Nawazuddin Siddiqui: ಪತ್ನಿಯ ದೂರಿನ ಬಗ್ಗೆ ಕೊನೆಗೂ ಬಾಯಿ ಬಿಟ್ಟ ನಟ ನವಾಜುದ್ದೀನ್ ಸಿದ್ದಿಕಿ; ಹೇಳಿದ್ದೇನು ? - Vistara News

ಬಾಲಿವುಡ್

Nawazuddin Siddiqui: ಪತ್ನಿಯ ದೂರಿನ ಬಗ್ಗೆ ಕೊನೆಗೂ ಬಾಯಿ ಬಿಟ್ಟ ನಟ ನವಾಜುದ್ದೀನ್ ಸಿದ್ದಿಕಿ; ಹೇಳಿದ್ದೇನು ?

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಪತ್ನಿ ಆಲಿಯಾ ಮಾಡುತ್ತಿರುವ ಆರೋಪದ ಬಗ್ಗೆ ಮಾತನಾಡಿದ್ದಾರೆ. ಈ ಜಗಳದಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಹಾಗೂ ಅವರ ಪತ್ನಿ ಆಲಿಯಾ ಜಗಳ ಹಲವು ದಿನಗಳಿಂದ ಸುದ್ದಿಯಲ್ಲಿರುವ ವಿಚಾರ. ನಟನ ವಿರುದ್ಧ ಹಲವಾರು ಆರೋಪಗಳನ್ನು ಅವರ ಪತ್ನಿ ಮಾಡಿದ್ದಾರೆ. ಆದರೆ ಇದೂವರೆಗೆ ಈ ವಿಚಾರದಲ್ಲಿ ಒಂದೂ ಮಾತನಾಡದ ನವಾಜುದ್ದೀನ್ ಇದೀಗ ತಮ್ಮ ಜಗಳದ ವಿಚಾರದಲ್ಲಿ ಬಾಯಿ ಬಿಟ್ಟಿದ್ದಾರೆ.

ಇದನ್ನೂ ಓದಿ: Nawazuddin Siddiqui: ದುಬೈನಲ್ಲಿ ಮಕ್ಕಳ ಆರೈಕೆಗೆ ನವಾಜುದ್ದೀನ್‌ ಸಿದ್ದಿಕಿ ನೇಮಿಸಿದ ಯುವತಿಗೆ ಊಟಕ್ಕೂ ದಿಕ್ಕಿಲ್ಲ, ಏನಿದು ಕೇಸ್?

ಬಾಲಿವುಡ್ ಮಾಧ್ಯಮವೊಂದರ ಜತೆ ನವಾಜುದ್ದೀನ್ ಅವರು ಮಾತನಾಡಿದ್ದಾರೆ. “ನಿಜವಾಗಿ ಹೇಳಬೇಕೆಂದರೆ ನನಗೆ ಈ ವಿಚಾರದಲ್ಲಿ ಏನೂ ಮಾತನಾಡಲು ಇಷ್ಟವಿಲ್ಲ. ಆದರೆ ಈ ಜಗಳದಿಂದಾಗಿ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗುತ್ತಿದೆ. ನನ್ನ ಮಕ್ಕಳು ದುಬೈನಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದ ಇಲ್ಲಿದ್ದಾರೆ. ನನ್ನ ಒಂದೇ ಒಂದು ಮನವಿ ಎಂದರೆ ಅದು ನನ್ನ ಮಕ್ಕಳು ತೊಂದರೆಯಿಲ್ಲದೆ ಶಾಲೆಗೆ ಹೋಗುವಂತಾಗಬೇಕು. ಅದನ್ನು ಬಿಟ್ಟು ಈ ವಿಚಾರದಲ್ಲಿ ಬೇರೇನನ್ನೂ ಹೇಳುವುದಕ್ಕೆ ನಾನು ಬಯಸುವುದಿಲ್ಲ” ಎಂದಿದ್ದಾರೆ.

ನವಾಜುದ್ದೀನ್ ಅವರ ಪತ್ನಿ ಆಲಿಯಾ ಅವರು ನಟನ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ದುಬೈನಲ್ಲಿ ಬಿಟ್ಟು ನವಾಜುದ್ದೀನ್ ಭಾರತಕ್ಕೆ ಬಂದಿದ್ದಾರೆ ಎಂದು ಅವರು ಇತ್ತೀಚೆಗೆ ದೂರಿದ್ದರು.

ಇದನ್ನೂ ಓದಿ: Nawazuddin and Aaliya : ವಿಚ್ಛೇದನ ಪಡೆಯದೆಯೇ ನವಾಜುದ್ದೀನ್‌ರನ್ನು ವರಿಸಿದ್ದರು ಆಲಿಯಾ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಕೀಲರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Vedaa teaser out: ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್-ಪ್ಯಾಕ್ಡ್ ‘ವೇದಾ’ ಟೀಸರ್ ಔಟ್‌

Vedaa teaser out: ಶಾರ್ವರಿ ಅವರು ಜಾನ್ ಅಬ್ರಹಾಂ ಜತೆ ಮೊದಲ ಬಾರಿಗೆ ನಟಿಸಿದ್ದಾರೆ. ಈ ಮೊದಲು ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ‘ಮಹಾರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ. ವೇದಾ ಸಿನಿಮಾ “ಹೈ-ಎನರ್ಜಿ ಆ್ಯಕ್ಷನ್-ಡ್ರಾಮಾ” ಎಂದು ಚಿತ್ರತಂಡ ಹೇಳಿಕೊಂಡಿದೆ.

VISTARANEWS.COM


on

John Abraham Vedaa teaser out
Koo

ಬೆಂಗಳೂರು: ಜಾನ್ ಅಬ್ರಹಾಂ (John Abraham) ನಟನೆಯ ಬಹು ನಿರೀಕ್ಷಿತ ಆಕ್ಷನ್-ಪ್ಯಾಕ್ಡ್ ಚಿತ್ರ ‘ವೇದಾ’ ಟೀಸರ್ (Vedaa teaser out) ಔಟ್‌ ಆಗಿದೆ. ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬ್ಯಾನರ್ಜಿ ನಡುವಿನ ಮುಖಾಮುಖಿಯ ಒಂದು ಝಲಕ್‌ ಅನಾವರಣಗೊಂಡಿದೆ. ಶಾರ್ವರಿ ವಾಘ್ ಕೂಡ ರಗಡ್‌ ಆಗಿಯೇ ಕಂಡಿದ್ದಾರೆ.

ನಿಖಿಲ್ ಅಡ್ವಾಣಿ ನಿರ್ದೇಶನದ ‘ವೇದಾ’ ಜುಲೈ 12ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಮೊದಲು ರಿಲೀಸ್‌ ಆಗಿದ್ದ ʻಬಾಟ್ಲಾ ಹೌಸ್ʼ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ನಿಖಿಲ್ ಅಡ್ವಾಣಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʻʻಬಾಟ್ಲಾ ಹೌಸ್ʼ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ‘ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ ಹಾಗೂ ಶಾರ್ವರಿ ಈ ಚಿತ್ರದ ನಾಯಕ, ನಾಯಕಿ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ವೇದಾ ಚಿತ್ರೀಕರಣದ ಸ್ಕೆಡ್ಯೂಲ್‌ ಮುಗಿಸಿದ್ದರು. ದಕ್ಷಿಣ ಕಾಶ್ಮೀರದ ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ ʼʼಎಂದು ಹೇಳಿಕೊಂಡಿದ್ದರು ನಿಖಿಲ್‌.

ಶಾರ್ವರಿ ಅವರು ಜಾನ್ ಅಬ್ರಹಾಂ ಜತೆ ಮೊದಲ ಬಾರಿಗೆ ನಟಿಸಿದ್ದಾರೆ. ಈ ಮೊದಲು ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ‘ಮಹರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ. ವೇದಾ ಸಿನಿಮಾ “ಹೈ-ಎನರ್ಜಿ ಆ್ಯಕ್ಷನ್-ಡ್ರಾಮಾ” ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರವನ್ನು ಜೀ ಸ್ಟುಡಿಯೋಸ್, ಜಾನ್ಸ್ ಜೆಎ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.

ಇದನ್ನೂ ಓದಿ: John Abraham: ಜಾನ್ ಅಬ್ರಹಾಂ ಇದೀಗ ವಿಲನ್‌ ಅಲ್ಲ ಹೀರೊ; ಹೊಸ ಸಿನಿಮಾ ಅನೌನ್ಸ್‌!

ಜಾನ್ ಅಬ್ರಹಾಂ ಅವರು ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿದ ʻಪಠಾಣ್ʼ ಚಿತ್ರದಲ್ಲಿ ಜಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Continue Reading

ಬಾಲಿವುಡ್

Mukesh Khanna: ʻಶಕ್ತಿಮಾನ್ʼ ಆಗುವ ಯೋಗ್ಯತೆ ರಣವೀರ್‌ಗೆ ಇಲ್ಲ ಎಂದ ಮಹಾಭಾರತದ ʻಭೀಷ್ಮʼ!

Mukesh Khanna: ರಣವೀರ್‌ ಸಿಂಗ್‌ (Ranveer Singh) ಈ ಪಾತ್ರಕ್ಕೆ ಸೂಕ್ತ ಎಂದು ಹೇಳಲಾಗಿತ್ತು. ಆದರೆ ಮುಖೇಶ್ ಖನ್ನಾ ಶಕ್ತಿಮಾನ್ ಆಗುವ ಅರ್ಹತೆ-ಯೋಗ್ಯತೆ ಎರಡೂ ರಣವೀರ್ ಸಿಂಗ್‌ಗೆ ಇಲ್ಲ ಅಂದಿದ್ದಾರೆ.

VISTARANEWS.COM


on

Mukesh Khanna rejects Ranveer Singh as Shaktimaan
Koo

ಬೆಂಗಳೂರು: ಮುಖೇಶ್ ಖನ್ನಾ (Mukesh Khanna) ಅವರು ಭಾರತದ ಮೊದಲ ಸೂಪರ್‌ಹೀರೊ. ʻಶಕ್ತಿಮಾನ್ʼ ಹಾಗೂ ಮಹಾಭಾರತದ ಭೀಷ್ಮ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದಾರೆ. 90ರ ದಶಕದ ಭಾರತದ ಸೂಪರ್ ಹೀರೊ ʻಶಕ್ತಿಮಾನ್ʼಗೆ ಮರುಜೀವ ನೀಡುವ ಚರ್ಚೆ ನಡೆಯುತ್ತಿದೆ. ರಣವೀರ್‌ ಸಿಂಗ್‌ (Ranveer Singh) ಈ ಪಾತ್ರಕ್ಕೆ ಸೂಕ್ತ ಎಂದು ಹೇಳಲಾಗಿತ್ತು. ಆದರೆ ಮುಖೇಶ್ ಖನ್ನಾ ಶಕ್ತಿಮಾನ್ ಆಗುವ ಅರ್ಹತೆ-ಯೋಗ್ಯತೆ ಎರಡೂ ರಣವೀರ್ ಸಿಂಗ್‌ಗೆ ಇಲ್ಲ ಅಂದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಣವೀರ್ ಸಿಂಗ್ ಅವರ ಕೊಲಾಜ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಟ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದು, “ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ಶಕ್ತಿಮಾನ್ ಪಾತ್ರದಲ್ಲಿ ನಟಿಸುತ್ತಾರೆ ಎಂಬ ವದಂತಿಗಳಿವೆ. ಆದರೆ ಆಗ ನಾನು ಮೌನವಾಗಿದ್ದೆ. ಆದರೆ ರಣವೀರ್ ಈ ಸಿನಿಮಾಗೆ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳು ಘೋಷಿಸುತ್ತಿದ್ದಂತೆ ಈ ಬಗ್ಗೆ ಮಾತನಾಡಬೇಕು ಎಂದೆನಿಸಿತು. ರಣವೀರ್‌ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಕೆಟ್ಟ ಇಮೇಜ್ ಹೊಂದಿರುವ ವ್ಯಕ್ತಿ. ಅವರು ಎಂದಿಗೂ ಶಕ್ತಿಮಾನ್ ಆಗಲು ಸಾಧ್ಯವಿಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

ರಣವೀರ್ ಸಿಂಗ್ ನಗ್ನ ಫೋಟೋಶೂಟ್!

ಈ ಹಿಂದೆ ಮ್ಯಾಗಜೀನ್‌ಗಾಗಿ ರಣವೀರ್ ನಗ್ನ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದಕ್ಕೆ ಮುಖೇಶ್ ಅವರು ಟೀಕಿಸಿದ್ದರು.

ʻʻಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿ ಅಲ್ಲ ಹಾಗೊಂದು ವೇಳೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಫಿನ್ ಲ್ಯಾಂಡ್ ಅಥವಾ ಸ್ಪೇನ್‌ಗೆ ಹೋಗಲಿʼʼ ಎಂದು ಮುಖೇಶ್ ಖನ್ನಾ ಹೇಳಿದ್ದರು.

“ನಿಮ್ಮ ಸ್ಪರ್ಧೆ ಸ್ಪೈಡರ್ ಮ್ಯಾನ್, ಬ್ಯಾಟ್‌ಮ್ಯಾನ್, ಕ್ಯಾಪ್ಟನ್ ಪ್ಲಾನೆಟ್‌ನೊಂದಿಗೆ ಅಲ್ಲ ಎಂದು ನಾನು ನಿರ್ಮಾಪಕರಿಗೆ ಹೇಳಿದ್ದೇನೆ. ಶಕ್ತಿಮಾನ್ ಸೂಪರ್ ಹೀರೋ ಅಲ್ಲ, ಸೂಪರ್ ಟೀಚರ್ ಕೂಡ ಆಗಿದ್ದಾರೆ. ಆ ಪಾತ್ರವನ್ನು ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು ಎಂದು ಹೇಳಿರುವ ಮುಖೇಶ್ ಖನ್ನಾ, ರಣವೀರ್‌ ಸಿಂಗ್ ಹೊರತು ಪಡಿಸಿ ಶಕ್ತಿಮಾನ್ ಪಾತ್ರಕ್ಕೆ ಹೊಂದುವಂತ ಸ್ಟಾರ್ ನಟರು ಇದ್ದಾರೆ. ಆದರೆ ಅವರ ಇಮೇಜ್ ಅಡ್ಡ ಬರುತ್ತೆʼʼ ಎಂದಿದ್ದಾರೆ. ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ ಶಕ್ತಿಮಾನ್ ಚಿತ್ರವನ್ನ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

Continue Reading

ಸಿನಿಮಾ

Randeep Hooda: ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್​ ಪಾತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡ ನಟ; ಬದ್ಧತೆಗೆ ಜೈ ಎಂದ ಫ್ಯಾನ್ಸ್‌

Randeep Hooda: ಬಾಲಿವುಡ್‌ ನಟ ರಣದೀಪ್ ಹೂಡಾ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಚಿತ್ರದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್​ ದಾಮೋದರ್​ ಸಾವರ್ಕರ್​ ಪಾತ್ರಕ್ಕಾಗಿ ಬರೋಬ್ಬರಿ 30 ಕೆಜಿ ತೂಕ ಕಳೆದುಕೊಂಡಿದ್ದಾರೆ.

VISTARANEWS.COM


on

hooda
Koo

ಮುಂಬೈ: ರಣದೀಪ್ ಹೂಡಾ (Randeep Hooda) ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರು. ಅವರು ತಮ್ಮ ಮುಂಬರುವ ‘ಸ್ವಾತಂತ್ರ್ಯ ವೀರ ಸಾವರ್ಕರ್​’ (Swatantrya Veer Savarkar) ಚಿತ್ರದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್​ ದಾಮೋದರ್​ ಸಾವರ್ಕರ್​ (Vinayak Damodar Savarkar) ಪಾತ್ರಕ್ಕಾಗಿ ಬರೋಬ್ಬರಿ 30 ಕೆಜಿ ತೂಕ ಕಳೆದುಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ರಣದೀಪ್ ಹೂಡಾ ಈ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ತಮ್ಮ ನೆಚ್ಚಿನ ನಟನ ಬದ್ಧತೆ, ಬದಲಾವಣೆಯನ್ನು ಬೆರಗುಗಣ್ಣಿನಿಂದ ನೋಡಿದ್ದಾರೆ. ಸದ್ಯ ಈ ಫೋಟೊ ವೈರಲ್‌ ಆಗಿದೆ.

ಕಟ್ಟುಮಸ್ತಾದ ಶರೀರ ಹೊಂದಿದ್ದ ರಣದೀಪ್​ ಹೂಡಾ ಅವರು ಸಾವರ್ಕರ್​ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಫೋಸ್‌​ ನೀಡಿದ್ದಾರೆ. ಕನ್ನಡಿ ಮುಂದೆ ನಿಂತಿರುವ ಈ ಫೋಟೊವನ್ನು ಹಂಚಿಕೊಂಡಿರುವ ಅವರು ಇದಕ್ಕೆ ʼಕಾಲಾ ಪಾನಿʼ ಎಂಬ ಕ್ಯಾಪ್ಶನ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಈ ಚಿತ್ರದ ಬಗ್ಗೆ ಮಾಹಿತಿ ನೀಡಿ, ʼʼಅಂಡಮಾನ್‌ ಸೆಲ್ಯುಲಾರ್ ಜೈಲಿನಲ್ಲಿದ್ದಾಗ ಸಾವರ್ಕರ್ ಇದ್ದಂತೆ ಕಾಣಲು ರಣದೀಪ್ ಹೂಡಾ ಅವರು 30 ಕೆಜಿ ತೂಕವನ್ನು ಕಳೆದುಕೊಂಡಿದ್ದರುʼʼ ಎಂದು ಹೇಳಿದ್ದರು. ಜತೆಗೆ ಪಾತ್ರದ ಬಗ್ಗೆ ರಣದೀಪ್ ಅವರ ಬದ್ಧತೆಯನ್ನು ಶ್ಲಾಘಿಸಿದ್ದರು.

ಫೋಟೊ ನೋಡಿದ ಅಭಿಮಾನಿಗಳು ರಣದೀಪ್ ಅವರ ಬಾಡಿ ಟ್ರಾನ್ಸ್​ಫಾರ್ಮೇಷನ್​ಗೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಈ ಫೋಟೊ ನೋಡಿ ರೋಮಾಂಚವಾಯಿತು. ಈ ಸಿನಿಮಾ ನೋಡಿವಾಗ ಖಚಿತವಾಗಿ ಪ್ರೇಕ್ಷಕ್ ಕಣ್ಣು ತುಂಬಿ ಬರಲಿದೆʼʼ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ನಟನೆಯ ಜತೆಗೆ ನಿರ್ದೇಶನ

ವಿಶೇಷ ಎಂದರೆ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಚಿತ್ರದಲ್ಲಿ ರಣದೀಪ್‌ ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮಾರ್ಚ್‌ 22ರಂದು ಈ ಸಿನಿಮಾ ತೆರೆ ಕಾಣಲಿದೆ. ಹಿಂದಿ ಮಾತ್ರವಲ್ಲದೇ ಮರಾಠಿಯಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಕಲಾವಿದರ ಅಂಕಿತಾ ಲೋಖಂಡೆ, ಅಮಿತ್‌ ಸಿಯಾಲ್‌, ರಾಕೇಶ್‌ ಚತುರ್ವೇದಿ, ಲೋಕೇಶ್‌ ಮಿತ್ತಲ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್​ ತಿಲಕ್​, ಡಾ.ಬಿ.ಆರ್​. ಅಂಬೇಡ್ಕರ್​, ಸುಭಾಷ್​ ಚಂದ್ರ ಬೋಸ್​, ಜವಹರ್​ ಲಾಲ್​ ನೆಹರೂ, ಭಗತ್​ ಸಿಂಗ್​ ಸೇರಿದಂತೆ ಹಲವು ನೈಜ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದಲ್ಲಿವೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಗಮನ ಸೆಳೆದಿತ್ತು.

ಹಿಂದೊಮ್ಮೆ 2016ರಲ್ಲಿ ಬಿಡುಗಡೆಯಾದ ʼಸರಬ್ಜಿತ್‌ʼ ಬಾಲಿವುಡ್‌ ಚಿತ್ರಕ್ಕಾಗಿ ರಣದೀಪ್‌ ಹೂಡಾ ಗುರುತೇ ಸಿಗದಂತೆ ಬದಲಾಗಿದ್ದರು. ಆಗಲೂ ಅವರ ಬಾಡಿ ಟ್ರಾನ್ಸ್​ಫಾರ್ಮೇಷನ್​ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಚಿತ್ರದಲ್ಲಿನ ಪಾತ್ರಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಇದನ್ನೂ ಓದಿ: Randeep Hooda: ಮಣಿಪುರದ ಮೈತಿ ಪದ್ಧತಿಯಂತೆ ವಿವಾಹವಾದ ಸ್ಟಾರ್‌ ನಟ; ಏನಿದರ ವಿಶೇಷ?

ಈ ಮಧ್ಯೆ ರಣದೀಪ್‌ ಹೂಡಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಅವರಿಗೆ ಟಿಕೆಟ್‌ ನೀಡಲಿದೆ. ಹರಿಯಾಣದ ರೋಹ್ಟಕ್‌ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಣದೀಪ್‌ ಹೂಡಾ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

Continue Reading

ಬಾಲಿವುಡ್

Shah Rukh Khan: ವೇದಿಕೆ ಮೇಲೆ ಶಾರುಖ್‌-ಸಲ್ಮಾನ್‌ ಖಾನ್‌ ಫೈಟ್‌!

Shah Rukh Khan: ಅನಂತ್‌ ಅಂಬಾನಿ ಅವರ ವಿವಾಹ ಪೂರ್ವ ಸಂಭ್ರದಲ್ಲಿ ಶಾರುಖ್‌, ಆಮೀರ್‌, ಸಲ್ಮಾನ್‌ ʻಆರ್‌ಆರ್‌ ಆರ್‌ʼ ಸಿನಿಮಾದ ʻನಾಟು ನಾಟುʼ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿರುವ ವಿಡಿಯೊ ವೈರಲ್‌ ಆಗಿತ್ತು. ಇದಾದ ಬಳಿಕ ಶಾರುಖ್‌ ಅವರ ಹಳೆಯ ಸಂದರ್ಶನದ ವಿಡಿಯೊ ಭಾರಿ ಸದ್ದು ಮಾಡಿತ್ತು.

VISTARANEWS.COM


on

Shah Rukh Khan salman fight
Koo

ಬೆಂಗಳೂರು: ಗುಜರಾತಿನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಸಮಾರಂಭದಲ್ಲಿ ಶಾರುಖ್ ಖಾನ್ (Shah Rukh Khan) ಮತ್ತು ಸಲ್ಮಾನ್ ಖಾನ್ ಅವರ ವಿಡಿಯೊಗಳು ಮತ್ತೆ ವೈರಲ್‌ ಆಗುತ್ತಿವೆ. ಶಾರುಖ್‌ ಹಾಗೂ ಸಲ್ಲು ತಮ್ಮ ಹಾಡುಗಳ ಬಗ್ಗೆ ವೇದಿಕೆಯಲ್ಲಿ ತಮಾಷೆಯಾಗಿ ಜಗಳವಾಡಿದ್ದಾರೆ. ಆಮೀರ್‌ ಕೂಡ ಈ ಮಾತುಕತೆಯಲ್ಲಿ ಭಾಗವಾಗಿದ್ದಾರೆ.

ಜಾಮ್‌ನಗರದ ವೇದಿಕೆಯಲ್ಲಿ ಶಾರುಖ್‌ ಮತ್ತು ಸಲ್ಮಾನ್ ಖಾನ್ ತಮಾಷೆಯ ವಾಗ್ವಾದದಲ್ಲಿ ತೊಡಗಿದ್ದರು. ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಮೂರು ಖಾನ್‌ಗಳು ವೇದಿಕೆಯಲ್ಲಿ ಪ್ರದರ್ಶನ ನೀಡಬೇಕೆಂದು ಮುಕೇಶ್‌ ಅಂಬಾನಿ ಬಯಸಿದ್ದರು ಎಂದು ಶಾರುಖ್‌ ಹೇಳಿದ್ದಾರೆ. ಇದಾದ ಬಳಿಕ ಮೂವರಲ್ಲಿ ಯಾರ ಸಿನಿಮಾ ಹಾಡು ಪ್ಲೇ ಮಾಡಬೇಕು ಎಂದು ಅವರಲ್ಲಿಯೇ ತಮಾಷೆಯ ಜಗಳ ಆಗಿದೆ. ಇದನ್ನು ಕಂಡ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದ್ದರು. ಆ ಬಳಿಕ ಮೂವರು ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ. ಜತೆಗೆ ʻಚೈಯ್ಯಾ ಚೈಯ್ಯಾʼ, ‘ಜೀನೆ ಕೆ ಹೈ ಚಾರ್ ದಿನ್’ ‘ರಂಗ್ ದೇ ಬಸಂತಿ’ಯ ‘ಮಸ್ತಿ ಕಿ ಪಾಠಶಾಲಾ’ ಹೀಗೆ ಹಲವು ಹಾಡುಗಳಿಗೆ ಸ್ಪೆಪ್ಸ್‌ ಹಾಕಿದ್ದಾರೆ.

ಇದನ್ನೂ ಓದಿ: Shah Rukh Khan: ಏನಿದು ಶಾರುಖ್‌ ಖಾನ್‌ನ ಪೋನಿ ಟೇಲ್‌ ಹೇರ್‌ ಸ್ಟೈಲ್‌?

ಚಡ್ಡಿ, ಬನಿಯನ್​ ಮಾರಿದ್ರೂ ಇದು ಸಾಧ್ಯವಿಲ್ಲ!

ಅನಂತ್‌ ಅಂಬಾನಿ ಅವರ ವಿವಾಹ ಪೂರ್ವ ಸಂಭ್ರದಲ್ಲಿ ಶಾರುಖ್‌, ಆಮೀರ್‌, ಸಲ್ಮಾನ್‌ ʻಆರ್‌ಆರ್‌ ಆರ್‌ʼ ಸಿನಿಮಾದ ʻನಾಟು ನಾಟುʼ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿರುವ ವಿಡಿಯೊ ವೈರಲ್‌ ಆಗಿತ್ತು. ಇದಾದ ಬಳಿಕ ಶಾರುಖ್‌ ಅವರ ಹಳೆಯ ಸಂದರ್ಶನದ ವಿಡಿಯೊ ಭಾರಿ ಸದ್ದು ಮಾಡಿತ್ತು.

ಶಾರುಖ್‌ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ʻʼನಾವು ಮೂವರು ಖಾನ್​ರನ್ನು ಒಟ್ಟಿಗೆ ಒಂದೇ ಕಡೆ ಸೇರಿಸುವಷ್ಟು ಸಂಪತ್ತು ಯಾರ ಬಳಿಯೂ ಇಲ್ಲ. ಚಡ್ಡಿ, ಬನಿಯನ್​ ಮಾರಿದ್ರೂ ಇದು ಸಾಧ್ಯವಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಆದರೀಗ ಮುಕೇಶ್‌ ಅಂಬಾನಿ ಮಾಡಿ ತೋರಿಸಿದ್ದಾರೆ ಎಂಬ ಟ್ರೋಲ್‌ಗಳು ಹರಿದಾಡಿದವು. ಇಷ್ಟಾದರೂ ಈ ಮೂವರು ಪಡೆದ ಸಂಭಾವನೆ ಎಷ್ಟು ಎಂಬುದೇ ಜನರಿಗೆ ಇದ್ದ ಕುತೂಹಲ.

ಆದರೆ ಮೂಲಗಳ ಪ್ರಕಾರ ಈ ಮೂವರು ಖಾನ್‌ಗಳು ವಿವಾಹ ಪೂರ್ವ ಆಚರಣೆಗಳಲ್ಲಿ ಪ್ರದರ್ಶನ ನೀಡಲು ಒಂದು ಪೈಸೆಯನ್ನೂ ಪಡೆದುಕೊಂಡಿಲ್ಲ ಎಂದು ವರದಿಯಾಗಿದೆ. ಈ ಮೂವರನ್ನು ಒಟ್ಟಿಗೆ ವೇದಿಕೆ ಮೇಲೆ ತರಲು ಯಾವುದೇ ಪ್ರೀ ಪ್ಲ್ಯಾನಿಂಗ್‌ ಇಲ್ಲವಾಗಿತ್ತು ಎನ್ನಲಾಗಿದೆ. ಈ ಮೂವರು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದೊಂದಿಗೆ ವೈಯಕ್ತಿಕವಾಗಿ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಈ ಮೂವರು ಪ್ರೀತಿಯಿಂದ ಪ್ರದರ್ಶನ ನೀಡಿದ್ದರು ಎಂದು ವರದಿಯಾಗಿದೆ.

Continue Reading
Advertisement
Self Harming fire
ಚಿತ್ರದುರ್ಗ25 mins ago

Self Harming : ಇಬ್ಬರು ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ

BY Vijayendra meets HD Kumaraswamy
Lok Sabha Election 202449 mins ago

Lok Sabha Election 2024: ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರ; ಮೋದಿ ಪ್ರವಾಸದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

Acid Attack Anekal coupleAcid Attack Anekal couple
ಬೆಂಗಳೂರು52 mins ago

Acid Attack : ಕೌಟುಂಬಿಕ ಕಲಹ; ಹೆಂಡತಿ ಮೇಲೆ ಆಸಿಡ್‌ ದಾಳಿ ನಡೆಸಿದ ಧೂರ್ತ ಗಂಡ

nitin gadkari ashiwini vaishnav
ಪ್ರಮುಖ ಸುದ್ದಿ58 mins ago

Lok Sabha Election 2024: ಮೋದಿ ಮತ್ತೆ ಪ್ರಧಾನಿ, ಎನ್‌ಡಿಗೆ 400: ನಿತಿನ್‌ ಗಡ್ಕರಿ; 2026ರಲ್ಲಿ ಬುಲೆಟ್‌ ಟ್ರೇನ್:‌ ಅಶ್ವಿನಿ ವೈಷ್ಣವ್

Tom Curran
ಕ್ರೀಡೆ1 hour ago

IPL 2024: ಎಲ್ಲ ಅನುಮಾನಗಳಿಗೂ ತೆರೆ; ಆರ್​ಸಿಬಿ ಸೇರಿದ ಇಂಗ್ಲೆಂಡ್​ ಆಲ್​ರೌಂಡರ್​

MP Tejaswi surya participate at Nagarthapet protest
ಬೆಂಗಳೂರು1 hour ago

Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ

SS Rajamouli soft launches Mahesh Babu
ಟಾಲಿವುಡ್1 hour ago

SS Rajamouli: ಮಹೇಶ್‌ ಬಾಬು ಸಿನಿಮಾ ಬಗ್ಗೆ ಜಪಾನ್‌ನಲ್ಲಿ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಜಮೌಳಿ!

Student Death Deeksha
ತುಮಕೂರು1 hour ago

Student death: ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು; ಶಿಕ್ಷಕರ ಸಸ್ಪೆಂಡ್

Thalapathy Vijay
ಕಾಲಿವುಡ್2 hours ago

Thalapathy Vijay: 14 ವರ್ಷಗಳ ಬಳಿಕ ದಳಪತಿ ವಿಜಯ್‌ ಕೇರಳಕ್ಕೆ; ಕಾರಿನ ಗ್ಲಾಸ್ ಪೀಸ್ ಪೀಸ್!

Virat Kohli's new look
ಕ್ರೀಡೆ2 hours ago

Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು2 hours ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು21 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌