Ranveer Singh:‌ ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್; ರಣವೀರ್ ಸಿಂಗ್ ಹೊಸ ಸಿನಿಮಾ ಅನೌನ್ಸ್! - Vistara News

ಬಾಲಿವುಡ್

Ranveer Singh:‌ ಒಂದೇ ಸಿನಿಮಾದಲ್ಲಿ ಬಾಲಿವುಡ್‌ನ ಐದು ಸ್ಟಾರ್ಸ್; ರಣವೀರ್ ಸಿಂಗ್ ಹೊಸ ಸಿನಿಮಾ ಅನೌನ್ಸ್!

Ranveer Singh: ಆದಿತ್ಯ ತಮ್ಮ ಎರಡನೇ ಪ್ರಯತ್ನಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಒಂದ್ಕಡೆ ಸೇರಿಸಿದ್ದಾರೆ. ಈ ಮೂಲಕ ಕುತೂಹಲವನ್ನೂ ಕೆರಳಿಸಿದ್ದಾರೆ. ಜಿಯೋ ಸ್ಟುಡಿಯೋಸ್‌ನಿಂದ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ಮತ್ತು ಆದಿತ್ಯ ಧಾರ್ ಅವರ ಬ್ಯಾನರ್ B62 ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.

VISTARANEWS.COM


on

Ranveer Singh up for new film directed by Aditya Dhar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಣವೀರ್ ಸಿಂಗ್ (Ranveer Singh) ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತಿದ್ದವು. ಮಾತ್ರವಲ್ಲ ಇತ್ತೀಚೆಗೆ ಒಂದು ಸಿನಿಮಾಗಳು ಹಿಟ್‌ ಕಂಡಿಲ್ಲ. ಕರಣ್ ಜೋಹರ್ ನಿರ್ಮಾಣದ ತಖ್ತ್‌ , ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ʻಅನ್ನಿಯನ್ʼ ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ʻರಾಕ್ಷಸ್ʼ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ʻಬೈಜೂ ಬವರಾʼ, ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ನಿಂತು ಹೋದವು. ಇದೀಗ ನಟ ಹೊಸ ಸಿನಿಮಾ ಅನೌನ್ಸ್‌ ಮಾಡಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಈ ಮೆಗಾ ಸಹಯೋಗದಲ್ಲಿ, ರಣವೀರ್ ಸಿಂಗ್, ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಇರುವುದು ವಿಶೇಷ. ಇದನ್ನು ‘ಯುಆರ್‌ಐ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧರ್ ನಿರ್ದೇಶಿಸಲಿದ್ದಾರೆ.

ರಣವೀರ್ ಸಿಂಗ್, ತಮ್ಮ ಮುಂಬರುವ ಚಲನಚಿತ್ರವನ್ನು ಘೋಷಿಸಿ, “ಇದು ನನ್ನ ಅಭಿಮಾನಿಗಳಿಗಾಗಿ, ನನ್ನೊಂದಿಗೆ ತುಂಬಾ ತಾಳ್ಮೆಯಿಂದಿರುವ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ನಿಮಗೆ ಭರವಸೆ ನೀಡುತ್ತೇನೆ. ಈ ಬಾರಿ ಹಿಂದೆಂದೂ ಇಲ್ಲದಂತಹ ಸಿನಿಮೀಯ ಅನುಭವವನ್ನು ನಾನು ನಿಮಗೆ ನೀಡುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

ಆದಿತ್ಯ ಧರ್, ನಟಿ ಯಾಮಿ ಗೌತಮ್ ಅವರನ್ನು ವಿವಾಹವಾದರು, ‘URI: ದಿ ಸರ್ಜಿಕಲ್ ಸ್ಟ್ರೈಕ್’ ಮೂಲಕ 350-ಕೋಟಿ ಗಳಿಕೆಯ ಚಿತ್ರವನ್ನು ನೀಡಿದ ಮೊದಲ ಚೊಚ್ಚಲ ನಿರ್ದೇಶಕರಾಗಿ ಇತಿಹಾಸ ನಿರ್ಮಿಸಿದರು. ಅವರ ಹಿಟ್ ರೋಮ್-ಕಾಮ್, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ನಂತರ ಅವರ ಮುಂದಿನ ಪ್ರಮುಖ ಯೋಜನೆಯಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ.

ಆದಿತ್ಯ ತಮ್ಮ ಎರಡನೇ ಪ್ರಯತ್ನಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಒಂದ್ಕಡೆ ಸೇರಿಸಿದ್ದಾರೆ. ಈ ಮೂಲಕ ಕುತೂಹಲವನ್ನೂ ಕೆರಳಿಸಿದ್ದಾರೆ. ಜಿಯೋ ಸ್ಟುಡಿಯೋಸ್‌ನಿಂದ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ಮತ್ತು ಆದಿತ್ಯ ಧಾರ್ ಅವರ ಬ್ಯಾನರ್ B62 ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Urvashi Rautela:  ಸ್ನಾನದ ವಿಡಿಯೊ ಲೀಕ್​ ಆಗಿದ್ದು ಹೌದು ಎಂದ  ಊರ್ವಶಿ ರೌಟೇಲಾ; ಆದರೆ….

Urvashi Rautela: ಊರ್ವಶಿ ಅವರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಅನೇಕರು ವೀಡಿಯೊ ಕಂಡು PR ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವೀಡಿಯೋದಲ್ಲಿ ಮಂಗಳಸೂತ್ರ ಬೇರೆ ಧರಿಸಿದ್ದರು. ಹೀಗಾಗಿ ಇದು ಫೇಕ್‌ ಎಂದು ಹೇಳಲಾಗಿತ್ತು.

VISTARANEWS.COM


on

Urvashi Rautela Reacts to Her 'Leaked' Bathroom Video That Went Viral: 'I Was Upset...'
Koo

ಬೆಂಗಳೂರು: ನಟಿ ಊರ್ವಶಿ ರೌಟೇಲಾ (Urvashi Rautela) ಅವರ ಖಾಸಗಿ ವಿಡಿಯೊವೊಂದು ವೈರಲ್‌ ಆಗಿರುವುದು ಗೊತ್ತೇ ಇದೆ. ನಟಿ ಬಾತ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿರುವುದನ್ನು ಕಂಡು ಫ್ಯಾನ್ಸ್‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹೊಸ ಆಡಿಯೊವೊಂದು ಲೀಕ್‌ ಆಗಿತ್ತು.. ಇದೀಗ ನಟಿ ಈ ಬಗ್ಗೆ ಮಾತನಾಡಿದ್ದಾರೆ. ‘ಸೋರಿಕೆಯಾದ’ ಬಾತ್ರೂಮ್ ವೀಡಿಯೊ ತನ್ನ ಮುಂಬರುವ ʻಘುಸ್ಪೈತಿಯೇʼ ಸಿನಿಮಾದ ದೃಶ್ಯ ಎಂದು ಹೇಳಿದ್ದಾರೆ. ತನ್ನ ಚಿತ್ರದದ್ದಾದರೂ, ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಅಸಮಾಧಾನಗೊಂಡಿದ್ದಾರೆ.

ನಟಿ ಈ ಬಗ್ಗೆ ಮಾತನಾಡಿ ʻʻಕ್ಲಿಪ್‌ ಸೋರಿಕೆಯಾದ ದಿನ, ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿಯೂ ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ, ಇದು ಘುಸ್ಪೈತಿಯೇ ಚಲನಚಿತ್ರದ ಭಾಗವಾಗಿದೆʼʼಎಂದರು. ಘುಸ್ಪೈತಿಯೇ ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಒಬೆರಾಯ್ ಅವರೊಂದಿಗೆ ಊರ್ವಶಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.

ಊರ್ವಶಿ ಅವರ ಸ್ನಾನ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಅನೇಕರು ವೀಡಿಯೊ ಕಂಡು PR ಸ್ಟಂಟ್ ಎಂದು ಹೇಳುತ್ತಿದ್ದರು. ಊರ್ವಶಿ ವೀಡಿಯೋದಲ್ಲಿ ಮಂಗಳಸೂತ್ರ ಬೇರೆ ಧರಿಸಿದ್ದರು. ಹೀಗಾಗಿ ಇದು ಫೇಕ್‌ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾ ಸ್ನಾನ ಮಾಡುವ ವಿಡಿಯೊ ಲೀಕ್‌ ಆದ ಬೆನ್ನಲ್ಲೇ ಮ್ಯಾನೇಜರ್‌ ಜತೆಗಿನ ಆಡಿಯೋನೂ ಬಹಿರಂಗ!

ಇದಾದ ಬಳಿಕ ಆಡಿಯೊ ಒಂದು ವೈರಲ್‌ ಆಗಿತ್ತು. ಸಂಭಾಷಣೆಯಲ್ಲಿ, ಊರ್ವಶಿ ತನ್ನ ಮ್ಯಾನೇಜರ್ ಹತ್ತಿರ ನೀವು ವೀಡಿಯೊವನ್ನು ನೋಡಿದ್ದೀರಾ ಎಂದು ಕೇಳುತ್ತಾರೆ. ಅವರು ಪ್ರತಿಕ್ರಿಯಿಸುತ್ತಾರೆ, “ಹೌದು, ನಾನು ನೋಡಿದೆ ಮತ್ತು ತಂಡ ವೈರಲ್‌ ಆದ ವಿಡಿಯೊವನ್ನು ಡಿಲಿಟ್‌ ಮಾಡಲು ಪ್ರಯತ್ನಿಸುತ್ತಿದೆ.” ಎನ್ನುತ್ತಾರೆ,ಆಗ ಊರ್ವಶಿ ಹೇಳುತ್ತಾರೆ, “ಈ ವಿಷಯಗಳು ಹೇಗೆ ವೈರಲ್‌ ಆಗುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ತಕ್ಷಣ ಅವರೊಂದಿಗೆ ಕರೆ ಮಾಡಬೇಕಾಗಿದೆʼʼಎನ್ನುತ್ತಾರೆ. ಆಗ ಮ್ಯಾನೇಜರ್‌ ʻʻಹೌದು, ಊರ್ವಶಿ ನನಗೆ ಗೊತ್ತು, ಇದು ತುಂಬಾ ದುಃಖದ ಪರಿಸ್ಥಿತಿ, ಆದರೆ ನಾವು ಈ ವಿಚಾರಗಳನ್ನು ಫೋನ್‌ನಲ್ಲಿ ಮಾತನಾಡಬಾರದು. ಜುಲೈ 19 ರಂದು ನೀವು ಹಿಂತಿರುಗಿದಾಗ ಈ ಬಗ್ಗೆ ಚರ್ಚಿಸೋಣʼʼಎನ್ನುತ್ತಾರೆ. ಆಗ ಊರ್ವಶಿ “ಯಾಕೆ?” ಎಂದು ಪ್ರಶ್ನಿಸಿದಾಗ, ಮ್ಯಾನೇಜರ್ “ಏನಾಗುತ್ತಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟವಾಗಿಲ್ಲ, ನೀವು ಬಂದ ಬಳಿಕ ನಿಮ್ಮೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ.” ಎಂಬ ಸಂಭಾಷಣೆ ಲೀಕ್‌ ಆಗಿತ್ತು.

ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ ಊರ್ವಶಿ, ‘ಸಿಂಗ್ ಸಾಬ್ ದಿ ಗ್ರೇಟ್’ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಸನ್ನಿ ಡಿಯೋಲ್ ಅಭಿನಯದ ಈ ಚಿತ್ರ ಕಮರ್ಷಿಯಲ್ ಫ್ಲಾಪ್ ಆಗಿತ್ತು. ಇದರ ನಂತರ ಯೋ ಯೋ ಹನಿಸಿಂಗ್ ಅವರೊಂದಿಗೆ ‘ಲವ್ ಡೋಸ್’ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದರು. ಮೆಗಾ ಸ್ಟಾರ್‌ ಚಿರಂಜೀವಿ ನಟನೆಯ, ‘ವಾಲ್ತೇರು ವೀರಯ್ಯ’ದಲ್ಲಿ ಐಟಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿಯೂ ಮೈ ಡಿಯರ್ ಮಾರ್ಕಂಡೇಯ ಎಂದು ಸೊಂಟ ಬಳುಕಿಸಿ ಸೌತ್‌ ಸಿನಿರಸಿಕರ ಮನಗೆದ್ದರು.

Continue Reading

ಬಾಲಿವುಡ್

Disha Patani: ಕಡಲಲ್ಲಿ ಮಿಂದೆದ್ದ ದಿಶಾ ಪಟಾನಿ; ಬಿಕಿನಿಯಲ್ಲಿ ಬಿಸಿ ಹೆಚ್ಚಿಸಿದ ಹಾಟ್‌ ಬೆಡಗಿ!

Disha Patani: ಕೆಲವು ದಿನಗಳ ಹಿಂದೆಯಷ್ಟೇ ದಿಶಾ ತಮ್ಮ ಸ್ನೇಹಿತರಿಗೆ ಅಲೆಕ್ಸಾಂಡರ್​ನ ಪರಿಚಯ ಮಾಡಿಸಿದ್ದರು. ಇವರು ನನ್ನ ಬಾಯ್​ಫ್ರೆಂಡ್’ ಎಂದು ಹೇಳಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು. ಇದಕ್ಕೂ ಮುಂಚೆ ದಿಶಾ ಮತ್ತು ಟೈಗರ್ ಶ್ರಾಫ್ ಪ್ರೀತಿಸುತ್ತಿದ್ದರು. ಇವರಿಬ್ಬರ​ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ.

VISTARANEWS.COM


on

Disha Patani Slips Into a Bikini For a Dip in the Ocean
Koo

ಬೆಂಗಳೂರು: ದಿಶಾ ಪಟಾನಿ (Disha Patani ) ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನಟಿ ಸಮುದ್ರದಲ್ಲಿ ಹಾಟ್‌ ಆಗಿ ಸ್ನಾನ ಮಾಡುತ್ತಿರುವ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕಡಲ ತೀರದಲ್ಲಿ ಸೂರ್ಯಾಸ್ತ ಸಮಯದಲ್ಲಿ ಬಿಕಿನಿ ಧರಿಸಿ ದಿಶಾ ಪೋಸ್‌ ಕೊಟ್ಟಿದ್ದಾರೆ. ದಿಶಾ ಪೋಸ್ಟ್‌ಗೆ ಲೈಕ್ ಕೊಡಲು ಫ್ಯಾನ್ಸ್ ಮುನ್ನುಗ್ಗಿ ಬರುತ್ತಿದ್ದಾರೆ.

ಶೀರ್ಷಿಕೆಯಲ್ಲಿ ಸೂರ್ಯನ ಎಮೋಜಿಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಲವಾರು ಅಭಿಮಾನಿಗಳು ʻʻಹಾಟ್‌ʼಎಂಂದು ಕಮೆಂಟ್‌ ಮಾಡಿದ್ದಾರೆ. “ಜಾಗತಿಕ ತಾಪಮಾನ ಹೆಚ್ಚಾಗಲಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಬಿಕಿನಿಯ ಮೂರು ಫೋಟೋಗಳು ಅಪ್ಲೋಡ್ ಮಾಡಿದ ಜಸ್ಟ್ 1 ಗಂಟೆಯಲ್ಲಿಯೇ ಸಾವಿರಾರು ಕಮೆಂಟ್ ಗಳು ಬಂದಿವೆ. ಫೋಟೋ ನೋಡಿದ ಅಭಿಮಾನಿಗಳು ನಟ ಟೈಗರ್ ಶ್ರಾಫ್‌ಗೆ ಟ್ಯಾಗ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ದಿಶಾ ತಮ್ಮ ಸ್ನೇಹಿತರಿಗೆ ಅಲೆಕ್ಸಾಂಡರ್​ನ ಪರಿಚಯ ಮಾಡಿಸಿದ್ದರು. ಇವರು ನನ್ನ ಬಾಯ್​ಫ್ರೆಂಡ್’ ಎಂದು ಹೇಳಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು. ಇದಕ್ಕೂ ಮುಂಚೆ ದಿಶಾ ಮತ್ತು ಟೈಗರ್ ಶ್ರಾಫ್ ಪ್ರೀತಿಸುತ್ತಿದ್ದರು. ಇವರಿಬ್ಬರ​ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ. ಟೈಗರ್ ಮತ್ತು ದಿಶಾ ‘ಬಾಘಿ 2’ ಚಿತ್ರದಲ್ಲಿ ಮತ್ತು ‘ಬೇಫಿಕ್ರಾ’ ಸಿಂಗಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಟೈಗರ್‌ನ ‘ಬಾಘಿ 3’ ಚಿತ್ರದಲ್ಲಿ ದಿಶಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ನಟಿ, ‘ಯೋಧ’, ‘ಕಂಗುವಾ’, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳ​​ ಜತೆ ದಕ್ಷಿಣ ಭಾರತದ ಸಿನಿಮಾದಲ್ಲೂ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಸೂರ್ಯ ಜೊತೆಯಲ್ಲಿ ಕಂಗುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ದಿಶಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಸಂಜಯ್ ದತ್, ಸುನೀಲ್ ಶೆಟ್ಟಿ, ಅರ್ಷದ್ ವಾರ್ಸಿ, ಪರೇಶ್ ರಾವಲ್, ಜಾನಿ ಲಿವರ್, ರಾಜಪಾಲ್ ಯಾದವ್, ತುಷಾರ್ ಕಪೂರ್, ಶ್ರೇಯಸ್ ತಲ್ಪಡೆ, ಕೃಷ್ಣಾ ಅಭಿಷೇಕ್, ಕಿಕು ಶಾರದಾ, ದಲೇರ್ ಮೆಹಂದಿ, ಮಿಕಾ ಸಿಂಗ್, ರಾಹುಲ್ ದೇವ್, ಮುಖೇಶ್ ತಿವಾರಿ, ಶರೀಬ್ ತಿವಾರಿ ಮುಂತಾದವರು ಇದ್ದಾರೆ.

Continue Reading

ಬಾಲಿವುಡ್

Taapsee Pannu: ಸೆಲ್ಫಿಗೆ ಪೋಸ್‌ ಕೋಡೋಕೆ ಆಗಲ್ವಾ? ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಕೆಂಡ!

Taapsee Pannu: ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಮೆಂಟ್ ಮಾಡಿದ್ದಾರೆ.

VISTARANEWS.COM


on

Taapsee Pannu Denying Selfie, Netizens Defend Actress
Koo

ಬೆಂಗಳೂರು: ತಾಪ್ಸಿ ಪನ್ನು (Taapsee Pannu) ಟಾಲಿವುಡ್‌ನಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ಜತೆಗೆ ಆಗಾಗ ವಿವಾದಕ್ಕೂ ಗುರಿಯಾಗುತ್ತ ಇರುತ್ತಾರೆ. ಇದೀಗ ನಟಿ ʻಖೇಲ್ ಖೇಲ್ ಮೇʼ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಮೆಂಟ್ ಮಾಡಿದ್ದಾರೆ.

ಅನನ್ಯಾ ವೈರಲ್ ವೀಡಿಯೊದಲ್ಲಿ ಈ ಬಗ್ಗೆ ಕಮೆಂಟ್‌ ಮಾಡಿದ್ದು ಹೀಗೆ. ʻʻಹಲವಾರು ಕ್ಯಾಮೆರಾಗಳಿಗೆ ಪೋಸ್‌ ನೀಡುತ್ತಿರುವಾಗ,ಸೆಲ್ಫಿಯನ್ನು ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಪ್ರಭಾವಿಗಳನ್ನು ಕರೆದ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು! ಆಕೆಗೆ ನಿಜವಾಗಿಯೂ ಉತ್ತಮ PR ತರಬೇತಿಯ ಅಗತ್ಯವಿದೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

Tapsee strikes again! Swipe for more
byu/Away-Enthusiasm8771 inBollyBlindsNGossip

ವೀಡಿಯೊ ರೆಡ್ಡಿಟ್‌ನಲ್ಲಿಯೂ ಕಾಣಿಸಿಕೊಂಡಿದೆ ಮತ್ತು ನೆಟಿಜನ್‌ಗಳು ಈ ಬಗ್ಗೆ ಕಮೆಂಟ್‌ ಮಾಡಿದ್ದಾರೆ. ʻʻನಟಿಯದ್ದು ಯಾವುದೇ ತಪ್ಪು ಇಲ್ಲ. ಸೆಲ್ಫಿ ಕೊಡುವ ಅಗತ್ಯ ಇಲ್ಲʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಬಾಲಿವುಡ್‌ನ ಅಭಿಮಾನಿ ಅಥವಾ ಫಾಲೋವರ್‌ ನಾನು ಅಲ್ಲ. ಆದರೆ ನಾನು ಎರಡೂ ದೃಷ್ಟಿಕೋನಗಳಿಂದ ವಿಷಯಗಳನ್ನು ನೋಡಲು ಪ್ರಯತ್ನಿಸುತ್ತೇನೆ. ಬಹುಶಃ ಆಕೆಯ ಮೇಕ್ಅಪ್ ಅಥವಾ ಕೂದಲಿಗೆ ಟಚ್‌ಅಪ್ ಅಗತ್ಯವಿದೆ ಎಂದು ಅವರು ಭಾವಿಸಿರಬಹುದುʼʼಎಂದು ಕಮೆಂಟ್‌ ಮಾಡಿದ್ದಾರೆ.

ʻʻನಟಿ ಎಂಬ ಕಾರಣಕ್ಕೆ ಪ್ರತಿ ಸೆಲ್ಫಿಗೂ ಹೌದು ಎಂದು ಹೇಳಬೇಕಿಲ್ಲ. ಬಹುಶಃ ಅವರು ಸೆಲ್ಫಿಗಳನ್ನು ಇಷ್ಟಪಡುವುದಿಲ್ಲ, ವೃತ್ತಿಪರ ಕ್ಯಾಮೆರಾಗಳು ಇವೆʼʼ ಎಂದು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಕ್ಷಯ್ ಕುಮಾರ್, ತಾಪ್ಸಿ ಪನ್ನು ಮತ್ತು ಫರ್ದೀನ್ ಖಾನ್ ಅಭಿನಯದ ʻಖೇಲ್ ಖೇಲ್ ಮೇʼ ಚಿತ್ರದ ಹೊಸ ಮೋಷನ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ವಾಣಿ ಕಪೂರ್, ಆಮಿ ವಿರ್ಕ್, ಆದಿತ್ಯ ಸೀಲ್ ಮತ್ತು ಪ್ರಜ್ಞಾ ಜೈಸ್ವಾಲ್ ಕೂಡ ನಟಿಸಿದ್ದಾರೆ. ಈ ವರ್ಷ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ”ಫಿರ್ ಆಯಿ ಹಸೀನ್ ದಿಲ್‌ ರುಬಾ” ಚಿತ್ರದಲ್ಲಿ ಕೂಡ ತಾಪ್ಸಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 09ರಂದು ಈ ಚಿತ್ರ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

Continue Reading

ಸಿನಿಮಾ

Aishwarya Rai Bachchan: ಐಶ್ವರ್ಯಾ ರೈ ಧರಿಸಿರುವ V ಆಕಾರದ ಈ ವಜ್ರದುಂಗುರದ ವಿಶೇಷತೆ ಗೊತ್ತೆ?

Aishwarya Rai Bachchan: ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿʼ ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ. ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ.

VISTARANEWS.COM


on

Aishwarya Rai Bachchan
Koo

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ (Actress Aishwarya Rai Bachchan) ತಮ್ಮ ಅಭಿನಯದ ಮೂಲಕ ಮಾತ್ರವಲ್ಲದೇ ತಮ್ಮ ವಿಶೇಷ ಫ್ಯಾಷನ್ ಶೈಲಿ ಮತ್ತು ಸೌಂದರ್ಯದಿಂದ ಕೂಡ ಅನೇಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ನಿಮಗೂ ಐಶ್ವರ್ಯಾ ಅವರ ಫ್ಯಾಷನ್ ಶೈಲಿಯನ್ನು ಅನುಸರಿಸುವ ಆಸಕ್ತಿ ಇದ್ದರೆ, ನಟಿ ತಮ್ಮ ಬಲಗೈಗೆ ಧರಿಸಿದ ವಿ-ಆಕಾರದ ವಜ್ರದ ಉಂಗುರದ ಬಗ್ಗೆ ತಿಳಿದುಕೊಳ್ಳಿ! ನಟಿ ಈ ಉಂಗುರವನ್ನು ಧರಿಸದೆ ಎಂದಿಗೂ ಹೊರಗೆ ಹೋಗುವುದಿಲ್ಲ. ಹಾಗಾದ್ರೆ ನಟಿ ಧರಿಸಿದ ಈ ಉಂಗುರದ ವಿಶೇಷತೆ ಏನು ಎಂಬುದನ್ನು ತಿಳಿಯಿರಿ. ನಟಿ ಐಶ್ವರ್ಯ ರೈ ಧರಿಸಿರುವ ವಿ ಆಕಾರದ ಉಂಗುರವನ್ನು “ವಂಕಿ” ಉಂಗುರ ಅಥವಾ “ವಡುಂಗಿಲಾ” ಎಂದು ಕರೆಯಲಾಗುತ್ತದೆ. ಈ ಉಂಗುರವನ್ನು ಮದುವೆಯಾದ ಮಹಿಳೆಯರು ಧರಿಸುವ ಸಂಪ್ರದಾಯವಿದೆ. ಹಾಗಾಗಿ ವಿವಾಹಿತ ಮಹಿಳೆಯ ಜೀವನದಲ್ಲಿ ಈ ಉಂಗುರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ವಂಕಿ ಉಂಗುರವನ್ನು ವಧು ತಮ್ಮ ಮದುವೆಯ ದಿನದಂದು ಧರಿಸುತ್ತಾರೆ ಮತ್ತು ಈ ಉಂಗುರವನ್ನು ಆಕೆಯ ಕುಟುಂಬದ ತಂದೆಯ ಕಡೆಯಿಂದ ಅಥವಾ ಮಹಿಳೆಯ ಸಂಬಂಧಿಕರು ನೀಡುತ್ತಾರೆ. ಅವರ ಸಂಪ್ರದಾಯದಲ್ಲಿ ಮದುವೆಯ ನಂತರ ಮಂಗಳಸೂತ್ರವನ್ನು ಧರಿಸುವ ಹಾಗೇ ಈ ಉಂಗುರವನ್ನು ಧರಿಸಬೇಕಾಗುತ್ತದೆ.

Aishwarya Rai Bachchan V shape dimond ring

ಬಂಟ ಸಮುದಾಯದ ಸಂಪ್ರದಾಯ

ಈ ಉಂಗುರವು ಹೆಚ್ಚಾಗಿ ಮಂಗಳೂರಿನ ಬಂಟ ಸಮುದಾಯದವರು ಧರಿಸುತ್ತಾರೆ. ಈ ಉಂಗುರವು ವಿವಾಹಿತ ಮಹಿಳೆಯರು ಮತ್ತು ನವ ವಧುವನ್ನು ಕೆಟ್ಟ ಸಂದರ್ಭಗಳಿಂದ ರಕ್ಷಿಸುತ್ತದೆ ಎಂಬುದು ಬಂಟ ಸಮುದಾಯದ ನಂಬಿಕೆಯಾಗಿದೆ. ಬಂಟ ಸಮುದಾಯಕ್ಕೆ ಸೇರಿದ ನಟಿ ಐಶ್ವರ್ಯ ರೈ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ತಮ್ಮ ಸಮುದಾಯದ ಸಂಪ್ರದಾಯದಂತೆ ಯಾವಾಗಲೂ ತನ್ನ ಕೈಯಲ್ಲಿ ವಂಕಿ ಉಂಗುರವನ್ನು ಧರಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಉಂಗುರವನ್ನು ಬಂಟ ಸಮುದಾಯ ಮಾತ್ರವಲ್ಲದೇ ದಕ್ಷಿಣ ಭಾರತದ ಸಮುದಾಯದ ಅನೇಕ ವಿವಾಹಿತ ಮಹಿಳೆಯರು ಧರಿಸುತ್ತಾರೆ.

ಇದನ್ನೂ ಓದಿ: Bollywood Cinema: ಜೀವನ ಪ್ರೀತಿಯ ತೀವ್ರತೆ ಸಾರಿದ 5 ಬಾಲಿವುಡ್ ಚಿತ್ರಗಳಿವು

ಹಲವಾರು ವಿನ್ಯಾಸಗಳಲ್ಲಿ ಲಭ್ಯ:
ಈ ವಂಕಿ ಉಂಗುರವು ಹಲವಾರು ವಿನ್ಯಾಸಗಳಲ್ಲಿ ಲಭ್ಯವಿದೆ, ಉದಾಹರಣೆಗೆ ವಿ-ಆಕಾರದ ತೆಳುವಾದ ಚಿನ್ನದ ಬ್ಯಾಂಡ್ ಅಥವಾ ನಟಿ ಐಶ್ವರ್ಯ ರೈ ಧರಿಸಿದಂತೆ ವಜ್ರದ ಬ್ಯಾಂಡ್ ನಲ್ಲಿ ಸಿಗುತ್ತದೆ. ಈ ಉಂಗುರವನ್ನು ಮಂಗಳೂರಿನ ವಿವಾಹಿತ ಮಹಿಳೆಯರು ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸುತ್ತಾರೆ. ಇದರಿಂದ ಅವರು ವಿವಾಹಿತರು ಎಂದು ಹೇಳುತ್ತಾರೆ. ಅಲ್ಲದೇ ಈ ಉಂಗುರವು ಮಹಿಳೆಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಉದಾಹರಣೆಗೆ ದುಷ್ಟ ಶಕ್ತಿಗಳಿಂದ ಅವರನ್ನು ರಕ್ಷಿಸುತ್ತದೆ ಮತ್ತು ಅವರಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅವರ ವೈವಾಹಿಕ ಜೀವನ ಸಂತೋಷ ಮತ್ತು ಪ್ರೀತಿಯಿಂದ ತುಂಬಿರುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ವಿವಾಹ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ ಈ ಉಂಗುರ ವಿಶೇಷವಾಗಿ ಗಮನ ಸೆಳೆದಿದೆ.

Continue Reading
Advertisement
Decline of Vultures
ಆರೋಗ್ಯ10 mins ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ16 mins ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sugar Vs Jaggery In Tea
ಆರೋಗ್ಯ37 mins ago

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Manu Bhaker
ಪ್ರಮುಖ ಸುದ್ದಿ47 mins ago

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

theft case
ಚಿತ್ರದುರ್ಗ53 mins ago

Theft Case : ಹಂದಿ ಕಳವು ವೇಳೆ ಪೊಲೀಸರಿಗೆ ಕಲ್ಲು ತೂರಿ ಎಸ್ಕೇಪ್‌ ಆಗಿದ್ದ ಆಂಧ್ರ ಗ್ಯಾಂಗ್‌ನ ಸದಸ್ಯ ಅರೆಸ್ಟ್‌

Paris Olympics boxing
ಕ್ರೀಡೆ1 hour ago

Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

Unveiling of IPT 12 Cricket Trophy, Jersey by N1 Cricket Academy
ಕ್ರಿಕೆಟ್1 hour ago

IPT 12: ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ʻIPT 12ʼ ಕ್ರಿಕೆಟ್ ಟ್ರೋಫಿ, ಜೆರ್ಸಿ ಅನಾವರಣ

Bengaluru South District
ಕರ್ನಾಟಕ1 hour ago

Bengaluru South District: ರಾಮನಗರ ಮರು ನಾಮಕರಣಕ್ಕೆ ಹಿಂದು ಜನಜಾಗೃತಿ ಸಮಿತಿ ತೀವ್ರ ವಿರೋಧ; ಉಗ್ರ ಪ್ರತಿಭಟನೆ ಎಚ್ಚರಿಕೆ

ಪ್ರಮುಖ ಸುದ್ದಿ1 hour ago

UPSC Coaching : ನೈತಿಕತೆಯ ಪಾಲನೆ ವಿಚಾರದಲ್ಲಿ ಶ್ರೀರಾಮನಿಗಿಂತ ಅಕ್ಬರನೇ ಶ್ರೇಷ್ಠ ಎಂದ ಯುಪಿಎಸ್​ಸಿ ಬೋಧಕಿ ಶುಭ್ರಾ ರಂಜನ್; ಕೇಸ್​ ದಾಖಲಾದ ಬಳಿಕ ಕ್ಷಮೆ ಕೋರಿಕೆ

Murder case
ಕಲಬುರಗಿ1 hour ago

Murder case : ಊಟ ಕೊಡಿಸುವ ನೆಪದಲ್ಲಿ ಕರೆದೊಯ್ದು ಮಹಿಳೆಯನ್ನು ಕೊಂದು, ಸುಟ್ಟು ಹಾಕಿದ ಕಿರಾತಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant attack
ಮಳೆ2 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ5 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ23 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

ಟ್ರೆಂಡಿಂಗ್‌