Christmas 2022 | ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂತಸದ ಕ್ಷಣ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ - Vistara News

ಬಾಲಿವುಡ್

Christmas 2022 | ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂತಸದ ಕ್ಷಣ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ

ಕ್ರಿಸ್‌ಮಸ್‌ (Christmas 2022) ಸಂಭ್ರಮದ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಅಭಿಮಾನಿಗಳಿಗೆ ಶುಭಹಾರೈಸಿದ್ದಾರೆ. ವಿವಿಧ ತಾರೆಯರ ಕ್ರಿಸ್‌ಮಸ್‌ ಸಂತಸದ ಝಲಕ್‌ ಇಲ್ಲಿದೆ.

VISTARANEWS.COM


on

Christmas 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕ್ರಿಸ್ಮಸ್ ಸಂಭ್ರಮಾಚರಣೆಯನ್ನು (Christmas 2022) ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ನಟ, ನಟಿಯರು ತಮ್ಮದೇ ರೀತಿಯಲ್ಲಿ ಆಚರಿಸಿದ್ದಾರೆ. ತಮ್ಮ ಕ್ರಿಸ್ಮಸ್ ಸಂಭ್ರಮದ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ವಿವಿಧ ತಾರೆಯರ ಕ್ರಿಸ್ಮಸ್ ಸಂತಸದ ಝಲಕ್‌ ಇಲ್ಲಿದೆ.

ಮಗಳು ಆರಾಧ್ಯ ಜತೆ ಸಂಭ್ರಮಿಸಿದ ನಟಿ ಐಶ್ವರ್ಯಾ ರೈ
ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಮಗಳು ಆರಾಧ್ಯ ಬಚ್ಚನ್ ಜತೆ ಕ್ರಿಸ್ಮಸ್ ಆಚರಿಸಿದ್ದಾರೆ. ಭಾನುವಾರ ನಟಿ ಅಲಂಕರಿಸಿದ ಕ್ರಿಸ್ಮಸ್ ಟ್ರೀ ಬಳಿ ಕುಳಿತಿರುವ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್‌ ಮೂಲಕ ವಿಶ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ನಟ ದೇವದಾಸ್‌ ಕಮೆಂಟ್‌ ಮಾಡಿ ʻʻಮೆರ್ರಿ ಕ್ರಿಸ್ಮಸ್. ಪ್ರೀತಿ, ಶಾಂತಿ, ಉತ್ತಮ ಆರೋಗ್ಯ ಮತ್ತು ಸಂತೋಷ ಕೊಟ್ಟು ದೇವರು ಒಳ್ಳೆಯದು ಮಾಡಲಿ” ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Tripura Sundari Serial | ʻಸ್ಪರ್ಶʼ ಸಿನಿಮಾ ಖ್ಯಾತಿಯ ನಟಿ ರೇಖಾ ಧಾರಾವಾಹಿಗೆ ಎಂಟ್ರಿ!

ಬಾಲಿವುಡ್‌ ನಟಿ ಪ್ರೀತಿ ಜಿಂಟಾ ತಮ್ಮ ಕುಟುಂಬದೊಂದಿಗೆ ಕ್ರಿಸ್ಮಸ್‌ ಆಚರಣೆಯ ಫೋಟೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ತಮ್ಮ ಕುಟುಂಬದೊಂದಿಗೆ ಆನಂದಿಸುತ್ತಿರುವ ಕೆಲವು ದೃಶ್ಯಗಳಿವೆ.

“ನಮ್ಮ ಕುಟುಂಬದ ಕಡೆಯಿಂದ ನಿಮಗೆ ಕ್ರಿಸ್‌ಮಸ್ ಶುಭಾಶಯಗಳು. ಕ್ರಿಸ್‌ಮಸ್‌ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ನೀಡಲಿʼʼ ಎಂದು ಅವರು ಬರೆದುಕೊಂಡಿದ್ದಾರೆ.

ನಟಿ ದೇವೊಲೀನಾ ಭಟ್ಟಾಚಾರ್ಯ ಮತ್ತು ಕಂಚಿ ಕೌಲ್ ಅವರು ಕುಟುಂಬದೊಂದಿಗೆ ತಮ್ಮ ಸಂಭ್ರಮಾಚರಣೆಯ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಪತಿ ಶಾನವಾಜ್ ಶೇಖ್ ಮತ್ತು ತಾಯಿಯೊಂದಿಗೆ ದೇವೊಲೀನಾ ಭಟ್ಟಾಚಾರ್ಯ ಕ್ರಿಸ್ಮಸ್‌ ಸಂಭ್ರಮವನ್ನು ಆಚರಿಸಿದ್ದಾರೆ.

ನಟ ಧೀರಜ್ ಧೂಪರ್ ಮತ್ತು ವಿನ್ನಿ ಅರೋರಾ ಕೂಡ ಕ್ರಿಸ್‌ಮಸ್‌ ಸಂಭ್ರಮದಲ್ಲಿರುವ ಮಗ ಜೈನ್‌ನ ಮೊದಲ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಂತಾಕ್ಲಾಸ್ ವೇಷಭೂಷಣವನ್ನು ಧರಿಸಿದ್ದ ಮಗ ಜೈನ್‌ ಚಿತ್ರದಲ್ಲಿ ಮುದ್ದಾಗಿ ಕಂಡಿದ್ದಾನೆ.

ದಕ್ಷಿಣ ಭಾರತ ಸಿನಿ ತಾರೆಯರ ಕ್ರಿಸ್ಮಸ್‌ ಸಂಭ್ರಮ!
ದಕ್ಷಿಣ ಭಾರತದ ನಟ, ನಟಿಯರು ಕ್ರಿಸ್ಮಸ್‌ ಸಂಭ್ರಮಾಚರಣೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕ್ರಿಸ್ಮಸ್ ಟ್ರೀ ಮೂಲಕ ಪೋಸ್ ನೀಡುತ್ತಿರುವ ಚಿತ್ರವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ನಿಮಗೆಲ್ಲರಿಗೂ ಶುಭ ಹಾರೈಸಲು ನನಗೆ ಒಂದು ಚಿತ್ರ ಬೇಕು ಎಂದು ಮನಸ್ಸಿನಲ್ಲಿಟ್ಟುಕೊಂಡು ನಾನು ಫೋಟೊ ತೆಗೆದುಕೊಂಡಿದ್ದೇನೆ. ಕ್ರಿಸ್ಮಸ್ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ತಮಿಳು ನಟ ಕಮಲ್‌ ಹಾಸನ್‌ ಟ್ವೀಟ್‌ ಮೂಲಕ ” ಸಹೋದರ ಸಹೋದರಿಯರಿಗೆ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು. ಭಾರತವು ಚಿರಾಯುವಾಗಲಿ! ” ಎಂದು ಬರೆದುಕೊಂಡಿದ್ದಾರೆ.

ಕಾಂತಾರ ನಟಿ ಸಪ್ತಮಿ ಗೌಡ ವಿಶೇಷ ಪೋಸ್ಟ್‌ ಮೂಲಕ ಕ್ರಿಸ್ಮಸ್‌ಗೆ ಶುಭ ಹಾರೈಸಿದ್ದಾರೆ.

ʻಸಲಾರ್ʼ ನಟಿ ಶ್ರುತಿ ಹಾಸನ್ ಅವರು ತಮ್ಮ ಬಾಯ್‌ಫ್ರೆಂಡ್‌ ಸಂತನು ಹಜಾರಿಕಾ ಅವರೊಂದಿಗೆ ಹಬ್ಬವನ್ನು ಆಚರಿಸಿರುವ ಸಂತಸದ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ” ಕ್ರಿಸ್ಮಸ್ ಶುಭಾಶಯಗಳು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬ ಮಾಡೋಣ. ನಿಮಗೆ ಮತ್ತು ನಿಮ್ಮವರಿಗೆ ಶುಭಾಶಯಗಳುʼʼಎಂದು ವಿಶ್‌ ಹಂಚಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಕೂಡ ಟ್ವೀಟ್‌ ಮೂಲಕ ಶುಭಾಶಯ ತಿಳಿಸಿದ್ದಾರೆ. ನಟಿ ಹನ್ಸಿಕಾ ಮೋಟ್ವಾನಿ ಅವರು ಪತಿ ಸೋಹೇಲ್ ಕಥುರಿಯಾ ಅವರೊಂದಿಗೆ ಕ್ರಿಸ್ಮಸ್‌ ಸಂಭ್ರಮಾಚರಣೆ ಮಾಡಿದ್ದಾರೆ. ಮಾಲಿವುಡ್‌ ನಟ ಮೋಹನ್‌ಲಾಲ್, ಮಮ್ಮುಟ್ಟಿ ಮತ್ತು ಸಾಯಿ ಧರಂ ತೇಜ್ ಸೇರಿದಂತೆ ದಕ್ಷಿಣ ಭಾರತದ ಅನೇಕ ತಾರೆಯರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ | Radhika Pandit | ರಾಕಿಂಗ್‌ ಸ್ಟಾರ್‌ ಮನೆಯಲ್ಲಿ ಕ್ರಿಸ್ಮಸ್‌ ಸಂಭ್ರಮ: ಕುಕ್ಕೀಸ್‌ ಮಾಡೋದ್ರಲ್ಲಿ ಐರಾ, ಯಥರ್ವ ಬ್ಯುಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬಾಲಿವುಡ್

Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

Kangana Ranaut : ನಟಿ ಕಂಗನಾ ರಣಾವತ್ ಹಿಟ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Kangana Ranaut
Koo

ಬೆಂಗಳೂರು: ನಟಿ ಕಂಗನಾ ರಣಾವತ್ (Kangana Ranaut) ಹಿಟ್ ಸಿನಿಮಾ ನೀಡದೇ ವರ್ಷಗಳೇ ಕಳೆದಿವೆ. ಆದರೆ, ಅವರ ಅಭಿಪ್ರಾಯದಲ್ಲಿ ಇದು ಮುಖ್ಯವಲ್ಲ. ಏಕೆಂದರೆ, ‘ಪಠಾಣ್’ ಮೊದಲು, ಬಾಲಿವುಡ್‌ನ ಸೂಪರ್‌ಸ್ಟಾರ್, ಶಾರುಖ್ ಖಾನ್ (Shah Rukh Khan) ಸಹ ಹತ್ತು ವರ್ಷಗಳ ಕಾಲ ಫ್ಲಾಪ್‌ ಸಿನಿಮಾಗಳನ್ನೇ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

ಟೈಮ್ಸ್ ನೌ ಶೃಂಗಸಭೆ 2024ರಲ್ಲಿ ಮಾತನಾಡಿದ ಕಂಗನಾ, ನಾನು ಮತ್ತು ಶಾರುಖ್ “ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳುʼʼ ಎಂದಿದ್ದಾರೆ. ʻʻಒಟಿಟಿ ವೇದಿಕೆ ಸ್ಟಾರ್‌ಗಳನ್ನು ನಿರ್ಮಾಣ ಮಾಡುವುದಿಲ್ಲ. ದೇವರ ದಯೆಯಿಂದ ನಮಗೆ ತುಂಬಾ ಬೇಡಿಕೆಯಿದೆʼʼ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂಗನಾ ಅವರು ಅಭಿನಯಿಸಿದ “ತೇಜಸ್‌ʼ ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಅವರ ‘ಜಡ್ಜ್‌ಮೆಂಟಲ್ ಹೈ ಕ್ಯಾ’, ‘ತಲೈವಿ’, ‘ಧಕಡ್’ ಮತ್ತು ‘ಚಂದ್ರಮುಖಿ 2’ ಚಿತ್ರಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ. ಶಾರುಖ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ಸಿನಿಮಾಗಳ ವೈಫಲ್ಯದ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

“ಜಗತ್ತಿನ ಯಾವುದೇ ನಟನಿಗೆ ಹಿಟ್‌ಗಳು ಮಾತ್ರ ಸಾಲದು. ಶಾರುಖ್ ಖಾನ್ ಅವರ ಚಿತ್ರಗಳು ಹತ್ತು ವರ್ಷಗಳ ಕಾಲ ಹಿಟ್‌ ಕಂಡೇ ಇಲ್ಲ. ಬಳಿಕ ʻಪಠಾಣ್ʼ ಸಕ್ಸೆಸ್‌ ಆಯಿತು. ನನ್ನ ಚಿತ್ರಗಳು ಏಳೆಂಟು ವರ್ಷಗಳ ಕಾಲ ಯಶಸ್ಸು ಕಾಣಲೇ ಇಲ್ಲ. ನಂತರ ‘ಕ್ವೀನ್’ ಸಿನಿಮಾ ಗೆದ್ದಿತು. 3-4 ವರ್ಷಗಳ ನಂತರ, ʻಮಣಿಕರ್ಣಿಕಾʼ ಕೆಲಸ ಮಾಡಿದೆ. ಈಗ, ʻ ಎಮರ್ಜೆನ್ಸಿʼ ಸಿನಿಮಾ ಬರುತ್ತಿದೆ. ಬಹುಶಃ ಅದು ಹಿಟ್ ಆಗಬಹುದುʼʼ ಎಂದು ಹೇಳಿಕೊಂಡಿದ್ದಾರೆ

ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕುರಿತಾಗಿನ ಕಥೆ ʻಎಮರ್ಜೆನ್ಸಿʼ ಸಿನಿಮಾದಲ್ಲಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಂಗನಾ ನಟಿಯಾಗಿ ನಟಿಸಿರುವುದಷ್ಟೇ ಅಲ್ಲದೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಈ ಹಿಂದೆ ನಟಿ “ತಲೈವಿʼ ಸಿನಿಮಾದಲ್ಲಿ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ, ಜೆ. ಜಯಲಲಿತಾ ಅವರಾಗಿಯೂ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. 2024ರ ಜೂನ್‌ 14ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Continue Reading

ಬಾಲಿವುಡ್

Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

Kangana Ranaut: ಕಂಗನಾ ರಣಾವತ್‌ ಅವರು ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

VISTARANEWS.COM


on

Kangana Ranaut and sunny Urmila
Koo

ಬೆಂಗಳೂರು: ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.  ಇದರ ಜತೆಗೆ 2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ, ನಟಿ ಹಾಗೂ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಈ ವಿಡಿಯೊ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ನಟಿ ಟೈಮ್ಸ್ ನೌ ಶೃಂಗಸಭೆಯಲ್ಲಿ ಸಮರ್ಥಸಿಕೊಂಡಿದ್ದಾರೆ.

“ಸಾಫ್ಟ್ ಪೋರ್ನ್ ಅಥವಾ ಪೋರ್ನ್ ಸ್ಟಾರ್ ಒಂದು ಆಕ್ಷೇಪಾರ್ಹ ಪದವೇ? ಅಲ್ಲ! ಇದು ಆಕ್ಷೇಪಾರ್ಹ ಪದವಲ್ಲ. ಇದು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಪದವಾಗಿದೆ. ವಯಸ್ಕ ಸಿನಿಮಾಗೆ ನಮ್ಮ ದೇಶದಲ್ಲಿ ಗೌರವ ಕೂಡ ಇದೆ. ಪೋರ್ನ್ ಸ್ಟಾರ್‌ಗಳಿಗೆ ನಾವು ಕೊಡುವಷ್ಟು ಗೌರವ ಯಾವ ದೇಶವೂ ಕೊಡುವುದಿಲ್ಲ. ಸನ್ನಿ ಲಿಯೋನ್‌ (Sunny Leone) ಅವರನ್ನು ಕೇಳಿ ಗೊತ್ತಾಗುತ್ತೆʼʼಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ಊರ್ಮಿಳಾ ಮಾತೋಂಡ್ಕರ್ ಬಗ್ಗೆ ಕಂಗನಾ (Kangana Ranaut) ಮಾತನಾಡಿ ʻʻನನ್ನನ್ನು ರಾಜಕೀಯದಲ್ಲಿ ಪ್ರವೇಶಿಸಲು ಬಿಜೆಪಿಯು ಯಾವ ಆಧಾರದ ಮೇಲೆ ಪರಿಗಣಿಸಿದೆ ಎಂಬುದು ಊರ್ಮಿಳಾ ಅವರ ಪ್ರಶ್ನೆ ಆಗಿತ್ತು. ಕಲೆಗೆ ವಿವಿಧ ಕ್ಷೇತ್ರಗಳಿವೆ ಎಂದು ನಾನು ನಂಬುತ್ತೇನೆ. ಕಲೆಯನ್ನು ನಾವು ಸಂವೇದನಾಶೀಲ, ಸಮೂಹ ಕಲೆ ಎಂದು ನಾವು ಉಲ್ಲೇಖಿಸುತ್ತೇವೆ. ನಾನು ಬ್ಯಾಲೆನ್ಸ್ಡ್‌ ಸಿನಿಮಾ ಕಲಾವಿದರ ಗುಂಪಿಗೆ ಸೇರಿದವಳು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆʼಎಂದು ಹೇಳಿದರು.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಮಾತ್ರವಲ್ಲ ವೇಶ್ಯೆಗೆ ಹೋಲಿಸಿದರೆ ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುವುದರ ಹಿಂದಿನ ಕಾರಣವನ್ನು ಕಂಗನಾ ಪ್ರಶ್ನಿಸಿದ್ದಾರೆ. “ನಾವು ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಸ್ವೀಕರಿಸುವಾಗ ವೇಶ್ಯೆಯರ ಬಗ್ಗೆ ಈ ರೀತಿಯ ಕೆಟ್ಟ ಮನಸ್ಥಿತಿ ಏಕೆ ಹೊಂದಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ ಎಂಬ ಕಾರಣಕ್ಕಾಗಿಯೇ? ಗ್ಲಾಮರ್‌ಗಾಗಿಯೇ? ನಾವು ವೇಶ್ಯೆಯರನ್ನು ಪೋರ್ನ್ ಸ್ಟಾರ್‌ಗಳಂತೆ ಪರಿಗಣಿಸುತ್ತಿಲ್ಲ, ”ಎಂದು ಅವರು ಹೇಳಿದರು. ಇತ್ತೀಚಿನ ಕಂಗನಾ ಅವರ ಹೇಳಿಕೆಗಳ ಬಗ್ಗೆ ಊರ್ಮಿಳಾ ಮತ್ತು ಸನ್ನಿ ಇನ್ನೂ ಪ್ರತಿಕ್ರಿಯಿಸಿಲ್ಲ.

Continue Reading

ಬಾಲಿವುಡ್

Ranbir Kapoor: ತಮ್ಮ ಐಷಾರಾಮಿ ಬಂಗಲೆಯಲ್ಲಿ ಪೋಸ್‌ ಕೊಟ್ಟ ಆಲಿಯಾ-ರಣಬೀರ್!

Ranbir Kapoor: ಆಲಿಯಾ ರಣಬೀರ್‌ ಬಂಗಲೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಇದೀಗ ದಂಪತಿ ಬಂಗಲೆಯನ್ನು ವೀಕ್ಷಣೆ ಮಾಡಿದ ವಿಡಿಯೊಗಳು ವೈರಲ್‌ ಆಗಿವೆ.

VISTARANEWS.COM


on

Ranbir Kapoor Alia Bhatt visit new Mumbai bungalow
Koo

ಬೆಂಗಳೂರು: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ಅವರ ತಾಯಿ, ನಟಿ ನೀತು ಕಪೂರ್ ಅವರು ಮುಂಬೈನಲ್ಲಿ ತಮ್ಮ ಹೊಸ ಬಂಗಲೆಗೆ ಬುಧವಾರ (ಮಾ.27) ಭೇಟಿ ನೀಡಿದ್ದರು. ಆಲಿಯಾ ಮತ್ತು ನೀತು ಒಟ್ಟಿಗೆ ಬಂಗಲೆಗೆ ಪ್ರವೇಶಿಸಿದ ವಿಡಿಯೊಗಳು ಮತ್ತು ರಣಬೀರ್ ಅವರು ಬಂಗಲೆಯಲ್ಲಿನ ಬಾಲ್ಕನಿಯಿಂದ ವೀಕ್ಷಣೆ ಮಾಡುತ್ತಿರುವ ಕ್ಲಿಪ್‌ಗಳು ವೈರಲ್‌ ಆಗಿವೆ.

ಪಾಪರಾಜೋ ಖಾತೆಯಿಂದ ಹಂಚಿಕೊಂಡಿರುವ ವಿಡಿಯೊದಲ್ಲಿ, ಆಲಿಯಾ ತನ್ನ ಕಾರಿನಿಂದ ಹೊರಬಂದು ಬಂಗಲೆಯೊಳಗೆ ಹೋಗುತ್ತಿರುವುದನ್ನು ಕಾಣಬಹುದು. ಪ್ರತ್ಯೇಕ ಕಾರಿನಲ್ಲಿ ಬಂದ ನೀತು ಅವರು ಆಲಿಯಾ ಅವರ ಜತೆ ಸೇರಿಕೊಂಡರು. ಆಲಿಯಾ ಕಪ್ಪು ಪ್ಯಾಂಟ್ ಜೊತೆಗೆ ಕಪ್ಪು ಶರ್ಟ್ ಧರಿಸಿದ್ದರೆ, ರಣಬೀರ್ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ನೀತು ಬೀಜ್ ಉಡುಪಿನಲ್ಲಿ ಕಂಡರು.

ಬಂಗಲೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಕುಟುಂಬ ಯಾವಾಗ ಹೊಸ ಬಂಗಲೆಗೆ ಶಿಪ್ಟ್ ಆಗಲಿದೆ ಎಂದು ತಿಳಿದು ಬಂದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ರಣಬೀರ್, ನೀತು ಮತ್ತು ಆಲಿಯಾ ಜತೆಗೆ ಅನೇಕ ಬಾರಿ ಬಂಗಲೆಗೆ ಭೇಟಿ ನೀಡಿದ್ದರು. 2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು.

ಇದನ್ನೂ ಓದಿ: Ranbir Kapoor: ‘ಅನಿಮಲ್ ಪಾರ್ಕ್ʼ ಶೂಟಿಂಗ್‌ ಯಾವಾಗಿನಿಂದ ಶುರು?

ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2022ರ ಏಪ್ರಿಲ್ 14ರಂದು ಮದುವೆಯಾದರು.

ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ

ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.

Continue Reading

ಬಾಲಿವುಡ್

Ramayana Movie: ರಾಮಾಯಣದಲ್ಲಿ ಯಶ್‌ ಪತ್ನಿಯ ಪಾತ್ರಕ್ಕೆ ʻದಂಗಲ್‌ʼ ಸಿನಿಮಾ ನಟಿ!

Ramayana Movie: ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಎನ್ನಲಾಗಿದೆ.

VISTARANEWS.COM


on

sakshi tanwar joins the ramayana team
Koo

ಬೆಂಗಳೂರು: ನಿತೇಶ್ ತಿವಾರಿ ಅವರ ʻರಾಮಾಯಣʼ (Ramayana Movie) ಆಗಾಗ ಸುದ್ದಿಯಾಗುತ್ತಲೇ ಇದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಬಾಲಿವುಡ್ ನಟಿ ಸಾಕ್ಷಿ ತನ್ವರ್ ರಾವಣನ ಪತ್ನಿ ಮಂಡೋದರಿಯಾಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಮೂಲಗಳ ಪ್ರಕಾರ ಸಾಕ್ಷಿ ತನ್ವರ್ ಸ್ಕ್ರಿಪ್ಟ್ ಓದುವ ಸೆಷನ್‌ಗಳಿಗೆ ಹಾಜರಾಗುತ್ತಿದ್ದಾರೆ. ಕೆಜಿಎಫ್ ಸ್ಟಾರ್ ಯಶ್ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಲಾರಾ ದತ್ತಾ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರು ಕೈಕೇಯಿ ಮತ್ತು ಶೂರ್ಪನಖಿ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಇಬ್ಬರು ನಟಿಯರೂ ನಿತೇಶ್ ತಿವಾರಿಯವರ ರಾಮಾಯಣದ ಭಾಗವಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ “ರಾಮಾಯಣʼ ತೆರೆಕಾಣಲಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು.

ಇದನ್ನೂ ಓದಿ: Lok Sabha Election 2024: ರಾಯಚೂರಲ್ಲಿ ಬಿ.ವಿ. ನಾಯಕ ಭಿನ್ನಮತ ಸ್ಫೋಟ; ಡೀಸೆಲ್‌ ಸುರಿದುಕೊಂಡು ಹೈಡ್ರಾಮಾ!

ಏಕ್ತಾ ಕಪೂರ್ ಅವರ ಐಕಾನಿಕ್ ಶೋ ʻಕಹಾನಿ ಘರ್ ಘರ್ ಕಿʼಯಲ್ಲಿ ನಾಯಕಿ ಪಾರ್ವತಿ ಪಾತ್ರವನ್ನು ನಿರ್ವಹಿಸಿದ ನಂತರ ಸಾಕ್ಷಿ ತನ್ವರ್ ಮನೆ ಮಾತಾದರು. ʻಬಡೇ ಅಚ್ಚೆ ಲಗ್ತೆ ಹೇʼ ಚಿತ್ರದಲ್ಲಿ ಪ್ರಿಯಾ ಪಾತ್ರದಲ್ಲಿ ಮನಗೆದ್ದ ನಂತರ, ಅವರು ಸಣ್ಣ ಪರದೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು. ಆಮೀರ್ ಖಾನ್ ಅವರ ದಂಗಲ್, ಸಾಮ್ರಾಟ್ ಪೃಥ್ವಿರಾಜ್, ಮಿಷನ್ ಓವರ್ ಮಾರ್ಸ್, ಮತ್ತು ಮೈ: ಎ ಮದರ್ ರೇಜ್ ಸೇರಿದಂತೆ ಅನೇಕ ಸಿನಿಮಾಗಳು ಮತ್ತು ಮತ್ತು ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಈ ಸಿನಿಮಾವನ್ನು ಅಲ್ಲು ಅರವಿಂದ್, ಮಧು ಮಂತೇನಾ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಲಿದ್ದು, ನಿತೇಶ್ ತಿವಾರಿ ಮತ್ತು ರವಿ ಉದ್ಯಾವರ್ ನಿರ್ದೇಶಕರಾಗಿದ್ದಾರೆ. 2023ರ ಡಿಸೆಂಬರ್ /2024ರ ಜನವರಿಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

Continue Reading
Advertisement
Tea or Juice
ಆರೋಗ್ಯ13 mins ago

Tea or Juice: ಬೆಳಗ್ಗೆ ಟೀ ಕುಡಿದರೆ ಒಳ್ಳೆಯದೇ ಅಥವಾ ಹಣ್ಣಿನ ರಸ ಉತ್ತಮವೇ?

Dina Bhavishya
ಭವಿಷ್ಯ1 hour ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

kea
ಕರ್ನಾಟಕ5 hours ago

KEA: ಕೆಸೆಟ್-‌2023ರ ಪರಿಷ್ಕೃತ ಕೀ ಉತ್ತರ ಪ್ರಕಟ; ಹೀಗೆ ಪರಿಶೀಲಿಸಿ

Viral News: Holi at delhi metro
ದೇಶ6 hours ago

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Water Crisis
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

IPL 2024- Riyan Parag
ಪ್ರಮುಖ ಸುದ್ದಿ7 hours ago

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

Dolly Chaiwala
ವೈರಲ್ ನ್ಯೂಸ್7 hours ago

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Mukthar Ansari
ಪ್ರಮುಖ ಸುದ್ದಿ7 hours ago

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Former DCM Govinda Karajola pressmeet
ಬೆಂಗಳೂರು8 hours ago

Bengaluru News: ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಿದ್ದೇ ಮೋದಿಯಿಂದ: ಗೋವಿಂದ ಕಾರಜೋಳ

crime news
ಕ್ರೈಂ8 hours ago

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 hour ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202416 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202418 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌