Kaun Banega Crorepati: ಕೌನ್ ಬನೇಗಾ ಕರೋಡ್‌‌ಪತಿ ವಿಜೇತರು ತೆರಿಗೆ ಎಷ್ಟು ಕಟ್ಟಬೇಕು? - Vistara News

ಸಿನಿಮಾ

Kaun Banega Crorepati: ಕೌನ್ ಬನೇಗಾ ಕರೋಡ್‌‌ಪತಿ ವಿಜೇತರು ತೆರಿಗೆ ಎಷ್ಟು ಕಟ್ಟಬೇಕು?

ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ಸಾಕಷ್ಟು ಪ್ರತಿಭಾವಂತರು ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

Kaun Banega Crorepati
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜನಪ್ರಿಯ ಟಿವಿ ಷೋಗಳಲ್ಲಿ (most famous TV shows) ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ (Kaun Banega Crorepati) ವಿಜೇತರಿಗೆ ಸಾವಿರದಿಂದ ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಹೀಗಾಗಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಕಠಿಣ ಸ್ಪರ್ಧೆಯನ್ನು ಎದುರಿಸಿ ಇದರಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಸಾಕಷ್ಟು ಪ್ರತಿಭಾವಂತರು ಇಲ್ಲಿ ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ದಾಟಲೂ ಸಾಧ್ಯವಾಗುವುದಿಲ್ಲ. ಅಪರೂಪಕ್ಕೊಮ್ಮೆ ಕೆಲವರು ಕೋಟ್ಯಾಂತರ ರೂಪಾಯಿಯನ್ನು ಬಹುಮಾನವಾಗಿ ಗೆದ್ದುಕೊಂಡು ಹೋಗುತ್ತಾರೆ. ಹೀಗೆ ಅಪಾರ ಪ್ರಮಾಣ ಹಣ ಗೆಲ್ಲುವವರು ತೆರಿಗೆಯನ್ನು (tax) ಪಾವತಿಸಬೇಕೇ, ಎಷ್ಟು, ಹೇಗೆ ಪಾವತಿಸಬೇಕು ಎನ್ನುವ ಗೊಂದಲ ಹಲವರಲ್ಲಿ ಇದೆ.

Kaun Banega Crorepati
Kaun Banega Crorepati


ಕೆಬಿಸಿ ಬಹುಮಾನದ ಮೊತ್ತಕ್ಕೆ ಎಷ್ಟು ತೆರಿಗೆ?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194ಬಿ ಪ್ರಕಾರ ರಿಯಾಲಿಟಿ ಟಿವಿ ಶೋಗಳು, ಲಾಟರಿ, ಸ್ಪರ್ಧೆ, ಕಾರ್ಡ್ ಆಟ ಇತ್ಯಾದಿಗಳಿಂದ ಯಾವುದೇ ರೀತಿಯ ಗಳಿಕೆಯು “ಇತರ ಮೂಲಗಳಿಂದ ಆದಾಯ” ದ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಬಹುಮಾನದ ಮೊತ್ತವು 10,000 ರೂ. ಮೀರಿದರೆ ಮೂಲದಲ್ಲಿ ಶೇ. 30ರಷ್ಟು ತೆರಿಗೆ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಬಹುಮಾನವನ್ನು ಹಸ್ತಾಂತರಿಸುವ ಮೊದಲು ಟಿಡಿಎಸ್ ಕಡಿತಗೊಳಿಸಲು ಅಧಿಕಾರಿಗಳು ಅಥವಾ ಬಹುಮಾನದ ಹಣವನ್ನು ವಿತರಿಸುವ ವ್ಯಕ್ತಿ ಜವಾಬ್ದಾರರಾಗಿರುತ್ತಾರೆ. ಇದಕ್ಕೆ ಸೆಕ್ಷನ್ 80ಸಿ ಅಥವಾ 80ಡಿ ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿಗಳನ್ನು ಪಡೆಯಲು ಸಾಧ್ಯವಿಲ್ಲ.

ಸೆಕ್ಷನ್ 194ಬಿ ನಿಯಮಗಳು ಏನು?

ಸೆಕ್ಷನ್ 194ಬಿ ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳು ನೆನಪಿನಲ್ಲಿರಲಿ. ಎಲ್ಲಾ ರೀತಿಯ ರಿಯಾಲಿಟಿ ಟಿವಿ ಶೋ, ಲಾಟರಿ ಇತ್ಯಾದಿಗಳಿಂದ ಬಹುಮಾನ ಗಳಿಕೆಗಳಿಗೆ ಇದು ಅನ್ವಯಿಸುತ್ತದೆ.

ಬಹುಮಾನದ ಹಣವನ್ನು ಕಂತುಗಳಲ್ಲಿ ಸ್ವೀಕರಿಸಿದರೆ ಪ್ರತಿ ಬಾರಿ ಪಾವತಿಯನ್ನು ಸ್ವೀಕರಿಸಿದಾಗ ಟಿಡಿಎಸ್ ಅನುಪಾತದ ದರದಲ್ಲಿ ತೆರಿಗೆಯನ್ನು ಅನ್ವಯಿಸಲಾಗುತ್ತದೆ.

ಮಾರಾಟವಾಗದ ಲಾಟರಿಯಲ್ಲಿರುವ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ಇದು ವ್ಯಾಪಾರ ಆದಾಯದ ಭಾಗವಾಗಿರುತ್ತದೆ.

ಬಹುಮಾನವು ಕೇವಲ ರಜೆ ಪ್ಯಾಕೇಜ್, ಕಾರು, ಇತ್ಯಾದಿಗಳಾಗಿದ್ದರೆ ವಿಜೇತರು ಅದನ್ನು ಸ್ವೀಕರಿಸುವ ಮೊದಲು ಟಿಡಿಎಸ್ ಪಾವತಿಸಬೇಕಾಗುತ್ತದೆ. ತೆರಿಗೆ ದರವು ಶೇ. 30 ಮತ್ತು ಮಾರುಕಟ್ಟೆ ಮೌಲ್ಯದ ಹೆಚ್ಚುವರಿ ಶುಲ್ಕವನ್ನು ಒಳಗೊಂಡಿರುತ್ತದೆ.

ಒಂದು ವೇಳೆ ನಗದು ಮತ್ತು ವಸ್ತು ರೂಪದ ಬಹುಮಾನವನ್ನು ಸ್ವೀಕರಿಸಿದರೆ ಎರಡರ ಜಂಟಿ ಮೌಲ್ಯದ ಮೇಲೆ ಟಿಡಿಎಸ್ ಅನ್ವಯಿಸುತ್ತದೆ. ಆದರೆ ಅದನ್ನು ನಗದು ಭಾಗದಿಂದ ಮಾತ್ರ ಕಡಿತಗೊಳಿಸಲಾಗುತ್ತದೆ.

ಬಹುಮಾನವು ಕೇವಲ ವಸ್ತುವಾಗಿದ್ದರೆ ಇದನ್ನು ವಿತರಿಸುವ ವ್ಯಕ್ತಿಯು ವಿಜೇತರಿಗೆ ಹಸ್ತಾಂತರಿಸುವ ಮೊದಲು ಎಲ್ಲಾ ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಒಂದು ವೇಳೆ ಬಹುಮಾನ ವಿಜೇತರ ಒಂದು ನಿರ್ದಿಷ್ಟ ಭಾಗವು ಸರ್ಕಾರ ಅಥವಾ ಲಾಟರಿ ಏಜೆನ್ಸಿಗೆ ಹೋದರೆ ಆ ಭಾಗವು ಟಿಡಿಎಸ್ ನಲ್ಲಿ ಬರುವುದಿಲ್ಲ.

ಇದನ್ನೂ ಓದಿ: Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

ಸೆಕ್ಷನ್ 194ಜಿ ಪ್ರಕಾರ ಲಾಟರಿ ಏಜೆಂಟ್‌ಗಳಿಗೆ ಕಮಿಷನ್‌ಗಳ ಪಾವತಿಯು ತೆರಿಗೆಗೆ ಒಳಪಡುತ್ತದೆ.

ಕೌನ್ ಬನೇಗಾ ಕರೋಡ್ ಪತಿಯಲ್ಲಿ ನಗದು ಬಹುಮಾನವನ್ನು ಗೆದ್ದ ಅನಂತರ ಶೇ. 30ರಷ್ಟು ಟಿಡಿಎಸ್ ಮತ್ತು ಶೇ. 4ರಷ್ಟು ಹೆಚ್ಚುವರಿ ಸೆಸ್ ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

New Serial: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕಾಂಟ್ರಾಕ್ಟ್ ಮದುವೆಯನ್ನೊಳಗೊಂಡ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಶುರುವಾಗ್ತಿದೆ. ಇದೇ ಸೋಮವಾರದಿಂದ ಅಂದರೆ ಸೆ.30ರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

VISTARANEWS.COM


on

By

new serial
Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಆದರೆ ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು (New Serial) ವೀಕ್ಷಕರಿಗೆ ಹೇಳಲು ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ (star suvarna) ಸಜ್ಜಾಗಿದೆ.

ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ (ಟೀ) ಮಾರುವವಳಾಗಿದ್ದು, ಪೊಲೀಸ್ ಕಾನ್ಸ್‌ಟೇಬಲ್‌ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ.

new serial
new serial

ಇನ್ನು ಈ ಕಥೆಯ ನಾಯಕ ಅಜಿತ್‌, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮುಂದೆ, ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಅಜಿತ್‌ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್‌ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ. ಹೊಚ್ಚ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿದೆ. ವಿನಯ್‌ ಮೊಬೈಲ್‌ ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲು ಒಪ್ಪಿಗೆ ನೀಡಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ (Actor Darshan) ಸೆ. 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿದೆ. ಮಂಗಳವಾರ ತನಿಖಾಧಿಕಾರಿ ಚಂದನ್ ಅವರು ನ್ಯಾಯಾಲಯಕ್ಕೆ ಹಾರ್ಡ್ ಡಿಸ್ಕ್‌ಗಳಲ್ಲಿ ಟೆಕ್ನಿಕಲ್ ಎವಿಡೇನ್ಸ್ ಹಾಗೂ 17 ಪ್ರತಿಗಳನ್ನು ಸಲ್ಲಿಕೆ ಮಾಡಿದರು.

ಈ ವೇಳೆ ಸಿಎಫ್‌ಎಸ್‌ಎಲ್‌ ವರದಿಯನ್ನು ತೆರೆಯಲು ವಕೀಲರು ಅನುಮತಿ ಕೋರಿದರು. ಸಿಎಸ್‌ಎಫ್‌ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇವೆ. ನೀವು ಅನುಮತಿ ಕೊಟ್ಟರೆ ಪ್ರಕರಣದ 17 ಆರೋಪಿಗಳಿಗೂ ಸೀಲ್ ಓಪನ್ ಮಾಡಿ ಜೆರಾಕ್ಸ್‌ ಮಾಡಿ ಕಾಪಿ ಕೊಡುತ್ತೇವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು. ಈ ವೇಳೆ ಮುಂದಿನ ವಿಚಾರಣೆಯ ಒಳಗೆ ಸಿಎಸ್‌ಎಫ್‌ಎಲ್ ಜೆರಾಕ್ಸ್‌ ಪ್ರತಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.

ವಿನಯ್‌ ಮೊಬೈಲ್‌ ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ರವಾನೆ

ಬಳಿಕ A10 ಆರೋಪಿ ವಿನಯ್‌ ಅವರ ಮೊಬೈಲ್‌ ಅನ್ನು ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ಕಳುಹಿಸಲು ಕೋರ್ಟ್‌ಗೆ ತನಿಖಾಧಿಕಾರಿ ಮನವಿ ಮಾಡಿದರು. ಮೊಬೈಲ್‌ನಲ್ಲಿ ಇನ್ನು‌ ಕೆಲ ಸಾಕ್ಷ್ಯಗಳ ಸಂಗ್ರಹ ಆಗಬೇಕಿದೆ ಎಂದಾಗ ನ್ಯಾಯಾಧೀಶರು ಮನವಿಗೆ ಸಮ್ಮತಿಸಿದರು.

ನಟ ದರ್ಶನ್‌ಗೆ ಬೆನ್ನು ನೋವು

ನಟ ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂರಲು ಆಗುತ್ತಿಲ್ಲ. ಚೇರ್ ಕೊಡುವಂತೆ ಕೇಳಿದ್ದರೂ ಚೇರ್ ಕೊಟ್ಟಿಲ್ಲ. ದಯವಿಟ್ಟು ಪ್ಲ್ಯಾಸ್ಟಿಕ್ ಚೇರ್ ವ್ಯವಸ್ಥೆ ಮಾಡಿಕೊಡಿ ಎಂದು ದರ್ಶನ್‌ ಪರ ವಕೀಲರು ಮನವಿ ಮಾಡಿದರು. ಈ ಸಂಬಂಧ ಜೈಲಾಧಿಕಾರಿಗಳ ಬಳಿಯೇ ಮನವಿ ಮಾಡಿ ಎಂದು ನ್ಯಾಯಾಧೀಶರು ತಿಳಿಸಿದರು. ಜೈಲಾಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಉತ್ತರಿಸಿದಾಗ, ಜೈಲಿನ ಮ್ಯಾನುವಲ್‌ ಪ್ರಕಾರ ಕೊಡುತ್ತಾರೆ ಬಿಡಿ ಎಂದು ನ್ಯಾಯಾಧೀಶರು ತಿಳಿಸಿದರು.

ಪವಿತ್ರಗೌಡ ಪರ ವಕೀಲರು ಕುಟುಂಬ ಸದಸ್ಯರಿಗೆ ಭೇಟಿಯಾಗಲು ಜೈಲಾಧಿಕಾರಿಗಳು ಬಿಡುತ್ತಿಲ್ಲ ಎಂದು ಗಮನಕ್ಕೆ ತಂದರು. ಆ ಸಂಬಂಧ ಎಲ್ಲ ಸರಿ ಮಾಡೋಣಾ ಬಿಡಿ, ಊಟ-ತಿಂಡಿಗೆ ಏನಾದರೂ ಸಮಸ್ಯೆ ಇದೇಯಾ ಎಂದು ಕೇಳಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಯಿತು.

ರೇಣುಕಾಸ್ವಾಮಿ ಕೊಲೆ ಕೇಸ್‌ನ A13 ಆರೋಪಿ ಶಾಸಕ ಮುನಿರತ್ನ ಸಂಬಂಧಿ!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರ್‌ಆರ್ ನಗರ ಶಾಸಕ ಮುನಿರತ್ನ ಹೆಸರು ಕೇಳಿ ಬಂದಿದೆ. ಮುನಿರತ್ನ ಸಂಬಂಧಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ13ನೇ ಆರೋಪಿ ಆಗಿದ್ದಾನೆ. ದರ್ಶನ್ ಗ್ಯಾಂಗ್‌ನ‌ ಎ13 ಆರೋಪಿ ದೀಪಕ್ ಎಂಬಾತ ಶಾಸಕ ಮುನಿರತ್ನರ ಸಂಬಂಧಿಯಾಗಿದ್ದಾನೆ.

ಆರೋಪಿ ದೀಪಕ್ ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ವಿಡಿಯೊ ಮಾಡಿ ಅದನ್ನು ಶಾಸಕ ಮುನಿರತ್ನ ಅವರಿಗೆ ಕಳಿಸಿದ್ದ ಎನ್ನಲಾಗಿದೆ. ಅದೇ ವಿಡಿಯೊವನ್ನು ಶಾಸಕರ ಸೂಚನೆ ಮೇರೆಗೆ ಕೇಂದ್ರ ಸಚಿವರಿಗೆ ರವಾನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಳಿಕ ಕೇಂದ್ರ ಸಚಿವರನ್ನ ಬಳಸಿಕೊಂಡು ನಗರ ಪೊಲೀಸ್ ಆಯುಕ್ತರಿಗೆ ಬ್ಲ್ಯಾಕ್‌ ಮೇಲ್ ಮಾಡಲಾಗಿದೆ ಎನ್ನಲಾಗಿದೆ. ಶಾಸಕ ಮುನಿರತ್ನ ಅವರ ವೈಯಕ್ತಿಕ ಲಾಭಕ್ಕೆ ದಯಾನಂದ್ ಅವರಿಗೆ ಕರೆ ಮಾಡಿ ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.

ಸಿಬಿಐ ಹೆಸರು ಹೇಳಿ ಅವರಿಂದ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಮೂಲಕ ನಗರ ಪೊಲೀಸರನ್ನು ಬೆದರಿಸಿದ್ದರಂತೆ. ರೇಣುಕಾಸ್ವಾಮಿ ಹತ್ಯೆಯ ಬಗ್ಗೆ ಗೊತ್ತಿದ್ದರೂ ಕಾನೂನು ಕ್ರಮದ ಬಗ್ಗೆ ಶಾಸಕರು ಒತ್ತಾಯ ಮಾಡಿದ್ದರಂತೆ. ತನ್ನ ವೈಯಕ್ತಿಕ ವಿಚಾರ ಇತ್ಯಾರ್ಥ ಪಡಿಸಿಕೊಳ್ಳಲು ನಗರ ಪೊಲೀಸರಿಗೆ ಬೆದರಿಕೆ ಹಾಗೂ ತನ್ನ ಸಂಬಂಧಿ ದೀಪಕ್‌ನನ್ನು ಪ್ರಕರಣದಿಂದ ಕೈ ಬಿಡಲು 5 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದರಂತೆ. ಈ ಬಗ್ಗೆ ಬಂದ ಮೌಖಿಕ ಮಾಹಿತಿ ಆಧಾರಿತವಾಗಿ ದೂರು ದಾಖಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಕೈವಾಡದ ಬಗ್ಗೆ ತನಿಖೆ ನಡೆಸುವಂತೆ ವಕೀಲ ಜಗದೀಶ್ ಅವರಿಂದ ನಗರ ಪೊಲೀಸ್ ಆಯುಕ್ತರಿಂದ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Kaalapatthar Film Review : ಕಾಲಾಪತ್ಥರ್ : ಕಪ್ಪು ಕಲ್ಲಿನ ಪುತ್ಥಳಿ ಸುತ್ತಲು ವಿಸ್ಮಯ ಕಥನ

Kaalapatthar Film Review : ಸೆ.13ಕ್ಕೆ ತೆರೆ ಕಂಡ ಕಾಲಾಪತ್ಥರ್‌ ಕನ್ನಡ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ (Film Review) ವ್ಯಕ್ತವಾಗಿದೆ. ಈ ಚಿತ್ರದಲ್ಲಿ ವಿಕ್ಕಿವರುಣ್ ನಿರ್ದೇಶಕನಾಗಿ ಸೈ ಎನಿಸಿಕೊಳ್ಳುವುದರ ಜತೆಗೆ ನಟನೆಯನ್ನೂ ನಿರ್ವಹಿಸಿರುವುದು ಪ್ರಶಂಸನೀಯ.

VISTARANEWS.COM


on

By

Kaalapatthar film
Koo
Shivaraj DNS

-ಶಿವರಾಜ್ ಡಿ.ಎನ್.ಎಸ್

ಸಾಮಾನ್ಯ ಮನುಷ್ಯನೊಬ್ಬನ ಜೀವನದಲ್ಲಿ ನಡೆಯುವ ವಿಚಿತ್ರ ಘಟನೆ. ಪರಿವರ್ತನೆಯೋ, ಪರಿಸ್ಥಿತಿಯೋ ಏನೋ ಇವತ್ತು ಹೊಗಳುವವರು, ನಾಳೆ ಉಗುಳುತ್ತಾರೆ. ಸೈನಿಕ ಅಂದರೆ ಬಂದೂಕು ಹಿಡಿದು ಗಡಿಯಲ್ಲಿ ಎದೆಯೊಡ್ಡಿ ನಿಲ್ಲುವವರಷ್ಟೆ ಅಲ್ಲ, ಸೇನೆಯ ಅಡುಗೆ ಕೋಣೆಯಲ್ಲಿ ಸೌಟ್ ಹಿಡಿಯುವರು, ಯುದ್ಧ ಭೂಮಿಯಲ್ಲಿ ಸ್ಟೇರಿಂಗ್ ಹಿಡಿಯುವವರೂ ಸೈನಿಕರೆ. ಊರಿನ ಒಳಿತಿಗಾಗಿ ಏನಾದರೂ ತ್ಯಾಗ ಮಾಡಬಹುದು ಆದರೆ ನಮ್ಮ ಜೀವವನ್ನೆ ತ್ಯಾಗ ಮಾಡುವಂತ ಸ್ಥಿತಿ ಎದುರಾದರೆ.? ಇಂತಹ ಹತ್ತಾರು ಗಮನಾರ್ಹ ವಿಷಯಗಳ ಸುತ್ತ ಸುತ್ತುವ ಕಥೆಯೇ ಕಾಲಾಪತ್ಥರ್‌ (Kaalapatthar Film Review).

ಸಿನಿಮಾ ಅದ್ಭುತ ಛಾಯಗ್ರಹಣದೊಂದಿಗೆ ಒಂದು ಸುಂದರ ಹಳ್ಳಿಯ ವಾತಾವರಣ ಸೃಷ್ಟಿಸುತ್ತ ತೆರೆದುಕೊಳ್ಳುತ್ತದೆ. ಕಥೆ ಸಾಗುತ್ತ ಬರಡು ಬಯಲು ಪ್ರದೇಶದ ಕುಗ್ರಾಮದ ಯುವಕ ಶಂಕರ್ ಸೇನೆಯಲ್ಲಿದ್ದಾನೆ. ಅವನ ಊರಿನಲ್ಲಿ ನೀರು, ರಸ್ತೆ, ರಾಜಕೀಯ ಮುಂತಾದ ಸಮಸ್ಯೆಗಳಿವೆ. ಅಣ್ಣಾವ್ರ ಅಭಿಮಾನಿಯಾಗಿರುವ ಶಂಕರ್‌ಗೂ ಅವನದೇ ಆದ ಸಮಸ್ಯೆಯ ಜತೆಗೆ ಅವನಿಗಾಗಿ ಕಾಯತ್ತಿರುವ ಪ್ರೇಯಸಿಯೂ ಇದ್ದಾಳೆ. ಇಂತಹ ವಿಷಯ ಮಂಡನೆ ಮಾಡಿ ಪ್ರೇಕ್ಷಕರೊಂದಿಗೆ ಕನೆಕ್ಟಾಗಲೂ ಶುರುವಾಗುತ್ತದೆ. ಬಂದೂಕು ಹಿಡಿಯುವ ಆಸೆ ಇರುವ ಶಂಕರ್‌ನ ಕೈಯಿಗೆ ಸೇನೆಯಲ್ಲಿ ಸೌಟ್ ಕೊಟ್ಟಿದ್ದಾರೆ. ಅದು ಯಾಂತ್ರಿಕವಾದರು ಆನಂದದಿಂದ ಅನುಭವಿಸುತ್ತಲೆ, ಏನೆ ಮಾಡಿದರೂ ಸ್ಟೈಲಾಗಿ ಮಾಡುತ್ತ, ತನ್ನ ಪಾಡಿಗೆ ತಾನು ಕಾರ್ಯನಿರ್ವಹಿಸುತ್ತಿರುತ್ತಾನೆ.

ಹೀಗೆ ಒಮ್ಮೆ ಸಮಯ ನೋಡಿ ಕ್ಯಾಂಪಿಗೆ ನುಗ್ಗಿ ಏನೊ ಕಿತಾಪತಿ ಮಾಡಲು ಮುಂದಾಗಿದ್ದ ವೈರಿಗಳನ್ನು ಕಾಣುವ ಶಂಕರ ಏಕಾಂಗಿಯಾಗಿ ಸ್ಟೋರ್ ರೂಮು, ಅಡುಗೆ ಕೋಣೆಯನ್ನೆಲ್ಲ ಅಟ್ಟಾಡಿಸಿ, ತನ್ನ ಚಮಚ-ಸೌಟು ಬಕೇಟಿನಲ್ಲಿ ಬಡಿದಾಡಿ ಹೆಡೆಮುರಿಕಟ್ಟಿ, ತಾನೂ ಗಾಯಗೊಂಡು ಆಸ್ಪತ್ರೆ ಸೇರುತ್ತಾನೆ. ಹೀಗೆ ವೈರಿಗಳೊಂದಿಗೆ ಹೋರಾಡಿದ ಕುರಿತು ವಿಶೇಷ ಕಾರ್ಯಕ್ರಮ ಮಾಡಿ ಬಿತ್ತರಿಸುವ ನ್ಯೂಸ್ ಚಾನೆಲ್‌ಗಳೆಲ್ಲ ಶಂಕರನ ಹೀರೋ ಮಾಡುವುದರ ಜತೆಗೆ ಅವನ ಊರನ್ನೂ ತಲುಪಿ, ದೇಶಕ್ಕಾಗಿ ಇಷ್ಟೆಲ್ಲ ಮಾಡಿರುವ ನಿಮ್ಮೂರಿನ ಯೋಧನಿಗಾಗಿ ಗ್ರಾಮಸ್ಥರು ಏನ್ಮಾಡ್ತಿರಿ.? ಎನ್ನುವ ಪ್ರಶ್ನೆ ಮಾಡುತ್ತಾರೆ. ಆಗ ಊರ ಗೌಡರು ಊರು ಕಾಯೋ ಶಿವ ಬೇರೆಯಲ್ಲ, ದೇಶ ಕಾಯೊ ಶಂಕರ ಬೇರೆಯಲ್ಲ, ಅವನದೂ ನಮ್ಮೂರಿನಲ್ಲೊಂದು ಪ್ರತಿಮೆಯನ್ನೇ ಮಾಡಿ ನಿಲ್ಲಿಸುತ್ತೇವೆ ಎಂದು ತೀರ್ಮಾನಿಸುತ್ತಾರೆ.

Kaalapatthar Film

ಸೈನಿಕ ಶಂಕರ ಮನೆಗಷ್ಟೆ ಅಲ್ಲ, ಊರಿಗೆ ಊರೆ ಹೆಮ್ಮೆಪಡುವಂತ ಶಂಕರ್ರಣ್ಣನಾಗಿ ನಿಲ್ಲುತ್ತಾನೆ. ಕೋಟೆ ಬಾಗಿಲ ಬಳಿ ಕರಿಕಲ್ಲಿನಿಂದ ಕೆತ್ತುವ ಅವನ ಪ್ರತಿಮೆಯೂ ನಿಲ್ಲುತ್ತದೆ. ಅದು ಅಲ್ಲಿಯ ರಾಜಕಾರಣಿಗೆ ಹಿಡಿಸುವುದಿಲ್ಲ. ಹೀಗೆ ಕಥೆಯ ವೈಚಿತ್ರ್ಯ ತೆರದು ಕೊಳ್ಳುತ್ತಾ,.. ಪ್ರೇಕ್ಷಕರ ಕುತೂಹಲವನ್ನೂ ಕೆರಳಿಸುತ್ತ ಸಾಗುತ್ತದೆ. ಅಲ್ಲಿಂದಾಚೆಗೆ ಶಂಕರನ ಹಾಗೂ ಊರಿನ ಒಳಗೊರಗೆ ಏನಾಗುತ್ತದೆ ಎನ್ನುವುದೇ ಸಿನಿಮಾ.

ಸಾಮಾನ್ಯವಾಗಿ ಯಾವಾಗ ಮನೆಗೆ ಬರ್ತಿಯಪ್ಪ ಮಗನೇ ಅಂತಾ ತಂದೆ-ತಾಯಿ ಕಣ್ಣೀರು ಹಾಕೋದು ನೋಡಿರುವ ಪ್ರೇಕ್ಷಕರು, ನೀನು ಮನೆಯಿಂದ ಯಾವಾಗ ಹೋಗ್ತಿಯಪ್ಪ ಅಂತ ಕಣ್ಣೀರು ಹಾಕುತ್ತ ಕೈ ಮುಗಿದು ಕೇಳಿಕೊಳ್ಳುವುದನ್ನು ಈ ಸಿನಿಮಾದಲ್ಲಿ ನೋಡಬಹುದು. ನಿಜ ಜೀವನದಲ್ಲಿಯೂ ನಡೆಯಬಹುದಾದ ಕೆಲ ವಿಚಿತ್ರ ಘಟನೆಗಳು ಯಾರೊಬ್ಬರಿಗೂ ಹೇಳಿಕೊಳ್ಳಲಾಗದ, ಹೇಳಿಕೊಂಡರೂ ನಂಬಲಾಗದ ಸಂದಿಗ್ಧ ಸ್ಥಿತಿಗೆ ತಲುಪುವ ಮನುಷ್ಯನ ಪಾಡು, ಕಾಯಕವೇ ಕೈಲಾಸ ಎನ್ನುವ ತತ್ವ ಖುದ್ದು ಅಣ್ಣಾವ್ರೆ (ಡಾ. ರಾಜಕುಮಾರ್‌) ತೆರೆಗೆ ಬಂದು ಹೇಳುವಂತ ವಿಶೇಷ ದೃಶ್ಯವನ್ನೂ ಈ ಸಿನಿಮಾದಲ್ಲಿ ಕಾಣಬಹುದು.

ಕಾಕತಾಳಿಯವೋ, ವಿಧಿ ಲಿಖಿತವೊ, ಕೆಲ ಅಹಂಕಾರ ಪ್ರದರ್ಶನ ದೃಶ್ಯದಲ್ಲಿ ಪ್ರಸ್ತುತದಲ್ಲಿರುವ ಮನಸ್ಥಿತಿಯೊಂದರ ಪರಿಸ್ಥಿತಿಗೆ ಕೈಗನ್ನಡಿ ಅನ್ನಿಸಬಹುದು. ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದದ್ದು ಯಾಕೆ ಎನ್ನುವುದರ ಹಿಂದಿನ ಸತ್ಯವೂ ಈ ಚಿತ್ರದಲ್ಲಿ ಹೇಳಿರುವಂತೆಯೇ ಇರಬಹುದೇನೂ ಅನಿಸುತ್ತದೆ. ರಾವಣಾ ಕೃತಿಯನ್ನು ಬಹಿರಂಗವಾಗಿ ಒಪ್ಪದ ಒಬ್ಬ ಮನುಷ್ಯ ಅಂತರಂಗದಲ್ಲಿ ತನಗೆ ಗೊತ್ತಿಲ್ಲದಂತೆ ಅಪ್ಪಿಕೊಂಡಿರುತ್ತಾನೆ ಎನ್ನುವ ವಿಷಯ, ದುಡಿಮೆಯೇ ದೇವರು ಎನ್ನುವ ಬರಹದ ಅಡಿಯಲ್ಲಿ ಇಸ್ಪೀಟು ಆಡುವ ದೃಶ್ಯ ನೆನಪಿನಲ್ಲಿ ಉಳಿಯುತ್ತದೆ.

ನಿರ್ದೇಶಕನಾಗುವ ಕನಸು ಹೊತ್ತು ಚಿತ್ರರಂಗ ಪ್ರವೇಶಿಸಿ ಕೆಂಡಸಂಪಿಗೆ ಚಿತ್ರದ ಮೂಲಕ ನಟನಾಗಿ ಸೈ ಎನಿಸಿಕೊಂಡಿದ್ದ ವಿಕ್ಕಿವರುಣ್, ಈ ಚಿತ್ರದಲ್ಲಿ ನಿರ್ದೇಶಕನಾಗಿ ಸೈ ಎನಿಸಿಕೊಳ್ಳುವುದರ ಜತೆಗೆ ನಟನೆಯನ್ನೂ ನಿರ್ವಹಿಸಿರುವುದು ಪ್ರಶಂಸನೀಯ. ನಾಯಕಿಯಾಗಿ ಧನ್ಯ ರಾಮ್ ಕುಮಾರ್, ಊರ ಗೌಡನಾಗಿ ಟಿ.ಎಸ್. ನಾಗಾಭರಣ , ರಾಜಕಾರಣಿಯ ಪಾತ್ರದ ರಾಜೇಶ್ ನಟರಂಗ, ನಟನ ಅಪ್ಪನ ಪಾತ್ರದಲ್ಲಿ ಶಿವಪ್ರಸಾದ್ ಎಲ್ಲರೂ ಪಾತ್ರಗಳಿಗೆ ವಿಶೇಷ ಮೆರಗು ನೀಡಿದ್ದಾರೆ.

ಪ್ರೀತಿ-ಪ್ರೇಮ-ಪ್ರಣಯಕ್ಕೆ ಇನ್ನೂ ತುಸು ಜಾಗ ನೀಡಬೇಕಿತ್ತು ಅನಿಸಬಹುದು. ಆದರೆ ಸಿನಿಮಾದ ಮುಖ್ಯ ಕಥೆ ಅದಲ್ಲದೇ ಇರುವುದರಿಂದ ಈಗ ಎಷ್ಟು ಇದ್ಯೋ ಅಷ್ಟೇ ಚೆಂದ. ಇತ್ತ ಹಳೆ ಮೈಸೂರು ಅಲ್ಲ, ಅತ್ತ ಉತ್ತರ ಕರ್ನಾಟಕದ ಹಳ್ಳಿಯೂ ಅಲ್ಲ. ಅಂತಹದ್ದೇ ಯಾವುದೊ ಹಳ್ಳಿ ಎನ್ನಬಹುದಾದ ಒಂದು ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆ ಎನ್ನುವಂತೆ ಡೈರೆಕ್ಟರ್ ಗಟ್ಟಿ ಮನಸ್ಸು ಮಾಡಿ ಒಂದು ಪ್ರಾದೇಶಿಕತೆಯೊಂದಿಗೆ ಹೆಣೆದಿದ್ದರೇ ಚಿತ್ರ ಇನ್ನೂ ಗಂಭೀರ ಆಗಬಹುದಿತ್ತೇನೊ. ಕೆಲವು ಕಡೆ ಕಲಾ ನಿರ್ದೇಶಕರೂ ಇನ್ನೂ ತುಸು ಶ್ರಮವಹಿಸಬೇಕಿತ್ತು ಅನಿಸಬಹುದು.

ಅನೂಪ್ ಸೀಳಿನ್ 2.0 ಸಂಗೀತ, ವಿ.ನಾಗೇಂದ್ರ ಪ್ರಸಾದ್ ಹಾಗು ಪ್ರಮೋದ್ ಮರವಂತೆ ಅವರ ಸಾಹಿತ್ಯ, ಸಂಭಾಷಣೆ, ಸತ್ಯಪ್ರಕಾಶ್ ಅವರ ಕತೆ ಎಲ್ಲವೂ ವಾವ್ ಎನಿಸುತ್ತದೆ. ಎಲ್ಲ ಕಲಾವಿದರೂ ಅಭಿನಯವೂ ಅಚ್ಚುಕಟ್ಟಾಗಿದೆ, ಛಾಯಾಗ್ರಹಣವು ಇಷ್ಟವಾಗುತ್ತದೆ. ವಿಷಯಗಳಿಗೆ ಪ್ರಮುಖ್ಯತೆ ಕೊಟ್ಟು ಕಟ್ಟಿರುವ ‘ಕಾಲಾಪತ್ಥರ್’ ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಬಹುದಾದ ಸಿ‌ನಿಮಾ ಎನ್ನಬಹುದು. ಯಾವುದೇ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಭೇಟಿ ಕೊಟ್ಟರೆ ಕ್ಲಾಸ್ ಸಿನಿ ಪ್ರೇಮಿಗಳಿಗೂ ಇಲ್ಲಿರುವ ಮಾಸ್ ಕೂಡ ಇಷ್ಟವಾಗುತ್ತದೆ.

Continue Reading

ಬೆಂಗಳೂರು

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌; ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ

Actor Darshan : ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮುಂದುವರಿದಿದ್ದು, ನಾಲ್ಕು ದಿನಗಳು ಜೈಲೆಗತಿಯಾಗಿದೆ.

VISTARANEWS.COM


on

By

Actor darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಅರ್ಜಿ ಸಂಬಂಧ ನ್ಯಾಯಾಲಯದ ಒಂದಷ್ಟು ಕಾರ್ಯವಿಧಾನಗಳು ಬಾಕಿ ಇರುವ ಕಾರಣ ಮತ್ತಷ್ಟು ದಿನಗಳವರೆಗೆ ದರ್ಶನ್‌ ಗ್ಯಾಂಗ್‌ಗೆ (Actor Darshan) ಜೈಲೇ ದಿಕ್ಕು . ಜಾಮೀನು ಅರ್ಜಿಗೆ ರಜೆ ದಿನಗಳೇ ಅಡ್ಡಿಯಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಮೂರು ದಿನಗಳ ಕಾಲ ನ್ಯಾಯಾಲಯವು ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಆದೇಶ ನೀಡಿತ್ತು. ನಿನ್ನೆ ಗುರುವಾರ ಕೂಡ ಒಂದು ದಿನ ಜ್ಯೂಡಿಷಿಯಲ್ ಕಷ್ಟಡಿಗೆ ಒಳಪಡಿಸಲಾಗಿತ್ತು. ಇಂದು ಶುಕ್ರವಾರ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾತಿ ಪಡೆದ ಕೋರ್ಟ್‌ ಸೆ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ: Nagamangala Case : ನಾಗಮಂಗಲ ಗಲಭೆ; ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿದ್ದ ಕುಟುಂಬಗಳು

ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಗಣೇಶ ಹಬ್ಬ ಹಾಗು ರಜಾದಿನಗಳು ಬ್ಯಾಕ್ ಟು ಬ್ಯಾಕ್ ಬಂದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಕೂಡ ಆರೋಪಿಗಳ ಕೈ ಸೇರಿರಲಿಲ್ಲ . ಸೋಮವಾರ ಆರೋಪಿಗಳಿಗೆ ಚಾರ್ಜ್ ಶೀಟ್ ಸಿಕ್ಕಿದರೂ ಮುಖ್ಯವಾಗಿ ಬೇಕಾದ ಟೆಕ್ನಿಕಲ್ ಎವಿಡೆನ್ಸ್‌ಗಳು ಹಾಗು ಅದರ ವರದಿ ಸಿಕ್ಕಿರಲಿಲ್ಲ, ಈಗಲೂ ಸಿಕ್ಕಿಲ್ಲ. ಇದೆಲ್ಲಾವೂ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ವಿಳಂಬವಾಗುತ್ತಿದೆ.

ಇನ್ನು ಚಾರ್ಜ್ ಶೀಟ್ ಹಾಗೂ ಡಿಜಿಟಲ್ ಎವಿಡೆನ್ಸ್ ವರದಿಗಳನ್ನು ಅನಾಲೈಝ್ ಮಾಡಿದ ಬಳಿಕವಷ್ಟೇ ಮೂವ್ ಆಗಬಹುದು. ಅದಾದ ಬಳಿಕ ಈ ಪ್ರಕರಣವನ್ನು ಸೆಷನ್ ಕೋರ್ಟ್‌ಗೆ ವರ್ಗಾವಣೆಯಾಗಿ, ಅಲ್ಲಿ ನ್ಯಾಯಾಲಯದ ಅನುಮತಿ ಪಡೆದು ಜಾಮೀನು ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ಇದೇ ವೇಳೆ ದರ್ಶನ್ ಪರ ವಕೀಲ ಆದಷ್ಟು ಬೇಗ ವರದಿಗಳನ್ನು ನೀಡಬೇಕು ಜಾಮೀನು ಸಲ್ಲಿಕೆ ಮಾಡುವುದು ಆರೋಪಿಯ ಫಂಡಮೆಂಟಲ್ ರೈಟ್ಸ್ ಎಂದು ವಾದ ಮಂಡಿಸಿದರು. ಸದ್ಯ ನಾಲ್ಕು ದಿನಗಳಲ್ಲಿ ಕೋರ್ಟ್‌ನ ಪೆಂಡಿಂಗ್ ಕೆಲಸಗಳು ಕ್ಲಿಯರ್ ಆದರೆ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿವರೆಗೂ ಕೊಲೆ ಆರೋಪಿಗಳಿಗೆ ಜೈಲೇ ಗತಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Murder case
ಬೆಂಗಳೂರು2 ಗಂಟೆಗಳು ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

assault case
ಹಾವೇರಿ3 ಗಂಟೆಗಳು ago

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

Murder case
ದಾವಣಗೆರೆ4 ಗಂಟೆಗಳು ago

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

new serial
ಬೆಂಗಳೂರು6 ಗಂಟೆಗಳು ago

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

World Retinal Day 2024
ಪ್ರಮುಖ ಸುದ್ದಿ7 ಗಂಟೆಗಳು ago

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

MUda Scam
ರಾಜಕೀಯ8 ಗಂಟೆಗಳು ago

Muda Scam : ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್ಚಾದ ಒತ್ತಡ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಪ್ರತಿಭಟನೆ

Cancer Treatment AI
ಆರೋಗ್ಯ8 ಗಂಟೆಗಳು ago

Cancer Treatment : ವೈದ್ಯಕೀಯ ಲೋಕದಲ್ಲಿ ಎಐ; ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌!

Dina Bhavishya
ಭವಿಷ್ಯ8 ಗಂಟೆಗಳು ago

Dina Bhavishya :ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Self Harming
ಕೋಲಾರ1 ದಿನ ago

Self Harming : ಹೆಂಡ್ತಿ ಮನೆಯವರ ಕಿರುಕುಳ; ವಿಡಿಯೊ ಮಾಡಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ನೇಣಿಗೆ ಶರಣು

karnataka weather Forecast
ಮಳೆ2 ದಿನಗಳು ago

Karnataka Weather : ರಾಜ್ಯಾದ್ಯಂತ ವ್ಯಾಪಕ ಮಳೆ ; ಉಡುಪಿ, ಉತ್ತರ ಕನ್ನಡಕ್ಕೆ ರೆಡ್‌ ಅಲರ್ಟ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌