Cheap beer | ಜಗತ್ತಿನ ಅತೀ ಸಂತೋಷದ ಜಾಗವಿದು! ಕಾರಣ ಇಲ್ಲಿ ಸಿಗುವ ಬಿಯರ್! - Vistara News

ಪ್ರವಾಸ

Cheap beer | ಜಗತ್ತಿನ ಅತೀ ಸಂತೋಷದ ಜಾಗವಿದು! ಕಾರಣ ಇಲ್ಲಿ ಸಿಗುವ ಬಿಯರ್!

ಪ್ರವಾಸೀ ಸ್ಥಳಗಳಲ್ಲಿ ಅತೀ ಸಂತೋಷದ ಸ್ಥಳ ಯಾವುದು ಅಂತ ಪ್ರವಾಸಿಗರನ್ನು ಕೇಳಿದರೆ, ಅವರು ನೀಡಿದ ಉತ್ತರ ಹಾಗೂ ಅದರ ಕಾರಣಗಳು ಎಲ್ಲರನ್ನೂ ಚಕಿತಗೊಳಿಸಿವೆ.

VISTARANEWS.COM


on

baali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಗತ್ತಿನಲ್ಲೇ ಅತ್ಯಂತ ಸಂತೋಷದಾಯಕ ಪ್ರವಾಸಿ ಸ್ಥಳ ಯಾವುದು ಎಂದು ಪ್ರವಾಸೀ ಪ್ರಿಯರನ್ನು ಕೇಳಿದರೆ, ಎಲ್ಲರೂ ಕಣ್ಣು ಮುಚ್ಚಿ ಇಂಡೋನೇಷ್ಯಾದ ಬಾಲಿಗೆ ಓಟ್‌ ಹಾಕಿದ್ದಾರಂತೆ. ಕಾರಣ ಇಷ್ಟೇ, ಕಡಿಮೆ ದುಡ್ಡಲ್ಲಿ ಬೇಕಾದಷ್ಟು ಕುಡಿಯಲು ಗುಂಡು, ಕಣ್ಣಿಗೆ ಹಬ್ಬ ನೀಡುವ ದೃಶ್ಯಗಳು, ಕಡಿಮೆ ಕ್ರೈಮ್‌ ಇರುವ ಸುರಕ್ಷಿತವಾಗಿರುವ ಜಾಗ ಎಂದರೆ ಬಾಲಿ ಬಿಟ್ಟು ಬೇರೊಂದು ನೋಡಿಲ್ಲ ಎಂದಿದ್ದಾರಂತೆ!

ಪ್ರವಾಸ ಮಾಡಲು ಒಬ್ಬೊಬ್ಬರ ಕಾರಣ ಒಂದೊಂದಿರಬಹುದು. ಆದರೂ ಪ್ರವಾಸದಿಂದ ಎಲ್ಲರೂ ಬಯಸುವುದು ನಿತ್ಯದ ನಾಗಾಲೋಟದ ಬದುಕಿನಲ್ಲೊಂದು ಚಂದನೆಯ ಚೇಂಜ್ ಹಾಗೂ ಸಂತೋಷದಾಯಕ ಸಮಯ ಅಷ್ಟೇ ಎಂಬುದು ಅಪ್ಪಟ ಸತ್ಯ. ಹಾಗಾಗಿ ಬಾಲಿ ಎಂಬ ಪ್ರವಾಸೀ ಸ್ಥಳವೊಂದು ಸಂತೋಷ, ನೆಮ್ಮದಿ ಹುಡುಕಿಕೊಂಡು ಬರುವ ಎಲ್ಲರನ್ನೂ ಸಂತೃಪ್ತವಾಗಿರಿಸಿದೆ.

ಇತ್ತೀಚೆಗೆ ಕ್ಲಬ್‌ ಮೆಡ್‌ ಎಂಬ ಟ್ರಾವೆಲ್‌ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಬಾಲಿಯನ್ನು ಬಹುವಾಗಿ ಮೆಚ್ಚಿಕೊಂಡದ್ದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಬಾಲಿಯಲ್ಲಿ ಕಡಿಮೆ ದರದಲ್ಲಿ ಬೀರ್‌ ಸಿಗುತ್ತಿದ್ದು, ಮನಸೋ ಇಚ್ಛೆ ಕುಡಿದು ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಬಿದ್ದುಕೊಂಡಿರಬಹುದಾಗಿದೆ. ಅಷ್ಟೇ ಅಲ್ಲದೆ, ಇಲ್ಲಿ ಕಳ್ಳಕಾಕರ, ಕೊಲೆ ದರೋಡೆಕೋರರ, ನಡುರಾತ್ರಿಯ ಭಯವಿಲ್ಲ. ಎಲ್ಲ ಖುಲ್ಲಂಖುಲ್ಲಾ! ಮಜವಾಗಿ ಸುತ್ತಾಡಿಕೊಂಡು ಸುರಕ್ಷಿತವಾಗಿದ್ದು ಪ್ರವಾಸವನ್ನು ಅದ್ಭುತವಾಗಿ ಎಂಜಾಯ್‌ ಮಾಡಬಹುದಾದ ಡ್ರೀಮ್‌ ಡೆಸ್ಟಿನೇಶನ್‌ ಎಂದು ಎಲ್ಲರೂ ಕಾರಣಗಳನ್ನು ನೀಡಿದ್ದಾರೆ.

ಬಾಲಿಯಲ್ಲಿ. ೨.೪೫ ಪೌಂಡ್‌ಗೆ ಓಂದು ಬೀರ್‌ ಬಾಟಲಿ ಸಿಗುತ್ತದೆ. ಕುಡಿತ ಇಲ್ಲಿ ದುಬಾರಿಯಲ್ಲ. ಚಂದ ಚಂದದ ಹೊಟೇಲುಗಳು, ಸ್ಪಾಗಳು, ಮೈಮನ ತಣಿಸುವ ಬಾರ್‌ಗಳು, ಊಟೋಪಚಾರಗಳು, ಕಾಲು ಚಾಚಿ ಬಿದ್ದುಕೊಂಡಿರಬಹುದಾದ ಬೀಚ್‌ಗಳು ಅಷ್ಟೇ ಅಲ್ಲ, ಅತ್ಯಪೂರ್ವವಾದ ಪ್ರಾಕೃತಿಕ ಸೌಂದರ್ಯ ಎಲ್ಲವೂ ಒಂದು ಅದ್ಭುತ ಪ್ರವಾಸ ಹೇಗಿರಬಹುದೆಂಬುದಕ್ಕೆ ತಾಜಾ ಉದಾಹರಣೆಯನ್ನು ನೀಡುತ್ತವೆ ಎಂದು ಪ್ರವಾಸಿಗರು ವಿವರಿಸಿದ್ದಾರೆ.

ಟ್ರಿಪ್‌ ಅಡ್ವೈಸರ್‌ ಎಂಬ ಪ್ರಸಿದ್ಧ ಟ್ರಾವೆಲ್‌ ಏಜೆನ್ಸಿಯ ಪ್ರಕಾರ, ಬಾಲಿಯ ಅತ್ಯಂತ ಚಂದನೆಯ ಬೀಚ್‌ ಎಂದು ಕೇಲಿಂಗ್‌ಕಿಂಗ್‌ ಬೀಚ್‌ಗೆ ಜನರು ಅತೀ ಹೆಚ್ಚು ಓಟ್‌ ಮಾಡಿದ್ದಾರಂತೆ. ಬಹಳಷ್ಟು ಜನರು, ಈ ಬೀಚ್‌ಗೆ ಹೋಗದೆ ಇದ್ದರೆ ಬಾಲಿಗೆ ಹೋಗೋದು ವೇಸ್ಟ್‌. ಯಾರೊಬ್ಬರೂ ಮಿಸ್‌ ಮಾಡಲೇಬಾರದ ಬಾಲಿಯ ಬೀಚ್‌ಗಳಲ್ಲಿ ಇದಕ್ಕೆ ನಂಬರ್‌ ವನ್‌ ಸ್ಥಾನ ಎಂದು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Travel story | ಪ್ರಪಂಚದ ಎಲ್ಲ ದೇಶಗಳನ್ನು ಸುತ್ತಲು ಮನೆಮಠ ಮಾರಿ ಹೊರಟ ದಂಪತಿ!

ಬಾಲಿಯನ್ನು ಹೊರತುಪಡಿಸಿದರೆ, ಲಾಸ್‌ ವೇಗಾಸ್‌ಗೆ ಜನರು ಎರಡನೇ ಸ್ಥಾನ ನೀಡಿದ್ದಾರೆ. ಇದು ಎಲ್‌ಜಿಬಿಟಿಕ್ಯು ವರ್ಗ ಹಾಗೂ ಎಲ್ಲ ಮಾದರಿಯ ಪ್ರವಾಸಿಗರಿಗೆ ಅತ್ಯಂತ ಹೆಚ್ಚು ಖುಷಿಯನ್ನು ನೀಡಿದೆ. ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವ ಮಂದಿಗೆ ಲಾಸ್‌ ವೇಗಾಸ್‌ ರಸದೌತಣ ನೀಡುತ್ತದೆ ಎಂದು ಕಾರಣವನ್ನೂ ಅವರು ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಮಂದಿ ಈ ನಗರದ ಹತ್ತಿರದಲ್ಲೇ ಇರುವ ಮರುಳುಗಾಡಿನ ಸೌಂದರ್ಯವನ್ನೂ ಸವಿಯಬಹುದು ಎಂದು ಅವರು ಹೇಳಿದ್ದಾರೆ.

ಟಾಪ್‌ ೧೦ ಸಂತೋಷದಾಯಕ ಪ್ರವಾಸಿ ಸ್ಥಳಗಳ ಪಟ್ಟಿ ಇಲ್ಲಿದೆ!

೧. ಬಾಲಿ

೨. ಲಾಸ್‌ ವೇಗಾಸ್‌

೩. ನ್ಯೂ ಆರ್ಲೀನ್ಸ್‌

೪. ಬಾರ್ಸಿಲೋನಾ

೫. ಆಮ್‌ಸ್ಟೆರ್‌ಡ್ಯಾಂ

೬. ಬುಡಾಪೆಸ್ಟ್‌

೭. ವ್ಯಾನ್‌ಕೋವಾ

೮. ಸಾನ್‌ ಫ್ರಾನ್ಸಿಸ್ಕೋ

೯. ದುಬೈ

೧೦. ರಿಯೋ ಡಿ ಜೆನೆರೋ

ಕೋವಿಡ್‌ ಕಾಲಘಟ್ಟದ ನಂತರ ಎರಡು ವರ್ಷಗಳ ಕಾಲ ಪ್ರವಾಸದ ಕನಸನ್ನು ಅದುಮಿಟ್ಟ ಮಂದಿಯೆಲ್ಲ ಸಂತೋಷವನ್ನು ಹುಡುಕಿಕೊಂಡು ಈ ಹತ್ತು ಸ್ಥಳಗಳಿಗೆ ಹೋಗಿ ಬ್ಯಾಗು ತುಂಬಾ ಸಂತೋಷವನ್ನು ಇನ್ನು ಹತ್ತು ವರ್ಷಕ್ಕೆ ಸಾಕಾಗುವಷ್ಟು ಕಟ್ಟಿಕೊಂಡು ಬರಬಹುದು!

ಇದನ್ನೂ ಓದಿ | ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಪ್ರಕೃತಿಯ ನಡುವೆ ವಿಶ್ರಾಂತಿ ಬಯಸುವವರಿಗೆ ಮುನ್ನಾರ್ (Munnar Tour) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ವಾರಾಂತ್ಯದ ವಿಹಾರದ ಆಯ್ಕೆಗಳನ್ನು ನೀಡುತ್ತವೆ. ಮುನ್ನಾರ್ ಪ್ರದೇಶದಲ್ಲಿ (Munnar Tour) ಕೆಲವು ಗುಪ್ತ ನಿಧಿಗಳಿದ್ದು ಅವುಗಳನ್ನು ಹುಡುಕಿಕೊಂಡು ಹೊರಟರೆ ಬದುಕಿನಲ್ಲಿ ಮತ್ತೊಮ್ಮೆ ಚೈತನ್ಯವನ್ನು ತುಂಬಿಕೊಂಡು ಮರಳಬಹುದು. ಮುನ್ನಾರ್ ಕುರಿತ ವಿಸ್ತೃತ ಪರಿಚಯ ಇಲ್ಲಿದೆ.

VISTARANEWS.COM


on

By

Munnar Tour
Koo

ಪ್ರಕೃತಿಯ ನಡುವೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ? ಕಚೇರಿ ಕೆಲಸದ ಜಂಜಾಟವನ್ನು ಬಿಟ್ಟು, ನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿ ಕೊಂಚ ಹೊತ್ತು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯಬೇಕು ಎಂದರೆ ಭಾರತದ (india) ದಕ್ಷಿಣದ (south) ಕೇರಳ (kerala) ರಾಜ್ಯದಲ್ಲಿ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ (Western Ghats) ಕಾಡುಗಳಲ್ಲಿ ಅಡಗಿರುವ ಮುನ್ನಾರ್ ಗೆ (Munnar Tour) ಭೇಟಿ ನೀಡಬಹುದು.

ಚಹಾ ತೋಟಗಳಿಗೆ ಪ್ರಸಿದ್ಧವಾಗಿರುವ ಬೆಟ್ಟ, ಮಂಜು ಮತ್ತು ತಂಪಾದ ವಾತಾವರಣದಿಂದ ಮುಚ್ಚಲ್ಪಟ್ಟಿರುವ ಮುನ್ನಾರ್ ನಗರದಿಂದ ದೂರವಾಗಿ ಮನಸ್ಸಿನ ಶಾಂತಿಯನ್ನು ಹುಡುಕುವವರಿಗೆ ಆಕರ್ಷಕ ತಾಣವಾಗಿದೆ.
ಮುನ್ನಾರ್‌ಗೆ ಭೇಟಿ ನೀಡಿದರೆ ನಿಮ್ಮೊಳಗಿನ ಚೈತನ್ಯವು ಪುನರುಜ್ಜೀವನಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಮುನ್ನಾರ್ ಸುತ್ತಮುತ್ತ ಅನೇಕ ತಾಣಗಳಿವೆ. ವಾರಾಂತ್ಯದ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಮರಯೂರು

ಮುನ್ನಾರ್‌ನಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್‌ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸಪೂರ್ವ ಡಾಲ್ಮೆನ್‌ಗಳಿಗೆ ಹೆಸರುವಾಸಿಯಾದ ಸಣ್ಣ ಪಟ್ಟಣವಾಗಿದೆ. ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ಮರಯೂರಿನಲ್ಲಿ ಸಂದರ್ಶಕರು ಬಿಡುವಿನ ವೇಳೆಯಲ್ಲಿ ಕಬ್ಬಿನ ಗದ್ದೆಗಳ ಉದ್ದಕ್ಕೂ ನಡೆಯಬಹುದು. ಶಿಲಾಯುಗದ ಪ್ರಾಚೀನ ಡಾಲ್ಮೆನ್‌ಗಳನ್ನು ಅನ್ವೇಷಿಸಲು ಅಥವಾ ಹತ್ತಿರದಲ್ಲಿರುವ ತೂವನಂ ಜಲಪಾತಗಳಿಗೆ ಭೇಟಿ ನೀಡಬಹುದು. ಅವುಗಳು ತಮ್ಮ ಸುತ್ತಲೂ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಲ್ಲ ಮಾಡುವುದು ಮರಯೂರಿನ ವಿಶೇಷತೆಗಳಲ್ಲಿ ಒಂದಾಗಿದೆ.


ದೇವಿಕುಲಂ

ಮುನ್ನಾರ್‌ನಿಂದ 7 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ . ಇಲ್ಲಿ ಪ್ರಕೃತಿಯು ತನ್ನ ಎಲ್ಲಾ ಸೌಂದರ್ಯವನ್ನು ಹಚ್ಚ ಹಸಿರಿನ ಕಣಿವೆಗಳು ಮತ್ತು ಮೌನವಾದ ಸರೋವರಗಳೊಂದಿಗೆ ಬಾಚಿ ಕೊಟ್ಟಿದೆ. ದೇವಿಕುಲಂ ಸರೋವರದಲ್ಲಿ ಶಾಂತವಾದ ದೋಣಿ ವಿಹಾರವನ್ನು ಆನಂದಿಸಬಹುದು. ಚಹಾ ತೋಟಗಳೊಂದಿಗೆ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿದೆ.

ಸೀತಾದೇವಿ ಸರೋವರವು ಹೆಚ್ಚು ದೂರದಲ್ಲಿಲ್ಲ. ಇದು ಸಮೃದ್ಧ ಖನಿಜಾಂಶದ ಕಾರಣದಿಂದಾಗಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಸಾಹಸಿ ಪ್ರವಾಸಿಗರು ಹೇರಳವಾದ ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು. ಜೊತೆಗೆ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು.


ಚಿನ್ನಕನಲ್

ಮುನ್ನಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಚಿನ್ನಕನಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಸಾಂಬಾರ ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವು ಚಿನ್ನಕನಾಲ್ ಅನ್ನು ಶಾಂತಿಯನ್ನು ಬಯಸುವವರಿಗೆ ಸ್ವರ್ಗವನ್ನಾಗಿ ಮಾಡುತ್ತದೆ. ಈ ಸ್ಥಳದ ಒಂದು ಆಕರ್ಷಣೆಯೆಂದರೆ ಅಟ್ಟುಕಲ್ ಜಲಪಾತಗಳು. ಇದು ಪ್ರಕೃತಿಯೊಂದಿಗೆ ಭವ್ಯವಾಗಿ ಬೆರೆತುಹೋಗಿದೆ. ವಿಶಾಲವಾಗಿ ಹರಡಿರುವ ಟೀ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ.


ಆನಮುಡಿ ಶಿಖರ

ರೋಮಾಂಚನವನ್ನು ಬಯಸುವ ಸಾಹಸಪ್ರಿಯರಿಗೆ ಆನಮುಡಿ ಶಿಖರವನ್ನು ಹತ್ತುವುದು ಮುನ್ನಾರ್‌ನಲ್ಲಿನ ನಡೆಸಬಹುದಾದ ಚಟುವಟಿಕೆಗಳ ಪಟ್ಟಿಯ ಮೇಲ್ಭಾಗದಲ್ಲಿರಬೇಕು. ಆನಮುಡಿಯು ದಕ್ಷಿಣ ಭಾರತದ ಅತ್ಯುನ್ನತ ಶಿಖರವೆಂಬ ಬಿರುದನ್ನು ಪಡೆದ ಕಾರಣ, ಅದರ ಎತ್ತರದ ಮೇಲ್ಭಾಗದ ನೋಟವು ಅದರ ಸುತ್ತಲಿನ ವಿವಿಧ ಕಣಿವೆಗಳು, ಕಾಡುಗಳು ಮತ್ತು ತೊರೆಗಳನ್ನು ಬಹಿರಂಗಪಡಿಸುತ್ತದೆ. ಅಲ್ಲಿಗೆ ಚಾರಣ ಮಾಡುವುದು ದುರ್ಬಲ ಹೃದಯದ ಜನರಿಗೆ ಸಾಧ್ಯವಿಲ್ಲ. ಪರ್ವತಾರೋಹಿಗಳು ಇಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾದ ನೀಲಗಿರಿ ತಾಹ್ರ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.


ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್. ಸಮುದ್ರ ಮಟ್ಟದಿಂದ ಸರಿಸುಮಾರು 1,700 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಈ ಸ್ಥಳವು ನಿಸರ್ಗ ಮತ್ತು ಛಾಯಾಗ್ರಹಣವನ್ನು ಇಷ್ಟಪಡುವ ಜನರಿಗೆ ಬಹಳ ಪ್ರಿಯವಾಗುವುದು. ಇಲ್ಲಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು. ಅವುಗಳ ವಿಶಾಲತೆ ಮತ್ತು ತಮಿಳುನಾಡಿನ ಬಯಲು ಪ್ರದೇಶಗಳನ್ನು ಕಾಣಬಹುದು. ಈ ವ್ಯೂಪಾಯಿಂಟ್‌ನ ಹೆಸರು ಹಳೆಯ ರೋಪ್‌ವೇ ನಿಲ್ದಾಣದಿಂದ ಹುಟ್ಟಿಕೊಂಡಿದೆ. ಇದನ್ನು ಮುನ್ನಾರ್‌ನಿಂದ ಕೆಳಗಿನ ತಗ್ಗು ಪ್ರದೇಶಗಳಿಗೆ ಚಹಾವನ್ನು ಸಾಗಿಸಲು ಬಳಸಲಾಗುತ್ತಿತ್ತು. ಹತ್ತಿರದ ಅಂಗಡಿಗಳಿಂದ ಬಿಸಿ ಬಿಸಿ ಚಹಾದ ಸವಿಯನ್ನು ಸವಿಯಬಹುದು.

Continue Reading

ಪ್ರವಾಸ

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳು ಯಾವವು? ಪ್ರಮುಖ ಸ್ಥಳಗಳ ಪಟ್ಟಿ ಮತ್ತು ಅವುಗಳ ಕಿರು (Konark tourist destination) ಪರಿಚಯ ಇಲ್ಲಿದೆ.

VISTARANEWS.COM


on

Konark Tourist Destination
Koo

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳ (Konark tourist destination) ಪಟ್ಟಿ ಇಲ್ಲಿದೆ.

Konark Sun Temple

ಕೋನಾರ್ಕ್ ಸೂರ್ಯ ದೇವಾಲಯ

ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯವನ್ನು ಕುದುರೆಗಳಿಂದ ಎಳೆಯಲ್ಪಟ್ಟ ದೈತ್ಯ ರಥದ ರೂಪದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಗಂಗಾ ರಾಜವಂಶದ ವಾಸ್ತುಶಿಲ್ಪ ಕಲೆಯು ಕಲ್ಲಿನ ಪ್ರತಿ ಇಂಚಿನಲ್ಲೂ ಕಂಡುಬರುತ್ತದೆ. ರಾಶಿಚಕ್ರಗಳ ಮೂಲಕ ಸೂರ್ಯನ ಚಲನೆಯನ್ನು ಸಂಕೇತಿಸುವ ದೈತ್ಯ ಚಕ್ರಗಳ ಜೋಡಿಗಳನ್ನು ಕೆತ್ತಲಾಗಿದೆ. ಇಲ್ಲಿ ಎತ್ತರದ ಕಲ್ಲಿನ ಕಂಬಗಳು ಮತ್ತು ಭವ್ಯವಾದ ವೇದಿಕೆಯ ವ್ಯವಸ್ಥೆ ಇದೆ. ಇಲ್ಲಿ ಕಾಸ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿತ್ತು. ಇದು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Konark Beach

ಕೋನಾರ್ಕ್ ಬೀಚ್

ಬಂಗಾಳ ಕೊಲ್ಲಿಯ ಸಮುದ್ರ ಮತ್ತು ಕೋನಾರ್ಕ್ ದೇವಾಲಯದ ಆವರಣದ ಸುತ್ತಲೂ ಆವರಿಸಿರುವ ಸುಂದರ ರಮಣೀಯವಾದ ಬೀಚ್ ಇದಾಗಿದೆ. ಇದರ ಶಾಂತವಾದ ನೀಲಿ ಬಣ್ಣದ ನೀರು ಮತ್ತು ದಡದಲ್ಲಿರುವ ಕ್ಯಾಸುರಿನಾಸ್ ಮರಗಳಿಂದ ಕೂಡಿದ ಚಿನ್ನದಂತೆ ಹೊಳೆಯುವ ಮರಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಗರ ಜೀವನದಿಂದ ಬೇಸತ್ತ ಜನರು ನಿಮ್ಮ ಮನಸ್ಸಿನ ಬೇಸರ ಕಳೆಯಲು ಇಲ್ಲಿಗೆ ಬರಬಹುದು.

Konark Dance Festival

ಕೋನಾರ್ಕ್ ನೃತ್ಯ ಉತ್ಸವ

ಕೋನಾರ್ಕ್ ನ ಭವ್ಯವಾದ ಸೂರ್ಯ ದೇವಾಲಯದ ಎದುರು ಇರುವಂತಹ ತೆರೆದ ಸಭಾಂಗಣಗಳಲ್ಲಿ ಶಾಸ್ತ್ರೀಯ ನೃತ್ಯ ಉತ್ಸವವನ್ನು ನಡೆಸಲಾಗುತ್ತದೆ. ಇದನ್ನು ಒಡಿಶಾ ಪ್ರವಾಸೋದ್ಯಮವು ಪ್ರತಿವರ್ಷ ಡಿಸೆಂಬರ್ ನ ಆರಂಭದಲ್ಲಿ ಆಯೋಜಿಸುತ್ತದೆ. ದೇಶದ ವೈವಿಧ್ಯಮಯ ಪ್ರದರ್ಶನ ಕಲೆಗಳ ಪರಂಪರೆಯನ್ನು ತಿಳಿಸುವ ಪ್ರಖ್ಯಾತ ವ್ಯಕ್ತಿಗಳಿಂದ ಅಸಾಧಾರಣ ಪ್ರದರ್ಶನಗಳನ್ನು ಇಲ್ಲಿ ಪ್ರದರ್ಶಿಸಿಲಾಗುತ್ತದೆ.

Ramachandi Temple Konark

ರಾಮಚಂಡಿ ದೇವಸ್ಥಾನ

ಇದು ದಂತಕಥೆಗಳನ್ನು ಸಾರುವ ಕುಶ ಭದ್ರಾ ನದಿಯ ಸೊಂಪಾದ ದಡದಲ್ಲಿ ನೆಲೆಸಿರುವ ಪುರಾತನ ದೇವಾಯವಾಗಿದೆ.ಪುರಾಣಗಳ ಪ್ರಕಾರಣ ಇಲ್ಲಿನ ದೇವತೆ ರಾಮಚಂಡಿ ಭೂಮಿಯಲ್ಲಿ ದುಷ್ಟತನದಿಂದ ಮರೆದ ರಾಕ್ಷಸರನ್ನು ಸಂಹರಿಸಿ ಇಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ದೇವಾಲಯ ಮುಂಭಾಗದಲ್ಲಿ ಸುಂದರವಾದ ಕೆಂಪು ಮತ್ತು ಬಿಳಿ ಸ್ತಂಭಗಳಿದ್ದು, ಇದನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಇಲ್ಲಿ ಪ್ರತಿದಿನ ಭಕ್ತರು ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರಂತೆ.

Chandrabhaga Beach Konark

ಚಂದ್ರಭಾಗ ಬೀಚ್

ಪುರಿ ಕೋನಾರ್ಕ್ ಮೆರೈನ್ ಡ್ರೈವ್ ರಸ್ತೆಯಲ್ಲಿರುವ ಕೋನಾರ್ಕ್ ಸೂರ್ಯದೇವಾಲಯದಿಂದ ಕೇವಲ 3 ಕಿಮೀ ದೂರದಲ್ಲಿರುವ ಚಂದ್ರಭಾಗ ಬೀಚ್ ನಿಮ್ಮ ರಜಾದಿನಗಳನ್ನು ಕಳೆಯಲು ಹೆಚ್ಚು ಪ್ರಶಸ್ತವಾದ ಸ್ಥಳವಾಗಿದೆ. ಇಲ್ಲಿ ಮಾಘ ಸಪ್ತಮಿ ಆಚರಣೆಗಳು, ಅದ್ಭುತವಾದ ಸೂರ್ಯೋದಯವನ್ನು ವೀಕ್ಷಿಸಬಹುದು.

Archaeological Museum Konark

ಆರ್ಕಿಯಾಲಾಜಿಕಲ್ ಮ್ಯೂಸಿಯಂ ಕೋನಾರ್ಕ್

ಸೂರ್ಯದೇವಾಲಯದಿಂದ 2 ಕಿಮೀ ದೂರದಲ್ಲಿರುವ ಈ ಪುಟ್ಟ ಮ್ಯೂಸಿಯಂ ನಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕುತೂಹಲಕಾರಿ ವಸ್ತುಗಳಿವೆ. ಇಲ್ಲಿ ಪ್ರಾಚೀನ ಕಲ್ಲಿನ ಕಲಾಕೃತಿಗಳು , ದೇವಾಲಯದ ತುಣುಕುಗಳು ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ದೊರೆತ ವಸ್ತುಗಳಿಂದ ತಯಾರಿಸಿದ ಪ್ರತಿಮೆಗಳು ಕಂಡುಬರುತ್ತದೆ.

Kuruma Village Konark

ಕುರುಮಾ ಗ್ರಾಮ

ಚೌರಾಸಿ ದೇವಸ್ಥಾನದಿಂದ ಕೋನಾರ್ಕ್ ನ ಪಶ್ಚಿಮಕ್ಕೆ ಕೇವಲ 3 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹಸಿರು ಭತ್ತದ ಗದ್ದೆಗಳು ಮತ್ತು ಗ್ರಾಮೀಣ ಪರಿಸರ ಕಂಡುಬರುತ್ತದೆ. ಇಲ್ಲಿ ಬೆನಿಗ್ನ್ ಭೌಮಕರ ಆಳ್ವಿಕೆಯಲ್ಲಿ ನಿರ್ಮಿಸಲಾದ 8ನೇ ಶತಮಾನದ ಪ್ರಾಚೀನ ಬೌದ್ಧ ಸಾಂಸ್ಕೃತಿಕ ಕೇಂದ್ರದ ಅವಶೇಷಗಳು ಕಂಡುಬರುತ್ತದೆ. ಈ ಅವಶೇಷಗಳ ಮೂಲಕ ಇಟ್ಟಿಗೆ ಸ್ತೂಪಗಳು, ನಿವಾಸಿ ವಿಹಾರಗಳು ಮತ್ತು ಅಲಂಕಾರಿಕ ಬಾಗಿಲು ಜಾಮ್ ಗಳಂತಹ ರಚನೆಗಳನ್ನು ಒಳಗೊಂಡಿರುವುದು ತಿಳಿಯುತ್ತದೆ.

ಕೋನಾರ್ಕ್ ಖಗೋಳ ವೀಕ್ಷಣಾಲಯ

ಇದು ಪುರಾತನ ಗ್ರಂಥಗಳು, ಕೋನಾರ್ಕ್ ದೇವಾಲಯದ ನಿರ್ಮಾತೃಗಳು ಕ್ರಿಯಾ ವಿಧಿಗಳನ್ನು ಯೋಜಿಸಲು, ಪ್ರಗತಿಯನ್ನು ನ್ಯಾವಿಗೆಟ್ ಮಾಡಲು ರಚಿಸಿರುವ ವಿಸ್ತಾರವಾದ ಖಗೋಳ ವಿದ್ಯಮಾನಗಳನ್ನು ದಾಖಲಿಸುತ್ತದೆ. ಇಲ್ಲಿ ಇಂದಿಗೂ ಖಗೋಳಶಾಸ್ತ್ರಜ್ಞರನ್ನು ಆಕರ್ಷಿಸುವಂತಹ ಕಾಸ್ಮಿಕ್ ಮಾರ್ಗಗಳು ಮತ್ತು ಗ್ರಹಗಳ ಸ್ಥಾನಗಳನ್ನು ಅರ್ಥೈಸಲು ಪುರೋಹಿತರು ಬಳಸುವ ಸನ್ಡಿಯಲ್ ಗಳು, ಸಮಭಾಜಕ ಉಂಗುರುಗಳು ಮತ್ತು ಕಮಾನಿನ ಮೆರಿಡಿಯನ್ ಗಳಂತಹ ಕಲ್ಲಿನ ಉಪಹರಣಗಳಿವೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಮೆರೈನ್ ಡ್ರೈವ್ ಇಕೋ ರಿಟ್ರೀಟ್ ಕೋನಾರ್ಕ್

ಕೋನಾರ್ಕ್ ಮೆರೈನ್ ಡ್ರೈವ್ ಉದ್ದಕ್ಕೂ ಬೀಚ್ ವಿಲೇಜ್ ಪ್ರಕೃತಿ ರೆಸಾರ್ಟ್ ಅನ್ನು ಪರಿಶೀಲಿಸುವ ಮೂಲಕ ಬಂಗಾಳಕೊಲ್ಲಿಯ ನೀಲಿ ನೀರು ಮತ್ತು ಕ್ಯಾಸುರಿನಾ ಮರಗಳೊಳಗೆ ಸುಸ್ಥಿರ ಐಷರಾಮಿಗಳನ್ನು ನೀವು ಆರಿಸಬಹುದು. ಪರಿಸರ ಸ್ನೇಹಿ ಕುಟೀರಗಳು, ಬಿದಿರಿನ ಗುಡಿಸಲುಗಳು ಅಥವಾ ಟೆಂಟ್ ಹೌಸ್ ಗಳಲ್ಲಿ ನೀವು ಪಕ್ಷಿ ವೀಕ್ಷಣೆಯನ್ನು ಮಾಡಬಹುದು.

Continue Reading

ಪ್ರವಾಸ

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

VISTARANEWS.COM


on

Best Tourist Places In Tamilnadu
Koo

ತಮಿಳುನಾಡು ಎಂದ ತಕ್ಷಣ ನೆನಪಾಗುವುದು ಸುಂದರ ದೇವಸ್ಥಾನಗಳು, ಈ ದೇವಸ್ಥಾನಗಳಲ್ಲಿ ಸಿಗುವ ರುಚಿಯಾದ ಪ್ರಸಾದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಹೊಟ್ಟೆ ತುಂಬಿಸುವ ಸೊಗಸಾದ ಊಟ. ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

Meenakshi Temple, Madurai

ಮೀನಾಕ್ಷಿ ದೇವಸ್ಥಾನ, ಮಧುರೈ

ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ದೇವಸ್ಥಾನಗಳ ಪೈಕಿ ಮಧುರೈನ ಮೀನಾಕ್ಷಿ ದೇವಾಲಯ ಪ್ರಮುಖವಾದುದು. ಇಲ್ಲಿ ಶಿವನನ್ನು ಸುಂದರೇಶ್ವರನ ಹೆಸರಿನಲ್ಲೂ, ಪಾರ್ವತಿಯನ್ನು ಮೀನಾಕ್ಷಿಯ ಹೆಸರಿನಲ್ಲೂ ಪೂಜಿಸಲಾಗುತ್ತದೆ. ಬೃಹತ್‌ ದೇವಾಲಯ ಸಮುಚ್ಛಯವಾಗಿರುವ ಇದಕ್ಕೆ ಒಮ್ಮೆ ಒಳಗೆ ಹೊಕ್ಕರೆ, ಹೊರಬರಲು ಕೆಲವು ಗಂಟೆಗಳು ಬೇಕು. ಸುಮಾರು 16ನೇ ಶತಮಾನದ್ದೆಂದು ಹೇಳಲಾಗುವ ಈ ದೇವಾಲಯಕ್ಕೆ ನಿತ್ಯವೂ ಲಕ್ಷಗಟ್ಟಲೆ ಭಕ್ತರು ದೂರದೂರುಗಳಿಂದ ಬಂದು ದರ್ಶನ ಪಡೆಯುತ್ತಾರೆ. ಮಧುರೈಗೆ ಹೋದರೆ, ಇಲ್ಲಿನ ಸಾಂಪ್ರದಾಯಿಕ ಊಟ, ಜಿಗರ್‌ಥಂಡಾ, ದೋಸೆ, ಇಡ್ಲಿಗಳ ರುಚಿಯನ್ನು ಸವಿಯಲು ಮರೆಯಬೇಡಿ.

Kumari Amman Kovil, Kanyakumari

ಕುಮಾರಿ ಅಮ್ಮನ್‌ ಕೋಯಿಲ್‌, ಕನ್ಯಾಕುಮಾರಿ

51 ಶಕ್ತಿ ಪೀಠಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ದೇವಿಯು ಬಾಣಾಸುರನ ವಧೆಗಾಗಿ ಅವತರಿಸಿದ ಪುಟ್ಟ ಹುಡುಗಿಯ ರೂಪವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಬಹಳ ಪ್ರಸಿದ್ಧವಾದ ಈ ದೇವಾಲಯವನ್ನು ನೋಡಲು ಹೋದರೆ, ಭಾರತದ ಕೆಳತುದಿಯಾದ ಕನ್ಯಾಕುಮಾರಿಯ ಹಲವು ಜಾಗಗಳಲ್ಲಿ ಸುತ್ತಾಡಿ ಬರಬಹುದು.

Nataraja Temple, Chidambaram

ನಟರಾಜ ದೇವಾಲಯ, ಚಿದಂಬರಂ

ಚಿದಂಬರಂನ ನಟರಾಜ ದೇವಸ್ಥಾನ ಕೂಡಾ ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇಲ್ಲಿ ಗೋವಿಂದರಾಜ ಪೆರುಮಾಳ್‌ ಹಾಗೂ ನಟರಾಜನಾದ ಶಿವ ಇಬ್ಬರನ್ನೂ ಪ್ರಮುಖವಾಗಿ ಪೂಜಿಸಲಾಗುತ್ತದೆ. ಹಾಗಾಗಿ, ಶೈವ ಪಂಥ ಹಾಗೂ ವೈಷ್ಣವ ಪಂಥವನ್ನು ಅನುಸರಿಸುವ ಮಂದಿ ಇಲ್ಲಿಗೆ ದರ್ಶನ ನೀಡುತ್ತಾರೆ. ಹಾಗಾಗಿ ಎರಡೂ ಪಂಥದ ಮಂದಿಯನ್ನು ಸೆಳೆಯುವ ಅಪರೂಪದ ದೇವಸ್ಥಾನವಿದು.

Arunachaleshwar Temple, Thiruvannamalai

ಅರುಣಾಚಲೇಶ್ವರ ದೇವಸ್ಥಾನ, ತಿರುವಣ್ಣಾಮಲೈ

ಒಂಭತ್ತನೇ ಶತಮಾನದಲ್ಲಿ ಚೋಳರು ಕಟ್ಟಿಸಿದರೆನ್ನಲಾಗುವ ಈ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ಶಿವ ದೇವಸ್ಥಾನ. ಅಣ್ಣಾಮಲೈ ಬೆಟ್ಟದ ಬುಡದಲ್ಲಿರುವ ಈ ದೇವಾಲಯದ ಪ್ರಸಿದ್ಧ ಆಚರಣೆಗಳ ಪೈಕಿ ಗಿರಿವಲಂ ಕೂಡಾ ಒಂದು. ಸಾವಿರಾರು ಭಕ್ತರು ಪ್ರತಿ ಹುಣ್ಣಿಮೆಯ ದಿನ ಅಣ್ಣಾಮಲೈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಪ್ರದಕ್ಷಿಣೆ ಬಂದು ಅರುಣಾಚಲನ ದರ್ಶನ ಮಾಡುತ್ತಾರೆ.

ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ರಾಮೇಶ್ವರಂನಲ್ಲಿರುವ ಈ ಶಿವನ ದೇವಾಲಯ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಸಮುದ್ರ ತೀರದಲ್ಲಿರುವ ಈ ದೇವಸ್ಥಾನದ ಲಿಂಗವನ್ನು ಸ್ವತಃ ಶ್ರೀರಾಮನೇ ಸೀತೆಯ ಹುಡುಕಾಟದಲ್ಲಿ ಇಲ್ಲಿಗೆ ಬಂದಾಗ ಪ್ರತಿಷ್ಠಾತಿಸಿ ಪೂಜಿಸಿದ ಎಂಬ ಸ್ಥಳಪುರಾಣವಿದೆ. 12ನೇ ಶತಮಾನದಲ್ಲಿ ಪಾಂಡ್ಯರಾಜರು ಈ ದೇವಾಲಯವನ್ನು ವಿಸ್ತರಿಸಿ ಪುನರುಜ್ಜೀವನಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ.

Sri Ranganathaswamy Temple, Srirangam, Tiruchirappalli

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಂ, ತಿರುಚಿರಾಪಳ್ಳಿ

ತ್ರಿಚಿ ಅಥವಾ ತಿರುಚಿರಾಪಳ್ಳಿಯ ರಂಗನಾಥ ಸ್ವಾಮಿ ದೇವಾಲಯ ಈಗಲೂ ಪೂಜೆ ನಡೆಯುವ ದೇವಸ್ಥಾನಗಳ ಪೈಕಿ ಅತ್ಯಂತ ವಿಸ್ತಾರವಾದ ದೇವಾಲಯ. ವೈಷ್ಣವ ಪಂಥದ ಮಂದಿಯ ಪ್ರಮುಖ ದೇವಾಲಯವಾದ ಇಲ್ಲಿ ಶ್ರೀಹರಿಯು ಗರ್ಭಗುಡಿಯಲ್ಲಿ ಶೇಷಶಯನದ ರೀತಿಯಲ್ಲಿ ಪವಡಿಸಿರುವುದು ವಿಶೇಷ.

Brihadeeswara Temple, Thanjavur

ಬೃಹದೀಶ್ವರ ದೇವಸ್ಥಾನ, ತಂಜಾವೂರು

11ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾದ ಈ ದೇವಸ್ಥಾನ ಭಾರತದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ನಿತ್ಯವೂ ಸಾವಿರಾರು ಭಕ್ತರು ಭೇಟಿಕೊಡುವ ಈ ದೇವಸ್ಥಾನ. ಇದು ತನ್ನ ಅತ್ಯಪೂರ್ವ ವಾಸ್ತುಶಿಲ್ಪ, ಕೆತ್ತನೆಗಳಿಂದಷ್ಟೇ ಅಲ್ಲ, ತನ್ನ ಹಲವು ವಿಸ್ಮಯಗಳಿಂದಲೂ ಬಲು ಪ್ರಸಿದ್ಧಿ. ಅದಕ್ಕಾಗಿಯೇ ನಿತ್ಯವೂ ಇಲ್ಲಿ ಭಕ್ತರಷ್ಟೇ ಅಲ್ಲ, ದೇಶವಿದೇಶಗಳಿಂದ ಪ್ರವಾಸಿಗರೂ ಅಚ್ಚರಿಯಿಂದ ಭೇಟಿ ನೀಡುತ್ತಾರೆ

Kapaleeswara Temple, Mylapore, Chennai

ಕಪಾಲೀಶ್ವರ ದೇವಸ್ಥಾನ, ಮೈಲಾಪುರ, ಚೆನ್ನೈ

ಪಲ್ಲವರ ಕಾಲದಲ್ಲಿ ಏಳನೇ ಶತಮಾನದಲ್ಲಿ ಕಟ್ಟಲಾದ ಈ ದೇವಸ್ಥಾನ, ಚೆನ್ನೈನ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒಂದು. ಶಿವನನ್ನು ಇಲ್ಲಿ ಕಪಾಲೀಶ್ವರನ ಹೆಸರಿನಲ್ಲಿ ಪೂಜಿಸುತ್ತಾರೆ. ಚೆನ್ನೈಯಲ್ಲೇ ಇರುವ ಇದಕ್ಕೆ ನಿತ್ಯವೂ ಸಾವಿರಾರು ಭಕ್ತರು ನೆರೆಯುತ್ತಾರೆ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Continue Reading

ಪ್ರವಾಸ

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

ಹಿಮಾಲಯದ ಚಾರಣ ಕನಸಾದರೂ, ಹತ್ತಿರದಲ್ಲೇ ಸಿಗುವ ಕಡಿಮೆ ಅವಧಿಯಲ್ಲಿ ಮಾಡಿ ಬರಬಹುದಾದ ಚಾರಣಗಳು ಇಂತಹ ಸಂದರ್ಭ ನೆಮ್ಮದಿಯ ಅನುಭವ ನೀಡುತ್ತವೆ. ಬನ್ನಿ, ದಕ್ಷಿಣ ಭಾರತದಲ್ಲಿ ಮಳೆಗಾಲ ಸಮೀಪಿಸುತ್ತಿದ್ದಂತೆ ಮಾಡಬಹುದಾದ ಚಾರಣಗಳು (South Indian monsoon destinations) ಇಲ್ಲಿವೆ.

VISTARANEWS.COM


on

South Indian Monsoon Destinations
Koo

ಚಾರಣ ಪ್ರಿಯರಿಗೆ ಮಳೆಗಾಲ ಹತ್ತಿರ ಬರುತ್ತಿದ್ದಂತೆ ಸುಗ್ಗಿ. ಒಂದೆರಡು ಮಳೆ ಬರುತ್ತಿದ್ದಂತೆ ಚಿಗುರುವ ಬೆಟ್ಟಗಳು ಹಸಿರಾಗಿ ನಳನಳಿಸಲು ಆರಂಭಿಸುತ್ತವೆ. ಹಸಿರ ಸ್ವರ್ಗದಲ್ಲಿ ನಡೆಯುತ್ತಾ ನೆಲಕ್ಕೆ ಮುತ್ತಿಕ್ಕುವ ಮಂಜಿನ ಹನಿಗಳು, ಮೋಡಗಳ ಜೊತೆ ಹೆಜ್ಜೆ ಹಾಕುತ್ತಾ ಸಾಗುವುದು ಪ್ರಕೃತಿ ಪ್ರಿಯರಿಗೆ ದೈವಿಕ ಅನುಭೂತಿ ನೀಡುವ ಕ್ಷಣಗಳಲ್ಲಿ ಒಂದು. ಅದಕ್ಕಾಗಿಯೇ, ಮಳೆಗಾಲ ಹತ್ತಿರ ಬರುತ್ತಿದ್ದಂತೆ ಈ ಚಾರಣಿಗರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಒಂದಲ್ಲ ಒಂದು ಚಾರಣಕ್ಕೆ ತಯಾರಾಗುತ್ತಾರೆ. ಹಿಮಾಲಯದ ಚಾರಣ ಕನಸಾದರೂ, ಹತ್ತಿರದಲ್ಲೇ ಸಿಗುವ ಕಡಿಮೆ ಅವಧಿಯಲ್ಲಿ ಮಾಡಿ ಬರಬಹುದಾದ ಚಾರಣಗಳು ಇಂತಹ ಸಂದರ್ಭ ನೆಮ್ಮದಿಯ ಅನುಭವ ನೀಡುತ್ತವೆ. ಬನ್ನಿ, ದಕ್ಷಿಣ ಭಾರತದಲ್ಲಿ ಮಳೆಗಾಲ ಸಮೀಪಿಸುತ್ತಿದ್ದಂತೆ ಮಾಡಬಹುದಾದ ಚಾರಣಗಳು (South Indian monsoon destinations) ಇಲ್ಲಿವೆ.

Meesapulimala trek, Kerala

ಮೀಸಪುಲಿಮಲ ಚಾರಣ, ಕೇರಳ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಈ ಚಾರಣ ಅತ್ಯಂತ ಸುಂದರ ಚಾರಣಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿ ರೋಡೋಡೆಂಡ್ರಾನ್‌ ಅರಳಿರುವುದನ್ನು ನೋಡಬೇಕಾದರೆ ಈ ಚಾರಣ ಮಾಡಬೇಕು. ಅಣ್ಣಾಮಲೈ ಹಾಗೂ ಪಳನಿ ಪರ್ವತ ಪ್ರದೇಶಗಳ ನಡುವೆ ಇರುವ ಈ ಪ್ರದೇಶದಲ್ಲಿ ಮೋಡಗಳನ್ನು ನೀವು ಮುಟ್ಟಬಹುದು. ಅತ್ಯಂತ ಚಂದದ ಹುಲ್ಲುಗಾವಲ ಮಧ್ಯದಲ್ಲಿ ಮಾಡುವ ಈ ಚಾರಣ ಸುಮಾರು ೧೮ ಕಿಮೀಗಳ ಅತ್ಯಂತ ಸುಮಧುರ ಅನುಭವ ನೀಡಬಹುದಾದದ್ದೇ ಆಗಿದೆ.

kudremukh

ಕುದುರೆಮುಖ ಚಾರಣ

ಕುದುರೇಮುಖ ಬೆಟ್ಟಗಳ ಚಾರಣಕ್ಕೆ ಇಂಥದ್ದೇ ಎಂಬ ಸಮಯ ಇಲ್ಲದಿದ್ದರೂ ಮಳೆಗಾಲ ಅತ್ಯಂತ ಸೂಕ್ತ. ಮಳೆಗಾಲದಲ್ಲಿ ಈ ಬೆಟ್ಟದ ಸಾಲುಗಳು ಈಗಷ್ಟೇ ಮಿಂದೆದ್ದು ಹಸಿರು ಸೀರೆಯುಟ್ಟ ನವತರುಣಿಯಂತೆ ಶೋಭಿಸುತ್ತದೆ. ಸುಮಾರು ೨೦ ಕಿಮೀ ಅಂತರದ ಈ ಚಾರಣ ಶೋಲಾ ಕಾಡುಗಳ ಮದ್ಯದಿಂದ ಹಾದುಹೋಗಬೇಕಾಗುತ್ತದೆ. ಮಂಜು ಕವಿದ, ಮೋಡಗಳು ದಿನವಿಡೀ ಬೆಟ್ಟ ಚುಂಬಿಸುವ ಈ ಚಾರಣದ ಹಾದಿಯೇ ಒಂದು ಸುಮಧುರ ಅನುಭೂತಿ. ಚಾಋಣ ಪ್ರಿಯರಾರೂ ಈ ಚಾರಣವನ್ನು ಮಿಸ್‌ ಮಾಡಲು ಬಯಸುವುದಿಲ್ಲ.

Nagalapuram trek, Andhra Pradesh

ನಾಗಲಾಪುರಂ ಚಾರಣ, ಆಂಧ್ರಪ್ರದೇಶ

ಚಿತ್ತೂರು ಜಿಲ್ಲೆಯಲ್ಲಿರುವ ನಾಗಲಾಪುರಂ ಅತ್ಯಂತ ಸುಂದರ ತಾಣ. ಈ ಜಾಗ ಜಲಪಾತಗಳದದ್ದೇ ಕಾರುಬಾರು. ಚಾರಣದುದ್ದಕ್ಕೂ ಸಿಗುವ ಬಗೆಬಗೆಯ ಜಲಪಾತಗಳು ಚಾರಣಿಗರ ಮನೋಲ್ಲಾಸ ಹೆಚ್ಚಿಸುತ್ತದೆ. ದಣಿವು ಆರಿಸುತ್ತದೆ. 12 ಕಿಮೀ ದೂರದ ಈ ಚಾರಣ ಮಳೆಗಾಲದಲ್ಲಷ್ಟೇ ಅತ್ಯಂತ ಸೊಗಸಾದ ಅನುಭವ ನೀಡುತ್ತದೆ.

Kodachadri trek

ಕೊಡಚಾದ್ರಿ ಚಾರಣ

ಚಾರಣದ ಹುಚ್ಚು ಹತ್ತಿಸಿಕೊಂಡ ಮಂದಿ ಆರಂಭದ ದಿನಗಳಲ್ಲಿ ಮಾಡಬಹುದಾದ, ಮತ್ತಷ್ಟು ಚಾರಣದ ಹುಚ್ಚನ್ನು ಹತ್ತಿಸಿಕೊಳ್ಳಬಹುದಾದ ಎಲ್ಲ ಲಕ್ಷಣಗಳ್ನೂ ಹೊಂದಿದ ತಾಣ. ಮಳೆಗಾಲದಲ್ಲಿ ಈ ಜಾಗದ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು. ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಿಂದ ಮಾಡಬಹುದಾದ ಈ ಚಾರಣ ಮೂಕಾಂಬಿಕಾ ರಕ್ಷಿತಾರಣ್ಯದ ಒಳಗೆಯೇ ಇದೆ. ಆದಿ ಶಂಕರರು ಧ್ಯಾನ ಮಾಡಿದ ಸ್ಥಳದವರೆಗೆ ಚಾರಣ ಮಾಡಿ ಧ್ಯಾನವನ್ನೂ ಮಾಡಿ, ಮೋಡಗಳನ್ನು ಬೊಗಸೆ ತುಂಬಾ ಹಿಡಿದು ಮರಳಬಹುದು.

Chembara Peak Trek, Wayanad

ಚೆಂಬಾರ ಪೀಕ್‌ ಚಾರಣ, ವಯನಾಡು

ವಯನಾಡಿನ ಚೆಂಬಾರ ಪೀಕ್‌ ಚಾರಣ ಕೂಡಾ ಮಳೆಗಾಲದ ಅದ್ಭುತಗಳಲ್ಲಿ ಒಂದು. ದಟ್ಟಾರಣ್ಯದ ಮಧ್ಯದಲ್ಲಿರುವ ಈ ಚಾರಣಕ್ಕೆ ಅರಣ್ಯಾಧಿಕಾರಿಗಳ ಅನುಮತಿ ಬೇಕು. ಸರಳವಾದ, ಆದರೆ ಮನಮೋಹಕ ದೃಶ್ಯಗಳನ್ನು ಅನುಭವಗಳನ್ನು ಕಣ್ತುಂಬಿಕೊಳ್ಳಬಹುದಾದ ನಾಲ್ಕೈದು ಗಂಟೆಗಳಲ್ಲಿ ಮುಗಿಸಬಹುದಾದ ಚಾರಣವಿದು. ಆರಂಭಿಕ ಚಾರಣಿಗರಿಗೆ ಬೆಸ್ಟ್‌.

Ombattu gudda trek

ಒಂಭತ್ತು ಗುಡ್ಡ ಚಾರಣ

ಏಳೆಂಟು ಗಂಟೆಗಳ ಈ ಚಾರಣ ಸ್ವಲ್ಪ ಸವಾಲೇ ಆದರೂ, ಅತ್ಯಂತ ಸುಂದರ ಚಾಋಣಗಳಲ್ಲಿ ಒಂದು. ಹಾಸನ ಹಾಗೂ ಚಿಕ್ಕಮಗಳೂರಿನ ಸರಹದ್ದಿನಲ್ಲಿ ಬರುವ ಈ ಸ್ಥಳದಲ್ಲಿ ಬಗೆಬಗೆಯ ಸಸ್ಯವೈವಿಧ್ಯವನ್ನೂ ಕಣ್ತುಂಬಿಕೊಳ್ಳಬಹುದು. ರೋಮಾಂಚಕ ಹಾಗೂ ನಿಗೂಢವಾದ ಅನುಭವಗಳನ್ನು ನೀಡಬಲ್ಲ ಈ ಚಾರಣದಲ್ಲಿ ಈ ಅನುಭವಗಳನ್ನು ಪಡೆಯಲು ಮಳೆಗಾಲದಲ್ಲೇ ಚಾರಣ ಮಾಡಬೇಕು.

Continue Reading
Advertisement
Prajwal Revanna Case
ಪ್ರಮುಖ ಸುದ್ದಿ1 hour ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ2 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ2 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Bomb Threat
ಪ್ರಮುಖ ಸುದ್ದಿ3 hours ago

Bomb Threat : ತೆಲಂಗಾಣ ಡಿಸಿಎಂ ಮನೆಗೆ ಬಾಂಬ್​ ಬೆದರಿಕೆ; ಆತಂಕ

Acid attack
ಕರ್ನಾಟಕ3 hours ago

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Cab service
ಪ್ರಮುಖ ಸುದ್ದಿ3 hours ago

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Gauri Khan
ಸಿನಿಮಾ3 hours ago

Gauri Khan: ಇಸ್ಲಾಂಗೆ ಮತಾಂತರ ಆಗದೇ ಇರಲು ಕಾರಣ ತಿಳಿಸಿದ ಶಾರುಖ್ ಖಾನ್ ಪತ್ನಿ ಗೌರಿ!

Veer Savarkar flyover
ಕರ್ನಾಟಕ3 hours ago

Veer Savarkar flyover: ಸಾವರ್ಕರ್ ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿರೋದು ಅತ್ಯಂತ ಖಂಡನೀಯ: ವಿಜಯೇಂದ್ರ

Lok Sabha Election
ಪ್ರಮುಖ ಸುದ್ದಿ3 hours ago

Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

Robbery Case Two accused arrested by yallapur police
ಕರ್ನಾಟಕ3 hours ago

Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ5 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು14 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 day ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ7 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌