Indian spices | ಮಸಾಲೆ ಪರಿಮಳ ಸದಾ ಘಮಘಮ ಅಂತಾ ಇರಬೇಕಿದ್ದರೆ ಹೀಗೆ ಮಾಡಿ - Vistara News

ಆಹಾರ/ಅಡುಗೆ

Indian spices | ಮಸಾಲೆ ಪರಿಮಳ ಸದಾ ಘಮಘಮ ಅಂತಾ ಇರಬೇಕಿದ್ದರೆ ಹೀಗೆ ಮಾಡಿ

ಮಸಾಲೆ ವಸ್ತುಗಳು (indian spices) ಬಣ್ಣ, ರುಚಿ ಮತ್ತು ಪರಿಮಳ ಕಳೆದುಕೊಳ್ಳದಂತೆ ಕಾಪಾಡಿಕೊಳ್ಳುವುದು ಒಂದು ಕಲೆ. ನಿಮ್ಮ ಕಿಚನ್‌ ಸದಾ ಇವುಗಳಿಂದ ಘಮಘಮಿಸುತ್ತಿರಲಿ.

VISTARANEWS.COM


on

spices
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂಗು-ತೆಂಗು ಇದ್ದರೆ ಮಂಗಮ್ಮನ ಅಡುಗೆಯೂ ರುಚಿ ಅಂತ ಗಾದೆ. ಅಂದರೆ ಬೀಳಬೇಕಾದ ವಸ್ತುಗಳು ಅಗತ್ಯ ಪ್ರಮಾಣದಲ್ಲಿ ಬಿದ್ದರೆ ಅಡುಗೆಯನ್ನು ಯಾರು ಮಾಡಿದರೂ ರುಚಿಯೇ. ಷಡ್ರಸಗಳ ಹೊರತಾಗಿ ಅಡುಗೆಗೆ ರುಚಿಯನ್ನು ನೀಡುವಂಥವು ಮಸಾಲೆ ಪದಾರ್ಥಗಳು ಮತ್ತು ಪರಿಮಳ ಭರಿತ ಸಸ್ಯಗಳು (indian spices and herbs). ಈ ವಸ್ತುಗಳು ದೀರ್ಘಕಾಲದವರೆಗೆ ಬಾಳಿಕೆ ಬರುವುದು ಹೌದಾದರೂ, ಅವುಗಳಿಗೂ ಒಂದು ಕಾಲಮಿತಿ ಇರಲೇಬೇಕಲ್ಲ. ಯಾವ ಮಸಾಲೆಯ ತಾಳಿಕೆ-ಬಾಳಿಕೆ ಎಷ್ಟು ದಿನ? ಯಾವಾಗ ಅವುಗಳನ್ನು ಬದಲಿಸಬೇಕು ಎಂಬಂಥ ಒಂದಿಷ್ಟು ಮಾಹಿತಿ ಇಲ್ಲಿದೆ.

ಮಸಾಲೆ ವಸ್ತುಗಳು ಆಹಾರಕ್ಕೆ ಬಣ್ಣ, ರುಚಿ, ಪರಿಮಳವನ್ನು ನೀಡುವುದು ಮಾತ್ರವಲ್ಲದೆ, ಆರೋಗ್ಯಕ್ಕೆ ಅನುಕೂಲಕರವಾಗಿಯೂ ಕೆಲಸ ಮಾಡುತ್ತವೆ. ಗಿಡ-ಮರಗಳ ಒಣಗಿದ ಬೇರು-ಕಾಂಡ-ಕಾಯಿಗಳಂಥ ಭಾಗಗಳನ್ನು ಸಾಮಾನ್ಯವಾಗಿ ಮಸಾಲೆ ಪದಾರ್ಥಗಳೆಂದು (spices) ಕರೆದರೆ, ಒಣಗಿದ ಎಲೆ- ಹೂವುಗಳಂಥವನ್ನು herb ಎಂದು ಗುರುತಿಸುತ್ತಾರೆ. ಆದರೆ ಇದೊಂದು ಸ್ಥೂಲ ವಿಂಗಡಣೆಯಷ್ಟೆ, ಈ ವ್ಯಾಖ್ಯೆಗೆ ಅಪವಾದಗಳು ಇದ್ದೇ ಇವೆ.

ಒಣಗಿದ ಎಲೆಗಳಿಗೆ ಆಯಸ್ಸು ಕಡಿಮೆಯೇ. ಉದಾ, ಕಸೂರಿ ಮೇಥಿ, ಪುದೀನಾ, ಕೊತ್ತಂಬರಿ, ನಿಂಬೆಹುಲ್ಲು, ಕರಿಬೇವಿನಂಥ ಅಪ್ಪಟ ಭಾರತೀಯ ವಸ್ತುಗಳೇ ಇರಲಿ, ಅಥವಾ ಬೆಸಿಲ್‌, ಒರೆಗಾನೊ, ರೋಸ್‌ಮೆರಿ, ಪಾರ್ಸ್ಲೆ, ಥೈಮ್‌ನಂತಹ ಐರೋಪ್ಯ ಅಡುಗೆಮನೆಯ ವಸ್ತುಗಳೇ ಇರಲಿ…ಈ ಸಸ್ಯಗಳನ್ನು ಒಣಗಿಸಿ ಬಳಸುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಹರ್ಬ್‌ಗಳ ಆಯಸ್ಸು ಕೆಲವು ತಿಂಗಳುಗಳು ಮಾತ್ರ. ಬೆಸಿಲ್‌, ಥೈಮ್‌ನಂಥವು ಒಂದೆರಡು ವರ್ಷಗಳವರೆಗೂ ಇರಬಲ್ಲವು.

ಪುಡಿ ಮಾಡಿದ ಮಸಾಲೆ ಪದಾರ್ಥಗಳಿಗೆ ಈ ಎಲೆಗಳಿಗಿಂತ ಹೆಚ್ಚಿನ ಆಯಸ್ಸು. ಕೆಲವು ಮೂರು ವರ್ಷಗಳವರೆಗೂ ಇರಬಲ್ಲವು. ಉದಾ, ಅರಿಶಿನ ಪುಡಿ, ಶುಂಠಿ ಪುಡಿ, ಚಕ್ಕೆ-ಲವಂಗ-ಏಲಕ್ಕಿಯಂಥ ಪುಡಿಗಳು, ಕೆಂಪು ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಇತ್ಯಾದಿ.

ಇದನ್ನೂ ಓದಿ | smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು

ಇವೆಲ್ಲವುಗಳಿಗಿಂತ ಹೆಚ್ಚಿನ ಆಯಸ್ಸಿರುವುದು ಇಡಿಯಾಗಿ ಶೇಖರಿಸಿಟ್ಟ ಮಸಾಲೆ ಪದಾರ್ಥಗಳಿಗೆ. ಈ ಮಸಾಲೆ ಪದಾರ್ಥಗಳು ಗಾಳಿಗೆ ಒಡ್ಡಿದಷ್ಟೂ ಬೇಗ ಹಳತಾಗುತ್ತವೆ. ತಮ್ಮ ಬಣ್ಣ, ರುಚಿ, ಪರಿಮಳ ಕಳೆದುಕೊಳ್ಳುತ್ತವೆ. ಸರಿಯಾಗಿ ಒಣಗಿಸಿ ಶೇಖರಿಸಿಟ್ಟರೆ ನಾಲ್ಕು ವರ್ಷಗಳವರೆಗೂ ಈ ವಸ್ತುಗಳು ಬಾಳಬಲ್ಲವು. ಉದಾ, ಇಡಿಯಾದ ಏಲಕ್ಕಿ, ಲವಂಗ, ಗೇಣುದ್ದದ ದಾಲ್ಚಿನ್ನಿ ಚಕ್ಕೆಗಳು, ಇಡಿಯಾದ ಒಣಮೆಣಸು, ಕಾಳು ಮೆಣಸು, ಧನಿಯಾ, ಜೀರಿಗೆ, ಸೋಂಪು ಇತ್ಯಾದಿಗಳು. ಹಾಗಂತ ಈ ವಸ್ತುಗಳು ಹಳತಾದರೆ ಉಪಯೋಗಿಸಿದವರ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ. ಆದರೆ ಆಹಾರದ ರುಚಿ, ಪರಿಮಳ ಮುಂತಾದ ಗುಣಮಟ್ಟವನ್ನೂ ವೃದ್ಧಿಸುವುದಿಲ್ಲ.

ಶೇಖರಿಸುವುದು ಹೇಗೆ?: ಇದೊಂದು ಮುಖ್ಯವಾದ ಪ್ರಶ್ನೆ. ಗಾಳಿ, ಬೆಳಕು, ಬಿಸಿಲು ಮತ್ತು ತೇವಕ್ಕೆ ಒಡ್ಡದಂತೆ ಇವುಗಳನ್ನು ಶೇಖರಿಸುವುದು ಅಗತ್ಯ. ನಮ್ಮ ಒಲೆಯ ಪಕ್ಕದಲ್ಲೇ ಅಲಂಕಾರಿಕವಾಗಿ ಈ ವಸ್ತುಗಳನ್ನು ಪೇರಿಸಿಕೊಳ್ಳುವುದು ಹಲವರಿಗೆ ಇಷ್ಟವಾಗುತ್ತದೆ. ಆದರೆ ಇದು ಮಸಾಲೆ ಆಯಸ್ಸನ್ನು ಕುಂಠಿತಗೊಳಿಸುತ್ತದೆ. ಬದಲಿಗೆ, ಒಲೆ ಅಥವಾ ಅವನ್‌ನಿಂದ ಸ್ವಲ್ಪ ದೂರದಲ್ಲಿರುವ ಕಪಾಟು, ಡ್ರಾಗಳು ಸೂಕ್ತ ಜಾಗ. ಗಾಜಿನ ಅಥವಾ ಪಿಂಗಾಣಿಯ, ಭದ್ರ ಮುಚ್ಚಲಿನ ಡಬ್ಬಿಗಳು ಇವುಗಳಿಗೆ ಸೂಕ್ತ. ಸ್ಟೀಲ್‌ ಡಬ್ಬಿಗಳಲ್ಲಿ ಇಡುವುದಾದರೂ ಅಡ್ಡಿಯಿಲ್ಲ. ಆದರೆ ಇವುಗಳಿಗೆ ಶಾಖ ತಾಗದಂತೆ ಎಚ್ಚರ ವಹಿಸಬೇಕು. ಇನ್ನು ಫೈಬರ್/ಪ್ಲಾಸ್ಟಿಕ್‌ ಡಬ್ಬಿಗಳ ಬಳಕೆಯೂ ಉಂಟು. ಮಸಾಲೆಗಳು ಬೇಗ ತಮ್ಮ ಬಣ್ಣ, ಪರಿಮಳ ಕಳೆದುಕೊಳ್ಳುವುದು ಮಾತ್ರವೇ ಅಲ್ಲ, ಡಬ್ಬಿಗಳು ಮರು ಬಳಕೆಗೆ ಕಷ್ಟವಾಗುವ ಮಟ್ಟಿಗೆ ಒಳಗಿನ ವಸ್ತುಗಳ ವಾಸನೆ ಹೀರಿಕೊಳ್ಳುತ್ತವೆ. 

ಇದನ್ನೂ ಓದಿ | Eating habit | ಅಡುಗೆ ಮಾಡಿಕೊಳ್ಳುವಷ್ಟು ಸಮಯ ಇಲ್ಲವೇ? ಹಾಗಿದ್ದರೆ ಹೀಗೆ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

ಒಮೇಗಾ 3 ಕೊಬ್ಬಿನಾಮ್ಲ ಎನ್ನುತ್ತಿದ್ದಂತೆ ಕೊಬ್ಬಿನ ಮೀನುಗಳು ನೆನಪಾಗುತ್ತವೆ. ಸಾಗರೋತ್ಪನ್ನಗಳಿಂದ ಹೆಚ್ಚಿನ ಪ್ರಮಾಣದ ಒಮೇಗಾ 3 ದೊರೆಯುವುದು ಹೌದು. ಅದರರ್ಥ ಸಸ್ಯಾಹಾರಿಗಳಿಗೆ ಈ ಸತ್ವ ಇಲ್ಲವೆಂದಲ್ಲ. ಹಾಗಾದರೆ ಯಾವೆಲ್ಲ ಸಸ್ಯಜನ್ಯ ವಸ್ತುಗಳಿಂದ ಒಮೇಗಾ 3 ಕೊಬ್ಬಿನಾಮ್ಲವನ್ನು (Food Tips Kannada) ಪಡೆಯಬಹುದು?

VISTARANEWS.COM


on

Food Tips Kannada
Koo

ದೇಹವು ಪೂರ್ಣಾರೋಗ್ಯದಲ್ಲಿ ಇರಬೇಕೆಂದಾದರೆ ಆವಶ್ಯಕ ಪೌಷ್ಟಿಕಾಂಶಗಳೆಲ್ಲ ಪೂರ್ಣ ಪ್ರಮಾಣದಲ್ಲಿ ದೊರೆಯಬೇಕು. ಉದಾ, ಒಮೇಗಾ ೩ ಕೊಬ್ಬಿನಾಮ್ಲ ಹಲವು ಕಾರಣಗಳಿಂದಾಗಿ ದೇಹಕ್ಕೆ ಬೇಕೆಬೇಕು. ಮುಖ್ಯವಾಗಿ ಹೃದಯದ ಆರೋಗ್ಯ ರಕ್ಷಣೆಗೆ ಮತ್ತು ಮೆದುಳಿನ ಸಂರಕ್ಷಣೆಗೆ ಒಮೇಗಾ ೩ ಕೊಬ್ಬಿನಾಮ್ಲ ಅಗತ್ಯವಾಗಿ ಬೇಕು. ಮೀನಿನಲ್ಲಿ ಈ ಅಂಶ ಯಥೇಚ್ಛವಾಗಿ ದೊರೆಯುತ್ತದೆ. ಆದರೆ ಸಸ್ಯಾಹಾರಿಗಳಿಗೆ? ಅವರೇನು ತಿಂದರೆ ಒಮೇಗಾ ೩ ಕೊಬ್ಬಿನಾಮ್ಲವನ್ನು ಸಾಕಷ್ಟು ಪ್ರಮಾಣದಲ್ಲಿ (Food Tips Kannada) ಪಡೆಯುವುದಕ್ಕ್ ಸಾಧ್ಯ?

Flax Seeds with Pottery

ಅಗಸೆ ಬೀಜ

ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ 3 ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್‌ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್‌, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದು ಶ್ರೇಷ್ಠ.

Chia Different Types of Seeds with Health Benefits

ಚಿಯಾ ಬೀಜ

ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ 3 ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್‌ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಅಮೈನೊ ಆಮ್ಲಗಳು, ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್‌ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.

Walnuts Dry Fruits For Hair Fall

ವಾಲ್‌ನಟ್‌

ಒಮೇಗಾ 3 ಕೊಬ್ಬಿನಾಮ್ಲವನ್ನು ನೈಸರ್ಗಿಕವಾಗಿಯೇ ಯಥೇಚ್ಛವಾಗಿ ಹೊಂದಿರುವ ಇನ್ನೊಂದು ವಸ್ತುವಿದು. ನೋಡಿದಾಗ ಮೆದುಳನ್ನು ನೆನಪಿಸುವ ವಾಲ್‌ನಟ್‌ನಲ್ಲಿ ಪ್ರೊಟೀನ್‌, ನಾರು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳನ್ನು ಹಾಗೆಯೇ ಬಾಯಾಡಬಹುದು ಅಥವಾ ಸಲಾಡ್‌ಗಳಿಗೆ, ಬ್ರೆಡ್‌, ಓಟ್‌ಮೀಲ್‌ ಮುಂತಾದ ಹಲವು ತಿನಿಸುಗಳೊಂದಿಗೆ ಇದನ್ನು ಸೇರಿಸಲೂಬಹುದು.

ಕ್ಯಾನೊಲ ಎಣ್ಣೆ

ಅಡುಗೆಗೆ ಬಳಸುವ ಎಣ್ಣೆಯನ್ನು ಉಳಿದೆಲ್ಲದರ ಬದಲಿಗೆ ಕ್ಯಾನೊಲ ಎಣ್ಣೆಯನ್ನು ಬಳಸಬಹುದು. ಇದರಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಧಾರಾಳವಾಗಿದೆ. ಗಾಣದಲ್ಲಿ ತೆಗೆದ ಅಥವಾ ಕೋಲ್ಡ್‌ ಪ್ರೆಸ್ಡ್‌ ರೀತಿಯಿಂದ ತೆಗೆದ ಕ್ಯಾನೊಲ ಎಣ್ಣೆಯನ್ನು ಬಳಸುವುದು ಸೂಕ್ತ. ಇದನ್ನು ಒಗ್ಗರಣೆಗೆ, ಹುರಿಯಲು, ಕರಿಯಲು ಹಾಗೂ ಉಳಿದ ಎಲ್ಲ ರೀತಿಯಲ್ಲೂ ಬಳಸಬಹುದು.

It provides good protein for vegetarians Soybeans Benefits

ಸೋಯಾ ಉತ್ಪನ್ನಗಳು

ತೋಫು, ಎಡಮೇಮ್‌ ಮುಂತಾದ ಎಲ್ಲ ರೀತಿಯ ಸೋಯಾ ಉತ್ಪನ್ನಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ದೊರೆಯುತ್ತದೆ. ಸೋಯಾ ಹಾಲನ್ನು ಕೂಡ ಈ ಪಟ್ಟಿಗೆ ಸೇರಿಸಬಹುದು. ಪನೀರ್‌ನಂತೆಯೇ ತೋಫು ಬಳಕೆಗೆ ಬರುತ್ತದೆ. ಉಳಿದೆಲ್ಲ ಕಾಳುಗಳಂತೆ ಎಡಮೇಮ್‌ ಬಳಸಬಹುದು. ಸೋಯಾ ಚಂಕ್‌ಗಳನ್ನು ತರಕಾರಿಗಳ ಜೊತೆಗೆ ಬೇಯಿಸಲು ಸಾಧ್ಯವಿದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಇತರ ಮೂಲಗಳು

ಲಘುವಾದ ಅಡಿಕೆಯಂಥ ಘಮವನ್ನು ಹೊಂದಿರುವ ಸೆಣಬಿನ ಬೀಜಗಳು, ಪಾಚಿಯೊಂದರಿಂದ ಸಿದ್ಧಪಡಿಸುವ ಆಲ್ಗಲ್‌ ಎಣ್ಣೆ, ಬ್ರಸೆಲ್‌ ಸ್ಪ್ರೌಟ್‌ ಮುಂತಾದ ಆಹಾರಗಳಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹೀಗೆ ಸಸ್ಯಾಹಾರಿಗಳಿಗೂ ಒಮೇಗಾ ೩ ಕೊಬ್ಬಿನಾಮ್ಲ ದೇಹಕ್ಕೆ ಅಗತ್ಯವಾದಷ್ಟು ದೊರೆಯುವುದಕ್ಕೆ ಸಾಧ್ಯವಿದೆ. ಇದಕ್ಕಾಗಿ ಇದಿಷ್ಟೂ ರೀತಿಯ ಆಹಾರಗಳನ್ನು ನಿಯಮಿತವಾಗಿ ಬಳಕೆ ಮಾಡುವುದು ಆವಶ್ಯಕ.

Continue Reading

ಆಹಾರ/ಅಡುಗೆ

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ? ಈ ಲೇಖನ ಓದಿ.

VISTARANEWS.COM


on

Health Tips Kannada Stay away from these foods to get rid of acne
Koo

ಬೆಂಗಳೂರು: ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಬೇಸತ್ತ (Health Tips Kannada) ಮಂದಿ ಏನೆಲ್ಲ ಸರ್ಕಸ್‌ ಮಾಡಿದರೂ ಮೊಡವೆಯಿಂದ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ಪಡಬಹುದು. ನೂರೆಂಟು ಮಂದಿ ನೂರಾರು (foods to get rid of acne) ಸಲಹೆ ಕೊಡಬಹುದಾದರೂ, ಎಲ್ಲರಿಗೂ ಎಲ್ಲ ಸಲಹೆಗಳೂ ಹೊಂದಲಾರದು. ಕಾರಣ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

ಹಾಲು

ಹಾಲಿನಿಂದ ಮೊಡವೆಗಳುಂಟಾಗಬಹುದು. ಆಶ್ಚರ್ಯವಾದರೂ ಸತ್ಯವೇ. ಹಸುವಿನ ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್‌ ಐಜಿಎಫ್‌-1 ಹಾಗೂ ಬೊವಿನ್‌ ಇರುವುದರಿಂದ ಇವು ನಮ್ಮ ದೇಹಕ್ಕೆ ಸೇರುವುದರಿಂದ ಇವು ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಮುಖದಲ್ಲಿ ಕೂದಲ ಬೆಳವಣಿಗೆ ಹಾಗೂ ಮೊಡವೆಗಳೂ ಉಂಟಾಗುತ್ತದೆ.

ಇದನ್ನೂ ಓದಿ: Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಅಯೋಡಿನ್

ಮೊಡವೆಗಳಿಗೂ ಅಯೋಡಿನ್‌ಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಉಪ್ಪು ಹೆಚ್ಚಿರುವ ತಿನಿಸುಗಳನ್ನು, ಆಗಾಗ ತಿನ್ನುವ ಆಹಾರಗಳಲ್ಲಿರುವ ಉಪ್ಪಿನ ಪ್ರಮಾಣ ಎಲ್ಲವೂ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಪೂರ್ತಿಯಾಗಿ ಉಪ್ಪನ್ನು ಬಿಡಬೇಡಿ. ಅಯೋಡಿನ್‌ ಕೊರತೆ ದೇಹಕ್ಕೆ ಆಗಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು ಕೊಂಚ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಮ್ಯಾಜಿಕ್‌ ಮಾಡಬಹುದು.

ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳು

ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳ ಸೇವನೆ ನಿಮ್ಮ ಮೊಡವೆಗಳ ಸಮಸ್ಯೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎನ್ನಲಾಗುತ್ತದೆ. ಕಾರ್ನ್‌ ಸಿರಪ್‌, ಮೈದಾ, ಸಕ್ಕರೆ, ರಿಫೈನ್ಡ್‌ ಧಾನ್ಯಗಳು, ಸಾಸ್‌ ಹಾಗೂ ಕೆಚಪ್‌ಗಳು, ಸ್ಪೋರ್ಟ್ಸ್‌ ಡ್ರಿಂಕ್‌ಗಳು ಸಂಸ್ಕರಿಸಿದ ಮಾಂಸ ಹಾಗೂ ಇತರ ಆಹಾರಗಳು, ಇತರ ಆಹಾರಗಳ ಮೂಲಕ ಗೊತ್ತೇ ಆಗದಂತೆ ದೇಹದೊಳಕ್ಕೆ ಸೇರುವ ಸಕ್ಕರೆ ಎಲ್ಲವೂ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿವೆ. ಆದಷ್ಟೂ ನೈಸರ್ಗಿಕ ಆಹಾರಗಳು, ಒಣಬೀಜಗಳು, ಹಣ್ಣುಗಳು ಇತ್ಯಾದಿಗಳನ್ನೇ ತಿನ್ನಿ.

ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

ಹಾಗಾದರೆ ಏನು ತಿಂದರೆ ಮೊಡವೆಗಳು ಬರದಂತೆ ತಡೆಯಬಹುದು, ಚರ್ಮವನ್ನು ನುಣುಪಾಗಿ ಇರಿಸಬಹುದು ಎನ್ನುತ್ತೀರಾ? ಝಿಂಕ್‌ ಹೆಚ್ಚಿರುವ ಆಹಾರಗಳು ಮೊಡವೆ ಸಮಸ್ಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಓಡಿಸುತ್ತವೆ. ಕಿಡ್ನಿ ಬೀನ್ಸ್‌, ಓಯ್ಸ್ಟರ್‌, ಕೆಂಪು ಮಾಂಸ ಹಾಗೂ ಸಿಹಿಕುಂಬಳದ ಬೀಜ ಇವುಗಳಲ್ಲಿ ಹೆಚ್ಚು ಝಿಂಕ್‌ ಇವೆ.

ಅಷ್ಟೇ ಅಲ್ಲ, ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಸಿ ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಬೇಕ್ಡ್‌ ಆಹಾರಗಳು ಇತ್ಯಾದಿಗಳನ್ನು ಕಡಿಮೆ ಮಾಡಿ. ನದಿಯ ಮೀನನ್ನು ವಾರಕ್ಕೆರಡು ಬಾರಿ ತಿನ್ನಿ. ಚಿಯಾ ಬೀಜಗಳು, ಅಗಸೆ ಬೀಜಗಳನ್ನು ನಿತ್ಯವೂ ಸೇವಿಸಿ. ಆಹಾರ ಸೇವನೆಯ ಪ್ರಮಾಣದ ಮೇಲೆ ಹಿಡಿತವಿರಲಿ. ನೈಸರ್ಗಿಕ ಆಹಾರಗಳನ್ನೇ ಹೆಚ್ಚು ಸೇವಿಸಿ. ಎಲ್ಲ ಪೋಷಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರದೆಡೆಗೆ ಗಮನ ಇರಲಿ. ಇಷ್ಟು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮವೂ ಆರೋಗ್ಯಕರವಾಗಿ ಫಲಫಳಿಸುತ್ತದೆ ಎನ್ನುತ್ತಾರೆ ವೈದ್ಯರು.

Continue Reading

ಲೈಫ್‌ಸ್ಟೈಲ್

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಕಲಬೆರಕೆ ಅಂದರೆ ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಕಲಬೆರಕೆಯ ಸುದ್ದಿಗಳು ಸುದ್ದಿಯೇ ಅಲ್ಲ ಎಂಬಂತಾಗಿದೆ. ನಮ್ಮ ಆಹಾರದ ಸುರಕ್ಷತೆಗೆ ನಾವೆಷ್ಟು ಗಮನ ನೀಡುತ್ತೇವೆ ಎಂಬುದಕ್ಕೆ ಇದು ಸಾಕ್ಷಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Food Tips Kannada adulterated food effect health
Koo

ಕಲಬೆರಕೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಇತ್ತೀಚೆಗೆ ದೇಶದ (Food Tips Kannada) ರಾಜಧಾನಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ ಸುಮಾರು 15 ಟನ್‌ಗಳಷ್ಟು ಪ್ರಮಾಣದ ನಕಲಿ ಮತ್ತು ಕಲಬೆರಕೆಯ ಮಸಾಲೆ ಅಥವಾ ಸಾಂಬಾರ ಪದಾರ್ಥಗಳ ಸುದ್ದಿ ಬಹಳಷ್ಟನ್ನು ತಿಳಿಸುತ್ತದೆ. ಕೊಳೆತ ಎಲೆಗಳು, ಹುಳು ಹಿಡಿದ ಧಾನ್ಯಗಳು, ಮರದ ಪುಡಿ ಮುಂತಾದ ವಸ್ತುಗಳನ್ನು ಕಲಬೆರೆಕೆಗೆಂದು ಇರಿಸಿದ್ದು, ಆಹಾರ ಸುರಕ್ಷತೆಯ ಬಗ್ಗೆ ನಾವೆಷ್ಟು ಅಜಾಗ್ರತೆ ಮಾಡುತ್ತೇವೆ ಎಂಬುದಕ್ಕೆ ಹಿಡಿದ ಕನ್ನಡಿ. ಏನು ಕಲಬೆರಕೆ ಎಂದರೆ? ಇದರಿಂದ ಏನಾಗುತ್ತದೆ?

ಕಲಬೆರಕೆ ಎಂದರೆ

ಮಲಿನ ವಸ್ತುಗಳನ್ನು ಅಥವಾ ಕಡಿಮೆ ಗುಣಮಟ್ಟದ ವಸ್ತುಗಳನ್ನು ಒಳ್ಳೆಯದಕ್ಕೆ ಬೆರೆಸುವುದು. ಆದರೆ ಇದನ್ನು ಮೂಲ ವಸ್ತುವಿನ ಬೆಲೆಗೆ ಮತ್ತು ಗುಣಮಟ್ಟದ ಖಾತ್ರಿಗೆ ಮಾರಲಾಗುತ್ತದೆ. ಇದಕ್ಕಾಗಿ ಮೂಲ ವಸ್ತುವಿನ ಬಣ್ಣ, ಘಮ ಇತ್ಯಾದಿಗಳನ್ನು ಹೆಚ್ಚಿಸಲು ಮಾಡುವ ಕಳ್ಳಾಟಗಳು. ಇದು ಗ್ರಾಹಕರಿಗೆ ಮಾಡುವ ವಿಶ್ವಾಸದ್ರೋಹ ಮಾತ್ರವಲ್ಲ, ಅವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ಬಗ್ಗೆ ವಿಸ್ತೃತವಾದ ಮಾಹಿತಿ ಇಲ್ಲಿದೆ.

ಅಗ್ಗದ ವಸ್ತುಗಳನ್ನು ಸೇರಿಸುವುದು

ಹಾಲಿಗೆ ನೀರು ಸೇರಿಸಿದಷ್ಟೇ ಲೀಲಾಜಾಲವಾಗಿ ಹಿಟ್ಟಿಗೆ ಸೀಮೆಸುಣ್ಣದ ಪುಡಿ ಬೆರೆಸುವುದು, ಅಚ್ಚ ಖಾರದ ಪುಡಿಗೆ ಅಥವಾ ಅರಿಶಿನ ಪುಡಿಗೆ ಬಣ್ಣ ಬರುವಂಥ ರಾಸಾಯನಿಕಗಳನ್ನು ಸೇರಿಸುವುದು, ದುಬಾರಿ ಬೆಲೆಯ ಆಲಿವ್‌ ಎಣ್ಣೆಗೆ ಅಗ್ಗದ ಯಾವುದೋ ಎಣ್ಣೆ ಬೆರೆಸುವುದು, ಅಂದರೆ ದುಬಾರಿ ಬೆಲೆಯ ವಸ್ತುವಿಗೆ ಅದರಂತೆಯೇ ಕಾಣುವ ಅಗ್ಗದ ಯಾವುದಾದರೂ ವಸ್ತುವನ್ನು ಸೇರಿಸಬಹುದು.

ಇದನ್ನೂ ಓದಿ: Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

ಸತ್ವಹೀನ ಮಾಡುವುದು

ವಸ್ತುಗಳ ಸತ್ವಗಳನ್ನು ತೆಗೆದು ಅವುಗಳನ್ನು ಹೊಸ ಹೆಸರಿನಲ್ಲಿ ಮಾರಾಟ ಮಾಡುವುದು. ಅಂದರೆ ಹಾಲಿನ ಕೊಬ್ಬಿನಂಶವನ್ನೆಲ್ಲ ತೆಗೆದು, ಅದನ್ನು ಪ್ರತ್ಯೇಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ, ಜೊತೆಗೆ ʻಸ್ಕಿಮ್‌ ಮಿಲ್ಕ್‌ʼ ಹೆಸರಿನಲ್ಲಿ ಕೊಬ್ಬು ರಹಿತ ಹಾಲನ್ನೂ ಮಾರಾಟ ಮಾಡಲಾಗುತ್ತದೆ. ಇದು ಮಾತ್ರವಲ್ಲ, ಹಲವಾರು ಮಸಾಲೆಗಳ ತೈಲದಂಶವನ್ನು ತೆಗೆಯುವುದು ಸಹ ಇದೇ ಸಾಲಿಗೆ ಸೇರಿಸಲಾಗುತ್ತದೆ.

ರಾಸಾಯನಿಕಗಳ ಬೆರಕೆ

ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಹಲವು ರೀತಿಯ ಅನಾರೋಗ್ಯಕರ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಈ ಪೈಕಿ ರಸಗೊಬ್ಬರಗಳು, ಕೀಟನಾಶಗಳು ಮುಂತಾದ ರಾಸಾಯನಿಕಗಳನ್ನು ಕಲಬೆರಕೆಗೆ ಬಳಸಲಾಗುತ್ತದೆ. ಕೆಲವನ್ನು ʻಕಲರ್‌-ಬೆರಕೆʼಯ ಉದ್ದೇಶದಿಂದ ಮಾಡಲಾಗುತ್ತದೆ.

ಮಾಲಿನ್ಯದ ಸಮಸ್ಯೆ

ಆಹಾರಕ್ಕೆ ಕೀಟಗಳು, ಬ್ಯಾಕ್ಟೀರಿಯಗಳು, ಟಾಕ್ಸಿನ್‌ಗಳು, ಭಾರೀ ಖನಿಜಗಳು ಸಹ ಸೇರಬಹುದು. ಇವುಗಳಲ್ಲಿ ಎಲ್ಲವೂ ಉದ್ದೇಶಪೂರ್ವಕವಾಗಿ ಬೆರಕೆಯಾಗುತ್ತವೆ ಎಂದೇನಿಲ್ಲ. ಕೆಲವೊಂದು ಅರಿವಿಲ್ಲದೆಯೇ ಶುದ್ಧ ಆಹಾರಕ್ಕೆ ಸೇರಿರುವ ಸಾಧ್ಯತೆ ಇರುತ್ತದೆ.

ಕೃತಕ ಮಾಗಿಸುವಿಕೆ

ಬಾಳೆಗೊನೆ ತುರ್ತಾಗಿ ಹಣ್ಣಾಗಬೇಕೆ? ಎಥಿಲೀನ್‌ ಸೋಕಿದರಾಯ್ತು, ಬಲುಬೇಗ ಗೊನೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಾವು ಹಣ್ಣಾಗಬೇಕೆ? ಕ್ಯಾಲ್ಶಿಯಂ ಕಾರ್ಬೈಡ್‌ ಇದೆಯಲ್ಲ. ಹೀಗೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಿ, ಕಾಯಿಗಳನ್ನು ಮಾಗಿಸಿ ಹಣ್ಣಾಗಿಸಲಾಗುತ್ತದೆ. ಹಿಂದೆಯೂ ಇಂಥ ಕ್ರಮಗಳು ಬಳಕೆಯಲ್ಲಿದ್ದರೂ, ಅವುಗಳನ್ನು ರಾಸಾಯನಿಕಗಳನ್ನು ಬಳಸುತ್ತಿರಲಿಲ್ಲ. ಬದಲಿಗೆ ಹುಲ್ಲಿನಲ್ಲಿ ಹುದುಗಿಸುವುದು, ಪೆಟ್ಟಿಗೆಯನ್ನು ಉಬ್ಬೆ ಹಾಕುವಂಥ ಕ್ರಮಗಳು ಚಾಲ್ತಿಯಲ್ಲಿದ್ದವು.

ಆರೋಗ್ಯಕ್ಕೇನು ತೊಂದರೆ?

ಆಹಾರದ ಕಲಬೆರಕೆಯಿಂದ ಹೊಟ್ಟೆಯ ಆರೋಗ್ಯ ಬುಡಮೇಲಾಗಬಹುದು. ವಾಂತಿ, ಅತಿಸಾರ ಗಂಟಾಗಬಹುದು. ಹಣ್ಣುಗಳನ್ನು ಮಾಗಿಸಲು ಬಳಸುವ ರಾಸಾಯನಿಕಗಳು ಕ್ಯಾನ್ಸರ್‌ಕಾರಕ ಎಂಬ ಆರೋಪವಂತೂ ಇದ್ದೇಇದೆ. ಬೇಗ ಬೆಳೆಯಲೆಂದು ಕೃತಕ ಹಾರ್ಮೋನುಗಳನ್ನು ನೀಡುವುದರಿಂದ, ಅವು ಗರ್ಭಕೋಶದ ಕ್ಯಾನ್ಸರ್‌ಗೆ ಎಷ್ಟರಮಟ್ಟಿಗೆ ಕಾರಣವಾಗುತ್ತವೆ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಪೌಷ್ಟಿಕಾಂಶಗಳ ಕೊರತೆ

ಮೂಲ ಆಹಾರಕ್ಕೆ ಕಳಪೆ ವಸ್ತುಗಳನ್ನು ಸೇರಿಸುವುದರಿಂದ ಪೌಷ್ಟಿಕಾಂಶಗಳ ಕೊರತೆ ಎದುರಾಗುತ್ತದೆ. ಶುದ್ಧ ಅಡುಗೆ ಎಣ್ಣೆಗೆ ಕಲುಷಿತ ಎಣ್ಣೆಗಳನ್ನು ಸೇರಿಸುವುದರಿಂದ ಅಗತ್ಯ ಸತ್ವಗಳ ಕೊರತೆ ಕಾಡುವುದು ಸಾಮಾನ್ಯ. ಮಾತ್ರವಲ್ಲ, ಕೆಟ್ಟ ಕೊಬ್ಬಿನ ಅಂಶವೂ ದೇಹದಲ್ಲಿ ಹೆಚ್ಚಾಗಿ, ಜೀವನಶೈಲಿಯ ರೋಗಗಳೆಲ್ಲ ಬೆನ್ನು ಬೀಳುತ್ತವೆ.

ಅಲರ್ಜಿಗಳು

ಪ್ಯಾಕೇಜಿಂಗ್‌ ಮೇಲೆ ಆಯಾ ವಸ್ತುಗಳಲ್ಲಿ ಏನೇನನ್ನು ಸೇರಿಸಲಾಗಿದೆ ಎಂಬುದನ್ನು ನಮೂದಿಸುವುದು ಕಡ್ಡಾಯ. ಆದರೆ ಕಲಬೆರಕೆ ವಸ್ತುಗಳಲ್ಲಿಇಂಥ ಮಾಹಿತಿಗಳು ಇರುವುದಿಲ್ಲ, ಇದ್ದರೂ ಅದು ಸುಳ್ಳಾಗಿರುತ್ತದೆ. ಇದರಿಂದ ಅಲರ್ಜಿಗಳು ಕಾಣಬಹುದು. ಮುಖ, ಕಣ್ಣು ಅಥವಾ ತುಟಿಗಳು ಊದಿಕೊಳ್ಳಬಹುದು. ತುರಿಕೆ, ಮೈಮೇಲೆಲ್ಲ ಗುಳ್ಳೆಗಳು ಕಾಣಬಹುದು, ಉಸಿರಾಟದ ತೊಂದರೆಗಳು ಬರಬಹುದು.

Continue Reading

Latest

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಕಡಿಮೆ ಚಟುವಟಿಕೆಯುಳ್ಳ ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Continue Reading
Advertisement
DK Shivakumar hits back at HD Kumaraswamy
ರಾಜಕೀಯ5 mins ago

HD Kumaraswamy: ಎಚ್‌ಡಿಕೆ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು ನುಂಗಿಕೊಳ್ಳಲಿ: ಡಿಕೆ ಶಿವಕುಮಾರ್ ತಿರುಗೇಟು

theft case
ಬೆಂಗಳೂರು12 mins ago

Theft Case : ಪಕ್ಕದ ಮನೆಗೆ ಕನ್ನ ಹಾಕಿದ ಚೋರ್‌ ದಂಪತಿ; ಕೆಲಸ ಕೊಟ್ಟ ಮಾಲೀಕನನ್ನೇ ದೋಚಿದ

America
ವಿದೇಶ12 mins ago

America: ಶ್ವೇತಭವನದಲ್ಲಿ ಮೊಳಗಿದ ಸಾರೆ ಜಹಾನ್‌ ಸೇ ಅಚ್ಚಾ..ವಿಡಿಯೋ ನೋಡಿ

KL Rahul
ಕ್ರೀಡೆ30 mins ago

KL Rahul: ರಾಹುಲ್ ಆರ್​ಸಿಬಿಗೆ ಬರಲ್ಲ; ಔತಣ ಕೂಟಕ್ಕೆ ಕರೆದು ತಬ್ಬಿಕೊಂಡ ಸಂಜೀವ್ ಗೋಯೆಂಕಾ

Actor Dhanush
ಸಿನಿಮಾ33 mins ago

Actor Dhanush: ಧನುಷ್-ಐಶ್ವರ್ಯಾ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ ಎಂದ ಖ್ಯಾತ ಗಾಯಕಿ

pm narendra modi nomination 2
ಪ್ರಮುಖ ಸುದ್ದಿ37 mins ago

PM Narendra Modi: ನಾಮಪತ್ರ ಸಲ್ಲಿಕೆ ವೇಳೆ ಪಿಎಂ ಮೋದಿ ಪಕ್ಕದಲ್ಲಿ ಕುಳಿತಿದ್ದ ಸಾಧು ಯಾರು?

HD Revanna released from jail Revanna Go straight to HD Deve Gowda house
ರಾಜಕೀಯ39 mins ago

HD Revanna Released: ತಬ್ಬಿಕೊಂಡ ಎಚ್‌ಡಿಕೆ; ಕುಟುಂಬಸ್ಥರ ಕಂಡು ಕಣ್ಣೀರಿಟ್ಟ ರೇವಣ್ಣ, ಇಷ್ಟಾದರೂ ಬಾರದ ಭವಾನಿ!

Patanjali case
ದೇಶ54 mins ago

Patanjali Case: ಪತಂಜಲಿ ಕೇಸ್‌- ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌; IMA ಅಧ್ಯಕ್ಷನಿಗೆ ಛೀಮಾರಿ

T20 World Cup 2024
ಕ್ರೀಡೆ1 hour ago

T20 World Cup 2024: 20 ತಂಡಗಳ ಪೈಕಿ 19 ತಂಡ ಪ್ರಕಟ; ಪಾಕಿಸ್ತಾನ ಮಾತ್ರ ಬಾಕಿ

Job News
ಉದ್ಯೋಗ2 hours ago

Job News: ಅಟೆನ್ಷನ್‌ ಪ್ಲೀಸ್‌; ಸರ್ಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದು, ನಾಳೆ ಕೊನೆಯ ದಿನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ3 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು4 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ11 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ21 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ22 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ22 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ22 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ23 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಟ್ರೆಂಡಿಂಗ್‌