ವಿಸ್ತಾರ Money Guide:‌ ವಾಹನ ವಿಮೆ ಪ್ರೀಮಿಯಂಗೆ ಇನ್ನು ನಿಮ್ಮ ಚಾಲನೆಯ ಶೈಲಿಯೇ ಆಧಾರ! - Vistara News

ಮನಿ-ಗೈಡ್

ವಿಸ್ತಾರ Money Guide:‌ ವಾಹನ ವಿಮೆ ಪ್ರೀಮಿಯಂಗೆ ಇನ್ನು ನಿಮ್ಮ ಚಾಲನೆಯ ಶೈಲಿಯೇ ಆಧಾರ!

ವಾಹನ ವಿಮೆ ವಲಯದಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಅನೂಹ್ಯ ಬದಲಾವಣೆಗೆ ಹಾದಿ ಸುಗಮವಾಗಿದೆ. ವಾಹನ ಚಲಾಯಿಸುವ ಪ್ರವೃತ್ತಿಯನ್ನು ಆಧರಿಸಿ ವಿಮೆ ಪ್ರೀಮಿಯಂ ಪಡೆಯುವ ಸೌಲಭ್ಯ ಬಂದಿದೆ. ವಾಹನ ಹೆಚ್ಚು ಓಡಿಸಿದರೆ ಹೆಚ್ಚು ಪ್ರೀಮಿಯಂ, ಕಡಿಮೆ ಓಡಿಸಿದರೆ ಡಿಸ್ಕೌಂಟ್!

VISTARANEWS.COM


on

car driving
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಮೆ ನಿಯಂತ್ರಕ ಪ್ರಾಧಿಕಾರ (IRDAI) ಇದೀಗ ಟೆಲಿಮ್ಯಾಟಿಕ್ಸ್‌ ಆಧಾರಿತ ವಾಹನ ವಿಮೆ ಉತ್ಪನ್ನಗಳ ಮಾರಾಟಕ್ಕೆ ವಿಮೆ ಕಂಪನಿಗಳಿಗೆ ಅನುಮತಿ ನೀಡಿದೆ. ಇದರ ಅಡಿಯಲ್ಲಿ ನೀವು ನಿಮ್ಮ ವಾಹನವನ್ನು ಚಲಾಯಿಸುವ ರೀತಿಗೆ ಅನುಗುಣವಾಗಿ ವಿಮೆ ಪಡೆಯಬಹುದು.

ಏನಿದು ಟೆಲಿಮ್ಯಾಟಿಕ್ಸ್‌ ಆಧಾರಿತ ಮೋಟಾರು ವಾಹನ ವಿಮೆ?

ಮೊದಲಿಗೆ ಟೆಲಿಮ್ಯಾಟಿಕ್ಸ್‌ ಆಧಾರಿತ ವಾಹನ ವಿಮೆ ( Telematics based motor insurance) ಎಂದರೇನು ಎಂಬುದನ್ನು ತಿಳಿಯುವುದು ಅವಶ್ಯಕ. ಈ ಪಾಲಿಸಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸುವ ಕ್ರಮ, ಸಂಚಾರ ನಿಯಮಗಳನ್ನು ಪಾಲಿಸುವ ಶಿಸ್ತು ಮತ್ತು ಗುಣಮಟ್ಟವನ್ನು ಆಧರಿಸಿ ವಿಮೆಯ ಪ್ರೀಮಿಯಂ ದರ ನಿಗದಿಯಾಗುತ್ತದೆ. ಭವಿಷ್ಯದಲ್ಲಿ ಟೆಲಿಮ್ಯಾಟಿಕ್ಸ್‌ ಆಧಾರಿತ ಮೋಟಾರು ವಾಹನ ವಿಮೆ ಹೆಚ್ಚು ಜನಪ್ರಿಯವಾಗಬಹುದು ಎನ್ನಲಾಗುತ್ತಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ನಿಮ್ಮ ವಾಹನದ ಮಾದರಿ ಮತ್ತಿತರ ಅಂಶಗಳನ್ನು ಆಧರಿಸಿ ವಿಮೆ ಪ್ರೀಮಿಯಂ ನಿರ್ಧಾರವಾಗುತ್ತದೆ. ಇದರ ಪರಿಣಾಮ ಒಂದೇ ಮಾಡೆಲ್‌ನ ಕಾರನ್ನು ಇಬ್ಬರು ಬಳಸುತ್ತಿದ್ದರೆ, ಇಬ್ಬರಿಗೂ ಪ್ರೀಮಿಯಂ ಒಂದೇ ರೀತಿ ಇರುತ್ತದೆ. ಆದರೆ ಒಂದು ಕಾರಿನ ಚಾಲಕ ಸುರಕ್ಷಿತ ಚಾಲನೆ ಮಾಡುವವನಾಗಿದ್ದರೆ, ಅಂಥ ಕಾರಿಗೂ ಒಂದೇ ರೀತಿ ಪ್ರೀಮಿಯಂ ಇರಬೇಕೆ? ಈ ಪ್ರಶ್ನೆಗೆ ಪರಿಹಾರ ಟೆಲಿಮ್ಯಾಟಿಕ್ಸ್‌ ತಂತ್ರಜ್ಞಾನ ಆಧಾರಿತ ವಿಮೆ.

ಪ್ರಸ್ತುತ ವಿಮೆ ಕಂಪನಿಗಳು ಐಆರ್‌ಡಿಎಐನ ಸ್ಯಾಂಡ್‌ಬಾಕ್ಸ್‌ ಉಪಕ್ರಮದ ಅಡಿಯಲ್ಲಿ ಬಿಡುಗಡೆಗೊಳಿಸಬಹುದು. ಇಲ್ಲಿ ಸ್ವತಃ ಐಆರ್‌ಡಿಎಐ ಹಾಕಿ ಕೊಡುವ ನೀತಿಯ ಚೌಕಟ್ಟಿನಡಿಯಲ್ಲಿ ವಿಮೆ ಕಂಪನಿಗಳು ಇಂಥ ವಿಮೆ ಉತ್ಪನ್ನಗಳನ್ನು ಬಿಡುಗಡೆಗೊಳಿಸಬಹುದು. ಉದಾಹರಣೆಗೆ ಎಡಿಲ್‌ವೈಸ್‌ ಜನರಲ್‌ ಇನ್ಷೂರೆನ್ಸ್‌ ಇತ್ತೀಚೆಗೆ ಸ್ವಿಚ್‌ ( SWITCH ) ಎಂಬ ಮೋಟಾರು ವಾಹನ ವಿಮೆಯನ್ನು ಬಿಡುಗಡೆಗೊಳಿಸಿದೆ. ಇದರ ವಿಶೇಷತೆ ಏನೆಂದರೆ, ಆ್ಯಪ್ ಒಂದು ವಾಹನದ ಚಲನೆಯನ್ನು ಗುರುತಿಸುತ್ತದೆ. ಹಾಗೂ ವಾಹನ ಚಾಲನೆಯಲ್ಲಿದ್ದಾಗ ಮಾತ್ರ ವಿಮೆ ಸಕ್ರಿಯವಾಗುತ್ತದೆ. ಹೀಗಾಗಿ ವಾಹನವನ್ನು ಹೆಚ್ಚು ಚಲಾಯಿಸಿದರೆ ಪ್ರೀಮಿಯಂ ಹೆಚ್ಚುತ್ತದೆ ಹಾಗೂ ಕಡಿಮೆ ಬಳಸಿದರೆ ಡಿಸ್ಕೌಂಟ್‌ ಸಿಗುತ್ತದೆ. ಜತೆಗೆ ಶಿಸ್ತಿನಿಂದ ಸುರಕ್ಷಿತವಾಗಿ ಚಲಾಯಿಸಿದರೆ ಕೂಡ ಲಾಭವಾಗಲಿದೆ. ಇದು ಗ್ರಾಹಕರಿಗೆ ಅನುಕೂಲಕರ ಎನ್ನುತ್ತಾರೆ ತಜ್ಞರು.

ಕೋವಿಡ್‌ ಬಿಕ್ಕಟ್ಟಿನ ಬಳಿಕ ಅನೇಕ ಮಂದಿಯ ಕೆಲಸದ ವಿಧಾನಗಳು ಮತ್ತು ಪ್ರಯಾಣದ ಪದ್ಧತಿ ಬದಲಾಗಿದೆ. ಎಷ್ಟೋ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಾರೆ. ಹೀಗಾಗಿ ಕಾರು ವಿಮೆ ಪ್ರೀಮಿಯಂ ಅನ್ನು ಅವರ ವಾಹನ ಚಲಾವಣೆಯ ಕ್ರಮಗಳಿಗೆ ಅನುಸಾರ ನಿರ್ಧರಿಸಿದರೆ ಸೂಕ್ತ ಎನ್ನುತ್ತಾರೆ ತಜ್ಞರು.

” ಈಗಿನ ಜಮಾನದ ವಾಹನ ಬಳಕೆದಾರರ ಕ್ರಮಗಳು ಬದಲಾಗಿವೆ. ಅವರ ಬಳಕೆಗೆ ತಕ್ಕಂತೆ ವಿಮೆ ಸೌಕರ್ಯವನ್ನು ಕೊಡುವುದರಿಂದ ಹೆಚ್ಚು ಅನುಕೂಲಕರವಾಗಲಿದೆ. ” ಕಡಿಮೆ ವಾಹನ ಚಲಾಯಿಸಿ ಕಡಿಮೆ ಪ್ರೀಮಿಯಂ ಕೊಡಿ, ಚೆನ್ನಾಗಿ ವಾಹನ ಚಲಾಯಿಸಿಯೂ ರಿಯಾಯತಿ ಪಡೆಯಿರಿʼ ಎನ್ನುವುದು ನಮ್ಮ ಆಶಯʼʼ ಎನ್ನುತ್ತಾರೆ ಎಡಿಲ್‌ವೈಸ್‌ ಜನರಲ್‌ ಇನ್ಷೂರೆನ್ಸ್‌ನ ಸಿಇಒ ಶನಾಯ್‌ ಘೋಷ್.‌

ವಾಹನ ಚಾಲನೆ ಗುಣಮಟ್ಟ ನಿರ್ಧಾರ ಹೇಗೆ?

ಟೆಲಿಮ್ಯಾಟಿಕ್ಸ್‌ ಆಧಾರದಲ್ಲಿ ಆ್ಯಪ್ ಮೂಲಕ ವಾಹನ ಚಾಲನೆಯ ಗುಣಮಟ್ಟ ಅಳೆಯುವುದು ಹೇಗೆ ಎನ್ನುವಿರಾ. ಇಲ್ಲಿ ಡ್ರೈವಿಂಗ್‌ ಸ್ಕೋರ್‌ ನೀಡಲಾಗುತ್ತದೆ. ಅತಿಯಾದ ವೇಗ, ಅಡ್ಡಾದಿಡ್ಡಿ ಚಾಲನೆ, ಹಠಾತ್‌ ಬ್ರೇಕ್‌ ಹಾಕುವುದು ಇತ್ಯಾದಿಗಳನ್ನು ಎಸಗಿದರೆ ವಾಹನ ಚಾಲನೆಯ ಗುಣಮಟ್ಟ ಕಳಪೆಯಾಗುತ್ತದೆ. ಸಂಚಾರದ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಸ್ಕೋರ್‌ ಸುಧಾರಿಸುತ್ತದೆ. ಇದನ್ನು ಪತ್ತೆ ಹಚ್ಚಲು ಸೂಕ್ತ ಸಾಧನವನ್ನು ವಾಹನದಲ್ಲಿ ಅಳವಡಿಸಲಾಗುತ್ತದೆ. ಹೀಗಿದ್ದರೂ ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ವಾಹನವನ್ನು ಎಲ್ಲಿಗೆ ತೆಗೆದುಕೊಂಡು ಹೋದರೂ ವಿಮೆ ಕಂಪನಿಗೆ ಲೊಕೇಶನ್‌ ಶೇರ್‌ ಆಗುವುದರಿಂದ ಗೊತ್ತಾಗುತ್ತದೆ.

ಒಟ್ಟಾರೆಯಾಗಿ ನೂತನ ತಂತ್ರಜ್ಞಾನದ ಪರಿಣಾಮ ವಾಹನ ವಿಮೆ ಉದ್ದಿಮೆಯಲ್ಲಿ ಸ್ವಾರಸ್ಯಕರ ಬದಲಾವಣೆಯ ಕಾಲ ಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Credit Card New Rules: ಕ್ರೆಡಿಟ್ ಕಾರ್ಡ್‌ಗೆ ಹೊಸ ನಿಯಮ; ಗ್ರಾಹಕರು ಈಗ ಏನು ಮಾಡಬೇಕು?

ಎಲ್ಲಾ ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಆದೇಶ ಮಾಡಿದ್ದು, ಇದು ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Credit Card New Rules
Koo

ಕ್ರೆಡಿಟ್ ಕಾರ್ಡ್ (Credit Card New Rules) ಬಿಲ್ ಪಾವತಿ (bill payment) ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲಾಗಿದ್ದು, ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಎಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ವಹಿಸುವ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ರವಾನಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಆದೇಶದಲ್ಲಿ ತಿಳಿಸಿದೆ.

ಆದರೆ, ಕ್ರೆಡಿಟ್ ಕಾರ್ಡ್ ಪಾವತಿಗಳಿಗಾಗಿ CRED ಮತ್ತು PhonePe ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ತಮ್ಮ ಬ್ಯಾಂಕ್‌ಗಳು ಇನ್ನೂ ಸಕ್ರಿಯವಾಗಿಲ್ಲ ಎಂದು ಅನೇಕ ಗ್ರಾಹಕರು ದೂರಿದ್ದಾರೆ.

ಬ್ಯಾಂಕ್ ಏಕೀಕರಣದ ಪ್ರಸ್ತುತ ಸ್ಥಿತಿ ಏನಿದೆ?

ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲು ಅಧಿಕಾರ ಹೊಂದಿರುವ 34 ಬ್ಯಾಂಕ್‌ಗಳಲ್ಲಿ 12 ಮಾತ್ರ ಪ್ರಸ್ತುತ BBPS ಪ್ಲಾಟ್‌ಫಾರ್ಮ್‌ನಲ್ಲಿ ಇದೆ. ಉಳಿದ 22 ಬ್ಯಾಂಕ್‌ಗಳು ಇನ್ನೂ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಲ್ಲಿವೆ. ಪ್ರಸ್ತುತ ಎಸ್‌ಬಿಐ ಕಾರ್ಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಯು ಸಣ್ಣ ಹಣಕಾಸು ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್ ಗಳು ಬಿಬಿಪಿಎಸ್ ಪ್ಲಾಟ್ ಫಾರ್ಮ್ ನಲ್ಲಿ ಇವೆ.

ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯೆಸ್ ಬ್ಯಾಂಕ್ ಗಳು ಸೇರಿದಂತೆ ಇನ್ನು ಹಲವು ಬ್ಯಾಂಕ್ ಗಳು ಬಿಬಿಪಿಎಸ್ ನೊಂದಿಗೆ ಸೇರುವ ಪ್ರಯತ್ನದಲ್ಲಿದೆ.

ಇನ್ನೂ ಅಪ್‌ಡೇಟ್‌ ಆಗಿಲ್ಲ ಏಕೆ?

ಕೆಲವು ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳುವಲ್ಲಿ ವಿಳಂಬವನ್ನು ಅನುಸರಿಸಲು ಹಲವಾರು ಅಂಶಗಳು ಕಾರಣವೆಂದು ಹೇಳಬಹುದು. ಏಕೀಕರಣವು ಅಸ್ತಿತ್ವದಲ್ಲಿರುವ ಸಿಸ್ಟಮ್‌ಗಳಿಗೆ ಗಮನಾರ್ಹವಾದ ನವೀಕರಣಗಳ ಅಗತ್ಯವಿದೆ. ಇದು ಸಂಕೀರ್ಣವಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ದುಬಾರಿ ಪ್ರಕ್ರಿಯೆಯಾಗಿದೆ.

ಕೆಲವು ಬ್ಯಾಂಕುಗಳು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ಕೈಗೊಳ್ಳಲು ಅಗತ್ಯವಾದ ಸಂಪನ್ಮೂಲಗಳು ಅಥವಾ ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿಲ್ಲ. ಇದಲ್ಲದೆ, ಬ್ಯಾಂಕ್‌ಗಳು ಬಿಲ್ ಪಾವತಿ ಸೌಲಭ್ಯಕ್ಕಿಂತ ಹೆಚ್ಚು ನಿರ್ಣಾಯಕ ಅಥವಾ ಲಾಭದಾಯಕವೆಂದು ಪರಿಗಣಿಸುವ ಡಿಜಿಟಲ್ ಬ್ಯಾಂಕಿಂಗ್ ಅಥವಾ ಹಣಕಾಸು ಸೇವೆಗಳ ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದೆ. ಹೆಚ್ಚುವರಿಯಾಗಿ, ಅನೇಕ ಬ್ಯಾಂಕುಗಳು ತಮ್ಮದೇ ಆದ ಪಾವತಿ ವ್ಯವಸ್ಥೆಯನ್ನು ಹೊಂದಿವೆ ಮತ್ತು ಗ್ರಾಹಕರನ್ನು ತಮ್ಮ ಪರಿಸರ ವ್ಯವಸ್ಥೆಯೊಳಗೆ ನಿಕಟ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ವಹಿವಾಟಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಲು ಆದ್ಯತೆ ನೀಡುತ್ತಿವೆ. ಹಾಗಾಗಿ ಈ ಅಪ್‌ಡೇಟ್‌ ಪ್ರಕ್ರಿಯೆ ವಿಳಂಬವಾಗಿದೆ.

ಏನು ಇದರ ಪರಿಣಾಮ?

ಆರ್‌ಬಿಐನ ಹೊಸ ಆದೇಶವು ಪ್ರಾಥಮಿಕವಾಗಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಅವಲಂಬಿಸಿರುವ ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಪ್ಲಾಟ್‌ಫಾರ್ಮ್‌ಗಳು ಕೊಡುಗೆಗಳನ್ನು ನೀಡುತ್ತಿತ್ತು.

ಬ್ಯಾಂಕ್‌ಗಳು ಬಿಬಿಪಿಎಸ್ ಅನ್ನು ಅಳವಡಿಸಿಕೊಳ್ಳದಿದ್ದರೆ ಬಳಕೆದಾರರು ತಮ್ಮ ಪಾವತಿಗಳೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬಿಬಿಪಿಎಸ್‌ನ ಹಿಂದಿನ ಮುಖ್ಯ ಆಲೋಚನೆಯು ಬಿಲ್ ಪಾವತಿ ಪ್ರಕ್ರಿಯೆಯನ್ನು ಕೇಂದ್ರೀಕರಿಸುವುದು ಮತ್ತು ಸುಗಮಗೊಳಿಸುವುದು. ಬಳಕೆದಾರರಿಗೆ ಒಂದೇ ಪ್ಲಾಟ್‌ಫಾರ್ಮ್‌ನಿಂದ ಬಹು ಬಿಲ್‌ಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬಿಬಿಪಿಎಸ್ ಗೆ ಪ್ರವೇಶವಿಲ್ಲದೆ ಬಳಕೆದಾರರು ಹಲವಾರು ಪ್ಲಾಟ್‌ಫಾರ್ಮ್‌ಗಳನ್ನು ನ್ಯಾವಿಗೇಟ್ ಮಾಡಬೇಕಾಗಬಹುದು ಅಥವಾ ಹಲವಾರು ಪಾವತಿ ಸೆಟಪ್‌ಗಳನ್ನು ನಿರ್ವಹಿಸಬೇಕಾಗಬಹುದು. ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದು.

ಬಿಬಿಪಿಎಸ್ ನೊಂದಿಗೆ ಬ್ಯಾಂಕ್‌ಗಳನ್ನು ಸಂಯೋಜಿಸದ ಕ್ರೆಡಿಟ್ ಕಾರ್ಡ್ ಬಳಕೆದಾರರು ಕೆಲವು ಬಿಲ್ ಪಾವತಿಗಳಿಗೆ ತಮ್ಮ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

ಹಾಗಾದರೆ ಗ್ರಾಹಕರು ಏನು ಮಾಡಬಹುದು?

ಸದ್ಯಕ್ಕೆ ಬಿಬಿಪಿಎಸ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಬ್ಯಾಂಕ್ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸಲಹೆ ನೀಡಲಾಗುತ್ತಿದೆ. ಈ ಮಾಹಿತಿಯು ಸಾಮಾನ್ಯವಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಗ್ರಾಹಕ ಸೇವಾ ಚಾನೆಲ್‌ಗಳ ಮೂಲಕ ಲಭ್ಯವಿರುತ್ತದೆ. ಬ್ಯಾಂಕ್‌ಗಳು ಇನ್ನೂ ಬಿಬಿಪಿಎಸ್ ನಲ್ಲಿ ಸೇರಿಕೊಳ್ಳದೇ ಇದ್ದರೆ ತಮ್ಮ ಬಿಲ್ ಪಾವತಿ ಕಷ್ಟವಾಗಬಹುದು. ಗಡುವು ಮೀರಿದ ದಂಡ ಶುಲ್ಕದಿಂದ ಪಾರಾಗಲು ಪರ್ಯಾಯ ಪಾವತಿ ವಿಧಾನಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಆಯಾ ಬ್ಯಾಂಕ್‌ನ ಕಾಲ್‌ ಸೆಂಟರ್‌ಗೆ ಕರೆ ಮಾಡಿ ನೆರವು ಕೋರಬೇಕು.

Continue Reading

ಮನಿ-ಗೈಡ್

Money Guide: ಮಗುವಿನ ಬರ್ತ್‌ಡೇಗೆ ಒಂದೊಳ್ಳೆ ಉಡುಗೊರೆ ನೀಡಬೇಕೆ? ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ನೀವೂ ಮಗುವಿನ ಹುಟ್ಟಿದ ಹಬ್ಬಕ್ಕೆ ಏನಾದರೂ ಗಿಫ್ಟ್‌ ಕೊಡಬೇಕು ಎನ್ನುವ ಯೋಚನೆಯಲ್ಲಿದ್ದೀರಾ? ಈ ಉಡುಗೊರೆ ಅವರ ಉಜ್ವಲ ಭವಿಷ್ಯಕ್ಕೂ ನೆರವಾಗಬೇಕು ಎಂದು ಯೋಚಿಸುತ್ತಿದ್ದೀರಾ? ಹೌದು ಎಂದಾದರೆ ನೀವು ಅಂಚೆ ಕಚೇರಿಯ ಬಾಲ್‌ ಜೀವನ್ ಬಿಮಾ ಯೋಜನೆಯಲ್ಲಿ ಮಗುವಿನ ಹೂಡಿಕೆ ಮಾಡಬಹುದು. ಏನಿದು ಯೋಜನೆ? ಯಾರೆಲ್ಲ ಅರ್ಹರು? ಮುಂತಾದ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರ ಕನಸು. ಮಕ್ಕಳು ಸದಾ ಸಂತಸದಿಂದ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಏನೇ ತ್ಯಾಗ ಮಾಡಲೂ ಸಿದ್ಧರಿರುತ್ತಾರೆ. ತಮ್ಮಂತೆ ಮಕ್ಕಳು ಕಷ್ಟಪಡಬಾರದೆಂದು ಒದ್ದಾಡುತ್ತಾರೆ. ಇದೇ ಕಾರಣಕ್ಕೆ ಮಕ್ಕಳು ಕೇಳಿದ್ದನ್ನೆಲ್ಲ ತಂದು ಗುಡ್ಡೆ ಹಾಕುತ್ತಾರೆ. ಅದರಲ್ಲಿಯೂ ಮಕ್ಕಳ ಬರ್ತ್‌ಡೇ ಬಂತೆಂದರೆ ಸಾಕು ದುಬಾರಿ ಉಡುಗೊರೆ ನೀಡಲು ಮುಂದಾಗುತ್ತಾರೆ. ನೀವೂ ಮಗುವಿನ ಹುಟ್ಟಿದ ಹಬ್ಬಕ್ಕೆ ಏನಾದರೂ ಗಿಫ್ಟ್‌ ಕೊಡಬೇಕು ಎನ್ನುವ ಯೋಚನೆಯಲ್ಲಿದ್ದೀರಾ? ಈ ಉಡುಗೊರೆ ಅವರ ಉಜ್ವಲ ಭವಿಷ್ಯಕ್ಕೂ ನೆರವಾಗಬೇಕು ಎಂದು ಯೋಚಿಸುತ್ತಿದ್ದೀರಾ? ಹೌದು ಎಂದಾದರೆ ನೀವು ಅಂಚೆ ಕಚೇರಿಯ ಬಾಲ್‌ ಜೀವನ್ ಬಿಮಾ (Bal Jeevan Bima) ಯೋಜನೆಯಲ್ಲಿ ಮಗುವಿನ ಹೂಡಿಕೆ ಮಾಡಬಹುದು. ಏನಿದು ಯೋಜನೆ? ಯಾರೆಲ್ಲ ಅರ್ಹರು? ಮುಂತಾದ ಸಂಪೂರ್ಣ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಏನಿದು ಯೋಜನೆ?

ಭಾರತೀಯ ಅಂಚೆ ಕಚೇರಿ ಮಕ್ಕಳಿಗಾಗಿಯೇ ಆರಂಭಿಸಿದ ಯೋಜನೆ ಇದು. 5ರಿಂದ 20 ವರ್ಷದೊಳಗಿನ ಮಕ್ಕಳ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪ್ರತಿ ದಿನ ಮಕ್ಕಳ ಹೆಸರಿನಲ್ಲಿ 6 ರೂ. ಹೂಡಿಕೆ ಮಾಡಿದರೆ ಮೆಚ್ಯುರಿಟಿ ಆದಾಗ 1 ಲಕ್ಷ ರೂ. ಪಡೆಯಬಹುದು. ಆಕಸ್ಮಿಕವಾಗಿ ಮೃತಪಟ್ಟರೆ ಬಳಿಕ ಹಣ ಕಟ್ಟಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಪಾಲಕರಿಗೆ 1 ಲಕ್ಷ ರೂ. ಸಂದಾಯವಾಗುತ್ತದೆ.

ಯಾರೆಲ್ಲ ಅರ್ಹರು?

ಅರ್ಜಿ ಸಲ್ಲಿಸುವ ಪಾಲಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಮಗುವಿನ ವಯಸ್ಸು ಕನಿಷ್ಠ 5 ವರ್ಷ ಮತ್ತು ಗರಿಷ್ಠ ವಯಸ್ಸು 20 ವರ್ಷ. ಈ ಯೋಜನೆಯಡಿ ಒಂದು ಕುಟುಂಬದ 2 ಮಕ್ಕಳು ಮಾತ್ರ ಪ್ರಯೋಜನಗಳನ್ನು ಪಡೆಯಬಹುದು. ದೈನಂದಿನ ಹೂಡಿಕೆ ಆಯ್ಕೆ ಪಾಲಕರ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಇತರ ಹಣಕಾಸು ಸಹಾಯಕ್ಕೆ ಬಳಕೆ ಮಾಡಬಹುದು. ಈ ಯೋಜನೆ ಹಣವನ್ನು ಉಳಿತಾಯ ಮಾಡಲೂ ಸಹಕಾರಿ.

ಹೂಡಿಕೆ ಹೇಗೆ?

ಈ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತವು 1,00,000 ರೂ. ಮತ್ತು ಗರಿಷ್ಠ ವಿಮಾ ಮೊತ್ತ 3,00,000 ರೂ. ಪ್ರತಿ ದಿನ, ಮಾಸಿಕ, ಪಾಕ್ಷಿಕ, ಅರ್ಧ ವಾರ್ಷಿಕ, ವಾರ್ಷಿಕ ಹೀಗೆ ನಿಮ್ಮ ಆಯ್ಕೆಯ ವಿಧಾನದಲ್ಲಿ ಹೂಡಿಕೆ ಮಾಡಬಹುದು. ಉದಾಹರಣೆ ನೋಡುವುದಾದರೆ, ನೀವು 5 ವರ್ಷಗಳಿಗೆ ಹೂಡಿಕೆ ಮಾಡುತ್ತಿದ್ದರೆ ಪ್ರತಿದಿನ 18 ರೂ. ಪಾವತಿಸಬೇಕು. ಅದೇ 20 ವರ್ಷಗಳವರೆಗೆ ಹೂಡಿಕೆ ಮಾಡುತ್ತಿದ್ದರೆ ದಿನಕ್ಕೆ 6 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಷರತ್ತುಗಳು

ಪಾಲಿಸಿದಾರ ಮಧ್ಯದಲ್ಲಿಯೇ ಮೃತಪಟ್ಟರೆ ಹಣವನ್ನು ಪಾವತಿಸಬೇಕಾಗಿಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಸಂಪೂರ್ಣ ಹಣ ಸಿಗುತ್ತದೆ. ಮಧ್ಯದಲ್ಲಿಯೇ ಪಾಲಿಸಿ ವಿತ್ ಡ್ರಾ ಮಾಡಲು 5 ವರ್ಷ ಕಾಯಬೇಕು. 5 ವರ್ಷಕ್ಕಿಂತ ಮೊದಲು ಪಾಲಿಸಿ ಹಣ ಪಡೆಯಲು ಸಾಧ್ಯವಿಲ್ಲ. ಸದ್ಯ ಈ ಪಾಲಿಸಿಯಲ್ಲಿ ಸಾಲ ಪಡೆಯಲು ಅವಕಾಶವಿಲ್ಲ.

ಎಲ್ಲಿ ಲಭ್ಯ?

ಬಾಲ ಜೀವನ್ ಬಿಮಾ ಯೋಜನೆ ಪಡೆಯಲು ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ. ಈ ಯೋಜನೆಯ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಿ.

ಏನೆಲ್ಲ ದಾಖಲೆ ಅಗತ್ಯ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಗುವಿನ ಜನನ ದಾಖಲೆ, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪಾಲಕರ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಪಾಸ್‌ಪೋರ್ಟ್‌ ಗಾತ್ರದ ಫೋಟೋ ಅಗತ್ಯ.

ಇದನ್ನೂ ಓದಿ: Money Guide: ಕಡಿಮೆ ಸಂಬಳ ಇದ್ದರೂ ಚಿಂತೆ ಬೇಡ; ಉಳಿತಾಯಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ

Continue Reading

ಮನಿ-ಗೈಡ್

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ (ITR Filing) ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವ ಮೊದಲು ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ.

VISTARANEWS.COM


on

By

ITR Filing
Koo

ಆದಾಯ ತೆರಿಗೆ ರಿಟರ್ನ್ (ITR Filing) ಸಲ್ಲಿಸುವ ಮೊದಲು ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಆದಾಯ ತೆರಿಗೆಯು (Income tax) ಜನರು ಮತ್ತು ಸಂಸ್ಥೆಗಳು ಗಳಿಸುವ ಆದಾಯ ಮತ್ತು ಲಾಭದ ಮೇಲೆ ಪಾವತಿಸುವ ತೆರಿಗೆಯಾಗಿದೆ. ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವುದು ತೆರಿಗೆದಾರರು ಮಾಡಲೇಬೇಕಾದ ವಾರ್ಷಿಕ ಆಥಿಕ ಕಾರ್ಯವಾಗಿದೆ.

ಭಾರತದಲ್ಲಿ (India) ತೆರಿಗೆದಾರರು (taxpayer) ತಮ್ಮ ಆದಾಯ ಮತ್ತು ತೆರಿಗೆಗಳ ವಾರ್ಷಿಕ ಲೆಕ್ಕಾಚಾರವನ್ನು ಸಲ್ಲಿಸುವ ಮೂಲಕ ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಮೂಲ್ಯವಾಗಿದೆ. 2023– 24ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ.

ಗಡುವು ತಿಳಿದಿರಿ

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಮೊದಲು ಎಲ್ಲಾ ತೆರಿಗೆದಾರರು ಗಮನಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಜುಲೈ 31 ಕೊನೆಯ ದಿನವಾಗಿದೆ. ಈ ವರ್ಷ ಆದಾಯ ತೆರಿಗೆ ಇಲಾಖೆಯು 2023-24ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ತೆರಿಗೆ ಪದ್ಧತಿಯನ್ನು ಅರ್ಥಮಾಡಿಕೊಳ್ಳಿ

ತೆರಿಗೆದಾರರು ಈಗ ಹಳೆಯ ತೆರಿಗೆ ಪದ್ಧತಿ ಮತ್ತು ಬಜೆಟ್ 2020ರಲ್ಲಿ ಪರಿಚಯಿಸಲಾದ ಹೊಸ ತೆರಿಗೆ ಪದ್ಧತಿಯ ನಡುವೆ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ. ಎರಡೂ ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಹೊಸ ಪದ್ದತಿಯು ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆ. ಆದರೆ ಕೆಲವು ವಿಷಯಗಳ ಮೇಲೆ ಕಡಿತ ಮತ್ತು ವಿನಾಯಿತಿಗಳನ್ನು ಮಿತಿಗೊಳಿಸುತ್ತದೆ.

ಹಳೆಯ ಪದ್ದತಿಯು ತುಲನಾತ್ಮಕವಾಗಿ ಹೆಚ್ಚಿನ ತೆರಿಗೆ ದರಗಳನ್ನು ಹೊಂದಿದೆ. ಆದರೆ ಕಡಿತ ಮತ್ತು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವ ಮೂಲಕ ಹಣವನ್ನು ಉಳಿಸಲು ಜನರಿಗೆ ಅವಕಾಶ ನೀಡುತ್ತದೆ. ಒಬ್ಬರ ಪರಿಸ್ಥಿತಿಗೆ ಅನುಗುಣವಾಗಿ ಯಾವ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿಕೊಳ್ಳಬೇಕು.

ಯಾವ ತೆರಿಗೆ ವರ್ಗಕ್ಕೆ ಸೇರುತ್ತೀರಿ?

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ತೆರಿಗೆ ವರ್ಗಕ್ಕೆ ಸೇರುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕು. ತೆರಿಗೆಯ ಆದಾಯವನ್ನು ತಿಳಿದುಕೊಳ್ಳುವುದು ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದು ಭರ್ತಿ ಮಾಡಲು ಅರ್ಹವಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಹಣಕಾಸು ಮತ್ತು ಹೂಡಿಕೆಗಳನ್ನು ಯೋಜಿಸಲು ಆದಾಯ ತೆರಿಗೆ ರಿಟರ್ನ್ ಅನ್ನು ಸಮರ್ಥ ಮತ್ತು ದೋಷ-ಮುಕ್ತ ರೀತಿಯಲ್ಲಿ ಸಲ್ಲಿಸುವುದನ್ನು ಖಚಿತಪಡಿಸುತ್ತದೆ.

ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ ದಾಖಲೆಗಳನ್ನು ಪರಿಶೀಲಿಸುವುದು ಬಹುಮುಖ್ಯವಾಗಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ತಮ್ಮ ಆದಾಯ, ಕಡಿತಗಳು ಮತ್ತು ತೆರಿಗೆ ಪಾವತಿಗಳನ್ನು ದೃಢೀಕರಿಸಲು ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಆದ್ದರಿಂದ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತ ಮತ್ತು ಡಿಜಿಟೈಸ್ ಆಗಿರುವುದರಿಂದ ಡಿಜಿಟಲ್ ಸಾಧನದಲ್ಲಿ ಅಗತ್ಯ ದಾಖಲೆಗಳನ್ನು ಸಂಘಟಿಸುವುದು ಮತ್ತು ಉಳಿಸುವುದು ಫೈಲಿಂಗ್ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ.


ಸರಿಯಾದ ಐಟಿಆರ್ ಅರ್ಜಿಯನ್ನು ಆಯ್ಕೆ ಮಾಡಿ

ಆದಾಯದ ಮೂಲ ಮತ್ತು ಒಟ್ಟು ಆದಾಯದ ಆಧಾರದ ಮೇಲೆ ಅನ್ವಯವಾಗುವ ಐಟಿಆರ್ ಫಾರ್ಮ್ ಅನ್ನು ಗುರುತಿಸುವುದು ಮತ್ತು ಆಯ್ಕೆ ಮಾಡುವುದು ಮುಖ್ಯವಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ತೆರಿಗೆದಾರರಿಂದ ಆರಂಭಿಕ ರಿಟರ್ನ್ ಫೈಲಿಂಗ್ ಅನ್ನು ಉತ್ತೇಜಿಸಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಫಾರ್ಮ್‌ಗಳು ಲಭ್ಯವಾಗುವಂತೆ ಮಾಡಿತು.

ಐಟಿಆರ್-1 ಆದಾಯದ ಮೂಲ ಸಂಬಳವಾಗಿದ್ದು, ಮನೆ ಆಸ್ತಿ ಮತ್ತು ಇತರ ಮೂಲಗಳಿಂದ ಬಡ್ಡಿ, ಲಾಭಂಶ ಸೇರಿ ಒಟ್ಟು 50 ಲಕ್ಷ ರೂ. ಆದಾಯವಿದ್ದವರು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್ -2 ಬಂಡವಾಳ ಅಥವಾ ವಿದೇಶಿ ಆಸ್ತಿಗಳಿಂದ ಆದಾಯದ ಮೂಲ ಹೊಂದಿರುವ ಹಿಂದೂ ಅವಿಭಜಿತ ಕುಟುಂಬಗಳು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್- 3 ವ್ಯಾಪಾರ ಅಥವಾ ಸ್ವಯಂ ವೃತ್ತಿಯಿಂದ ಆದಾಯ ಹೊಂದಿರುವ ವ್ಯಕ್ತಿಗಳು, ಐಟಿಆರ್- 4 ವ್ಯಾಪಾರ ಅಥವಾ ಸ್ವಂತ ವೃತ್ತಿಯಿಂದ ಆದಾಯ ಹೊಂದಿರುವವರು ಇದರಲ್ಲಿ ಅರ್ಜಿ ಸಲ್ಲಿಸಬಹುದು.

ವೈಯಕ್ತಿಕ ಮತ್ತು ಬ್ಯಾಂಕ್ ಖಾತೆ ವಿವರ ಪರಿಶೀಲಿಸಿ

ಐಟಿಆರ್ ಅನ್ನು ಸಲ್ಲಿಸುವ ಮೊದಲು ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ತೆರಿಗೆದಾರರು ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಬೇಕು. ಹೆಸರು, ವಿಳಾಸ, ಇಮೇಲ್ ಮತ್ತು ಪಾನ್ ನಂತಹ ವಿವರಗಳನ್ನು ಲಿಂಕ್ ಮಾಡಲಾಗಿದೆ ಮತ್ತು ತೆರಿಗೆ ರಿಟರ್ನ್‌ನಲ್ಲಿ ನಿಖರವಾಗಿ ನಮೂದಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ

ತೆರಿಗೆ ರಿಟರ್ನ್‌ನಲ್ಲಿ ಸರಿಯಾದ ಮೌಲ್ಯಮಾಪನ ವರ್ಷವನ್ನು ನಮೂದಿಸಿ. ಇದರಲ್ಲಿ ತಪ್ಪುಗಳಾದರೆ ಹೆಚ್ಚು ತೆರಿಗೆ ಮತ್ತು ಅನಗತ್ಯ ದಂಡಗಳಿಗೆ ಕಾರಣವಾಗಬಹುದು.

ಫಾರ್ಮ್ 16ರಲ್ಲಿ ವಿವರಗಳನ್ನು ಪರಿಶೀಲಿಸಿ

ಫಾರ್ಮ್ 16ರಲ್ಲಿನ ಸಂಬಳದ ಭಾಗಗಳು, ಟಿಡಿಎಸ್ ಕಡಿತ ಮತ್ತು ತೆರಿಗೆ-ಉಳಿತಾಯ ಹೂಡಿಕೆಗಳಂತಹ ವಿವರಗಳು ಸರಿಯಾಗಿವೆಯೇ ಎಂದು ಮುಂಚಿತವಾಗಿ ಖಚಿತಪಡಿಸಿಕೊಳ್ಳಿ. ಪೇ ಸ್ಲಿಪ್‌ ಮತ್ತು ಹೂಡಿಕೆ ಹೇಳಿಕೆಗಳೊಂದಿಗೆ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಿ. ಯಾವುದೇ ವ್ಯತ್ಯಾಸಗಳನ್ನು ಸರಿಪಡಿಸಲು ಉದ್ಯೋಗದಾತರಿಗೆ ವರದಿ ಮಾಡಬೇಕು.

ಹಣಕಾಸು ವರ್ಷದಲ್ಲಿ ಒಬ್ಬರು ಬಹು ಉದ್ಯೋಗದಾತರನ್ನು ಹೊಂದಿದ್ದರೆ ರಿಟರ್ನ್ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಫಾರ್ಮ್ 16ರಿಂದ ಆದಾಯವನ್ನು ಒಟ್ಟುಗೂಡಿಸಿರುವುದು ಖಚಿತಪಡಿಸಿಕೊಳ್ಳಿ. ಸರಿಯಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಒಟ್ಟು ಆದಾಯವನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ನಿಖರ ವರದಿ ಖಚಿತಪಡಿಸಿ

ಫಾರ್ಮ್ 26ಎಎಸ್ (ತೆರಿಗೆ ಕ್ರೆಡಿಟ್ ಸ್ಟೇಟ್‌ಮೆಂಟ್) ಮತ್ತು ಎಐಎಸ್ /ಟಿಐಎಸ್ (ವಾರ್ಷಿಕ ಮಾಹಿತಿ ಹೇಳಿಕೆ/ತೆರಿಗೆ ಮಾಹಿತಿ ಹೇಳಿಕೆ) ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಒಟ್ಟು ಆದಾಯವನ್ನು ಸಂಪೂರ್ಣವಾಗಿ ಸಮನ್ವಯಗೊಳಿಸಿ. ಯಾಕೆಂದರೆ ಇದು ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ಎಲ್ಲಾ ಆದಾಯ ಮೂಲಗಳನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

Continue Reading

ಮನಿ-ಗೈಡ್

Money Guide: ವಿದೇಶ ಪ್ರವಾಸಕ್ಕೆ ಮುಂದಾಗಿದ್ದೀರಾ? ಅತ್ಯುತ್ತಮ ಕೊಡುಗೆ ನೀಡುವ ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ ಬಗ್ಗೆ ತಿಳಿಯಿರಿ

Money Guide: ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭವಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲ್ಯಾನ್‌ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಂತೆ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳನ್ನೂ ಪರಿಚಯಿಸಿವೆ. ಅಂತಹ ಕೆಲವು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಕೈಗೊಳ್ಳಬೇಕು ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಅಲ್ಲಿನ ಪ್ರಕೃತಿ, ಆಹಾರ ಪದ್ಧತಿ, ಜನ ಜೀವನ ಹೀಗೆ ಪ್ರತಿಯೊಂದದನ್ನು ಹತ್ತಿರದಿಂದಲೇ ನೋಡಬೇಕು, ನಮ್ಮ ದೇಶಕ್ಕಿಂತ ಅಲ್ಲಿ ಜೀವನ ವಿಧಾನ ಹೇಗೆ ಭಿನ್ನ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭವಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲ್ಯಾನ್‌ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಂತೆ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ (International Travel Debit Card)ಗಳನ್ನೂ ಪರಿಚಯಿಸಿವೆ. ಅಂತಹ ಕೆಲವು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳು ಪ್ರಯಾಣ ರಿಯಾಯಿತಿಗಳು, ಲಾಂಜ್ ಪ್ರವೇಶ, ವಿದೇಶಿ ಖರೀದಿಗಳ ಮೇಲೆ ಹೆಚ್ಚಿದ ರಿವಾರ್ಡ್ ಪಾಯಿಂಟ್‌ಗಳು ಮತ್ತಿತರ ಕೊಡುಗೆಗಳನ್ನು ನೀಡುತ್ತವೆ.

ಐಸಿಐಸಿಐ ಮಾಸ್ಟರ್‌ಕಾರ್ಡ್‌ ವರ್ಲ್ಡ್‌ ಡೆಬಿಟ್‌ ಕಾರ್ಡ್‌

ಈ ಕಾರ್ಡ್‌ ಪ್ರತಿ ಖರೀದಿಯ ಮೇಲೆ ವಿಶಿಷ್ಟ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಬಳಕೆದಾರರಿಗೆ ಉಚಿತ ವೈಯಕ್ತಿಕ ಅಪಘಾತ ವಿಮೆ ಮತ್ತು ವಿಮಾನ ಅಪಘಾತ ರಕ್ಷಣೆಯನ್ನು ಸಹ ಒದಗಿಸಲಾಗುತ್ತದೆ.

ಎಸ್‌ಬಿಐ ಇಂಟರ್‌ನ್ಯಾಷನಲ್‌ ಡೆಬಿಟ್‌ ಕಾರ್ಡ್‌

ಎಸ್‌ಬಿಐಯ ಗ್ಲೋಬಲ್ ಇಂಟರ್‌ನ್ಯಾಷನಲ್‌ ಕಾಂಟ್ಯಾಕ್ಟ್‌ಲೆಸ್‌ ಡೆಬಿಟ್ ಕಾರ್ಡ್ ವಿಶ್ವದ ಯಾವುದೇ ಭಾಗದಿಂದ ಹಣವನ್ನು ಹಿಂಪಡೆಯಲು ನಿಮಗೆ ಅವಕಾಶ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಅನ್ನು ವಸ್ತುಗಳನ್ನು ಖರೀದಿಸಲು ಮತ್ತು ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಬಳಸಬಹುದು. ಗ್ರಾಹಕರು ಆಹಾರ ಸೇವನೆ, ಶಾಪಿಂಗ್, ಪೆಟ್ರೋಲ್ ಖರೀದಿ, ಆನ್‌ಲೈನ್‌ ಪಾವತಿಗಳು ಅಥವಾ ಪ್ರಯಾಣದ ಬುಕ್ಕಿಂಗ್‌ಗಾಗಿ ಖರ್ಚು ಮಾಡಿದ ಪ್ರತಿ 200 ರೂ.ಗೆ ಎರಡು ಎಸ್‌ಬಿಐ ರಿವಾರ್ಡ್ ಪಾಯಿಂಟ್‌ ಪಡೆಯುತ್ತಾರೆ. ಅಲ್ಲದೆ ಜನ್ಮದಿನದಂದು ಖರೀದಿಸಿದರೆ ಬಹುಮಾನಗಳು ದ್ವಿಗುಣಗೊಳ್ಳುತ್ತವೆ. ಈ ಡೆಬಿಟ್ ಅನ್ನು ಭಾರತದಲ್ಲಿ 52 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆ ಮತ್ತು ವಿಶ್ವಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಬಳಸಬಹುದು.

ಇಂಡಸ್‌ಲ್ಯಾಂಡ್‌ ವರ್ಲ್ಡ್‌ ಎಕ್ಸ್‌ಕ್ಯೂಸಿವ್‌ ಡೆಬಿಟ್‌ ಕಾರ್ಡ್‌

ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಜತೆಗೆ ಬುಕ್‌ಮೈ ಶೋ ಅಪ್ಲಿಕೇಷನ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾ ಟಿಕೆಟ್‌ ಖರೀದಿಗೆ ಕೊಡುಗೆ ನೀಡುತ್ತದೆ. ಈ ಡೆಬಿಟ್ ಕಾರ್ಡ್ ಯಾವುದೇ ಕ್ರಾಸ್-ಕಂಟ್ರಿ ಮಾರ್ಕ್ಅಪ್ ಶುಲ್ಕವನ್ನು ವಿಧಿಸುವುದಿಲ್ಲ.

ಕೆನರಾ ಬ್ಯಾಂಕ್‌ ಪ್ಲಾಟಿನಂ ಡೆಬಿಟ್‌ ಕಾರ್ಡ್‌

ಕಾರ್ಡ್ ಹೊಂದಿರುವವರು ಆಯ್ದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ಗಳಿಗೆ ಪ್ರತಿ ತ್ರೈಮಾಸಿಕದಲ್ಲಿ ಗರಿಷ್ಠ ಎರಡು ಕಾಂಪ್ಲಿಮೆಂಟರಿ ಭೇಟಿಗಳಿಗೆ ಅರ್ಹರಾಗಿರುತ್ತಾರೆ. ಇದು 8 ಲಕ್ಷ ರೂ.ಗಳ ವಿಮಾನ ಅಪಘಾತ ವಿಮೆ ಮತ್ತು ಲಗೇಜ್ ವಿಮೆಯನ್ನು ಸಹ ಒದಗಿಸುತ್ತದೆ. ವ್ಯಾಪಾರಿ ಮಳಿಗೆಗಳ ಪಾಯಿಂಟ್-ಆಫ್-ಸೇಲ್ (ಪಿಒಎಸ್) ವಹಿವಾಟಿನ ಮಿತಿ 5 ಲಕ್ಷ ರೂ., ಪ್ರತಿದಿನ 1 ಲಕ್ಷ ರೂ. ವಿತ್‌ಡ್ರಾ ಮಾಡಬಹುದು.

ಇದನ್ನೂ ಓದಿ: Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

Continue Reading
Advertisement
Om Birla
ದೇಶ8 mins ago

Om Birla: ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಸಂಸದರು ಘೋಷಣೆ ಕೂಗುವಂತಿಲ್ಲ; ಹೊಸ ನಿಯಮದಲ್ಲಿ ಏನಿದೆ?

Hathras Stampede
ದೇಶ10 mins ago

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

wild animal attack
ಬೆಂಗಳೂರು ಗ್ರಾಮಾಂತರ17 mins ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Agnipath Scheme
ದೇಶ18 mins ago

Agnipath Scheme: ಅಗ್ನಿವೀರರಿಗೆ ಪರಿಹಾರ ಸಿಕ್ಕಿಲ್ಲ ಎಂದ ರಾಹುಲ್‌ ಗಾಂಧಿಗೆ ಭಾರತೀಯ ಸೇನೆ ತಿರುಗೇಟು

Robbery Video
Latest20 mins ago

Robbery Video: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

Sumalatha Ambareesh Reaction about darshan
ಸ್ಯಾಂಡಲ್ ವುಡ್26 mins ago

Sumalatha Ambareesh: ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದ ಸುಮಲತಾ; ದೊಡ್ಡ ಮಗನ ಬಗ್ಗೆ ಹೇಳಿದಿಷ್ಟು!

Kalki 2898 AD
ಸಿನಿಮಾ30 mins ago

Kalki 2898 AD: ಕಲ್ಕಿ 2898 ಎಡಿ ಚಿತ್ರದ 10 ಕುತೂಹಲಕರ ಸಂಗತಿಗಳಿವು!

Costliest City
ದೇಶ34 mins ago

Costliest City: ಮುಂಬಯಿ ಈಗ ಭಾರತದ ಅತ್ಯಂತ ದುಬಾರಿ ನಗರ; ಬೆಂಗಳೂರಿಗೆ ಎಷ್ಟನೇ ಸ್ಥಾನ?

Actor Darshan
ಕರ್ನಾಟಕ39 mins ago

Actor Darshan: ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿ; ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Team India
ಕ್ರೀಡೆ40 mins ago

Team India: ಮೋದಿಗೆ ನಮೋ ಹೆಸರಿನ ಟೀಮ್​ ಇಂಡಿಯಾ ಜೆರ್ಸಿ ಉಡುಗೊರೆ ನೀಡಿದ ಬಿಸಿಸಿಐ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

wild animal attack
ಬೆಂಗಳೂರು ಗ್ರಾಮಾಂತರ17 mins ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ2 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ4 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ5 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

ಟ್ರೆಂಡಿಂಗ್‌