Dandruff remedies | ಚಳಿಗಾಲದ ತಲೆಹೊಟ್ಟಿನ ಸಮಸ್ಯೆಗೆ ನಮ್ಮಲ್ಲೇ ಇವೆ ಮನೆಮದ್ದುಗಳು! - Vistara News

ಆರೋಗ್ಯ

Dandruff remedies | ಚಳಿಗಾಲದ ತಲೆಹೊಟ್ಟಿನ ಸಮಸ್ಯೆಗೆ ನಮ್ಮಲ್ಲೇ ಇವೆ ಮನೆಮದ್ದುಗಳು!

ಚಳಿಗಾಲದಲ್ಲಿ ಹೆಚ್ಚಾಗಿ ಎಲ್ಲರೆದುರು ಮುಜುಗರಕ್ಕೀಡಾಗುವಂತೆ ಮಾಡುವ ಸಮಸ್ಯೆ ತಲೆಹೊಟ್ಟು. ಕೆಲವು ಸರಳ ಸುಲಭ ಮನೆಮದ್ದುಗಳ ಮೂಲಕ ಈ ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

VISTARANEWS.COM


on

dandruff remedies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲದಲ್ಲಿ ಬಹುತೇಕ ಎಲ್ಲರ ಸಾರ್ವತ್ರಿಕ ಸಮಸ್ಯೆ ಎಂದರೆ ಅದು ತಲೆಹೊಟ್ಟು. ಎಲ್ಲವೂ ಸರಿಯಿದೆ ಎನ್ನುವಾಗ ಚಳಿಗಾಲ ಬಂದ ಕೂಡಲೇ, ತಲೆಯಿಂದ ಪಕಳೆಗಳಂತೆ ಎದ್ದು, ಮೈಮೇಲೆ, ಹಾಕಿರುವ ಬಟ್ಟೆಯ ಹೆಗಲಲ್ಲಿ ಹುಡಿಹುಡಿಯಾಗಿ ಚೆಲ್ಲಿಕೊಂಡು ಎಲ್ಲರೆದುರು ಮುಜುಗರಕ್ಕೀಡಾಗುವಂತೆ ಮಾಡುವ ಸಮಸ್ಯೆಯಿದು. ಹೇಳಿಕೊಳ್ಳುವ ದೊಡ್ಡ ಸಮಸ್ಯೆ ಇದಲ್ಲದಿದ್ದರೂ, ಹೇಳಿಕೊಳ್ಳಲಾಗದ ಸಮಸ್ಯೆಯೂ ಹೌದು. ಎಷ್ಟೇ ಎಣ್ಣೆ ಹಚ್ಚಿದರೂ, ಎಣ್ಣೆ ಹಚ್ಚಿ ಸ್ನಾನ ಮಾಡಿದರೂ ಎರಡು ದಿನ ಕಳೆದು ಮೂರನೇ ದಿನದಲ್ಲಿ ಮತ್ತೆ ವಕ್ಕರಿಸುವ, ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಎಂಬ ಸಮಸ್ಯೆಯಿದು. ಚಳಿಗಾಲವೇ ಹಾಗೆ. ಬಿಸಿಬಿಸಿ ನೀರು ಹೊಯ್ದುಕೊಳ್ಳುವಂತಹ ನಮ್ಮ ಸಾಮಾನ್ಯ ನಿತ್ಯದ ದಿನಚರಿಯಿಂದಾಗಿ ಚರ್ಮ ಇನ್ನಷ್ಟು ತನ್ನ ಅವಶ್ಯಕ ಎಣ್ಣೆಯಂಶವನ್ನೂ ನೀರಿನಂಶವನ್ನೂ ಕಳೆದುಕೊಂಡು ಶುಷ್ಕವಾಗಿ ಇಂಥ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಕೆಲವು ಸರಳ ಸುಲಭ ಮನೆಮದ್ದುಗಳ ಮೂಲಕ ಈ ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಅವುಗಳ ವಿವರ ಇಲ್ಲಿದೆ.

೧. ಕಹಿಬೇವಿನ ಪುಡಿ: ಕಹಿಬೇವು ತಲೆಹೊಟ್ಟಿಗೆ ಒಳ್ಳೆಯ ಮದ್ದು. ಇದು ತಲೆಯ ಬುಡವನ್ನು ಸ್ವಚ್ಛ ಮಾಡಿ, ಕೂದಲು ಬೆಳೆಯಲು ಉದ್ದೀಪಿಸುತ್ತದೆ. ಕಹಿಬೇವಿನ ಪುಡಿಯನ್ನು ಮೊಸರಿನಲ್ಲಿ ಕಲಸಿ ತಲೆಗೆ ಹಚ್ಚುವ ಮೂಲಕ ಅಥವಾ ಕಹಿಬೇವಿನೆಣ್ಣೆಯನ್ನು, ಬಾದಾಮಿ ಅಥವಾ ತೆಂಗಿನೆಣ್ಣೆಯ ಜೊತೆಗೆ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಮಸಾಜ್‌ ಮಾಡಿ, ಆಯುರ್ವೇದಯುಕ್ತ ಶಾಂಪೂನಿಂದ ತಲೆಯನ್ನು ತೊಳೆಯುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಕಾಣಬಹುದು. ವಾರದಲ್ಲೆರಡು ಬಾರಿ ಹೀಗೆ ಮಾಡಬಹುದು.

೨. ನೆಲ್ಲಿಕಾಯಿ ಪುಡಿ: ನೆಲ್ಲಿಕಾಯಿ ತಲೆಕೂದಲ ಸಮಸ್ಯೆಗಳಿಗೆ ಅನಾದಿಕಾಲದಿಂದಲೂ ನಮ್ಮ ಪೂರ್ವಜರು ಕಂಡುಕೊಂಡ ಅತ್ಯುತ್ತಮ ಮನೆಮದ್ದು. ವಿಟಮಿನ್‌ ಸಿಯಿಂದ ಸಮೃದ್ಧವಾಗಿರುವ ಇದು ತಲೆಹೊಟ್ಟಿಗೆ ರಾಮಬಾಣ. ತಲೆಹೊಟ್ಟಿನ ಸಮಸ್ಯೆಗೆಂದೇ ನೆಲ್ಲಿಕಾಯಿ ಪುಡಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪುಡಿಯನ್ನು ಮೊಸರಿನೊಂದಿಗೆ ಕಲಸಿಕೊಂಡು ತಲೆಯ ಬುಡಕ್ಕೆ ಹಚ್ಚಿ ಒಂದರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡುವ ಮೂಲಕ ಪರಿಹಾರ ಕಾಣಬಹುದು. ನೆಲ್ಲಿಕಾಯಿಯನ್ನು ಬಳಸಿ ಮಾಡಲಾದ ಎಣ್ಣೆಯಿಂದ ತಲೆಗೆ ಮಸಾಜ್‌ ಕೂಡಾ ಮಾಡಬಹುದು.

ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

೪. ಟೀಟ್ರೀ ಎಣ್ಣೆ: ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಮೊಡವೆ ಹಾಗೂ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳಿಗೆ ಟೀಟ್ರೀ ಎಣ್ಣೆ ಅತ್ಯುತ್ತಮ ಪರಿಹಾರವಾಗಿ ಬಳಸುತ್ತಿದ್ದರು. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳಿದ್ದು ಇದು ತಲೆಹೊಟ್ಟಿನ ಸಮಸ್ಯೆಗೂ ಅತ್ಯುತ್ತಮ ಪರಿಹಾರ.

೪. ತೆಂಗಿನೆಣ್ಣೆ: ನಾವು ಮನೆಗಳಲ್ಲಿ ಹೆಚ್ಚಾಗಿ ತಲೆಕೂದಲಿಗೆ ಬಳಸುವ ತೆಂಗಿನೆಣ್ಣೆಯನ್ನು ಚಳಿಗಾಲದಲ್ಲೂ ನಿತ್ಯ ಬಳಕೆ ಮಾಡುತ್ತಿದ್ದರೆ, ತಲೆಹೊಟ್ಟಿನಂತಹ ಸಮಸ್ಯೆಗಳು ಎಂದೂ ಬರದು. ತಲೆಗೆ ಸ್ನಾನ ಮಾಡುವ ಒಂದರಡು ಗಂಟೆ ಮೊದಲು ತೆಂಗಿನೆಣ್ಣೆಯಿಂದ ಮಸಾಜ್‌ ಮಾಡಿಕೊಂಡು ಸ್ನಾನ ಮಾಡಿದರೆ ಕೂದಲಿಗೆ ಸಿಗಬೇಕಾದ ಎಣ್ಣೆಯಂಶ ಸರಿಯಾದ ಪ್ರಮಾಣದಲ್ಲಿ ಸಿಕ್ಕಿ ತಲೆಹೊಟ್ಟು ಕಡಿಮೆಯಾಗುತ್ತದೆ. ತೆಂಗಿನೆಣ್ಣೆ ಅತ್ಯುತ್ತಮ ಮಾಯ್‌ಶ್ಚರೈಸರ್‌ ಕೂಡಾ ಹೌದು. ಎಕ್ಸೀಮಾದಂತಹ ಚರ್ಮದ ಸಮಸ್ಯೆಗಳಿಗೂ ತೆಂಗಿನೆಣ್ಣೆ ರಾಮಬಾಣ. ಹಾಗಾಗಿ ತಲೆಹೊಟ್ಟಿಗೆ ಹಿರಿಯರು ಮೊದಲಿನಿಂದಲೂ ತೆಂಗಿನೆಣ್ಣೆಯನ್ನು ಬಳಸುತ್ತಿದ್ದರು. ಆದರೆ, ಇವೆಲ್ಲವುಗಳನ್ನು ತಲೆಗೆ ಹಚ್ಚಿ ಮಸಾಜ್‌ ಮಾಡಿದಾಗ, ಅತಿಯಾದ ಬಿಸಿ ನೀರಿನಿಂದ ತಲೆಯನ್ನು ಸ್ವಚ್ಛಗೊಳಿಸಬೇಡಿ. ಇದು ಚರ್ಮವನ್ನು ಇನ್ನಷ್ಟು ಶುಷ್ಕಗೊಳಿಸಿ ತಲೆಹೊಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿ, ಉಗುರು ಬೆಚ್ಚಗೆ ನೀರಿನಿಂದ ತೊಳೆಯುವುದು ಒಳ್ಳೆಯದು.

೫. ಒತ್ತಡರಹಿತವಾಗಿರಿ: ಒತ್ತಡ ಎಂಬುದು ಮಹಾಮಾರಿ. ಅತಿಯಾದ ಒತ್ತಡ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಮೊಟಕುಗೊಳಿಸುತ್ತದೆ. ಆಗ ನಮ್ಮ ದೇಹದ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ತಲೆಹೊಟ್ಟಿನ ಸಮಸ್ಯೆಯೂ ಕೂಡಾ ಒತ್ತಡದ ಸಂದರ್ಭದಲ್ಲೇ ಕಂಡುಬರುವ ಸಾಮಾನ್ಯ ಸಮಸ್ಯೆ. ಹಾಗಾಗಿ. ಒತ್ತಡರಹಿತ ಜೀವನ ಎಲ್ಲ ಸಮಸ್ಯೆಗಳಿಂದಲೂ ಮುಕ್ತಿ ನೀಡಬಹುದು.

ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

seeds for weight loss: ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು. ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

VISTARANEWS.COM


on

Seeds For Weight Loss
Koo

ತೂಕ ಇಳಿಸುವುದು ಎಂಬುದು ಅತ್ಯಂತ ಶಿಸ್ತು ಬೇಡುವ ಪಯಣ. ಎಷ್ಟೇ ಶಿಸ್ತಿನಿಂದ ಇದ್ದರೂ ನಾಲಿಗೆ ರುಚಿಯನ್ನು ಬೇಡುತ್ತದೆ. ರುಚಿಯ ಜೊತೆಗೂ ದೇಹವನ್ನು ಆರೋಗ್ಯವಾಗಿಡಬಹುದು ಹಾಗೂ ದೇಹದ ತೂಕವನ್ನು ಹತೋಟಿಗೆ ತರಬಹುದು ಎಂದರೆ ಆಗ ನೆನಪಾಗುವುದು ಈ ಬೀಜಗಳು. ಹೌದು ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು (seeds for weight loss). ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಬನ್ನಿ, ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಪೋಷಕಾಂಶಗಳ ಪವರ್‌ ಹೌಸ್‌ ಇದ್ದ ಹಾಗೆ. ಇವುಗಳಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಇದ್ದು, ನಾರಿನಂಶವೂ ಇರುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ, ನೀರಿನಲ್ಲಿ ನೆನೆ ಹಾಕಿದಾಗ ಚಿಯಾ ಬೀಜಗಳು ಉಬ್ಬಿಕೊಂಡು ಜೆಲ್‌ನಂತ ಕವಚವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ತಿಂದರೂ ದೇಹದಲ್ಲಿರುವ ನೀರಿನಂಶವನ್ನು ಪಡೆದುಕೊಂಡು ಉಬ್ಬುತ್ತದೆ. ಹಾಗಾಗಿ ಇದು ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Flaxseed Different Types of Seeds with Health Benefits

ಅಗಸೆ ಬೀಜಗಳು

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿದ್ದು, ಜೊತೆಗೆ ಕರಗಬಲ್ಲ ನಾರಿನಂಶವೂ ಇದೆ. ಇದು ತೂಕ ಇಳಿಕೆಗೆ ಪೂರಕ. ಒಮೆಗಾ ೩ ಫ್ಯಾಟಿ ಆಸಿಡ್‌ಗಳು ದೇಹದ ಉರಿಯೂತವನ್ನೂ ಕಡಿಮೆಕೊಳಿಸಿದರೆ, ಕರಗಬಲ್ಲ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಹಸಿವು ನಿಯಂತ್ರಣದಲ್ಲಿದ್ದು ಅತಿಯಾಗಿ ತಿನ್ನುವುದು ಹತೋಟಿಗೆ ಬರುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಹೆಂಪ್‌ ಬೀಜಗಳಲ್ಲಿ ಸಾಕಷ್ಟು ಪ್ರೊಟೀನ್‌ ಇರುವುದರಿಂದ ತೂಕ ಇಳಿಸುವ ಮಂದಿಗೆ ಇದು ಪೂರಕ. ಪ್ರೊಟೀನ್‌ ಕರಗಲು ಹೆಚ್ಚು ಶಕ್ತಿ ಬೇಕು. ಹೀಗಾಗಿ ನಿಮ್ಮ ಕ್ಯಾಲರಿ ಇಲ್ಲಿ ಹೆಚ್ಚು ಬಳಸಲ್ಪಡುತ್ತದೆ. ಪ್ರೊಟೀನ್‌ನಿಂದ ಮಾಂಸಖಂಡಗಳು ಬಲವರ್ಧನೆಗೊಳ್ಳುವ ಜೊತೆಗೆ, ಈ ಬೀಜಗಳಲ್ಲಿರುವ ಫ್ಯಾಟಿ ಆಸಿಡ್‌ನ ಪರಿಣಾಮ ಹಸಿವೂ ಕೂಡಾ ನಿಯಂತ್ರಣದಲ್ಲಿರುತ್ತದೆ.

Pumpkin seeds in white bowl Pumpkin Seeds Benefits

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಪ್ರೊಟೀನ್‌, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬು ಶ್ರೀಮಂತವಾಗಿದೆ. ಇದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹಸಿವು ನಿಯಂತ್ರಣದಲ್ಲಿರುತ್ತದೆ. ಪರಿಣಾಮ ಅತಿಯಾಗಿ ತಿನ್ನುವುದಕ್ಕೆ ಬ್ರೇಕ್‌ ಬಿದ್ದು ತೂಕ ಇಳಿಯುತ್ತದೆ. ಇದರಲ್ಲಿ ಮೆಗ್ನೀಶಿಯಂ ಕೂಡಾ ಇದ್ದು, ಇದರಿಂದ ಇನ್ಸುಲಿನ್‌ ಮಟ್ಟವು ಸಮತೋಲನದಲ್ಲಿರುತ್ತದೆ.

Sunflower seed Zinc Foods It also provides protein, minerals and antioxidants along with zinc

ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜಗಳಲ್ಲಿ ಪ್ರೊಟೀನ್‌, ನಾರಿನಂಶ, ಖನಿಜಾಂಶಗಳ ಜೊತೆಗೆ ಎಲ್ಲ ಬಗೆಯ ಪೋಷಕಾಂಶಗಳೂ ಇವೆ. ಇದರಲ್ಲಿರುವ ಪ್ರೊಟೀನ್‌ ಹಾಗೂ ನಾರಿನಂಶ ಹೆಚ್ಚು ಹಸಿವಾಗದಂತೆ ತಡೆಯುವುದರಿಂದ ತೂಕ ಇಳಿಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಹಾಗೂ ಸೆಲೆನಿಯಂ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ.

Imager Of Sesame Benefits

ಎಳ್ಳು

ಎಳ್ಳಿನಲ್ಲಿ ಲಿಗ್ನೆನ್‌ ಎಂಬ ಸಸ್ಯಾಧಾರಿತ ಕಾಂಪೌಂಡ್‌ ಇದ್ದು ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಎಳ್ಳಿನಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೊಟೀನ್‌ ಹೇರಳವಾಗಿದೆ. ಒಳ್ಳೆಯ ಕೊಬ್ಬು ಕೂಡಾ ಇದ್ದು, ಇದರಿಂದ ಹೊಟ್ಟೆ ತುಂಬಿದ ಭಾವ ನೀಡುತ್ತದೆ.

Parasite Removal Papaya Seeds Benefits

ಪಪ್ಪಾಯಿ ಬೀಜ

ಪಪ್ಪಾಯಿ ಬೀಗಳಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿದ್ದು, ಇದು ತೂಕ ಇಳಿಕೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಈ ಕಿಣ್ವಗಳು ದೇಹದಲ್ಲಿರುವ ಪ್ರೊಟೀನ್‌ ಅನ್ನು ಕರಗಿಸಲು ಸಹಾಯ ಮಾಡುವ ಮೂಲಕ ಆರೋಗ್ಯಕಾರಿ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ಹೊಟ್ಟೆಯುಬ್ಬರವನ್ನೂ ಇದು ಕಡಿಮೆ ಮಾಡುತ್ತದೆ. ಕಡಿಮೆ ಕ್ಯಾಲರಿಯ ಪಪ್ಪಾಯ ಬೀಜಗಳು ತೂಕ ಇಳಿಕೆಗೆ ತಮ್ಮದೇ ಆದ ಕಾಣಿಕೆ ನೀಡುತ್ತವೆ.

ಇದನ್ನೂ ಓದಿ: Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Continue Reading

ಆರೋಗ್ಯ

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Weight Loss Tips: ತೂಕ ಇಳಿಸುವುದೆಂದರೆ, ನಾಲಿಗೆಯ ಚಪಲಕ್ಕೆ ಗುಡ್‌ಬೈ ಹೇಳಿ, ರುಚಿಯಿಲ್ಲದ ಆಹಾರಗಳನ್ನು ಹಿತಮಿತವಾಗಿ ತಿನ್ನುವುದು ಎಂಬ ನಂಬಿಕೆ ಬಹುತೇಕ ಎಲ್ಲರದ್ದು. ಆದರೆ, ಇತ್ತೀಚೆಗಿನ ದಿನಗಳಲ್ಲಿ ತೂಕ ಇಳಿಕೆಯ ಬಗೆಗಿನ ಈ ಎಲ್ಲ ನಂಬಿಕೆಗಳನ್ನೂ ಡಯಟೀಶಿಯನ್‌ಗಳು ಸುಳ್ಳಾಗಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವು ಪ್ರಯೋಗಗಳೂ ಕೂಡಾ ಆಗುತ್ತಲೇ ಇವೆ. ನೀವು ಮೆಚ್ಚುವ, ನಿತ್ಯವೂ ತಿನ್ನುವ ಆಹಾರದಲ್ಲಿಯೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡು ಸರಿಯಾದ ಆರೋಗ್ಯಕರ ಜೀವನಶೈಲಿ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡಿದ್ದರೆ ತೂಕ ಖಂಡಿತವಾಗಿಯೂ ಇಳಿಯುತ್ತದೆ ಎನ್ನುತ್ತಾರೆ ಇವರು.

VISTARANEWS.COM


on

Weight Loss Tips
Koo

ತೂಕ ಇಳಿಯಬೇಕು (Weight Loss Tips), ಆದರೆ, ಆಹಾರ ರುಚಿಯಾಗಿರಬೇಕು ಎಂದು ಯಾರಿಗೆ ತಾನೇ ಅನಿಸುವುದಿಲ್ಲ ಹೇಳಿ! ಯಾಕೆಂದರೆ, ತೂಕ ಇಳಿಸುವುದೆಂದರೆ, ನಾಲಿಗೆಯ ಚಪಲಕ್ಕೆ ಗುಡ್‌ಬೈ ಹೇಳಿ, ರುಚಿಯಿಲ್ಲದ ಆಹಾರಗಳನ್ನು ಹಿತಮಿತವಾಗಿ ತಿನ್ನುವುದು ಎಂಬ ನಂಬಿಕೆ ಬಹುತೇಕ ಎಲ್ಲರದ್ದು. ಆದರೆ, ಇತ್ತೀಚೆಗಿನ ದಿನಗಳಲ್ಲಿ ತೂಕ ಇಳಿಕೆಯ ಬಗೆಗಿನ ಈ ಎಲ್ಲ ನಂಬಿಕೆಗಳನ್ನೂ ಡಯಟೀಶಿಯನ್‌ಗಳು ಸುಳ್ಳಾಗಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವು ಪ್ರಯೋಗಗಳೂ ಕೂಡಾ ಆಗುತ್ತಲೇ ಇವೆ. ನೀವು ಮೆಚ್ಚುವ, ನಿತ್ಯವೂ ತಿನ್ನುವ ಆಹಾರದಲ್ಲಿಯೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡು ಸರಿಯಾದ ಆರೋಗ್ಯಕರ ಜೀವನಶೈಲಿ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡಿದ್ದರೆ ತೂಕ ಖಂಡಿತವಾಗಿಯೂ ಇಳಿಯುತ್ತದೆ ಎನ್ನುತ್ತಾರೆ ಇವರು. ಇದನ್ನು ಹಲವರು ಮಾಡಿ ತೋರಿಸಿದ್ದಾರೆ ಕೂಡ.

Weight Loss Slim Body Healthy Lifestyle Concept Benefits Of Saffron

ಇತ್ತೀಚೆಗೆ ದಕ್ಷಿಣ ಭಾರತೀಯ ಶೈಲಿಯ ಅಡುಗೆಗಳು, ಬೆಳಗಿನ ಉಪಹಾರಗಳು ಸಾಕಷ್ಟು ಪ್ರಸಿದ್ಧಿಗೆ ಬರುತ್ತಿದೆ. ದಕ್ಷಿಣ ಭಾರತೀಯ ಶೈಲಿಯ ಬೆಳಗ್ಗಿನ ಉಪಾಹಾರ ತೂಕ ಇಳಿಕೆಗೆ ಪೂರಕವಾಗಿದ್ದು, ಹಲವರು ಈಚೆಗೆ ಈ ಶೈಲಿಯ ಆಹಾರಕ್ರಮಕ್ಕೆ ವಾಲುತ್ತಿದ್ದಾರೆ ಕೂಡ. ಇದರಿಂದ ನಮ್ಮ ದೇಹಕ್ಕೆ ಅತ್ಯುತ್ತಮ ಪೋಷಣೆ ಲಭ್ಯವಾಗುತ್ತದೆ. ಹೀಗಾಗಿ ದಕ್ಷಿಣ ಭಾರತೀಯರಾದ ನಾವು ತೂಕ ಇಳಿಸಬೇಕಿದ್ದರೆ, ನಮ್ಮ ನಾಲಿಗೆಯ ಮಾತನ್ನು ಧಾರಾಳವಾಗಿ ಕೇಳಬಹುದು.
ದಕ್ಷಿಣ ಭಾರತೀಯ ತಿನಿಸುಗಳು ಯಾಕೆ ಆರೋಗ್ಯಕರ ಗೊತ್ತೇ? ಉಪ್ಪಿಟ್ಟು, ಇಡ್ಲಿ, ಪೊಂಗಲ್‌, ಉತ್ತಪ್ಪ, ಪಡ್ಡು, ಬಗೆಬಗೆಯ ದೋಸೆಗಳು ನಮ್ಮ ದಕ್ಷಿಣ ಭಾರತೀಯರ ಮನೆಗಳ ಬೆಳಗ್ಗಿನ ಆರಾಧ್ಯ ದೈವಗಳು. ಈ ಎಲ್ಲ ಬಗೆಯ ಆಹಾರಗಳಲ್ಲೂ ಬಗೆಬಗೆಯ ಧಾನ್ಯಗಳು, ಬೇಳೆ ಕಾಳುಗಳ ಬಳಕೆಯಿದೆ. ತೆಂಗಿನಕಾಯಿ, ಕರಿಬೇವು, ಕೊಂತ್ತಂಬರಿ ಸೊಪ್ಪು, ಬಗೆಬಗೆಯ ತರಕಾರಿಗಳು ಇತ್ಯಾದಿಗಳ ಬಳಕೆಯಿದೆ. ಇವೆಲ್ಲವೂ ಇಡೀ ಉಪಹಾರದ ಪೋಷಕಾಂಶಗಳ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇನ್ನೂ ಮುಖ್ಯವಾದ ಇನ್ನೊಂದು ಅಂಶವೆಂದರೆ, ದಕ್ಷಿಣ ಭಾರತೀಯರಾದ ನಮ್ಮ ಶೈಲಿಯ ತಿಂಡಿಗಳ ಹಿಟ್ಟು ತಯಾರಿಕೆಯಲ್ಲಿ ಹುಳಿಬರಿಸುವ ಪ್ರಕ್ರಿಯೆಯೂ ಇದೆ. ಎಣ್ಣೆಯಲ್ಲಿ ಹುರಿಯುವುದಕ್ಕಿಂತಲೂ ಹಬೆಯಲ್ಲಿ ಬೇಯಿಸುವ ಪ್ರಕ್ರಿಯೆಯಿದೆ. ಇವೆಲ್ಲ ಪ್ರಕ್ರಿಯೆಗಳೂ ಆರೋಗ್ಯಕ್ಕೆ ಪೂರಕವಾದವುಗಳು.
ಆದರೆ, ದಕ್ಷಿಣ ಭಾರತೀಯ ಈ ತಿನಿಸುಗಳಲ್ಲಿ ಕಾರ್ಬೋಹೈಡ್ರೇಟ್‌ ಅಧಿಕ ಎಂಬ ವಾದವೂ ಇದೆ. ಇದು ನಿಜ ಕೂಡಾ. ಆದರೂ, ತೂಕ ಇಳಿಕೆಯ ವಿಚಾರಕ್ಕೆ ಬಂದರೆ, ಖಂಡಿತವಾಗಿಯೂ ಈ ತಿಂಡಿಗಳನ್ನೇ ಹಿತಮಿತವಾಗಿ ತಿಂದರೆ, ತೂಕ ಇಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ರುಚಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಮ್ಮದೇ ಆಹಾರ ಶೈಲಿಯಲ್ಲೂ, ತೂಕ ಇಳಿಕೆ ಸಾಧ್ಯವಿದೆ ಎಂಬುದನ್ನು ಇತ್ತೀಚೆಗೆ ಹಲವರು ಸಾಧ್ಯವಾಗಿಸಿ ತೋರಿಸುತ್ತಿದ್ದಾರೆ ಕೂಡ.

idli sambar

ಇಡ್ಲಿ ಸಾಂಬಾರ್‌

ಇಡ್ಲಿ ಅತ್ಯಂತ ಪೋಷಕಾಂಶಯುಕ್ತ ಹಬೆಯಲ್ಲಿ ಬೇಯಿಸಿ ಮಾಡು ಆರೋಗ್ಯಕರ ತಿನಿಸು. ಬೆಳಗ್ಗಿನ ಹೊತ್ತಿಗೆ ಇದು ಪ್ರಶಸ್ತ. ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ಮಾಡಿದ ಇಡ್ಲಿಗೆ ತರಕಾರಿ ಹಾಕಿದ ಸಾಂಬಾರು, ತೆಂಗಿನಕಾಯಿಯ ಚಟ್ನಿ ಇದ್ದರೆ ಸ್ವರ್ಗ. ಪೋಷಕಾಂಶಗಳ ವಿಚಾರದಲ್ಲೂ ಇದು ಯಾವುದೇ ಮೋಸ ಮಾಡದು.

Masala Dosa Dish

ದೋಸೆ

ಇಡ್ಲಿಯ ಹಿಟ್ಟಿನಿಂದಲೇ ಮಾಡಬಹುದಾದ ದೋಸೆಯೂ ಕೂಡಾ ಅಷ್ಟೇ ಆರೋಗ್ಯಕರ. ಪ್ರೊಟೀನ್‌ ಹಾಗೂ ಸಾಕಷ್ಟು ಕಾರ್ಬೋಹೈಡ್ರೇಟ್‌ ಇರುವ ಇದು ಬೆಳಗ್ಗೆಗೆ ಒಳ್ಳೆಯ ಆಹಾರ. ಕೇವಲ ಈ ಹಿಟ್ಟಲ್ಲದೆ, ನೂರಾರು ಬಗೆಯ ದೋಸೆಗಳನ್ನೂ ತರಕಾರಿ ಹಾಗೂ ಬೇರೆ ಬೇರೆ ಧಾನ್ಯಗಳನ್ನು ಬಳಸಿ ಮಾಡಬಹುದು ಎಂಬುದೇ ದೋಸೆಯ ವಿಶೇಷತೆ.

uppittu

ಉಪ್ಪಿಟ್ಟು

ಗೋಧಿ/ರವೆಯಿಂದ ಮಾಡಬಹುದಾದ ಉಪ್ಪಿಟ್ಟು ಕೂಡಾ ಬೆಳಗ್ಗೆಗೆ ಹೇಳಿ ಮಾಡಿಸಿದ ತಿಂಡಿ. ಬಗೆಬಗೆಯ ತರಕಾರಿಗಳನ್ನು ಹಾಕಿ ಮಾಡಬಹುದು. ಇದೂ ಕೂಡಾ ಪೋಷಕಾಂಶಯುಕ್ತ ಆಹಾರ. ತೂಕ ಇಳಿಕೆಗೂ ಪೂರಕ.

ಇದನ್ನೂ ಓದಿ: Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

ಉತ್ತಪ್ಪ, ಪಡ್ಡು, ಪೊಂಗಲ್

ಈ ಎಲ್ಲ ತಿನಿಸುಗಳೂ ಕೂಡಾ ಇಡ್ಲಿ ದೋಸೆಗಳಂತೆಯೇ ನಿರುಪದ್ರವಿ. ಪೋಷಕಾಂಶಭರಿತವಾದವು. ಇವುಗಳನ್ನು ಹಿತಮಿತವಾಗಿ ತಿಂದರೆ, ಹೊಟ್ಟೆಗೂ ಹಿತ, ನಾಲಿಗೆಗೂ ರುಚಿ. ತೂಕವನ್ನೂ ಸಮತೋಲನದಲ್ಲಿಟ್ಟುಕೊಳ್ಳಬಹುದು.

Continue Reading

ಆರೋಗ್ಯ

Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Internet addiction: ಆನ್‌ಲೈನ್‌ ಗೀಳಿನಿಂದಾಗಿ ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು.

VISTARANEWS.COM


on

Internet Addiction
Koo

ಲಂಗು ಲಗಾಮಿಲ್ಲದೆ ಇಂಟರ್ನೆಟ್‌ ಬಳಸುವ ಅಭ್ಯಾಸ ಇಂದು ಮಕ್ಕಳಾದಿಯಾಗಿ ಹಿರಿಯರನ್ನೂ ಕಾಡುತ್ತಿದೆ. ಇದರಿಂದ ದಿನನಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಸಮಸ್ಯೆಯೂ ಆಗುತ್ತಿದೆ. ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು. ಇಂಟರ್ನೆಟ್‌ ಅಡಿಕ್ಷನ್‌ ಅಥವಾ ಅಂತರ್ಜಾಲ ಚಟ (Internet addiction) ಎಂಬುದು ಇತ್ತೀಚಿನ ದಶಕದಲ್ಲಿ ಅತ್ಯಂತ ಹೆಚ್ಚಾಗಿ ಎಲ್ಲರನ್ನೂ ಬಿಡದೆ ಕಾಡುವ ದೌರ್ಬಲ್ಯ. ಅತ್ಯಂತ ಹೆಚ್ಚು, ಲಂಗು ಲಗಾಮಿಲ್ಲದೆ ಇಂಟರ್ನೆಟ್‌ ಬಳಸುವ ಅಭ್ಯಾಸ ಇಂದು ಮಕ್ಕಳಾದಿಯಾಗಿ ಹಿರಿಯರನ್ನೂ ಕಾಡುತ್ತಿದೆ. ಇದರಿಂದ ದಿನನಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಸಮಸ್ಯೆಯೂ ಆಗುತ್ತಿದೆ. ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು. ನಿಮಗೇ ತಿಳಿಯದಾ ಹಾಗೆ ನೀವು ಇಂಟರ್ನೆಟ್‌ ದಾಸರಾಗಿದ್ದೀರಾ? ಇಂಟರ್ನೆಟ್‌ನ ಚಟಕ್ಕೆ ಬಿದ್ದಿದ್ದೀರಾ? ಬನ್ನಿ, ಈ ಕೆಳಗಿನ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವೂ ಇದರ ದಾಸರಾಗಿದ್ದೀರಿ ಎಂಬಲ್ಲಿ ಯಾವ ಸಂಶಯವೂ ಇಲ್ಲ.

woman holding mobile phone in social network and internet addiction

ಸದಾ ಇಂಟರ್ನೆಟ್‌ನದ್ದೇ ಧ್ಯಾನ

ಆಗಾಗ ನಿಮಗೆ ಆನ್‌ಲೈನ್‌ನ ಕೆಲಸಗಳೇ ಮನಸ್ಸಿನಲ್ಲಿ ಜ್ಞಾಪಕಕ್ಕೆ ಬರುತ್ತಿದೆಯಾ? ನೀವು ಯಾವುದಾದರೂ ಬೇರೆ ಕೆಲಸಕ್ಕೆ ಗಮನ ಕೊಡುವಾಗಲೂ ನೀವು ಕೆಲ ಹೊತ್ತಿನ ನಂತರ ಇಂಟರ್ನೆಟ್‌ನ ಬಳಕೆಯ ಬಗ್ಗೆ ಯೋಚನೆ ಮಾಡುತ್ತೀರುತ್ತೀರಿ ಎಂದಾದಲ್ಲಿ ನೀವು ಚಟಕ್ಕೆ ಬಿದ್ದಿದ್ದೀರಿ ಎಂದರ್ಥ.

ಕಡಿಮೆ ಬಳಸಲು ಸಾಧ್ಯವಾಗುತ್ತಿಲ್ಲ

ಇಂಟರ್ನೆಟ್‌ ಬಳಕೆಯನ್ನು ಕಡಿಮೆ ಮಾಡಲು ನಿಮ್ಮ ಕೈಯಲ್ಲಿ ಸಾಧ್ಯವಾಗುತ್ತಿಲ್ಲವೇ? ಹೆಚ್ಚು ಸಮಯವನ್ನು ಆನ್‌ಲೈನ್‌ನಲ್ಲಿ, ಅಥವಾ ಇಂಟರ್ನೆಟ್‌ ಆಧರಿಸಿದ ಕೆಲಸದಲ್ಲಿ ಕಳೆಯಲು ಇಷ್ಟಪಡುತ್ತೀರಿ ಅಥವಾ ಅದರಿಂದ ಹೊರಗೆ ಬರಲು ನೀವು ಯೋಚಿಸಿದರೂ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅದು ಚಟವೇ.

ನಿತ್ಯ ಕೆಲಸಗಳನ್ನು ಬಿಟ್ಟು…

ನಿಮ್ಮ ಖಾಸಗಿ ಕೆಲಸಗಳನ್ನು ನಿರ್ಲಕ್ಷ್ಯ ಮಾಡಿ ನೀವು ಆನ್‌ಲೈನ್‌, ಅಥವಾ ಇಂಟರ್ನೆಟ್‌ನಲ್ಲಿರಲು ಬಯಸುತ್ತೀರಿ ಎಂದಾದಲ್ಲಿ ನೀವು ಚಟಕ್ಕೆ ಬಿದ್ದಿದ್ದೀರಿ ಎಂದರ್ಥ. ಮನೆಕೆಲಸಗಳು, ನಿಮ್ಮ ನಿತ್ಯಕೆಲಸಗಳು, ಡೆಡ್‌ಲೈನ್‌ಗಳು ಮರೆತು ನೀವು ಇದಕ್ಕೆ ದಾಸರಾಗಿದ್ದೀರಿ ಎಂದರೆ ಅದು ನಿಮಗೆ ಒಳ್ಳೆಯದಲ್ಲ.

Boy Plays Computer Game at Home, Gaming Addiction

ಇಂಟರ್‌ನೆಟ್‌ ಸಿಗದಿದ್ದಾಗ ಚಡಪಡಿಕೆ

ಇಂಟರ್‌ನೆಟ್‌ ಸಿಗದಿದ್ದಾಗ, ಇಂಟರ್ನೆಟ್‌ ಬಳಸಲು ಸಾಧ್ಯವಾಗುತ್ತಿಲ್ಲ ಎಂದಾದಾಗ ಕಿರಿಕಿರಿಯಾಗುತ್ತಿದೆಯೋ, ಬೇರೆ ಕೆಲಸಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲವೋ ಹಾಗಾದರೆ ಅದು ಇಂಟರ್ನೆಟ್‌ ಚಟದ ಕಾರಣದಿಂದಾಗಿಯೇ.

ಇಂಟರ್ನೆಟ್‌ ಅವಲಂಬನೆ

ನಿಮ್ಮ ತೊಂದರೆಗಳನ್ನು, ಬೇಸರಗಳನ್ನು ಮರೆಯಲು, ಒತ್ತಡವನ್ನು, ಋಣಾತ್ಮಕ ಚಿಂತನೆಗಳನ್ನು ಕಡಿಮೆ ಮಾಡಲು ಇಂಟರ್ನೆಟ್‌ನಲ್ಲಿರುವುದರ ಮೂಲಕ ಪಾರಾಗಲು ಪ್ರಯತ್ನಿಸುತ್ತೀರಿ ಎಂದರೆ ಅದು ಖಂಡಿತ ಚಟವೇ. ನಿಮ್ಮ ಈ ಭಾವನೆಗಳಿಗೆ ಬೇರೆ ಕಾರಣ ಹುಡುಕಿ ಅದನ್ನು ಸರಿ ಮಾಡಬೇಕೇ ಹೊರತು, ಇಂಟರ್ನೆಟ್‌ ನಿಮ್ಮ ಪಲಾಯನದ ಹಾದಿ ಆಗಬಾರದು.

ಕುಟುಂಬದವರ ಜೊತೆ ಮುಚ್ಚಿಡುತ್ತೀರಿ

ಆನ್‌ಲೈನ್‌/ ಇಂಟರ್ನೆಟ್‌ನಲ್ಲಿ ನೀವು ಕಳೆದ ಸಮಯವನ್ನು ನಿಮ್ಮ ಕುಟುಂಬದವರ ಜೊತೆ ಮುಚ್ಚಿಡುತ್ತೀರಿ ಎಂದಾದಲ್ಲಿ ಖಂಡಿತವಾಗಿಯೂ ನೀವು ಅದರ ದಾಸರಾಗಿದ್ದೀರಿ ಎಂದರ್ಥ.

Addicted to internet

ವಾಗ್ವಾದಗಳನ್ನು ಸೃಷ್ಟಿಸುತ್ತಿದೆಯೆ?

ಇಂಟರ್ನೆಟ್‌ ಬಳಕೆಯೇ ನಿಮ್ಮ ಹಾಗೂ ನಿಮ್ಮ ಸಂಗಾತಿಯ/ಪ್ರೀತಿಪಾತ್ರರ/ಹೆತ್ತವರ ಜೊತೆಗೆ ವಾಗ್ವಾದಗಳನ್ನು ಸೃಷ್ಟಿಸುತ್ತಿದೆ ಎಂದಾದಲ್ಲಿ ನೀವು ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ. ಸಂಬಂಧಗಳ ಮಹತ್ವವನ್ನು ಅರಿಯದೆ, ಅದಕ್ಕೆ ಸರಿಯಾದ ಸಮಯವನ್ನು ನೀಡದೆ, ನೀವು ಇಂಟರ್ನೆಟ್‌ ಮೂಲಕ ನಿಮ್ಮ ಶಾಂತಿ ಕಂಡುಕೊಳ್ಳುತ್ತೀರಿ ಎಂದರೆ ಅದು ಒಳ್ಳೆಯ ಬೆಳವಣಿಗೆಯಲ್ಲ.

ಕಣ್ಣು ಸುಸ್ತಾದಂತೆ ಅನಿಸುವುದು

ಕಣ್ಣು ಸುಸ್ತಾದಂತೆ ಅನಿಸುವುದು, ಬೆನ್ನು ನೋವು, ಸೊಂಟ ನೋವು, ನಿದ್ದೆಯಲ್ಲಿ ಸಮಸ್ಯೆ ಇತ್ಯಾದಿಗಳು ನಿಮ್ಮನ್ನು ಕಾಡುತ್ತಿದೆ ಎಂದರೆ ನೀವು ಅತಿಯಾಗಿ ಇಂಟರ್ನೆಟ್‌ ಬಳಸುತ್ತಿದ್ದೀರಿ ಎಂದರ್ಥ,

Addicted From Social Media Woman

ಹೊರಗಿನ ಆಸಕ್ತಿ ಕಡಿಮೆ

ಹೊರಗಿನ ಕೆಲಸ, ವ್ಯಾಯಾಮ, ಇತರ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದಾದಲ್ಲಿ ಹಾಗೂ ನೀವು ಆನ್‌ಲೈನ್‌ ಇರುವುದನ್ನೇ ಇಷ್ಟಪಡುತ್ತೀರಿ, ಅದಕ್ಕಾಗಿ ಕಾರಣ ಹುಡುಕುತ್ತೀರಿ ಎಂದಾದಲ್ಲಿ ನಿಮಗೆ ಇಂಟರ್ನೆಟ್‌ ಚಟವೇ.

ಇದನ್ನೂ ಓದಿ: Back Acne Problem: ಬೆನ್ನಿನ ಮೇಲಿನ ಮೊಡವೆಗಳ ಸಮಸ್ಯೆಯೇ? ಇಲ್ಲಿವೆ ಸರಳ ಪರಿಹಾರಕ್ಕೆ ಅಷ್ಟಸೂತ್ರಗಳು!

ಆನ್‌ಲೈನ್‌ನಲ್ಲೇ ಹೆಚ್ಚು ಸಮಯ

ದಿನಗಳೆದಂತೆ ಹೆಚ್ಚು ಹೆಚ್ಚು ಸಮಯ ಆನ್‌ಲೈನ್‌ಗಾಗಿ ಮೀಸಲಿಡುತ್ತಿದ್ದೀರಿ ಹಾಗೂ ಅದರಿಂದ ಸಂತೋಷ ಪಡೆಯುತ್ತಿದ್ದೀರಿ ಎಂದರೂ ಕೂಡಾ ನೀವು ಇಂಟರ್ನೆಟ್‌ ದಾಸರಾಗಿದ್ದೀರಿ ಎಂದರ್ಥ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಮೊದಲೇ ಅರಿತುಕೊಂಡು ಈ ಅಭ್ಯಾಸವನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ, ಆಪ್ತ ಸಮಾಲೋಚನೆ ಹಾಗೂ ತಜ್ಞರ ನೆರವು ಪಡೆಯುವುದು ಅತ್ಯಂತ ಅಗತ್ಯ.

Continue Reading

ಕೊಡಗು

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

Heart Attack: ಕೆಲಸಕ್ಕೆ ಹಾಜರಾಗಿದ್ದಲೇ ಹಠಾತ್ ಹೃದಯಾಘಾತ ಸಂಭವಿಸಿದ್ದು, ಕೊಡಗಿನಲ್ಲಿ ಯುವತಿಯೊಬ್ಬಳ ಪ್ರಾಣಪಕ್ಷಿ ಹಾರಿ ಹೋಗಿದೆ.

VISTARANEWS.COM


on

By

Heart Attack
Koo

ಕೊಡಗು: ಇತ್ತೀಚೆಗೆ ಯುವಜನತೆಯಲ್ಲೇ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಹೃದಯವು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಕೊಡಗಿನಲ್ಲಿ ಯುವತಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕ ಪೊನ್ನಪ್ಪ (24) ಮೃತ ದುರ್ದೈವಿ. ಗುರುವಾರ ಬೆಳಗ್ಗೆ ನಿಲಿಕ ಕರ್ತವ್ಯಕ್ಕೆಂದು ಮನೆಯಿಂದ ಹೊರಟಾಗ ಹೃದಯ ಬಡಿತವೇ ನಿಂತು ಹೋಗಿದೆ. ಎದೆ ನೋವೆಂದು ಒದ್ದಾಡಿದ ನಿಲಿಕ ಕುಸಿದು ಬಿದ್ದಿದ್ದಳು. ಕೂಡಲೇ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ದೃಢಪಡಿಸಿದ್ದರು.

ಇದನ್ನೂ ಓದಿ: Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

ಕ್ಯಾಸಿನೋದಲ್ಲಿ 33 ಕೋಟಿ ರೂ. ಜಾಕ್‌ಪಾಟ್‌; ಖುಷಿ ಹೆಚ್ಚಾಗಿ ಹಾರ್ಟ್‌ ಅಟ್ಯಾಕ್‌!

ತುಂಬಾ ಖುಷಿಯಾದಾಗ ಕೆಲವರಿಗೆ ತಮ್ಮ ಖುಷಿಯನ್ನು ಹೇಗೆ ವ್ಯಕ್ತಪಡಿಸುವುದು ಎಂದು ಗೊತ್ತಾಗುವುದಿಲ್ಲ. ಇನ್ನು ಕೆಲವರಿಗೆ ಯಾವುದಾದರೂ ಶಾಕಿಂಗ್‌ ನ್ಯೂಸ್‌ ಸುದ್ದಿ ಹೇಳಿದರೂ ಯಾವುದೇ ತರಹದ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇಲ್ಲೊಬ್ಬರು ಖುಷಿಯನ್ನು ತಡೆದುಕೊಳ್ಳಲಾಗದೇ ಮೃತಪಟ್ಟ ಘಟನೆ ನಡೆದಿದೆ. ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊನದಲ್ಲಿ ಕೋಟಿ ಕೋಟಿ ಹಣ ಗೆದ್ದ ವ್ಯಕ್ತಿಯೊಬ್ಬರು ಖುಷಿಯನ್ನು ತಡೆದುಕೊಳ್ಳಲಾಗದೇ ಮೃತಪಟ್ಟಿರುವ ವಿಡಿಯೊವೊಂದು ವೈರಲ್‌ (Viral Video) ಆಗಿದೆ.

ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4 ಮಿಲಿಯನ್ ಡಾಲರ್ (ಸುಮಾರು 33 ಕೋಟಿ ರೂ. ) ಜಾಕ್‌ಪಾಟ್‌ ಗೆದ್ದ ಶ್ರೀಮಂತ ವ್ಯಕ್ತಿಯೊಬ್ಬ ಗೆಲುವಿನ ಖುಷಿ ತಡೆದುಕೊಳ್ಳಲಾಗದೆ ಹೃದಯ ಸ್ತಂಭನದಿಂದ (Heart attack) ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಕ್ಯಾಸಿನೊಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ವ್ಯಕ್ತಿ ಪ್ರತಿ ಸಲ ಬರಿಗೈಯಲ್ಲಿ ವಾಪಾಸ್‌ ಆಗುತ್ತಿದ್ದರಂತೆ. ಆದರೆ ಈ ಬಾರಿ ಮಾತ್ರ ಇವರಿಗೆ ಜಾಕ್‌ಪಾಟ್‌ ಹೊಡೆದಿದೆ.

ಇದನ್ನೂ ಓದಿ: Prevent Heart Attack: ಹೃದಯಾಘಾತದಿಂದ ಪಾರಾಗಲು ಈ 10 ಸರಳ ಟಿಪ್ಸ್ ಪಾಲಿಸಿ

ಅವರು ನಿರೀಕ್ಷಿಸದಂತಹ ಖುಷಿ ಅಂದು ಅವರ ಪಾಲಿಗೆ ಒಲಿದು ಬಂದಿತ್ತು. ಹಣ ಗೆದ್ದ ಖುಷಿಯಲ್ಲಿದ್ದ ಅವರು ಆ ಖುಷಿಯನ್ನು ಅನುಭವಿಸಲು ಮಾತ್ರ ಆಗಲಿಲ್ಲ. ಗೆದ್ದ ಉತ್ಸಾಹದಲ್ಲಿದ್ದ ಅವರು ಕಾರ್ಡಿಯಾಕ್ ಅರೆಸ್ಟ್‌ ಆಗಿ ಅಲ್ಲೆ ಕುಸಿದು ಬಿದ್ದರು. ಜಾಕ್‌ಪಾಟ್‌ ಹೊಡೆದ ಖುಷಿಯನ್ನು ತಡೆದುಕೊಳ್ಳಲಾಗದೆ ಭಾವಪರವಶರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕುಸಿದುಬಿದ್ದ ವ್ಯಕ್ತಿಗೆ ಕ್ಯಾಸಿನೊ ಸಿಬ್ಬಂದಿ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಿದರೂ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅತಿಯಾದ ಸಂತೋಷವೇ ವ್ಯಕ್ತಿಯ ಕಾರ್ಡಿಯಾಕ್‌ ಅರೆಸ್ಟ್‌ಗೆ ಕಾರಣ ಎಂದು ವೈದ್ಯರು ಘೋಷಿಸಿದರು.

ಮರೀನಾ ಕೊಲ್ಲಿಯಲ್ಲಿರುವ ಈ ಕ್ಯಾಸಿನೊ ಅದರ ನಾಲ್ಕು ಹಂತದ ಗೇಮಿಂಗ್ ಫ್ಲೋರ್ರ ಸ್ಪೇಸ್ ಮತ್ತು 2300ಕ್ಕೂ ಹೆಚ್ಚಿನ ಸ್ಲಾಟ್ ಯಂತ್ರಗಳೊಂದಿಗೆ ಹೊಸ ಮತ್ತು ಜನಪ್ರಿಯ ಎಲೆಕ್ಟ್ರಾನಿಕ್ ಗೇಮಿಂಗ್ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸುತ್ತದೆ. 250ಕ್ಕೂ ಹೆಚ್ಚಿನ ಆಟಗಳೊಂದಿಗೆ ಭೇಟಿನೀಡುವ ಪ್ರತಿಯೊಬ್ಬರಿಗೂ ಭರಪೂರ ಮನರಂಜನೆ ಒದಗಿಸುತ್ತದೆ. ಇಲ್ಲಿ ಮೂವತ್ತಕ್ಕೂ ಹೆಚ್ಚಿನ ಖಾಸಗಿ ಗೇಮಿಂಗ್ ಕೊಠಡಿಗಳಿವೆ. 500ಕ್ಕೂ ಹೆಚ್ಚಿನ ಗೇಮಿಂಗ್ ಟೇಬಲ್‌ಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan support by singer dr shamitha malnad
ಸ್ಯಾಂಡಲ್ ವುಡ್9 mins ago

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

airtel price hike
ಪ್ರಮುಖ ಸುದ್ದಿ13 mins ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

murder Case in Kalaburagi
ಕಲಬುರಗಿ15 mins ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್30 mins ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

D. K. Shivakumar
ಕ್ರೀಡೆ34 mins ago

D. K. Shivakumar: ಫೈನಲ್​ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿದ ಡಿಸಿಎಂ ಶಿವಕುಮಾರ್‌

Self Harming
ಕ್ರೈಂ36 mins ago

Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

Gold Rate Today
ವಾಣಿಜ್ಯ45 mins ago

Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?

Sonu Srinivas Gowda harassed by darshan fans
ಸ್ಯಾಂಡಲ್ ವುಡ್49 mins ago

Sonu Srinivas Gowda: ದರ್ಶನ್‌ ಬಗ್ಗೆ ಮಾತನಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡಗೆ ಕಿರುಕುಳ ಕೊಟ್ಟ ದಚ್ಚು ಫ್ಯಾನ್ಸ್‌!

Paris Olympics 2024
ಕ್ರೀಡೆ1 hour ago

Paris Olympics 2024: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಆ್ಯತ್ಲೀಟ್‌ಗಳಿಗೆ ಶುಭ ಕೋರಿದ ರಾಷ್ಟ್ರಪತಿ ಮುರ್ಮು

haveri accident tt
ಪ್ರಮುಖ ಸುದ್ದಿ1 hour ago

Haveri Accident: ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು19 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ23 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌