Bollywood Gender Change : ಅಮಿತಾಭ್‌, ಶಾರುಖ್‌, ಸಲ್ಮಾನ್‌ ಹೆಣ್ಣಾಗಿದ್ದರೆ ಹೇಗೆ ಕಾಣುತ್ತಿದ್ದರು? ಇಲ್ಲಿದೆ ಎಐ ಫೋಟೊ! - Vistara News

ಬಾಲಿವುಡ್

Bollywood Gender Change : ಅಮಿತಾಭ್‌, ಶಾರುಖ್‌, ಸಲ್ಮಾನ್‌ ಹೆಣ್ಣಾಗಿದ್ದರೆ ಹೇಗೆ ಕಾಣುತ್ತಿದ್ದರು? ಇಲ್ಲಿದೆ ಎಐ ಫೋಟೊ!

ಬಾಲಿವುಡ್‌ ನಾಯಕ ನಟರು ಹೆಣ್ಣಾಗಿ ಹುಟ್ಟಿದ್ದರೆ (Bollywood Gender Change) ಹೇಗೆ ಕಾಣುತ್ತಿದ್ದರು ಎಂದು ಶಾಹಿದ್‌ ಅವರು ಎಐ ಫೋಟೋಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹೆಚ್ಚೇ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಹಲವು ಗಣ್ಯರು ಈಗ ಇದ್ದು ಸೆಲ್ಫೀ ತೆಗೆದುಕೊಂಡಿದ್ದರೆ ಹೇಗಿರುತ್ತಿತ್ತು ಎನ್ನುವ ಸೀರಿಸ್‌ ಎಐ ಫೋಟೋಗಳನ್ನು ನೀವು ನೋಡಿರಬಹುದು. ಅದೇ ರೀತಿಯಲ್ಲಿ ಇದೀಗ ನಮ್ಮ ಬಾಲಿವುಡ್‌ನ ನಟರು ಗಂಡಾಗುವ ಬದಲು ಹೆಣ್ಣಾಗಿದ್ದರೆ ಹೇಗಿರುತ್ತಿತ್ತು (Bollywood Gender Change) ಎನ್ನುವ ಫೋಟೋಗಳು ಕೂಡ ಬಂದಿವೆ. ಅವು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಎಐ ಮಾಸ್ಟರ್‌ ಎಂದು ಕರೆಸಿಕೊಳ್ಳುತ್ತಿರುವ ಶಾಹಿದ್‌ ಅವರು ಈ ಫೋಟೋಗಳನ್ನು ತಯಾರಿಸಿದ್ದಾರೆ. ಅದರಲ್ಲಿ ನಟರಾದ ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌, ಆಮಿರ್‌ ಖಾನ್‌, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ಶಾಹಿದ್‌ ಕಪೂರ್‌, ವರುಣ್‌ ಧವನ್‌, ಟೈಗರ್‌ ಶರಾಫ್.‌ ರಾಜ್‌ಪಾಲ್‌ ಯಾದವ್‌ ಮತ್ತು ಪಂಕಜ್‌ ತ್ರಿಪಾಠಿ ಅವರು ಹೆಣ್ಣಾಗಿದ್ದಾರೆ ಹೇಗೆ ಕಾಣುತ್ತಿದ್ದರು ಎಂದು ತೋರಿಸಲಾಗಿದೆ.

ಇದನ್ನೂ ಓದಿ: Chai GPT: ಚಾಟ್‌ಜಿಪಿಟಿ ಕೇಳಿದ್ದೀರಿ, ಚಾಯ್‌ ಜಿಪಿಟಿ ಕೇಳಿದ್ದೀರಾ? ಹೌದು, ಇಲ್ಲಿ ಎಐ ಸಿಗಲ್ಲ, ಚಾಯ್‌ ಸಿಗತ್ತೆ!
ಕೇವಲ ಫೋಟೋ ಹಾಕುವುದಲ್ಲದೆ ಅವರಿಗೆ ಹೆಣ್ಣಿನ ಹೆಸರನ್ನೂ ಇಟ್ಟಿದ್ದಾರೆ ಶಾಹಿದ್‌. ಉದಾಹರಣೆಗೆ ಅಮಿತಾಭ್‌ ಬಚ್ಚನ್‌ ಅವರಿಗೆ ಅಮಿತಾ ಭಚ್ಚನ್‌, ವರುಣ್‌ ಧವನ್‌ಗೆ ವರ್ಷ ಧವನ್‌, ಅಕ್ಷಯ್‌ ಕುಮಾರ್‌ಗೆ ಅಕ್ಷಯ ಕುಮಾರಿ ಎನ್ನುವಂತಹ ಹೆಸರನ್ನು ಕೊಡಲಾಗಿದೆ.

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಈಗಾಗಲೇ ಸಾವಿರಾರು ಜನರಿಗೆ ರೀಚ್‌ ಆಗಿದೆ. 1800ಕ್ಕೂ ಅಧಿಕ ಮಂದಿ ಪೋಸ್ಟ್‌ಗೆ ಲೈಕ್‌ ಕೊಟ್ಟಿದ್ದಾರೆ. ಹಾಗೆಯೇ ನೂರಾರು ಮಂದಿ ಈ ಪೋಸ್ಟ್‌ ಅನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. “ಅಮಿತಾಭ್‌ ಅವರು ರೇಖಾ ರೀತಿಯಲ್ಲಿ ಕಾಣುತ್ತಿದ್ದಾರೆ”, “ಶಾರುಖ್‌ ಅವರು ಅವರ ಪತ್ನಿಯ ರೀತಿಯಲ್ಲಿ ಕಾಣುತ್ತಿದ್ದಾರೆ”, “ಸಲ್ಮಾನ್‌ ಅವರು ಚಿತ್ರಾಂಗದ ಸಿಂಗ್‌ ರೀತಿ ಕಾಣಿಸುತ್ತಿದ್ದಾರೆ”, “ಈಗ ನನಗೆ ಟೈಗರ್ ಶರಾಫ್‌ ಮತ್ತು ವರ್ಷ ಧವನ್‌ ಮೇಲೆ ಕ್ರಷ್‌ ಆಗಿದೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಬಂದಿವೆ.

ಇದನ್ನೂ ಓದಿ: Actress Jyothika : 25 ವರ್ಷಗಳ ನಂತರ ಬಾಲಿವುಡ್‌ಗೆ ಜ್ಯೋತಿಕಾ ವಾಪಸ್‌!
ಈ ಫೋಟೋಗಳನ್ನು ಮಾಡಿರುವ ಶಾಹಿದ್‌ ಈ ಹಿಂದೆ ಮತ್ತೊಂದಿಷ್ಟು ವಿಶೇಷ ಫೋಟೋಗಳನ್ನು ಮಾಡಿದ್ದರು. ರಣಬೀರ್‌ ಕಪೂರ್‌, ಶಾರುಖ್‌ ಖಾನ್, ಹೃತಿಕ್‌ ರೋಷನ್‌, ಅಲ್ಲು ಅರ್ಜುನ್‌, ಸಲ್ಮಾನ್‌ ಖಾನ್‌, ಆಮಿರ್‌ ಖಾನ್‌, ಮಹೇಶ್‌ ಬಾಬು, ಪ್ರಭಾಸ್‌, ಅಕ್ಷಯ್‌ ಕುಮಾರ್‌ ಮತ್ತು ಶಾಹಿದ್‌ ಕಪೂರ್‌ ಅವರು ವಯಸ್ಸಾದ ನಂತರ ಹೇಗೆ ಕಾಣಿಸುತ್ತಾರೆ ಎಂದು ಎಐ ಫೋಟೋ ಮೂಲಕ ತೋರಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Nysa Devgan: ಕಾಜೋಲ್‌ ಮಗಳಿಗೆ ಹುಟ್ಟು ಹಬ್ಬದ ಸಂಭ್ರಮ! ನೈಸಾಗೆ ವಯಸ್ಸೆಷ್ಟು?

Nysa Devgan: ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೆ ಮಗ ಕೂಡ ಇದ್ದಾನೆ. ಇದೀಗ ನೈಸಾ ದೇವಗನ್‌ ಫೋಟೊ ಕಂಡು ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ನೈಸಾ ಅವರು ಸಾಕಷ್ಟು ಬಾರಿ ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದರು. ಇತ್ತೀಚೆಗೆ ತಂದೆ ಅಜಯ್ ಜತೆ ಮುಂಬೈ ಏರ್‌ಪೋರ್ಟ್‌ನಲ್ಲಿ ನೈಸಾ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ತಾಯಿ ಜೊತೆ ಸಿದ್ಧಿವಿನಾಯಕನ ದರ್ಶನ ಮಾಡಿದ್ದರು. ಸದ್ಯ ಶಿಕ್ಷಣ ಪಡೆಯುತ್ತಿರುವ ನೈಸಾ ಇನ್ನು ಕೆಲವೇ ವರ್ಷಗಳಲ್ಲಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

VISTARANEWS.COM


on

Nysa Devgan Kajol shares 3 new pics
Koo

ಬೆಂಗಳೂರು: ಇಂದು ನಟಿ ಕಾಜೋಲ್ (Kajol) ಮಗಳು ನೈಸಾ ದೇವಗನ್‌ಗೆ (Nysa Devgan) 21ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಮಗಳ ಕ್ಯೂಟ್‌ ಫೋಟೊಗಳನ್ನು ಹಂಚಿಕೊಂಡು ವಿಶ್‌ ಮಾಡಿದ್ದಾರೆ ಕಾಜೋಲ್‌. ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೆ ಮಗ ಕೂಡ ಇದ್ದಾನೆ. ಇದೀಗ ನೈಸಾ ದೇವಗನ್‌ ಫೋಟೊ ಕಂಡು ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

ಕಾಜೋಲ್ ಪೋಸ್ಟ್‌!

ʻʻ21ನೇ ವರ್ಷದ ಶುಭಾಶಯಗಳು ನನ್ನ ಡಾರ್ಲಿಂಗ್‌. ಯಾವಾಗಲೂ ನಗುತ್ತಲೇ ಇರುʼʼಎಂದು ಮಗಳಿಗೆ ವಿಶ್‌ ಮಾಡಿ, ಮಹಳ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ನೈಸಾ ತನ್ನ ಮುದ್ದಿನ ನಾಯಿಯೊಂದಿಗೆ ನಗುತ್ತಿರುವುದು ಕಂಡುಬಂದಿದೆ. ಎರಡನೇ ಫೋಟೊದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್‌ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹ ಪೂರ್ವ ಸಮಾರಂಭದಲ್ಲಿ ಲೆಹೆಂಗಾದಲ್ಲಿ ನೈಸಾ ಕ್ಯೂಟ್‌ ಆಗಿ ಕಂಡಿದ್ದಾರೆ. ಮೂರನೇ ಫೋಟೊದಲ್ಲಿ ನೈಸಾ ಮುದ್ದಾಗಿ ಕಂಡಿದ್ದಾರೆ.

ಇದನ್ನೂ ಓದಿ: Subramanian Swamy: ಕತಾರ್‌ನಿಂದ ಮಾಜಿ ಯೋಧರ ಬಿಡುಗಡೆಗೆ ಮೋದಿಯಲ್ಲ, ‘ಶಾರುಖ್ ಖಾನ್’ ಕಾರಣ!

ನೈಸಾ ಹುಟ್ಟುಹಬ್ಬದ ಒಂದು ದಿನದ ಮೊದಲು, ಕಾಜೋಲ್ ತನ್ನ ಮಗಳಿಗಾಗಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದರು. ಕಾಜೋಲ್ ಅವರ ತೊಡೆಯ ಮೇಲೆ ಕುಳಿತಿರುವ ನೈಸಾ ಅವರ ಥ್ರೋಬ್ಯಾಕ್ ಚಿತ್ರದ ಜತೆಗೆ ಕಾಜೋಲ್‌ ಹೀಗೆ ಬರೆದಿದ್ದರು. “ನಾಳೆ ನೈಸಾಗೆ 21ನೇ ಹುಟ್ಟುಹಬ್ಬ. ನನ್ನ ಆಸೆಯನ್ನು ನನಸಾಗಿಸಿದವಳು ಅವಳು. ಪ್ರತಿದಿನ ಅವಳು ನನ್ನನ್ನು ಸಂತೋಷಪಡಿಸುತ್ತಾಳೆ. ಅವಳ ಪ್ರೀತಿ ಮತ್ತು ಅವಳ ಬೆಂಬಲ ನನ್ನ ಮೇಲೆ ಇದೆ. ನನ್ನನ್ನು ನಗುವಂತೆ ಮಾಡುತ್ತಾಳೆ. ಅವಳು ನನ್ನನ್ನು ‘ಅಮ್ಮ’ ಎಂದು ಕರೆದಾಗ ಮೊದಲ ಬಾರಿಗೆ ಮತ್ತು ಪ್ರತಿ ಬಾರಿ ನನ್ನ ಹೃದಯ ಕರಗುತ್ತದೆ. ಕೆಲವೊಮ್ಮೆ ಅವಳನ್ನು ಮತ್ತೆ ನನ್ನ ಹೊಟ್ಟೆಯಲ್ಲಿ ಒಂದು ದಿನ ಇಟ್ಟುಕೊಳ್ಳಬೇಕು ಎಂದು ಬಯಸಿದ್ದೂ ಇದೆ. ಮಕ್ಕಳಿಂದ ನೀವು ಏನನ್ನು ಅನುಭವಿಸುತ್ತೀರಿ ಎಂಬುದನ್ನು ವಿವರಿಸಲು ಪದಗಳು ಸಾಲದು. ಅವಳೆಂದರೆ ನನಗೆ ಹೆಮ್ಮೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

ಇತ್ತೀಚೆಗೆ ನೈಸಾ ಅವರು ಸಾಕಷ್ಟು ಬಾರಿ ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದರು. ಇತ್ತೀಚೆಗೆ ತಂದೆ ಅಜಯ್ ಜತೆ ಮುಂಬೈ ಏರ್‌ಪೋರ್ಟ್‌ನಲ್ಲಿ ನೈಸಾ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ತಾಯಿ ಜೊತೆ ಸಿದ್ಧಿವಿನಾಯಕನ ದರ್ಶನ ಮಾಡಿದ್ದರು. ಸದ್ಯ ಶಿಕ್ಷಣ ಪಡೆಯುತ್ತಿರುವ ನೈಸಾ ಇನ್ನು ಕೆಲವೇ ವರ್ಷಗಳಲ್ಲಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

Continue Reading

ಸಿನಿಮಾ

Masaba Gupta: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೀನಾ ಗುಪ್ತಾ ಮಗಳು ಮಸಾಬಾ!

Masaba Gupta: ಮುಂಬಯಿಯ ಹೌಸ್‌ ಆಫ್‌ ಮಸಾಬಾ ಬ್ರ್ಯಾಂಡ್‌ ಖ್ಯಾತ ಡಿಸೈನರ್‌ ಮಸಾಬಾ ಗುಪ್ತಾ ಬಾಲಿವುಡ್‌ ನಟ-ನಟಿಯರಿಗೆ ಡ್ರೆಸ್‌ಗಳನ್ನು ಡಿಸೈನ್‌ ಮಾಡುವುದು ಮಾತ್ರವಲ್ಲ, ಕೋಟ್ಯಧಿಪತಿಗಳ ವೆಡ್ಡಿಂಗ್‌ ಕಾಸ್ಟ್ಯೂಮ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ಸಿದ್ಧಪಡಿಸುವಲ್ಲಿ ನಿಸ್ಸಿಮರು. ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳಾದ ಮಸಾಬಾ, ಈಗಾಗಲೇ ಖಾಸಗಿ ವಾಹಿನಿಯಲ್ಲಿ ಅವರ ಲೈಫ್‌ಸ್ಟೈಲ್‌ ಕುರಿತಂತೆ ಪ್ರಸಾರವಾದ ವೆಬ್‌ಸಿರೀಸ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

VISTARANEWS.COM


on

Masaba Gupta, Satyadeep Misra expecting 1st child
Koo

ಬೆಂಗಳೂರು: ಸೆಲೆಬ್ರಿಟಿ ಫ್ಯಾಷನ್ ಡಿಸೈನರ್, ನಟಿ ನೀನಾ ಗುಪ್ತಾ ಅವರ ಮಗಳು ಮಸಾಬಾ ಗುಪ್ತಾ (Masaba Gupta) ಇದೀಗ ಪ್ರೆಗ್ನೆಂಟ್‌. ಏಪ್ರಿಲ್ 18ರಂದು ಮಸಾಬಾ ಗುಪ್ತಾ ಅವರು ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಅನನ್ಯ ಪಾಂಡೆ, ಶಿಲ್ಪಾ ಶೆಟ್ಟಿ ಮುಂತಾದ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು (Masaba Gupta is pregnant) ದಂಪತಿಗೆ ಶುಭಹಾರೈಸಿದ್ದಾರೆ. ಮಸಾಬಾ ಅವರ ತಾಯಿ ನೀನಾ ಗುಪ್ತಾ ಅವರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಮಸಾಬಾ ಗುಪ್ತಾ ಪತಿ ಸತ್ಯದೀಪ್ ಮಿಶ್ರಾ (Satyadeep Misra) ಅವರೊಂದಿಗೆ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಪ್ರೀತಿ, ಆಶೀರ್ವಾದ ಮತ್ತು ಬಾಳೆಹಣ್ಣಿನ ಚಿಪ್ಸ್ ಅನ್ನು ಕಳುಹಿಸಿʼ ಎಂಬ ಪೋಸ್ಟ್‌ನೊಂದಿಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ ಮಸಾಬಾ. ಮಸಾಬಾ ಅವರ ತಾಯಿ, ನಟಿ ನೀನಾ ಗುಪ್ತಾ `ನಮ್ಮ ಮಕ್ಕಳ ಮಗು ಬರಲಿದೆ. ಇದಕ್ಕಿಂತ ಸಂತೋಷ ಮತ್ತೇನು?’ ಎಂದು ಮಗಳು ಮತ್ತು ಅಳಿಯನ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್

ಮಸಾಬ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಅವರು 2023ರ ಜನವರಿ 27 ರಂದು ವಿವಾಹವಾದರು. ಮಸಾಬಾ ಅವರದ್ದು ಇದು ಎರಡನೇ ಮದುವೆ. ಪತಿ ಸತ್ಯದೀಪ್‌ ಮಿಶ್ರಾಗೂ ಕೂಡ ಇದು ಎರಡನೇ ಮದುವೆ.ಸೆಲೆಬ್ರಿಟಿ ಡಿಸೈನರ್‌ ಮಸಾಬಾ ಗುಪ್ತಾ ತಮ್ಮ ಲೆಹೆಂಗಾವನ್ನು ಅತ್ಯಂತ ಪ್ರೀತಿಯಿಂದಲೇ ಸಿದ್ಧಪಡಿಸಿದ್ದರು.

ಮಸಾಬಾ ಗುಪ್ತಾ ಯಾರು?

ಮುಂಬಯಿಯ ಹೌಸ್‌ ಆಫ್‌ ಮಸಾಬಾ ಬ್ರ್ಯಾಂಡ್‌ ಖ್ಯಾತ ಡಿಸೈನರ್‌ ಮಸಾಬಾ ಗುಪ್ತಾ ಬಾಲಿವುಡ್‌ ನಟ-ನಟಿಯರಿಗೆ ಡ್ರೆಸ್‌ಗಳನ್ನು ಡಿಸೈನ್‌ ಮಾಡುವುದು ಮಾತ್ರವಲ್ಲ, ಕೋಟ್ಯಧಿಪತಿಗಳ ವೆಡ್ಡಿಂಗ್‌ ಕಾಸ್ಟ್ಯೂಮ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ಸಿದ್ಧಪಡಿಸುವಲ್ಲಿ ನಿಸ್ಸಿಮರು. ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳಾದ ಮಸಾಬಾ, ಈಗಾಗಲೇ ಖಾಸಗಿ ವಾಹಿನಿಯಲ್ಲಿ ಅವರ ಲೈಫ್‌ಸ್ಟೈಲ್‌ ಕುರಿತಂತೆ ಪ್ರಸಾರವಾದ ವೆಬ್‌ಸಿರೀಸ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಮೊದಲೊಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಮಸಾಬಾ ಅವರದ್ದು ಎರಡನೇ ಮದುವೆ. ಪತಿ ಸತ್ಯದೀಪ್‌ ಮಿಶ್ರಾಗೂ ಕೂಡ ಇದು ಎರಡನೇ ಮದುವೆ. ಈ ಮೊದಲು ಅವರು ನಟಿ ಅದಿತಿ ಹೈದರ್‌ ಅವರನ್ನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದರು.

ಸಿನಿಮಾ ಸೆಟ್‌ನಲ್ಲಿ ಮೊದಲ ಭೇಟಿ

ಸತ್ಯದೀಪ್ ಮಿಶ್ರಾ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ ನಟಿʻʻ ನಾನು ಅವರನ್ನು ಮಸಾಬಾ ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾದೆ. ಅವರು ಸೀಸನ್ 1ರಲ್ಲಿ ನನ್ನ ಮಾಜಿ ಗಂಡನ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಮ್ಮ ಕಂಫರ್ಟ್‌ ಜೋನ್‌ನಲ್ಲಿ ಇಬ್ಬರಲ್ಲಿಯೂ ಆತ್ಮೀಯತೆ ಹೆಚ್ಚಾಯ್ತು. ನಾವಿಬ್ಬರೂ ಸರಳವಾದ ವಿಷಯಗಳನ್ನು ಇಷ್ಟಪಡುತ್ತೇವೆʼʼಎಂದಿದ್ದರು.

Continue Reading

ಸಿನಿಮಾ

Flop Film: ಫ್ಲಾಪ್ ಎಂದು ಕರೆಸಿಕೊಂಡ ಈ ಚಿತ್ರದ 25 ಕೋಟಿ ಟಿಕೆಟ್ ಮಾರಾಟವಾಗಿದ್ದು ಹೇಗೆ; ಇಲ್ಲಿದೆ ರೋಚಕ ಸಿನಿ ಇತಿಹಾಸ

Flop Film ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟವಾಗಿದೆ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಚಲನಚಿತ್ರವೊಂದು ಈ ದಾಖಲೆಯನ್ನು ಬ್ರೇಕ್ ಮಾಡಿ ಎಂದಿಗೂ ಮುರಿಯಲಾಗದ ದಾಖಲೆಯನ್ನು ಮಾಡಿ ಹೋಗಿದೆ..

VISTARANEWS.COM


on

Flop Film
Koo

ಬೆಂಗಳೂರು: ಕಳೆದ ವರ್ಷ ‘ಜವಾನ್’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಕೊನೆಯಲ್ಲಿ ಅದು 4 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು ಮತ್ತು ಇದನ್ನು ದೊಡ್ಡ ದಾಖಲೆ ಎಂಬಂತೆ ಎತ್ತಿ ತೋರಿಸಲಾಗಿತ್ತು. ಆದರೆ ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮತ್ತು ಟಿಕೆಟ್​ಗಳು ಮಾರಾಟವಾದ ಭಾರತೀಯ ಚಲನಚಿತ್ರವೊಂದು ಸಾರ್ವಕಾಲಿಕ ದಾಖಲೆ ಮಾಡಿದೆ. ಅಚ್ಚರಿ ಏನೆಂದರೆ ಈ ಸಿನಿಮಾ ಆರಂಭದಲ್ಲಿ ಇದು ಸೋತ ((Flop Film) ) ಸಿನಿಮಾ ಎಂಬ ವಿಮರ್ಶೆಯನ್ನು ಪಡೆದುಕೊಂಡಿತ್ತು. ಆದರೆ, ಬಳಿಕ ಆದದ್ದೇ ಬೇರೆ.

ಆ ಚಿತ್ರ ಯಾವುದೆಂದರೆ ರಮೇಶ್ ಸಿಪ್ಪಿ ಅವರ, ನಟ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ ಜನಪ್ರಿಯ ‘ಶೋಲೆ’ ಚಿತ್ರ. ಇದನ್ನು ಇತರ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಜನರು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರಂತೆ. ಗಲ್ಲಾ ಪೆಟ್ಟಿಗೆ ಸಂಗ್ರಾಹಕರ ಪ್ರಕಾರ, ಶೋಲೆ ಚಿತ್ರ 1975-80ರ ಆರಂಭದಲ್ಲಿ ಭಾರತದಲ್ಲಿ ಮಾತ್ರ 18 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿತು. ಹಾಗೇ ಈ ಚಿತ್ರ 60 ಚಿತ್ರಮಂದಿರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತ್ತು ಮತ್ತು ಬೆಳ್ಳಿ ಹಬ್ಬವನ್ನು ಆಚರಿಸಿತ್ತು. ಅಲ್ಲದೇ ಈ ಚಿತ್ರ ಬಾಂಬೆಯ ಮಿನರ್ವ ಥಿಯೇಟರ್ ನಲ್ಲಿ ಐದು ವರ್ಷಗಳ ಕಾಲ ಓಡಿದ್ದು, ಅಂದಿನ ದಾಖಲೆ. ಒಟ್ಟಾರೆ ಈ ಚಿತ್ರ ಅಂದಾಜು 2 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಹಾಗೇ ಈ ಚಿತ್ರ ಸೋವಿಯತ್ ರಷ್ಯಾದಲ್ಲಿ ಬಿಡುಗಡೆಯಾಗಿ ಅಲ್ಲಿ 48 ಮಿಲಿಯನ್ (4.8 ಕೋಟಿ) ಗಳಿಕೆ ಮಾಡಿದೆ. ಒಟ್ಟಾರೆ ಸುಮಾರು 25 ಕೋಟಿಯಷ್ಟು ಟಿಕೆಟ್​ ಸೇಲಾಗಿದೆ.

ಕೊನೆಯಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಹಾಗೂ ಭಾರತದಲ್ಲಿ ಅತ್ಯಂತ ಯಶಸ್ಸು ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 30ಕೋಟಿ ಗಳಿಸಿತ್ತು. ಆ ಮೂಲಕ ಅದು ಮುಘಲ್-ಎ-ಆಜಮ್ ಮತ್ತು ಮದರ್ ಇಂಡಿಯಾದ ದಾಖಲೆಯನ್ನು ಮುರಿದಿದೆ.

ಆದರೆ ಈ ಚಿತ್ರ ಮೊದಲು ಹಿಟ್ ಆಗಲಿಲ್ಲ, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಬಿಡುಗಡೆಯಾದ ಈ ಚಿತ್ರ ನಂತರ ಕೆಟ್ಟ ವಿಮರ್ಶೆಗಳು ಮತ್ತು ಟೀಕೆಗಳಿಗೆ ಒಳಗಾಗಿತ್ತು. ಹಾಗಾಗಿ ಮೊದಲ ಎರಡು ವಾರಗಳಲ್ಲಿ ಈ ಚಿತ್ರತಂಡದವರೇ ಅದನ್ನು ಫ್ಲಾಪ್ ಎಂದು ಲೇಬಲ್ ನೀಡಿದ್ದಾರೆ. ಹಾಗಾಗಿ ತಯಾರಕರು ಅದರ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಲು ಹೇಳಿದ್ದರು. ಆದರೆ ಕೊನೆಯಲ್ಲಿ ಹಿಟ್ ಚಿತ್ರವಾಗಿ ಹೊರಮೊಮ್ಮಿತ್ತು., ದಾಖಲೆಯನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಕಳೆದ ವರ್ಷಗಳಲ್ಲಿ ಹಲವಾರು ಭಾರತೀಯ ಚಲನಚಿತ್ರಗಳು ವಿಶ್ವದಾದ್ಯಂತ 1000 ಕೋಟಿ ಗಳಿಕೆಯನ್ನು ಪಡೆದುಕೊಂಡಿವೆ. ಬಾಹುಬಲಿ ಚಿತ್ರ ಜಾಗತಿಕ ಮಟ್ಟದಲ್ಲಿ 15-20 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು. ಆರ್ ಆರ್ ಆರ್ ಮತ್ತು ಕೆಜಿಎಫ್ 2 10 ಕೋಟಿ ಗಿಂತ ಕಡಿಮೆ ಪ್ರೇಕ್ಷಕರನ್ನು ಗಳಿಸಿದೆ. ದಂಗಲ್ ಚಿತ್ರ ಕೂಡ 10 ಕೋಟಿ ಪ್ರೇಕ್ಷಕರನ್ನು ಗಳಿಸಿದೆ. ಆದರೂ ಅವುಗಳು ಶೋಲೆಯ ಮಟ್ಟಕ್ಕೆ ಬಂದು ನಿಲ್ಲಲಿಲ್ಲ. ಎನ್ನಲಾಗಿದೆ.

Continue Reading

ಬಾಲಿವುಡ್

Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

Navya Naveli Nanda: ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

VISTARANEWS.COM


on

Aaradhya Bachchan is wiser more intelligent than I
Koo

ಬೆಂಗಳೂರು: ಪೋಡ್‌ಕಾಸ್ಟ್‌ ʻವಾಟ್ ದಿ ಹೆಲ್ ನವ್ಯಾʼದಲ್ಲಿ ಜಯಾ ಬಚ್ಚನ್‌ ಅವರು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೀಗ ಶ್ವೇತಾ ಬಚ್ಚನ್ ಮಗಳು ನವ್ಯಾ ಅವರು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮಗಳ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತನ್ನ ಸೋದರಸಂಬಂಧಿ ಆರಾಧ್ಯ(Aaradhya Bachchan) ತುಂಬ ಬುದ್ಧಿವಂತೆ ಎಂದು ಹೇಳಿಕೊಂಡಿದ್ದಾರೆ.

ಆರಾಧ್ಯಗೆ ಏನು ಸಲಹೆ ನೀಡುತ್ತೀರಿ ಎಂದು ನವ್ಯಾಗೆ ಪ್ರಶ್ನೆ ಎದುರಾದಾಗ ಹೀಗೆ ಹೇಳಿದರು ನವ್ಯಾ. “ಆರಾಧ್ಯ ನನಗಿಂತ ಹೆಚ್ಚು ಬುದ್ಧಿವಂತಳು. ಇಂದಿನ ಮಕ್ಕಳು ಬಹಳ ಮುಂದಿದ್ದಾರೆ. ಅವಳ ವಯಸ್ಸಿನಲ್ಲಿ ನಾನು ಅಷ್ಟು ಬುದ್ಧಿವಂತನಾಗಿರಲಿಲ್ಲ. ಜಗತ್ತನ್ನು ಹಲವು ವಿಧಗಳಲ್ಲಿ ಬದಲಾಯಿಸಲು ಬಯಸುವ ಯುವತಿಯರ ಪೀಳಿಗೆಯನ್ನು ನಾವು ಈಗ ಹೊಂದಿದ್ದೇವೆ. ಅದು ನಾನು ಅವಳಲ್ಲಿಯೂ ನೋಡುತ್ತಿರುವ ಖುಷಿಯ ಸಂಗತಿ. ಅವಳಿಗೆ ನಾನು ಸಲಹೆ ಅಥವಾ ಸ್ಫೂರ್ತಿ ನೀಡುವುದಕ್ಕಿಂತ ಹೆಚ್ಚಾಗಿ, ಅವಳಿಂದ ನಾನು ಬಹಳಷ್ಟು ತಿಳಿದುಕೊಳ್ಳುತ್ತಿರುವೆ ಎಂದು ನಾನು ಭಾವಿಸುತ್ತೇನೆʼʼಎಂದರು.

ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ನಟಿ ಜಯಾ ಬಚ್ಚನ್ ಈ ಮುಂಚೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದಿದ್ದರು.

Continue Reading
Advertisement
Surabhi Jain
ಪ್ರಮುಖ ಸುದ್ದಿ16 mins ago

Surabhi Jain : 30 ವರ್ಷಕ್ಕೆ ಮೃತಪಟ್ಟ ಫ್ಯಾಷನ್ ಐಕಾನ್​ ಸುರಭಿ ಜೈನ್

RCB vs KKR
ಕ್ರೀಡೆ49 mins ago

RCB vS KKR: ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ಅದೃಷ್ಟ ಹೇಗಿದೆ; ಎಷ್ಟು ಗೆಲುವು ಎಷ್ಟು ಸೋಲು?

Modi in Karnataka Here live video of Modi rally in Chikkaballapur
Lok Sabha Election 202453 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Modi in Karnataka today Cm Siddaramaiah asks 11 questions to PM Modi
Lok Sabha Election 202457 mins ago

Modi in Karnataka: ಇಂದು ಕರ್ನಾಟಕಕ್ಕೆ ಮೋದಿ; ಪ್ರಧಾನಿಗೆ 11 ಪ್ರಶ್ನೆ ಕೇಳಿದ ಸಿಎಂ ಸಿದ್ದರಾಮಯ್ಯ

Uttarakaanda Movie bande kaaka rangayana Raghu
ಸ್ಯಾಂಡಲ್ ವುಡ್1 hour ago

Uttarakaanda Movie: ‘ಬಂಡೆ ಕಾಕಾ’ ನಾಗಿ ‘ಉತ್ತರಕಾಂಡ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಂಗಾಯಣ ರಘು

India Economy
ಪ್ರಮುಖ ಸುದ್ದಿ1 hour ago

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

ರಾಜಕೀಯ1 hour ago

Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

Road Accident in karnataka
ಕೊಡಗು1 hour ago

Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್‌ ಸವಾರ ಸಾವು, ಬಾಲಕ ಗಂಭೀರ

Gut Health
ಲೈಫ್‌ಸ್ಟೈಲ್2 hours ago

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Viral news
ವೈರಲ್ ನ್ಯೂಸ್2 hours ago

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Here live video of Modi rally in Chikkaballapur
Lok Sabha Election 202453 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ3 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ4 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ24 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

ಟ್ರೆಂಡಿಂಗ್‌