ. ಹಾಗೆಯೇ ಇದಿಲ್ಲದೆ ಯಾವುದೇ ಹೋಮ, ಹವನ, ಯಾಗಗಳು ಅಪೂರ್ಣವೆನಿಸಿಬಿಡುತ್ತವೆ. ಮನುಷ್ಯ ತನ್ನ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಬಯಸಿದಾಗ ಎಲ್ಲಕ್ಕಿಂತ ಮೊದಲು ಇದನ್ನು ಸೇವಿಸಲೇಬೇಕು ಎನ್ನುತ್ತದೆ ಶಾಸ್ತ್ರ ಮತ್ತು ಧರ್ಮ.

ಹಾಗೆಯೇ ಮಾನವನಿಗೆ ಜೀವಿಸಲು 18 ರೀತಿಯ ಸೂಕ್ಷ್ಮ ಪೋಷಕ ತತ್ವಗಳು ಅತ್ಯಂತ ಅವಶ್ಯಕ. ಈ ಎಲ್ಲಾ ಅವಶ್ಯಕ ತತ್ವಗಳು ಈ ಸಂಜೀವಿನಿಯಲ್ಲಿವೆ. ಅಗ್ನಿಯು ಕಟ್ಟಿಗೆಯನ್ನು ಸುಡುವಂತೆ ಇದು ನಮ್ಮ ದೇಹದಲ್ಲಿರುವ ಪಾಪವನ್ನು ಸುಡುತ್ತದೆ. ಹಾಗೆಯೇ ಅತಿ ಘೋರವಾದ ಪಾಪಕರ್ಮದಿಂದ ಮುಕ್ತಿ ಪಡೆಯಲು ಇದರ ಸೇವನೆಯನ್ನು ನಮ್ಮ ಧರ್ಮಶಾಸ್ತ್ರ ವಿಧಿಸಿದೆ. ಈ ರೀತಿ ಇದರ ಪ್ರಾಶನದಿಂದ ಪೂರ್ವಜನ್ಮದ ಜ್ಞಾನವನ್ನು ಪಡೆದವರಿದ್ದಾರೆ.

ದೇಸಿ ಗೋವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ನಿಯಮಿತ ಪ್ರಮಾಣದ ಮಿಶ್ರಣ ಅಥವಾ ಸಂಗಮವೇ ಪಂಚಗವ್ಯ. ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಗೋಮಯ ಪ್ರತ್ಯೇಕವಾಗಿ ಅನೇಕ ಗುಣಗಳನ್ನು ಹೊಂದಿದ್ದರೂ ಸಂಯೋಗ ಸಂಸ್ಕಾರದಿಂದ ಇನ್ನೂ ಕೆಲವು ವಿಶೇಷ ಗುಣಗಳನ್ನು ಇವು ವ್ಯಕ್ತಗೊಳಿಸುತ್ತವೆ. ಹೀಗೆ ಸಂಯೋಗಗೊಂಡ ಪಂಚಗವ್ಯದಲ್ಲಂತೂ ಇವು ಪೂರ್ಣ ಪ್ರಮಾಣದಲ್ಲಿ ದೊರೆಯುತ್ತವೆ. ಗೋಮೂತ್ರ ಮತ್ತು ಗೋಮಯ ವಾತಾ, ಪಿತ್ತ ಮತ್ತು ಕಫವನ್ನು ಒಟ್ಟಿಗೆ ಕಡಿಮೆ ಮಾಡಿ ಅದರ ಸಂತುಲತೆಯನ್ನು ಕಾಪಾಡಿದರೆ, ಹಾಲು ಕಫ ನಾಶಕವಾಗಿ ವಾತಾ ಮತ್ತು ಪಿತ್ತವನ್ನು ವರ್ಧಿಸುತ್ತದೆ.

ಇಂತಹ ಹಾಲಿನಿಂದ ತೆಗೆದ ಮೊಸರು ಅದಕ್ಕಿಂತ ಹೆಚ್ಚಿನ ಕ್ಷಮತೆಯನ್ನು ಹೊಂದಿರುತ್ತದೆ. ಈ ಮೊಸರಿನಿಂದ ತೆಗೆದ ಬೆಣ್ಣೆಯ ತುಪ್ಪ ಅತ್ಯಧಿಕ ಪೌಷ್ಟಿಕಾಂಶದಿಂದ ಕೂಡಿದ್ದು, ಕಫವನ್ನು ನಾಶಗೊಳಿಸಿ ಪಿತ್ತವನ್ನು ಹೆಚ್ಚಿಸುತ್ತದೆ. ಇವುಗಳು ಒಂದೊಂದಾಗಿಯೇ ಇಷ್ಟೊಂದು ಗುಣ ಸತ್ವವನ್ನು ಹೊಂದಿದ್ದು, ಒಟ್ಟಾದಲ್ಲಿ ಮತ್ತಷ್ಟು ಇವುಗಳ ಗುಣ ಮತ್ತು ಸತ್ವಗಳು ಪರಿಣಾಮಕಾರಿಯಾಗುತ್ತವೆ.

ನಿರ್ದಿಷ್ಟ ಬಣ್ಣದ ಗೋವಿನಿಂದ ಪಡೆದ ಅದರ ಉತ್ಪನ್ನಗಳಿಂದ ತಯಾರಾದ ಪಂಚಗವ್ಯವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಂಪು ಅಥವಾ ತಾಮ್ರದ ಬಣ್ಣದ ಆಕಳಿನಿಂದ ಗೋಮೂತ್ರವನ್ನು, ಬಿಳಿ ಬಣ್ಣದ ಆಕಳಿನಿಂದ ಸಗಣಿಯನ್ನು, ಚಿನ್ನದ ಬಣ್ಣದ ಆಕಳಿನಿಂದ ಹಾಲನ್ನು, ನೀಲಿ ಬಣ್ಣದ ಆಕಳಿನಿಂದ ಮೊಸರನ್ನು ಮತ್ತು ಬಣ್ಣ ಬಣ್ಣದ ಆಕಳಿನಿಂದ ತುಪ್ಪವನ್ನು ಅಥವಾ ಈ ಐದು ಗವ್ಯಗಳನ್ನು ಕಪಿಲ ಆಕಳಿನಿಂದ ಸಂಗ್ರಹಿಸಿದ್ದೇ ಆದಲ್ಲಿ ಪಂಚಗವ್ಯದಷ್ಟು ಪರಿಣಾಮಕಾರಿ ಔಷಧಿ ಬೇರೊಂದಿಲ್ಲ ಎನ್ನುತ್ತದೆ ಲೌಗೌಕ್ಷಿ ಸ್ಮೃತಿ. ಪಂಚಗವ್ಯದ ತಯಾರಿಕೆಯು ಅತ್ಯಂತ ಸರಳವಾಗಿದ್ದು, ಪ್ರತಿಯೊಬ್ಬರು ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದಾಗಿದೆ. ಹೀಗೆ ತಯಾರಿಸುವಾಗ ಒಂದನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಿದೆ. ಅದೇನೆಂದರೆ ಪಂಚಗವ್ಯವನ್ನು ಕೇವಲ ದೇಶಿ ತಳಿ ಗೋವಿನ ಗೋಮೂತ್ರ, ಗೋಮಯ, ಹಾಲು, ಮೊಸರು ಮತ್ತು ತುಪ್ಪದಿಂದ ಮಾತ್ರ ತಯಾರಿಸಬೇಕು. ಆಗ ಮಾತ್ರ ಅದು ಸಂಜೀವಿನಿಯಾಗಲು ಸಾಧ್ಯ.

panchagavya

ನಮ್ಮ ಪ್ರಾಚೀನ ವೈದ್ಯಕೀಯ ಮಹಾ ಗ್ರಂಥವಾದ ಆಯುರ್ವೇದದಲ್ಲಿ ಮಾನವನಿಗೆ ಬಾಧಿಸುವ ಎಲ್ಲಾ ರೋಗಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ದೈವ ದೋಷಣೆಯಿಂದ ಬರುವ ವ್ಯಾಧಿಗಳು, ಶಾರೀರಿಕ ವ್ಯಾಧಿಗಳು ಮತ್ತು ಮಾನಸಿಕ ವ್ಯಾಧಿಗಳೆಂಬ ಈ ಮೂರು ವಿಭಾಗಗಳಿಗೂ ಅತ್ಯಂತ ಶ್ರೇಷ್ಠ ರೋಗನಿರೋಧಕ ಔಷಧಿಯಾಗಿ ಉಪಯೋಗಿಸಲ್ಪಡಬಹುದಾದ ಸಂಜೀವಿನಿಯೇ ಪಂಚಗವ್ಯ. ಈ ವ್ಯಾಧಿಗಳಿಗೆ ಪಂಚಗವ್ಯಕ್ಕಿಂತ ದೊಡ್ಡ ರಾಮಬಾಣ ಮತ್ತೊಂದಿಲ್ಲ. ಇದರಿಂದ ವಾಸಿಯಾಗುವ ಕಾಯಿಲೆಗಳ ಪಟ್ಟಿಯೇ ಆಯುರ್ವೇದದಲ್ಲಿದೆ. ಹಾಗೆಯೇ ವಿಶ್ವದ ಕೆಲ ಖ್ಯಾತ ಸಂಶೋಧಕರು ಪಂಚಗವ್ಯದ ಕಾರ್ಯಕ್ಷಮತೆಯ ಕುರಿತು ಸಂಶೋಧನೆ ನಡೆಸಿದಾಗ ಅವರನ್ನು ನಿಬ್ಬೆರಗಾಗಿಸುವ ಅಂಶಗಳು ಇದರಲ್ಲಿ ಕಂಡುಬಂದಿವೆ.

ಪಂಚಗವ್ಯವಿಲ್ಲದ ಯಾವುದೇ ಚಿಕಿತ್ಸೆ ಅಷ್ಟೊಂದು ಪರಿಣಾಮಕಾರಿಯಾಗಲಾರದು. ಪಂಚಗವ್ಯ ಸೇವನೆಯಿಂದ ಶರೀರ, ಬುದ್ಧಿ, ಮನಸ್ಸು ಮತ್ತು ಅಂತಃಕರಣ ಶುದ್ದಿಯಾಗುತ್ತದೆ ಎನ್ನುತ್ತದೆ ವಿಶ್ವದ ಅತ್ಯಂತ ಪುರಾತನ ವೈದ್ಯಶಾಸ್ತ್ರವಾದ ಆಯುರ್ವೇದ. ವೈದ್ಯಕೀಯ ಚಿಕಿತ್ಸೆಯಲ್ಲಿ ಪಂಚಗವ್ಯ ನಿರ್ವಹಿಸುವ ಪ್ರಮುಖ ಪಾತ್ರವನ್ನು ಹಲವು ಆಯುರ್ವೇದಾಚಾರ್ಯರು ಹಲವಾರು ರೀತಿಯಲ್ಲಿ ವಿವರಿಸಿದ್ದಾರೆ. ಆಯುರ್ವೇದ ಗ್ರಂಥಗಳಾದ ಚರಕ ಸಂಹಿತ, ಸುಶ್ರುತ ಸಂಹಿತ ಮತ್ತು ವಾಗ್ಭಟ ಸಂಹಿತದಲ್ಲಿ ಸಣ್ಣ ಕಾಯಿಲೆಗಳಿಂದ ಹಿಡಿದು ದೊಡ್ಡ ದೊಡ್ಡ ಕಾಯಿಲೆಗಳನ್ನು ಪಂಚಗವ್ಯದಿಂದ ವಾಸಿಮಾಡುವ ಬಗೆಯನ್ನು ತಿಳಿಸಲಾಗಿದೆ. ಹಾಗೆಯೇ ಲೌಗೌಕ್ಷಿಸ್ಮೃತಿ, ಪರಾಶರಸ್ಮೃತಿ, ರಸತರಂಗಿಣಿ ಇತ್ಯಾದಿ ಪ್ರಸಿದ್ಧ ಗ್ರಂಥಗಳಲ್ಲಿ ಇದನ್ನು ತಯಾರಿಸುವ ವಿಧಾನಗಳ ಬಗ್ಗೆ ವಿಸ್ತೃತ ಉಲ್ಲೇಖ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಪಂಚಗವ್ಯ ಚಿಕಿತ್ಸಾ ಪದ್ಧತಿಯನ್ನು ಗುರುತಿಸಿದ ನಂತರ ಇದರ ಪ್ರಚಾರ ಇತ್ತೀಚೆಗೆ ವಿಶ್ವವ್ಯಾಪಿಯಾಗುತ್ತಿದೆ. ಅಮೆರಿಕ ಮತ್ತು ಆಫ್ರಿಕ ದೇಶದಲ್ಲಿ ಇದನ್ನು ಏಡ್ಸ್ ಕಾಯಿಲೆ ವಾಸಿ ಮಾಡುವ ಸಲುವಾಗಿ ಬಳಸುತ್ತಿದ್ದಾರೆ. ಇದರಿಂದ ಅವರಿಗೆ ಈ ಕಾಯಿಲೆ ನಿಯಂತ್ರಣಕ್ಕೆ ಬಂದಿರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಹಾಗೆಯೇ ಪಂಚಗವ್ಯದಲ್ಲಿರುವ ಔಷಧೀಯ ಗುಣಗಳನ್ನು ಭಾರತದ ಸರ್ಕಾರಿ ಸಂಸ್ಥೆಗಳಾದ ಐಐಟಿ, ಐಇಸಿಟಿ, ಎನ್.ಬಿ.ಆರ್.ಐ, ಸಿ.ಎಸ್.ಐ.ಆರ್, ಎನ್.ಇ.ಇ.ಆರ್.ಐ. ಮತ್ತು ಎನ್.ಬಿ.ಎ.ಜಿ.ಆರ್ ಪ್ರಮಾಣೀಕರಿಸಿವೆ.

ಇಂದು ವಿಶ್ವದೆಲ್ಲೆಡೆ ಬಳಕೆಯಿರುವ ಅಲೋಪತಿ ಚಿಕಿತ್ಸಾ ಪದ್ಧತಿ ಏನಿಲ್ಲವೆಂದರೂ 200 ವರ್ಷಗಳ ಹಿಂದೆಯಷ್ಟೆ ಜಗತ್ತಿಗೆ ಪರಿಚಯವಾಯಿತು. ಇದೊಂದು ಸಂಪೂರ್ಣ ಪಾಶ್ಚಾತ್ಯ ಚಿಕಿತ್ಸಾ ಪದ್ಧತಿಯಾಗಿದ್ದು, ಕಷ್ಟಕರವು ಮತ್ತು ದುಬಾರಿಯೂ ಆಗಿದೆ. ಇದಕ್ಕೂ ಮೊದಲು ಎಲ್ಲಾ ಕಾಯಿಲೆಗಳಿಗೆ ನಮ್ಮಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ನೀಡಲಾಗುತ್ತಿತ್ತು. ಇಂದಿನ ಕ್ಯಾನ್ಸರ್ ಕಾಯಿಲೆಯನ್ನು `”ಅರ್ಭುದʼʼ ಎಂಬ ಹೆಸರಿನಿಂದ ಅಂದೇ ಆಯುರ್ವೇದದಲ್ಲಿ ಕರೆಯಲಾಗುತ್ತಿದ್ದು, ಅದಕ್ಕೆ ಪಂಚಗವ್ಯದಿಂದಲೇ ಚಿಕಿತ್ಸೆಯನ್ನು ನೀಡಿ ಗುಣಪಡಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಇತ್ತೀಚಿನ ಯುಗದಲ್ಲಿ ಸಾಮಾನ್ಯವಾಗಿ ಕಾಣಿಸುವ ಚರ್ಮ ಸಂಬಂಧಿ ರೋಗಗಳು, ಮೂತ್ರ ಸಂಬಂಧಿ ಕಾಯಿಲೆಗಳು, ಮಂಡಿ ನೋವು ಮತ್ತು ಹೊಟ್ಟೆ ಹುಣ್ಣು ಸೇರಿದಂತೆ ಇನ್ನು ಹತ್ತು ಹಲವು ಕಾಯಿಲೆಗಳನ್ನು ಇದು ಹೇಳ ಹೆಸರಿಲ್ಲದಂತೆ ವಾಸಿ ಮಾಡುವ ಗುಣ ಹೊಂದಿರುವುದು ಸಾಬೀತಾಗಿದೆ.

ಇದನ್ನೂ ಓದಿ| Motivational story | ಯಾರಿಗೋ ಹೇಳುವ ಒಂದು ಸಣ್ಣ ನಮಸ್ಕಾರದಲ್ಲಿ ಎಷ್ಟೊಂದು ಶಕ್ತಿ ಇದೆ ಗೊತ್ತಾ?

ಪಂಚಗವ್ಯವು ಮನಷ್ಯರಿಗಷ್ಟೇ ಅಲ್ಲದೆ ಪ್ರಪಂಚದಲ್ಲಿರುವ ಸಕಲ ಜೀವರಾಶಿಗಳಿಗೂ ಪರಿಣಾಮಕಾರಿಯಾದ ಔಷಧಿಯಾಗಿರುವುದು ಸಾಬೀತಾಗಿದೆ. ಇದು ಸಸ್ಯಗಳ ಬೆಳವಣಿಗೆಯಲ್ಲಿ ಮತ್ತು ಕೃಷಿಯಲ್ಲಿ ಅತ್ಯದ್ಭುತವಾದ ಫಲಿತಾಂಶವನ್ನು ನೀಡುವುದು ದೃಢಪಟ್ಟಿದೆ. ಇದನ್ನು ಒಂದು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ.

ಸಾವಯವ ರೈತರು ಇಂದು ಈ ಪಂಚಗವ್ಯದ ಉಪಯೋಗವನ್ನು ಕೃಷಿಯಲ್ಲಿ ಬಳಸಿ ಒಳ್ಳೆಯ ಫಸಲನ್ನು ಪಡೆದು ಹೆಚ್ಚೆಚ್ಚು ಲಾಭವನ್ನು ನೋಡುತ್ತಿರುವುದೇ ಇದಕ್ಕೆ ಸಾಕ್ಷಿ. ಪಂಚಗವ್ಯದಂತೆ ಪಂಚಗವ್ಯ ಘೃತವು ಸಹಾ ಪರಿಣಾಮಕಾರಿಯಾದುದಾಗಿದೆ. ಇದರೊಂದಿಗೆ ಗೋಮೂತ್ರ, ಗೋಮಯ, ಹಾಲು ಮತ್ತು ಮೊಸರನ್ನು ಬೆರೆಸಿ ಔಷಧಿಯಾಗಿ ಬಳಸಲಾಗುತ್ತದೆ. ಇದು ಮೆದುಳಿಗೆ ಸಂಬಂಧಿಸಿದ ವ್ಯಾಧಿಗಳಾದ ಹುಚ್ಚು, ಬೆಪ್ಪು, ಉನ್ಮಾದ ಮತ್ತು ಅಪಸ್ವಾರಗಳಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ.

ಒಟ್ಟಿನಲ್ಲಿ ಪ್ರಪಂಚದ ಎಲ್ಲಾ ಕಾಯಿಲೆಗಳಿಗೆ ಪರಿಹಾರ ಈ ಸಂಜೀವಿನಿ. ಇಂತಹ ಸಂಜೀವಿನಿಯ ಮೂಲ ಗೋವು. ಹಾಗಾಗಿ ನಡೆದಾಡುವ ಈ ಔಷಧಾಲಯವನ್ನು ಉಳಿಸಿಕೊಂಡಂಲ್ಲಿ ಮಾತ್ರ ಮಾನವ ಇಂದು ಮತ್ತು ಮುಂದೊಂದು ದಿನ ಆರೋಗ್ಯಪೂರ್ಣ ಜೀವನವನ್ನು ತನ್ನದಾಗಿಸಿಕೊಳ್ಳಬಹುದಾದ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ | ಗೋ ಸಂಪತ್ತು | ಬೆರಣಿ; ಇದು ಚಿನ್ನದ ಗಣಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!

ರಾಜಮಾರ್ಗ ಅಂಕಣ: 11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

VISTARANEWS.COM


on

world emoji day ರಾಜಮಾರ್ಗ ಅಂಕಣ
Koo

ಜುಲೈ 17 ವಿಶ್ವ ಇಮೋಜಿ ದಿನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ʻಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ’ ಎನ್ನುತ್ತದೆ ಚೈನೀಸ್ (Chinese) ಭಾಷೆ. ನಾವು, ನೀವೆಲ್ಲ ವಾಟ್ಸ್ಯಾಪ್ (WhatsApp), ಫೇಸ್ ಬುಕ್ (Facebook), ಟ್ವಿಟರ್ (Twitter) ಎಲ್ಲ ಕಡೆಗಳಲ್ಲಿ ಮೆಸೇಜ್ (Message) ರವಾನೆ ಮಾಡುವಾಗ, ಸ್ವೀಕಾರ ಮಾಡುವಾಗ ಈ ಚಂದ ಚಂದವಾದ ಎಮೋಜಿಗಳನ್ನು (Emojis) ಬಳಕೆ ಮಾಡಿಯೇ ಮಾಡಿರುತ್ತೇವೆ. ಉದ್ದುದ್ದ ಮೆಸೇಜ್ ಟೈಪಿಸಲು ಆಸಕ್ತಿ ಇಲ್ಲದೆ ಹೋದಾಗ, ಸಮಯದ ಕೊರತೆ ಇದ್ದಾಗ ಒಂದು ಎಮೋಜಿ ಹಾಕಿ ಭಾವನೆಗಳನ್ನು ವ್ಯಕ್ತಪಡಿಸಿದ್ದು ಇದೆ. ಈ ಎಮೋಜಿಗಳು ಉಂಟುಮಾಡುತ್ತಿರುವ ಮೂಡ್ ಇದೆಯಲ್ಲ ಅದು ವರ್ಣನಾತೀತ ಮತ್ತು ಭಾವನಾತೀತ.

ಈ ಎಮೋಜಿಗಳು ಇಂದು ಜಾಗತಿಕ ಭಾಷೆಯೇ ಆಗಿಬಿಟ್ಟಿವೆ!

ಈ ಎಮೋಜಿಗಳಿಗೂ ಒಂದು ಇತಿಹಾಸ ಇದೆ ಎಂದರೆ ನಮಗೆ ನಂಬುವುದು ಕಷ್ಟ ಆಗಬಹುದು. ಜಪಾನ್ ಭಾಷೆಯಲ್ಲಿ ಎ ಅಂದರೆ ಚಿತ್ರ. ಮೋಜಿ ಅಂದರೆ ಅಕ್ಷರ. ಒಟ್ಟಿನಲ್ಲಿ ಎಮೋಜಿ ಅಂದರೆ ಚಿತ್ರಾಕ್ಷರ ಎಂದರ್ಥ.

ಈ ಎಮೋಜಿಗಳು ಜನಿಸಿದ್ದು ಜಪಾನನಲ್ಲಿ. 1999ರಲ್ಲಿ ಜಪಾನ್ ದೇಶದ ಒಬ್ಬ ಸಾಮಾನ್ಯ ತಂತ್ರಜ್ಞ, ಆತನ ಹೆಸರು ಶಿಗೆತರ ಕುರಿತ, ಡೊಕೊಮೊ ಮೊಬೈಲ್ ಕಂಪೆನಿಗಾಗಿ ಈ ರೀತಿಯ 176 ಎಮೋಜಿಗಳನ್ನು ಡಿಸೈನ್ ಮಾಡಿ ಕೊಟ್ಟರು. ಅದರಲ್ಲಿ ನಗುವ, ಅಳುವ, ಸಿಟ್ಟು ತೋರುವ, ಕೊಂಕು ನುಡಿಯುವ, ಬೇಸರ ವ್ಯಕ್ತಪಡಿಸುವ, ಆನಂದ ಬಾಷ್ಪ ಸುರಿಸುವ, ಕೆಣಕುವ, ಸಿಡಿಯುವ….ಹೀಗೆ ನವರಸಗಳನ್ನು ಸ್ಫುರಿಸುವ ಎಮೋಜಿಗಳೂ ಇದ್ದವು. ಅವುಗಳು ಬಹುಬೇಗ ಜನಪ್ರಿಯ ಆದವು.

ಮುಂದೆ ಎಲ್ಲ ಮೊಬೈಲ್ ಕಂಪೆನಿಗಳು ಮುಗಿಬಿದ್ದು ಸಾವಿರಾರು ಎಮೋಜಿಗಳನ್ನು ತಮ್ಮ ಸಾಫ್ಟ್ ವೇರಗಳಲ್ಲಿ ಸಂಗ್ರಹ ಮಾಡಿ ಮಾರ್ಕೆಟ್ ಮಾಡಿದವು.

ಅದರಲ್ಲೂ ಆನಂದ ಭಾಷ್ಪ ಸುರಿಸುವ ಒಂದು ಎಮೋಜಿಯನ್ನು ನಾವು ಹೆಚ್ಚು ಬಳಕೆ ಮಾಡುತ್ತೇವೆ. ಅದನ್ನು 2015ರಲ್ಲಿ ಆಕ್ಸ್ಫರ್ಡ್ ವಿವಿಯು ‘ ವರ್ಷದ ಪದ’ ( ವರ್ಡ್ ಆಫ್ ದ ಇಯರ್) ಎಂದು ಪ್ರಶಸ್ತಿ ಕೊಟ್ಟು ಗೌರವಿಸಿತು. ಹಲವು ಮೊಬೈಲ್ ಕಂಪೆನಿಗಳು ಎಮೋಜಿಗಳನ್ನು ಜನಪ್ರಿಯ ಮಾಡಲು ಕೇವಲ ಅವುಗಳನ್ನು ಬಳಸಿ ಪ್ರೇಮಪತ್ರಗಳನ್ನು ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿದವು! ಚಿತ್ರಕಲಾ ಸ್ಪರ್ಧೆಗಳೂ ಹಲವೆಡೆ ನಡೆದವು.

emoji1

ಆಪಲ್ ಮೊಬೈಲ್ ಕಂಪೆನಿ ಇನ್ನಷ್ಟು ಮುಂದೆ ಹೋಗಿ ಜೆನ್ ಮೋಜಿ ಎಂಬ ಹೆಸರಿನ ಅಪಡೆಟೆಡ್ ವರ್ಷನನ್ನು ಡೆವಲಪ್ ಮಾಡಿತು. ಈ ಚಿತ್ರಾಕ್ಷರದ ಸಂಕೇತಗಳು ಬಹುಬೇಗ ಜನಪ್ರಿಯ ಆದವು ಮತ್ತು ಜಗತ್ತಿನಾದ್ಯಂತ ತಲುಪಿದವು. ಒಂದರ್ಥದಲ್ಲಿ ಈ ಎಮೋಜಿಗಳು ಭಾಷೆಗಳ ಹಂಗನ್ನು ಮೀರಿ ಬೆಳೆದವು. ಇನ್ನೂ ಕೆಲವು ಮೊಬೈಲ್ ಕಂಪೆನಿಗಳು ತಮ್ಮ ಆಯ್ಕೆಯ ಎಮೋಜಿಗಳನ್ನು ಡಿಸೈನ್ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿ ಉದಾರತೆ ಮೆರೆದವು.

ಜುಲೈ 17 ಎಮೋಜಿ ದಿನ ಯಾಕೆ?

11 ವರ್ಷಗಳ ಹಿಂದೆ ಇದೇ ದಿನ ಒಂದು ಕಂಪೆನಿಯು ಎಮೋಜಿಗಳನ್ನು ಒಳಗೊಂಡ ಒಂದು ಕ್ಯಾಲೆಂಡರ್ ಪಬ್ಲಿಷ್ ಮಾಡಿತ್ತು. ಅಂದಿನಿಂದ ಈ ದಿನವನ್ನು ವಿಶ್ವ ಎಮೋಜಿ ದಿನವಾಗಿ ( World Emoji Day) ಆಚರಣೆ ಮಾಡಲಾಗುತ್ತಿದೆ. ಈಗ ಜನಪ್ರಿಯವಾಗುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ನ ಭಾಗವಾಗಿ ಕೂಡ ಈ ಎಮೋಜಿಗಳು ಉಂಟುಮಾಡುತ್ತಿರುವ ಪ್ರಭಾವವನ್ನು ಮತ್ತು ಸಂತೋಷವನ್ನು ನಾನು ಮತ್ತೆ ಬರೆಯುವ ಅಗತ್ಯವೇ ಇಲ್ಲ.

ಇಂದು ಜಗತ್ತಿನ ಎಲ್ಲ ಭಾಷೆಗಳನ್ನೂ ಮೀರಿ ಬೆಳೆಯುತ್ತಿರುವ ಈ ಚಿತ್ರಾಕ್ಷರಗಳಿಗೆ ನಮ್ಮ ಒಂದು ಮೆಚ್ಚುಗೆಯ ಎಮೋಜಿ ಇರಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ.

VISTARANEWS.COM


on

goa ನನ್ನ ದೇಶ ನನ್ನ ದನಿ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ದೇಶದ ಗತ-ಇತಿಹಾಸವೇ (History of India) ಹಾಗೆ. ನಂಬಲು ಅಸಾಧ್ಯವಾದ ಸಂಗತಿಗಳೇ ಅಧಿಕಾಧಿಕ. ಗೋವಾ (Goa) ಎಂದರೆ ಭೂಮಿಯ ಮೇಲಿನ ಸ್ವರ್ಗ ಎಂಬ ಅಪವ್ಯಾಖ್ಯಾನವಿದೆ. ಮದ್ಯಪಾನ (Liquor consuming) ಇತ್ಯಾದಿಗಳನ್ನು ವೈಭವೀಕರಿಸಿ, ಪ್ರವಾಸಿಗರನ್ನು (Tourists) ಆಕರ್ಷಿಸುವ ದೋಚುವ ಹುನ್ನಾರ ನಡೆದೇ ಇದೆ. ತತ್ಸಂಬಂಧೀ ಆದಾಯವೇ ಪ್ರಮುಖವಾಗಿ ಹೋಗಿ ಆ ರಾಜ್ಯಕ್ಕೆ ಮುಕ್ತಿಯೇ ಇಲ್ಲವಾಗಿದೆ. ಹಿಂದಿನ ಗೋಮಾಂತಕದ (Gomanthaka) ದೇವಾಲಯಗಳ (Temples) ಬಗೆಗೆ, ವಿಭಿನ್ನ-ವಿಶಿಷ್ಟ ಸಂಸ್ಕೃತಿಯ ಬಗೆಗೆ ಕೇಳುವವರೇ ಇಲ್ಲ. ಮತಾಂತರೀ ಕ್ರೈಸ್ತರ (Conversion) ಭಯಂಕರ ಹಿಂಸಾಪರ್ವಕ್ಕೆ (Violence) ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುತ್ತಾದವರು ಗೋವಾದ ಹಿಂದೂಗಳು.

ಆದರೂ, ಸೇಂಟ್ (ಖಂಡಿತಾ ಆತ ಸಂತನೂ ಅಲ್ಲ, ಸಜ್ಜನನೂ ಅಲ್ಲ) ಫ್ರಾನ್ಸಿಸ್ ಕ್ಸಾವಿಯರ್ (ಸಾಮಾನ್ಯ ಯುಗದ 16ನೆಯ ಶತಮಾನ)ನನ್ನೇ ಸಾಲಾಗಿ ನಿಂತು ನಮಸ್ಕರಿಸಿ ಬರುವ ಮೂರ್ಖ ಹಿಂದೂಗಳು ನಾವಾಗಿದ್ದೇವೆ. ಈತ ತನ್ನ ಕಿಂಗ್-ಗೆ ಪತ್ರ ಬರೆದು ಗೋವಾದಲ್ಲಿ Inquisition ಅತ್ಯಂತ ಆವಶ್ಯಕ ಎಂದು ಒತ್ತಾಯಿಸಿದ್ದ. ಈ ಹಿಂಸೆಗೆ ಬಲಿಯಾದವರ ಅಧಿಕೃತ ಸಂಖ್ಯೆಯೇ 16202. ಇದರಲ್ಲಿ 4012 ಮಂದಿ ಮಹಿಳೆಯರೇ ಇದ್ದರು. ಪೋರ್ತುಗೀಸರ ಎಲ್ಲ ವಸಾಹತುಗಳಲ್ಲಿಯೂ ಯಾತನಾ ಶಿಬಿರಗಳಿದ್ದವು (Concentration Camps). ಹಿಂದೂಗಳ ಮೇಲೆ ಇವರದ್ದು “ಅಚ್ಚುಕಟ್ಟಾದ ಹಿಂಸಾವಿಧಾನ”. ಜರ್ಮನಿಯ ನಾಜಿಗಳನ್ನು ನೆನಪಿಸುವಂತಹುದು. ವಿಚಾರಣೆಯ ಅವಧಿಯಲ್ಲಿ ದುರದೃಷ್ಟಶಾಲಿ ಹಿಂದೂಗಳು ಮಾಡುವ ಚೀತ್ಕಾರ, ವಿಸರ್ಜನೆಗಳ ಬಗೆಗೆ ಗುಮಾಸ್ತರು ವಿವರವಾಗಿ ಬರೆದಿಡುತ್ತಿದ್ದರು. ಕಾಲಿಗೆ ಭಾರ ಕಟ್ಟಿ ಹಿಂಭಾಗದಿಂದ ಕೈಗಳಿಗೆ ಹಗ್ಗ ಕಟ್ಟಿ ಆಪಾದಿತನನ್ನು ಮೇಲೆಳೆಯುತ್ತಿದ್ದರು. ಹೆಬ್ಬೆರಳಿನ ಉಗುರಿನ ಕಣ್ಣುಗಳಿಗೆ ಸೂಜಿಗಳಿಂದ ಚುಚ್ಚುತ್ತಿದ್ದರು. ಬಿಸಿ ಎಣ್ಣೆ, ಸುಣ್ಣದ ನೀರು, ಉರಿಯುವ ಗಂಧಕ ಇವೆಲ್ಲವನ್ನೂ ಹಿಂಸೆಗೆ ಧಾರಾಳವಾಗಿ ಬಳಸುತ್ತಿದ್ದರು. ಉರಿಯುವ ಕೊಳ್ಳಿಗಳಿಂದ ಕಂಕುಳಿಗೆ ತಿವಿಯುತ್ತಿದ್ದರು. ದೊಡ್ಡ ರಾಟೆಯ ಮೇಲೆ ಆಪಾದಿತರನ್ನು ಹಿಗ್ಗಿಸಿ ಸಾಯಿಸುತ್ತಿದ್ದರು. ಹಿಂದೂ ಸಂಪ್ರದಾಯ, ಆಚರಣೆಗಳನ್ನು ಅನುಸರಿಸಿಕೊಂಡು ಬಂದುದೇ ಇವರ ಅಪರಾಧ!

ಪೋರ್ತುಗೀಸರ ದುರಾಡಳಿತದ ಗೋವಾದ್ದು ಭಯಂಕರ ಇತಿಹಾಸ. ಇವರ ಅಮಾನುಷ ಹಿಂಸಾಚಾರದ ಘಟನಾವಳಿ ಬಹಳ ದೊಡ್ಡದೇ ಇದೆ. ಕೆಲವಂತೂ ತೀರ ವಿಚಿತ್ರ ಎನ್ನಿಸುವಂತಿವೆ. ಇಸ್ಲಾಮೀ ಆಕ್ರಮಣಕಾರಿಗಳ ದುರಾಡಳಿತ ಕಾಲದ “ಜಿಜಿಯಾ” ತೆರಿಗೆಯನ್ನು ಹೋಲುವ ಈ ಪೋರ್ತುಗೀಸ್ ಕ್ರೂರಿಗಳ ಅನೇಕ ತೆರಿಗೆಗಳು ಮಾನವ ಸಮಾಜವೇ ತಲೆ ತಗ್ಗಿಸುವಂತಹುವು. ಅದರಲ್ಲೊಂದು ಈ ಜುಟ್ಟಿನ ತೆರಿಗೆ. ಹೀಗೊಂದು ತೆರಿಗೆಯಿತ್ತೆಂಬುದೇ ನಮ್ಮಲ್ಲಿ ಬಹಳ ಜನರಿಗೆ ತಿಳಿಯದು.

ಸಾಮಾನ್ಯ ಯುಗದ 17ನೆಯ ಶತಮಾನದ ಆದ್ಯಂತ ಗೋವಾದ ಪೋರ್ತುಗೀಸ್ ಆಳರಸರಿಗೆ ಹಣದ ಅಭಾವವಿತ್ತು, ಭ್ರಷ್ಟಾಚಾರ ಮಿತಿ ಮೀರಿತ್ತು. ಹೇಗೆಲ್ಲಾ ಜನರ ತಲೆ ಒಡೆದು ಹಣ – ತೆರಿಗೆ ದೋಚಬಹುದು, ಎಂದೇ ಯೋಚಿಸುತ್ತಿದ್ದರು. ಚರ್ಚಿನ ದಂಡಾಧಿಕಾರದ ಮತ್ತು ಪರಮತ ಹಿಂಸೆಯ ಉದ್ದೇಶದ (Inquisition) ವಿಕೃತ ಶಿಕ್ಷಾವಿಧಾನಗಳು ಅಲ್ಲಿದ್ದ ಹಿಂದುಗಳಲ್ಲಿ ಅಸುರಕ್ಷತೆಯನ್ನು ಹುಟ್ಟುಹಾಕಿದ್ದವು. ವ್ಯಾಪಾರ, ವ್ಯವಹಾರ, ಕೃಷಿ ಇತ್ಯಾದಿಗಳು ಅತಂತ್ರವಾಗಿದ್ದವು. 1704ರ ಅಕ್ಟೋಬರ್ ತಿಂಗಳ 12ರಂದು ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಸಭೆಯಲ್ಲಿ ಹೇಗೆಲ್ಲಾ ಗೋವಾದ ಹಿಂದುಗಳನ್ನು ದೋಚಬಹುದು, ತೆರಿಗೆ ಹೆಸರಿನಲ್ಲಿ ಲೂಟಿ ಮಾಡಬಹುದು ಎಂದು ಸಮಾಲೋಚಿಸಲಾಯಿತು. ಪಕ್ಕದಲ್ಲಿದ್ದ ಬಿಜಾಪುರದ ಆದಿಲ್ ಶಾಹೀ ಮತ್ತು ಮೊಘಲರ ಆಡಳಿತದ ಜಿಜಿಯಾ ರೀತಿಯ ತೆರಿಗೆಯನ್ನು ಯಾವ ರೀತಿ ವಿಧಿಸಬಹುದು, ಎಂಬ ಚರ್ಚೆಯೂ ಆಯಿತು.

ಪಣಜಿಯಲ್ಲಿ 1972ರಲ್ಲಿ ಪ್ರಕಟವಾದ ವಿ.ಟಿ.ಗುಣೆ ಅವರ “a Detailed Subject-Index and a Table of Contents in Brief” ಕೃತಿಯು ವಿಶದಪಡಿಸುವಂತೆ, ಬಹುಪಾಲು ಹಿಂದೂಗಳು ಜುಟ್ಟು ಬಿಡುವುದರಿಂದ ಈ “ಜುಟ್ಟಿನ ತೆರಿಗೆ” ವಿಧಿಸಲು ತೀರ್ಮಾನಿಸಲಾಯಿತು. ಕ್ರೈಸ್ತೇತರರು ಮಾತ್ರ ಈ ತೆರಿಗೆಯನ್ನು ತೆರಬೇಕಾಗಿತ್ತು. ಸಣ್ಣ ವ್ಯಾಪಾರಿಗಳು, ಅಕ್ಕಸಾಲಿಗರು ಮೂರು ಕ್ಸೆರಾಫಿನ್ (ಗೋವಾ ಪೋರ್ತುಗೀಸರ ನಾಣ್ಯ) ತೆರಬೇಕು; ಸಗಟು ವ್ಯಾಪಾರಿಗಳು ಐದು ಕ್ಸೆರಾಫಿನ್ ಮತ್ತು ಉಳಿದವರು ಎರಡು ಕ್ಸೆರಾಫಿನ್ ತೆರಿಗೆ ಕಟ್ಟಬೇಕು, ಎಂದು ತೀರ್ಮಾನಿಸಲಾಯಿತು. ಈ ಜುಟ್ಟಿನ ತೆರಿಗೆ ದೋಚಲು ನಿಗದಿತವಾದ ಪಡೆಯು, ತೆರಿಗೆದಾರರ ಪಟ್ಟಿ ಸಿದ್ಧಪಡಿಸಿಕೊಂಡು ಗೋವಾದ ಹಿಂದೂಗಳ ಭರ್ತ್ಸನೆಯಲ್ಲಿ ಹಿಂಸೆಯಲ್ಲಿ ನಿರತವಾಯಿತು. ಅಕ್ಷರಶಃ ನಿಯಂತ್ರಣವೇ ಇರಲಿಲ್ಲ. ಕೆಲವೆಡೆ ಐವತ್ತು, ನೂರು ಕ್ಸೆರಾಫಿನ್ ಗಳಷ್ಟು ಹಣ ಕಿತ್ತುಕೊಂಡ ಉದಾಹರಣೆಗಳೂ ಇದ್ದವು.

goa ನನ್ನ ದೇಶ ನನ್ನ ದನಿ

ತುಂಬಾ ಹಿಂದೆ ಅಂದರೆ, 1567ರಲ್ಲಿಯೇ ಗೋವಾದಲ್ಲಿ ನಡೆದ ಆಡಳಿತಗಾರರ ಮತ್ತು ಚರ್ಚಿನ ಮುಖ್ಯಸ್ಥರ ಮೊದಲ ಸಭೆಯಲ್ಲಿ ಹಿಂದೂಗಳ ವಿಗ್ರಹಾರಾಧನೆ, ಸಂಪ್ರದಾಯಗಳು, ಪೂಜೆಗಳು, ಆಚಾರ ವಿಚಾರಗಳು, ಮೈಮೇಲೆ ಗಂಧವನ್ನು ಲೇಪಿಸಿಕೊಳ್ಳುವುದು, ತುಳಸೀ ಪೂಜೆ ಮಾಡುವುದು ಇತ್ಯಾದಿ ಎಲ್ಲವನ್ನೂ ಟೀಕಿಸಲಾಯಿತು, ನಿಷೇಧಿಸಲಾಯಿತು. ಜನಿವಾರ ಹಾಕುವ ಸಮುದಾಯಗಳು ಜನಿವಾರವನ್ನು ಅಡಗಿಸಿಕೊಳ್ಳಬೇಕಿತ್ತು. ಜುಟ್ಟು ಬಿಟ್ಟವರ ಮೇಲೆಯೂ ದಾಳಿ ಹೆಚ್ಚಾಗುತ್ತಹೋಯಿತು. 1868ರಲ್ಲಿ ಲಿಸ್ಬೋವಾದಲ್ಲಿ ಪ್ರಕಟವಾದ ಪೋರ್ತುಗೀಸ್ ಭಾಷೆಯ “Subsidios para a Historia da India Portuguesa” (ಲೇಖಕ: ಆರ್.ಜೆ.ಡೇ ಲಿಮಾ ಫೆಲ್ನರ್ : ಪುಟಗಳು 58, 62 ಇತ್ಯಾದಿ) ಗ್ರಂಥದಲ್ಲಿ ಗೋವಾ ಹಿಂದೂಗಳ ಮೇಲಾಗುತ್ತಿದ್ದ ಬೀಭತ್ಸ ಹಿಂಸೆಯ ವಿವರಗಳಿವೆ.

ಎಸ್.ಜೆ.ಸೆಬಾಸ್ಟಿಯೋ ಫರ್ನಾಂಡಿಸ್ ಎಂಬವನು ಬರೆದ ಪತ್ರವೊಂದರಲ್ಲಿ ಕೆಲವು ಭಯಾನಕ ವಿವರಗಳಿವೆ: “ಹಿಂಸೆ ತಾಳಲಾರದೆ ಹಿಂದೂವೊಬ್ಬ ಕೊನೆಗೊಮ್ಮೆ ಬಲವಂತದ ಮತಾಂತರಕ್ಕೆ ಒಪ್ಪಿದರೆ, ಬ್ಯಾಪ್ಟೈಸಾಗಲು ಸಿದ್ಧನಾದರೆ ಜೆಸ್ಯೂಟ್ ಬ್ರದರ್ ಒಬ್ಬ ತಕ್ಷಣವೇ ಅವನ ಜುಟ್ಟು ಕತ್ತರಿಸುತ್ತಾನೆ. ಮರವೊಂದಕ್ಕೆ ಆ ಜುಟ್ಟನ್ನು ನೇತುಹಾಕಲಾಗುತ್ತದೆ. ಅಲ್ಲಿ ಸೇರಿದ ಕ್ರೈಸ್ತ ಯುವಕರೆಲ್ಲಾ ಆ ಜುಟ್ಟಿಗೆ ಉಗಿಯುತ್ತಾರೆ, ಆ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾರೆ, ಕುಣಿದು ಸಂಭ್ರಮಿಸುತ್ತಾರೆ. ಎಲ್ಲ ಸೇರಿ ಹಿಂದೂ ದೇವತೆಗಳಿಗೆ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಾರೆ, ಬೈಯುತ್ತಾರೆ. ಮುಗ್ಧರಾದ ನಾವು ಇಂತಹುದನ್ನು ನಂಬುವುದು ಕಷ್ಟ. ಪೋರ್ತುಗಲ್ ನ ಕಿಂಗ್-ಗೆ, ಅಂದಿನ ಗೋವಾದ ಚೀಫ್ ರೆವಿನ್ಯೂ ಕಮ್ ಟ್ರೋಲರ್ (Comptroller) ಆಗಿದ್ದ ಸಿಮಾವ್ ಬೊಟೆಲ್ಹೋ ಬರೆದ ಪತ್ರದಲ್ಲಿಯೂ ಇಂತಹ ಅಮಾನುಷ ರಾಕ್ಷಸೀ ವ್ಯವಹಾರಗಳ ಚಿತ್ರಣವಿದೆ. “ಅವಹೇಳನ, ಶಿಕ್ಷೆ, ಹಿಂಸೆಗಳಿಗೆ ಸಾಕಾಗಿಹೋದ ಹಿಂದೂಗಳು ಬ್ಯಾಪ್ಟೈಸಾಗಲು ಒಪ್ಪಿದ ಕೂಡಲೇ, ಅವರೆಲ್ಲರ ತಲೆಯನ್ನು ಬೋಳಿಸಲಾಗುತ್ತದೆ. ವಿಗ್ರಹಾರಾಧನೆಯ ಅಪರಾಧಕ್ಕೆ ಆ ಎಲ್ಲ ಹಿಂದೂಗಳಿಗೆ ಗೋಮಾಂಸವನ್ನು ಒತ್ತಾಯಪೂರ್ವಕವಾಗಿ ತಿನ್ನಿಸಲಾಗುತ್ತದೆ” ಎಂಬ ವಿವರಗಳು ಈ ಪತ್ರದಲ್ಲಿವೆ.

ನಮ್ಮ ಪಠ್ಯಪುಸ್ತಕಗಳಲ್ಲಿ “ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ” ಎಂಬ ಸಾಲುಗಳನ್ನೇ ನಾವೆಲ್ಲಾ ಹಿಂದೆ ಓದಿದ್ದುಂಟು. ಹತ್ತಾರು ಸಾವಿರ ವರ್ಷಗಳ ಸಮೃದ್ಧ ಇತಿಹಾಸದ ಭಾರತವನ್ನು ಈತ ಕಂಡುಹಿಡಿದನಂತೆ! ಆತ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು 1498ರಲ್ಲಿ. ಕ್ರೈಸ್ತ ಕ್ರೌರ್ಯ ಪರಂಪರೆಯ ಅವನ ಮತ್ತು ಪೋರ್ತುಗೀಸರ ಅನ್ಯಾಯ, ಅತ್ಯಾಚಾರಗಳಿಗೆ ಅಂಕೆಯೇ ಇರಲಿಲ್ಲ. ಹೀಗಿದ್ದೂ ನಮ್ಮಲ್ಲಿ ಎಂತಹ ದೇಶದ್ರೋಹಿಗಳು, ವಂಚಕರು, ಸಮಯಸಾಧಕರು ಇದ್ದಾರೆ ಎಂದರೆ, 1998ರಲ್ಲಿ ಈ ವಾಸ್ಕೋ ಡ ಗಾಮಾನ ಭಾರತ ಭೇಟಿಯ 500 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿತ್ತು. ಜನರು ಥೂ ಎಂದು ಹೀನಾಮಾನವಾಗಿ ಉಗಿದ ಮೇಲೆ, ಈ “ಆಚರಣೆ” ರದ್ದಾಯಿತು. ನಾವು ಸ್ವಾಭಿಮಾನ ಶೂನ್ಯರಾದರೆ, ನಮ್ಮ ಅಸ್ಮಿತೆಯನ್ನೇ ಮರೆತರೆ, ಶತ್ರುಗಳನ್ನು – ಆಕ್ರಮಣಕಾರಿ ರಿಲಿಜನ್ನಿನವರನ್ನೇ ಆರಾಧಿಸಲು ತೊಡಗಿದರೆ, ಭಾರತ-ಶತ್ರುಗಳನ್ನು ಅರ್ಥ ಮಾಡಿಕೊಳ್ಳದೇಹೋದರೆ, ಮತ್ತೆ ಪರಾಕ್ರಾಂತರಾಗುತ್ತೇವೆ. ಎಚ್ಚೆತ್ತುಕೊಳ್ಳದೇ ಹೋದರೆ ಈ ಬಾರಿ ಹೇಳಹೆಸರಿಲ್ಲದಂತಾಗುತ್ತೇವೆ.

ಎಚ್ಚರ, ಜಾಗೃತಿ, ಸ್ವರಕ್ಷಣೆಗಳು ನಮ್ಮ ಕಣ್ಣು ತೆರೆಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಪರ್ಣಾ ಅಕ್ಕ, ಹೋಗಿ ಬನ್ನಿ…

ರಾಜಮಾರ್ಗ ಅಂಕಣ: ಅಕ್ಕ ಇದ್ದದ್ದೇ ಹಾಗೆ! ಅದೇ ಪಾಸಿಟಿವ್ ಸೌಲ್. ಯಾವ ನೋವಿದ್ದರೂ ನಗು ಮತ್ತು ನಗು ಮಾತ್ರ. ಬಿಗ್ ಬಾಸ್ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಅದು ನಿಮಗೆ ಸೂಟ್ ಆಗೋದಿಲ್ಲ ಅಕ್ಕ ಎಂದು ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು ಒಂದು ನಗುವ ಇಮೋಜಿ ಹಾಕಿದ್ದರು.

VISTARANEWS.COM


on

ರಾಜಮಾರ್ಗ ಅಂಕಣ Anchor Aparna
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕನ್ನಡದ ನಿರೂಪಣಾ ಕ್ಷೇತ್ರದ ಲೆಜೆಂಡ್ ಇವತ್ತು ನಮ್ಮನ್ನೆಲ್ಲ ದುಃಖದ ಕಡಲಲ್ಲಿ ಮುಳುಗಿಸಿ ನಿರ್ಗಮಿಸಿದ್ದಾರೆ. ಅಲ್ಪ ಕಾಲದ ಅನಾರೋಗ್ಯ ಅವರನ್ನು ಸೆಳೆದುಕೊಂಡು ಹೋಗಿದೆ ಎಂದರೆ ನನಗೆ ನಂಬಲು ಕಷ್ಟವಾಗುತ್ತಿದೆ.

1983ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ʼಮಸಣದ ಹೂವು’ ಸಿನೆಮಾದ ಕಥಾನಾಯಕಿ ಆಗಿ ಅವರು ನಾಡಿಗೆ ಪರಿಚಿತರಾದರು. ಮುಂದೆ ಹಲವಾರು ಸಿನೆಮಾಗಳಲ್ಲಿ ಅವರ ಪ್ರತಿಭೆ ಪ್ರಕಾಶನಕ್ಕೆ ಬಂದಿತು. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ಅನಂತನಾಗ್ ಮಗಳಾಗಿ ಅಪರ್ಣಾ ಭಾರೀ ಮಿಂಚಿದರು.

ಆದರೆ ಮುಂದೆ ಅವರಾಗಿ ಆರಿಸಿಕೊಂಡದ್ದು ನಿರೂಪಣಾ ಕ್ಷೇತ್ರವನ್ನು. ಯಾವುದೇ ವೇದಿಕೆಯ ಕಾರ್ಯಕ್ರಮದ ನಿರೂಪಣೆಗೆ ಅಪರ್ಣಾ ಇದ್ದಾರೆ ಎಂದರೆ ಯಶಸ್ಸು ನೂರಕ್ಕೆ ನೂರು ನಿಶ್ಚಿತ ಅನ್ನುವ ನಂಬಿಕೆಯು ಎಂದಿಗೂ ಸುಳ್ಳಾದ ನಿದರ್ಶನವೇ ಇಲ್ಲ ಎನ್ನಬಹುದು. ಅದು ರಾಜಕೀಯ, ಧಾರ್ಮಿಕ, ಸಾಹಿತ್ಯಿಕ, ಪುಸ್ತಕ ಬಿಡುಗಡೆ, ಭಾವಗೀತೆಗಳ ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಅಪರ್ಣಾ ಇರಲೇ ಬೇಕು ಎನ್ನುವ ಮಾತು ಜನಜನಿತ ಆಗಿತ್ತು. ಪ್ರತೀಯೊಂದು ಕಾರ್ಯಕ್ರಮಕ್ಕೂ ಆಕೆಯು ಚಂದವಾದ ಸಿದ್ಧತೆ ಮಾಡದೇ ವೇದಿಕೆ ಏರುತ್ತಲೇ ಇರಲಿಲ್ಲ.

ನವಿರಾದ ಮತ್ತು ಸಾಹಿತ್ಯಿಕವಾದ ಕನ್ನಡ, ಪ್ರೌಢವಾದ ಮತ್ತು ಸುಲಲಿತ ಭಾಷೆ, ಸ್ಪಷ್ಟವಾದ ಉಚ್ಛಾರ ಸಮೀಚೀನ ಪದಗಳ ಬಳಕೆ, ಆಳವಾದ ಧ್ವನಿ, ನಿರರ್ಗಳತೆ ಮತ್ತು ಭಾವನಾತ್ಮಕ ಟಚ್ ಇವುಗಳು ಕೇವಲ ಅಪರ್ಣಾ ಅವರ ಬ್ರ್ಯಾಂಡ್‌ಗಳು. ನಿರಂತರವಾಗಿ 12 ಘಂಟೆಗಳ ಒಂದು ವೇದಿಕೆಯ ಕಾರ್ಯಕ್ರಮವನ್ನು ವಿರಾಮವೇ ಇಲ್ಲದೆ ನಿರೂಪಣೆ ಮಾಡಿದ ದಾಖಲೆಯು ಅವರ ಹೆಸರಲ್ಲಿ ಇದೆ.

ದೂರದರ್ಶನದ ಸಾವಿರಾರು ಕಾರ್ಯಕ್ರಮಗಳ ನಿರೂಪಣೆ, ವಾಯ್ಸ್ ಒವರ್ ಗಳು, ಸ್ಕ್ರಿಪ್ಟಗಳು ಅವರ ಅಗಾಧವಾದ ಪ್ರತಿಭೆಯ ಎರಕಗಳೇ ಆಗಿವೆ. ಅವರು ತುಂಬಾ ಪುಸ್ತಕ ಓದುತ್ತಿದ್ದರು. ಓದುವ ಅಭ್ಯಾಸ ಅಪ್ಪನ ಮೂಲಕ ಬಂದಿತು ಎಂದು ಅವರು ಹೇಳುತ್ತಿದ್ದರು.

ಅವರ ಜೊತೆಗೆ ಹಲವಾರು ವೇದಿಕೆಯ ನಿರೂಪಣೆಯ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಹಂಚಿಕೊಂಡ ಭಾಗ್ಯ ನನ್ನದು. ನಾನವರನ್ನು ಅಕ್ಕಾ ಎಂದೇ ಕರೆಯುವುದು. ಅವರು ತಮ್ಮ ಎಂದು ನನ್ನನ್ನು ಕರೆದರೆ ನನಗೆ ಖುಷಿ.

ನಾಲ್ಕು ವರ್ಷಗಳ ಹಿಂದೆ ಅವರ ಬಗ್ಗೆ ‘ಇಂದಿನ ಐಕಾನ್’ ಸರಣಿಯಲ್ಲಿ ಲೇಖನ ಬರೆದಿದ್ದೆ. ಅದು ಯಾರೋ ಅವರ ಗೆಳೆಯರ ಮೂಲಕ ಅವರಿಗೆ ತಲುಪಿತ್ತು. ಆಗ ಅವರೇ ಫೋನ್ ಮಾಡಿ ಮೆಚ್ಚುಗೆ ಹೇಳಿ ಥ್ಯಾಂಕ್ಸ್ ಎಂದಿದ್ದರು. ಅದರ ನಂತರವೂ ನನ್ನ ಹಲವಾರು ಲೇಖನ ವಾಟ್ಸಾಪ್ ಮೂಲಕ ಅವರಿಗೆ ತಲುಪಿದಾಗ ತುಂಬಾ ಚಂದ ಬರಿತೀರಿ ಎಂದೆಲ್ಲ ಬೆನ್ನು ತಟ್ಟುವ ಮಾತು.

ಅಕ್ಕ ಇದ್ದದ್ದೇ ಹಾಗೆ! ಅದೇ ಪಾಸಿಟಿವ್ ಸೌಲ್. ಯಾವ ನೋವಿದ್ದರೂ ನಗು ಮತ್ತು ನಗು ಮಾತ್ರ. ಬಿಗ್ ಬಾಸ್ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಅದು ನಿಮಗೆ ಸೂಟ್ ಆಗೋದಿಲ್ಲ ಅಕ್ಕ ಎಂದು ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು ಒಂದು ನಗುವ ಇಮೋಜಿ ಹಾಕಿದ್ದರು.

ಅಪರ್ಣಾ ಅಕ್ಕ ಇಂದು ನಿರ್ಗಮಿಸಿದ ಸುದ್ದಿ ಬಂದಿದೆ. ಇಡೀ ನಾಡಿಗೆ ಅದು ಶಾಕಿಂಗ್. ಯಾಕೆಂದರೆ ನಿರೂಪಣೆಯ ಕ್ಷೇತ್ರಕ್ಕೆ ಆಕೆ ಒಂದು ಲೆಜೆಂಡ್. ಈ ಸುದ್ದಿಯು ಸುಳ್ಳಾಗಲಿ ದೇವರೇ ಎಂದು ಈಗಲೂ ಒಳಮನಸ್ಸು ಹೇಳುತ್ತ ಇದೆ.

ಅಪರ್ಣ ಒಳ್ಳೆಯ ಅಕ್ಕ. ಹೋಗಿ ಬನ್ನಿ ಅಕ್ಕ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿವಾಹ ವಿಚ್ಛೇದನ ಮತ್ತು ಭಾರತೀಯ ಸಮಾಜ

Continue Reading

ಅಂಕಣ

ರಾಜಮಾರ್ಗ ಅಂಕಣ: ವಿವಾಹ ವಿಚ್ಛೇದನ ಮತ್ತು ಭಾರತೀಯ ಸಮಾಜ

ರಾಜಮಾರ್ಗ ಅಂಕಣ: ಬ್ರಿಟಿಷರು ಭಾರತಕ್ಕೆ ಕೊಟ್ಟು ಹೋದ ವಿಷಫಲಗಳಲ್ಲಿ ಈ ವಿಚ್ಛೇದನದ ಕಾನೂನು ಕೂಡ ಒಂದು. ಮದುವೆಯಾಗಿ ಮೊದಲ ರಾತ್ರಿಯಲ್ಲಿ ಗಂಡನಿಂದ ವಿಚ್ಛೇದನ ಬಯಸುವ ಹುಡುಗಿಯರೂ ಇದ್ದಾರೆ (ಮಿಲನ ಸಿನೆಮಾ ನೆನಪಾಯಿತಾ?). ಇಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಸಮಾನ ಅಪರಾಧಿಗಳು.

VISTARANEWS.COM


on

ರಾಜಮಾರ್ಗ ಅಂಕಣ divorce
Koo

ಆ ಮಾಡರ್ನ್ ಹುಡುಗಿಯ ಮಾತು ಕೇಳಿ ನಾನು ಟಿವಿ ಸ್ಟುಡಿಯೋದಲ್ಲಿ ಬೆವತಿದ್ದೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಹತ್ತು ವರ್ಷಗಳ ಹಿಂದೆ ನನ್ನ ಟಿವಿ ಡಿಬೇಟಿಗೆ (TV Debate) ಬಂದಿದ್ದ ಒಬ್ಬಳು ಮಾಡರ್ನ್ ಹುಡುಗಿ ʼಡೈವೋರ್ಸ್ (Divorce) ಅನ್ನೋದು ಸ್ತ್ರೀ ಸ್ವಾತಂತ್ರ್ಯದ (Woman freedom) ಪ್ರತೀಕ’ ಎಂದಿದ್ದಳು! ಆಕೆಯ ಮಾತಿನ ವರಸೆ ನೋಡಿ ನಾನು ಹವಾನಿಯಂತ್ರಿತ ಸ್ಟುಡಿಯೋ ಒಳಗೆ ಬೆವರಲು ಆರಂಭಿಸಿದ್ದೆ.

ಅಲ್ಲಿಗೇ ಅವಳ ವಾದವು ನಿಲ್ಲಲಿಲ್ಲ. ʼಈ ಕೆಲವು ಸಿನೆಮಾ ತಾರೆಯರ ಖಾಸಗಿ ಬದುಕು ಇಷ್ಟೊಂದು ಯಾಕೆ ಬರ್ಬಾದ್ ಆಗಿರುತ್ತದೆ?’ ಎಂದು ನಾನು ಕೇಳಿದಾಗ ಅವಳು ಹೇಳಿದ್ದು ʼಅದು ಅವರವರ ಖಾಸಗಿ ಬದುಕು ಸರ್, ನಾವದನ್ನು ಪ್ರಶ್ನೆ ಮಾಡಲು ಹೋಗಬಾರದು’ ಎಂದಿದ್ದಳು! (ಈಗ ಪ್ರತೀ ದಿನವೂ ಒಂದಲ್ಲ ಒಂದು ಸೆಲೆಬ್ರಿಟಿ ದಂಪತಿಗಳ ವಿಚ್ಛೇದನದ (Celebrity divorce) ವರದಿಗಳು ಪತ್ರಿಕೆಯ ಹೆಡ್ ಲೈನ್ ಆಗಿ ಬರುತ್ತಿವೆ).

ಅದಕ್ಕೆ ಅವಳ ಬಳಿ ಸಮರ್ಥನೆ ಕೂಡ ಇತ್ತು!

ತನ್ನ ಹಣೆಯ ಮೇಲೆ ಒರಗುತ್ತಿದ್ದ ಮುಂಗುರುಳನ್ನು ಒಮ್ಮೆ ಎಡದಿಂದ ಬಲಕ್ಕೆ, ಮತ್ತೊಮ್ಮೆ ಬಲದಿಂದ ಎಡಕ್ಕೆ ಹಾರಿಸುತ್ತ ಆಕೆಯ ಮಾತು ಅಣೆಕಟ್ಟು ಒಡೆದ ನದಿಯ ಪ್ರವಾಹದಂತೆ ಮುಂದುವರೆಯಿತು. ಭಾರತದ ಮಹಾನಟ ಎಂದು ಕರೆಸಿಕೊಂಡ ಕಮಲಹಾಸನ್ ತಾನು ಎರಡು ಬಾರಿ ಮದುವೆ ಆದ ಹುಡುಗಿಯರಿಗೆ ಸೋಡಾ ಚೀಟಿ ಕೊಟ್ಟು ಇದೀಗ ಮೂರನೇ ಹುಡುಗಿಯ ಜೊತೆಗೆ ‘ಲಿವಿಂಗ್ ಇನ್ ರಿಲೇಶನ್ ‘ಮೆಂಟೇನ್ ಮಾಡ್ತಾ ಇದ್ದಾನೆ. ಅವನು ಹೇಳಿದ ಮಾತು ‘ನನಗೆ ಭಾರತೀಯ ಮದುವೆಗಳಲ್ಲಿ ನಂಬಿಕೆ ಇಲ್ಲ’ ಎಂದು!

ಅಪ್ಪನಂತೆ ಮಗಳು!

ಅದನ್ನು ಗಟ್ಟಿಯಾಗಿ ಅನುಸರಿಸಿದ ಅವನ ಮಗಳು ಶ್ರುತಿ ಹಾಸನ್ (ಆಕೆ ಕೂಡ ಪ್ರಸಿದ್ಧ ಸಿನೆಮಾ ನಟಿ) ನಾನು ಮದುವೆನೇ ಆಗೋದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದಾಳೆ! ಹೆಣ್ಣಿನ ಬದುಕಿಗೆ ಮದುವೆ ಆಕೆಯ ಪ್ರಕಾರ ಅನಿವಾರ್ಯ ಅಲ್ಲವಂತೆ! ಅದೇ ಶ್ರುತಿ ಹಾಸನ್ ಮೂರು ಮೂರು ತಿಂಗಳಿಗೆ ಒಬ್ಬೊಬ್ಬ ಹುಡುಗನ ಜೊತೆಗೆ ಡೇಟಿಂಗ್ ಮಾಡಿ ಚಾಪೆ ಎಸೆದ ಹಾಗೆ ಅವರನ್ನು ಮಡಚಿ ಎಸೆಯುತ್ತಿದ್ದಾಳೆ!

ಭಾರತೀಯ ಸಮಾಜವು ಇಂದು ಎತ್ತ ಸಾಗುತ್ತಿದೆ?

ಇವೆಲ್ಲವೂ ನನ್ನಂತಹ ಹಿರಿಯರಿಗೆ ಆತಂಕ ಕೊಡುವ ಸಂಗತಿಗಳು. ಬ್ರಿಟಿಷರು ಭಾರತಕ್ಕೆ ಕೊಟ್ಟು ಹೋದ ವಿಷಫಲಗಳಲ್ಲಿ ಈ ವಿಚ್ಛೇದನದ ಕಾನೂನು ಕೂಡ ಒಂದು. ನಮ್ಮ ಪಾಶ್ಚಿಮಾತ್ಯ ಅನುಕರಣೆಗಳು ಈ ಮಟ್ಟಕ್ಕೆ ಹೋಗಬಾರದಿತ್ತು ಎಂದು ನನಗೆ ಅನ್ನಿಸುತ್ತಿದೆ. ನನ್ನ ನ್ಯಾಯವಾದಿ ಗೆಳೆಯರೊಬ್ಬರು ಹೇಳುವಂತೆ ಡೈವೋರ್ಸ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದೆ. ಅವರೆಲ್ಲರೂ ಸುಶಿಕ್ಷಿತರು ಮತ್ತು ಸುಸಂಸ್ಕೃತ ಕುಟುಂಬಗಳಿಂದ ಬಂದವರು! ಹೆಚ್ಚಿನವರು ನಗರ ಪ್ರದೇಶಗಳಿಂದ ಬಂದವರು. ನನ್ನ ಆತಂಕ ಏನೆಂದರೆ ಅವರಲ್ಲಿ ಹೆಚ್ಚಿನವರು ಇನ್ನೂ ಸಣ್ಣ ಪ್ರಾಯದವರು. ಹೆಚ್ಚಿನವರು ಮದುವೆ ಆಗಿ ಒಂದು ವರ್ಷದ ಒಳಗೆ ವಿಚ್ಛೇದನಕ್ಕೆ ಅರ್ಜಿ ಹಾಕ್ತಾ ಇದ್ದಾರೆ! ಮದುವೆಯಾಗಿ ಮೊದಲ ರಾತ್ರಿಯಲ್ಲಿ ಗಂಡನಿಂದ ವಿಚ್ಛೇದನ ಬಯಸುವ ಹುಡುಗಿಯರೂ ಇದ್ದಾರೆ (ಮಿಲನ ಸಿನೆಮಾ ನೆನಪಾಯಿತಾ?). ಇಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಸಮಾನ ಅಪರಾಧಿಗಳು.

ಇಲ್ಲಿ ವಿಚ್ಛೇದನಕ್ಕೆ ಹುಡುಗ ಅಥವಾ ಹುಡುಗಿ ಕೊಡುವ ಕಾರಣಗಳೂ ಕೆಲವೊಮ್ಮೆ ತುಂಬಾ ಸಿಲ್ಲಿ ಎಂದು ನನಗೆ ಅನ್ನಿಸುತ್ತದೆ.

viral news divorce

ವಿಚ್ಛೇದನಕ್ಕೆ ಅವರು ಕೊಡುವ ಸಿಲ್ಲಿ ಕಾರಣಗಳ ಸ್ಯಾಂಪಲ್ ಇಲ್ಲಿವೆ.

1) ಗಂಡ ತನ್ನ ತಾಯಿಯ ಜೊತೆ ತುಂಬಾ ಅನ್ಯೋನ್ಯ ಆಗಿದ್ದಾನೆ ಮತ್ತು ಎಲ್ಲಾ ವಿಷಯಗಳನ್ನು ಅಮ್ಮನ ಜೊತೆ ಶೇರ್ ಮಾಡುತ್ತಾನೆ.

2) ಹೆಂಡತಿಯ ತಂದೆ, ತಾಯಿ ಪದೇ ಪದೇ ಅವರ ಮನೆಗೆ ಭೇಟಿ ಕೊಡುತ್ತಾರೆ ಮತ್ತು ಆಕೆಯ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಾರೆ.

3) ಮದುವೆಗೆ ಮೊದಲು ಹೆಂಡತಿಗೆ (ಗಂಡನಿಗೂ) ಒಂದು ಅಫೇರ್ ಇತ್ತು ಮತ್ತು ಅದನ್ನು ಅವರು ಮುಚ್ಚಿಟ್ಟಿದ್ದಾರೆ.

4) ಹೆಂಡತಿ (ಕೆಲವೊಮ್ಮೆ ಗಂಡ ಕೂಡ) ತನ್ನ ಕಲೀಗ್ಸ್ ಜೊತೆ ತುಂಬಾ ಸಲಿಗೆಯಿಂದ ಇದ್ದಾರೆ.

5) ಮದುವೆ ಆದ ನಂತರ ಹೆಂಡತಿಗೆ ಮೂರು ಪ್ರಮೋಶನ್ ಸಿಕ್ಕಿವೆ. ಗಂಡನಿಗೆ ಒಂದೂ ಸಿಕ್ಕಿಲ್ಲ!

6) ಗಂಡನಿಗೆ ನಿದ್ದೆಯಲ್ಲಿ ಗೊರಕೆ ಹೊಡೆಯುವ ಅಭ್ಯಾಸ ಇದೆ.

7) ಹೆಂಡತಿ ವಿಪರೀತ ಖರ್ಚು ಮಾಡುತ್ತಾಳೆ.

8) ಗಂಡನಿಗೆ ಅಡುಗೆ ಮಾಡಲು ಬರೋದಿಲ್ಲ. ಎಲ್ಲವನ್ನೂ ನಾನೇ ಮಾಡಬೇಕು.

9) ಗಂಡ ಅಥವಾ ಹೆಂಡತಿ ನನ್ನ ಖಾಸಗಿ ಬದುಕಿನಲ್ಲಿ ಅತಿಯಾಗಿ ಮೂಗು ತೂರಿಸುತ್ತಾರೆ.

10) ಗಂಡ (ಅಥವಾ ಹೆಂಡತಿ) ಮಾಡರ್ನ್ ಇಲ್ಲ. ಹಳ್ಳಿ ಗುಗ್ಗು ತರ ಬಿಹೇವ್ ಮಾಡ್ತಾರೆ.

11) ಗಂಡ ನನ್ನ ಗಮನಕ್ಕೆ ಬಾರದೇ ಯಾರಿಗೋ ಸಾಲ ಕೊಟ್ಟಿದ್ದಾನೆ.

12) ಅವಳಿಗೆ ದುರಹಂಕಾರ ಜಾಸ್ತಿ. ಪ್ರತಿಯೊಂದಕ್ಕೂ ಎದುರು ಮಾತಾಡುತ್ತಾಳೆ!

13) ಹೆಂಡತಿ ಗಂಡನ ಮನೆಯ ಎಲ್ಲ ಸಂಗತಿಗಳನ್ನು ತನ್ನ ತಾಯಿ ಮನೆಗೆ ಫೋನ್ ಮೂಲಕ ರವಾನೆ ಮಾಡುತ್ತಾಳೆ!

ವಿಚ್ಚೇದನದ ಅರ್ಜಿಗಳನ್ನು ಜಾಲಾಡಿದಾಗ ಇಂತಹ ಅನೇಕ ಸಿಲ್ಲಿ ಕಾರಣಗಳು ಸಿಗುತ್ತವೆ. ಗಂಡ (ಅಥವಾ ಹೆಂಡತಿ) ಪಾರ್ಟಿಗೆ ಬರೋದಿಲ್ಲ, ಡ್ರಿಂಕ್ಸ್ ತೆಗೆದುಕೊಳ್ಳೋದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದ ಅನೇಕ ದಂಪತಿಗಳು ನನ್ನ ಆಪ್ತ ವಲಯದಲ್ಲಿ ಇದ್ದಾರೆ!

ಅವರು ಮುಂದೊಡ್ಡುವ ಯಾವ ಸಮಸ್ಯೆಗಳು ಪರಿಹಾರ ಆಗದ ಸಮಸ್ಯೆಗಳು ಅಲ್ಲ. ಯಾವ ಭಿನ್ನಮತವನ್ನು ಎದುರೆದುರು ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ ಪರಿಹಾರ ಮಾಡಿಕೊಳ್ಳಬಹುದು. ಕೌನ್ಸೆಲಿಂಗ್ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬಹುದು. ಸಣ್ಣ ಪುಟ್ಟ ತಪ್ಪುಗಳಾದಾಗ ಸಹಜವಾದ ಭಾವನೆಗಳಿಂದ ಸಾರಿ ಕಣೇ (ಅಥವಾ ಸಾರಿ ಕಣೋ) ಅಂದರೆ ಇಬ್ಬರೂ ಕರಗಿಬಿಡುತ್ತಾರೆ.

ಇಲ್ಲಿ ಇಬ್ಬರೂ ಒಂದೆಳೆ ಕಾಂಪ್ರೋ ಆಗಬೇಕು ಅಷ್ಟೇ!

ಮೊದಲು ಎಗರಾಡಿದ್ದು ಅವಳೇ, ಅವಳು ಬಂದು ಸಾರಿ ಕೇಳಬೇಕು ಎಂದು ಗಂಡ ಹಟ ಹಿಡಿಯುವುದರಿಂದ ಅಥವಾ ಅವನೇ ಬಂದು ಮಾತಾಡಿಸಲಿ ಎಂದು ಹೆಂಡತಿ ಹಟ ಹಿಡಿಯುವುದರಿಂದ ಸಂಬಂಧಗಳು ಕೆಡುತ್ತವೆ.

ಅತಿಯಾದ ಹಿಂಸೆ, ಲೈಂಗಿಕ ಅಸಾಮರ್ಥ್ಯ, ಹೊಂದಾಣಿಕೆಯ ಕೊರತೆ, ವ್ಯಸನಗಳು, ಗುಣಪಡಿಸಲು ಆಗದ ಕಾಯಿಲೆಗಳು…ಮೊದಲಾದ ಕಾರಣಕ್ಕೆ ವಿಚ್ಛೇದನ ಪಡೆದರೆ ಅದನ್ನು ಒಪ್ಪಿಕೊಳ್ಳಬಹುದು. ವಿಚ್ಛೇದನ ಪಡೆದವರು ಮತ್ತೆ ಬೇರೆ ಮದುವೆ ಆಗಿ ಸುಖವಾಗಿರುವುದು ಕೂಡ ಸಂತಸದ ವಿಷಯ. ಆದರೆ ಸಣ್ಣ ಸಣ್ಣ ಕಾರಣಕ್ಕೆ ಎಲ್ಲರೂ ವಿಚ್ಛೇದನದ ಮೊರೆ ಹೋದರೆ ಭಾರತೀಯ ಸಮಾಜವು ಹೇಗಿರಬಹುದು?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

Continue Reading
Advertisement
Virat kohli
ಪ್ರಮುಖ ಸುದ್ದಿ18 mins ago

Virat Kohli : ವಿರಾಟ್​ ಕೊಹ್ಲಿಯನ್ನು ಅವಮಾನಿಸಿದ ಅಮಿತ್​ ಮಿಶ್ರಾ ಬೆಂಡೆತ್ತಿದ ಯಶ್​ ದಯಾಳ್​

PM Narendra Modi
ದೇಶ19 mins ago

PM Narendra Modi: ಚುನಾವಣೆಯಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ರಾ ಮೋದಿ? ನಾಳೆ ಕಾರ್ಯಕರ್ತರ ದಿಢೀರ್ ಸಭೆ?

Jay Shah
ಪ್ರಮುಖ ಸುದ್ದಿ39 mins ago

Jay Shah : ಜಯ್​ ಶಾ ಮುಂದಿನ ಐಸಿಸಿ ಅಧ್ಯಕ್ಷ; ಕೊಲೊಂಬೊ ಸಭೆಯಲ್ಲಿ ತೀರ್ಮಾನ ಸಾಧ್ಯತೆ

Oil Tanker Capsizes
ವಿದೇಶ46 mins ago

Oil Tanker Capsizes:ತೈಲ ತುಂಬಿದ್ದ ಹಡಗು ಮುಳುಗಡೆ; ಕಣ್ಮರೆಯಾಗಿದ್ದ 8 ಭಾರತೀಯರು ಸೇರಿ ಒಟ್ಟು 9 ನಾವಿಕರ ರಕ್ಷಣೆ

ಪ್ರಮುಖ ಸುದ್ದಿ1 hour ago

Travel Influencer : ರೀಲ್ಸ್​ ಮಾಡುತ್ತಲೇ ಜಲಪಾತದ ಕಮರಿಗೆ ಬಿದ್ದು ಪ್ರಾಣಬಿಟ್ಟ 26 ವರ್ಷದ ಯುವತಿ

Viral Video
ವೈರಲ್ ನ್ಯೂಸ್1 hour ago

Viral Video: ಹೃದಯಾಘಾತದಿಂದ ಕೆಳಗ್ಗೆ ಬಿದ್ದು ಒದ್ದಾಡುತ್ತಿದ್ದವನ ಪಾಲಿಗೆ ದೇವರಂತೆ ಬಂದ್ಳು! ಈ ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್‌

Mosquitoes Bite
ಆರೋಗ್ಯ2 hours ago

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

Actress Hina Khan
Latest2 hours ago

Actress Hina Khan: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

Naxalites Killed
ದೇಶ2 hours ago

Naxalites Killed: 6 ಗಂಟೆ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 12 ನಕ್ಸಲರ ಎನ್‌ಕೌಂಟರ್

Walking Benefits
ಆರೋಗ್ಯ2 hours ago

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌