Anant Ambani-Radhika Wedding: ಇಂದಿನಿಂದ ಅನಂತ್ ಅಂಬಾನಿ- ರಾಧಿಕಾ ಮದುವೆ; ಮುಂಬೈನತ್ತ ಗಣ್ಯರ ದಂಡು! - Vistara News

ಬಾಲಿವುಡ್

Anant Ambani-Radhika Wedding: ಇಂದಿನಿಂದ ಅನಂತ್ ಅಂಬಾನಿ- ರಾಧಿಕಾ ಮದುವೆ; ಮುಂಬೈನತ್ತ ಗಣ್ಯರ ದಂಡು!

Anant Ambani-Radhika Wedding : ಈ ಅದ್ಧೂರಿ ಕಾರ್ಯಕ್ರಮಕ್ಕೆ ಅಲ್ಟಾಮೌಂಟ್ ರಸ್ತೆ ಮಧುವಣ ಗಿತ್ತಿಯಂತೆ ಶೃಂಗಾರ ಗೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಖ್ಯಾತ ಸೆಲಿಬ್ರಿಟಿಗಳು ಆಗಮಿಸಿದ್ದಾರೆ. ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಅನೇಕ ಗಣ್ಯರು ಮುಂಬಯಿಯತ್ತ ಆಗಮಿಸಿದ್ದಾರೆ.

VISTARANEWS.COM


on

Anant Ambani-Radhika Wedding Kim Kardashian Priyanka Chopra SRK Reach Mumbai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
 

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Anant Ambani-Radhika Wedding) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ ಇಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಕಿಮ್ ಕಾರ್ಡಶಿಯಾನ್, ಖ್ಲೋಯ್ ಕಾರ್ಡಶಿಯಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ರಾಮ್ ಚರಣ್, ಮಾಜಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಸ್ಯಾಮ್‌ಸಂಗ್ ಸಿಇಒ ಹಾನ್ ಜೊಂಗ್-ಹೀ ಅವರು ಈಗಾಗಲೇ ಮೂರು ದಿನಗಳ ವಿವಾಹ ಆಚರಣೆಗಾಗಿ ಮುಂಬೈಗೆ ಆಗಮಿಸಿದ್ದಾರೆ. ಕಿಮ್ ಕಾರ್ಡಶಿಯಾನ್ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ,

ಈ ಅದ್ಧೂರಿ ಕಾರ್ಯಕ್ರಮಕ್ಕೆ ಅಲ್ಟಾಮೌಂಟ್ ರಸ್ತೆ ಮಧುವಣ ಗಿತ್ತಿಯಂತೆ ಶೃಂಗಾರ ಗೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದ ಖ್ಯಾತ ಸೆಲಿಬ್ರಿಟಿಗಳು ಆಗಮಿಸಿದ್ದಾರೆ. ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಅನೇಕ ಗಣ್ಯರು ಮುಂಬಯಿಯತ್ತ ಆಗಮಿಸಿದ್ದಾರೆ. ಮದುವೆಯ ಪೂರ್ವಭಾವಿಯಾಗಿ ಈಗಾಗಲೇ ಎರಡು ಅದ್ಧೂರಿ ಆಚರಣೆಗಳು ನಡೆದಿವೆ. ವಿವಾಹ ಪೂರ್ವ ಆಚರಣೆಗಳಲ್ಲಿ ಟೋಗಾ ಪಾರ್ಟಿ, ಅನಂತರ ಮಾಸ್ಕ್ವೆರೇಡ್ ಬಾಲ್ ಗಳಲ್ಲಿ 5,500 ಡ್ರೋನ್‌ ಗಳ ಬೆಳಕಿನ ಪ್ರದರ್ಶನವನ್ನು ಒಳಗೊಂಡಿತ್ತು. ಸುಮಾರು ಎಂಟು ವರ್ಷಗಳಲ್ಲಿ ರಿಹಾನ್ನಾ ಅವರ ಮೊದಲ ಪೂರ್ಣ ಸಂಗೀತ ಕಚೇರಿಯನ್ನು ಗಾಜಿನ ಅರಮನೆಯಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: Anant Ambani-Radhika Wedding: ಅನಂತ್ ಅಂಬಾನಿ- ರಾಧಿಕಾ ಮದುವೆ; ಮುಂಬಯಿನಲ್ಲಿ ಗಗನಕ್ಕೇರಿದ ಹೊಟೇಲ್ ರೂಮ್ ಚಾರ್ಜ್!

ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಆಚರಣೆಗಳು ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ಪ್ರಾರಂಭವಾದವು, ಅಲ್ಲಿ ಅವರು ಮೂರು ದಿನಗಳವರೆಗೆ ಸಾವಿರಕ್ಕೂ ಹೆಚ್ಚು ಅತಿಥಿಗಳನ್ನು ಆಯೋಜಿಸಿದ್ದರು. ದಿಲ್ಜಿತ್ ದೋಸಾಂಜ್ ಮತ್ತು ಅರಿಜಿತ್ ಸಿಂಗ್ ಹೊರತುಪಡಿಸಿ, ಪಾಪ್ ಐಕಾನ್ ರಿಹಾನ್ನಾ ಈವೆಂಟ್‌ನಲ್ಲಿ ಪ್ರದರ್ಶನ ನೀಡಿದ್ದರು. ಜುಲೈ ಆಗಮಿಸುತ್ತಿದ್ದಂತೆ, ಸಾಂಪ್ರದಾಯಿಕ ವಿವಾಹ ಪೂರ್ವ ಆಚರಣೆಗಳೊಂದಿಗೆ ಹಬ್ಬಗಳು ಮುಂದುವರಿಯಿತು.

ಇದರ ನಂತರ, ಅನಂತ್ ಅಂಬಾನಿ ಅವರ ಅಜ್ಜಿ, ಕೋಕಿಲಾಬೆನ್ ಅಂಬಾನಿ, ಮುಂಬೈನಲ್ಲಿ ದಾಂಡಿಯಾ ಆಯೋಜಿಸಿದರು. ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯಿತು. ಅಲ್ಲಿ ಪಾಪ್ ಸೆನ್ಸೇಷನ್ ಜಸ್ಟಿನ್ ಬೈಬರ್ ಪ್ರದರ್ಶನ ನೀಡಿದರು. ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಜಾನ್ವಿ ಕಪೂರ್ ಮತ್ತು ರಣವೀರ್ ಸಿಂಗ್ ಕೂಡ ಭಾಗಿಯಾಗಿದ್ದರು.

ಭಾರತದ ಜಾಮ್‌ನಗರದಲ್ಲಿರುವ ಅಂಬಾನಿ ಎಸ್ಟೇಟ್‌ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೊದಲ ವಿವಾಹ ಪೂರ್ವ ಆಚರಣೆಯು 1,200 ಅತಿಥಿಗಳೊಂದಿಗೆ ನಡೆಯಿತು, ಇದರಲ್ಲಿ ಬಿಲ್ ಗೇಟ್ಸ್, ಹಿಲರಿ ಕ್ಲಿಂಟನ್, ಜೇರೆಡ್ ಕುಶ್ನರ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ 1,200 ಅತಿಥಿಗಳು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ರಿಹಾನ್ನಾ ಅವರ ಪ್ರದರ್ಶನಕ್ಕೆ 6 ರಿಂದ 9 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Akshay Kumar: ನಾನು ಸತ್ತೇ ಹೋದೆ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ ಎಂದು ಗರಂ ಆದ ಅಕ್ಷಯ್‌ ಕುಮಾರ್‌!

Akshay Kumar: ಕೊವಿಡ್ ಬಳಿಕ 15 ಸಿನಿಮಾಗಳು ಬಿಡುಗಡೆಯಾಗಿದ್ದರೂ ಎರಡು ಮೂರು ಸಿನಿಮಾಗಳು ಬಿಟ್ಟರೆ, ಬೇರೆ ಸಿನಿಮಾಗಳು ಹಿಟ್‌ ಕಂಡೇ ಇಲ್ಲ. ಇದೀಗ ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳು ಸೋಲುತ್ತಿದ್ದಂತೆ ಸಂತಾಪ ಸೂಚಿಸುತ್ತಿದ್ದಾರೆ ನೆಟ್ಟಿಗರು. ಇದೀಗ ಈ ಬಗ್ಗೆ ನಟಿ ಖಡಕ್‌ ಆಗಿ ಉತ್ತರ ನೀಡಿದ್ದಾರೆ.

VISTARANEWS.COM


on

Akshay Kumar Bollywood folks send him condolence messages
Koo

ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ಸಿನಿಮಾಗಳು ಸೋಲುತ್ತಲೇ ಇವೆ. ಕೊವಿಡ್ ಬಳಿಕ 15 ಸಿನಿಮಾಗಳು ಬಿಡುಗಡೆಯಾಗಿದ್ದರೂ ಎರಡು ಮೂರು ಸಿನಿಮಾಗಳು ಬಿಟ್ಟರೆ, ಬೇರೆ ಸಿನಿಮಾಗಳು ಹಿಟ್‌ ಕಂಡೇ ಇಲ್ಲ. ಇದೀಗ ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳು ಸೋಲುತ್ತಿದ್ದಂತೆ ಸಂತಾಪ ಸೂಚಿಸುತ್ತಿದ್ದಾರೆ ನೆಟ್ಟಿಗರು. ಇದೀಗ ಈ ಬಗ್ಗೆ ನಟಿ ಖಡಕ್‌ ಆಗಿ ಉತ್ತರ ನೀಡಿದ್ದಾರೆ.

ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ, ಮಿಷನ್ ರಾಣಿಗಂಜ್, ಬಡೇ ಮಿಯಾನ್ ಚೋಟೆ ಮಿಯಾನ್, ಸೆಲ್ಫಿ ಮತ್ತು ರಾಮ್ ಸೇತು ಸೇರಿದಂತೆ ಹೆಚ್ಚು ಫ್ಲಾಪ್‌ ಸಿನಿಮಾ ನೀಡಿದರು ಅಕ್ಷಯ್‌ ಕುಮಾರ್‌. ತೀರಾ ಇತ್ತೀಚೆಗೆ ಬಯೋಪಿಕ್ ʻಸರ್ಫಿರಾʼದಲ್ಲಿ ನಟಿಸಿದರು, ಇದು ತಮಿಳಿನ ಹಿಟ್ ಸೂರರೈ ಪೊಟ್ರುನ ರೀಮೇಕ್. ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೆ ಬಂಡವಾಳ ಹೂಡಿದ ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಅಕ್ಷಯ್ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಸಿದ್ಧರಿಲ್ಲ

ಶುಕ್ರವಾರ ಮುಂಬೈನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಅಕ್ಷಯ್ “ಜನರು ಏನೇ ಹೇಳಿದರೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ” ಎಂದು ನಿಸ್ಸಂದಿಗ್ಧವಾಗಿ ಉತ್ತರಿಸಿದ್ದಾರೆ.

‘ಏನೇ ಆದರೂ ಒಳ್ಳೆಯದಕ್ಕೆ ಆಗೋದು. ನಾನು ಹೆಚ್ಚು ಆಲೋಚಿಸುವುದಿಲ್ಲ, ಒತ್ತಡ ತೆಗೆದುಕೊಳ್ಳುವುದಿಲ್ಲ. ನಾಲ್ಕೈದು ಸಿನಿಮಾ ಉತ್ತಮವಾಗಿ ಕೆಲಸ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಸತ್ತೇ ಹೋದ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌; ಸೋನು ಗೌಡ ನಾಯಕಿ!

ʻʻನಾನು ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತೇನೆ. ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ . ಬೆಳಗ್ಗೆ ನಾನು ಎದ್ದೇಳುತ್ತೇನೆ, ವ್ಯಾಯಾಮ ಮಾಡಿ, ಕೆಲಸಕ್ಕೆ ಹೊರಡುತ್ತೇನೆ ಮತ್ತು ಮನೆಗೆ ಹಿಂತಿರುಗುತ್ತೇನೆ. ನಾನು ಏನು ಸಂಪಾದಿಸಿದರೂ, ನಾನು ಸ್ವಂತವಾಗಿ ಸಂಪಾದಿಸುತ್ತೇನೆ . ನಾನು ಯಾರಿಂದಲೂ ಏನನ್ನೂ ಕಸಿದುಕೊಳ್ಳುವುದಿಲ್ಲ . ನನ್ನನ್ನು ಹೊಡೆದುರುಳಿಸುವವರೆಗೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ ನಾನು ಕಷ್ಟಪಟ್ಟು ಹಣ ಸಂಪಾದಿಸುತ್ತೇನೆಯೇ ಹೊರತು ಬೇಡಿಕೊಂಡಲ್ಲ. ನನ್ನ ಜೀವ ಇರೋವರೆಗೆ ನಾನು ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಅಕ್ಷಯ್ ಕುಮಾರ್..”

ಅಕ್ಷಯ್ ಅವರ ಖೇಲ್ ಖೇಲ್ ಮೇ ಚಿತ್ರದಲ್ಲಿ ವಾಣಿ ಕಪೂರ್, ಫರ್ದೀನ್ ಖಾನ್ ಮತ್ತು ಆಮಿ ವಿರ್ಕ್ ಸಹ ನಟಿಸಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅವರ ʻಸ್ಟ್ರೀಟ್ 2ʼ ರೊಂದಿಗೆ ಘರ್ಷಣೆಯಾಗುವ ಈ ಚಿತ್ರವನ್ನು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ದೊಡ್ಡ ಫ್ಲಾಪ್ ಕಂಡರು. ‘ಸರ್ಫಿರಾ’ ಕೂಡ ಕಳಪೆ ಗಳಿಕೆ ಮಾಡಿತು.

Continue Reading

ಪ್ರಮುಖ ಸುದ್ದಿ

Bigg Boss OTT 3 : ಸನಾ ಮಕ್ಬುಲ್​ ಬಿಗ್​ಬಾಸ್​ ಒಟಿಟಿ 3 ವಿನ್ನರ್​, ನೈಜಿ ರನ್ನರ್​​ಅಪ್​​

Bigg Boss OTT 3 : ಬಿಗ್ ಬಾಸ್ ಮನೆಯಲ್ಲಿ ಸನಾ ಅವರ ಅಭಿಯಾನದ ವಿಷಯಕ್ಕೆ ಬಂದಾಗ ಗೆಲುವಿನ ಅಭಿಯಾನದ ವಿಷಯಕ್ಕೆ ಬಂದರೆ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ರಣವೀರ್ ಶೋರೆ ಅವರನ್ನು ‘ನಾಗಿನ್ ಮತ್ತು ಖಳನಾಯಕ’ ಎಂದು ಕರೆದು ವಿವಾದಕ್ಕೆ ಈಡಾಗಿರುವುದು, ನಿರೂಪಕ ಅನಿಲ್ ಕಪೂರ್ ಅವರನ್ನೇ ಪ್ರಶ್ನಿಸಿದ್ದು ಗಮನ ಸೆಳೆಯುವ ವಿಚಾರಗಳು.

VISTARANEWS.COM


on

Bigg Boss OTT 3
Koo

ಬೆಂಗಳೂರು: ಹಲವಾರು ನಿದರ್ಶನಗಳ ಬಳಿಕ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್ (Bigg Boss OTT 3)​ ಕೊನೆಗೊಂಡಿದ್ದು, ಸನಾ ಮಕ್ಬುಲ್ ವಿಜೇತರಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪ್ರಸಾರಗೊಂಡ ಗ್ರ್ಯಾಂಡ್ ಫಿನಾಲೆಯಲ್ಲಿ ನಿರೂಪಕ ಅನಿಲ್ ಕಪೂರ್ ವಿಜೇತರ ಹೆಸರನ್ನು ಘೋಷಿಸಿದರು. ಈ ಬಾರಿಯ ಬಿಗ್​ ಬಾಸ್ ಹಲವಾರು ಏರಿಳಿತಗಳು ಹಾಗೂ ನಾಟಕೀಯ ತಿರುವುಗಳನ್ನು ಕಂಡಿತ್ತು. ಸನಾ ಮಕ್ಬುಲ್ ಮತ್ತು ನೈಜಿ ನಡುವೆ ಅಂತಿಮ ಸ್ಪರ್ಧೆ ಏರ್ಪಟ್ಟಿತು. ಅಲ್ಲಿ ಸನಾ ವಿಜೇತರಾದರಲ್ಲದೆ ಟ್ರೋಫಿಯ ಜತೆಗೆ 25 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸನಾ ಅವರ ಅಭಿಯಾನದ ವಿಷಯಕ್ಕೆ ಬಂದಾಗ ಗೆಲುವಿನ ಅಭಿಯಾನದ ವಿಷಯಕ್ಕೆ ಬಂದರೆ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ರಣವೀರ್ ಶೋರೆ ಅವರನ್ನು ‘ನಾಗಿನ್ ಮತ್ತು ಖಳನಾಯಕ’ ಎಂದು ಕರೆದು ವಿವಾದಕ್ಕೆ ಈಡಾಗಿರುವುದು, ನಿರೂಪಕ ಅನಿಲ್ ಕಪೂರ್ ಅವರನ್ನೇ ಪ್ರಶ್ನಿಸಿದ್ದು ಗಮನ ಸೆಳೆಯುವ ವಿಚಾರಗಳು.ಆದರೆ ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿದ್ದರು ಎಂಬುದೇ ಅವರಿಗಿದ್ದ ದೊಡ್ಡ ಪ್ಲಸ್ ಪಾಯಿಂಟ್​. ಅಲ್ಲದೆ ಗೆಲುವೆಂಬು ನನಗೆ ಗೀಳು ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದರು.

ಫಿನಾಲೆ ಎಪಿಸೋಡ್ ಕಾರ್ಯಕ್ರಮದ ಐದು ಅಂತಿಮ ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು. ರಣವೀರ್ ಶೋರೆ, ಸನಾ ಮಕ್ಬುಲ್, ಸಾಯಿ ಕೇತನ್ ರಾವ್, ನೈಜಿ ಮತ್ತು ಕೃತಿಕಾ ಮಲಿಕ್. ಆದಾಗ್ಯೂ, ರಣವೀರ್, ಸಾಯಿ ಮತ್ತು ಕೃತಿಕಾ ಗುರಿ ತಲುಪಲು ವಿಫಲರಾದರು.

ಗ್ರ್ಯಾಂಡ್ ಫಿನಾಲೆ ಬಗ್ಗೆ

ಒಟಿಟಿಯ ಅಂತಿಮ ಕಾರ್ಯಕ್ರಮವು ಸಂಗೀತ, ನೃತ್ಯ, ಹಳಹಳಿಕೆ ಮತ್ತು ಸಾಕಷ್ಟು ಭಾವನೆಗಳೊಂದಿಗೆ ಕೂಡಿತ್ತು. ಅನಿಲ್ ಕಪೂರ್ ನಾಚ್ ಪಂಜಾಬನ್ ಹಾಡಿಗೆ ನೃತ್ಯ ಮಾಡುವ ಮೂಲಕ ವೇದಿಕೆ ಪ್ರವೇಶಿಸಿದರು. ಎಲ್ಲಾ ಮಾಜಿ ಸ್ಪರ್ಧಿಗಳು ವೇದಿಕೆಯಲ್ಲಿ ಸೇರಿಕೊಂಡರು. ಸೀಸನ್ ಫಿನಾಲೆ ಆಗಸ್ಟ್ 2 ರಂದು ರಾತ್ರಿ 9 ರಿಂದ ಜಿಯೋ ಸಿನೆಮಾದಲ್ಲಿ ಪ್ರಸಾರವಾಯಿತು.

ಇದನ್ನೂ ಓದಿ: Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

ಗ್ರ್ಯಾಂಡ್ ಫಿನಾಲೆಯ ಪ್ರಮುಖ ಅಂಶವೆಂದರೆ ರಣವೀರ್ ಶೋರೆ ಗಡ್ಡವಿಲ್ಲದೆ ಹೊಸ ಲುಕ್ ನಲ್ಲಿ ಆಗಮಿಸಿದ್ದರು. ಯಾಕೆಂದು ಕೇಳಿದಾಗ, ಫೈನಲ್ ತಲುಪಿದರೆ, ಗಡ್ಡವನ್ನು ತೆಗೆಯುವ ಬೆಟ್ ಕಟ್ಟಿದ್ದೆ ಎಂದರು.

ಬಿಗ್ ಬಾಸ್ ಒಟಿಟಿ 3 ರ ಫಿನಾಲೆಯಲ್ಲಿ ಇಬ್ಬರು ಆಶ್ಚರ್ಯಕರ ಅತಿಥಿಗಳು ಎಲಿಮಿನೇಷನ್ ಪ್ರಕ್ರಿಯೆಯ ಭಾಗವಾಗಿದ್ದರು. ಅವರೇ ರಾಜ್ ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅನಿಲ್, “ಬಿಗ್ ಬಾಸ್ ಒಟಿಟಿ 3 ನಂಬಲಾಗದ ಪ್ರಯಾಣವಾಗಿದೆ. ಇದು ನನ್ನಲ್ಲಿರುವ ಭಾವನೆಗಳನ್ನು ಹೊರತಂದಿದೆ ಎಂದರು.

ಬಿಗ್​​ಬಾಸ್ ಒಟಿಟಿ 3 ಬಗ್ಗೆ

ಸೆಲೆಬ್ರಿಟಿ ಸ್ಪರ್ಧಿಗಳು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯೊಳಗೆ ಇರಬೇಕಾಗಿದ್ದ ಈ ಶೋ ಜೂನ್ 21 ರಂದು ರಾತ್ರಿ 9 ಗಂಟೆಗೆ ಪ್ರಥಮ ಪ್ರದರ್ಶನ ಕಂಡಿತು. ಪೌಲೋಮಿ ಪೊಲೊ ದಾಸ್, ಸನಾ ಸುಲ್ತಾನ್, ವಿಶಾಲ್ ಪಾಂಡೆ, ಚಂದ್ರಿಕಾ ಗೆರಾ ದೀಕ್ಷಿತ್, ನೀರಜ್ ಗೋಯತ್ ಮತ್ತು ಅರ್ಮಾನ್ ಮಲಿಕ್ ಮತ್ತು ಅವರ ಇಬ್ಬರು ಹೆಂಡತಿಯರಾದ ಪಾಯಲ್ ಮತ್ತು ಕೃತಿಕಾ ಸ್ಪರ್ಧಿಗಳಾಗಿದ್ದರು. ಅದ್ನಾನ್ ಶೇಖ್ ಕೆಲವು ವಾರಗಳ ನಂತರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು.

ಮೂರನೇ ಸೀಸನ್​ಗೆ ಅನಿಲ್ ಕಪೂರ್ ನಿರೂಪಕರಾಗಿ ಪಾದಾರ್ಪಣೆ ಮಾಡಿದ್ದರು. ಕರಣ್ ಜೋಹರ್ ಕಾರ್ಯಕ್ರಮದ ಮೊದಲ ಸೀಸನ್ ಅನ್ನು ಹೋಸ್ಟ್ ಮಾಡಿದ್ದರು.

Continue Reading

Latest

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಹೆಸರೀಗ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಕೇಳಿ ಬರುತ್ತಿದೆ. ಈ ಹಿಂದೆ ನಟಿ ಹೆಸರು ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಕೇಳಿ ಬಂದಿತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್ ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಬೀರ್‌ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Kriti Sanon
Koo

ಕ್ರೂ, ಹಿರೊಪಂತಿ, ಮಿಮಿ, ದಿಲ್ವಾಲೆ, ಬರೇಲಿ ಕಿ ಬರ್ಫಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ (bollywood actress) ಕೃತಿ ಸನೋನ್ (Kriti Sanon) ಈಗ ಯುಕೆ ಮೂಲದ ಮಿಲಿಯನೇರ್ (UK based millionaire) ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಕೆಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದರು ಎನ್ನುವ ವದಂತಿ ಇತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್‌ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಕೃತಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಬೀರ್ ಬಹಿಯಾ ಯಾರು?

1999ರ ನವೆಂಬರ್‌ನಲ್ಲಿ ಜನಿಸಿದ ಕಬೀರ್ ಬಹಿಯಾ ಇಂಗ್ಲೆಂಡ್‌ನ ಮಿಲ್‌ಫೀಲ್ಡ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಅವರು ಯುಕೆ ಮೂಲದ ಉದ್ಯಮಿಯಾಗಿದ್ದು, ಲಂಡನ್‌ನ ರೀಜೆಂಟ್ಸ್ ಯೂನಿವರ್ಸಿಟಿಯಿಂದ ವ್ಯಾಪಾರ, ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಸಂಬಂಧಿತ ಬೆಂಬಲ ಸೇವೆಗಳ ಕುರಿತು ಅಧ್ಯಯನ ಪೂರ್ಣಗೊಳಿಸಿದ್ದಾರೆ.

Kriti Sanon
Kriti Sanon


ಯುಕೆಯಲ್ಲಿ ಸೌಥಾಲ್ ಟ್ರಾವೆಲ್ ಎಂಬ ಪ್ರಮುಖ ಟ್ರಾವೆಲ್ ಕಂಪನಿಯನ್ನು ನಡೆಸುತ್ತಿರುವ ಕುಲ್ಜಿಂದರ್ ಬಹಿಯಾ ಅವರ ಮಗ ಕಬೀರ್. 2019ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯ ಆಧರಿಸಿ ಹೇಳುವುದಾದರೆ ಕುಲ್ಜಿಂದರ್ ಮತ್ತು ಅವರ ಕುಟುಂಬವು 427 ಮಿಲಿಯನ್ ಪೌಂಡ್‌ಗಳ (ಸುಮಾರು 4590 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದೆ. ಕಬೀರ್ ತನ್ನದೇ ಆದ ಟ್ರಾವೆಲ್ ಕಂಪನಿಯಾದ ವರ್ಲ್ಡ್‌ವೈಡ್ ಏವಿಯೇಷನ್ ​​ಮತ್ತು ಟೂರಿಸಂ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದು, 2021ರ ಜೂನ್ ನಿಂದ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕಬೀರ್ ಉದ್ಯಮಿಯಾಗಿದ್ದರೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಅವರ ನೆಚ್ಚಿನ ಫುಟ್‌ಬಾಲ್ ಕ್ಲಬ್ ಬೊರುಸ್ಸಿಯಾ ಡಾರ್ಟ್‌ಮಂಡ್ ಆಗಿದೆ. ಅವರು ಹಲವಾರು ಭಾರತೀಯ ಕ್ರಿಕೆಟಿಗರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ಅವರಿಗೂ ಪರಿಚಿತರು

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿವಾಹ ಸಮಾರಂಭದಲ್ಲಿ ಕಬೀರ್ ಭಾಗವಹಿಸಿದ್ದರು. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಕುಟುಂಬದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 2024ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿಯೊಂದಿಗೆ ಕಬೀರ್ ಕಾಣಿಸಿಕೊಂಡಿದ್ದರು. ಕಬೀರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇಬ್ಬರೂ ಕ್ರಿಕೆಟಿಗರೊಂದಿಗೆ ಅನೇಕ ಚಿತ್ರಗಳನ್ನು ಹೊಂದಿದ್ದಾರೆ.

Kriti Sanon
Kriti Sanon


ಕೃತಿ ಸನೋನ್ ಜೊತೆ ಡೇಟಿಂಗ್ ವದಂತಿ

ಕೃತಿ ಮತ್ತು ಕಬೀರ್ ಹೊಸ ವರ್ಷವನ್ನು ಒಟ್ಟಿಗೆ ಆಚರಿಸುತ್ತಿರುವಾಗ ಅವರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. 2024ರ ಹೋಳಿ ಹಬ್ಬವನ್ನು ಕಬೀರ್ ಜೊತೆ ಕೃತಿ ನಡೆಸಿರುವುದಾಗಿ ಹೇಳುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದು ನಟಿಯ ಅಭಿಮಾನಿಗಳು ಕುತೂಹಲ ಕೆರಳಿಸಿದೆ. ಕಬೀರ್‌ಗಿಂತ ಒಂಬತ್ತು ವರ್ಷ ಹಿರಿಯರಾದ ಕೃತಿ ತನ್ನ ಸಹೋದರಿ ನೂಪುರ್ ಮೂಲಕ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

ಕೃತಿ ಸನೋನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ವೇಳೆ ಕಬೀರ್ ಜೊತೆ ಪ್ರವಾಸ ನಡೆಸಿರುವುದಾಗಿ ಕೇಳಿ ಬಂದಾಗ ಅವರಿಬ್ಬರ ಡೇಟಿಂಗ್ ಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಸದ್ಯ ನಟಿ ಕೃತಿ ತನ್ನ ಸಹೋದರಿ ನೂಪುರ್ ಸನೋನ್ ಮತ್ತು ಸ್ನೇಹಿತರೊಂದಿಗೆ ಗ್ರೀಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಲ್ಲಿ ಅಭಿಮಾನಿಗಳು ಕೃತಿ ಮತ್ತು ಕಬೀರ್ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿವೆ. ಇದನ್ನು ನೋಡಿರುವ ಅವರ ಅಭಿಮಾನಿಗಳು ನಟಿ ಕೃತಿ ತಮ್ಮ 34ನೇ ಹುಟ್ಟುಹಬ್ಬವನ್ನು ಕಬೀರ್ ಜೊತೆ ಆಚರಿಸಿದರು ಎಂಬುದಾಗಿ ಹೇಳುತ್ತಿದ್ದಾರೆ

Continue Reading

Latest

Actress Kiara Aadvani: ಬಿಕಿನಿ ಪ್ರಿಯರು ಕಿಯಾರಾ ಅಡ್ವಾಣಿಯ ಈ ಟಾಪ್ 5 ಬಿಕಿನಿ ಟ್ರೈ ಮಾಡಬಹುದು!

Actress Kiara Aadvani: ಬೀಚ್ ಎಂದರೆ ಎಲ್ಲರಿಗೂ ಇಷ್ಟ. ಇನ್ನು ಬೀಚ್‌ಗೆ ಹೋಗುವಾಗ ಚೂಡಿದಾರ್, ಸೀರೆಗಳಿಗಿಂತ ಹೆಚ್ಚು ಸೂಕ್ತವಾದದ್ದು ಬೀಚ್ ಡ್ರೆಸ್. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಬಿಡುವಿನ ಸಮಯದಲ್ಲಿ ಸ್ಟೈಲಿಶ್ ಬಿಕಿನಿ ಡ್ರೆಸ್‌ಗಳನ್ನು ಧರಿಸಿ ಬೀಚ್ ಸಮಯವನ್ನು ಎಂಜಾಯ್ ಮಾಡುತ್ತಾರಂತೆ. ಕಿಯಾರ ಅಡ್ವಾಣಿ ಅವರ ಟಾಪ್ 5 ಬಿಕಿನಿ ಡ್ರೆಸ್ ಬಗ್ಗೆ ಮಾಹಿತಿ ಇಲ್ಲಿದೆ. ನೀವು ಕೂಡ ಬೀಚ್ ಪ್ರಿಯರಾಗಿದ್ದರೆ, ಬೀಚ್‌ನಲ್ಲಿ ಬಿಕಿನಿ ಧರಿಸುವ ಆಸೆ ಇದ್ದರೆ ಈ ಡ್ರೆಸ್ ಟ್ರೈ ಮಾಡಬಹುದು!

VISTARANEWS.COM


on

Actress Kiara Aadvani
Koo


ಮುಂಬೈ : ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ (Actress Kiara Aadvani) ಅವರು ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಇನ್ನು ಇವರಿಗೆ ಬೀಚ್‌ ಎಂದರೆ ತುಂಬಾ ಇಷ್ಟ. ಹಾಗಾಗಿ ತಮ್ಮ ರಜಾದಿನಗಳು ಬಂತೆಂದರೆ ಕಿಯಾರಾ ಬೀಚ್‍ನತ್ತ ಮುಖಮಾಡುತ್ತಾರೆ. ಅಲ್ಲಿ ಅವರು ಸ್ಟೈಲಿಶ್ ಬಿಕಿನಿ ಡ್ರೆಸ್‍ಗಳನ್ನು ಧರಿಸಿ ಬೀಚ್ ಸಮಯವನ್ನು ಎಂಜಾಯ್‌ ಮಾಡುತ್ತಾರಂತೆ. ಇಲ್ಲಿ ಕಿಯಾರ ಅಡ್ವಾಣಿ ಅವರ ಟಾಪ್ 5 ಬಿಕಿನಿ ಡ್ರೆಸ್‌ ಬಗ್ಗೆ ಮಾಹಿತಿ ಇದೆ ನೋಡಿ.

Actress Kiar Aadvani
Actress Kiar Aadvani

ಸರೋಂಗ್ ಸ್ಕರ್ಟ್‍ನೊಂದಿಗೆ ಪ್ರಿಂಟೆಡ್ ಬಿಕಿನಿ:

ಕಿಯಾರಾ ಅಡ್ವಾಣಿ ಅವರು ಬೀಚ್‍ನಲ್ಲಿ ಆಕರ್ಷಕವಾಗಿ ಕಾಣಲು ಧರಿಸುವ ಬಿಕಿನಿಯಲ್ಲಿ ಸರೋಂಗ್ ಸ್ಕರ್ಟ್ ಪ್ರಿಂಟೆಡ್ ಬಿಕಿನಿ ಕೂಡ ಒಂದು. ಈ ಕಾಂಬೋ ಬೀಚ್‍ಗೆ ಹೋಗಲು ಸೂಕ್ತವಾಗಿದೆ. ಚಿತ್ರದಲ್ಲಿ ಕಿಯಾರಾ ರೆಡ್ ಸರೋಂಗ್ ಮತ್ತು ರೆಡ್ ಕಲರ್ ಪ್ರಿಂಟೆಡ್ ಬಿಕಿನಿ ಟಾಪ್ ಧರಿಸಿದ್ದಾರೆ. ಹಾಗೇ ಅವರು ತನ್ನ ಕೂದಲಿಗೆ ಸುತ್ತಿದ ಸ್ಕಾರ್ಫ್ ಮತ್ತು ಸನ್‍ಗ್ಲಾಸ್‍ಗಳು ಒಂದಕ್ಕೊಂದು ಸರಿಹೊಂದುವಂತೆ ಧರಿಸಿದ್ದಾರೆ. ಕಡಲತೀರದಲ್ಲಿ ತಲೆ ತಿರುಗುವ ಸಮಸ್ಯೆ ಇರುವವರಿಗೆ ಈ ಸ್ಟೈಲ್ ಸೂಕ್ತವಾಗಿದೆ ಏಕೆಂದರೆ ಇದು ಫ್ಯಾಶನ್ ಮಾತ್ರವಲ್ಲದೆ ಇದು ಆಯಾಸವಾಗದಂತೆ ರಕ್ಷಿಸುತ್ತದೆ.

Actress Kiar Aadvani
Actress Kiar Aadvani

ಸ್ಟ್ರಾಪ್ಲೆಸ್ ಹಳದಿ ಬಿಕಿನಿ:

ಬೀಚ್ ಉಡುಪುಗಳ ಮೇಲೆ ಹೊಸ ಸ್ಪಿನ್‍ಗಾಗಿ ಸ್ಟ್ರಾಪ್ ಲೆಸ್ ಆಗಿರುವ ಹಳದಿ ಬಿಕಿನಿಯನ್ನು ಆಯ್ಕೆ ಮಾಡಿ. ಕಿಯಾರಾ ಬಿಳಿ ಶರ್ಟ್ ಮತ್ತು ರೌಂಡ್ ಕ್ಯಾಪ್‌ನೊಂದಿಗೆ ತಮ್ಮ ನೋಟವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.

ಈ ಆಕರ್ಷಕ ಮತ್ತು ವಿಶಿಷ್ಟ ಸ್ಟೈಲ್ ನೊಂದಿಗೆ ನೀವು ಎಲ್ಲಿಗೆ ಹೋದರೂ ಖಂಡಿತವಾಗಿಯೂ ಬೇರೆಯವರ ಗಮನ ಸೆಳೆಯುತ್ತೀರಿ.

Actress Kiar Aadvani
Actress Kiar Aadvani

ಮಲ್ಟಿ-ಸ್ಟ್ರಿಪ್ ಬ್ಲ್ಯಾಕ್ ಬಿಕಿನಿ:

ನೀವು ಕ್ಲಾಸಿಕ್ ಮತ್ತು ಅಸಾಧಾರಣ ನೋಟವನ್ನು ಬಯಸಿದರೆ, ಮಲ್ಟಿ-ಸ್ಟ್ರಿಪ್ ಕಪ್ಪು ಬಿಕಿನಿಯನ್ನು ಪ್ರಯತ್ನಿಸಿ. ಕಿಯಾರಾ ಅಡ್ವಾಣಿ ಅವರ ಒಂದು ಭುಜದ ಮೇಲೆ ಮಾತ್ರ ಕಾಣುವ ಸ್ಟ್ರಿಪ್ ವಿನ್ಯಾಸ ಅತ್ಯಾಧುನಿಕತೆ ಮತ್ತು ಅನನ್ಯತೆಯ ಸ್ಪರ್ಶವನ್ನು ನೀಡುತ್ತದೆ. ಇದು ಯಾವುದೇ ಬೀಚ್‍ಗಳಲ್ಲಿ ರಜಾದಿನಗಳನ್ನು ಆನಂದಿಸಲು ಸೂಕ್ತವಾಗಿದೆ ಮತ್ತು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Actress Kiar Aadvani
Actress Kiar Aadvani

ದೊಡ್ಡದಾದ ಶರ್ಟ್‌ನೊಂದಿಗೆ ಬಿಕಿನಿ:

ನಿಮ್ಮ ಬಿಕಿನಿಯೊಂದಿಗೆ ದೊಡ್ಡದಾದ ಶರ್ಟ್ ಧರಿಸುವುದು ಮತ್ತೊಂದು ಅದ್ಭುತ ಬೀಚ್ ಉಡುಗೆಯಾಗಿದೆ. ಈ ಶೈಲಿಯನ್ನು ತೋರಿಸಲು ಕಿಯಾರಾ ದೊಡ್ಡ ಗಾತ್ರದ ಹಳದಿ ಶರ್ಟ್ ಒಳಗೆ ಬೂದು ಬಣ್ಣದ ಬಿಕಿನಿ ಧರಿಸಿದ್ದಾರೆ. ಈ ಉಡುಗೆ ಬೀಚ್‍ನಲ್ಲಿ ಆನಂದಿಸಲು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಫ್ಯಾಶನ್ ಮತ್ತು ಆರಾಮದಾಯಕವಾಗಿರುತ್ತದೆ.

Actress Kiar Aadvani
Actress Kiar Aadvani

ಬ್ಯಾಕ್ ಲೆಸ್ ಮಿನಿ ಡ್ರೆಸ್:

ಬಿಕಿನಿ ಧರಿಸಲು ಇಷ್ಟವಿಲ್ಲದವರು ಕಿಯಾರಾ ಅಡ್ವಾಣಿ ಧರಿಸಿರುವಂತೆ ಬ್ಯಾಕ್ ಲೆಸ್ ಮಿನಿಡ್ರೆಸ್ ಅನ್ನು ಪ್ರಯತ್ನಿಸಬಹುದು. ಈ ಉಡುಗೆಯು ಅತ್ಯಾಧುನಿಕತೆಯ ಲುಕ್ ಅನ್ನು ನೀಡುವುದರ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಸನ್‍ಗ್ಲಾಸ್ ಮತ್ತು ರೌಂಡ್ ಟೋಪಿಯನ್ನು ಧರಿಸಬಹುದು. ಇದು ನಿಮಗೆ ಸುಂದರ ನೋಟವನ್ನು ನೀಡುವುದರ ಜೊತೆ ಸ್ಟೈಲಿಶ್ ಆಗಿ ಕಾಣಿಸುತ್ತದೆ.

Continue Reading
Advertisement
Champions Trophy 2025
ಪ್ರಮುಖ ಸುದ್ದಿ6 mins ago

Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

Viral Video
ವೈರಲ್ ನ್ಯೂಸ್7 mins ago

Viral Video: ಪ್ರವಾಹದಲ್ಲಿ ಸಿಲುಕಿದ ನಾಯಿಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ ರವಾನೆ; ಮಾನವೀಯತೆ ಅಂದ್ರೆ ಇದು!

Best Teacher Award
ಕರ್ನಾಟಕ10 mins ago

Best Teacher Award: ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

Union Minister Pralhad Joshi latest statement at Mysore Chalo Padayatra
ಕರ್ನಾಟಕ28 mins ago

BJP-JDS Padayatra: ವಾಲ್ಮೀಕಿ ನಿಗಮ, ಮುಡಾ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೇರ್ ಹೋಲ್ಡರ್: ಪ್ರಲ್ಹಾದ್‌ ಜೋಶಿ ಆರೋಪ

Farmer dies after falling under power tiller wheel in Moralli village
ಉತ್ತರ ಕನ್ನಡ30 mins ago

Farmer Death: ಪವರ್ ಟಿಲ್ಲರ್ ಚಕ್ರಕ್ಕೆ ಸಿಲುಕಿ ರೈತ ದಾರುಣ ಸಾವು

KHIR City project Launch on August 23 at bengaluru says Minister MB Patil
ಕರ್ನಾಟಕ32 mins ago

KHIR City: ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ‘ನಾಲೆಡ್ಜ್, ಹೆಲ್ತ್, ಇನ್ನೋವೇಶನ್ ಆಂಡ್ ರೀಸರ್ಚ್ ಸಿಟಿ’; ಆ.23ರಂದು ಉದ್ಘಾಟನೆ

IND vs SL ODI
ಪ್ರಮುಖ ಸುದ್ದಿ34 mins ago

IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

Indian Organ Donation Day program inauguration by Minister Dinesh Gundurao at Belagavi
ಕರ್ನಾಟಕ40 mins ago

Belagavi News: ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳಿಗೆ ಗೌರವ; ದಿ‌ನೇಶ್ ಗುಂಡೂರಾವ್

Minister MB Patil statement in janandolana programme by congress party at ramanagara
ಕರ್ನಾಟಕ46 mins ago

MB Patil: ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ, ಜೆಡಿಎಸ್ ಷಡ್ಯಂತ್ರ; ಎಂ‌.ಬಿ. ಪಾಟೀಲ ಆರೋಪ

Wayanad Tragedy
Latest48 mins ago

Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ9 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌