Star Fashion | ಪ್ಯಾಂಟ್‌ ಸೂಟ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಗ್ಲಾಮರಸ್‌ ಲುಕ್‌, ಹೀಗಿದೆ ನೋಡಿ ಬೋಲ್ಡ್‌ ಲುಕ್‌ - Vistara News

ಬಾಲಿವುಡ್

Star Fashion | ಪ್ಯಾಂಟ್‌ ಸೂಟ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಗ್ಲಾಮರಸ್‌ ಲುಕ್‌, ಹೀಗಿದೆ ನೋಡಿ ಬೋಲ್ಡ್‌ ಲುಕ್‌

ಡೆನಿಮ್‌ ಪ್ಯಾಂಟ್‌ ಸೂಟ್‌ನಲ್ಲೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತೋರಿಸಿಕೊಟ್ಟಿದ್ದಾರೆ. ವಿಂಟರ್‌ ಫ್ಯಾಷನ್‌ ಲಿಸ್ಟ್‌ಗೆ ಸೇರಿರುವ ಈ ಔಟ್‌ಫಿಟ್‌ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

winter fashion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ ಬೆಂಗಳೂರು
ಡೆನಿಮ್‌ ಪ್ಯಾಂಟ್‌ ಸೂಟ್‌ನಲ್ಲೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ನಟಿ ಸೋನಾಕ್ಷಿ ಸಿನ್ಹಾ ತೋರಿಸಿಕೊಟ್ಟಿದ್ದಾರೆ. ಅವರು ಧರಿಸಿರುವ ಔಟ್‌ಫಿಟ್‌ ಇದೀಗ ನೆಟ್ಟಿಗರನ್ನು ಮಾತ್ರವಲ್ಲ, ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದೆ. ವಿಂಟರ್‌ ಫ್ಯಾಷನ್‌ನಲ್ಲಿ ಮೊದಲಿನಿಂದಲೇ ಟ್ರೆಂಡಿಯಾಗಿದ್ದ ಪ್ಯಾಂಟ್‌ ಸೂಟ್‌ಗಳು ಇದೀಗ ಡೆನಿಮ್‌ನಲ್ಲೂ ಬಿಡುಗಡೆಗೊಂಡಿವೆ. ಜತೆಗೆ ಕ್ರಾಪ್‌ ಜತೆ ಸೇರಿ ಗ್ಲಾಮರಸ್‌ ಟಚ್‌ ಪಡೆದಕೊಂಡಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಸೋನಾಕ್ಷಿ ಸಿನ್ಹಾ ಕೂಡ ಈ ಸೂಟ್‌ ಭಿನ್ನ-ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡಿರುವುದು ವಿಂಟರ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

ಪ್ಯಾಂಟ್‌ ಸೂಟ್‌ಗೂ ಗ್ಲಾಮರಸ್‌ ಟಚ್‌ ನೀಡಿದ ಸೋನಾಕ್ಷಿ

ನಟಿ ಸೋನಾಕ್ಷಿ, ಡೆನಿಮ್‌ ಪ್ಯಾಂಟ್‌ಸೂಟ್‌ಗೆ ಕಾರ್ಸೆಟ್‌ ಮಾದರಿಯ ವೈಟ್‌ ಕ್ರಾಪ್‌ ಟಾಪ್‌ ಧರಿಸಿದ್ದು, ಇದು ಇಡೀ ಪ್ಯಾಂಟ್‌ಸೂಟನ್ನು ಗ್ಲಾಮರಸ್‌ ಆಗಿಸಿದೆ. ಇನ್ನು ಬ್ಲೂ ಶೇಡ್‌ ವಿಂಟರ್‌ನ ಲೈವ್ಲಿ ಕಲರ್‌ ಆಗಿದ್ದು, ಜತೆಗೆ ಬಟನ್‌ಲೆಸ್‌ ಬ್ಲೇಜರ್‌ ಸೋನಾಕ್ಷಿಯವರನ್ನು ಹಾಟ್‌ ಆಗಿ ಬಿಂಬಿಸಿದೆ ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್‌ ರಾಘವ್‌. ಇನ್ನು ಪ್ಯಾಂಟ್‌ ಸೂಟ್‌ ಎಂದಾಕ್ಷಣಾ ಮೊದಲೆಲ್ಲಾ ಕಂಪ್ಲೀಟ್‌ ಲೇಯರ್‌ ಲುಕ್‌ ನೀಡುವ ಉಡುಪಾಗಿತ್ತು. ಜತೆಗೆ ಎಲ್ಲಿಯೂ ಎಕ್ಸ್‌ಪೋಸ್‌ಗೆ ಅವಕಾಶವಿರಲಿಲ್ಲ. ಆದರೆ, ಇದೀಗ ಈ ಕಾನ್ಸೆಪ್ಟ್‌ ಕಂಪ್ಲೀಟ್‌ ಪರಿವರ್ತನೆಗೊಂಡಿದೆ. ಇದರೊಂದಿಗೆ ಈ ಜನರೇಷನ್‌ನ ಕಾಲೇಜು ಹುಡುಗಿಯರು ಕೂಡ ಈ ಫ್ಯಾಷನ್‌ಗೆ ತಮ್ಮದೇ ಆದ ನ್ಯೂ ಲುಕ್‌ ನೀಡಿದ್ದಾರೆ. ನಟಿ ಸೋನಾಕ್ಷಿ ಪ್ಯಾಂಟ್‌ಸೂಟ್‌ ಕ್ರಾಪ್‌ ಟಾಪನ್ನು ಟ್ರೆಂಡಿಯಾಗಿಸುವ ಮೊದಲೇ ಈ ಹೊಸ ಫ್ಯಾಷನ್‌ಗೆ ಸೈ ಎಂದಿದ್ದರು. ಆದರೆ, ಹೆಚ್ಚು ಪಾಪ್ಯುಲರ್‌ ಆಗಿರಲಿಲ್ಲ. ಇದನ್ನರಿತ ಸ್ಟಾರ್‌ ಫ್ಯಾಷನಿಸ್ಟಾಗಳು ಪ್ಯಾಂಟ್‌ಸೂಟ್‌ ಜತೆಗೆ ಧರಿಸುವ ಇನ್ನರ್‌ ಬದಲು ಕ್ರಾಪ್‌ ಟಾಪ್‌ ಮ್ಯಾಚ್‌ ಮಾಡಿ ಬಿಡುಗಡೆಗೊಳಿಸಿದ್ದಾರೆ. ಇನ್ನು, ನಟಿ ಸೋನಾಕ್ಷಿ ಧರಿಸಿದ ನಂತರ ಇದು ಟ್ರೆಂಡಿಯಾಗಿದೆ. ಫಾರ್ಮಲ್‌ ರೂಪದ ಪ್ಯಾಂಟ್‌ ಸೂಟ್‌ ಗ್ಲಾಮರಸ್‌ ರೂಪ ಪಡೆದಿದೆ.

ಅಬ್‌ಸ್ಟ್ರಾಕ್ಟ್‌ ಪ್ರಿಂಟ್ಸ್‌ನ ಡೆನಿಮ್‌ ಪ್ಯಾಂಟ್‌ ಸೂಟ್‌

ಸೋನಾಕ್ಷಿ ಸಿನ್ಹಾ ಧರಿಸಿರುವ ಅಬ್‌ಸ್ಟ್ರಾಕ್ಟ್‌ ಪ್ರಿಂಟ್‌ನ ಪ್ಯಾಂಟ್‌ ಸೂಟ್‌ ಪ್ರಯೋಗಾತ್ನಕವಾಗಿ ಡಿಸೈನ್‌ ಮಾಡಲಾಗಿದೆ. ಕಾರ್ಪೊರೇಟ್‌ ಕ್ಷೇತ್ರದವರನ್ನು ಹೆಚ್ಚು ಸೆಳೆದಿದೆ. ಇನ್ನು ಡೆನಿಮ್‌ ಈ ವಿಂಟರ್‌ಗೆ ಹೇಳಿ ಮಾಡಿಸಿದ ಫ್ಯಾಬ್ರಿಕ್‌. ಟೂ ಇನ್‌ ವನ್‌ ಶೈಲಿಯಲ್ಲಿ ಧರಿಸಬಹುದು. ಬೇಕಿದ್ದಲ್ಲಿ ಬಟನ್‌ ಧರಿಸಿ ಪ್ರೊಫೆಷನಲ್‌ ಲುಕ್‌ ಪಡೆಯಬಹುದು. ಬ್ಲೇಝರ್‌ ತೆಗೆದಲ್ಲಿ ಬಿಂದಾಸ್‌ ಲುಕ್‌ ಪಡೆಯಬಹುದು. ಹಾಗಾಗಿ ಈ ಉಡುಪಿಗೆ ಫುಲ್‌ ಮಾಕ್ರ್ಸ್ ಸಿಕ್ಕಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. `

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

Bollywood Divorce Case: ಮದುವೆ ಎನ್ನುವುದು ಮಧುರವಾದ ಬಂಧ, ಸತಿ-ಪತಿಯರಿಬ್ಬರೂ ಸುಖವಾಗಿ ಬಾಳಿ ಬದುಕಿದರೆ ಜೀವನವೇ ಸ್ವರ್ಗ.ಆದರೆ ಈಗ ಮದುವೆಯಾಗಿ ಮೂರೇ ನಿಮಿಷಕ್ಕೆ ವಿಚ್ಛೇದನ ನೀಡುವವರು ಇದ್ದಾರೆ. ವಿಚ್ಛೇದನದ ಪಾರ್ಟಿಯನ್ನು ಆಚರಿಸುವವರು ಇದ್ದಾರೆ. ಇನ್ನು ಸಿನಿಮಾ ರಂಗದಲ್ಲಂತೂ ಇದನ್ನು ಕೇಳುವುದೇ ಬೇಡ. ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದೇನೋ. ಬಾಲಿವುಡ್ ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಮನೆಮಾತಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

VISTARANEWS.COM


on

Bollywood Divorce Case
Koo

ಮುಂಬೈ: ಈಗಿನ ಕಾಲದಲ್ಲಿ ಲವ್, ಬ್ರೇಕ್ ಅಪ್, ಮದುವ , ವಿಚ್ಛೇದನ ಎಲ್ಲಾ ಕಾಮನ್ ಆಗಿ ಬಿಟ್ಟಿದೆ. ಲವ್ ಮಾಡಿ ಮದುವೆಯಾಗಿ ನಂತರ ಕೆಲವೇ ದಿನಗಳಲ್ಲಿ ವಿಚ್ಛೇದನ ನೀಡುವುದು ಸೆಲೆಬ್ರಿಟಿಗಳಲ್ಲಿ ಸಾಮಾನ್ಯ. ಆದರೆ ಈಗ ಸಾಮಾನ್ಯ ಜನರೂ ಇದೇ ನಿಯಮವನ್ನು ಅನುಸರಿಸುತ್ತಿದ್ದಾರೆ! ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ! ಬಾಲಿವುಡ್ (Bollywood Divorce Case) ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ.

Bollywood Divorce Case
Bollywood Divorce Case

ಹೃತಿಕ್ ರೋಷನ್- ಸುಸ್ಸೇನ್ ಖಾನ್

ಬಾಲಿವುಡ್‌ನ ʼಗ್ರೀಕ್ ದೇವರುʼ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ 2000ರಲ್ಲಿ ಪ್ರಸಿದ್ಧ ಇಂಟಿರಿಯರ್ ಡಿಸೈನರ್ ಸುಸ್ಸೇನ್ ಖಾನ್ ಅವರನ್ನು ವಿವಾಹವಾದರು. ಹೊರಗಿನವರಿಗೆ ಸುಂದರವಾಗಿ ಕಾಣುತ್ತಿದ್ದ ಇವರ ವೈವಾಹಿಕ ಜೀವನವು 2014ರಲ್ಲಿ ಕೊನೆಗೊಂಡಿತು. ಇವರ ವಿಚ್ಛೇದನ ಒಪ್ಪಂದವು ಬಾಲಿವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಗಿತ್ತು. ಯಾಕೆಂದರೆ ಹೃತಿಕ್ ರೋಷನ್‌ ಅವರು ಸುಸ್ಸೇನ್‌ಗೆ ಸುಮಾರು 380 ಕೋಟಿ ರೂ. ಜೀವನಾಂಶ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

Bollywood Divorce Case
Bollywood Divorce Case

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

ಕಪೂರ್ ಕುಟುಂಬದ ವಂಶಸ್ಥರಾದ ಕರಿಷ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾದ ಹಿನ್ನಲೆಯಲ್ಲಿ ಇವರು 2014ರಲ್ಲಿ ಬೇರೆಬೇರೆಯಾದರು. ಕರಿಷ್ಮಾ ಅವರಿಗೆ ಸಂಜಯ್ ಜೀವನಾಂಶವಾಗಿ 14 ಕೋಟಿ ರೂ. ಬಾಂಡ್, ಮುಂಬೈನಲ್ಲಿ ಐಷಾರಾಮಿ ಮನೆ ಮತ್ತು ಅವರ ಮಕ್ಕಳ ಜೀವನಕ್ಕಾಗಿ ಹಣವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Bollywood Divorce Case
Bollywood Divorce Case

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್

ನಟ ಸೈಫ್ ಅಲಿ ಖಾನ್ 1991ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾದರು. ಈ ದಂಪತಿಗೆ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದರು. ಹದಿಮೂರು ವರ್ಷಗಳ ದಾಂಪತ್ಯದ ನಂತರ, ಅವರು 2004ರಲ್ಲಿ ವಿಚ್ಛೇದನ ಪಡೆದರು. ಸೈಫ್ ಅಮೃತಾಗೆ ಜೀವನಾಂಶವಾಗಿ 5 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಹೆಚ್ಚುವರಿಯಾಗಿ, ತಮ್ಮ ಮಗ ಪ್ರೌಢಾವಸ್ಥೆಗೆ ತಲುಪುವವರೆಗೆ ತಿಂಗಳಿಗೆ 1 ಲಕ್ಷ ರೂ.ಗಳನ್ನು ಪಾವತಿಸಲು ಅವರು ಬದ್ಧರಾಗಿದ್ದಾರೆ.

Bollywood Divorce Case
Bollywood Divorce Case

ಅಮೀರ್ ಖಾನ್ ಮತ್ತು ರೀನಾ ದತ್ತಾ

ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. 2002ರಲ್ಲಿ ಅವರ ವಿವಾಹವು ಕೊನೆಗೊಂಡಿದೆ. ವಿಚ್ಛೇದನ ನಂತರ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ರೀನಾಗೆ ಸುಮಾರು 50 ಕೋಟಿ ರೂ.ಗಳನ್ನು ನೀಡಿರುವುದಾಗಿ ಅಮೀರ್ ಖಾನ್ ಖಚಿತಪಡಿಸಿದ್ದಾರೆ.

Bollywood Divorce Case
Bollywood Divorce Case

ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ

ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ 2000ರಲ್ಲಿ ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ ಅಧುನಾ ಭಬಾನಿ ಅವರನ್ನು ವಿವಾಹವಾದರು. ಹದಿನಾರು ವರ್ಷಗಳ ದಾಂಪತ್ಯದ ನಂತರ, ಅವರು 2016ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಹಾಗೇ ಪತ್ನಿಗೆ ದುಬಾರಿ ಜೀವನಾಂಶದ ಜೊತೆಗೆ ಬಂಗಲೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಖರ್ಚುವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ.

Bollywood Divorce Case
Bollywood Divorce Case

ಸಂಜಯ್ ದತ್ ಮತ್ತು ರಿಯಾ ಪಿಳ್ಳೈ

ರೂಪದರ್ಶಿ ರಿಯಾ ಪಿಳ್ಳೈ ಅವರೊಂದಿಗಿನ ಸಂಜಯ್ ದತ್ ಅವರ ಎರಡನೇ ಮದುವೆಯಾದರು. 2008ರಲ್ಲಿ ಇವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು ಸಂಜಯ್ ರಿಯಾಗೆ ದುಬಾರಿ ಜೀವನಾಂಶವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಲ್ಲಿ ಮುಂಬೈನಲ್ಲಿ ಸಮುದ್ರದ ಕಡೆಗೆ ಮುಖವಿದ್ದ ಎರಡು ಐಷಾರಾಮಿ ಅಪಾರ್ಟ್ಮೆಂಟ್‍ಗಳು ಮತ್ತು ಒಂದು ಕಾರನ್ನು ನೀಡಲಾಗಿದೆ.

ಇದನ್ನೂ ಓದಿ: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Bollywood Divorce Case
Bollywood Divorce Case

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ

ನಟ-ನಿರ್ಮಾಪಕ ಮತ್ತು ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ನಟಿ ಮತ್ತು ರೂಪದರ್ಶಿ ಮಲೈಕಾ ಅರೋರಾ ಅವರನ್ನು 1998ರಲ್ಲಿ ವಿವಾಹವಾದರು. ಸ್ಟೈಲಿಶ್ ನೋಟಗಳಿಗೆ ಹೆಸರುವಾಸಿಯಾದ ದಂಪತಿಗಳು 2016ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು ಮತ್ತು 2017ರಲ್ಲಿ ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಂಡರು. ಈ ಒಪ್ಪಂದದಲ್ಲಿ ಅರ್ಬಾಜ್ ಮಲೈಕಾಗೆ ಸುಮಾರು 10-15 ಕೋಟಿ ರೂ.ಗಳ ದುಬಾರಿ ಜೀವನಾಂಶವನ್ನು ನೀಡಿದ್ದಾರೆ ಮತ್ತು ಅವರ ಮಗ ಅರ್ಹಾನ್ ಅವರ ಸಂಪೂರ್ಣ ಖರ್ಚುವೆಚ್ಚವನ್ನು ನೋಡಿಕೊಳ್ಳುವುದಾಗಿ ವರದಿಯಾಗಿದೆ.

Continue Reading

ದೇಶ

Ranbir Kapoor: ಮೋದಿಯದ್ದು ‘ಆಯಸ್ಕಾಂತದಂಥ ವ್ಯಕ್ತಿತ್ವ’ ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು?

Ranbir Kapoor: ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. ರಣಬೀರ್‌ ಕಪೂರ್‌ ಸೇರಿ ಹಲವು ನಟರು, ನಿರ್ದೇಶಕರು ಮೋದಿ ಅವರನ್ನು ಭೇಟಿಯಾಗಲು ಹೋದಾಗ ಮೋದಿ ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಸೇರಿ ಹಲವು ವಿಷಯಗಳ ಕುರಿತು ರಣಬೀರ್‌ ಕಪೂರ್‌ ಪ್ರಸ್ತಾಪಿಸಿದರು.

VISTARANEWS.COM


on

Ranbir Kapoor
Koo

ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ಮೋದಿ ಅವರ ಶ್ರಮ, ವ್ಯಕ್ತಿತ್ವವನ್ನು ಮೆಚ್ಚುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರ ಕುರಿತು ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೆರೋದಾ ಸಂಸ್ಥಾಪಕ, ಕನ್ನಡಿಗ ನಿಖಿಲ್‌ ಕಾಮತ್‌ (Nikhil Kamath) ಅವರೊಂದಿಗಿನ ಪಾಡ್‌ಕಾಸ್ಟ್‌ ವೇಳೆ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. “ನಾನು ರಾಜಕೀಯದ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ಆದರೆ, 4-5 ವರ್ಷಗಳ ಹಿಂದೆ ನಾನು ಸೇರಿ ಹಲವು ನಟರು ಹಾಗೂ ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೋಗಿದ್ದೆವು. ನೀವು ಮೋದಿ ಅವರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಟಿ.ವಿಯಲ್ಲಿ ನೋಡಿರುತ್ತೀರಿ. ನಮಗೂ ಕೂಡ ಅವರ ಆಯಸ್ಕಾಂತದಂತಹ ವ್ಯಕ್ತಿತ್ವದ ಅರಿವಾಯಿತು” ಎಂಬುದಾಗಿ ರಣಬೀರ್‌ ಕಪೂರ್‌ ಹೇಳಿದರು.

“ನಾವು ಅವರನ್ನು ಭೇಟಿಯಾಗಲು ಹೋಗಿದ್ದೆವು. ನಾವು ಕುಳಿತಿದ್ದಾಗ ಅವರು ಬಂದು ನಮ್ಮ ಜತೆ ಕುಳಿತರು. ಅವರು ಪ್ರತಿಯೊಬ್ಬರ ಜತೆಗೂ ಮಾತನಾಡಿದರು. ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಕೇಳಿದರು. ಆಗ ನನ್ನ ತಂದೆಯು ಚಿಕಿತ್ಸೆ ಪಡೆಯುತ್ತಿದ್ದರು. ಅದರ ಬಗ್ಗೆಯೂ ಮೋದಿ ಅವರು ಕೇಳಿದರು. ವಿಕ್ಕಿ ಕೌಶಲ್‌, ಕಿರಣ್‌ ಜೋಹರ್‌ ಸೇರಿ ಹಲವರ ವೈಯಕ್ತಿಕ ವಿಚಾರಗಳ ಕುರಿತು ಕೂಡ ಮೋದಿ ಮಾತನಾಡಿದರು. ಅದ್ಭುತ ವ್ಯಕ್ತಿಗಳು, ಸಾಧಕರು ಮಾತ್ರ ಇಷ್ಟೊಂದು ಶ್ರಮ ವಹಿಸಲು ಸಾಧ್ಯ. ಶಾರುಖ್‌ ಖಾನ್‌ ಸೇರಿ ಹಲವು ಸಾಧಕರು ಇಷ್ಟು ಶ್ರಮ ಹಾಕಲು ಸಾಧ್ಯ” ಎಂಬುದಾಗಿ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿಖಿಲ್‌ ಕಾಮತ್‌ ಕೂಡ ಬಣ್ಣನೆ

ನರೇಂದ್ರ ಮೋದಿ ಅವರ ಜತೆಗೆ ಸಮಯ ಕಳೆದ ಅನುಭವದ ಕುರಿತು ನೀವು ಹೇಳಿ ಎಂಬುದಾಗಿ ರಣಬೀರ್‌ ಕಪೂರ್‌ ಅವರು ಕೇಳಿದಾಗ ನಿಖಿಲ್‌ ಕಾಮತ್‌ ಕೂಡ ಮೋದಿ ಬಗ್ಗೆ ಮೆಚ್ಚಗೆಯ ಮಾತುಗಳನ್ನಾಡಿದ್ದರು. “ನರೇಂದ್ರ ಮೋದಿ ಅವರ ಜತೆ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ನಾವು ಅಮೆರಿಕದಲ್ಲಿದ್ದಾಗ ಮೋದಿ ಅವರು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಒಂದಲ್ಲ ಒಂದು ಕಾರ್ಯಕ್ರಮ, ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಅವರ ವಯಸ್ಸಿನಲ್ಲಿ, ಅವರಷ್ಟು ಶ್ರಮ ವಹಿಸುವುದು ನನಗೆ ಅಚ್ಚರಿಯಾಯಿತು. ಅವರು ಕೂಡ ನನಗೆ ಸ್ಫೂರ್ತಿ” ಎಂದು ನಿಖಿಲ್‌ ಕಾಮತ್‌ ತಿಳಿಸಿದ್ದಾರೆ.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Continue Reading

ಬಾಲಿವುಡ್

Deepika Padukone: ದೀಪಿಕಾ ಜತೆ ಹಸಿ ಬಿಸಿ ದೃಶ್ಯಗಳನ್ನು ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ ಎಂದ ಸಿದ್ಧಾಂತ್ ಚತುರ್ವೇದಿ!

Deepika Padukone: ಇಂಟಿಮೇಟ್ ದೃಶ್ಯಗಳನ್ನು ನಿಭಾಯಿಸುವಾಗ ಹಲವಾರು ಸವಾಲುಗಳಿತ್ತು ಎಂದು ನಟ ಸಿದ್ಧಾಂತ್ ಚತುರ್ವೇದಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಜತೆ ಕೆಲವು ದೃಶ್ಯಗಳನ್ನು ನಿಭಾಯಿಸುವಾಗ ಬಹಳ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Deepika Padukone Were Not Easy Task For Siddhant Chaturvedi Gehraiyaan Deepika Padukone Were Not Easy Task For Siddhant Chaturvedi Gehraiyaan
Koo

ಬೆಂಗಳೂರು: 2022ರಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಗೆಹ್ರೈಯಾನ್ʼ ಸಿನಿಮಾ ಪ್ರೆಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದಲ್ಲಿ ಇಂಟಿಮೇಟ್ ದೃಶ್ಯಗಳು ಪ್ರಮುಖ ಹೈಲೈಟ್‌ ಆಗಿದ್ದವು. ಅನನ್ಯಾ ಪಾಂಡೆ, ಕನುಪ್ರಿಯಾ ಗುಪ್ತಾ, ಧೈರ್ಯ ಕರ್ವಾ, ಯಾಮಿನಿ ಜೋಶಿ ಮತ್ತು ನಾಸಿರುದ್ದೀನ್ ಶಾ ಸೇರಿದಂತೆ ಅನೇಕ ಪ್ರಮುಖ ನಟರನ್ನು ಒಳಗೊಂಡ ಸಿನಿಮಾ ಇದು. ಇಂಟಿಮೇಟ್ ದೃಶ್ಯಗಳನ್ನು ನಿಭಾಯಿಸುವಾಗ ಹಲವಾರು ಸವಾಲುಗಳಿತ್ತು ಎಂದು ನಟ ಸಿದ್ಧಾಂತ್ ಚತುರ್ವೇದಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಜತೆ ಕೆಲವು ದೃಶ್ಯಗಳನ್ನು ನಿಭಾಯಿಸುವಾಗ ಬಹಳ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಸಿನಿಮಾ ದೃಶ್ಯ ನಿಭಾಯಿಸುವಾಗ ಒತ್ತಡವು ಎಷ್ಟು ಅಗಾಧವಾಗಿತ್ತು ಎಂದರೆ ನಟನ ತಂದೆ ಮತ್ತು ಚಿತ್ರದ ನಿರ್ಮಾಪಕ ಕರಣ್ ಜೋಹರ್ ಸಹ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಲು ಮುಂದಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಸಿದ್ಧಾಂತ್ ಚತುರ್ವೇದಿ ಮಾತನಾಡಿ “ಭಾರತದ ಅನೇಕ ಜನರು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಮಾತ್ರವಲ್ಲ ಇಂತಹ ದೃಶ್ಯಗಳನ್ನು ನಿಭಾಯಿಸುವಾಗ ತಂದೆಯ ಸಹಕಾರ ಕೂಡ ನನಗಿತ್ತು. ನಾನು ಆಗ ತುಂಬ ನರ್ವಸ್‌ ಆಗಿದ್ದೆ. ಕರಣ್ ಜೋಹರ್ ಅವರ ಬಳಿ ಕೂಡ ನನ್ನ ಕಳವಳ ವ್ಯಕ್ತಪಡಿಸಿದ್ದೆ. ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಅವರು ನನ್ನನ್ನು ಪ್ರೋತ್ಸಾಹಿಸಿದರುʼʼಎಂದರು.

ಇದನ್ನೂ ಓದಿ: Deepika Padukone: ರಣವೀರ್‌ ಎದುರೇ ದೀಪಿಕಾ ಬೇಬಿ ಬಂಪ್ ಮೇಲೆ ಕೈಯಿಟ್ಟ ಒರಿ; ನೆಟ್ಟಿಗರಿಗೆ ಉರಿ!

ʻʻಇನ್ನು ಇಂಟಿಮೇಟ್‌ ದೃಶ್ಯಗಳನ್ನು ನಿಭಾಯಿಸುವ ಮೊದಲು ನನಗೆ ಜೋಹರ್ ಅವರು ಇದು ವರ್ಕ್‌ನ ಪಾರ್ಟ್‌ ಅಷ್ಟೇ ಎಂದು ಪ್ರೋತ್ಸಾಹಿಸಿದರು. ನಾನು ನಾಚಿಕೆ ಸ್ವಭಾವದವನಾಗಿದ್ದರಿಂದ ತಂದೆ ಹಾಗೂ ಕರಣ್‌ ಅವರ ಪ್ರೋತ್ಸಾಹದಿಂದ ಸಿನಿಮಾವನ್ನು ಚೆನ್ನಾಗಿ ನಿಭಾಯಿಸಿದೆ. ಧರ್ಮ ಪ್ರೊಡಕ್ಷನ್ಸ್, ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಶಕುನ್ ಬಾತ್ರಾ ಜತೆ ಕೆಲಸ ಮಾಡುವ ಒಳ್ಳೆಯ ಅವಕಾಶ ನನ್ನದಾಗಿತ್ತುʼʼ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ (Hotlook), ಬಿಕಿನಿ, ಲಿಪ್ ಲಾಕ್ ಮೊದಲಾದ ದೃಶ್ಯಗಳು ಭಾರಿ ಚರ್ಚೆಗೂ ಒಳಗಾಗಿತ್ತು. ‘ಗೆಹ್ರೈಯಾನ್’ ಅಕ್ರಮ ಸಂಬಂಧಗಳ ಕುರಿತಾಗಿರುವ ಸಿನಿಮಾವಾಗಿದ್ದು, ಸಂಬಂಧಗಳ ಸೂಕ್ಷ್ಯತೆ, ಮಹತ್ವದ ಬಗ್ಗೆ ಹಲವು ಸಂದೇಶಗಳನ್ನು ನೀಡುತ್ತದೆ. ಗೆಹ್ರೈಯಾನ್ ಚಿತ್ರ ದಾಂಪತ್ಯ, ಗಂಡ-ಹೆಂಡತಿಯ ಸಂಬಂಧ, ಪರಪುರುಷ, ಅಕ್ರಮ ಸಂಬಂಧ (Relationship)ದ ಬಗ್ಗೆ ತಿಳಿಸಿಕೊಡುತ್ತದೆ.

Continue Reading

ಬಾಲಿವುಡ್

Janhvi Kapoor: ಇಡ್ಲಿ- ಚಿಕನ್ ಕರಿ ಕಾಂಬಿನೇಶನ್‌ಗೆ ಮುಖ ಕಿವುಚಿಕೊಂಡ ಖ್ಯಾತ ಯುಟ್ಯೂಬರ್‌; ತಿನ್ನಲು ಕೈ ಬಳಸಿ ಎಂದ ಜಾಹ್ನವಿ ಕಪೂರ್!

Janhvi Kapoor: ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಅವರ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಇಡ್ಲಿ ಮತ್ತು ಚಿಕನ್ ಕರಿ ಕಾಂಬಿನೇಷನ್‌ ಬಗ್ಗೆ ಹಾಗೂ ಕೈಯಿಂದ ಇಡ್ಲಿ ತಿನ್ನುವುದರ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲ ಅವರ ಮುಖ ಕಿವುಚಿಕೊಳ್ಳುವ ರೀತಿಗೆ ನೆಟ್ಟಿಗರು ಭಾರಿ ಟ್ರೋಲ್‌ ಮಾಡಿದ್ದಾರೆ.

VISTARANEWS.COM


on

Janhvi Kapoor interview Kamiya Jani trolled for calling idli-chicken curry weird combination
Koo

ಬೆಂಗಳೂರು: ಕರ್ಲಿ ಟೇಲ್ಸ್‌ನ ( Curly Tales) ಸಂಸ್ಥಾಪಕಿ ಕಾಮಿಯಾ ಜಾನಿ (Kamiya Jani) ಅವರು ಕಳೆದ ತಿಂಗಳು ನಟಿ ಜಾಹ್ನವಿ ಕಪೂರ್ (Janhvi Kapoor) ಅವರನ್ನು ಸಂದರ್ಶನ ಮಾಡಿದ್ದಾರೆ. ಕಾಮಿಯಾ ಜಾನಿ ಕ್ಲಿಪ್ ವೈರಲ್ ಆದ ನಂತರ ಭಾರಿ ಟ್ರೋಲ್‌ ಆಗುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಅವರ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಇಡ್ಲಿ ಮತ್ತು ಚಿಕನ್ ಕರಿ ಕಾಂಬಿನೇಷನ್‌ ಬಗ್ಗೆ ಹಾಗೂ ಕೈಯಿಂದ ಇಡ್ಲಿ ತಿನ್ನುವುದರ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲ ಅವರ ಮುಖ ಕಿವುಚಿಕೊಳ್ಳುವ ರೀತಿಗೆ ನೆಟ್ಟಿಗರು ಭಾರಿ ಟ್ರೋಲ್‌ ಮಾಡಿದ್ದಾರೆ.

ಡೈನಿಂಗ್ ಟೇಬಲ್‌ನಲ್ಲಿ, ದೋಸೆ, ಇಡ್ಲಿ, ಚಿಕನ್ ಕರಿ, ಪನೀರ್ ಭುರ್ಜಿ ಮತ್ತು ಮೂಂಗ್ ದಾಲ್ ಇತ್ತು. ಆಗ ಕಾಮಿಯಾ ಜಾನಿಗೆ ಜಾಹ್ನವಿ ಅವರು ಇಡ್ಲಿಯೊಂದಿಗೆ ಚಿಕನ್ ಕರಿ ಟ್ರೈ ಮಾಡಿ ಎಂದು ಹೇಳುತ್ತಾರೆ. ಆಗ ಕಾಮಿಯಾ ಬಹಳ ಆಶ್ಚರ್ಯ ಚಕಿತರಾಗಿ ಏನು? ಇಡ್ಲಿ ಜೊತೆ ಚಿಕನ್ ಕರಿ?” ಇದೆಂಥ ಕಾಂಬಿನೇಶನ್‌? ನೀವೇ ಇದ್ದನ್ನ ಪರಿಚಯಿಸಿದ್ದೀರಾ ಅಥವಾ ಇದು ಕಾಂಬಿನೇಶನ್‌ ಇರೋದು ಹೌದಾ? ಎಂದು ಕೇಳುತ್ತಾರೆ. ಮಾತ್ರವಲ್ಲ ಇದು ಬೋನಿ ಸ್ಪೆಷಲ್. ಚಿಕನ್ ಕರಿ ಜೊತೆ ಇಡ್ಲಿ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಪ್ರಯತ್ನಿಸಿದ್ದೀರಿ ಎಂದು ನನಗೆ ತಿಳಿದಿಲ್ಲ. ಇಡ್ಲಿಯ ಮೇಲೆ ಚಿಕನ್ ಕರಿ. ಇದನ್ನು ಪ್ರಯತ್ನಿಸಲು ನನಗೆ ತುಂಬಾ ಭಯವಾಗಿದೆ” ಎಂದು ಅವಳು ಹೇಳುತ್ತಾರೆ.

ಆಗ ಕಾಮಿಯಾ ಜಾನಿಗೆ ಜಾಹ್ನವಿ ಚಮಚ ಬಳಸಬೇಡಿ, ಕೈಗಳಿಂದ ತಿನ್ನಿರಿ ಎಂದಾಗ, ಕೈಯಿಂದ ಇಡ್ಲಿ ತಿನ್ನಲು ನನಗೆ ಗೊತ್ತಿಲ್ಲ,” ಎಂದು ಜಾನಿ ನಗುತ್ತಾ ಪ್ರತಿಕ್ರಿಯಿಸುತ್ತಾರೆ. ಮ್ಯಾಗಿ ನೂಡಲ್ಸ್ ಸೇರಿದಂತೆ ಎಲ್ಲವನ್ನೂ ಕೈಯಿಂದ ತಿನ್ನಬಹುದು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ. ಬಳಿಕ ಇಡ್ಲಿ-ಕೋಳಿ ಕರಿ ಕಾಂಬಿನೇಶನ್‌ ತಿಂದ ಬಳಿಕ ಕಾಮಿಯಾ ʻʻವಿಚಿತ್ರ ಕಾಮಬಿನೇಶನ್‌ʼʼಎಂದು ಎಂದು ಹೇಳುತ್ತಾರೆ.

ಕ್ಲಿಪ್ ಅನ್ನು ವೀಕ್ಷಿಸಿದ ಹೆಚ್ಚಿನ ಸಂಖ್ಯೆಯ ಜನರು ಕಾಮಿಯಾ ಜಾನಿ ಅವರನ್ನು ಟೀಕೆ ಮಾಡಿದ್ದಾರೆ. ದಕ್ಷಿಣ ಭಾರತದ ಆಹಾರಗಳ ಬಗ್ಗೆ ಆಕೆಗೆ ತಿಳಿದಿಲ್ಲ ಎಂದು ಟ್ರೋಲ್‌ ಮಾಡಿದ್ದಾರೆ. ಆಕೆ ಎಂದಾದರೂ ತಮಿಳುನಾಡಿಗೆ ಭೇಟಿ ನೀಡಿದ್ದಾಳೆಯೇ? ಅಲ್ಲದೆ, ಇಡ್ಲಿ ಅಥವಾ ಮಟನ್‌ನೊಂದಿಗೆ ದೋಸೆಯನ್ನು ಪ್ರಯತ್ನಿಸಿ, ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Janhvi Kapoor: ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಅಪ್‌ ಆಗ್ತಿತ್ತು ಎಂದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌!

ಕರ್ಲಿ ಟೇರ್ಲ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಕಾಮಿಯಾ ಜಾನಿ ಈ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯಿಂದ ಬೆಸ್ಟ್ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅವಾರ್ಡನ್ನು ಗಳಿಸಿದ್ದಾರೆ. 

ಇದಕ್ಕೂ ಮುಂಚೆ ಮುಂಬಯಿನಲ್ಲಿ (mumbai) ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant Radhika Wedding) ಸಮಾರಂಭದಲ್ಲಿ ವ್ಯಾಪಾರ, ರಾಜಕೀಯ ಮತ್ತು ಮನರಂಜನಾ ಲೋಕದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಈ ಬಗ್ಗೆ ಕರ್ಲಿ ಟೇಲ್ಸ್ ನ (Curly Tales) ಕಾಮಿಯಾ ಜಾನಿ (kamiya jani) ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ಉನ್ನತ-ಪ್ರೊಫೈಲ್ ಮದುವೆ ಎಷ್ಟು ಸ್ಮರಣೀಯ ಮತ್ತು ಭವ್ಯವಾಗಿತ್ತು ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದರು.





Continue Reading
Advertisement
Sadhguru  Jaggi Vasudev
ಆರೋಗ್ಯ28 seconds ago

Sadhguru Jaggi Vasudev: ನಮ್ಮ ಹೃದಯವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Paris Olympics 2024
ಕ್ರೀಡೆ15 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Side Effects Of Dry Fruits
ಆರೋಗ್ಯ15 mins ago

Side Effects Of Dry Fruits: ಆರೋಗ್ಯಕ್ಕೆ ಒಳ್ಳೆಯದೆಂದು ಒಣಬೀಜಗಳನ್ನು ಅತಿಯಾಗಿ ತಿನ್ನುತ್ತೀರಾ? ಎಚ್ಚರ!

Karnataka Weather Forecast
ಮಳೆ15 mins ago

Karnataka Weather : 8 ಜಿಲ್ಲೆಗಳಿಗೆ ವ್ಯಾಪಕ ಮಳೆ ಎಚ್ಚರಿಕೆ, ಬಿರುಗಾಳಿ ಸಾಥ್‌

dina bhavishya
ಭವಿಷ್ಯ45 mins ago

Dina Bhavishya : ಬಣ್ಣದ ಮಾತುಗಳನ್ನು ನಂಬಿ ಈ ರಾಶಿಯವರು ಯಾವುದೇ ವ್ಯವಹಾರ ಮಾಡ್ಬೇಡಿ

NEET-UG
ಪ್ರಮುಖ ಸುದ್ದಿ5 hours ago

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ವೈರಲ್ ನ್ಯೂಸ್6 hours ago

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Paris Olympics 2024
ಕ್ರೀಡೆ6 hours ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

Asia Cup cricket
ಪ್ರಮುಖ ಸುದ್ದಿ6 hours ago

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Viral video
ವೈರಲ್ ನ್ಯೂಸ್6 hours ago

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ12 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ13 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ16 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌