Food Tips: ಮನೆಯಲ್ಲೇ ಹೊಂಬಣ್ಣದ ಗರಿಗರಿ ದೋಸೆ ಮಾಡಲು ಪಂಚಸೂತ್ರಗಳಿವು! - Vistara News

ಆಹಾರ/ಅಡುಗೆ

Food Tips: ಮನೆಯಲ್ಲೇ ಹೊಂಬಣ್ಣದ ಗರಿಗರಿ ದೋಸೆ ಮಾಡಲು ಪಂಚಸೂತ್ರಗಳಿವು!

ದೋಸೆ ಪ್ರಿಯರು ಮನೆಯಲ್ಲೂ ನಮ್ಮ ದೋಸೆ ಯಾಕೆ ಗರಿಗರಿಯಾಗಿ ಬರುವುದಿಲ್ಲ ಎಂದು ತಲೆಕೆಡಿಸುವುದುಂಟು. ಹಾಗಿದ್ದರೆ ದೋಸೆ ಎಂಬುದು ಇದ್ಯಾವ ಬ್ರಹ್ಮವಿದ್ಯೆಯಿದ್ದೀತು ಎಂದು ಅಂದುಕೊಳ್ಳುವ ಮಂದಿಗೆಲ್ಲ ಹೊಂಬಣ್ಣದ ಗರಿಗರಿಯಾದ ದೋಸೆ ಮಾಡಿ ಹೆಮ್ಮೆಯಿಂದ ಬೀಗಲು ಇಲ್ಲಿವೆ ಸುಲಭ ಪಂಚಸೂತ್ರಗಳು.

VISTARANEWS.COM


on

dosa for breakfast
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಸೆ ಎಂಬ ನಿತ್ಯಾಹಾರವನ್ನು ದಿನವೂ ಬೆಳಗ್ಗೆ ತಿಂದರೂ ಹೊಟೇಲಿಗೆ ಹೋಗಿ ಒಂದು ಮಸಾಲೆ ದೋಸೆ ಎಂದು ಆರ್ಡರ್‌ ಮಾಡುವ ಸುಖವೇ ಬೇರೆ. ಗರಿಗರಿಯಾಗಿ ತೆಳುವಾದ ದೋಸೆಯೊಳಗೆ (crispy dosa) ಮಸಾಲೆ ಇಟ್ಟ ದೋಸೆಯನ್ನು ಮುರಿದು ಬಾಯಿಟ್ಟರೆ ಆಹಾ, ಸ್ವರ್ಗವೇ ಬಾಯಿಗಿಳಿದಂತೆ ಖುಷಿ ಪಡುವ ಮಂದಿ ಬಹುಸಂಖ್ಯಾತರು. ಇಂತಹ ದೋಸೆ ಪ್ರಿಯರು ಮನೆಯಲ್ಲೂ ನಮ್ಮ ದೋಸೆ ಯಾಕಿಷ್ಟು ಗರಿಗರಿಯಾಗಿ ಬರುವುದಿಲ್ಲ ಎಂದು ತಲೆಕೆಡಿಸುವುದುಂಟು. ಯುಟ್ಯೂಬ್‌ ವಿಡಿಯೋಗಳನ್ನೆಲ್ಲ ಜಾಲಾಡಿ, ದೋಸೆಯನ್ನು ಗರಿಗರಿಯಾಗಿಸೋದು ಹೇಗೆ ಎಂಬ ಯಕ್ಷಪ್ರಶ್ನೆಯನ್ನು ಹೊತ್ತು ಸಾಕಷ್ಟು ಶ್ರಮ, ಸಮಯ ಧಾರೆಯೆರೆಯುವುದುಂಟು. ಕೆಲವರಿಗೆ ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಸಿಕ್ಕಿ, ಮನೆಯಲ್ಲಿ ಎಲ್ಲರಿಗೂ ಗರಿಗರಿ ದೋಸೆಯ ಸಂಭ್ರಮಾಚರಣೆ ನಡೆಸಿ ಮೌಂಟ್‌ ಎವರೆಸ್ಟ್‌ ಹತ್ತಿದಷ್ಟು ಖುಷಿಪಟ್ಟರೆ, ಇನ್ನೂ ಕೆಲವರು ಮಾತ್ರ ನಮಗ್ಯಾಕೆ ಹಾಗೆ ಸಾಧ್ಯವಾಗುವುದಿಲ್ಲ ಎಂದು ತಲೆಕೆರೆದುಕೊಂಡು ಎಲ್ಲೋ ಒಮ್ಮೆ ಗರಿಗರಿಯಾಗಿ ಬಂದ ದೋಸೆಯನ್ನೇ ಪಾಲಿಗೆ ಬಂದದ್ದಿಷ್ಟೇ ಎಂದು ಕಣ್ಣಿಗೊತ್ತಿ ತಿನ್ನುತ್ತಾರೆ. ಹಾಗಿದ್ದರೆ ದೋಸೆ ಎಂಬುದು ಇದ್ಯಾವ ಬ್ರಹ್ಮವಿದ್ಯೆಯಿದ್ದೀತು ಎಂದು ಅಂದುಕೊಳ್ಳುವ ಮಂದಿಗೆಲ್ಲ ಹೊಂಬಣ್ಣದ ಗರಿಗರಿಯಾದ ದೋಸೆ ಮಾಡಿ ಹೆಮ್ಮೆಯಿಂದ ಬೀಗಲು ಇಲ್ಲಿವೆ ಸುಲಭ ಪಂಚಸೂತ್ರಗಳು (Food tips).

1. ನಿಮ್ಮದೇ ದೋಸೆ ಹಿಟ್ಟಿರಲಿ, ಹೊರಗಿನಿಂದ ತಂದ ದೋಸೆ ಹಿಟ್ಟಿರಲಿ, ಅದನ್ನು ಫ್ರಿಡ್ಜಿನಲ್ಲಿಟ್ಟಿರುತ್ತೀರಿ. ಬೇಸಿಗೆಯಲ್ಲಿ ಹಿಟ್ಟು ಹೊರಗಿಟ್ಟರೆ ಅಗತ್ಯಕ್ಕಿಂತ ಹೆಚ್ಚು ಹುಳಿ ಬಂದು ದೋಸೆ ಹುಳಿ ಹುಳಿಯಾದೀತು ಎಂಬ ಮುಂಜಾಗ್ರತೆಯಿಂದ ಹಾಗೂ ಹೆಚ್ಚು ದಿನ ಬಳಸಲು ದೋಸೆ ಹಿಟ್ಟನ್ನು ಒಳಗಿಡುವುದು ಸಾಮಾನ್ಯ. ಆದರೆ, ಯಾವಾತ್ತಿಗೂ, ಫ್ರಿಡ್ಜ್‌ನಿಂದ ಹಿಟ್ಟನ್ನು ತೆಗೆದ ಕೂಡಲೇ ದೋಸೆ ಹುಯ್ಯಬೇಡಿ. ಹಿಟ್ಟನ್ನು ದೋಸೆ ಮಾಡುವ ಸುಮಾರು ಒಂದು ಗಂಟೆ ಮೊದಲೇ ಹೊರಗೆ ತೆಗೆದಿಟ್ಟಿರಿ. ಆಗ ಹಿಟ್ಟು ಸಾಮಾನ್ಯ ಉಷ್ಣತೆಗೆ ಬಂದಿರುತ್ತದೆ. ಅತಿಯಾಗಿ ತಂಪಾದ ಹಿಟ್ಟಿನಿಂದ ದೋಸೆ ಹೊಯ್ಯುವಾಗ ಅದು ಗಂಟುಗಂಟಾಗಿ ಸರಿಯಾಗಿ ಹರಡಲು ಸಾಧ್ಯವಾಗುವುದಿಲ್ಲ. ಇದರಿಂದ ತೆಳುವಾದ ದೋಸೆ ಮಾಡಲು ಸಾಧ್ಯವಾಗುವುದಿಲ್ಲ.

masala dosa

2. ಹಿಟ್ಟು ರುಬ್ಬುವಾಗ ಹೆಚ್ಚು ನೀರು ಹಾಕಬೇಡಿ. ನೀರು ಅತಿಯಾಗಿ ಹುಯ್ದರೆ ಹಿಟ್ಟು ತೆಳುವಾಗಿ ದೋಸೆ ಗರಿಗರಿಯಾಗಿ ಬರುವುದಿಲ್ಲ. ಒಂದು ಹದಕ್ಕಿಂತ ಹಿಟ್ಟು ಹೆಚ್ಚು ತೆಳ್ಳಗಾದರೆ ದೋಸೆ ಚೆನ್ನಾಗಿ ಬರುವುದಿಲ್ಲ. ಹಾಗಾಗಿ, ದೋಸೆ ಹಿಟ್ಟಿಗೆ ಎಷ್ಟು ನೀರು ಹಾಕಬೇಕು ಎಂಬುದೂ ಕೂಡಾ ಒಂದು ಕಲೆಯೇ.

3. ದೋಸೆಯ ಕಾವಲಿ ಅಥವಾ ತವಾಕ್ಕೆ ಎಣ್ಣೆ ಅಥವಾ ತುಪ್ಪ ಹಚ್ಚುವುದರಲ್ಲೂ ನೀವು ತಪ್ಪು ಮಾಡಬಹುದು. ಸರಿಯಾಗಿ ಎಣ್ಣೆ ಹಚ್ಚುವುದೂ ಬಹಳ ಮುಖ್ಯ. ಎಣ್ಣೆ ಹಚ್ಚುವ ಮೊದಲು ಕಾವಲಿ ಕಾದಿರಬೇಕು. ಆದರೆ ಹೆಚ್ಚು ಕಾದು ಹೊಗೆಯೇಳಬಾರದು. ಹೆಚ್ಚು ಕಾದರೆ ನೀರು ಚಿಮುಕಿಸಿ ಕಾವಲಿಯನ್ನು ದೋಸೆ ಹುಯ್ಯುವ ಹದಕ್ಕೆ ತರಬಹುದು, ಹಾಗೂ ಕಾವಲಿ ಹದವಾಗಿದೆಯೇ ಎಂದು ಪರೀಕ್ಷಿಸಬಹುದು. ಈರುಳ್ಳಿಯನ್ನು ಎರಡು ಭಾಗವಾಗಿ ಮಾಡಿಕೊಂಡು ಅದನ್ನು ಕಾವಲಿಗೆ ಪ್ರತಿ ದೋಸೆ ಮಾಡುವ ಮೊದಲೂ ಉಜ್ಜಿಕೊಳ್ಳುವುದರಿಂದ ದೋಸೆ ಚೆನ್ನಾಗಿ ಏಳುತ್ತದೆ. ಕಾವಲಿಯ ಕೊನೆಯಲ್ಲಿ ಹೆಚ್ಚಿಗೆ ಎಣ್ಣೆ ಇರದಂತೆ ನೋಡಿಕೊಳ್ಳುವುದೂ ಮುಖ್ಯ. ಕಾದ ಕಾವಲಿಯನ್ನು ಒಂದೇ ಬಿಸಿಯಲ್ಲಿ ಇಟ್ಟುಕೊಂಡಿರುವುದೂ ಕೂಡಾ ಮುಖ್ಯ. ಕಾವಲಿಯ ಉರಿಯನ್ನು ಆಗಾಗ ಬದಲಾಯಿಸಬೇಡಿ.

ಇದನ್ನೂ ಓದಿ: Food tips: ಅಣಬೆಗಳನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಹೇಗೆ?

4. ತೇವವಿರುವ ಕಾವಲಿಯನ್ನು ಬಳಸುವುದರಿಂದಲೂ ಕೂಡಾ ದೋಸೆ ಕೆಡುತ್ತದೆ. ದೋಸೆ ಹುಯ್ಯುವ ಮೊದಲು ಕಾವಲಿಯನ್ನು ತೊಳೆದು ನೀರಿರದಂತೆ ಉಜ್ಜಿಕೊಳ್ಳುವುದು ಮುಖ್ಯ. ದೋಸೆ ಹಿಟ್ಟು ಕಾವಲಿಗೆ ಅಂಟಿಕೊಳ್ಳುತ್ತಿದೆಯೆಂದಾದಲ್ಲಿ ಈ ತೊಂದರೆಯನ್ನು ಹಿಟ್ಟಿನ ಮೂಲಕವೇ ಪರಿಹರಿಸಿಕೊಳ್ಳಬಹುದು. ಕೊಂಚ ಹಿಟ್ಟನ್ನು ಕಾವಲಿಯಲ್ಲಿ ಹಾಕಿ ಹರವಿ, ಅದರಿಂದರೇ ಕಾವಲಿಯನ್ನೊಮ್ಮೆ ಪೂರ್ತಿ ಉಜ್ಜಿ ತೆಗೆದು ಕಾವಲಿಯನ್ನು ಮುಂದಿನ ದೋಸೆಗೆ ರೆಡಿಯಾಗುವಂತೆ ಮಾಡಬಹುದು. ಇದು ಕಾವಲಿಯಲ್ಲಿ ಬೇಡದ ತೇವಾಂಶವನ್ನೆಲ್ಲ ಹೀರಿ ಕಾವಲಿಯನ್ನು ಹುಯ್ಯಲು ರೆಡಿಯಾಗಿಸುತ್ತದೆ.

5. ಹಿಟ್ಟು ಹದವಾಗಿ ಹುಳಿ ಬಂದಿರುವುದೂ ಕೂಡಾ ಮುಖ್ಯ. ಹುಳಿ ಬಂದಿರದ ಹಿಟ್ಟಿನಿಂದ ಉತ್ತಮ ದೋಸೆ ಸಾಧ್ಯವಿಲ್ಲ. ಹಿಟ್ಟಿಗೆ ಕೊಂಚ ಅಂದರೆ ಒಂದೆರಡು ಚಮಚ ಸಕ್ಕರೆ ಸೇರಿಸಿದರೆ ದೋಸೆ ಹೊಂಬಣ್ಣಕ್ಕೆ ಬರುತ್ತದೆ. ಹಿಟ್ಟು ರುಬ್ಬುವಾಗ, ಒಂದೆರಡು ಚಮಚ ಮೆಂತೆ ಅಥವಾ ಕಡಲೇ ಬೇಳೆ ಅಥವಾ ಒಂದು ಮುಷ್ಟಿ ಅವಲಕ್ಕಿ ಹಾಕಿ ರುಬ್ಬಿದರೆ ದೋಸೆ ಗರಿಗರಿಯಾಗುತ್ತದೆ. ಒಳ್ಳೆಯ ಕಬ್ಬಿಣದ ಕಾವಲಿಯನ್ನು ದೋಸೆಗೆಂದೇ ಇಟ್ಟುಕೊಳ್ಳುವುದು ಒಳ್ಳೆಯದು. ಅದನ್ನು ದೋಸೆಗಾಗಿ ಎಣ್ಣೆ ಹಚ್ಚಿಟ್ಟು ಇಟ್ಟು ಪಳಗಿಸುವುದೂ ಕೂಡಾ ಮುಖ್ಯ.

ಇದನ್ನೂ ಓದಿ: Food tips: ಅರಿಶಿನ ಹಾಗೂ ಬೆಲ್ಲ ಎಂಬ ಅಮೃತದಂಥ ಜೋಡಿ: ಮ್ಯಾಜಿಕ್‌ ಔಷಧಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading

ಆಹಾರ/ಅಡುಗೆ

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಾಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಈ ಬಗ್ಗೆ (Eating Bread) ಇಲ್ಲಿದೆ ಮಾಹಿತಿ.

VISTARANEWS.COM


on

Eating Bread
Koo

ಪಾಶ್ಚಾತ್ಯ ಬೆಳಗಿನ ಉಪಾಹಾರದ ಶೈಲಿ ಇದಾದರೂ, ಭಾರತೀಯ ಮನೆಗಳಲ್ಲೂ ಇಂದು ಬ್ರೆಡ್‌ ಸಾಮಾನ್ಯವಾಗಿದೆ. ಗಡಿಬಿಡಿಯಲ್ಲಿ ಆಫೀಸ್‌ ಹೊರಡುವಾಗ, ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದಿರುವಾಗ, ಹೊಟ್ಟೆಗೇನೂ ರುಚಿಸದೆ ಇದ್ದಾಗ, ಮಕ್ಕಳಿಗೆ ರುಚಿರುಚಿಯಾದ ಸ್ಯಾಂಡ್‌ವಿಚ್‌ ಮಾಡಿಕೊಡಲು, ಹೀಗೆ ಬ್ರೆಡ್‌ ತಿನ್ನಲು ನಮಗೆ ನಾನಾ ಕಾರಣಗಳು. ಹೆಚ್ಚು ತಲೆಬಿಸಿಯಿಲ್ಲದೆ, ಬಹುಬೇಗನೆ ಉಪಹಾರವೆಂಬ ಕೆಲಸವನ್ನು ಮುಗಿಸಿಕೊಂಡು ಆಫೀಸ್‌ ಹೊರಡಲು, ಮಕ್ಕಳಿಗೆ ಟಿಫನ್‌ ಕಟ್ಟಿಕೊಡಲು ಬ್ರೆಡ್‌ ಸರಳವಾಗಿ ದಕ್ಕುವ ಆಹಾರಗಳಲ್ಲಿ ಒಂದು. ಬಹುತೇಕರಿಗೆ ಇದು ನಿತ್ಯಾಹಾರವೂ ಹೌದು. ಆದರೆ, ಸಂಸ್ಕರಿಸಿದ ಆಹಾರವಾದ ಬ್ರೆಡ್‌ ನಿಜಕ್ಕೂ ಆರೋಗ್ಯಕರವೇ ಎಂಬ ಪ್ರಶ್ನೆಗೆ ಇಂದು ಎಲ್ಲರಿಗೂ ಉತ್ತರ ಗೊತ್ತೇ ಇದ್ದರೂ, ಬ್ರೆಡ್‌ ತಿನ್ನದೆ ಇರಲು ಸಾಧ್ಯವಿಲ್ಲ ಎಂಬ ಉತ್ತರವೂ ಸಿದ್ಧವಾಗಿರುತ್ತದೆ. ಹಾಗಾದರೆ, ನಾವು ನಿತ್ಯವೂ ಬಳಸುವ ಬ್ರೆಡ್‌ನ ಬಗ್ಗೆ, ಅದರಲ್ಲಿ ಬಳಸಲಾದ ವಸ್ತುಗಳ ಬಗ್ಗೆ ನಾವು ಸ್ವಲ್ಪ ಹೆಚ್ಚು ಜಾಗೃತರಾಗಿದ್ದರೆ ನಮ್ಮ ಹೊಟ್ಟೆ ಸೇರಿದ ಬ್ರೆಡ್‌ನ ಗುಣಮಟ್ಟ ನಮಗೆ ತಿಳಿಯುತ್ತದೆ. ಹಾಗಾದರೆ ಬನ್ನಿ, ನೀವು ಬ್ರೆಡ್‌ ಖರೀದಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು (Eating Bread) ಎಂಬುದನ್ನು ನೋಡೋಣ.

Bread Foods You Should Never Refrigerate

ಬ್ರೆಡ್‌ ಕೊಳ್ಳುವಾಗ ಗಮನಿಸಿ

ಬ್ರೆಡ್‌ ಮಾಡುವ ಸಂದರ್ಭ ಸಕ್ಕರೆ ಹಾಕಿಯೇ ಇರುತ್ತಾರೆ ಎಂಬ ಸತ್ಯ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ನಿಜ. ಯಾಕೆಂದರೆ ಬ್ರೆಡ್‌ಗಾಗಿ ಬಳಸುವ ಈಸ್ಟ್‌ ಅನ್ನು ಆಕ್ಟಿವೇಟ್‌ ಮಾಡಲು ಸಕ್ಕರೆ ಬೇಕೇ ಬೇಕು. ಹಾಗಾಗಿ ನೀವು ಯಾವಾಗಲೂ ಬ್ರೆಡ್‌ ಖರೀದಿಸುವ ಮೊದಲು ಕೆಲವು ಅಂಶಗಳನ್ನು ನೆನಪಿಟ್ಟುಕೊಳ್ಳಲೇಬೇಕು. ಬ್ರೆಡ್‌ನ ಹಿಂಬದಿಯಲ್ಲಿ ಬರೆದ ಪಟ್ಟಿಯಲ್ಲಿ ಸಕ್ಕರೆ ಎಷ್ಟು ಬಳಸಿದ್ದಾರೆಂದು ಪರೀಕ್ಷಿಸಿ. ಒಂದಲ್ಲ ಒಂದು ವಿಧದಲ್ಲಿ ಕೆಲವೊಮ್ಮೆ ಬೇರೆ ಮೂಲಗಳ ಮೂಲಕವೂ ಸೇರಿಸಲ್ಪಟ್ಟಿರುತ್ತದೆ. ಕೇವಲ ಸಕ್ಕರೆಯಷ್ಟೇ ಅಲ್ಲ, ಎಲ್ಲ ಮೂಲಗಳ ಮೂಲಕ ಸಕ್ಕರೆ ಎಷ್ಟು ಸೇರಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ಮಾಡುವ ಬ್ರೆಡ್‌ನಲ್ಲಿ ಹೆಚ್ಚು ಸಕ್ಕರೆ ಇರುತ್ತದೆ. ಅಲ್ಲದೆ, ಕಬ್ಬಿನ ಹಾಲು, ಜೇನುತುಪ್ಪ ಅಥವಾ ಇನ್ನಾವುದೇ ಮೂಲಗಳ ಮೂಲಕವೂ ಸಕ್ಕರೆ ಸೇರಿರಬಹುದು.

ಉಪ್ಪಿನ ಪ್ರಮಾಣ ಎಷ್ಟಿದೆ ನೋಡಿ

ಬ್ರೆಡ್‌ ಮಾಡುವ ಸಂದರ್ಭ ಅದಕ್ಕಾಗಿ ಬಳಸಿದ ಸಕ್ಕರೆಯಂತೆ ಉಪ್ಪಿನ ಪ್ರಮಾಣವೂ ಗಮನದಲ್ಲಿರಲಿ. ಬ್ರೆಡ್‌ ಮಾಡಲು ಬಳಸಿದ ವಸ್ತುಗಳ ಪಟ್ಟಿಯಲ್ಲಿ ಉಪ್ಪು ಎಷ್ಟು ಸೇರಿಸಲಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಬಹಳಷ್ಟು ಸಾರಿ ರುಚಿಯನ್ನು ಹೆಚ್ಚಿಸಲು, ಅಗತ್ಯಕ್ಕಿಂತಲೂ ಹೆಚ್ಚು ಉಪ್ಪನ್ನು ಫ್ಯಾಕ್ಟರಿಗಳು ಬಳಸುತ್ತವೆ. ಒಂದು ಅಂದಾಜಿನ ಪ್ರಕಾರ ಸಂಶೋಧನೆಯೊಂದು ಹೇಳಿದಂತೆ ಒಂದು ಬ್ರೆಡ್‌ ಸ್ಲೈಸ್‌ನಲ್ಲಿ 100ರಿಂದ 200 ಎಂಜಿ ಸೋಡಿಯಂಗಿಂತ ಹೆಚ್ಚಿರಬಾರದು. ಹಾಗಾಗಿ ಇದನ್ನು ಪರೀಕ್ಷೆ ಮಾಡಿಕೊಂಡೇ ಖರೀದಿಸಿ.

ಯಾವ ಪದಾರ್ಥ ಬಳಸಿದ್ದಾರೆ ನೋಡಿ

ಉಪ್ಪು ಹಾಗೂ ಸಕ್ಕರೆಯಷ್ಟೇ ಅಲ್ಲ, ನೀವು ಖರೀದಿಸಿದ ಬ್ರೆಡ್‌ನಲ್ಲಿ ಯಾವೆಲ್ಲ ಪದಾರ್ಥಗಳನ್ನು ಬಳಸಲಾಗಿದೆ ಎಂದು ನೋಡಿ. ಬಿಳಿಯಾದ ಮೈದಾದ ಬ್ರೆಡ್‌ನ ಬದಲು ಗೋಧಿಯ ಬ್ರೆಡ್‌ ಬಳಸಿ. ಬಹಳಷ್ಟು ಸಾರಿ ಗೋಧಿಯ ಬ್ರೆಡ್‌ನಲ್ಲೂ ಕಡಿಮೆ ಪ್ರಮಾಣದಲ್ಲಿ ಗೋಧಿ ಬಳಕೆಯಾಗಿರುತ್ತದೆ ಎಂಬ ಸತ್ಯವೂ ನಿಮಗೆ ಗೊತ್ತಿರಲಿ. ಹೀಗಾ ಗಿ ಶೇ.100ರಷ್ಟು ಗೋಧಿ ಅಥವಾ ಹೋಲ್‌ ವೀಟ್‌ ಬ್ರೆಡ್‌ ಎಂದು ಬರೆದಿರುವ ಬ್ರೆಡ್‌ ಖರೀದಿಸಿ. ಅಥವಾ ಮಲ್ಟಿಗ್ರೈನ್‌ ಬ್ರೆಡ್‌ ಖರೀದಿಸಿ.

Image Of Bread Health Benefits

ತಯಾರಿ ದಿನ ಗಮನಿಸಿ

ಬ್ರೆಡ್‌ ಖರೀದಿಸುವಾಗ ಎಲ್ಲಕ್ಕಿಂತ ಮೊದಲು ಪರೀಕ್ಷಿಸಬೇಕಾದ್ದು ಅದನ್ನು ತಯಾರಿಸಿದ ದಿನಾಂಕ ಹಾಗೂ ಎಷ್ಟು ದಿನ ಬಳಸಬಹುದೆಂಬ ದಿನಾಂಕ. ದಿನಾಂಕ ಮುಗಿದುಹೋದ ಬ್ರೆಡ್‌ನನ್ನು ಬಳಸಲೇಬೇಡಿ. ಹಾಳಾಗಿರದಂತೆ ಕಂಡರೂ ಬಳಸಬೇಡಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಕೆಲವೊಮ್ಮೆ ಅಂಗಡಿಗಳಲ್ಲಿ ಇಟ್ಟಿರುವ ಬ್ರೆಡ್‌ ಅನ್ನು ಇಲಿಯೋ, ಕೀಟವೋ ಕಡಿದು ಸಣ್ಣ ತೂತುಗಳೂ ಆಗಿರುತ್ತವೆ. ಗಡಿಬಿಡಿಯಲ್ಲಿ ಖರೀದಿಸುವಾಗ ಇವು ಕಾಣುವುದಿಲ್ಲ. ಹೀಗಾಗಿ, ಬ್ರೆಡ್‌ನ ಪ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖರೀದಿಸುವಾಗಲೇ ಖಚಿತಪಡಿಸಿಕೊಳ್ಳಿ.

ಕೃತಕ ಪ್ರಿಸರ್ವೇಟಿವ್‌ ಗಮನಿಸಿ

ಬ್ರೆಡ್‌ನಲ್ಲಿ ಬಳಸಲಾದ ಕೃತಕ ಪ್ರಿಸರ್ವೇಟಿವ್‌ಗಳನ್ನು ಗಮನಿಸಿ. ಆದಷ್ಟೂ ತಾಜಾ ಬ್ರೆಡ್ಡನ್ನೇ ಖರೀದಿಸಿ. ಹೆಚ್ಚು ದಿನ ಉಳಿಯಬಲ್ಲ ಬ್ರೆಡ್‌ಗಳಲ್ಲಿ ಖಂಡಿತವಾಗಿಯೂ ಪ್ರಿಸರ್ವೇಟಿವ್‌ಗಳಿರುತ್ತವೆ.

Dietary Fiber Bread Health Benefits Whole grain bread is rich in dietary fiber, which aids in digestion, helps maintain bowel regularity, and can contribute to a feeling of fullness, potentially aiding in weight management.

ನಾರಿನಂಶ ಮುಖ್ಯ

ಬ್ರೆಡ್‌ನಲ್ಲಿ ಎಷ್ಟು ನಾರಿನಂಶ ಇದೆ ಎಂದು ಪರೀಕ್ಷಿಸಿಕೊಳ್ಳಿ. ಸಾಮಾನ್ಯವಾಗಿ ಬ್ರೆಡ್‌ ಮಾಡಿದ ಮೇಲೆ ನಾರಿನಂಶವನ್ನು ಕಳೆದುಕೊಳ್ಳುತ್ತದೆ. ನಾರಿನಂಶ ಹೆಚ್ಚಿರುವ ಬ್ರೆಡ್‌ ಯಾವಾಗಲೂ ಉತ್ತಮ ಆಯ್ಕೆ.

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ಆಹಾರ/ಅಡುಗೆ

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

ಭಾರತ ತನ್ನ ಸಿಹಿತಿಂಡಿಯ (Top 10 Puddings) ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ.

VISTARANEWS.COM


on

Top 10 Puddings
Koo

ಭಾರತ ಪಾಕಶಾಸ್ತ್ರದಲ್ಲಿ (Top 10 Puddings) ಹೆಸರು ಮಾಡಿದ ದೇಶ. ಭಾರತದ ಬಗೆಬಗೆಯ ಆಹಾರಗಳು, ತಿನಿಸುಗಳು, ವೈವಿಧ್ಯಮಯ ಸಿಹಿತಿಂಡಿಗಳು ಪ್ರಪಂಚದಾದ್ಯಂತ ಹೆಸರು ಮಾಡಿದೆ. ದೇಶವಿದೇಶಗಳಿಂದ ಇಲ್ಲಿನ ಆಹಾರ ಸವಿಯಲೆಂದೇ ಪ್ರವಾಸಿಗರು ಬರುತ್ತಾರೆ. ಸಿಹಿತಿಂಡಿ ಇಲ್ಲಿನ ಜನರ ನಿತ್ಯದ ಆಹಾರಾಭ್ಯಾಸ. ಹಬ್ಬಗಳು ಬಂದರಂತೂ ಈ ಸಿಹಿ ತಿನಿಸುಗಳ ಸಡಗರ ಇನ್ನೂ ಹೆಚ್ಚುತ್ತದೆ. ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ, ಬೇಋಎ ಬೇರೆ ಆಚರಣೆಗಳನ್ನು ಹೊಂದಿದ ಜನರ ಬಗೆಬಗೆಯ ಆಹಾರಾಭ್ಯಾಸಗಳು, ತಿನಿಸುಗಳು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿ. ಇದೀಗ, ಭಾರತ ತನ್ನ ಸಿಹಿತಿಂಡಿಯ ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಅಕ್ಕಿ ಪಾಯಸ ಅಥವಾ ಖೀರ್‌ ಮಾಡುವುದು ಸಾಮಾನ್ಯ. ಈ ಅಕ್ಕಿ ಪಾಯಸಕ್ಕೆ ಐದನೇ ಸ್ಥಾನ ಸಿಕ್ಕಿದರೆ, ನಾಲ್ಕನೇ ಸ್ಥಾನದಲ್ಲಿ ಫಿರ್ನಿ ಇದೆ. ಒಂಭತ್ತನೇ ಸ್ಥಾನದಲ್ಲಿ ತಮಿಳುನಾಡಿನ ಪ್ರಸಿದ್ಧ ಸಕ್ಕರೆ ಪೊಂಗಲ್‌ ಅಥವಾ ಸಿಹಿ ಪೊಂಗಲ್‌ ಆಯ್ಕೆಯಾಗಿದೆ.
ಸಾಂಪ್ರದಾಯಿಕ ತಿನಿಸು ಫಿರ್ನಿಯನ್ನು ಸಾಮಾನ್ಯವಾಗಿ ಪುಟ್ಟ ಪುಟ್ಟ ಮಣ್ಣಿನ ಮಡಕೆಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ತಿನ್ನುವುದು ರೂಢಿ. ಬೇಸಿಗೆಯಲ್ಲಿ ಐಸ್‌ಕ್ರೀಂನಂತೆ ಹಿತವಾಗಿರುವ ಸಾಂಪ್ರದಾಯಿಕ ಶೈಲಿಯ ಸಿಹಿತಿನಿಸಿದು. ಗುಲಾಬಿ ದಳಗಳು, ಪಿಸ್ತಾ ಬಾದಾಮಿಯ ಚೂರುಗಳಿಂದ ಅಲಂಕರಿಸಿ ಕೊಡಲಾಗುತ್ತದೆ.

Sweet kheer

ಸಿಹಿಯಾದ ಖೀರು

ಅಕ್ಕಿಯನ್ನು ಬಳಸಿ ಮಾಡಲಾಗುವ ಸಿಹಿಯಾದ ಖೀರು, ಯಾವುದೇ ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೇವರಿಗೆ ನೈವೇದ್ಯ ಇಡಲು ಮಾಡಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಹಾಲು ಹಾಕಿ ಕೇಸರಿಯನ್ನು ಉದುರಿಸಿ ಮಾಡುವ ಸರಳವಾದ ಪಾಯಸವಿದು. ಉತ್ತರ ಭಾರತ, ದಕ್ಷಿಣ ಭಾರತವೆಂಬ ಬೇಧವಿಲ್ಲದೆ, ಈ ಸಿಹಿಯನ್ನು ಎಲ್ಲೆಡೆ ಮಾಡುತ್ತಾರೆ.

Sweet Pongal

ಸಿಹಿ ಪೊಂಗಲ್‌

ಸಿಹಿ ಪೊಂಗಲ್‌ ಅಥವಾ ಸಕ್ಕರೆ ಪೊಂಗಲ್‌ ತಮಿಳುನಾಡಿನ ಪ್ರಖ್ಯಾತ ಸಿಹಿತಿನಿಸು. ಹೆಸರು ಬೇಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಿ ಬೆಲ್ಲ ಹಾಗೂ ತುಪ್ಪ ಹಾಕಿ ಮಾಡುವ ಘಮಘಮಿಸುವ ಸಿಹಿ ಪಾಯಸವಿದು. ಸಾಂಪ್ರದಾಯಿಕ ಹೊಸ ವರ್ಷವಾದ ಪೊಂಗಲ್‌ ಹಬ್ಬದ ಆಚರಣೆಯ ಸಂದರ್ಭ ಸಿಹಿ ಪೊಂಗಲ್‌ ಅನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿ, ದೇವರಿಗೆ ಇಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಬಹಳ ರುಚಿಯಾದ ಸರಳವಾದ ಪಾಯಸವಿದು.

Firin Sutlac

ಟರ್ಕಿಗೆ ಮೊದಲ ಸ್ಥಾನ

ಈ ಸ್ಪರ್ಧೆಯಲ್ಲಿ, ಮೊದಲ ಸ್ಥಾನದಲ್ಲಿ ಟರ್ಕಿಯ ಫಿರಿನ್‌ ಸುಟ್‌ಲ್ಯಾಕ್‌, ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಖಾವೋ ನಿಯಾವೋ ಮಾಮುಅಂಗ್‌, ಮೂರನೇ ಸ್ಥಾನದಲ್ಲಿ ಶೋಲೆಹ್‌ ಝರ್ದ್‌ ಇವೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಫಿರ್ನಿ, ಐದನೇ ಸ್ಥಾನದಲ್ಲಿ ನಮ್ಮ ಖೀರ್‌ ಇವೆ. ಇವಲ್ಲದೆ, ಡೆನ್ಮಾರ್ಕ್‌, ಟರ್ಕಿ, ಪೋರ್ಚುಗಲ್‌ನ ಸಿಹಿ ತಿನಿಸುಗಳೂ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

Continue Reading

Latest

Cake Tragedy: ಕೇಕ್‌ ತಿಂದು ಬಾಲಕಿ ಸಾವಿನ ಪ್ರಕರಣ; ಸಾವಿಗೆ ನಿಖರ ಕಾರಣ ಬಯಲು

Cake Tragedy: ಹುಟ್ಟು ಹಬ್ಬದಂದು ಕೇಕ್ ತಿಂದು ಬಾಲಕಿ ಮೃತಪಟ್ಟ ಪ್ರಕರಣದಲ್ಲಿ ಬಾಲಕಿ ತಿಂದ ಕೇಕ್ ನಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಸಿಹಿಕಾರಕ ಬೆರೆಸಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆ ದೇಶಾದ್ಯಂತ ಆತಂಕ ಮೂಡಿಸಿತ್ತು.

VISTARANEWS.COM


on

By

Cake Tragedy
Koo

ಪಟಿಯಾಲಾ: ಹುಟ್ಟು ಹಬ್ಬದಂದು (birthday) ಬೇಕರಿಯೊಂದರಿಂದ ಆನ್‌ಲೈನ್ (online) ಮೂಲಕ ತರಿಸಲಾಗಿದ್ದ ಕೇಕ್ (Cake Tragedy) ತಿಂದು ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ (death) ಪ್ರಕರಣಕ್ಕೆ ಸಂಬಂಧಿಸಿ ನಡೆದ ತನಿಖೆಯಲ್ಲಿ ಕೇಕ್ ನಲ್ಲಿ ಹೆಚ್ಚಿನ ಸಾಂದ್ರತೆಯ ಕೃತಕ ಸಿಹಿಕಾರಕ ಬೆರೆಸಲಾಗಿತ್ತು; ಸಾವಿಗೆ ಇದೇ ಕಾರಣ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪಂಜಾಬ್‌ನ (punjab) ಪಟಿಯಾಲಾದಲ್ಲಿ (patiyala) ಮಾರ್ಚ್ 24ರಂದು ಈ ಘಟನೆ ನಡೆದಿತ್ತು. ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಬಾಲಕಿ ಮಾನ್ವಿಯ ಸಾವಿನ ತನಿಖೆಗೆ ಆದೇಶಿಸಿದ್ದರು.

ಮಾನ್ವಿಯ ಹುಟ್ಟುಹಬ್ಬದಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಚಾಕೊಲೇಟ್ ಕೇಕ್ ಅನ್ನು ತರಿಸಲಾಗಿತ್ತು. ಇದನ್ನು ತಿಂದು ಇಡೀ ಕುಟುಂಬ ಅಸ್ವಸ್ಥಗೊಂಡಿತ್ತು.

ಇದನ್ನೂ ಓದಿ: Belagavi News: ಬಿಲ್ ಮಂಜೂರಾತಿ ವಿಚಾರ ಗ್ರಾಪಂ ಅಧ್ಯಕ್ಷ-ಸದಸ್ಯರ ಮಧ್ಯೆ ಮಾರಾಮಾರಿ; ಸಿಸಿ ಕ್ಯಾಮೆರಾದಲ್ಲಿ ಸೆರೆ

ಕೃತಕ ಸಿಹಿ

ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, ವರದಿಯಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಸಿಹಿ ರುಚಿಯ ಸಿಂಥೆಟಿಕ್ ಸಂಯುಕ್ತವನ್ನು ಬಳಸಲಾಗಿದೆ ಎಂದು ಕಂಡು ಹಿಡಿಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ. ವಿಜಯ್ ಜಿಂದಾಲ್ ತಿಳಿಸಿದ್ದಾರೆ.

ಸಣ್ಣ ಪ್ರಮಾಣದ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗಿದ್ದರೂ ಹೆಚ್ಚಿನ ಮಟ್ಟಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.

ಬೇಕರಿ ವಿರುದ್ಧ ಕ್ರಮ

ಶೀಘ್ರದಲ್ಲೇ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಏನಾಗಿತ್ತು?

10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್‌ಲೈನ್‌ ಮೂಲಕ ಕೇಕ್ ಆರ್ಡರ್ ಮಾಡಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿತ್ತು. ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದರು. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಮಾನ್ವಿ ಸ್ವಲ್ಪ ಹೆಚ್ಚಾಗಿಯೇ ಕೇಕ್ ತಿಂದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬಾಲಕಿ ಮೃತಪಟ್ಟಿದ್ದಳು.

ಬಾಲಕಿಯ ಸಾವಿನ ಕುರಿತು ತನಿಖೆಗೆ ಮುಂದಾದ ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯದಿಂದ ಕೇಕ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಮಾನ್ವಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ವೀಡಿಯೊದಲ್ಲಿ ಮಾನ್ವಿ ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಳು.

ಅವಳು ಕೇಕ್ ಕತ್ತರಿಸಿ ಎಲ್ಲರೂ ತಿಂದ ಕೆಲವೇ ಗಂಟೆಗಳ ಅನಂತರ ಅವಳ ಕಿರಿಯ ಸಹೋದರಿ ಸೇರಿದಂತೆ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು. ಹುಡುಗಿಯರು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಮಾನ್ವಿ ಅವರ ಬಾಯಿಯಲ್ಲಿ ಶುಷ್ಕತೆ ಉಂಟಾಗಿತ್ತು ಎಂದು ಆಕೆಯ ಅಜ್ಜ ಹೇಳಿದರು.

ಆಕೆ ನಿತ್ರಾಣಗೊಂಡಾಗ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಮ್ಲಜನಕವನ್ನು ಹಾಕಲಾಯಿತು ಆದರೆ ಯಾವುದಕ್ಕೂ ಸ್ಪಂದಿಸದೆ ಅವಳು ಮೃತಪಟ್ಟಿದ್ದಳು. ‘ಕೇಕ್ ಕನ್ಹಾ’ನಿಂದ ಆರ್ಡರ್ ಮಾಡಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಮಾನ್ವಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

Continue Reading
Advertisement
srinivasa prasad sutturu sri
ಕರ್ನಾಟಕ31 mins ago

Srinivasa Prasada Passes Away: ಕೊನೇ ಬಾರಿಗೆ ʼCoffee’ ಎಂದು ಬರೆದಿದ್ದ ಶ್ರೀನಿವಾಸ ಪ್ರಸಾದ್;‌ ನಾಳೆ ಅಂತ್ಯಕ್ರಿಯೆ; ಗಣ್ಯರ ಸಂತಾಪ

Gurucharan Singh soon to get married faced financial crunch
ಸಿನಿಮಾ52 mins ago

Gurucharan Singh: ನಿಗೂಢವಾಗಿ ನಾಪತ್ತೆಯಾದ ಈ ನಟನಿಗೆ ಶೀಘ್ರದಲ್ಲೇ ಮದುವೆ!

IPL 2024
ಪ್ರಮುಖ ಸುದ್ದಿ58 mins ago

IPL 2024 : ಡೇವಿಡ್ ವಾರ್ನರ್ ಅವರೊಂದಿಗೆ ‘ಈ’ ಅದ್ಭುತ ಐಪಿಎಲ್ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ

War 2 A galaxy of stars descended at a Mumbai restaurant on Sunday evening
ಸ್ಯಾಂಡಲ್ ವುಡ್1 hour ago

War 2 Movie: `ವಾರ್‌2′, `ಬ್ರಹ್ಮಾಸ್ತ್ರ’ ತಂಡಕ್ಕೆ ಸ್ಪೆಷಲ್‌ ಡಿನ್ನರ್‌ ಪಾರ್ಟಿ ಆಯೋಜಿಸಿದ ಅಯಾನ್ ಮುಖರ್ಜಿ !

hd revanna prajwal revanna
ಪ್ರಮುಖ ಸುದ್ದಿ1 hour ago

Hasan Pen Drive Case: ಎಲ್ಲೂ ಕಾಣದ ಪ್ರಜ್ವಲ್‌, ಇಂದು ಎಚ್‌ಡಿ ರೇವಣ್ಣ ಹೈಕೋರ್ಟ್‌ ಮೊರೆ

ವಿದೇಶ2 hours ago

Stab wound: ಗರ್ಲ್‌ಫ್ರೆಂಡ್‌ನ ಚುಚ್ಚಿ ಕೊಲ್ಲೋ ಮುನ್ನ ಗೂಗಲ್‌ ಸರ್ಚ್‌ ಮಾಡಿದ್ದ ಹಂತಕ!

Actress Haripriya Vasishta Simha Buys A Swanky New SUV Car
ಸ್ಯಾಂಡಲ್ ವುಡ್2 hours ago

Actress Haripriya: ಐಷಾರಾಮಿ ಕಾರು ಖರೀದಿಸಿದ ʻಸಿಂಹಪ್ರಿಯಾʼ! ಬೆಲೆ ಎಷ್ಟು?

Kane Williamson
ಕ್ರೀಡೆ2 hours ago

Kane Williamson : ನ್ಯೂಜಿಲ್ಯಾಂಡ್ ವಿಶ್ವ ಕಪ್​ ತಂಡಕ್ಕೆಕೇನ್​ ವಿಲಿಯಮ್ಸನ್​ ನಾಯಕ

PM Narendra Modi
ಕರ್ನಾಟಕ2 hours ago

PM Narendra Modi: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

PM Not OBC Said by Rahul Gandhi and BJP hits back to him
ಪ್ರಮುಖ ಸುದ್ದಿ2 hours ago

PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 29 2024
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202418 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202421 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202422 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202423 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

ಟ್ರೆಂಡಿಂಗ್‌