khadak singh review: ಖಡಕ್ ಕತೆಯಿಲ್ಲದೆ ತೇಲಿ ಹೋಗುವ ಖಡಕ್ ಸಿಂಗ್! - Vistara News

ಬಾಲಿವುಡ್

khadak singh review: ಖಡಕ್ ಕತೆಯಿಲ್ಲದೆ ತೇಲಿ ಹೋಗುವ ಖಡಕ್ ಸಿಂಗ್!

ಕಟ್ಟುನಿಟ್ಟಿನ ತಂದೆಯ ದುರ್ವರ್ತನೆ ನೋಡಿ ಮಕ್ಕಳಿಬ್ಬರು ಅಪ್ಪನಿಗೆ ‘ಖಡಕ್ ಸಿಂಗ್’ (khadak singh review) ಎಂದು ಅಡ್ಡ ಹೆಸರು ಇಟ್ಟುಕೊಂಡಿರುತ್ತಾರೆ. ಸಿನಿಮಾದಲ್ಲಿ ಅದೊಂದೇ ಆಕರ್ಷಣೆ.

VISTARANEWS.COM


on

Khadak SIngh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವರಾಜ್‌ ಡಿ ಎನ್‌ ಎಸ್‌

Shivaraj DNS

ಈ ಸಿನಿಮಾದ (khadak singh review) ಕಾಸ್ಟಿಂಗ್ ಅದ್ಭುತವಾಗಿದೆ. ಪಾರ್ವತಿ ತಿರುವತ್ತೂರ್ ಹೆಡ್ ನರ್ಸ್ ‘ಮಿಸ್ ಕಣ್ಣನ್’ ಪಾತ್ರದಲ್ಲಿ ಕ್ಯೂಟ್ ಎನ್ನುವಂತೆ ನಟಿಸಿದ್ದಾರೆ, ಪಂಕಜ್ ತ್ರಿಪಾಠಿ ಅವರು ಎಕೆ ಶ್ರೀವಾತ್ಸವ್ ಪಾತ್ರಕ್ಕೆ ಎಂದಿನಂತೆ ತಮ್ಮ ಮನೋಜ್ಞ ಅಭಿನಯದಿಂದ ಜೀವ ನೀಡಿದ್ದಾರೆ. ಬಹಳ ದಿನಗಳ ನಂತರ ಚಿತ್ರದ ಸಂಗೀತದಲ್ಲಿ ಸಿತಾರ್, ಸರೋದ್ ವಾದ್ಯದ ಸದ್ದುಗಳು ಕೇಳಿ ಬಂದವು. ಸಾಕ್ಷಿ ಶ್ರೀವಾತ್ಸವ್ ಪಾತ್ರದಲ್ಲಿ ಸಂಜನಾ ಶಾಘೈ ಅಚ್ಚುಕಟ್ಟಾಗಿ ಅಭಿನಯಿಸಿರುವುದಲ್ಲದೆ ಕೆಲವು ದೃಶ್ಯಗಳಲ್ಲಿ ಭಾವನಾತ್ಮಕವಾಗಿ ಗಮನ ಸೆಳೆಯುತ್ತಾರೆ. ಚಿತ್ರದ ಸಂಭಾಷಣೆ ಕವಿತೆಯಂತೆ ಭಾಸವಾಗುತ್ತದೆ.

ಎಲ್ಲರಿಗೂ ಅನ್ಸತ್ತೆ.. ನಮಗೆ ಅಮ್ಮ ಇಲ್ಲ ಅಂತಾ. ಆದರೆ ಅವರಿಗೆ ಗೊತ್ತಿಲ್ಲ, ನಮ್ಮ ಅಪ್ಪನೂ ಇಲ್ಲ. ನಾವು ಅಪ್ಪ ಅಮ್ಮ ಇಬ್ಬರನ್ನೂ ಒಟ್ಟಿಗೆ ಕಳ್ಕೊಂಡೆವು. ಒಬ್ಬರಿದ್ದಾರೆ ಮನೆಯಲ್ಲಿ, ಅಪ್ಪನಂತೆ ಓಡಾಡಿಕೊಂಡು. ಆದರೇ ಅವರು ನಮ್ಮಪ್ಪ ಅಲ್ಲ. ಯಾಕಂದ್ರೆ ನಮ್ಮಪ್ಪನ ಮುಖದಲ್ಲಿ ನಗು ಇರ್ತಿತ್ತು. ಅವರ ಬೆವರ ವಾಸನೆಯೊಂದಿಗೆ ಟಾಲ್ಕಂ ಪೌಡರ್ ಘಮಲು ಮೂಗಿದೆ ತಾಕುತ್ತಿತ್ತು. ಅವರು ಕಣ್ಣಲ್ಲಿ ಕಣ್ಣಿಡುತ್ತಿದ್ದರು. ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದರು.

ಅಪ್ಪನ ಮುಂದೆ ನಿಂತು ಮಗಳು ಹೇಳುವ ಮಾತುಗಳಿವು, ಸಿನಿಮಾದಲ್ಲಿ ಕೇಳುವಾಗ ಕಣ್ತುಂಬಿಕೊಂಡವು. ಹೀಗೆ ಎಲ್ಲ ಪಾತ್ರದಅರಿಗಳ ಅಭಿನಯ ಹಾಗೂ ತಂತ್ರಜ್ಞ ವರ್ಗದ ಎಲ್ಲ ಕಾರ್ಯವೂ ಗಟ್ಟಿಯಾಗಿದೆ ಆದರೆ ದುನಿಯಾ ತು ಶಾತೀರ್ ಹೈ, ವಿಶ್ವಾಸ್ ಗಾತಿ ಹೈ.. ‘ಹೆ ಜಗತ್ತೆ ನೀನೆಷ್ಟು ಚಾಣಾಕ್ಷ, ನಿನ್ನೊಳಗೆ ಏನೆಲ್ಲ ಹೊಳಹು, ಬೆಳಕು, ಕೊಳಕು ಇದೆ’ ಎನ್ನುವ ಹಿನ್ನೆಲೆ ಧ್ವನಿಯಲ್ಲಿ ಟೈಟಲ್ ಕಾರ್ಡಿನೊಂದಿಗೆ ಶರುವಾಗುವ ಸಿನಿಮಾ ಮೊದಲ ದೃಶ್ಯದಲ್ಲೇ ತಂದೆ ಮಗಳಂಥವರು ಎದುರಾಗಬಾರದಂಥ ಸ್ಥಳದಲ್ಲಿ ಎದುರಾಗುತ್ತಾರೆ ಎಂಬಂತೆ ಬಿಂಬಿಸಿ ಪ್ರೇಕ್ಷಕರಲ್ಲಿ ದಟ್ಟ ಆಲೋಚನೆಗಳು ಹುಟ್ಟಿಕೊಳ್ಳುವಂತೆ ಮಾಡುತ್ತದೆ.

ಖಡಕ್‌ ಸಿಂಗ್‌ ಯಾಕೆ?:

ಕಟ್ಟುನಿಟ್ಟಿನ ತಂದೆಯ ದುರ್ವರ್ತನೆ ನೋಡಿ ಮಕ್ಕಳಿಬ್ಬರು ಅಪ್ಪನಿಗೆ ‘ಖಡಕ್ ಸಿಂಗ್’ ಎಂದು ಅಡ್ಡ ಹೆಸರು ಇಟ್ಟುಕೊಂಡಿರುತ್ತಾರೆ. ಅದನ್ನೆ ಟೈಟಲ್ ಮಾಡುವಷ್ಟು ಚಿತ್ರದಲ್ಲಿ ವಿಷಯಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲದಿರುವುದು ಗೊಂದಲಕಾರಿ. ಚಿತ್ರದಲ್ಲಿ ಮಗ ತಪ್ಪುಮಾಡಿದ ಎಂದು ಬೆಲ್ಟ್ ಬಿಚ್ಚಿ ಥಳಿಸುವ ಅಪ್ಪ ಹೊರಗೆ ಬಂದು ಅದೇ ತಪ್ಪನ್ನು ಮಾಡುವ ವಿಷಯ, ನೋವಿನ ನೆಪ ಒಡ್ಡಿ ತಪ್ಪು ಹಾದಿ ತುಳಿಯುವ ತಮ್ಮನ ತಿದ್ದುವ ಅಕ್ಕ, ಅಪ್ಪನ ಪ್ಯಾಂಟ್ ಜೇಬಿನಲ್ಲಿ ವಯಸ್ಸಿಗೆ ಬಂದ ಮಗಳ ಕೈಗೆ ಕಾಂಡೋಮ್ ಸಿಗುವುದು, ಪ್ರೀತಿ ಸ್ನೇಹವನ್ನೂ ಮೀರಿದಂಥ ಸಂಬಂಧ ಹೊಂದುವ ಇಬ್ಬರು ತಮ್ಮ ಸಂಬಂಧ ಅನಿವಾರ್ಯವೋ, ಅವಶ್ಯಕತೆಯೊ, ನೋವಿಗೆ ಔಷಧಿಯೊ ಎಂದು ಸಮಾಲೋಚನೆ ಮಾಡುವಂಥದ್ದು. ಹೀಗೆ ಹತ್ತು ಹಲವು ಅದ್ಭುತ ಎನಿಸುವಂತ ವಿಷಯಗಳು ಚಿತ್ರದಲ್ಲಿದೆ. ಆದರೆ ಚಿತ್ರ ಮುಗಿದ ನಂತರದಲ್ಲಿ ಬರಹಗಾರರೋ ನಿರ್ದೇಶಕರೊ ಕತೆ ಸಾಗಿಸುವ ಭರದಲ್ಲಿ ಯಾವ ವಿಷಯಕ್ಕೂ ಒತ್ತು ಕೊಡದೆ ಎಲ್ಲವನ್ನೂ ಮಾತಿನಲ್ಲೇ ತೇಲಿಸಿ ಎಲ್ಲೋ ಏನೊ ಎಡವಟ್ಟು ಮಾಡಿಕೊಂಡಿದ್ದಾರೆ ಅನಿಸುತ್ತದೆ.

ಸಂಶಯದಿಂದ ಶುರು

ಕೋಲ್ಕತ್ತಾದ ಫೈನಾನ್ಸಶೀಯಲ್ ಕ್ರೈಮ್ ಇಲಾಖೆಯಲ್ಲಿ ನಿರ್ದೇಶಕನಾಗಿರುವ ಎ ಕೆ ಶ್ರೀವಾತ್ಸವ್ ಒತ್ತಡದಿಂದಲೋ ವೈಯಕ್ತಿಕ ಬದುಕಿನ ಸಮಸ್ಯೆಯಿಂದಲೋ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ. ನಿಜಕ್ಕೂ ಅವನು ಆತ್ಮಹತ್ಯೆ ಪ್ರಯತ್ನ ಮಾಡಿರುವುದಾ ಅಥವಾ ವೃತ್ತಿರಂಗದ ವೈರಿಗಳ ಕೊಲೆ ಪ್ರಯತ್ನವಾ ಎನ್ನುವ ಸಂಶಯ ಸಿನಿಮಾದ ಶುರುವಿನಿಂದ ಕೊನೆಯವರೆಗೂ ಪ್ರೇಕ್ಷಕರಷ್ಟೆ ಅಲ್ಲದೇ ಪಾತ್ರಗಳಿಗೂ ಕೊನೆಯವರೆಗೂ ಪ್ರಶ್ನೆಯಾಗಿಯೇ ಉಳಿದಿರುತ್ತದೆ.
ಸದ್ಯ ಸಾವಿನ ದವಡೆಯಿಂದ ಪಾರಾಗಿರುವ ಶ್ರೀ ವಾತ್ಸವ್ ತನ್ನ ಜ್ಞಾಪಕ ಶಕ್ತಿ ಕಳೆದುಕೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತರಿದ್ದಾನೆ. ಅವನ ಬದುಕಿನ ವೈಯಕ್ತಿಕ ಸಂಬಂಧಗಳು ಸಹೋದ್ಯೋಗಿಯಾಗಿರುವ ಹಲವು ಪಾತ್ರಗಳು, ಒಂದೊಂದಾಗಿ ಬಂದು ಅವರವರ ದೃಷ್ಟಿಕೊನದಲ್ಲಿ ಕಥೆ ಹೇಳುತ್ತ ನೆನಪು ಮರುಕಳಿಸಲು ಸಹಕರಿಸುತ್ತಿದ್ದಾರೆ.

ಶ್ರೀವಾತ್ಸವ್ ನಿತ್ಯ ‘ನರ್ಸ್ ಮಿಸ್ ಕಣ್ಣನ್’ ಜೊತೆಗೆ ಬಂದು ಹೋದವರು ಹೇಳಿದ ಕತೆಗಳ ಸತ್ಯ ಅಸತ್ಯತೆಯನ್ನ ವಿಮರ್ಶಿಸಿ ನಿರ್ಧಾರಕ್ಕೆ ಬರುತ್ತಿದ್ದಾನೆ. ಎಕೆ ಶ್ರೀ ಆತ್ಮಹತ್ಯೆ ಪ್ರಯತ್ನಕ್ಕೂ ಮೊದಲು ಸಹೋದ್ಯೋಗಿ ರವಿ ಎಂಬಾತನೂ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಪರಿಸ್ಥಿತಿ ಹೀಗಿರುವಾಗ ಈ ಕುರಿತು ನ್ಯೂಸ್ ಚಾನೆಲ್‌ಗಳಲ್ಲಿ ಊಹಾಪೋಹಗಳು ಸುದ್ದಿಯಾಗುತ್ತಿವೆ. ಹೀಗೆ ಸಾಗುವ ಚಿತ್ರಕತೆ ಚಿಟ್ ಫಂಡ್ ನಂತಹ ವೈಟ್ ಕಾಲರ್ ಕ್ರೈಂಗಳನ್ನೂ ಸುತ್ತಿಬಂದು ಕೊನೆಯಲ್ಲಿ ಶ್ರೀವಾತ್ಸವ್ ಆತ್ಮಹತ್ಯೆ ಪ್ರಯತ್ನಮಾಡಿದ್ದಾ? ಅಥವಾ ಕೊಲೆಯ ಪ್ರಯತ್ನವಾ ಅನ್ನೋದು ತಿಳಿಯುತ್ತದೆ.

ಇದನ್ನೂ ಓದಿ : YEAR ENDER 2023: ಈ ವರ್ಷದ ಅತ್ಯಂತ ವಿವಾದಾತ್ಮಕ ಸಿನಿಮಾಗಳಿವು!

ಅದು ಹೇಗೆ ಏನು, ಶ್ರೀವಾತ್ಸವ್ ಮಕ್ಕಳ ಜೊತೆ ಯಾಕೆ ಕಠೋರವಾಗಿ ನೆಡೆದುಕೊಳ್ಳುತ್ತಿದ್ದ, ಈ ಎಲ್ಲ ವಿಷಯವನ್ನು ಸಿನಿಮಾದಲ್ಲಿ ನೋಡಿ ತಿಳಿಯೋದು ಉತ್ತಮ. ಚಿತ್ರ ಮೊದಲೇ ಹೇಳಿದಂತೆ ಹತ್ತು ಹಲವು ವಿಷಯಗಳನ್ನ ಹೊತ್ತ ಓವರ್ ಲೋಡ್ ಲಾರಿಯಂತಿದೆ. ಅದನ್ನು ನಿರ್ದೇಶಕರೊಂದಿಗೆ ಪಂಕಜ್ ತ್ರಿಪಾಠಿ ಕ್ಷೇಮವಾಗಿ ಶುರುವಿನಿಂದ ಕೊನೆಯವರೆಗೂ ತಂದು ನಿಲ್ಲಿಸಿದ್ದಾರೆ ಅನ್ನೋದು ನನ್ನ ಅನಿಸಿಕೆ.

ಸೂಕ್ಷ್ಮ ಸಂಗತಿಗಳು

Mahesh Ramanathan. Viraf Sarkar ಮುಂತಾದವರು ಬಂಡವಾಳ ಹೂಡಿರುವ ಈ ಸಿನಿಮಾಕ್ಕೆ Aniruddha Roy Chowdhury ಆಕ್ಸನ್ ಕಟ್ ಹೇಳಿದ್ದು, ಸಿನಿಮಾ ನೇರವಗಿ ಓಟಿಟಿ ಯಲ್ಲಿ ಡಿಸೆಂಬರ್-8 ರಂದು ಬಿಡುಗಡೆಯಾಗಿದೆ. ಚಿತ್ರ ಶೀರ್ಷಿಕೆಯಿಂದಲೋ, ಕಾಸ್ಟಿಂಗ್ ನಿಂದಲೋ ಭಾರಿ ನಿರೀಕ್ಷೆ ಹೊಂದಿದ್ದ ಸಿನಿಮಾ, ಸಿನಿಮಾಸಕ್ತರಿಗೆ ನಿರಾಸೆ ಮೂಡಿಸಿದೆ ಎಂದು ಬಾಲಿವುಡ್ ಅಂಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಚಿತ್ರದಲ್ಲಿ ತಳೆದಿರುವ ಸೂಕ್ಷ್ಮ ಸಂಗತಿಗಳು ಮನ ಮುಟ್ಟುತ್ತವೆ. ರೋಗಿಯಾದವನಿಗೆ ಬಾಸ್ be patient ಅಂದಾಗ i’m officially patient ಸರ್ ಅನ್ನೋ ಸಣ್ಣ ಹಾಸ್ಯ ಚಟಾಕಿಯಂಥ ಮಾತುಗಳು ಇಷ್ಟವಾಗುತ್ತವೆ. ಸದ್ಯ ಈ ಸೈಕಲಾಜಿಕ್ ಸಸ್ಪೆನ್ಸ್ ಸಿನಿಮಾ ‘ಖಡಕ್ ಸಿಂಗ್’ ZEE5 ನಲ್ಲಿ ಸ್ಟ್ರೀಮ್ ಆಗುತ್ತಿದ್ದು ಆಸಕ್ತರು ಕಾಣಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Bharti Singh: ಬಾಲಿವುಡ್‌ ಖ್ಯಾತ ನಿರೂಪಕಿ ಆಸ್ಪತ್ರೆಗೆ ದಾಖಲು

Bharti Singh: ಭಾರತಿ ಸಿಂಗ್ ಅವರಿದ್ದ ಎತ್ತರಕ್ಕೆ ಹೋಲಿಸಿ ನೋಡಿದರೆ ಅತಿಯಾದ ತೂಕ ಹೊಂದಿದ್ದರು. ಹೀಗಾಗಿ ಅವರ 15 ಕೆಜಿ ತೂಕ ಇಳಿಸಿಕೊಂಡ ನಂತರದಲ್ಲಿ ಗರ್ಭಿಣಿಯಾಗಿದ್ದರು. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ, ಪ್ರಶಸ್ತಿ ಸಮಾರಂಭಗಳನ್ನು ಭಾರತಿ ನಿರೂಪಣೆ ಮಾಡಿದ್ದಾರೆ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ.

VISTARANEWS.COM


on

Bharti Singh admitted to hospital
Koo

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್‌ (Bharti Singh) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ದೈನಂದಿನ ವ್ಲಾಗ್‌ಗಳ ಮೂಲಕ ಯೂಟ್ಯೂಬ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂಸಿರುವ ಭಾರತಿ ಸಿಂಗ್‌ ಆಗಾಗ ಅಪ್‌ಡೇಟ್‌ (Bharti Singh admitted) ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ತಮ್ಮ ವ್ಲಾಗ್‌ನಲ್ಲಿ ತೀವ್ರವಾದ ಹೊಟ್ಟೆ ನೋವಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅವರ ಫ್ಯಾನ್ಸ್‌ ಚಿಂತೆಗೀಡಾಗಿದ್ದಾರೆ.

ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಟಿ ದಾಖಲಾಗಿದ್ದು ಡ್ರಿಪ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಭಾರತಿ ಸಿಂಗ್ ಅವರು ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವ್ಲಾಗ್‌ನಲ್ಲಿ ಭಾರತಿ ಭಾವುಕರಾಗಿರುವುದನ್ನು ಕಾಣಬಹುದು.

ವ್ಲಾಗ್‌ನಲ್ಲಿ ಭಾರತಿ ಮಾತನಾಡಿ ʻʻನನಗೆ ನೋವು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಪಿತ್ತಕೋಶದಲ್ಲಿ ಕಲ್ಲು ಇದೆ ಎಂದು ಆನಂತರ ಗೊತ್ತಾಯಿತು. ಪರಿಣಾಮವಾಗಿ, ನಾನು ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ವಾಂತಿ ಕೂಡ ಆಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kareena Kapoor:‌ ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾದಿಂದ ಕರೀನಾ ಕಪೂರ್‌ ಔಟ್?

ಭಾರತಿ ಸಿಂಗ್‌ ಅಭಿಮಾನಿಗಳು ಇದೀಗ ಕಮೆಂಟ್‌ ಮೂಲಕ ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತಿದ್ದಾರೆ. ಒಬ್ಬರು ʻʻಈ ವಿಡಿಯೊ ನೋಡಿ ನನಗೆ ಅಳು ಬಂತು. ಬೇಗ ಗುಣಮುಖರಾಗಿ. ದುರ್ಗಾ ಮಾತೆ ಆಶೀರ್ವದಿಸುತ್ತಾಳೆ.”ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻನೀವು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಅತ್ತಿದ್ದು ನೋಡಿದೆ. ನನಗೂ ಅಳು ಬಂತುʼʼಎಂದು ಕಮೆಂಟ್‌ ಮಾಡಿದ್ದಾರೆ.

ಭಾರತಿ ಸಿಂಗ್ ಅವರಿದ್ದ ಎತ್ತರಕ್ಕೆ ಹೋಲಿಸಿ ನೋಡಿದರೆ ಅತಿಯಾದ ತೂಕ ಹೊಂದಿದ್ದರು. ಹೀಗಾಗಿ ಅವರ 15 ಕೆಜಿ ತೂಕ ಇಳಿಸಿಕೊಂಡ ನಂತರದಲ್ಲಿ ಗರ್ಭಿಣಿಯಾಗಿದ್ದರು. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ, ಪ್ರಶಸ್ತಿ ಸಮಾರಂಭಗಳನ್ನು ಭಾರತಿ ನಿರೂಪಣೆ ಮಾಡಿದ್ದಾರೆ.

Continue Reading

ಬಾಲಿವುಡ್

Kareena Kapoor:‌ ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾದಿಂದ ಕರೀನಾ ಕಪೂರ್‌ ಔಟ್?

Kareena Kapoor: ಚಿತ್ರದಲ್ಲಿ ಕರೀನಾ ಕಪೂರ್ ಅವರದ್ದು ಅತಿಥಿ ಪಾತ್ರವಲ್ಲ. ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ವರದಿಯ ಪ್ರಕಾರ ಕರೀನಾ ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

VISTARANEWS.COM


on

kareena kapoor out from yash starrer toxic
Koo

ಬೆಂಗಳೂರು: ʼಕೆಜಿಎಫ್‌ʼ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸುಮಾರು ಒಂದೂವರೆ ವರ್ಷದ ಬಳಿಕ ಯಶ್‌ ಅಭಿನಯದ ʼಟಾಕ್ಸಿಕ್‌ʼ (Toxic) ಸಿನಿಮಾ ಘೋಷಣೆಯಾಗಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಾಲಿವುಡ್‌ ಖ್ಯಾತ ನಟಿ ಕರೀನಾ ಕಪೂರ್‌ (Kareena Kapoor) ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ  ಎಂದು ಫ್ಯಾನ್ಸ್‌ ಸಂತದಲ್ಲಿ ಇದ್ದಿದ್ದರು. ಆದರೀಗ ವರದಿಯ ಪ್ರಕಾರ ಕರೀನಾ ಅವರು ಟಾಕ್ಸಿಕ್‌ ಸಿನಿಮಾದಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಕರೀನಾ ಕಪೂರ್ ಅವರದ್ದು ಅತಿಥಿ ಪಾತ್ರವಲ್ಲ. ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯಾಗಿ ಕರೀನಾ ನಟಿಸಬೇಕಿತ್ತು. ಅದಕ್ಕಾಗಿ ಶೂಟಿಂಗ್‌ ಮಾಡಲು ಹಲವು ದಿನಗಳೇ ಬೇಕಿತ್ತು. ಆದರೆ ಕರೀನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಡೇಟ್‌ ಹೊಂದಾಣಿಕೆ ಸಮಸ್ಯೆ ಬಂದ ಕಾರಣ ಕರೀನಾ ಅವರು ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಚಿತ್ರತಂಡ ಇನ್ನೊಬ್ಬ ನಟಿಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Crime News: ಪತ್ನಿಯ ಪ್ರಿಯಕರನ ದ್ವೇಷಕ್ಕೆ ಬಲಿಯಾಯ್ತು ಎರಡು ಜೀವ; ಪಾರ್ಸಲ್‌ ಬಾಂಬ್‌ ಸ್ಫೋಟಕ್ಕೆ ಅಪ್ಪ-ಮಗಳು ಸಾವು

ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ 2ʼ ಚಿತ್ರದಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್‌ ಮತ್ತು ರವೀನಾ ಟಂಡನ್‌ ಕಾಣಿಸಿಕೊಂಡಿದ್ದರು. ಯಶ್‌ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್‌ʼ ಚಿತ್ರವನ್ನು ನಿರ್ಮಿಸಲಿದ್ದಾರೆ.

ಕಳೆದ ತಿಂಗಳು ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್‌, ಯೂರೋಪ್ ಸೇರಿದಂತೆ ಹಲವೆಡೆ ʼಟಾಕ್ಸಿಕ್‌ʼ ಟೈಟಲ್ ಅದ್ಧೂರಿಯಾಗಿ ರಿವೀಲ್ ಆಗಿತ್ತು. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಇದರಿಂದ ಕನ್ಫರ್ಮ್ ಆಗಿದೆ.

Continue Reading

ಸಿನಿಮಾ

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Ragini Khanna: ನಟ ಗೋವಿಂದ ಅವರ ಸೋದರ ಸೊಸೆಯಾಗಿರುವ ರಾಗಿಣಿ ಖನ್ನಾ ಅವರು ಗುರುಗಾಂವ್‌, ಡಬಲ್‌ ದಿ ತ್ರಿಬಲ್‌, ಘೂಮಕೇತು, ಪೋಷಂ ಪಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಇತ್ತೀಚೆಗೆ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಎನ್ನಲಾಗಿತ್ತು. ಈಗ ಅವರು ಹಿಂದು ಧರ್ಮಕ್ಕೆ ಮರಳಿದ್ದು, ಕ್ರೈಸ್ತ ಧರ್ಮ ಸ್ವೀಕರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

VISTARANEWS.COM


on

Ragini Khanna
Koo

ಮುಂಬೈ: ಬಾಲಿವುಡ್‌ ನಟ ಗೋವಿಂದ (Actor Govinda) ಅವರ ಸೋದರ ಸೊಸೆ, ನಟಿ ರಾಗಿಣಿ ಖನ್ನಾ (Ragini Khanna) ಅವರು ಕ್ರೈಸ್ತ ಧರ್ಮಕ್ಕೆ (Christianity) ಮತಾಂತರ ಆಗಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. “ನಾನು ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದಕ್ಕೆ ವಿಷಾದವಿದೆ. ಈ ಕುರಿತು ನಾನು ಕ್ಷಮೆಯಾಚಿಸುತ್ತೇನೆ. ನಾನೀಗ ಹಿಂದು ಧರ್ಮಕ್ಕೆ ಮರಳಿದ್ದು, ನಾ ಖಟ್ಟರ್‌ ಹಿಂದು ಸನಾತನವಾದಿಯಾಗಿದ್ದೇನೆ. ನಾನೀಗ ನನ್ನ ಬೇರುಗಳಿಗೆ ಮರಳಿದ್ದೇನೆ ಎಂಬುದಾಗಿ ಅನಿಸುತ್ತಿದೆ” ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಚುಕುದಾರ್‌ಬಹದ್ದೂರ್‌ 2.0 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಗಿಣಿ ಖನ್ನಾ ಅವರು ಕ್ರೈಸ್ತ ಧರ್ಮ ಸ್ವೀಕರಿಸಿದ ಕುರಿತು ಪೋಸ್ಟ್‌ ಮಾಡಲಾಗಿತ್ತು. “ನಾನು ರಾಗಿಣಿ ಖನ್ನಾ. ನಾನೀಗ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಕ್ರೈಸ್ತನು ಈಗ ನನಗೆ ದೇವರಾಗಿದ್ದು, ಆತನ ಬೋಧನೆಗಳೊಂದಿಗೆ ನಾನು ನನ್ನ ಜೀವನದ ಮಾರ್ಗವನ್ನು ಕಂಡುಕೊಳ್ಳುತ್ತೇನೆ” ಎಂಬುದಾಗಿ ಪೋಸ್ಟ್‌ ಮಾಡಲಾಗಿತ್ತು.

“ನಾನು ಮನಸಾರೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದೇನೆ. ಭಕ್ತಿಯ ಹಾದಿಯಲ್ಲಿ ನಾನು ನಂಬಿಕೆಯೊಂದಿಗೆ ಮುನ್ನಡೆಯುತ್ತೇನೆ. ಶಾಂತಿ ಹಾಗೂ ಪ್ರೀತಿಯನ್ನು ಹಂಚುತ್ತ ಮುಂದೆ ಸಾಗುತ್ತೇನೆ. ಪ್ರಾರ್ಥನೆಗಳ ಮೂಲಕ ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕಗೆ ಮೂಡುವಂತೆ ಮಾಡುತ್ತೇನೆ” ಎಂದು ಮಾಡಿರುವ ಪೋಸ್ಟ್‌ ವೈರಲ್‌ ಆಗಿತ್ತು. ರಾಗಿಣಿ ಖನ್ನಾ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿ, ಪೋಸ್ಟ್‌ ವೈರಲ್‌ ಆದ ಬಳಿಕ ರಾಗಿಣಿ ಖನ್ನಾ ಅವರು ಕ್ಷಮೆಯಾಚಿಸಿದ್ದಾರೆ. ನಾನೀಗ ಖಟ್ಟರ್‌ ಹಿಂದು ಎಂದು ಅವರು ಹೇಳಿದ್ದಾರೆ. ಈಗ ಜನರು ರಾಗಿಣಿ ಖನ್ನಾ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನಟ ಗೋವಿಂದ ಅವರ ಸೋದರ ಸೊಸೆಯಾಗಿರುವ ರಾಗಿಣಿ ಖನ್ನಾ ಅವರು ಗುರುಗಾಂವ್‌, ಡಬಲ್‌ ದಿ ತ್ರಿಬಲ್‌, ಘೂಮಕೇತು, ಪೋಷಂ ಪಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Swara Bhasker: ಕಂಗನಾ- ಸ್ವರಾ ಭಾಸ್ಕರ್ ನಡುವಿನ ದೊಡ್ಡ ವ್ಯತ್ಯಾಸವೇನು? ನಟಿಯ ಬಾಯಲ್ಲೇ ಕೇಳಿ!

Continue Reading

ಸಿನಿಮಾ

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Jolly LLB 3: ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಆರಂಭವಾಗಿರುವ ಕುರಿತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಅರ್ಷದ್‌ ವಾರ್ಸಿ ಹಾಗೂ ಅಕ್ಷಯ್‌ ಕುಮಾರ್‌ ಅವರು ಪಾರ್ಟ್‌ 3ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

Jolly LLB 3
Koo

ಮುಂಬೈ: ಅರ್ಷದ್‌ ವಾರ್ಸಿ ನಟನೆಯ ಜಾಲಿ ಎಲ್‌ಎಲ್‌ಬಿ (Jolly LLB) ಹಾಗೂ ಅಕ್ಷಯ್‌ ಕುಮಾರ್‌ (Askhay Kumar) ಅಭಿನಯದ ಜಾಲಿ ಎಲ್‌ಎಲ್‌ಬಿ 2 (Jolly LLB 2) ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು. ಕೋರ್ಟ್‌ ಡ್ರಾಮಾ ಜಾನರ್‌ನ ಈ ಸಿನಿಮಾಗಳು ಕಾಮಿಡಿ ದಿಸೆಯಲ್ಲೂ ಜನರ ಮನಸೂರೆಗೊಳಿಸಿದ್ದವು. ಸೌರಭ್‌ ಶುಕ್ಲಾ ಅವರ ಮನೋಜ್ಞ ನಟನೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ನಟ ಅಕ್ಷಯ್‌ ಕುಮಾರ್‌ ಅವರು ಜಾಲಿ ಎಲ್‌ಎಲ್‌ಬಿ 3 (Jolly LLB 3) ಸಿನಿಮಾ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.

ಹೌದು, ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಶುರುವಾಗಿರುವ ಕುರಿತು ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಸಮೇತ ಮಾಹಿತಿ ನೀಡಿದ್ದಾರೆ. “ಈಗ ಅಸಲಿ ಯಾರು, ನಕಲಿ ಯಾರು ಎಂಬುದು ಗೊತ್ತಿಲ್ಲ. ಆದರೆ, ಇದು ನಿಮಗೆ ಅತ್ಯುತ್ತಮ ಸಿನಿ ಪಯಣ ಆಗಲಿದೆ. ನನ್ನ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರಿ. ಜೈ ಮಹಾಕಾಳ್”‌ ಎಂಬುದಾಗಿ ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಜತೆಗೆ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಕ್ಷಯ್‌ ಕುಮಾರ್‌ ಘೋಷಣೆ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌

ಜಾಲಿ ಎಲ್‌ಎಲ್‌ಬಿ ಸಿನಿಮಾದಲ್ಲಿ ಅಭಿಮಾನಿಗಳಿಗೆ ಅಕ್ಷಯ್‌ ಕುಮಾರ್‌ ಸರ್‌ಪ್ರೈಸ್‌ ನೀಡಿದ್ದಾರೆ. ಜಾಲಿ ಎಲ್‌ಎಲ್‌ಬಿ ಸರಣಿಯ ಮೊದಲ ಸಿನಿಮಾದಲ್ಲಿ ಅರ್ಷದ್‌ ವಾರ್ಸಿ ಅವರು ಹೀರೊ ಆಗಿದ್ದರೆ, ಎರಡನೇ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಹೀರೊ ಆಗಿದ್ದರು. ಆದರೆ, ಮೂರನೇ ಭಾಗದಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಇಬ್ಬರೂ ಇದ್ದಾರೆ. ಎಂದಿನಂತೆ ಸೌರಭ್‌ ಶುಕ್ಲಾ ಅವರು ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾಗೆ ಯಾರು ನಾಯಕಿ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಅವರು ಇದಕ್ಕೂ ಮೊದಲು ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಜಾನಿ ದುಷ್ಮನ್: ಏಕ್‌ ಅನೋಖಿ ಕಹಾನಿ ಹಾಗೂ 2022ರಲ್ಲಿ ಬಿಡುಗಡೆಯಾದ ಬಚ್ಚನ್‌ ಪಾಂಡೆ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದರು. ಅರ್ಷದ್‌ ವಾರ್ಸಿ ಅವರ ಜಾಲಿ ಎಲ್‌ಎಲ್‌ಬಿ 2013ರಲ್ಲಿ ಬಿಡುಗಡೆಯಾಗಿತ್ತು. ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 2 ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Akshay Kumar: ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ಅಕ್ಷಯ್‌ ಕುಮಾರ್‌; ಜತೆಗಿರಲಿದ್ದಾರೆ ಶಿವಣ್ಣ!

Continue Reading
Advertisement
Rain News
ಕರ್ನಾಟಕ1 hour ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

ಪ್ರಮುಖ ಸುದ್ದಿ1 hour ago

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

Nijjar Killing
ವಿದೇಶ2 hours ago

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Rohith Vemula
ದೇಶ2 hours ago

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rinku Singh
ಪ್ರಮುಖ ಸುದ್ದಿ2 hours ago

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

honour killing
ವಿಜಯಪುರ2 hours ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ2 hours ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ2 hours ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ3 hours ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ3 hours ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ9 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ20 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌