Prerane : ಧ್ಯಾನದಿಂದ ಮಾತ್ರ ಮೃತ್ಯು ಭಯ ದಾಟಲು ಸಾಧ್ಯ! - Vistara News

ಧಾರ್ಮಿಕ

Prerane : ಧ್ಯಾನದಿಂದ ಮಾತ್ರ ಮೃತ್ಯು ಭಯ ದಾಟಲು ಸಾಧ್ಯ!

ಧ್ಯಾನವೆಂಬುದು ಮನೋರಹಿತ ಸ್ಥಿತಿಗೆ ಸೇರಿದ್ದು. ಮನಸ್ಸಿನ ಸ್ಥಿತಿಯಲ್ಲ. ಇಡೀ ಮಾನವ ಜನಾಂಗವನ್ನು ಒಂದಾಗಿಸುವುದು ಧ್ಯಾನ ಮಾತ್ರವೇ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಧ್ಯಾನದ ಕುರಿತ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

Dhyanam prerane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀ ಕೈವಲ್ಯಾನಂದ ಸರಸ್ವತೀ
NO MIND IS MEDITATION ಮನೋರಾಹಿತ್ಯವೇ ಧ್ಯಾನ.
ಯಾವ ವಿಷಯವು ಇಲ್ಲದ ಎಚ್ಚರಿಕೆಯೇ ಧ್ಯಾನ.
ಆಲೋಚನಾ ರಹಿತ ಸ್ಥಿತಿಯೇ ಧ್ಯಾನ
ಜ್ಞಾನವೇ ಧ್ಯಾನ.

ಜ್ಞಾನ ಸ್ವರೂಪವು ಮಾತ್ರವಿದೆ, ಯಾವ ವಿಷಯದ ಬಗ್ಗೆ ಜ್ಞಾನವಿಲ್ಲ. ಈ ಸ್ಥಿತಿಯೇ ಧ್ಯಾನ (ONLY CONSCIOUSNESS IS THERE, BUT NOT CONSCIOUS
ABOUT ANYTHING). ಧ್ಯಾನವೆಂಬುದು ಸಾಗರದಂತೆ ಮಲಿನ ನದಿಗಳನ್ನು ಸೇರಿಸಿಕೊಂಡಾಗ್ಯು ಶುದ್ಧವಾಗಿರುತ್ತದೆ. ಧ್ಯಾನಕ್ಕೆ ಮುನ್ನ ನೀನು ಶುದ್ಧವಾಗಿರಬೇಕೆಂಬ ನಿಯಮವಿಲ್ಲ. ಆದರೆ ನೀನು ಅದರಲ್ಲಿ ಶುದ್ಧನಾಗಿ ಹೊರಬರುತ್ತೀಯೆ. ಪವಿತ್ರತೆಯೆಂಬುದು ಧ್ಯಾನದ ಮೊದಲನೇ ಅನಿವಾರ್ಯತೆಯಲ್ಲ, ಮತ್ತೇನೆಂದರೆ ಅದರ ಪರಿಣಾಮ.

ಧ್ಯಾನವೆಂದರೆ ನಿನ್ನ ಪ್ರೇಮದಲ್ಲಿ ನೀನಿರುವುದು. ಧ್ಯಾನದ ಅರ್ಥವೆಂದರೆ ತನ್ನಲ್ಲಿ ತಾನು ಎಂತಹ ಸಂಬಂಧವನ್ನು ಮಾಡಿಕೊಳ್ಳಬೇಕೆಂದರೆ, ಇತರರ ಸಂಬಂಧದ ಅವಶ್ಯಕತೆಯೇ ಉಳಿಯುವುದಿಲ್ಲ. ಧ್ಯಾನವೆಂದರೆ ತನ್ನಲ್ಲಿ ತಾನು ಪೂರ್ಣನಾಗುವುದು. ಧ್ಯಾನವೆಂದರೆ ಒಳಗೂ ಹೊರಗೂ ಸಾಮರಸ್ಯದಿಂದಿರುವಿಕೆ. ಅನೇಕತನವಿಲ್ಲದೆ ಏಕತ್ವವಿಲ್ಲದೆ ಅದ್ವೈತ ಸ್ಥಿತಿಯಲ್ಲಿರುವುದು ಧ್ಯಾನ.

ಏನನ್ನೂ ಮಾಡದೆ ಯೋಚಿಸುವುದಾಗಲಿ, ಭಾವಿಸುವುದಾಗಲಿ, ಅಥವಾ ಲೈಂಗಿಕತೆಯಲ್ಲಿರುವುದಾಗಲಿ, ಶರೀರದಲ್ಲಿಯಾಗಲಿ, ಹೃದಯದಲ್ಲಿಯಾಗಲಿ, ತಲೆಯಲ್ಲಿಯಾಗಲಿ, ಎಲ್ಲೂ ಅಂಟಿಕೊಳ್ಳದೆ ತನ್ನಲ್ಲಿ ತಾನು ನಿಂತಿರುವುದೇ ಧ್ಯಾನ. ಧ್ಯಾನ ಒಂದನ್ನು ಬಿಟ್ಟು ಉಳಿದ ಎಲ್ಲ ಸಂತೋಷಗಳು ಸ್ವ ಪ್ರಯೋಜನಕ್ಕಾಗಿ ಮತ್ತೊಬ್ಬರನ್ನು ಅನುಚಿತವಾಗಿ ಉಪಯೋಗಿಸಿಕೊಳ್ಳುವುದೇ ಆಗಿದೆ. ಧ್ಯಾನ ಒಂದೇ ಸ್ಪರ್ಧೆ ರಹಿತ ಸಂತೋಷ. ಧ್ಯಾನದಲ್ಲಿ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬೇಕಾದದ್ದು ಇಲ್ಲ.

ಸರಳವಾಗಿ ನಿಮ್ಮಲ್ಲಿ ನೀವು ಬೆಳೆಯುತ್ತೀರ. ನೀವಾಗಿ ನಿಲ್ಲುತ್ತೀರ. ಆತ್ಮಜ್ಞಾನವೆಂಬುದು ಹೊರಗಿನಿಂದ ಘಟಿಸುವ ಘಟನೆಯಲ್ಲ, ನಿಮ್ಮಲ್ಲೇ ಮೊಳಕೆಯಾಗುವುದು, ನಿಮ್ಮಲ್ಲೇ ಅರಳುವುದು. ಇದೊಂದು ಅಪ್ರಾಪ್ತ ಪ್ರಾಪ್ತಿಯಲ್ಲ. ಆದುದರಿಂದಲೇ ಆತ್ಮಜ್ಞಾನವು ಅಹಂಕಾರದ ಯಾತ್ರೆಯಲ್ಲ. ಧ್ಯಾನವೆಂಬುದು ಅಹಂ ರಹಿತ ಯಾತ್ರೆ. ಧ್ಯಾನವೆಂಬುದು ಒಳಗೂ ಹೊರಗೂ ಸಾಮರಸ್ಯದಲ್ಲಿರುವುದು.

ಧ್ಯಾನವೆಂಬುದು ತನ್ನ ಪ್ರಚಂಡ ಏಕಾಂತತೆಯಲ್ಲಿ ಚಲನೆ, ಪ್ರವೇಶ. ಒಬ್ಬ ವ್ಯಕ್ತಿ ಧ್ಯಾನವನ್ನು ಪ್ರವೇಶಿಸಿದಾಗ ಸಮುದಾಯದ ಒಂದು ಅಂಗವಾಗುವುದಿಲ್ಲ, ಸಮಷ್ಠಿಯಲ್ಲಿ ಕರಗಿ ಹೋಗುತ್ತಾನೆ. ಅದು ವ್ಯಕ್ತಿಗತ ಆತ್ಮಕ್ಕಿಂತಲೂ
ಉನ್ನತ. ಮನುಷ್ಯ ಸಂಪಾದನೆ ಮಾಡಿಕೊಳ್ಳುವ ಸರ್ವ ಸಂಪತ್ತನ್ನೂ ಮೃತ್ಯು ಅಪಹರಿಸುತ್ತದೆ. ಮೃತ್ಯು ನಾಶಮಾಡಲಾಗದ್ದನ್ನು ಧ್ಯಾನದಿಂದಲೇ, ಧ್ಯಾನ ಒಂದರಿಂದಲೇ ಪಡೆಯುವುದು ಸಾಧ್ಯ. ಧ್ಯಾನಕ್ಕಿಂತಲೂ ಪ್ರಯೋಜನಕರವಾದದ್ದು ಮತ್ತಾವುದೂ ಇಲ್ಲ. ಯಾವುದನ್ನಾದರೂ ಫಲಾಕಾಂಕ್ಷೆ ಇಲ್ಲದೆ ಮಾಡಿದರೆ ಅದೇ ಧ್ಯಾನ.

ಹೇಗೆ ಮನಸ್ಸಾಗದಿರುವುದು? ಎಂಬುದೇ ಧ್ಯಾನದ ಅರ್ಥ. ಧ್ಯಾನವೆಂದರೆ ಮನೋರಹಿತ ಸ್ಥಿತಿಯನ್ನು ಸೃಜಿಸುವಿಕೆ (ಮನೋರಹಿತ ಸ್ಥಿತಿಯಲ್ಲಿ ಉಳಿಯುವಿಕೆ).
ಧ್ಯಾನವೆಂದರೆ, ಅಷ್ಟಾವಕ್ರರ ಪ್ರಕಾರ: “ಜಪವಲ್ಲ. ಏನಾದರೂ ಮಾಡು, ಅದು ಧ್ಯಾನವಾಗದು. ಕರ್ತ ಇರುವ ಸ್ಥಳದಲ್ಲಿ ಧ್ಯಾನವು ಹೇಗಾಗುವುದು? ಎಲ್ಲಿಯವರೆಗೂ ಮಾಡುವುದೆಂಬುದಿದೆಯೊ ಅಲ್ಲಿಯವರೆಗೂ ಭ್ರಾಂತಿಯೇ ಇರುತ್ತದೆ. ಎಲ್ಲಿಯವರೆಗೂ ಮಾಡುವವನು ಇದ್ದಾನೋ ಅಲ್ಲಿನವರೆಗೂ ಅಹಂಕಾರವಿರುತ್ತದೆ.’’

ಅಷ್ಟಾವಕ್ರರು “ಧ್ಯಾನವೆಂದರೆ ಸಾಕ್ಷಿಯಾಗುವುದು, ಎಲ್ಲಿ ಕರ್ತ ಉಳಿಯುವುದಿಲ್ಲವೋ, ಕೇವಲ ನೋಡುವವನು – ಸಾಕ್ಷಿ ಉಳಿಯುತ್ತದೆಯೊ, ದ್ರಷ್ಟಾಮಾತ್ರವೇ, ದ್ರಷ್ಟ ಮಾತ್ರನಾಗುವುದೇ, – ದ್ರಷ್ಟಾ ಮಾತ್ರನಾಗುವುದು ಧ್ಯಾನ, ದ್ರಷ್ಟಾ ಮಾತ್ರನಾಗುವುದೇ ಜ್ಞಾನ. ಧ್ಯಾನದ ಆತ್ಯಂತಿಕವಾದ ಅರ್ಥ ವಿಶ್ರಾಂತಿ. ಮನಸ್ಸು ಧ್ಯಾನದಿಂದಾಗುವ ಪ್ರಯೋಜನವನ್ನು ಕಾಣಲಾರದು. ಏಕೆಂದರೆ ಧ್ಯಾನ ಮತ್ತು ಮನಸ್ಸು ಜತೆಯಲ್ಲಿರಲಾರವು. ಮನಸ್ಸಿದ್ದರೆ ಧ್ಯಾನವಾಗಲಾರದು. ಧ್ಯಾನವಿದ್ದಲ್ಲಿ ಮನಸ್ಸಿರಲಾರದು. ಮನಸ್ಸು ಎಂದೂ ಧ್ಯಾನವನ್ನು ನೋಡಿಲ್ಲ. ಮನಸ್ಸು ಮತ್ತು ಧ್ಯಾನ ಕತ್ತಲು ಬೆಳಕಿನಂತೆ. ಧ್ಯಾನವೆಂಬ ಪ್ರಕಾಶದಲ್ಲಿ ಮನಸ್ಸೆಂಬ ಅಂಧಕಾರವಿಲಾರದು.

ಆದಕಾರಣ ಧ್ಯಾನವನ್ನು ಮನಸ್ಸು ಗ್ರಹಿಸಲಾರದು. ಯಾವ ಬಾಹ್ಯ ಪ್ರಯೋಜನವೂ ಆಗಲಾರದು. ಇದನ್ನು ಒಪ್ಪಿಕೊಳ್ಳಬೇಕು. ಆದರೆ ಆಂತರಿಕ, ಉನ್ನತ, ಶ್ರೇಷ್ಠವಾದ ಉದ್ದೇಶ್ಯಗಳಿವೆ. ಹೆಚ್ಚು ಸಹಜವಾದ, ಹೆಚ್ಚು ಮೌಲ್ಯಪೂರಿತವಾದ ಉದ್ದೇಶ್ಯಗಳು-ಯಾವು ಜೀವನವನ್ನು ಪ್ರಾಮುಖ್ಯವಾಗಿ, ವಿಶೇಷವಾಗಿ ಮಾಡಬಲ್ಲವೊ, ಅರ್ಥಪೂರ್ಣವಾಗಿ ಮಾಡಬಲ್ಲವೋ, ಯಾವು ಶಾಶ್ವತವಾದದ್ದನ್ನು ಕೊಡಬಲ್ಲವೋ, ಯಾವು ನಿನ್ನನ್ನು ಪರಮಾತ್ಮನಿಗೂ, ಪರಮಾತ್ಮನನ್ನು ನಿನಗೂ ಲಭ್ಯವಾಗುವಂತೆ ಮಾಡಬಲ್ಲವೊ ಅಂತಹ ಆಂತರಿಕ ಉದ್ದೇಶ್ಯಗಳು ಧ್ಯಾನದಿಂದ ಲಭ್ಯ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಧ್ಯಾನ ಒಂದರಿಂದಲೇ ಮೃತ್ಯು ಭಯವನ್ನು ದಾಟಲು ಸಾಧ್ಯ. ಧ್ಯಾನ ನಿಮ್ಮ ಜ್ಞಾನಸ್ವರೂಪವನ್ನು ತೆರೆದು ತೋರಿಸುವುದು. ಅಮೃತ ಸ್ವರೂಪವನ್ನು ತೆರೆದಿಡುವುದು. ತನ್ನ ಸ್ವರೂಪವನ್ನು ತಿಳಿದವನೇ ನಿಜವಾಗಿ ಜೀವನ ಸಾರ್ಥಕತೆಯನ್ನು ತಿಳಿದವನು. ಧ್ಯಾನದಿಂದ ನೀವೊಬ್ಬ ಅಲೆಗ್ಜಾಂಡರಾಗದಿರಬಹುದು, ಆದರೆ ಒಬ್ಬ ಬುದ್ಧ, ಆತ್ಮಜ್ಞಾನಿಯಾಗುವುದು ದಿಟ. ನಿಮ್ಮ ಕೈಗಳು ತುಂಬಿ ಹೋಗುತ್ತವೆ. ಕೇವಲ ಭೌತಿಕವಾದ ಹಸ್ತಗಳೇ ಅಲ್ಲ. ಆಂತರಿಕ ಆತ್ಮ ತುಂಬಿ ತುಳುಕುತ್ತದೆ. ಅತ್ಯುತ್ತಮವಾದ ತೃಪ್ತಿ, ಆನಂದ, ಆರ್ಶೀರ್ವಾದ ಸಿಗುತ್ತದೆ. ಇದೇ ಧ್ಯಾನದ ಉದ್ದೇಶ್ಯ. ಅದನ್ನು ಗಣಿತದ ಭಾಷೆಯಲ್ಲಿ ಲೆಕ್ಕವಿಡಲು ಸಾಧ್ಯವಿಲ್ಲ. ತೂಕ ಮಾಡಲು ಸಾಧ್ಯವಿಲ್ಲ. ಅಳತೆ ಮಾಡಲು
ಸಾಧ್ಯವಿಲ್ಲ, ಅಳತೆ ಮಾಡಲಾಗದ್ದು, ಊಹಿಸಲಾಗದ್ದು, ಅನುಭವಿಸಲೇಬೇಕಾದದ್ದು. ಅನುಭವಿಸೇ ತಿಳಿಯಬೇಕಾದದ್ದು. ಲೌಕಿಕ ದೃಷ್ಟಿಯ ಪ್ರಯೋಜನವಿಲ್ಲದ್ದು. ಆದರೆ ಸಂಪೂರ್ಣ ಮತ್ತೋಂದು ಆಯಾಮದ ಉದ್ದೇಶವುಳ್ಳದ್ದು, ಮತ್ತೋಂದು ಆಯಮದಲ್ಲಿ ಅರ್ಥವುಳ್ಳದ್ದು ಹಾಗೂ ವಿಶೇಷವಾದದ್ದು. ಪರಿಪೂರ್ಣತೆ, ತೃಪ್ತಿ, ಆನಂದ, ಆಶೀರ್ವಾದವುಳ್ಳದ್ದು.

ಧ್ಯಾನಕ್ಕೆ ತಾನೇ ತಾನಾಗಿರುವಂತೆ ಒಂದು ಶಕ್ತಿ ಇರಬೇಕು. ಸಂಪೂರ್ಣವಾಗಿ ತಾನೇ ತಾನಾಗಿರುವುದು. “ನಾನು ಮಾತ್ರವೇ ಇದ್ದೇನೆ, ಮತ್ತೊಬ್ಬರಾರು ಇಲ್ಲ (ಮತ್ತೊಂದು ಯಾವುದು ಇಲ್ಲ), ನನ್ನಲ್ಲಿ ನಾನು ತೃಪ್ತ, ನೋವಿಲ್ಲ, (ನಲಿವಿಲ್ಲ) ವಿಕ್ಷೇಪವಿಲ್ಲ, ಏನನ್ನೂ ಗಳಿಸಬೇಕೆಂಬ ಆಸೆಯಿಲ್ಲ, ಕೇವಲ ಸಂಪತ್ತನ್ನು ಗಳಿಸಬೇಕೆಂಬ ಆಸೆಯಷ್ಟೇ ಅಲ್ಲ ದೇವರನ್ನು ಪಡೆಯಬೇಕೆಂಬ ಆಸೆಯೂ ಇಲ್ಲ. ಆಗಲೇ ಧ್ಯಾನವಾಗುವುದು’’. ಎಲ್ಲದರಿಂದಲೂ (ದೂರವಾಗುವ) ಬಿಡಿಸಿಕೊಳ್ಳುವ ಪ್ರಯತ್ನವೇ ಧ್ಯಾನ. ಸಂಪೂರ್ಣವಾಗಿ ನೀನು ಏಕಾಂತವಾಗಿ ಉಳಿದಂದು ಪ್ರಪಂಚವು ಪೂರ್ಣವಾಗಿ ಮಾಯವಾಗುವುದು.

prerane

ಧ್ಯಾನವೆಂಬುದು ಮನೋರಹಿತ ಸ್ಥಿತಿಗೆ ಸೇರಿದ್ದು. ಮನಸ್ಸಿನ ಸ್ಥಿತಿಯಲ್ಲ. ಇಡೀ ಮಾನವ ಜನಾಂಗವನ್ನು ಒಂದಾಗಿಸುವುದು ಧ್ಯಾನ ಮಾತ್ರವೇ. ಇಡೀ ಪೃಥ್ವಿಯನ್ನು ಒಂದು ಕುಟುಂಬದAತೆ ಮಾಡಬಲ್ಲದು ಯಾವುದೆಂದರೆ ಧ್ಯಾನ ಮಾತ್ರವೇ. ನಿಮಗೆ ಹಣ, ಅಧಿಕಾರ, ಗೌರವ, ಪ್ರತಿಷ್ಟೆ, ಯಶಸ್ಸು-ಇವುಗಳಲ್ಲಿ ಆಸಕ್ತಿಯಿದ್ದರೆ ಧ್ಯಾನದಿಂದ (ಅಧ್ಯಾತ್ಮ ವಿದ್ಯೆಯಿಂದ) ಯಾವ ಸಹಾಯವೂ ಆಗಲಾರದು. ವಾಸ್ತವಿಕವಾಗಿ ಇವೆಲ್ಲದರ ಆಸೆಗಳನ್ನು ಧ್ಯಾನ, ಈ ವಿದ್ಯೆ ನಾಶ ಮಾಡುತ್ತದೆ. ನಿಮ್ಮ ದುರಾಸೆಯನ್ನು ನಾಶಮಾಡುತ್ತದೆ. ನಿಮ್ಮ ಅತ್ಯಾಶಾ ಸ್ಥಿತಿಯನ್ನು ತೆಗೆದುಹಾಕುತ್ತದೆ.

ಅಧಿಕಾರಶಾಹಿಯ ಎಲ್ಲ ತೆರವಾದ ಯಾತ್ರೆಗಳು ವ್ಯರ್ಥವೆಂದು ತೋರಿಸಿ ಕೊಡುತ್ತದೆ. ಅತ್ಯಾಶೆಯ ಮೂಲವನ್ನೇ ಅಹಂಕಾರವನ್ನೇ ಸಾಯಿಸುತ್ತದೆ. ಧ್ಯಾನವೆಂದರೆ ಮನೆಗೆ ಹಿಂತಿರುಗಿ ಬರುವುದಲ್ಲದೇ ಮತ್ತೇನೂ ಅಲ್ಲ. ಕೇವಲ
ಅಂತರಂಗದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುವುದು. ಕೇವಲ ಮನೆಗೆ ಹಿಂತಿರುಗಿ ಬರುವುದು, ವಿಶ್ರಾಂತಿ ಪಡೆಯುವುದು, ಎಲ್ಲಿಗೂ ಹೋಗದಿರುವುದು ಧ್ಯಾನ, ಕೇವಲ ನೀವು ಎಲ್ಲಿರುವಿರೊ, ಅಲ್ಲೀಯೇ ಇರುವುದು (ಸ್ವ ಸ್ವರೂಪದಲ್ಲಿ ಉಳಿಯುವುದು).
When you simply close your eyes move into yourself in your own
womb – this is what meditation is.
ಕದಲಿಕೆ ಇಲ್ಲದ ಮನಸ್ಸಿನ ಕ್ಷಣವೇ ಧ್ಯಾನವೆಂಬುದು. ಸಾಮಾನ್ಯವಾಗಿ ಮನುಷ್ಯನು ಧ್ಯಾನವೆಂದರೆ, ಏಕಾಗ್ರತೆಯೆಂದು ಅರ್ಥಮಾಡಿಕೊಳ್ಳುತ್ತಾನೆ. ಇದು ಸರಿಯಲ್ಲ ಧ್ಯಾನವೆಂದರೆ ವಿಶ್ರಾಂತಿ. ಏಕಾಗ್ರತೆ, ವಿಶ್ರಾಂತಿ ಇವೆರಡೂ ಪರಸ್ಪರ ವಿರುದ್ಧ. ಧ್ಯಾನವೆಂಬುದು ಒಂದು ಇಂದ್ರ ಜಾಲದಂತೆ. ಸಾಮಾನ್ಯನನ್ನು ಒಬ್ಬ ವಿಶೇಷನನ್ನಾಗಿ ಪರಿವರ್ತಿಸುವುದು. ಅದನ್ನು ವರ್ಣಿಸಲು ಒಬ್ಬನಿಗೆ ಶಬ್ಧಗಳು ಸಿಗಲಾರದು. ಅದರ ಮುಂದೆ ಕಾವ್ಯವು ಬಿದ್ದು ಹೋಗುತ್ತದೆ. ಕಾವ್ಯವು ವರ್ಣಿಸಲಾರದು. ಸಂಗೀತವು ಅದನ್ನು ವರ್ಣಿಸಲಾರದು, ಎಲ್ಲವೂ ಅದನ್ನು ವರ್ಣಿಸುವಲ್ಲಿ ಸೋತು ಹೋಗುತ್ತವೆ.

ಧ್ಯಾನವೆಂಬುಂದು ಚಿಕಿತ್ಸೆ, ಅದು ಒಂದು (Theory) ಸಿದ್ದಾಂತವಲ್ಲ. ಧ್ಯಾನವೆಂಬುದು ಕಣ್ಣು ರೆಪ್ಪೆಗಳನ್ನು ತೆರೆಸುವ ಒಂದು ಕ್ರಮ, ಒಂದು ಉಪಾಯ ಹಾಗೂ ಒಂದು ರೀತಿಯ ತಾಂತ್ರಿಕತೆ. ಧ್ಯಾನವೆಂದರೆ ಖಾಲಿಯಾಗುವುದಲ್ಲದೆ ಬೇರೆನೂ ಅಲ್ಲ. ಏನೂ ಅಲ್ಲವಾಗುವುದೇ ಧ್ಯಾನ.

ಮನಸ್ಸು ಅತಿರೇಕಗಳಿಗೆ ಚಲಿಸದೆ ಮಧ್ಯ ಬಿಂದುವಿನಲ್ಲಿ ನೆಲಸುವುದೇ ಧ್ಯಾನ. ಧ್ಯಾನದಲ್ಲಿರುವುದೆಂದರೆ ಈ ಮನಸ್ಸು ಏನನ್ನು ಅಡಗಿಸುತ್ತದೆ ಎಂಬುದನ್ನು ಜಾಗೃತಿಯಿಂದ ಗಮನಿಸುವುದು. ಆ ಮನಸ್ಸಿನ ಸ್ಥಿತಿ ಧ್ಯಾನ. ಧ್ಯಾನವೆಂಬುದು ಹೇಗೆ ಕೊಡವಿಕೊಳ್ಳಬೇಕೆಂಬ ಮಾರ್ಗ, ಕಿಟಕಿಗಳನ್ನು ಕಳಚಿಕೊಂಡು ಕೇವಲ ಸತ್ಯತೆಯಲ್ಲಿ ನಿಲ್ಲುವುದು, ಮಧ್ಯದಲ್ಲಿ ಮತ್ಯಾರು ಇಲ್ಲದಿರುವುದು. ಧ್ಯಾನ ಅರ್ಥಚಿತ್ತ ಪ್ರವಾಹವು ನಿಲ್ಲುವಿಕೆ, ಚಿಂತನೆಯ ನಿಲ್ಲುವಿಕೆ. ಏಕಾಗ್ರತೆಯ ಅರ್ಥ ಒಂದೇ ಇರುವಿಕೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ: Prerane : ನಾಯಕತ್ವಕ್ಕಾಗಿ ಅಧ್ಯಾತ್ಮಿಕ ಪ್ರಜ್ಞೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Tumkur News: ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶವನ್ನು ಜೂ.9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
Koo

ಕೊರಟಗೆರೆ: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವವನ್ನು ಜೂ.9ರಂದು ಆಯೋಜನೆ ಮಾಡಲಾಗಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (Tumkur News) ತಿಳಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ 18ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಠದ ಸದ್ಭಕ್ತರ ಸಹಕಾರದಿಂದ ಶ್ರೀ ಮಠದ 18ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ರೀ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

ಇನ್ಪೋಸಿಸ್ ಫೌಂಡೇಶನ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರ ಸಲಹೆಯಂತೆ ಕಳೆದ 17 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಸುಮಾರು 800ಕ್ಕೂ ಹೆಚ್ಚು ವಿವಾಹಗಳು ನಡೆದಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮತ್ತು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 18ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ತುಮಕೂರು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್, ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು, ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ದರ್ಶನ್, ಪರ್ವತಯ್ಯ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.

Continue Reading

ಧಾರ್ಮಿಕ

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಯಾವುದೇ ಸಂದರ್ಭ ಇರಲಿ ದಿನದಲ್ಲಿ ಶುಭ ಸಮಯ ನೋಡಿ ಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು (Akshaya Tritiya 2024) ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿವೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Akshaya Tritiya 2024
Koo

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲ್ಪಡುವ ಹಬ್ಬ ಅಕ್ಷಯ ತೃತೀಯ (Akshaya Tritiya 2024) ಅಥವಾ ಅಕ್ಷಯ ತದಿಗೆ. ಈ ದಿನ ಕೃತ ಯುಗದ ಆರಂಭದ ದಿನ. ವಿಷ್ಣುವಿನ (vishnu) ದಶಾವತಾರಗಳಲ್ಲಿ ಆರನೇ ಅವತಾರವಾದ ಪರಶುರಾಮನ (parasuram) ಹಾಗೂ ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ (basaweshwara) ಜನ್ಮ ದಿನ. ಭಗೀರಥನ (bhagiratha) ಪ್ರಯತ್ನದಿಂದ ಗಂಗೆ (ganga) ಭೂಮಿಗೆ ಬಂದ ದಿನವೂ ಹೌದು. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನವೆಂದು ನಂಬಲಾಗುತ್ತದೆ.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯ ವರ್ಷದ ಮೂರೂವರೆ ಶುಭದಿನಗಳಾದ ವಿಜಯದಶಮಿ (vijayadashami), ದೀಪಾವಳಿ (deepavali) ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಹೀಗಾಗಿ ಈ ದಿನ ಯಾವುದೇ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಅಲ್ಲದೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಒಳ್ಳೆಯ ದಿನ ಎಂದೇ ನಂಬಲಾಗುತ್ತದೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಈ ದಿನ ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ.

ಯಾವುದೇ ಸಂದರ್ಭ ಇರಲಿ. ದಿನದಲ್ಲಿ ಶುಭ ಸಮಯ ನೋಡಿಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


ಶುಭ ಮುಹೂರ್ತ ಯಾವಾಗ?

ಅಖ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯದ ಹಬ್ಬವನ್ನು ಮೇ 10ರಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಮಂಗಳಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ಮಹತ್ವದ ಧಾರ್ಮಿಕ ಆಚರಣೆಗಳು ಮತ್ತು ಚಟುವಟಿಕೆಗಳಿಂದ ಗುರುತಿಸಲ್ಪಡುತ್ತದೆ. ಈ ದಿನ ಚಿನ್ನದ ಖರೀದಿಯು ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ 2024ರ ಪೂಜೆ ಮುಹೂರ್ತವು ಮೇ 10ರಂದು ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. ತೃತೀಯ ತಿಥಿಯು ಮೇ 10ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 2.50ಕ್ಕೆ ಮುಕ್ತಾಯಗೊಳ್ಳುತ್ತದೆ.

ಚಿನ್ನ ಖರೀದಿಗೆ ಶುಭ ಸಮಯ

ಚಿನ್ನವನ್ನು ಖರೀದಿಸಲು ಮೇ 9ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗಿ ಮೇ 11ರಂದು ತೃತೀಯ ತಿಥಿ ಮುಗಿಯುವವರೆಗೆ ಇರುತ್ತದೆ. ನವದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಅಕ್ಷಯ ತೃತೀಯ 2024ರಂದು ಚಿನ್ನವನ್ನು ಖರೀದಿಸಲು ನಿರ್ದಿಷ್ಟ ಸಮಯದಲ್ಲಿ ಸ್ವಲ್ಪ ಬದಲಾಗುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಹೊಸ ದೆಹಲಿಯಲ್ಲಿ ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ, ಮುಂಬಯಿಯಲ್ಲಿ ಬೆಳಗ್ಗೆ 6.6ರಿಂದ ಮಧ್ಯಾಹ್ನ 12.35ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಗ್ಗೆ 5.56ರಿಂದ ಮಧ್ಯಾಹ್ನ 12.16ರವರೆಗೆ ಚಿನ್ನ ಖರೀದಿ ಮಾಡಲು ಶುಭ ಸಮಯವಾಗಿದೆ.

Continue Reading

ಶಿವಮೊಗ್ಗ

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Shivamogga News: ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Siddhivinayaka Swami SrimanMaharathotsava in Ripponpet
Koo

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್‌ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

ಧಾರ್ಮಿಕ

Ballari News: ಬಾಯಿಯೊಳಗೆ ತ್ರಿಶೂಲ; ಬೆನ್ನಿಗೆ ಕೊಕ್ಕೆ ಕಟ್ಟಿಕೊಂಡು ಕಾರು, ರಿಕ್ಷಾ ಎಳೆದ ಭಕ್ತರು!

Ballari News: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು. ಹರಕೆ ತೀರಿಸುವ ಭಕ್ತರ ಆಚರಣೆಗಳು ಗಮನ ಸೆಳೆದವು.

VISTARANEWS.COM


on

Kalamma Devi Pooja Mahotsava in Kampli
Koo

ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.

ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.

ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.

Continue Reading
Advertisement
70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ3 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ3 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ3 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ4 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ4 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು4 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ5 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್5 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ5 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Nissan India
ಆಟೋಮೊಬೈಲ್5 hours ago

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna has severe chest pain Admission in Victoria
ರಾಜಕೀಯ7 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ10 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ11 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌