Merry Christmas: `ಮೆರ‍್ರಿ ಕ್ರಿಸ್‌ಮಸ್ʼ ಚಿತ್ರದ ಗಳಿಕೆಯಲ್ಲಿ ತುಸು ಚೇತರಿಕೆ; ಎರಡು ದಿನಗಳ ಒಟ್ಟು ಕಲೆಕ್ಷನ್‌ ಎಷ್ಟು? - Vistara News

ಬಾಲಿವುಡ್

Merry Christmas: `ಮೆರ‍್ರಿ ಕ್ರಿಸ್‌ಮಸ್ʼ ಚಿತ್ರದ ಗಳಿಕೆಯಲ್ಲಿ ತುಸು ಚೇತರಿಕೆ; ಎರಡು ದಿನಗಳ ಒಟ್ಟು ಕಲೆಕ್ಷನ್‌ ಎಷ್ಟು?

Merry Christmas: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್‌ ಚಿತ್ರ `ಮೆರ‍್ರಿ ಕ್ರಿಸ್‌ಮಸ್ʼ ತೆರೆ ಕಂಡಿದೆ. ಆದರೆ ಅಂದುಕೊಂಡಷ್ಟು ಕಲೆಕ್ಷನ್‌ ಮಾಡುವಲ್ಲಿ ಈ ಥ್ರಿಲ್ಲರ್‌ ಸಿನಿಮಾ ವಿಫಲವಾಗಿದೆ.

VISTARANEWS.COM


on

merry christmas box office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಬಾಲಿವುಡ್‌ ಚಿತ್ರ `ಮೆರ‍್ರಿ ಕ್ರಿಸ್‌ಮಸ್ʼ (Merry Christmas) ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿದೆ. ಜನವರಿ 12ರಂದು ಬಿಡುಗಡೆಯಾದ ಈ ಚಿತ್ರ ಎರಡು ದಿನಗಳಲ್ಲಿ ಕೇವಲ 6.50 ಕೋಟಿ ರೂ. ಗಳಿಸಿದೆ ಎಂದು ಮೂಲಗಳು ತಿಳಿಸಿವೆ (Merry Christmas Box Office Day 2).

ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಮೊದಲ ಬಾರಿ ತೆರೆ ಹಂಚಿಕೊಂಡಿರುವ ಈ ಥ್ರಿಲ್ಲರ್‌ ಚಿತ್ರ ಬಿಡುಗಡೆಯಾದ ಮೊದಲ ದಿನ ಕಲೆಕ್ಟ್‌ ಮಾಡಿದ್ದು 2.55 ಕೋಟಿ ರೂ. ಮಾತ್ರ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿರುವ `ಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾದ ಎರಡನೇ ದಿನದ ಗಳಿಕೆಯಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ಶನಿವಾರ (ಜನವರಿ 13) ಸುಮಾರು 3.50 ಕೋಟಿ ರೂ. ಗಳಿಸಿದೆ. ಆ ಮೂಲಕ 6.50 ಕೋಟಿ ರೂ. ಕಲೆಕ್ಷನ್‌ ಮಾಡಿದಂತಾಗಿದೆ.

ನಿರ್ದೇಶಕ ಶ್ರೀರಾಮ್‌ ರಾಘವನ್‌ ʻಮೆರ‍್ರಿ ಕ್ರಿಸ್‌ಮಸ್‌ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕ್ರಿಸ್‌ಮಸ್‌ನ ಮುನ್ನಾ ದಿನದಂದು ಇಬ್ಬರು ಅಪರಿಚಿತರ ಮುಖಾಮುಖಿಯಾಗುವ ಘಟನೆ ಸುತ್ತ ಕಥೆ ಸಾಗುತ್ತದೆ. ಭಾವೋದ್ರಿಕ್ತ ಪ್ರಣಯದ ಸಂಜೆ ದುಃಸ್ವಪ್ನವಾಗಿ ಬದಲಾಗುವುದನ್ನು ನಿರ್ದೇಶಕ ಶ್ರೀರಾಮ್‌ ರಾಘವನ್‌ ಥ್ರಿಲ್ಲರ್‌ ಶೈಲಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಹಿಂದಿ ಚಿತ್ರದಲ್ಲಿ ಸಂಜಯ್‌ ಕಪೂರ್‌, ವಿನಯ್‌ ಪಾಠಕ್‌, ಪ್ರತಿಮಾ ಕಣ್ಣನ್‌ ಮತ್ತು ಟಿನ್ನು ಆನಂದ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್‌ ಕುಮಾರ್‌, ಷನ್ಮುಖರಾಜ, ಕೆವಿನ್‌ ಜೈ ಬಾಬು ಮತ್ತು ರಾಜೇಶ್‌ ವಿಲಿಯಮ್ಸ್‌ ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 

ಗಮನ ಸೆಳೆದ ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌

ಈ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ಕೂಡ ಕೇಳಿ ಬಂದಿದೆ. ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಸೀಟಿನ ಅಂಚಿಗೆ ಕೂರಿಸುವ ಥ್ರಿಲ್ಲರ್‌ ಎಂದು ನೋಡುಗರು ಅಭಿಪ್ರಾಯ ಪಟ್ಟಿದ್ದು, ಕ್ರಮೇಣ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

2023ರಲ್ಲಿ ತೆರೆಕಂಡ ʼಮುಂಬೈಕರ್‌ʼ ಚಿತ್ರದ ಮೂಲಕ ವಿಜಯ್‌ ಸೇತುಪತಿ ಬಾಲಿವುಡ್‌ಗೆ ಕಾಲಿಟ್ಟದ್ದರು. ಜಿಯೋ ಸಿನಿಮಾ ಒಟಿಟಿಯಲ್ಲಿ ಇದು ತೆರೆ ಕಂಡಿತ್ತು. ಬಳಿಕ ವಿಜಯ್‌ ಸೇತುಪತಿ ಶಾರುಖ್‌ ಖಾನ್‌-ನಯನತಾರಾ ಅಭಿನಯದ ʼಜವಾನ್‌ʼ ಚಿತ್ರದ ಖಳ ನಾಯಕನ ಪಾತ್ರದಲ್ಲಿ ಮಿಂಚಿದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚಿನ ಕಲೆಕ್ಷನ್‌ ಮಾಡಿತು. ಈ ಚಿತ್ರದ ಕಾಳಿ ಗಾಯಕ್ವಾಡ್‌ ಪಾತ್ರ ವಿಜಯ್‌ ಸೇತುಪತಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಸದ್ಯ ʼವಿಧುತಲೈ ಪಾರ್ಟ್‌ 2ʼ ಮತ್ತು ʼಮಹಾರಾಜʼ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: Merry Christmas: ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಸೃಷ್ಟಿಸುವಲ್ಲಿ ಎಡವಿದ `ಮೆರ‍್ರಿ ಕ್ರಿಸ್‌ಮಸ್ʼ; ಮೊದಲ ದಿನ ಗಳಿಸಿದ್ದೆಷ್ಟು?

ಇತ್ತ ಕತ್ರಿನಾ ಕೈಫ್‌ ʼಟೈಗರ್‌ 3ʼ ಚಿತ್ರದ ಮೂಲಕ ಸಾಧಾರಣ ಯಶಸ್ಸು ಗಳಿಸಿದ್ದಾರೆ. ಸಲ್ಮಾನ್‌ ಖಾನ್‌ ಜತೆ ನಟಿಸಿದ್ದ ʼಟೈಗರ್‌ 3ʼ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್‌ ಮಾಡಿರಲಿಲ್ಲ. ಹೀಗಾಗಿ ಬಹು ದೊಡ್ಡ ಗೆಲುವಿಗಾಗಿ ಅವರು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ `ಮೆರ‍್ರಿ ಕ್ರಿಸ್‌ಮಸ್ʼ ಕಲೆಕ್ಷನ್‌ ಹೆಚ್ಚುತ್ತ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Cannes 2024: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶ್ವೇತ ವರ್ಣದ ಗೌನ್​ ಧರಿಸಿ ಮಿಂಚಿದ ಕಿಯಾರ! ಇಲ್ಲಿದೆ ವಿಡಿಯೊ

Cannes 2024: ಐಶ್ವರ್ಯಾ ಜತೆಗೆ, ನಟರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಳಿಪಾಲ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌಟೇಲಾ ಅವರು ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಗುಲಾಬಿ ಬಣ್ಣದ ಉಡುಪಿನಿಂದ ಕಂಗೊಳಿಸಿದ್ದಾರೆ. ಐಶ್ವರ್ಯಾ ರೈ, ಊರ್ವಶಿ ರೌಟೇಲಾ ಬೆನ್ನಲ್ಲೇ ರೆಡ್ ಕಾರ್ಪೆಟ್ ಮೇಲೆ ನಟಿ ಕಿಯಾರಾ ಆಡ್ವಾಣಿ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

VISTARANEWS.COM


on

Kiara Advani Makes Cannes Debut In Thigh-High Slit Dress
Koo

ಬೆಂಗಳೂರು: ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2024) ಕೂಡ ಒಂದು. 2024ರ 77ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಐಶ್ವರ್ಯಾ ರೈ, ಊರ್ವಶಿ ರೌಟೇಲಾ ಬೆನ್ನಲ್ಲೇ ರೆಡ್ ಕಾರ್ಪೆಟ್ ಮೇಲೆ ನಟಿ ಕಿಯಾರಾ ಆಡ್ವಾಣಿ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಕಿಯಾರಾ ಆಡ್ವಾಣಿ ಇದೀಗ ತಮ್ಮ ಲುಕ್‌ನ ವಿಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊವನ್ನು ಹಂಚಿಕೊಂಡ ಕಿಯಾರಾ, “ರಿವೇರಿಯಾದಲ್ಲಿ ರೆಂಡೆಜ್ವಸ್ (ನೀಲಿ ಹೃದಯದ ಎಮೋಜಿ)” ಎಂದು ಶೀರ್ಷಿಕೆ ನೀಡಿದ್ದಾರೆ. ಕಿಯಾರ ಉಡುಪನ್ನು ಲಕ್ಷ್ಮಿ ಲೆಹರ್ ಮತ್ತು ಪ್ರಬಲ್ ಗುರುಂಗ್ ಅವರು ವಿನ್ಯಾಸಗೊಳಿಸಿದ್ದಾರೆ. ಅಭಿಮಾನಿಯೊಬ್ಬರು ಕಿಯಾರ ಪೋಸ್ಟ್‌ಗೆ “ಅತ್ಯಂತ ಸುಂದರ ಮಹಿಳೆ” ಎಂದು ಕಮೆಂಟ್‌ ಮಾಡಿದ್ದಾರೆ. ಕಿಯಾರ ಮಿಲ್ಕಿ ವೈಟ್​ ಬಣ್ಣದ ಗೌನ್ ಬಟ್ಟೆ ಧರಿಸಿದ್ದರು. ಗೌನ್‌ ಕಟ್‌ ರೀತಿ ಉಡುಪನ್ನು ಧರಿಸಿದ್ದರು. ಮ್ಯಾಚಿಂಕ್‌ ಕಿವಿಯೋಲೆಯೊಂದಿಗೆ ಅತ್ಯಂತ ಸುಂದರವಾಗಿ ಕಂಡರು ಕಿಯಾರ. ಕಾರ್‌ನಲ್ಲಿ ಅಪ್ಸರಂತೆ ಇಳಿದು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ನಟಿ ಐಶ್ವರ್ಯಾ ರೈ ಅವರೂ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ. ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ (Falguni Shane Peacock creation ) ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್​ ಸುತ್ತಿಕೊಂಡೇ ಅವರು ರೆಡ್​ ಕಾರ್ಪೆಟ್​ನಲ್ಲಿ (Cannes Red Carpet) ನಡೆದು ಬಂದಿದ್ದರು. ಅವರ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು.

ಐಶ್ವರ್ಯಾ ಜತೆಗೆ, ನಟರಾದ ಅದಿತಿ ರಾವ್ ಹೈದರಿ, ಶೋಬಿತಾ ಧೂಲಿಪಾಲಾ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಊರ್ವಶಿ ರೌಟೇಲಾ ಅವರು ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಗುಲಾಬಿ ಬಣ್ಣದ ಉಡುಪಿನಿಂದ ಕಂಗೊಳಿಸಿದ್ದಾರೆ. 

ಇದನ್ನೂ ಓದಿ: Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್ ಮೇಲೆ ಪೋಸ್‌ ಕೊಟ್ಟ ​ಐಶ್ವರ್ಯಾ ರೈ!

ಗೇಮ್ ಚೇಂಜರ್ ಚಿತ್ರದಲ್ಲಿ ಕಿಯಾರಾ!

ಎಸ್ ಶಂಕರ್ ನಿರ್ದೇಶನದ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರದಲ್ಲಿ ಕಿಯಾರಾ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ನಟ ಯಶ್ (Yash) ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ (kiara) ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕರೀನಾ ಕಪೂರ್ (kareena kapoor) ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿಯ ಬಳಿಕ ಇದೀಗ ಕಿಯಾರಾ ಅಡ್ವಾಣಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಚಿತ್ರದಲ್ಲಿ ಕಿಯಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೂವರು ಪ್ರಮುಖರು ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರೀನಾ ಕಪೂರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಈಗಾಗಲೇ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ಅವರ ಸಹೋದರಿಯಾಗಿ ಕರೀನಾ ನಟಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಆದರೆ ನಿರ್ಮಾಪಕರಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

Continue Reading

ಬಾಲಿವುಡ್

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Singer Suchitra: ಸಂದರ್ಶನದಲ್ಲಿ, ಸುಚಿತ್ರಾ ತನ್ನ ಮಾಜಿ ಪತಿ ಕಾರ್ತಿಕ್ ಕುಮಾರ್ ‘ಸಲಿಂಗಕಾಮಿ’ ಎಂದು ಹೇಳಿಕೊಂಡಿದ್ದಾರೆ. ಲಂಡನ್ ಪ್ರವಾಸದ ವೇಳೆ ಮಾಜಿ ಪತಿ ಕಾರ್ತಿಕ್ ಕುಮಾರ್, ಶಾರುಖ್ ಮತ್ತು ಕರಣ್ ಒಟ್ಟಿಗೇ ಪಾರ್ಟಿಗಳಿಗೆ ತೆರಳಿದ್ದರು ಎಂದು ಸುಚಿತ್ರಾ ಹೇಳಿದ್ದಾರೆ. ಸಲಿಂಗಕಾಮಿಗಳಿಗೆ ಕಾನೂನುಬದ್ಧವಾಗಿ ಅವಕಾಶವಿರುವ ದೇಶಗಳಿಗೆ ಅವರು ಹೋಗುತ್ತಾರೆ ಎಂದಿದ್ದಾರೆ.

VISTARANEWS.COM


on

Singer Suchitra makes shocking aligeations against shahrukh khan
Koo

ಬೆಂಗಳೂರು: ಗಾಯಕಿ ಸುಚಿತ್ರಾ ರಾಮದುರೈ (Singer Suchitra) ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮತ್ತು ಸೂಪರ್ ಸ್ಟಾರ್ ಶಾರುಖ್ ಖಾನ್ ಬಗ್ಗೆ ಕೆಲವು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಮಾಜಿ ಪತಿ ನಟ ಕಾರ್ತಿಕ್ ಕುಮಾರ್, ನಟರಾದ ಧನುಷ್, ವಿಜಯ್, ಕಮಲ್ ಹಾಸನ್, ನಟಿ ತ್ರಿಶಾ ಸೇರಿದಂತೆ ಹಲವರ ಬಗ್ಗೆ ನಾನಾ ರೀತಿಯಲ್ಲಿ ಆರೋಪ ಮಾಡಿದ್ದಾರೆ. ಕಾರ್ತಿಕ್, ಧನುಷ್ ಇಬ್ಬರೂ ಸಲಿಂಗಕಾಮಿಗಳು ಎಂದಿದ್ದಾರೆ.

ಸಂದರ್ಶನದಲ್ಲಿ, ಸುಚಿತ್ರಾ ತನ್ನ ಮಾಜಿ ಪತಿ ಕಾರ್ತಿಕ್ ಕುಮಾರ್ ‘ಸಲಿಂಗಕಾಮಿ’ ಎಂದು ಹೇಳಿಕೊಂಡಿದ್ದಾರೆ. ಲಂಡನ್ ಪ್ರವಾಸದ ವೇಳೆ ಮಾಜಿ ಪತಿ ಕಾರ್ತಿಕ್ ಕುಮಾರ್, ಶಾರುಖ್ ಮತ್ತು ಕರಣ್ ಒಟ್ಟಿಗೇ ಪಾರ್ಟಿಗಳಿಗೆ ತೆರಳಿದ್ದರು ಎಂದು ಸುಚಿತ್ರಾ ಹೇಳಿದ್ದಾರೆ. ಸಲಿಂಗಕಾಮಿಗಳಿಗೆ ಕಾನೂನುಬದ್ಧವಾಗಿ ಅವಕಾಶವಿರುವ ದೇಶಗಳಿಗೆ ಅವರು ಹೋಗುತ್ತಾರೆ ಎಂದಿದ್ದಾರೆ. ಈ ಬಗ್ಗೆ ಕಾರ್ತಿಕ್ ಖುದ್ದು ನನಗೆ ಈ ವಿಷಯ ಹೇಳಿದ್ದರು. ಕರಣ್- ಶಾರುಖ್ ಸಲಿಂಗಕಾಮಿಗಳಿಗೆ ಸ್ವತಂತ್ರವಾಗಿರುವ ಅವಕಾಶವಿರುವ ಜಾಗಗಳಿಗೆ ಹೋಗುತ್ತಾರೆ. ಅಲ್ಲಿ ನಡೆಯುವ ಪಾರ್ಟಿಗಳಿಗೆ ಗೇಗಳ ರೀತಿ ವೇಷ ಬದಲಿಸಿಕೊಂಡು ಅವರೊಟ್ಟಿಗೆ ಸೇರಿ ಪಾರ್ಟಿಯಲ್ಲಿ ಸೇರಿಕೊಳ್ಳುತ್ತಾರೆ. ಕಾರ್ತಿಕ್ ಕೂಡ ಅಲ್ಲಿ ಹೋದಾಗ ಅವರಿಬ್ಬರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರುʼʼಎಂದರು.

ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

ಸುಚಿತ್ರಾ ತಮಿಳು ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಎಕ್ಸ್‌ಕ್ಯೂಸ್ ಮಿ, ಎನ್ ಇಧಯಂ ಸೇರಿದತೆ ಅನೇಕ ಹಿಟ್‌ ಹಾಡುಗಳನ್ನು ಹಾಡಿದ್ದಾರೆ. ಸುಚಿತ್ರಾ ಈ ಹಿಂದೆ ಕಮಲ್‌ ಹಾಸನ್‌ ಬಗ್ಗೆಯೂ ಹೇಳಿಕೆ ನೀಡಿದ್ದರು. ʻʻಕಮಲ್‌ ಅವರು ಹೆಚ್ಚಾಗಿ ಕುರ್ತಾ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ‘ವಿಶ್ವರೂಪಂ’ ಚಿತ್ರದಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಕಲಿಸುವಾಗ ಕಮಲ್ ಎಕ್ಸ್‌ಪ್ರೇಶನ್ ಬಹುತೇಕ ಟ್ರಾನ್ಸ್‌ಜೆಂಡರ್ ರೀತಿ ಇರುತ್ತದೆʼʼಎಂದಿದ್ದರು.

ಇದೆಲ್ಲದರ ಜತೆಗೆ ಧನುಷ್‌ ಮತ್ತು ಐಶ್ವರ್ಯಾ ಅವರ ಡಿವೋರ್ಸ್‌ ವಿಚಾರವಾಗಿಯೂ ಮಾತನಾಡಿದ್ದಾರೆ. ಧನುಷ್‌ ಮತ್ತು ಐಶ್ವರ್ಯಾ ಅವರಿಗೆ ದಾಂಪತ್ಯ ಜೀವನ ಸಾಕಾಗಿದೆ. ಇಬ್ಬರೂ ಬೇರೆಯವರ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ. ಐಶ್ವರ್ಯಾ ಮಕ್ಕಳಿಗೆ ಒಳ್ಳೆಯ ತಾಯಿಯಾಗಲಿಲ್ಲ. ಒಬ್ಬರಿಗೊಬ್ಬರು ಮೋಸ ಮಾಡುತ್ತಾ ಇರುವ ಬದಲು ದೂರಾಗೋಣ ಎಂದು ನಿರ್ಧರಿಸಿದ್ದಾರೆʼʼಎಂದಿದ್ದಾರೆ. ಸುಚಿತ್ರಾ ಅವರು ಸ್ಟ್ಯಾಂಡಪ್ ಕಮಿಡಿಯನ್, ನಟ ಕಾರ್ತಿಕ್ ಕುಮಾರ್ ಅವರನ್ನು ಹಿಂದೆ ಮದುವೆ ಆಗಿದ್ದರು. ಈಗ ಜೋಡಿ ದೂರವಾಗಿದೆ.

Continue Reading

ಬಾಲಿವುಡ್

Jr NTR: ಜ್ಯೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್ ಸಿನಿಮಾ ಟೈಟಲ್‌ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್‌?

Jr NTR: ಆರ್‌ಆರ್‌ಆರ್ ಬಿಡುಗಡೆಯಾದಾಗಿನಿಂದ, ಜ್ಯೂ. ಎನ್‌ಟಿಆರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಾಲಿವುಡ್‌ಗೆ ವಾರ್‌ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ ನಟ. ದೇವರ ಕೂಡ ಜ್ಯೂ. ಎನ್‌ಟಿಆರ್ ಕೈಯಲ್ಲಿದೆ. ಇದೀಗ ವರದಿಗಳ ಪ್ರಕಾರ NTR 31 ಅನ್ನು ತಾತ್ಕಾಲಿಕವಾಗಿ ʻಡ್ರ್ಯಾಗನ್ʼ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿದೆ.

VISTARANEWS.COM


on

Jr NTR and Prashanth Neel get the title Dragon from Karan
Koo

ಬೆಂಗಳೂರು: ಮೇ 20ಕ್ಕೆ ಟಾಲಿವುಡ್‌ ನಟ ಜ್ಯೂನಿಯರ್‌ ಎನ್‌ಟಿಆರ್‌ (Jr NTR) ಅವರ ಜನುಮ ದಿನ. ಈ ಮುಂಚೆಯೇ ಘೋಷಣೆಯಾಗಿದ್ದ ಪ್ರಶಾಂತ್‌ ನೀಲ್-ಜ್ಯೂ. ಎನ್‌ಟಿಆರ್ ಸಿನಿಮಾದ ಟೈಟಲ್‌ ಜ್ಯೂನಿಯರ್‌ ಎನ್‌ಟಿಆರ್‌ ಬರ್ತ್‌ಡೇ ದಿನ ರಿವೀಲ್‌ ಆಗಬಹುದು ಎಂದು ವರದಿಯಾಗಿದೆ. ಟೈಟಲ್ ಏನು ಎನ್ನುವ ಬಗ್ಗೆ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ.

ಆರ್‌ಆರ್‌ಆರ್ ಬಿಡುಗಡೆಯಾದಾಗಿನಿಂದ, ಜ್ಯೂ. ಎನ್‌ಟಿಆರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಾಲಿವುಡ್‌ಗೆ ವಾರ್‌ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ ನಟ. ದೇವರ ಕೂಡ ಜ್ಯೂ. ಎನ್‌ಟಿಆರ್ ಕೈಯಲ್ಲಿದೆ. ಇದೀಗ ವರದಿಗಳ ಪ್ರಕಾರ NTR 31 ಅನ್ನು ತಾತ್ಕಾಲಿಕವಾಗಿ ʻಡ್ರ್ಯಾಗನ್ʼ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲಾ ಭಾಷೆಗಳಲ್ಲಿ ಒಂದೇ ಟೈಟಲ್ ಇರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಿಂದಿಯಲ್ಲಿ ಈ ಟೈಟಲ್ ಕರಣ್ ಜೋಹರ್ ಬಳಿ ಇತ್ತಂತೆ. ತಮ್ಮ ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಈ ಟೈಟಲ್ ರಿಜಿಸ್ಟರ್ ಮಾಡಿಸಿದ್ದರಂತೆ. ಇದೀಗ ಆ ಟೈಟಲ್‌ ಅನ್ನು ನೀಲ್ ಚಿತ್ರಕ್ಕೆ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗ್ತಿದೆ.. ‘ಡ್ರ್ಯಾಗನ್‌’ಗಿಂತ ‘ಡೈನೋಸಾರ್’ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: Banners Of Jr NTR: ಜ್ಯೂ. ಎನ್‌ಟಿಆರ್‌ ಬ್ಯಾನರ್, ಫ್ಲೆಕ್ಸ್ ಕಿತ್ತು ಬಿಸಾಕಿ ಎಂದ ಬಾಲಯ್ಯ!

ಸದ್ಯ ನಟ ‘ದೇವರ‘ ಸಿನಿಮಾ (Devara Movie)ದಲ್ಲಿ ಬ್ಯಸಿಯಾಗಿದ್ದಾರೆ. ಒಂದು ದೊಡ್ಡ-ಬಜೆಟ್ ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನರ್. ಕೊರಟಾಲ ಶಿವ ಈ ಸಿನಿಮಾ ನಿರ್ದೇಶಕರು. `ದೇವರ’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ಹೊಸ ಅಪ್ ಡೇಟ್ ನೀಡಿದ್ದಾರೆ. ಈ ಚಿತ್ರವು 2024ರ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5 ರಂದು ಸಿನಿಮಾ ರಿಲೀಸ್‌ ಡೇಟ್‌ವನ್ನು ಘೋಷಿಸಿತ್ತು.

ಜ್ಯೂನಿಯರ್‌ ಎನ್‌ಟಿಆರ್‌, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್​ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್​ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.

ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Continue Reading

ಬಾಲಿವುಡ್

Shah Rukh Khan: ಶಾರುಖ್‌ ಹೊಸ ಸಿನಿಮಾಗಾಗಿ ಕೈ ಜೋಡಿಸಿದ ಅನಿರುದ್ಧ್ ರವಿಚಂದರ್!

Shah Rukh Khan: ಸಿದ್ಧಾರ್ಥ್ ಮತ್ತು ಶಾರುಖ್ ಖಾನ್ ಪಠಾಣ್ ಚಿತ್ರೀಕರಣದ ಮೂಲಕ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇದೀಗ ಈ ಕಿಂಗ್‌ ಸಿನಿಮಾ ಮೂಲಕ ತಮ್ಮ ಸ್ನೇಹವನ್ನು ಮತ್ತಷ್ಟು ವಿಸ್ತರಿಸಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ, ಸಿದ್ ಮತ್ತು ಅವರ ತಂಡವು ಈಗಾಗಲೇ ಈ ಪ್ರಾಜೆಕ್ಟ್‌ಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ, ”ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Shah Rukh Khan and Anirudh Ravichander to team up for King
Koo

ಬೆಂಗಳೂರು: `ಜವಾನ್’ ನಂತರ, ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ಶಾರುಖ್ ಖಾನ್ (Shah Rukh Khan) ಅವರೊಂದಿಗೆ ಮತ್ತೆ ಕೈ ಜೋಡಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಶಾರುಖ್‌ ಅವರ ಮುಂದಿನ ಚಿತ್ರ ‘ಕಿಂಗ್’ ಸಿನಿಮಾಗಾಗಿ ಸಂಗೀತ ಮಾಡಲು ರೆಡಿಯಾಗಿದ್ದಾರೆ. ಈ ಸಿನಿಮಾಗೆ ಶಾರುಖ್‌ ಮಗಳು ಸುಹಾನಾ ಖಾನ್ ಕೂಡ ಇರಲಿದ್ದಾರೆ ಎನ್ನಲಾಗಿದೆ.

ಅಟ್ಲೀ ಅವರ ‘ಜವಾನ್’ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ರಚಿಸಿದ್ದರು. ಈಗ ಶಾರುಖ್‌ ಅವರ ಮುಂದಿನ ಚಿತ್ರ ‘ಕಿಂಗ್’ ಸಿನಿಮಾಗಾಗಿ ಸಂಗೀತ ಮಾಡಲು ರೆಡಿಯಾಗಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ತಂದೆ-ಮಗಳು ಜತೆಯಾಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

‘ಕಿಂಗ್’ ಒಂದು ರೀತಿಯ ಆ್ಯಕ್ಷನ್ ಥ್ರಿಲ್ಲರ್ ಆಗಿರುತ್ತದೆʼʼಎಂದು ವರದಿಯಾಗಿದೆ. ಸಿದ್ಧಾರ್ಥ್ ಮತ್ತು ಶಾರುಖ್ ಖಾನ್ ಪಠಾಣ್ ಚಿತ್ರೀಕರಣದ ಮೂಲಕ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇದೀಗ ಈ ಕಿಂಗ್‌ ಸಿನಿಮಾ ಮೂಲಕ ತಮ್ಮ ಸ್ನೇಹವನ್ನು ಮತ್ತಷ್ಟು ವಿಸ್ತರಿಸಲು ಸಿದ್ಧರಾಗಿದ್ದಾರೆ. ವಾಸ್ತವವಾಗಿ, ಸಿದ್ ಮತ್ತು ಅವರ ತಂಡವು ಈಗಾಗಲೇ ಈ ಪ್ರಾಜೆಕ್ಟ್‌ಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ, ”ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

ಸುಜೋಯ್ ಪ್ರಸ್ತುತ ದಿ ಕಿಂಗ್‌ಗಾಗಿ ಪ್ರಿ-ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಆ್ಯಕ್ಷನ್ ಥ್ರಿಲ್ಲರ್‌ನ ಸ್ಕ್ರಿಪ್ಟ್‌ಗೆ ಅಂತಿಮ ಸ್ಪರ್ಶವನ್ನು ನೀಡುತ್ತಿದ್ದಾರೆ. “ಕಿಂಗ್‌ನಲ್ಲಿ ಶಾರುಖ್‌ ಅವರ ಪಠಾಣ್ ಮತ್ತು ಜವಾನ್ ಸಿನಿಮಾಗಳಿಗಿಂತ ವಿಭಿನ್ನವಾಗಿರುತ್ತದೆ. ಇದು ಬಹಳಷ್ಟು ಚೇಸ್ ಸೀಕ್ವೆನ್ಸ್‌ಗಳೊಂದಿಗೆ ಇರಲಿದೆ. ಆದರೂ, ಮುಖ್ಯ ಕಥಾವಸ್ತುವು ಭಾವನಾತ್ಮಕವಾಗಿದೆ. ಸಾಕಷ್ಟು ತಿರುವುಗಳನ್ನು ಹೊಂದಿದೆ, ಇದರಿಂದಾಗಿ ಸುಜೋಯ್‌ಗೆ ನಿರ್ದೇಶನದ ಜವಾಬ್ದಾರಿಯನ್ನು ನೀಡಲಾಗಿದೆ, ”ಎಂದು ಮೂಲಗಳು ತಿಳಿಸಿವೆ. ಪಠಾಣ್ ಮತ್ತು ಜವಾನ್‌ನ ಸಿನಿಮಾಗಳ ಯಶಸ್ಸಿನ ಬಳಿಕ ಈ ಸಿನಿಮಾ ವಿಜಯೋತ್ಸವಕ್ಕೆ ಶಾರುಖ್‌ ಸಿದ್ಧವಾಗಿದ್ದಾರೆ.

Continue Reading
Advertisement
Milana Nagaraj Anarkali border gown worn
ಸ್ಯಾಂಡಲ್ ವುಡ್12 mins ago

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Boxer Parveen
ಕ್ರೀಡೆ15 mins ago

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Famous Food of bangalore
ಆಹಾರ/ಅಡುಗೆ37 mins ago

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Prime Minister of India
ರಾಜಕೀಯ41 mins ago

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

RCB FANS BIKE RALLY
ಕ್ರೀಡೆ47 mins ago

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

Pavithra Jayaram Chandrakant are just friends, daughter said
ಕಿರುತೆರೆ53 mins ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Powerful Bike
ಪ್ರಮುಖ ಸುದ್ದಿ56 mins ago

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Road Accident
ಶಿವಮೊಗ್ಗ1 hour ago

Road Accident : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆ; ಚಕ್ರಕ್ಕೆ ಸಿಲುಕಿ ಸಾವು

Kannada stone inscription found in Kashi Use as a foot bridge at the ghat
ಶಿವಮೊಗ್ಗ1 hour ago

Kannada stone inscription: ಕಾಶಿಯಲ್ಲಿ ಕನ್ನಡದ ಶಿಲಾ ಶಾಸನ ಪತ್ತೆ; ಘಾಟ್ ನಲ್ಲಿ ಕಾಲು ಸಂಕವಾಗಿ ಬಳಕೆ!

Road Accident
ಬೆಂಗಳೂರು ಗ್ರಾಮಾಂತರ2 hours ago

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ19 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌