Gauri Khan: ಶಾರುಖ್‌ ಮಗನ ಬ್ರ್ಯಾಂಡ್‌ ಜಾಕೆಟ್ ಧರಿಸಿ ಗೌರಿ ಖಾನ್‌ ಜತೆ ಪೋಸ್‌ ಕೊಟ್ಟ ಎಡ್ ಶೀರಾನ್! - Vistara News

ಬಾಲಿವುಡ್

Gauri Khan: ಶಾರುಖ್‌ ಮಗನ ಬ್ರ್ಯಾಂಡ್‌ ಜಾಕೆಟ್ ಧರಿಸಿ ಗೌರಿ ಖಾನ್‌ ಜತೆ ಪೋಸ್‌ ಕೊಟ್ಟ ಎಡ್ ಶೀರಾನ್!

Gauri Khan: ಗಾಯಕ ಎಡ್ ಶೀರನ್ ಅವರು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ʻಡಿ’ಯಾವೋಲ್ ಎಕ್ಸ್‌ ಬ್ರ್ಯಾಂಡ್‌ ಜಾಕೆಟ್ ಧರಿಸಿದ್ದರು. ಈಗಾಗಲೇ ಎಡ್ ಶೀರಾನ್ ಅವರಿಗೆ ಶಾರುಖ್‌ ತಮ್ಮ ಸಿಗ್ನೇಚರ್ ಭಂಗಿಯನ್ನು ಕಲಿಸಿಕೊಟ್ಟಿರುವ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Gauri Khan parties with Ed Sheeran at her Mumbai restaurant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಗೌರಿ ಖಾನ್ (Gauri Khan ) ಅವರು ʻಟೋರಿʼ ಎಂಬ ಹೆಸರಿನ ರೆಸ್ಟೋರೆಂಟ್ ಪ್ರಾರಂಭಿಸಿದ್ದು ಗೊತ್ತೇ ಇದೆ. ಮುಂಬೈನಲ್ಲಿರುವ ಟೋರಿ ರೆಸ್ಟೋರೆಂಟ್‌ನಲ್ಲಿ ‘ಶೇಪ್ ಆಫ್ ಯು’ ಹಾಡಿನ ಖ್ಯಾತ ಗಾಯಕ  ಎಡ್ ಶೀರಾನ್ ಅವರು ಆತಿಥ್ಯ ವಹಿಸಿದ್ದರು. ಫರಾ ಖಾನ್ ಮತ್ತು ಅನೇಕ ಇತರ ಗಣ್ಯ ವ್ಯಕ್ತಿಗಳು ಈ ವೇಳೆ ಕಾಣಿಸಿಕೊಂಡಿದ್ದರು. ಗಾಯಕ ಎಡ್ ಶೀರಾನ್ ಜತೆ ಗೌರಿ ಖಾನ್ ಪೋಸ್‌ ಕೊಟ್ಟ ವಿಡಿಯೊ ಇದೀಗ ವೈರಲ್‌ ಆಗಿದೆ.

ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಮುಂಬರುವ ಸಂಗೀತ ಕಾರ್ಯಕ್ರಮಕ್ಕಾಗಿ ಎಡ್ ಶೀರನ್ ಭಾರತದಲ್ಲಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಬಂದ ಗೌರಿ ಖಾನ್‌ ಅವರು ನೀಲಿ ಬಣ್ಣದ ಉಡುಪಿನಲ್ಲಿ ಕಾಣುತ್ತಿದ್ದರು. ವಿಶೆಷವಾಗಿ ಎಡ್ ಶೀರನ್ ಅವರು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ʻಡಿ’ಯಾವೋಲ್ ಎಕ್ಸ್‌ ಬ್ರ್ಯಾಂಡ್‌ ಜಾಕೆಟ್ ಧರಿಸಿದ್ದರು. ಈಗಾಗಲೇ ಎಡ್ ಶೀರಾನ್ ಅವರಿಗೆ ಶಾರುಖ್‌ ತಮ್ಮ ಸಿಗ್ನೇಚರ್ ಭಂಗಿಯನ್ನು ಕಲಿಸಿಕೊಟ್ಟಿರುವ ವಿಡಿಯೊ ವೈರಲ್‌ ಆಗಿದೆ.

ಗೌರಿ ಪಾರ್ಟಿಯ ಕೆಲವು ಕ್ಯಾಂಡಿಡ್ ಫೋಟೊಗಳನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಎಡ್ ಶೀರಾನ್ ನಿಮ್ಮ ಹಾಡು ಕೇಳುವುದೇ ನಮಗೆ ಒಂದು ಸೋತೋಷದ ವಿಚಾರ. ನಮ್ಮೊಂದಿಗೆ ಸಮಯ ಕಳೆದಿದ್ದಕ್ಕಾಗಿ ಧನ್ಯವಾದಗಳುʼʼ‌ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Save Water: ಬನ್ನಿ ಜೀವ ಜಲ ಉಳಿಸೋಣ; ನೀರನ್ನು ಗೌರವಿಸೋಣ! ಇದು ವಿಸ್ತಾರ ನ್ಯೂಸ್‌ ಕಳಕಳಿ

ಮಾ.12ರಂದು ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ಅವರನ್ನು ಎಡ್ ಶೀರಾನ್ ಭೇಟಿಯಾಗಿದ್ದರು. 2020ರ ಚಲನಚಿತ್ರ ‘ಅಲಾ ವೈಕುಂಠಪುರಮುಲು’ ಹಿಟ್ ಹಾಡು ‘ಬುಟ್ಟ ಬೊಮ್ಮ’ಗೆ ಈ ಜೋಡಿ ನೃತ್ಯ ಮಾಡಿತ್ತು. ಮಾರ್ಚ್ 16ರಂದು ಮುಂಬೈನಲ್ಲಿ ಪ್ರದರ್ಶನ ನೀಡಲು ʻಎಡ್ ಶೀರಾನ್ʼ ರೆಡಿಯಾಗುತ್ತಿದ್ದಾರೆ. ಗಾಯಕ ಪ್ರತೀಕ್ ಕುಹದ್ ಸಹ ಅವರೊಂದಿಗೆ ಪ್ರದರ್ಶನ ನೀಡಲಿದ್ದಾರೆ.

ಸಂಗೀತ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಭೇಟಿ ನೀಡಿದ ಎಡ್ ಅವರನ್ನು ಅನೇಕ ತಾರೆಯರು ಭೇಟಿಯಾಗಿ ಶುಭಾಶಯ ಕೋರಿದರು. ಫರಾ ಖಾನ್ ಕ್ಯಾಶುಯಲ್ ಕೆಂಪು ಟಾಪ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದರು. ಉದ್ಯಮಿ ತನಾಜ್ ಭಾಟಿಯಾ ಕೂಡ ಫರಾ ಅವರೊಂದಿಗೆ ಪೋಸ್ ನೀಡಿದರು. ಚಿತ್ರ ನಿರ್ಮಾಪಕ ಕಬೀರ್ ಖಾನ್ ಮತ್ತು ನಟ-ಪತ್ನಿ ಮಿನಿ ಮಾಥೂರ್ ಕೂಡ ರೆಸ್ಟೋರೆಂಟ್‌ಗೆ ಬಂದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

The RajaSaab Movie: ‘ದಿ ರಾಜಾಸಾಬ್’; ಎಲ್ಲರ ಗಮನ ಸೆಳೆಯುತ್ತಿದೆ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌!

The RajaSaab Movie: ರೆಬೆಲ್‌ ಸ್ಟಾರ್‌ ಪ್ರಭಾಸ್‌ ಅಭಿನಯದ ಪ್ಯಾನ್‌ ಇಂಡಿಯಾ ಚಿತ್ರ “ದಿ ರಾಜಾಸಾಬ್” ಸಣ್ಣ ಝಲಕ್‌ ಅನ್ನು ಸೋಮವಾರ ಚಿತ್ರತಂಡ ಬಿಡುಗಡೆ ಮಾಡಿದೆ. . ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ. ಗ್ಲಿಂಪ್ಸ್‌ ಜತೆಗೆ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿದೆ. ‘ರಾಜಾ ಸಾಬ್’ 2025ರ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Rebel star Prabhas starrer The Rajasaab short glimpse released
Koo

ಬೆಂಗಳೂರು: ಗೆಲುವಿನ ಲಯಕ್ಕೆ ಮರಳಿರುವ ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌, ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಗ್ಲಿಂಪ್ಸ್‌ ಮೂಲಕ ಮತ್ತೆ ಫ್ಯಾನ್ಸ್‌ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಚಿತ್ರ “ದಿ ರಾಜಾಸಾಬ್” (The RajaSaab Movie) ಸಣ್ಣ ಝಲಕ್‌ ಅನ್ನು ಸೋಮವಾರ ಚಿತ್ರತಂಡ ಬಿಡುಗಡೆ ಮಾಡಿದೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌ ಎಲ್ಲರ ಗಮನ ಸೆಳೆಯುತ್ತಿದೆ.

ಗ್ಲಿಂಪ್ಸ್‌ ಜತೆಗೆ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿದೆ. ‘ರಾಜಾ ಸಾಬ್’ 2025ರ ಏಪ್ರಿಲ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಬರೀ ತೆಲುಗಿನಲ್ಲಷ್ಟೇ ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿಯೂ ರಾಜಾಸಾಬ್‌ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾದರೆ, ಇದ್ಯಾವ ರೀತಿಯ ಸಿನಿಮಾ? ರೋಮ್ಯಾಂಟಿಕ್ ಹಾರರ್ ಕಾಮಿಡಿಯಲ್ಲಿ ಪ್ರಭಾಸ್‌ ಎಲ್ಲರನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಮಾರುತಿ ಈ ಸಿನಿಮಾ ಮೂಲಕ ಪ್ರಭಾಸ್‌ ಅವರನ್ನು ಇನ್ನಷ್ಟು ಸ್ಟೈಲಿಶ್ ಲುಕ್‌ನಲ್ಲಿ ತೋರಿಸಲಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜುಲೈ 30ರಂದು ಭಾರತದ ವೇಳಾಪಟ್ಟಿ ಈ ರೀತಿ ಇದೆ

ಈಗಾಗಲೇ ಶೇ. 40% ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮತ್ತೊಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. ಎಸ್‌ಎಸ್ ಥಮನ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ರಾಮ್ ಲಕ್ಷ್ಮಣ್ ಮಾಸ್ಟರ್ಸ್ ಮತ್ತು ಕಿಂಗ್ ಸೊಲೊಮನ್ ಫೈಟ್ ಕೊರಿಯೋಗ್ರಫಿಯನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಭರ್ಜರಿ ಆಕ್ಷನ್‌ ನಿರೀಕ್ಷಿಸಬಹುದಾಗಿದೆ. ಬಾಹುಬಲಿ ಖ್ಯಾತಿಯ ಕಮಲಾ ಕಣ್ಣನ್ ಆರ್.ಸಿ. ವಿಎಫ್‌ಎಕ್ಸ್‌ನ ಉಸ್ತುವಾರಿ ವಹಿಸಿಕೊಂಡಿದ್ದು, ದೊಡ್ಡ ಪರದೆಯ ಮೇಲೆ ದೃಶ್ಯ ಚಮತ್ಕಾರ ನೀಡಲಿದೆ.

ಮಾರುತಿ ನಿರ್ದೇಶನದ ರಾಜಾ ಸಾಬ್‌ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ರಾಜಾ ಸಾಬ್ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಪ್ರತಿ ರೋಜು ಪಂಡಗʼ, ತೆಲುಗಿನ ಹಾರರ್ ಕಾಮಿಡಿ ‘ಪ್ರೇಮ ಕಥಾ ಚಿತ್ರಂʼ ಮತ್ತು ರೊಮ್ಯಾಂಟಿಕ್ ಕಾಮಿಡಿ ‘ಮಹಾನುಭಾವುಡು’ ಸೇರಿ ಹಲವು ಸೂಪರ್‌ಹಿಟ್‌ಗಳಿಗೆ ಸಿನಿಮಾ ನಿರ್ದೇಶನ ಮಾಡಿದ ಮಾರುತಿ, ಇದೀಗ ರಾಜಾಸಾಬ್‌ ಮೂಲಕ ರೊಮ್ಯಾಂಟಿಕ್ ಹಾರರ್ ಎಂಟರ್ಟೈನರ್ ಜತೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: Pralhad Joshi: ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ: ಪ್ರಲ್ಹಾದ್‌ ಜೋಶಿ

‘ಕಾರ್ತಿಕೇಯ 2’ ಮತ್ತು ‘ಧಮಾಕಾ’ ಸೇರಿ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ತೆಲುಗು ಚಿತ್ರೋದ್ಯಮದಲ್ಲಿ ಪ್ರಮುಖ ಹೆಸರು. ಇದೀಗ ಬಹುಕೋಟಿ ವೆಚ್ಚದಲ್ಲಿ ರಾಜಾ ಸಾಬ್ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಅದ್ಧೂರಿಯಾಗಿ, ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದರೆ, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಂಗೀತವನ್ನು ಎಸ್‌ಎಸ್‌ ಥಮನ್ ಮಾಡಿದರೆ, ರಾಮ್ ಲಕ್ಷ್ಮಣ್ ಮತ್ತು ಕಿಂಗ್ ಸೊಲೊಮನ್ ಸವರ ಸಾಹಸ ಈ ಚಿತ್ರಕ್ಕಿರಲಿದೆ.

Continue Reading

Latest

Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

Bollywood Divorce Case: ಮದುವೆ ಎನ್ನುವುದು ಮಧುರವಾದ ಬಂಧ, ಸತಿ-ಪತಿಯರಿಬ್ಬರೂ ಸುಖವಾಗಿ ಬಾಳಿ ಬದುಕಿದರೆ ಜೀವನವೇ ಸ್ವರ್ಗ.ಆದರೆ ಈಗ ಮದುವೆಯಾಗಿ ಮೂರೇ ನಿಮಿಷಕ್ಕೆ ವಿಚ್ಛೇದನ ನೀಡುವವರು ಇದ್ದಾರೆ. ವಿಚ್ಛೇದನದ ಪಾರ್ಟಿಯನ್ನು ಆಚರಿಸುವವರು ಇದ್ದಾರೆ. ಇನ್ನು ಸಿನಿಮಾ ರಂಗದಲ್ಲಂತೂ ಇದನ್ನು ಕೇಳುವುದೇ ಬೇಡ. ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದೇನೋ. ಬಾಲಿವುಡ್ ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಮನೆಮಾತಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

VISTARANEWS.COM


on

Bollywood Divorce Case
Koo

ಮುಂಬೈ: ಈಗಿನ ಕಾಲದಲ್ಲಿ ಲವ್, ಬ್ರೇಕ್ ಅಪ್, ಮದುವ , ವಿಚ್ಛೇದನ ಎಲ್ಲಾ ಕಾಮನ್ ಆಗಿ ಬಿಟ್ಟಿದೆ. ಲವ್ ಮಾಡಿ ಮದುವೆಯಾಗಿ ನಂತರ ಕೆಲವೇ ದಿನಗಳಲ್ಲಿ ವಿಚ್ಛೇದನ ನೀಡುವುದು ಸೆಲೆಬ್ರಿಟಿಗಳಲ್ಲಿ ಸಾಮಾನ್ಯ. ಆದರೆ ಈಗ ಸಾಮಾನ್ಯ ಜನರೂ ಇದೇ ನಿಯಮವನ್ನು ಅನುಸರಿಸುತ್ತಿದ್ದಾರೆ! ಮದುವೆಯಾದ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧದಲ್ಲಿದ್ದ ಸಿನಿಮಾ ತಾರೆಯರು ಬೆರಳೆಣಿಕೆಯಷ್ಟು ಮಾತ್ರ! ಬಾಲಿವುಡ್ (Bollywood Divorce Case) ಸಿನಿಮಾ ತಾರೆಯರಲ್ಲಿ ಹಲವರು ಮದುವೆ ಆಗಿ ಸ್ವಲ್ಪ ದಿನದಲ್ಲೇ ವಿಚ್ಛೇದನ ಪಡೆದು ಪತ್ನಿಗೆ ಅತಿ ಹೆಚ್ಚು ಜೀವನಾಂಶ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಅಂತಹ ಬಾಲಿವುಡ್ ಸಿನಿಮಾ ತಾರೆಯರ ಬಗ್ಗೆ ಇಲ್ಲಿದೆ ಕುತೂಹಲಕರ ಮಾಹಿತಿ.

Bollywood Divorce Case
Bollywood Divorce Case

ಹೃತಿಕ್ ರೋಷನ್- ಸುಸ್ಸೇನ್ ಖಾನ್

ಬಾಲಿವುಡ್‌ನ ʼಗ್ರೀಕ್ ದೇವರುʼ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ 2000ರಲ್ಲಿ ಪ್ರಸಿದ್ಧ ಇಂಟಿರಿಯರ್ ಡಿಸೈನರ್ ಸುಸ್ಸೇನ್ ಖಾನ್ ಅವರನ್ನು ವಿವಾಹವಾದರು. ಹೊರಗಿನವರಿಗೆ ಸುಂದರವಾಗಿ ಕಾಣುತ್ತಿದ್ದ ಇವರ ವೈವಾಹಿಕ ಜೀವನವು 2014ರಲ್ಲಿ ಕೊನೆಗೊಂಡಿತು. ಇವರ ವಿಚ್ಛೇದನ ಒಪ್ಪಂದವು ಬಾಲಿವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಗಿತ್ತು. ಯಾಕೆಂದರೆ ಹೃತಿಕ್ ರೋಷನ್‌ ಅವರು ಸುಸ್ಸೇನ್‌ಗೆ ಸುಮಾರು 380 ಕೋಟಿ ರೂ. ಜೀವನಾಂಶ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

Bollywood Divorce Case
Bollywood Divorce Case

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

ಕಪೂರ್ ಕುಟುಂಬದ ವಂಶಸ್ಥರಾದ ಕರಿಷ್ಮಾ ಕಪೂರ್ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾದ ಹಿನ್ನಲೆಯಲ್ಲಿ ಇವರು 2014ರಲ್ಲಿ ಬೇರೆಬೇರೆಯಾದರು. ಕರಿಷ್ಮಾ ಅವರಿಗೆ ಸಂಜಯ್ ಜೀವನಾಂಶವಾಗಿ 14 ಕೋಟಿ ರೂ. ಬಾಂಡ್, ಮುಂಬೈನಲ್ಲಿ ಐಷಾರಾಮಿ ಮನೆ ಮತ್ತು ಅವರ ಮಕ್ಕಳ ಜೀವನಕ್ಕಾಗಿ ಹಣವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Bollywood Divorce Case
Bollywood Divorce Case

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್

ನಟ ಸೈಫ್ ಅಲಿ ಖಾನ್ 1991ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾದರು. ಈ ದಂಪತಿಗೆ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದರು. ಹದಿಮೂರು ವರ್ಷಗಳ ದಾಂಪತ್ಯದ ನಂತರ, ಅವರು 2004ರಲ್ಲಿ ವಿಚ್ಛೇದನ ಪಡೆದರು. ಸೈಫ್ ಅಮೃತಾಗೆ ಜೀವನಾಂಶವಾಗಿ 5 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಹೆಚ್ಚುವರಿಯಾಗಿ, ತಮ್ಮ ಮಗ ಪ್ರೌಢಾವಸ್ಥೆಗೆ ತಲುಪುವವರೆಗೆ ತಿಂಗಳಿಗೆ 1 ಲಕ್ಷ ರೂ.ಗಳನ್ನು ಪಾವತಿಸಲು ಅವರು ಬದ್ಧರಾಗಿದ್ದಾರೆ.

Bollywood Divorce Case
Bollywood Divorce Case

ಅಮೀರ್ ಖಾನ್ ಮತ್ತು ರೀನಾ ದತ್ತಾ

ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. 2002ರಲ್ಲಿ ಅವರ ವಿವಾಹವು ಕೊನೆಗೊಂಡಿದೆ. ವಿಚ್ಛೇದನ ನಂತರ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ರೀನಾಗೆ ಸುಮಾರು 50 ಕೋಟಿ ರೂ.ಗಳನ್ನು ನೀಡಿರುವುದಾಗಿ ಅಮೀರ್ ಖಾನ್ ಖಚಿತಪಡಿಸಿದ್ದಾರೆ.

Bollywood Divorce Case
Bollywood Divorce Case

ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ

ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ 2000ರಲ್ಲಿ ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ ಅಧುನಾ ಭಬಾನಿ ಅವರನ್ನು ವಿವಾಹವಾದರು. ಹದಿನಾರು ವರ್ಷಗಳ ದಾಂಪತ್ಯದ ನಂತರ, ಅವರು 2016ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಹಾಗೇ ಪತ್ನಿಗೆ ದುಬಾರಿ ಜೀವನಾಂಶದ ಜೊತೆಗೆ ಬಂಗಲೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಖರ್ಚುವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ.

Bollywood Divorce Case
Bollywood Divorce Case

ಸಂಜಯ್ ದತ್ ಮತ್ತು ರಿಯಾ ಪಿಳ್ಳೈ

ರೂಪದರ್ಶಿ ರಿಯಾ ಪಿಳ್ಳೈ ಅವರೊಂದಿಗಿನ ಸಂಜಯ್ ದತ್ ಅವರ ಎರಡನೇ ಮದುವೆಯಾದರು. 2008ರಲ್ಲಿ ಇವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು ಸಂಜಯ್ ರಿಯಾಗೆ ದುಬಾರಿ ಜೀವನಾಂಶವನ್ನು ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಲ್ಲಿ ಮುಂಬೈನಲ್ಲಿ ಸಮುದ್ರದ ಕಡೆಗೆ ಮುಖವಿದ್ದ ಎರಡು ಐಷಾರಾಮಿ ಅಪಾರ್ಟ್ಮೆಂಟ್‍ಗಳು ಮತ್ತು ಒಂದು ಕಾರನ್ನು ನೀಡಲಾಗಿದೆ.

ಇದನ್ನೂ ಓದಿ: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Bollywood Divorce Case
Bollywood Divorce Case

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ

ನಟ-ನಿರ್ಮಾಪಕ ಮತ್ತು ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ನಟಿ ಮತ್ತು ರೂಪದರ್ಶಿ ಮಲೈಕಾ ಅರೋರಾ ಅವರನ್ನು 1998ರಲ್ಲಿ ವಿವಾಹವಾದರು. ಸ್ಟೈಲಿಶ್ ನೋಟಗಳಿಗೆ ಹೆಸರುವಾಸಿಯಾದ ದಂಪತಿಗಳು 2016ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು ಮತ್ತು 2017ರಲ್ಲಿ ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಂಡರು. ಈ ಒಪ್ಪಂದದಲ್ಲಿ ಅರ್ಬಾಜ್ ಮಲೈಕಾಗೆ ಸುಮಾರು 10-15 ಕೋಟಿ ರೂ.ಗಳ ದುಬಾರಿ ಜೀವನಾಂಶವನ್ನು ನೀಡಿದ್ದಾರೆ ಮತ್ತು ಅವರ ಮಗ ಅರ್ಹಾನ್ ಅವರ ಸಂಪೂರ್ಣ ಖರ್ಚುವೆಚ್ಚವನ್ನು ನೋಡಿಕೊಳ್ಳುವುದಾಗಿ ವರದಿಯಾಗಿದೆ.

Continue Reading

ದೇಶ

Ranbir Kapoor: ಮೋದಿಯದ್ದು ‘ಆಯಸ್ಕಾಂತದಂಥ ವ್ಯಕ್ತಿತ್ವ’ ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು?

Ranbir Kapoor: ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. ರಣಬೀರ್‌ ಕಪೂರ್‌ ಸೇರಿ ಹಲವು ನಟರು, ನಿರ್ದೇಶಕರು ಮೋದಿ ಅವರನ್ನು ಭೇಟಿಯಾಗಲು ಹೋದಾಗ ಮೋದಿ ಅವರು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಸೇರಿ ಹಲವು ವಿಷಯಗಳ ಕುರಿತು ರಣಬೀರ್‌ ಕಪೂರ್‌ ಪ್ರಸ್ತಾಪಿಸಿದರು.

VISTARANEWS.COM


on

Ranbir Kapoor
Koo

ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯದ ಹೊರತಾಗಿಯೂ ಮೋದಿ ಅವರ ಶ್ರಮ, ವ್ಯಕ್ತಿತ್ವವನ್ನು ಮೆಚ್ಚುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರ ಕುರಿತು ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೆರೋದಾ ಸಂಸ್ಥಾಪಕ, ಕನ್ನಡಿಗ ನಿಖಿಲ್‌ ಕಾಮತ್‌ (Nikhil Kamath) ಅವರೊಂದಿಗಿನ ಪಾಡ್‌ಕಾಸ್ಟ್‌ ವೇಳೆ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ನಿಖಿಲ್‌ ಕಾಮತ್‌ ಕೇಳಿದ ಪ್ರಶ್ನೆಗೆ ರಣಬೀರ್‌ ಕಪೂರ್‌ ಉತ್ತರಿಸಿದರು. “ನಾನು ರಾಜಕೀಯದ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ಆದರೆ, 4-5 ವರ್ಷಗಳ ಹಿಂದೆ ನಾನು ಸೇರಿ ಹಲವು ನಟರು ಹಾಗೂ ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೋಗಿದ್ದೆವು. ನೀವು ಮೋದಿ ಅವರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಟಿ.ವಿಯಲ್ಲಿ ನೋಡಿರುತ್ತೀರಿ. ನಮಗೂ ಕೂಡ ಅವರ ಆಯಸ್ಕಾಂತದಂತಹ ವ್ಯಕ್ತಿತ್ವದ ಅರಿವಾಯಿತು” ಎಂಬುದಾಗಿ ರಣಬೀರ್‌ ಕಪೂರ್‌ ಹೇಳಿದರು.

“ನಾವು ಅವರನ್ನು ಭೇಟಿಯಾಗಲು ಹೋಗಿದ್ದೆವು. ನಾವು ಕುಳಿತಿದ್ದಾಗ ಅವರು ಬಂದು ನಮ್ಮ ಜತೆ ಕುಳಿತರು. ಅವರು ಪ್ರತಿಯೊಬ್ಬರ ಜತೆಗೂ ಮಾತನಾಡಿದರು. ಪ್ರತಿಯೊಬ್ಬರ ವೈಯಕ್ತಿಕ ವಿಚಾರಗಳ ಬಗ್ಗೆ ಕೇಳಿದರು. ಆಗ ನನ್ನ ತಂದೆಯು ಚಿಕಿತ್ಸೆ ಪಡೆಯುತ್ತಿದ್ದರು. ಅದರ ಬಗ್ಗೆಯೂ ಮೋದಿ ಅವರು ಕೇಳಿದರು. ವಿಕ್ಕಿ ಕೌಶಲ್‌, ಕಿರಣ್‌ ಜೋಹರ್‌ ಸೇರಿ ಹಲವರ ವೈಯಕ್ತಿಕ ವಿಚಾರಗಳ ಕುರಿತು ಕೂಡ ಮೋದಿ ಮಾತನಾಡಿದರು. ಅದ್ಭುತ ವ್ಯಕ್ತಿಗಳು, ಸಾಧಕರು ಮಾತ್ರ ಇಷ್ಟೊಂದು ಶ್ರಮ ವಹಿಸಲು ಸಾಧ್ಯ. ಶಾರುಖ್‌ ಖಾನ್‌ ಸೇರಿ ಹಲವು ಸಾಧಕರು ಇಷ್ಟು ಶ್ರಮ ಹಾಕಲು ಸಾಧ್ಯ” ಎಂಬುದಾಗಿ ರಣಬೀರ್‌ ಕಪೂರ್‌ ಅವರು ಮೋದಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಿಖಿಲ್‌ ಕಾಮತ್‌ ಕೂಡ ಬಣ್ಣನೆ

ನರೇಂದ್ರ ಮೋದಿ ಅವರ ಜತೆಗೆ ಸಮಯ ಕಳೆದ ಅನುಭವದ ಕುರಿತು ನೀವು ಹೇಳಿ ಎಂಬುದಾಗಿ ರಣಬೀರ್‌ ಕಪೂರ್‌ ಅವರು ಕೇಳಿದಾಗ ನಿಖಿಲ್‌ ಕಾಮತ್‌ ಕೂಡ ಮೋದಿ ಬಗ್ಗೆ ಮೆಚ್ಚಗೆಯ ಮಾತುಗಳನ್ನಾಡಿದ್ದರು. “ನರೇಂದ್ರ ಮೋದಿ ಅವರ ಜತೆ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ನಾವು ಅಮೆರಿಕದಲ್ಲಿದ್ದಾಗ ಮೋದಿ ಅವರು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದರು. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಒಂದಲ್ಲ ಒಂದು ಕಾರ್ಯಕ್ರಮ, ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಅವರ ವಯಸ್ಸಿನಲ್ಲಿ, ಅವರಷ್ಟು ಶ್ರಮ ವಹಿಸುವುದು ನನಗೆ ಅಚ್ಚರಿಯಾಯಿತು. ಅವರು ಕೂಡ ನನಗೆ ಸ್ಫೂರ್ತಿ” ಎಂದು ನಿಖಿಲ್‌ ಕಾಮತ್‌ ತಿಳಿಸಿದ್ದಾರೆ.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Continue Reading

ಬಾಲಿವುಡ್

Deepika Padukone: ದೀಪಿಕಾ ಜತೆ ಹಸಿ ಬಿಸಿ ದೃಶ್ಯಗಳನ್ನು ನಿಭಾಯಿಸಿದ್ದು ಅಷ್ಟು ಸುಲಭವಾಗಿರಲಿಲ್ಲ ಎಂದ ಸಿದ್ಧಾಂತ್ ಚತುರ್ವೇದಿ!

Deepika Padukone: ಇಂಟಿಮೇಟ್ ದೃಶ್ಯಗಳನ್ನು ನಿಭಾಯಿಸುವಾಗ ಹಲವಾರು ಸವಾಲುಗಳಿತ್ತು ಎಂದು ನಟ ಸಿದ್ಧಾಂತ್ ಚತುರ್ವೇದಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಜತೆ ಕೆಲವು ದೃಶ್ಯಗಳನ್ನು ನಿಭಾಯಿಸುವಾಗ ಬಹಳ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Deepika Padukone Were Not Easy Task For Siddhant Chaturvedi Gehraiyaan Deepika Padukone Were Not Easy Task For Siddhant Chaturvedi Gehraiyaan
Koo

ಬೆಂಗಳೂರು: 2022ರಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ʻಗೆಹ್ರೈಯಾನ್ʼ ಸಿನಿಮಾ ಪ್ರೆಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದಲ್ಲಿ ಇಂಟಿಮೇಟ್ ದೃಶ್ಯಗಳು ಪ್ರಮುಖ ಹೈಲೈಟ್‌ ಆಗಿದ್ದವು. ಅನನ್ಯಾ ಪಾಂಡೆ, ಕನುಪ್ರಿಯಾ ಗುಪ್ತಾ, ಧೈರ್ಯ ಕರ್ವಾ, ಯಾಮಿನಿ ಜೋಶಿ ಮತ್ತು ನಾಸಿರುದ್ದೀನ್ ಶಾ ಸೇರಿದಂತೆ ಅನೇಕ ಪ್ರಮುಖ ನಟರನ್ನು ಒಳಗೊಂಡ ಸಿನಿಮಾ ಇದು. ಇಂಟಿಮೇಟ್ ದೃಶ್ಯಗಳನ್ನು ನಿಭಾಯಿಸುವಾಗ ಹಲವಾರು ಸವಾಲುಗಳಿತ್ತು ಎಂದು ನಟ ಸಿದ್ಧಾಂತ್ ಚತುರ್ವೇದಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಜತೆ ಕೆಲವು ದೃಶ್ಯಗಳನ್ನು ನಿಭಾಯಿಸುವಾಗ ಬಹಳ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಸಿನಿಮಾ ದೃಶ್ಯ ನಿಭಾಯಿಸುವಾಗ ಒತ್ತಡವು ಎಷ್ಟು ಅಗಾಧವಾಗಿತ್ತು ಎಂದರೆ ನಟನ ತಂದೆ ಮತ್ತು ಚಿತ್ರದ ನಿರ್ಮಾಪಕ ಕರಣ್ ಜೋಹರ್ ಸಹ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಲು ಮುಂದಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಸಿದ್ಧಾಂತ್ ಚತುರ್ವೇದಿ ಮಾತನಾಡಿ “ಭಾರತದ ಅನೇಕ ಜನರು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಮಾತ್ರವಲ್ಲ ಇಂತಹ ದೃಶ್ಯಗಳನ್ನು ನಿಭಾಯಿಸುವಾಗ ತಂದೆಯ ಸಹಕಾರ ಕೂಡ ನನಗಿತ್ತು. ನಾನು ಆಗ ತುಂಬ ನರ್ವಸ್‌ ಆಗಿದ್ದೆ. ಕರಣ್ ಜೋಹರ್ ಅವರ ಬಳಿ ಕೂಡ ನನ್ನ ಕಳವಳ ವ್ಯಕ್ತಪಡಿಸಿದ್ದೆ. ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಅವರು ನನ್ನನ್ನು ಪ್ರೋತ್ಸಾಹಿಸಿದರುʼʼಎಂದರು.

ಇದನ್ನೂ ಓದಿ: Deepika Padukone: ರಣವೀರ್‌ ಎದುರೇ ದೀಪಿಕಾ ಬೇಬಿ ಬಂಪ್ ಮೇಲೆ ಕೈಯಿಟ್ಟ ಒರಿ; ನೆಟ್ಟಿಗರಿಗೆ ಉರಿ!

ʻʻಇನ್ನು ಇಂಟಿಮೇಟ್‌ ದೃಶ್ಯಗಳನ್ನು ನಿಭಾಯಿಸುವ ಮೊದಲು ನನಗೆ ಜೋಹರ್ ಅವರು ಇದು ವರ್ಕ್‌ನ ಪಾರ್ಟ್‌ ಅಷ್ಟೇ ಎಂದು ಪ್ರೋತ್ಸಾಹಿಸಿದರು. ನಾನು ನಾಚಿಕೆ ಸ್ವಭಾವದವನಾಗಿದ್ದರಿಂದ ತಂದೆ ಹಾಗೂ ಕರಣ್‌ ಅವರ ಪ್ರೋತ್ಸಾಹದಿಂದ ಸಿನಿಮಾವನ್ನು ಚೆನ್ನಾಗಿ ನಿಭಾಯಿಸಿದೆ. ಧರ್ಮ ಪ್ರೊಡಕ್ಷನ್ಸ್, ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಶಕುನ್ ಬಾತ್ರಾ ಜತೆ ಕೆಲಸ ಮಾಡುವ ಒಳ್ಳೆಯ ಅವಕಾಶ ನನ್ನದಾಗಿತ್ತುʼʼ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ (Hotlook), ಬಿಕಿನಿ, ಲಿಪ್ ಲಾಕ್ ಮೊದಲಾದ ದೃಶ್ಯಗಳು ಭಾರಿ ಚರ್ಚೆಗೂ ಒಳಗಾಗಿತ್ತು. ‘ಗೆಹ್ರೈಯಾನ್’ ಅಕ್ರಮ ಸಂಬಂಧಗಳ ಕುರಿತಾಗಿರುವ ಸಿನಿಮಾವಾಗಿದ್ದು, ಸಂಬಂಧಗಳ ಸೂಕ್ಷ್ಯತೆ, ಮಹತ್ವದ ಬಗ್ಗೆ ಹಲವು ಸಂದೇಶಗಳನ್ನು ನೀಡುತ್ತದೆ. ಗೆಹ್ರೈಯಾನ್ ಚಿತ್ರ ದಾಂಪತ್ಯ, ಗಂಡ-ಹೆಂಡತಿಯ ಸಂಬಂಧ, ಪರಪುರುಷ, ಅಕ್ರಮ ಸಂಬಂಧ (Relationship)ದ ಬಗ್ಗೆ ತಿಳಿಸಿಕೊಡುತ್ತದೆ.

Continue Reading
Advertisement
WhatsApp Shut down
ದೇಶ11 mins ago

Whatsapp Shutdown: ಭಾರತದಲ್ಲಿ ಇನ್ಮುಂದೆ ಬಂದ್‌ ಆಗುತ್ತಾ ವಾಟ್ಸ್‌ಆಪ್‌? ಕೇಂದ್ರ ಸರ್ಕಾರ ಹೇಳೋದೇನು?

Karnataka Rain
ಮಳೆ12 mins ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

ಮಳೆ19 mins ago

Wayanad Landslide: ಎಲ್ಲೆಂದರಲ್ಲಿ ಮಣ್ಣಿನ ರಾಶಿ: ಕೊಚ್ಚಿ ಹೋದ ಸೇತುವೆ, ರಸ್ತೆ: ವಯನಾಡಿನಲ್ಲಿ ಮೃತರ ಸಂಖ್ಯೆ 70ಕ್ಕೆ ಏರಿಕೆ

Paris Olympics 2024
ಕ್ರೀಡೆ28 mins ago

Paris Olympics 2024: ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಮನು ಭಾಕರ್-ಸರಬ್ಜೋತ್‌ ಜೋಡಿ

Mekedatu Project
ಕರ್ನಾಟಕ34 mins ago

Mekedatu Project: ಎಚ್‌ಡಿಕೆ ಅನುಮತಿ ಕೊಡಿಸಿದರೆ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಸಿದ್ಧ: ಸಿಎಂ ಸಿದ್ದರಾಮಯ್ಯ

HD Kumaraswamy
ಕರ್ನಾಟಕ57 mins ago

Wayanad Landslide: ಕೇರಳದ ಭೂಕುಸಿತ ದುರಂತಕ್ಕೆ ಶೋಕ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್‌ಡಿಕೆ

Bharachukki falls
ಚಾಮರಾಜನಗರ1 hour ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

Nawab Malik
ದೇಶ1 hour ago

Nawab Malik:‌ ದಾವೂದ್‌ ಇಬ್ರಾಹಿಂ ಜೊತೆ ನಂಟು ಆರೋಪ ಹೊಂದಿರುವ NCP ನಾಯಕ ನವಾಬ್‌ ಮಲಿಕ್‌ಗೆ ಜಾಮೀನು

SSC Recruitment 2024
ಉದ್ಯೋಗ1 hour ago

SSC Recruitment 2024: 2,006 ಸ್ಟೆನೋಗ್ರಾಫರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ದ್ವಿತೀಯ ಪಿಯುಸಿ ಪಾಸಾದವರು ಅಪ್ಲೈ ಮಾಡಿ

Paris Olympics 2024
ಕ್ರೀಡೆ1 hour ago

Paris Olympics 2024: ಭಾರತ-ಅರ್ಜೆಂಟೀನಾ ಹಾಕಿ ಪಂದ್ಯ ವೀಕ್ಷಿಸಿದ ರಾಹುಲ್​ ದ್ರಾವಿಡ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ12 mins ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 hour ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ20 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ21 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ1 day ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌