Priyanka Chopra: ಯಾರ ಹೋಲಿಕೆ ಇದೆ ಎಂದ ನೆಟ್ಟಿಗರು: ಪ್ರಿಯಾಂಕಾ, ನಿಕ್‌, ಮಗಳು ಮಾಲತಿ ಫೋಟೊ ಕೊಲಾಜ್‌ ವೈರಲ್‌! - Vistara News

ಬಾಲಿವುಡ್

Priyanka Chopra: ಯಾರ ಹೋಲಿಕೆ ಇದೆ ಎಂದ ನೆಟ್ಟಿಗರು: ಪ್ರಿಯಾಂಕಾ, ನಿಕ್‌, ಮಗಳು ಮಾಲತಿ ಫೋಟೊ ಕೊಲಾಜ್‌ ವೈರಲ್‌!

ಪ್ರಿಯಾಂಕಾ (Priyanka Chopra) ಮತ್ತು ನಿಕ್ ಅವರ ಬಾಲ್ಯದ ಮುದ್ದಾದ ಫೋಟೊಗಳಿಗೆ ಮಾಲತಿಯ ಫೋಟೊವನ್ನು ಕೊಲಾಜ್‌ ಮಾಡಿ ಯಾರ ರೀತಿ ಇದ್ದಾಳೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಬರೆದಿದ್ದಾರೆ.

VISTARANEWS.COM


on

Priyanka Chopra Malti Marie Chopra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪತಿ ನಿಕ್​ ಜೋನಸ್​ ಮತ್ತು ಕುಟುಂಬದವರ ಜತೆ ಲಾಸ್​ ಏಂಜಲೀಸ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ (Priyanka Chopra), ಮಗಳು ಮಾಲತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದೀಗ, ಪ್ರಿಯಾಂಕಾ ಮತ್ತು ನಿಕ್ ಅವರ ಬಾಲ್ಯದ ಮುದ್ದಾದ ಫೋಟೊಗಳಿಗೆ ಮಾಲತಿಯ ಫೋಟೊವನ್ನು ಕೊಲಾಜ್‌ ಮಾಡಿ ಯಾರ ರೀತಿ ಇದ್ದಾಳೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಫ್ಯಾನ್ಸ್‌ ಪೇಜ್‌ನಲ್ಲಿ ಪ್ರಿಯಾಂಕ, ನಿಕ್ ಬಾಲ್ಯದ ಫೋಟೊಗಳ ಕೊಲಾಜ್ ವೈರಲ್‌!

ಮಗಳು ಮಾಲತಿ ಫೋಟೊ ವೈರಲ್‌ ಆಗುತ್ತಿದ್ದಂತೆ ಪ್ರಿಯಾಂಕ ಅವರ ಫ್ಯಾನ್ಸ್‌ ಪೇಜ್‌ಗಳು ನಿಕ್‌ ಮತ್ತು ಪ್ರಿಯಾಂಕಾ ಅವರ ಬಾಲ್ಯದ ಫೋಟೊಗಳನ್ನು ಪೋಸ್ಟ್‌ ಮಾಡಿದ್ದಾರೆ. ಮೊದಲ ಫೋಟೊದಲ್ಲಿ ಪ್ರಿಯಾಂಕಾ ಮತ್ತು ನಿಕ್ ಜತೆಗಿನ ಮಾಲತಿ ಅವರ ಕೊಲಾಜ್ ಆಗಿತ್ತು. ಅಂಬೆಗಾಲಿಡುತ್ತಿರುವ ಪ್ರಿಯಾಂಕಾ, ತಂದೆಯ ಸೈನ್ಯದ ಸಮವಸ್ತ್ರದಲ್ಲಿ ಪೋಸ್ ನೀಡಿದ ಪ್ರಿಯಾಂಕ, ಬೇಬಿ ನಿಕ್ ಹೀಗೆ ಈ ಎಲ್ಲ ಫೋಟೊಗಳಿಗೆ ಮಾಲತಿ ಫೋಟೊ ಜತೆ ಕೊಲಾಜ್‌ ಮಾಡಿ, ಯಾರ ರೀತಿ ಕಾಣುತ್ತಿದ್ದಾಳೆ ಎಂದು ಕೇಳಿದ್ದಾರೆ ಫ್ಯಾನ್ಸ್‌.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ವೈರಲ್​; ಸಖತ್​ ವೈಟ್​ ಆ್ಯಂಡ್​ ಕ್ಯೂಟ್​ ಆಗಿದ್ದಾಳೆ ಮಾಲತಿ ಮೇರಿ

ಹೆಚ್ಚಾಗಿ ಮಾಲತಿ ನಿಕ್ ಅವರನ್ನು ಹೋಲುತ್ತಿದ್ದಾಳೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಬೇಬಿ ಕಣ್ಣುಗಳು ಪ್ರಿಯಾಂಕಾ ತರಹ ಇದೆʼʼ ಎಂದಿದ್ದಾರೆ. ಮತ್ತೊಬ್ಬರು ʻʻಈಗ ತಂದೆ – ತಾಯಿಯನ್ನು ಹೋಲುತ್ತಿದ್ದಾಳೆ. ಬೆಳೆಯುತ್ತಾ ಹೋದಂತೆ ಚೇಂಜ್‌ ಆಗಬಹುದುʼʼ ಎಂದೂ ಕೆಲವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Priyanka Chopra | ಮಗಳ ಜತೆ ಬ್ರಿಟನ್‌ ಮ್ಯಾಗಜಿನ್‌ಗೆ ಪೋಸ್‌ ಕೊಟ್ಟ ಪ್ರಿಯಾಂಕಾ ಚೋಪ್ರಾ, ಹೇಗಿದೆ ನೋಡಿ ಫೋಟೊ

ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದಾರೆ. 2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೋಗಳು ವೈರಲ್​ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ. ಅಕ್ಟೋಬರ್​ನಲ್ಲಿ ಈ ದಂಪತಿ ಪುಟ್ಟ ಮಗಳೊಂದಿಗೆ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದರು. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಬ್ರಿಟನ್​ ಮ್ಯಾಗ್​ಜಿನ್​ವೊಂದಕ್ಕೆ ಪುಟ್ಟ ಮಗಳೊಂದಿಗೆ ಪೋಸ್ ಕೊಟ್ಟಿದ್ದರು. ಆದರೆ ಮಗು ಹೇಗಿದೆ ಎಂಬುದು ಗೊತ್ತಾಗಿರಲಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಇತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Flop Film: ಫ್ಲಾಪ್ ಎಂದು ಕರೆಸಿಕೊಂಡ ಈ ಚಿತ್ರದ 25 ಕೋಟಿ ಟಿಕೆಟ್ ಮಾರಾಟವಾಗಿದ್ದು ಹೇಗೆ; ಇಲ್ಲಿದೆ ರೋಚಕ ಸಿನಿ ಇತಿಹಾಸ

Flop Film ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟವಾಗಿದೆ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಚಲನಚಿತ್ರವೊಂದು ಈ ದಾಖಲೆಯನ್ನು ಬ್ರೇಕ್ ಮಾಡಿ ಎಂದಿಗೂ ಮುರಿಯಲಾಗದ ದಾಖಲೆಯನ್ನು ಮಾಡಿ ಹೋಗಿದೆ..

VISTARANEWS.COM


on

Flop Film
Koo

ಬೆಂಗಳೂರು: ಕಳೆದ ವರ್ಷ ‘ಜವಾನ್’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಕೊನೆಯಲ್ಲಿ ಅದು 4 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು ಮತ್ತು ಇದನ್ನು ದೊಡ್ಡ ದಾಖಲೆ ಎಂಬಂತೆ ಎತ್ತಿ ತೋರಿಸಲಾಗಿತ್ತು. ಆದರೆ ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮತ್ತು ಟಿಕೆಟ್​ಗಳು ಮಾರಾಟವಾದ ಭಾರತೀಯ ಚಲನಚಿತ್ರವೊಂದು ಸಾರ್ವಕಾಲಿಕ ದಾಖಲೆ ಮಾಡಿದೆ. ಅಚ್ಚರಿ ಏನೆಂದರೆ ಈ ಸಿನಿಮಾ ಆರಂಭದಲ್ಲಿ ಇದು ಸೋತ ((Flop Film) ) ಸಿನಿಮಾ ಎಂಬ ವಿಮರ್ಶೆಯನ್ನು ಪಡೆದುಕೊಂಡಿತ್ತು. ಆದರೆ, ಬಳಿಕ ಆದದ್ದೇ ಬೇರೆ.

ಆ ಚಿತ್ರ ಯಾವುದೆಂದರೆ ರಮೇಶ್ ಸಿಪ್ಪಿ ಅವರ, ನಟ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ ಜನಪ್ರಿಯ ‘ಶೋಲೆ’ ಚಿತ್ರ. ಇದನ್ನು ಇತರ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಜನರು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರಂತೆ. ಗಲ್ಲಾ ಪೆಟ್ಟಿಗೆ ಸಂಗ್ರಾಹಕರ ಪ್ರಕಾರ, ಶೋಲೆ ಚಿತ್ರ 1975-80ರ ಆರಂಭದಲ್ಲಿ ಭಾರತದಲ್ಲಿ ಮಾತ್ರ 18 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿತು. ಹಾಗೇ ಈ ಚಿತ್ರ 60 ಚಿತ್ರಮಂದಿರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತ್ತು ಮತ್ತು ಬೆಳ್ಳಿ ಹಬ್ಬವನ್ನು ಆಚರಿಸಿತ್ತು. ಅಲ್ಲದೇ ಈ ಚಿತ್ರ ಬಾಂಬೆಯ ಮಿನರ್ವ ಥಿಯೇಟರ್ ನಲ್ಲಿ ಐದು ವರ್ಷಗಳ ಕಾಲ ಓಡಿದ್ದು, ಅಂದಿನ ದಾಖಲೆ. ಒಟ್ಟಾರೆ ಈ ಚಿತ್ರ ಅಂದಾಜು 2 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಹಾಗೇ ಈ ಚಿತ್ರ ಸೋವಿಯತ್ ರಷ್ಯಾದಲ್ಲಿ ಬಿಡುಗಡೆಯಾಗಿ ಅಲ್ಲಿ 48 ಮಿಲಿಯನ್ (4.8 ಕೋಟಿ) ಗಳಿಕೆ ಮಾಡಿದೆ. ಒಟ್ಟಾರೆ ಸುಮಾರು 25 ಕೋಟಿಯಷ್ಟು ಟಿಕೆಟ್​ ಸೇಲಾಗಿದೆ.

ಕೊನೆಯಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಹಾಗೂ ಭಾರತದಲ್ಲಿ ಅತ್ಯಂತ ಯಶಸ್ಸು ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 30ಕೋಟಿ ಗಳಿಸಿತ್ತು. ಆ ಮೂಲಕ ಅದು ಮುಘಲ್-ಎ-ಆಜಮ್ ಮತ್ತು ಮದರ್ ಇಂಡಿಯಾದ ದಾಖಲೆಯನ್ನು ಮುರಿದಿದೆ.

ಆದರೆ ಈ ಚಿತ್ರ ಮೊದಲು ಹಿಟ್ ಆಗಲಿಲ್ಲ, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಬಿಡುಗಡೆಯಾದ ಈ ಚಿತ್ರ ನಂತರ ಕೆಟ್ಟ ವಿಮರ್ಶೆಗಳು ಮತ್ತು ಟೀಕೆಗಳಿಗೆ ಒಳಗಾಗಿತ್ತು. ಹಾಗಾಗಿ ಮೊದಲ ಎರಡು ವಾರಗಳಲ್ಲಿ ಈ ಚಿತ್ರತಂಡದವರೇ ಅದನ್ನು ಫ್ಲಾಪ್ ಎಂದು ಲೇಬಲ್ ನೀಡಿದ್ದಾರೆ. ಹಾಗಾಗಿ ತಯಾರಕರು ಅದರ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಲು ಹೇಳಿದ್ದರು. ಆದರೆ ಕೊನೆಯಲ್ಲಿ ಹಿಟ್ ಚಿತ್ರವಾಗಿ ಹೊರಮೊಮ್ಮಿತ್ತು., ದಾಖಲೆಯನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಕಳೆದ ವರ್ಷಗಳಲ್ಲಿ ಹಲವಾರು ಭಾರತೀಯ ಚಲನಚಿತ್ರಗಳು ವಿಶ್ವದಾದ್ಯಂತ 1000 ಕೋಟಿ ಗಳಿಕೆಯನ್ನು ಪಡೆದುಕೊಂಡಿವೆ. ಬಾಹುಬಲಿ ಚಿತ್ರ ಜಾಗತಿಕ ಮಟ್ಟದಲ್ಲಿ 15-20 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು. ಆರ್ ಆರ್ ಆರ್ ಮತ್ತು ಕೆಜಿಎಫ್ 2 10 ಕೋಟಿ ಗಿಂತ ಕಡಿಮೆ ಪ್ರೇಕ್ಷಕರನ್ನು ಗಳಿಸಿದೆ. ದಂಗಲ್ ಚಿತ್ರ ಕೂಡ 10 ಕೋಟಿ ಪ್ರೇಕ್ಷಕರನ್ನು ಗಳಿಸಿದೆ. ಆದರೂ ಅವುಗಳು ಶೋಲೆಯ ಮಟ್ಟಕ್ಕೆ ಬಂದು ನಿಲ್ಲಲಿಲ್ಲ. ಎನ್ನಲಾಗಿದೆ.

Continue Reading

ಬಾಲಿವುಡ್

Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

Navya Naveli Nanda: ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

VISTARANEWS.COM


on

Aaradhya Bachchan is wiser more intelligent than I
Koo

ಬೆಂಗಳೂರು: ಪೋಡ್‌ಕಾಸ್ಟ್‌ ʻವಾಟ್ ದಿ ಹೆಲ್ ನವ್ಯಾʼದಲ್ಲಿ ಜಯಾ ಬಚ್ಚನ್‌ ಅವರು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೀಗ ಶ್ವೇತಾ ಬಚ್ಚನ್ ಮಗಳು ನವ್ಯಾ ಅವರು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮಗಳ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತನ್ನ ಸೋದರಸಂಬಂಧಿ ಆರಾಧ್ಯ(Aaradhya Bachchan) ತುಂಬ ಬುದ್ಧಿವಂತೆ ಎಂದು ಹೇಳಿಕೊಂಡಿದ್ದಾರೆ.

ಆರಾಧ್ಯಗೆ ಏನು ಸಲಹೆ ನೀಡುತ್ತೀರಿ ಎಂದು ನವ್ಯಾಗೆ ಪ್ರಶ್ನೆ ಎದುರಾದಾಗ ಹೀಗೆ ಹೇಳಿದರು ನವ್ಯಾ. “ಆರಾಧ್ಯ ನನಗಿಂತ ಹೆಚ್ಚು ಬುದ್ಧಿವಂತಳು. ಇಂದಿನ ಮಕ್ಕಳು ಬಹಳ ಮುಂದಿದ್ದಾರೆ. ಅವಳ ವಯಸ್ಸಿನಲ್ಲಿ ನಾನು ಅಷ್ಟು ಬುದ್ಧಿವಂತನಾಗಿರಲಿಲ್ಲ. ಜಗತ್ತನ್ನು ಹಲವು ವಿಧಗಳಲ್ಲಿ ಬದಲಾಯಿಸಲು ಬಯಸುವ ಯುವತಿಯರ ಪೀಳಿಗೆಯನ್ನು ನಾವು ಈಗ ಹೊಂದಿದ್ದೇವೆ. ಅದು ನಾನು ಅವಳಲ್ಲಿಯೂ ನೋಡುತ್ತಿರುವ ಖುಷಿಯ ಸಂಗತಿ. ಅವಳಿಗೆ ನಾನು ಸಲಹೆ ಅಥವಾ ಸ್ಫೂರ್ತಿ ನೀಡುವುದಕ್ಕಿಂತ ಹೆಚ್ಚಾಗಿ, ಅವಳಿಂದ ನಾನು ಬಹಳಷ್ಟು ತಿಳಿದುಕೊಳ್ಳುತ್ತಿರುವೆ ಎಂದು ನಾನು ಭಾವಿಸುತ್ತೇನೆʼʼಎಂದರು.

ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ನಟಿ ಜಯಾ ಬಚ್ಚನ್ ಈ ಮುಂಚೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದಿದ್ದರು.

Continue Reading

ಕ್ರೈಂ

Raj Kundra: ಬಿಟ್‌ಕಾಯಿನ್‌ ಪೋಂಜಿ ಸ್ಕೀಮ್‌; ಇಡಿಯಿಂದ ರಾಜ್‌ ಕುಂದ್ರಾ ₹97 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Raj Kundra: ಸಿಂಗಾಪುರ (Singapore) ಮೂಲದ ಸಂಸ್ಥೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ನಡೆಸಿದ ₹6,600 ಕೋಟಿ ಬಿಟ್‌ಕಾಯಿನ್ (Bitcoin) ಆಧಾರಿತ ಪೋಂಜಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ರಾಜ್‌ ಕುಂದ್ರಾ ಅವರ ಕೈವಾಡವನ್ನು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

VISTARANEWS.COM


on

Raj Kundra Shilpa Shetty
Koo

ಮುಂಬಯಿ: ನಟಿ ಶಿಲ್ಪಾ ಶೆಟ್ಟಿ (Actress Shilpa Shetty) ಅವರ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಅವರ ₹97.79 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಸಿಂಗಾಪುರ (Singapore) ಮೂಲದ ಸಂಸ್ಥೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ನಡೆಸಿದ ₹6,600 ಕೋಟಿ ಬಿಟ್‌ಕಾಯಿನ್ (Bitcoin) ಆಧಾರಿತ ಪೋಂಜಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ರಾಜ್‌ ಕುಂದ್ರಾ ಅವರ ಕೈವಾಡವನ್ನು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಕುಂದ್ರಾ ಈ ಪ್ರಕರಣದ ಆದಾಯದ ಫಲಾನುಭವಿ ಎಂದು ಶಂಕಿಸಲಾಗಿದೆ.

ಲಗತ್ತಿಸಲಾದ ಆಸ್ತಿಗಳಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಜುಹುದಲ್ಲಿರುವ ವಸತಿ ಫ್ಲಾಟ್, ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ರಾಜ್ ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳು ಸೇರಿವೆ. ವೇರಿಯಬಲ್ ಟೆಕ್ ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ದೇಶಾದ್ಯಂತ ಮೋಸಗಾರಿಕೆಯ ಹೂಡಿಕೆದಾರ ಮೂಲಕ 80,000 ಬಿಟ್‌ಕಾಯಿನ್‌ಗಳನ್ನು ಸಂಗ್ರಹಿಸಿದೆ. ಮತ್ತು ವಿದೇಶದಲ್ಲಿ ಆಸ್ತಿಗಳನ್ನು ಖರೀದಿಸಲು ಒಂಬತ್ತು ಸಂಸ್ಥೆಗಳ ಮೂಲಕ ₹6,606 ಕೋಟಿ ಮೌಲ್ಯದ ಹಣವನ್ನು ಭಾರತದಿಂದ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಅಮೇಜ್ ಮೈನಿಂಗ್ ಮತ್ತು ಬ್ಲಾಕ್‌ಚೈನ್ ರಿಸರ್ಚ್ ಲಿಮಿಟೆಡ್ ಹಾಂಗ್‌ಕಾಂಗ್, ಗ್ರೀನ್‌ ಓಶನ್‌ ಓವರ್‌ಸೀಸ್‌ ಹಾಂಗ್‌ಕಾಂಗ್, ಬ್ಲೂ ವೇವ್ ಟ್ರೇಡಿಂಗ್ ಹಾಂಗ್‌ಕಾಂಗ್, AB ಮಾರ್ಕೆಟಿಂಗ್ ಕನ್ಸಲ್ಟೆನ್ಸಿ FZE ದುಬೈ, ಕ್ರಿಪ್ಟೋ ಕ್ಯಾಪಿಟಲ್ ಎಸ್ಟೋನಿಯಾ, ABC ಮೆಗಾ ಅಲೈಯನ್ಸ್ DMCC/ABC ಮೆಗಾಕಾರ್ಪ್ ದುಬೈ, ಎಬಿ ಹೋಲ್ಡಿಂಗ್ಸ್ ದುಬೈ, ಎಬಿ ಫೆಸಿಲಿಟೀಸ್ ದುಬೈ ಮತ್ತು ಪರ್ಪಲ್ ರೈನ್ ಟ್ರೇಡಿಂಗ್ ಕಂಪನಿ ದುಬೈಗಳು EDಯ ತನಿಖೆಯ ಅಡಿಯಲ್ಲಿರುವ ಸಂಸ್ಥೆಗಳಾಗಿವೆ.

ವೇರಿಯೇಬಲ್ ಟೆಕ್ ಮತ್ತು ಹಲವಾರು ಇತರ ಏಜೆಂಟ್‌ಗಳ ವಿರುದ್ಧ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ದಾಖಲಿಸಿದ ಬಹು ಪ್ರಕರಣಗಳ ಆಧಾರದ ಮೇಲೆ 2018ರಲ್ಲಿ ಇಡಿ ಸಂಸ್ಥೆಯು ಪೋಂಜಿ ಸ್ಕೀಮ್‌ ಕುರಿತ ತನಿಖೆಯನ್ನು ಪ್ರಾರಂಭಿಸಿತು. ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿ ನಿಖಿಲ್ ಮಹಾಜನ್ ಅವರನ್ನು ಏಜೆನ್ಸಿ ಬಂಧಿಸಿತ್ತು. ಹೂಡಿಕೆದಾರರನ್ನು ಆಕರ್ಷಿಸಲು ದುಬೈನಲ್ಲಿ ಸೆಮಿನಾರ್‌ಗಳನ್ನು ನಡೆಸುವ ಮೂಲಕ ಮಹಾಜನ್ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಮತ್ತು 40 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ದರಗಳ ಪ್ರಕಾರ, ಒಂದು ಬಿಟ್‌ಕಾಯಿನ್‌ಗೆ ಸುಮಾರು ₹51 ಲಕ್ಷ ದರವಿದೆ. Bitcoin ಕಾನೂನುಬದ್ಧ ಕರೆನ್ಸಿ ಅಲ್ಲ.

ಅಶ್ಲೀಲ ವೀಡಿಯೊಗಳನ್ನು ವಿತರಿಸಿದ ಆರೋಪದ ಮೇಲೂ ಬಂಧಿತರಾಗಿ ಜೈಲಿಗೆ ಹೋಗಿದ್ದ ರಾಜ್‌ ಕುಂದ್ರಾ ಅವರಿಗೆ 2022ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದರ ತನಿಖೆಯೂ ನಡೆಯುತ್ತಿದೆ.

ಇದನ್ನೂ ಓದಿ: Shilpa Shetty: ಜೈಲಿಗೆ ಹೋಗಿ ಬಂದ ಬಳಿಕವೂ ಪತಿ ರಾಜ್‌ ಕುಂದ್ರಾರನ್ನು ಹಾಡಿ ಹೊಗಳಿದ ಶಿಲ್ಪಾ ಶೆಟ್ಟಿ!

Continue Reading

ಬಾಲಿವುಡ್

Aamir Khan: ಕಾಂಗ್ರೆಸ್‌ಗೆ ಮತ ನೀಡಿ ಎಂದು ಆಮೀರ್ ಖಾನ್ ಮನವಿ ಮಾಡಿದರೆ? ಎಫ್‌ಐಆರ್‌ ಏಕೆ?

Aamir Khan: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಈ ವಿಡಿಯೊ ಎಡಿಟ್‌ ಮಾಡಲಾಗಿದೆ. 27-ಸೆಕೆಂಡ್ ವಿಡಿಯೊ ಕ್ಲಿಪ್‌ ತಯಾರಿಸಿಲಾಗಿದೆ. ಇದು ನಕಲಿ ವಿಡಿಯೊ ಎಂದು ವಕ್ತಾರರು ಹೇಳಿಕೆ ನೀಡಿದ್ದಾರೆ. ವಿಡಿಯೊ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ. ‘ವೋಟ್ ಫಾರ್ ನ್ಯಾಯ್, ವೋಟ್ ಫಾರ್ ಕಾಂಗ್ರೆಸ್’ ಎಂಬುದು ಇದೆ. ಡೀಪ್‌ಫೇಕ್ ವಿಡಿಯೊಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

VISTARANEWS.COM


on

Aamir Khan Deepfake video promoting a political party viral
Koo

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ ವಿಡಿಯೊವೊಂದು ಕೆಲವು (Aamir Khan promoting a political party viral) ದಿನಗಳಿಂದ ವೈರಲ್‌ ಆಗಿತ್ತು. ಇದೀಗ ಇದು ಡೀಪ್‌ಫೇಕ್‌ ವಿಡಿಯೊ ಎಂದು ತಿಳಿದು ಬಂದಿದೆ. ಡೀಪ್‌ಫೇಕ್ ವಿಡಿಯೊಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇತ್ತೀಚೆಗೆ ನಟನ ವಕ್ತಾರರು ಈ ವಿಡಿಯೊ ವಿರುದ್ಧ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಈ ವಿಡಿಯೊ ಎಡಿಟ್‌ ಮಾಡಲಾಗಿದೆ. 27-ಸೆಕೆಂಡ್ ವಿಡಿಯೊ ಕ್ಲಿಪ್‌ ತಯಾರಿಸಿಲಾಗಿದೆ. ಇದು ನಕಲಿ ವಿಡಿಯೊ ಎಂದು ವಕ್ತಾರರು ಹೇಳಿಕೆ ನೀಡಿದ್ದಾರೆ. ವಿಡಿಯೊ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ. ‘ವೋಟ್ ಫಾರ್ ನ್ಯಾಯ್, ವೋಟ್ ಫಾರ್ ಕಾಂಗ್ರೆಸ್’ ಎಂಬುದು ಇದೆ.

ಇದೀಗ ಆಮೀರ್‌ ಅವರ ಅವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ʻʻಆಮೀರ್‌ ಖಾನ್‌ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ. ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಆಮೀರ್‌ ಒಂದು ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ವಿಡಿಯೊ ವೈರಲ್‌ ಆಗುತ್ತಿದೆ. ಅದು ಸುಳ್ಳು. ನಕಲಿ ವಿಡಿಯೊʼʼಎಂದು ಹೇಳಿದ್ದಾರೆ.

ಇದನ್ನೂ ಓದಿ: Aamir Khan Birthday: ಆಮೀರ್ ಖಾನ್‌ ಜನುಮದಿನ: ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಬೆಸ್ಟ್‌ ಸಿನಿಮಾಗಳಿವು!

ಈಗ ಆಮಿರ್ ಖಾನ್​ ಅವರು ‘ಸಿತಾರೆ ಜಮೀನ್​ ಪರ್​’ (Sitaare Zameen Par) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಆಮೀರ್ ಖಾನ್ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರೆ ಜಮೀನ್ ಪರ್’ ಚಿತ್ರದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ನಟ ಮಾಹಿತಿ ಹಂಚಿಕೊಳ್ಳಲಿದ್ದಾರೆ.. ಜತೆಗೆ ಈ ಚಿತ್ರದಲ್ಲಿ ಆಮೀರ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಮೀರ್‌ ಅವರು ‘ಅತೀ ಸುಂದರ್’ (‘Aati Sundar’) ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಇದು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.

Continue Reading
Advertisement
Moral policing
ಪ್ರಮುಖ ಸುದ್ದಿ17 mins ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ37 mins ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ40 mins ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ1 hour ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ1 hour ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ2 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Man death in tiger attack in Nittur village
ಕೊಡಗು2 hours ago

Wild Animals Attack: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು

Surapura Assembly Constituency By election BJP candidate Raju Gowda filed nomination
ಯಾದಗಿರಿ2 hours ago

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಕೆ

Preity Zinta
ಕ್ರೀಡೆ2 hours ago

Preity Zinta : ರೋಹಿತ್​ ಶರ್ಮಾಗಾಗಿ ಪ್ರಾಣ ಪಣಕ್ಕಿಡಲು ಸಿದ್ಧ; ಪ್ರೀತಿ ಜಿಂಟಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್​

Lok Sabha Election 2024 Malikayya Guttedar Joining Congress April 19
Lok Sabha Election 20242 hours ago

Lok Sabha Election 2024: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಗುಡ್‌ ಬೈ; ನಾಳೆ ಕಾಂಗ್ರೆಸ್‌ ಸೇರ್ಪಡೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌