Pathaan Film | ಶಾರುಖ್‌ ಖಾನ್‌ ಜನುಮದಿನಕ್ಕೆ ʻಪಠಾಣ್‌ʼಸಿನಿಮಾ ಟೀಸರ್‌ ಔಟ್‌: ರಗಡ್‌ ಲುಕ್‌ ಅಂದ್ರು ಫ್ಯಾನ್ಸ್‌! - Vistara News

ಬಾಲಿವುಡ್

Pathaan Film | ಶಾರುಖ್‌ ಖಾನ್‌ ಜನುಮದಿನಕ್ಕೆ ʻಪಠಾಣ್‌ʼಸಿನಿಮಾ ಟೀಸರ್‌ ಔಟ್‌: ರಗಡ್‌ ಲುಕ್‌ ಅಂದ್ರು ಫ್ಯಾನ್ಸ್‌!

ಶಾರುಖ್‌ ಖಾನ್‌ ಅವರ ಜನುಮದಿನ (Pathaan Film) ಪ್ರಯುಕ್ತ ಟೀಸರ್‌ ಹಂಚಿಕೊಂಡಿದೆ. ರಗಡ್‌ ಲುಕ್‌ನಲ್ಲಿ ಶಾರುಖ್‌ ಖಾನ್‌ ಕಾಣಿಸಿಕೊಂಡಿದ್ದು, ಚಿತ್ರದ ಟೀಸರ್‌ ಝಲಕ್‌ ರೋಮಾಂಚನಕಾರಿಯಾಗಿದೆ.

VISTARANEWS.COM


on

Pathaan Film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್‌ʼ ಸಿನಿಮಾ (Pathaan Film) ಶಾರುಖ್‌ ಖಾನ್‌ ಅವರ ಜನುಮದಿನ ಪ್ರಯುಕ್ತ ಟೀಸರ್‌ ಹಂಚಿಕೊಂಡಿದೆ. ರಗಡ್‌ ಲುಕ್‌ನಲ್ಲಿ ಶಾರುಖ್‌ ಖಾನ್‌ ಕಾಣಿಸಿಕೊಂಡಿದ್ದು, ಚಿತ್ರದ ಟೀಸರ್‌ ಝಲಕ್‌ ರೋಮಾಂಚನಕಾರಿಯಾಗಿದೆ. 2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ಶಾರುಖ್‌ ಇದೇ ಮೊದಲ ಬಾರಿಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಶಾರುಖ್‌ ಖಾನ್‌ ಅವರು ಚಿತ್ರದ ಟೀಸರ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದರು. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ ಬಿಡುಗಡೆ ಆದ ಕೆಲವೇ ಗಂಟೆಯಲ್ಲಿ ಮಿಲಿಯನ್‌ ವೀಕ್ಷಣೆ ಕಂಡಿದೆ. ಜಾನ್ ಅಬ್ರಾಹಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗುತ್ತಿರುವುದಾಗಿ ಚಿತ್ರತಂಡ ಹಂಚಿಕೊಂಡಿದೆ.

ಇದನ್ನೂ ಓದಿ | Modi Birthday | ಒಂದು ದಿನವಾದರೂ ರಜೆ ತೆಗೆದುಕೊಳ್ಳಿ ಎಂಬ ಸಲಹೆ ಜತೆ ಮೋದಿಗೆ ಶುಭ ಕೋರಿದ ಶಾರುಖ್‌ ಖಾನ್‌

ಈ ಮುಂಚೆ ದೀಪಿಕಾ ಲುಕ್‌ ಚಿತ್ರತಂಡ ರಿವೀಲ್‌ ಮಾಡಿತ್ತು. ಪೋಸ್ಟರ್‌ ನೋಡುವಾಗ ಗನ್‌ ಹಿಡಿದು ಗುರಿಯಿಟ್ಟು ಹೊಡೆಯುವಂತೆ ಖಡಕ್‌ ಲುಕ್‌ನಲ್ಲಿ ಮಿಂಚಿದ್ದಾರೆ ಡಿಂಪಲ್‌ ಸುಂದರಿ. ಕಮೆಂಟ್‌ನಲ್ಲಿ ದೀಪಿಕಾ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದರು. ಶಾರುಖ್ ಖಾನ್ ಅವರು ದೀಪಿಕಾ ಮೋಷನ್ ಪೋಸ್ಟರ್‌ಅನ್ನು ಹಂಚಿಕೊಂಡು “ನಿನ್ನನ್ನು ಕೊಲ್ಲಲು ಆಕೆಗೆ ಬುಲೆಟ್ ಅಗತ್ಯವಿಲ್ಲ” ಎಂದು ಬರೆದುಕೊಂಡಿದ್ದರು.

2013ರಲ್ಲಿ ನಟ ಶಾರುಖ್‌ ಹಾಗೂ ನಟಿ ದೀಪಿಕಾ ಪಡುಕೋಣೆ ʻಚೆನ್ನೈ ಎಕ್ಸ್‌ಪ್ರೆಸ್‌ʼನಲ್ಲಿ ನಟಿಸಿ ದೊಡ್ಡ ಹಿಟ್‌ ಚಿತ್ರವನ್ನು ನೀಡಿದ್ದರು. ಇಬ್ಬರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಯಶ್‌ ರಾಜ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ʻಪಠಾಣ್‌ʼ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಶಾರುಖ್‌ ಖಾನ್‌ ಸಿಕ್ಸ್‌ ಪ್ಯಾಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Pathaan Film | ದೀಪಿಕಾಗೆ ಕೊಲ್ಲೋಕೆ ಬುಲೆಟ್‌ ಬೇಕಿಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Madhuri Dixit: ಮಾಧುರಿ ದೀಕ್ಷಿತ್‌ಗೆ ಇಂದು ಜನುಮದಿನ ಸಂಭ್ರಮ; ಅವರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

Madhuri Dixit: ದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್‌ʼನಲ್ಲಿನ ಅವರ ಅಭಿನಯಕ್ಕೆ ಮನಸೋತದವರೇ ಇಲ್ಲ. ಮಾಧುರಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮನರಂಜನಾ ಉದ್ಯಮಕ್ಕೆ ಅವರ ಕೊಡುಗೆಗಳು ಅಪಾರ. ಅವರ ನಟನೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. 

VISTARANEWS.COM


on

Madhuri Dixit birthday extend wishes
Koo

ಬೆಂಗಳೂರು: ಇಂದು ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರಿಗೆ 57ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಪತಿ ಡಾ ಶ್ರೀರಾಮ್ ನೆನೆ, ನಟಿ ಕಾಜೋಲ್ ಮತ್ತು ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಕುಂದರ್ ಸೇರಿದಂತೆ ಅನೇಕ ಸಿನಿ ಗಣ್ಯರು ಹಾಗೂ ಅಭಿಮಾನಿಗಳು ಸೋಷಿಯಲ್‌ ಮೀಡಿಯಾ ಮೂಲಕ ವಿಶ್‌ ಮಾಡಿದ್ದಾರೆ.

ಡಾ ಶ್ರೀರಾಮ್ ನೆನೆ ಅವರು ಪತ್ನಿ ಮಾಧುರಿ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಹ್ಯಾಪಿ ಬರ್ತ್‌ಡೇ ಲವ್’ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ. ʻʻಪದಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿ ನೀವು ನಮ್ಮ ಜೀವನವನ್ನು ಬೆಳಗಿಸುತ್ತಿದ್ದೀರಿʼʼಎಂದು ಶ್ರೀರಾಮ್ ನೆನೆ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಮಾಧುರಿಯೊಂದಿಗೆ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿರುವ ಕಾಜೋಲ್, ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ʻʻಡ್ಯಾನ್ಸಿಂಗ್ ಕ್ವೀನ್‌ಗೆ ಜನ್ಮದಿನದ ಶುಭಾಶಯಗಳುʼʼಎಂದು ಕಾಜೋಲ್‌ ಟ್ವೀಟ್‌ ಮಾಡಿದ್ದಾರೆ.

ಫರಾ ಖಾನ್ ಕುಂದರ್ ಮಾಧುರಿ ಮತ್ತು ಅವರ ಪತಿಯೊಂದಿಗೆ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಜನ್ಮದಿನದ ಶುಭಾಶಯಗಳು ಪ್ರಿಯ ಮಾಧುರಿʼʼಎಂದು ಬರೆದುಕೊಂಡಿದ್ದಾರೆ.

ದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್‌ʼನಲ್ಲಿನ ಅವರ ಅಭಿನಯಕ್ಕೆ ಮನಸೋತದವರೇ ಇಲ್ಲ. ಮಾಧುರಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮನರಂಜನಾ ಉದ್ಯಮಕ್ಕೆ ಅವರ ಕೊಡುಗೆಗಳು ಅಪಾರ. ಅವರ ನಟನೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. 

ಇದನ್ನೂ ಓದಿ: Madhuri Dixit: ಲೈಂಗಿಕ ಕಿರುಕುಳ ದೃಶ್ಯದಲ್ಲಿ ನಟಿಸಲಾರೆ ಎಂದು ಗೋಳೋ ಎಂದು ಅತ್ತಿದ್ದ ಮಾಧುರಿ ದೀಕ್ಷಿತ್!

ಮಾಧುರಿ ದೀಕ್ಷಿತ್‌ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ:

  1. – ಮಾಧುರಿ ದೀಕ್ಷಿತ್‌ ಅವರ ಮೂಲ ಹೆಸರು ಮಾಧುರಿ ಶಂಕರ್ ದೀಕ್ಷಿತ್.
  2. – ಮರಾಠ ಕುಟುಂಬದಲ್ಲಿ ಜನಿಸಿದರು.
  3. – ಮಾಧುರಿ ಅವರ ತಂದೆ ಶಂಕರ್ ದೀಕ್ಷಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
  4. – ತಾಯಿ ಸ್ನೇಹಲತಾ ದೀಕ್ಷಿತ್ ಗೃಹಿಣಿಯಾಗಿದ್ದರು. ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದಾರೆ.
  5. – ಮಾಧುರಿ ದೀಕ್ಷಿತ್‌ ಅವರಿಗೆ ಇಬ್ಬರು ಅಕ್ಕಂದಿರು. ರೂಪಾ ಮತ್ತು ಭಾರತಿ.. ಒಬ್ಬ ಕಿರಿಯ ಸಹೋದರ ಅಜಿತ್ ಇದ್ದಾರೆ.
  6. – ಅವರು ಮುಂಬೈನ ಡಿವೈನ್ ಚೈಲ್ಡ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಅವರು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮೈಕ್ರೊಬಯಾಲಜಿ ಶಿಕ್ಷಣವನ್ನು ಪಡೆದರು.
  7. – ನಟನೆ ವೃತ್ತಿಗೆ ಹೋಗಲು ನಿರ್ಧರಿಸುವ ಮೊದಲು ಮೈಕ್ರೋಬಯಾಲಜಿಸ್ಟ್ ಆಗಲು ಮಾಧುರಿ ಬಯಸಿದ್ದರು.
  8. – ತಮ್ಮ ಮೂರನೇಯ ವಯಸ್ಸಿನಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರವಾದ ಕಥಕ್ ಕಲಿಯಲು ಪ್ರಾರಂಭಿಸಿದರು. ಬಳಿಕ ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಅವರ ಬಳಿ ತರಬೇತಿ ಪಡೆದರು.
  9. – 1984ರಲ್ಲಿ ʻಅಬೋಧ್ʼ (Abodh) ಸಿನಿಮಾ ಮೂಲಕ ನಟನೆಯನ್ನು ಪ್ರಾರಂಭಿಸಿದರು.
  10. – 1988ರ ʻತೇಜಾಬ್ʼ (Tezaab) ಚಲನಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರ ಪಾತ್ರ ಕಮರ್ಷಿಯಲ್‌ ಆಗಿ ಮತ್ತು ವಿಮರ್ಶಾತ್ಮಕವಾಗಿ ಭಾರಿ ಯಶಸ್ಸನ್ನು ಕಂಡಿತು.
  11. – 1992ರ ʻಬೇಟಾʼ ಚಲನಚಿತ್ರದ `ಧಕ್ ಧಕ್ ಕರ್ನೆ ಲಗಾ’ (Dhak Dhak Karne Laga) ಹಾಡಿನ ಯಶಸ್ಸಿನ ನಂತರ ‘ಧಕ್ ಧಕ್’ ಹುಡುಗಿ ಎಂದು ಅಭಿಮಾನಿಗಳು ಕರೆಯಲಾರಂಭಿಸಿದರು.
  12. – ಮಾಧುರಿ ದೀಕ್ಷಿತ್ ಅತ್ಯುತ್ತಮ ನಟನೆಗಾಗಿ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  13. – ತಮ್ಮ ನಟನೆ, ನೃತ್ಯ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
  14. – ಮಾಧುರಿ ದೀಕ್ಷಿತ್ ಅವರು ಹಮ್ ಆಪ್ಕೆ ಹೈ ಕೌನ್! (Hum Aapke Hain Koun), ದಿಲ್ ತೋ ಪಾಗಲ್ ಹೈ (Dil To Pagal Hai), ಮತ್ತು ದೇವದಾಸ್ (Devdas)ನಂತಹ ಚಲನಚಿತ್ರಗಳಲ್ಲಿ ತಮ್ಮ ವಿಶೇಷ ಡ್ಯಾನ್ಸ್‌ ಮತ್ತು ಅಭಿನಯದಿಂದಾಗಿ ಹೆಸರುವಾಸಿಯಾಗಿದ್ದಾರೆ.
  15. – ರಿಯಾಲಿಟಿ ಡ್ಯಾನ್ಸ್ ಶೋ ʻಜಲಕ್ ದಿಖ್ಲಾ ಜಾʼ(Jhalak Dikhhla Jaa)ದ ಹಲವಾರು ಸೀಸನ್‌ಗಳಲ್ಲಿ ಅವರು ತೀರ್ಪುಗಾರರಾಗಿದ್ದರು.
  16. – ಮಾಧುರಿ ದೀಕ್ಷಿತ್ ಕ್ಲಾಸಿಕಲ್‌ ಸಿಂಗರ್‌ ಆಗಿದ್ದು, ಅವರ ಹಲವಾರು ಚಲನಚಿತ್ರಗಳಲ್ಲಿ ಹಾಡಿದ್ದಾರೆ.
  17. – ನಟಿ ವರ್ಣಚಿತ್ರಕಾರರಾಗಿದ್ದಾರೆ ಮತ್ತು ಹಲವಾರು ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
  18. – ಮಾಧುರಿ ದೀಕ್ಷಿತ್ 1999ರಲ್ಲಿ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹವಾದರು.
  19. – ದಂಪತಿಗೆ ಅರಿನ್ ಮತ್ತು ರಿಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
  20. – ಮಾಧುರಿ ದೀಕ್ಷಿತ್ ತಮ್ಮ ಮದುವೆಯ ನಂತರ ನಟನೆಯಿಂದ ದೂರ ಉಳಿದು ತಮ್ಮ ಪತಿಯೊಂದಿಗೆ ಅಮೆರಿಕಾಕ್ಕೆ ತೆರಳಿದರು.
  21. – 2011ರಲ್ಲಿ ಭಾರತಕ್ಕೆ ಮರಳಿದರು. ಮತ್ತೆ ನಟನಾ ವೃತ್ತಿಯನ್ನು ಪುನರಾರಂಭಿಸಿದರು.
  22. – ಅವರು ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಾರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.
  23. – ಮಾಧುರಿ ದೀಕ್ಷಿತ್ ಅವರು ಕೋಕಾ-ಕೋಲಾ, ಮ್ಯಾಗಿ ಮತ್ತು ಓಲೆ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.
  24. – ಹಲವಾರು ವಿಡಿಯೊ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.
  25. – ಮಾಧುರಿಯವರ ಚಿತ್ರ ʻಕೊಯ್ಲಾʼ ಚಿತ್ರೀಕರಣಗೊಂಡ ಅರುಣಾಚಲ ಪ್ರದೇಶದ ಸಂಗೆಸ್ಟಾರ್ ಸರೋವರವು ಅವರ ಹೆಸರಿನಿಂದ ಜನಪ್ರಿಯವಾಗಿದೆ.
  1. – ಅಂಜಾಂ ಚಿತ್ರದಲ್ಲಿ ಸೇಡು ತೀರಿಸಿಕೊಳ್ಳುವ ವಿಧವೆಯ ಪಾತ್ರ ಸೇರಿದಂತೆ ಅನೇಕ ಚಾಲೆಂಜಿಂಗ್‌ ಪಾತ್ರಗಳನ್ನು ಅವರು ನಿಭಾಯಿಸಿದ್ದಾರೆ.
  2. – ಮಾಧುರಿ ದೀಕ್ಷಿತ್ ಅವರು 2008ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
  3. – ಟೈಮ್, ನ್ಯೂಸ್‌ವೀಕ್ ಮತ್ತು ಪೀಪಲ್ ಸೇರಿದಂತೆ ಹಲವಾರು ನಿಯತಕಾಲಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿದ್ದಾರೆ.
  4. – ಮಾಧುರಿ ದೀಕ್ಷಿತ್ ತಮ್ಮ ಸ್ಟೈಲ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.
  5. – ಈ ನಟಿ ಕೆಲವು ಸಮಯದ ಹಿಂದೆ ʻದಿ ಫಿಲ್ಮ್ ಸ್ಟಾರ್ʼ ಎಂಬ ಶೀರ್ಷಿಕೆಯ ತಮ್ಮ ಚೊಚ್ಚಲ ಸಂಗೀತ ಆಲ್ಬಂ ಘೋಷಿಸಿದ್ದರು.
  6. – ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ಮತ್ತು ಸಂಜಯ್ ದತ್ ಸೇರಿದಂತೆ ಬಾಲಿವುಡ್‌ನ ಕೆಲವು ಪ್ರಸಿದ್ಧ ನಟರೊಂದಿಗೆ ಮಾಧುರಿ ತೆರೆ ಹಂಚಿಕೊಂಡಿದ್ದಾರೆ.
  7. – ಯಶ್ ಚೋಪ್ರಾ ಮತ್ತು ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಬಾಲಿವುಡ್‌ನ ಕೆಲವು ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
  8. – ʻದಿಲ್ ತೋ ಪಾಗಲ್ ಹೈʼ ಮತ್ತು ʻದೇವದಾಸ್ʼ ಚಿತ್ರಗಳಲ್ಲಿನ ಮಾಧುರಿಯ ಅಭಿನಯವನ್ನು ಅವರ ವೃತ್ತಿಜೀವನದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
  9. – 2007ರಲ್ಲಿ, ʻಆಜಾ ನಾಚ್ಲೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಿದರು.
  10. – ಮಾಧುರಿ ದೀಕ್ಷಿತ್ ಅವರು ʻಏಕ್ ದೋ ತೀನ್ʼ, ʻಚೋಲಿ ಕೆ ಪೀಚೆʼ, ʻಧಕ್ ಧಕ್ ಕರ್ನೆ ಲಗಾ;, ಮತ್ತುʻಕೇ ಸೆರಾ ಸೆರಾʼ ಮುಂತಾದ ಹಾಡುಗಳಲ್ಲಿ ತಮ್ಮ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
  11. – ಮಾಧುರಿ ಒಟ್ಟು 14 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನಟಿ 80ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
  12. – ಜನಪರ ಕಾರ್ಯಗಳು ಸೇರದಂತೆ ಹಲವಾರು ಚಾರಿಟೇಬಲ್‌ ಸಂಸ್ಥೆಗಳೊಂದಿಗೆ ನಂಟು ಹೊಂದಿದ್ದಾರೆ.
  13. – ಅವರು ಭಾರತದಲ್ಲಿ ಹೆಣ್ಣು ಮಕ್ಕಳ ಕಲ್ಯಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ʻಬೇಟಿ ಬಚಾವೋ ಬೇಟಿ ಪಢಾವೋʼ ಅಭಿಯಾನದ ರಾಯಭಾರಿಯೂ ಹೌದು.
  14. – ʻಡ್ಯಾನ್ಸ್ ವಿತ್ ಮಾಧುರಿʼ ಎಂಬ ತಮ್ಮದೇ ಆದ ನೃತ್ಯ ಸಿರೀಸ್‌ ಹೊಂದಿದ್ದಾರೆ.
  15. – ರಣಬೀರ್ ಕಪೂರ್ ಅವರ ʻಯೇ ಜವಾನಿ ಹೈ ದೀವಾನಿʼಯಲ್ಲಿ ಮಾಧುರಿ ಅತಿಥಿ ಪಾತ್ರವನ್ನು ಹೊಂದಿದ್ದರು.
  16. – ತೇಜಾಬ್, ಬೇಟಾ, ಮತ್ತು ರಾಮ್ ಲಖನ್‌ನಂತಹ ಚಿತ್ರಗಳಲ್ಲಿ ಅನಿಲ್ ಕಪೂರ್ ಜತೆ ತೆರೆ ಹಂಚಿಕೊಂಡಿದ್ದರು. ಈ ಜೋಡಿ 90ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.
  17. – ದೇವದಾಸ್‌ ಸಿನಿಮಾದಲ್ಲಿ 30 ಕೆಜಿ ತೂಕದ ಡ್ರೆಸ್‌ ಧರಿಸಿದ್ದರು ಮಾಧುರಿ. ಚಿತ್ರೀಕರಣದ ಸಮಯದಲ್ಲಿ ಡಿಸೈನರ್ ನೀತಾ ಲುಲ್ಲಾ ಮಾಧುರಿಗಾಗಿ ಕಾಸ್ಟ್ಯೂಮ್ ಮಾಡಿ ವಿನ್ಯಾಸಗೊಳಿಸಿದರು. ನಟಿ ಈ ಸವಾಲನ್ನು ಸಲೀಸಾಗಿ ನಿಭಾಯಿಸಿದ್ದರು.
  18. – ಮಾಧುರಿ ಅವರು ಮಿಥುನ್ ಚಕ್ರವರ್ತಿ, ಆದಿತ್ಯ ಪಾಂಚೋಲಿ, ಸದಾಶಿವ್ ಅಮ್ರಾಪುರ್ಕರ್, ಶಕ್ತಿ ಕಪೂರ್ ಮತ್ತು ಪರೇಶ್ ರಾವಲ್ ಅವರೊಂದಿಗೆ ಮಹಾ ಪಾಪ (1990) ಎಂಬ ಶೀರ್ಷಿಕೆಯ ಚಲನಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ತೆರೆಗೆ ಬರಲೇ ಇಲ್ಲ.
  19. ​​- ವಿಜಯ್ ಆನಂದ್ ನಿರ್ದೇಶನದ ʻಜನ ನಾ ದಿಲ್ ಸೆ ದೂರ್ʼ ಚಿತ್ರಕ್ಕೆ ಮಾಧುರಿ ಸಹಿ ಹಾಕಿದ್ದರು, ಇದರಲ್ಲಿ ದೇವ್ ಆನಂದ್ ಮತ್ತು ಇಂದರ್ ಕುಮಾರ್ ಸಹ-ನಟರಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಶೂಟಿಂಗ್ ಪ್ರಾರಂಭವಾಗುವ ಮೊದಲು ಅವರು ಯೋಜನೆಯನ್ನು ತೊರೆಯಲು ನಿರ್ಧರಿಸಿದರು.
  20. – ಮಾಧುರಿ 1984 ಮತ್ತು 1988ರ ನಡುವೆ ಸಿನಿಮಾದಲ್ಲಿ ಸತತ ಒಂಬತ್ತು ಸೋಲುಗಳನ್ನು ಕಂಡರು.
  21. – ಅವರು ತಮ್ಮದೇ ಆದ ಆನ್‌ಲೈನ್ ನೃತ್ಯ ಅಕಾಡೆಮಿಯನ್ನು ಹೊಂದಿದ್ದಾರೆ. ಬಳಕೆದಾರರು ತಮ್ಮ ನೃತ್ಯ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು, ವಿವಿಧ ನೃತ್ಯ ಶೈಲಿಗಳನ್ನು ಕಲಿಯಲು ಮತ್ತು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಲು ಈ ಅಕಾಡೆಮಿ ಸಹಾಯ ಮಾಡುತ್ತದೆ.
  22. – 2014ರಲ್ಲಿ, ಮಕ್ಕಳ ಮತ್ತು ಸಮಾನ ಮಹಿಳಾ ಹಕ್ಕುಗಳ (Child and Equal Women’s Rights) ರಾಯಭಾರಿಯಾಗಿ ನೇಮಕಗೊಂಡರು.
  23. – 1990ರ ದಶಕದಲ್ಲಿ, ಮಾಧುರಿ ಅವರು ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ನಟಿ ಎಂಬ ಹೆಗ್ಗಳಿಕೆಯನ್ನು ಪಡೆದರು. ʻಹಮ್ ಆಪ್ಕೆ ಹೈ ಕೌನ್ʼ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ 2.7 ಕೋಟಿ ರೂ. ಗಳಿಸಿದ್ದಾರೆ. ಇದು ಸಹನಟ ಸಲ್ಮಾನ್ ಖಾನ್ ಅವರಿಗಿಂತ ಪಡೆದ ಸಂಭಾವನೆಗಿಂತ ಅಧಿಕವಾಗಿತ್ತು!
  24. – ಮಾಧುರಿಯನ್ನು ಅಪಾರವಾಗಿ ಮೆಚ್ಚಿದ ಜೆಮ್‌ಶೆಡ್‌ಪುರದ ಅಭಿಮಾನಿಯೊಬ್ಬರು, ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ಸರ್ಕಾರಕ್ಕೆ ವಿನಂತಿ ಮಾಡಿದ್ದರು.
  25. – ಹೆಸರಾಂತ ಕಲಾವಿದ ದಿವಂಗತ ಎಂಎಫ್ ಹುಸೇನ್ ಮಾಧುರಿ ಅವರ ನಟನೆಗೆ ಮನಸೋತುʻ ಹಮ್ ಆಪ್ಕೆ ಹೈ ಕೌನ್ʼ ಸಿನಿಮಾವನ್ನು 67 ಬಾರಿ ವೀಕ್ಷಿಸಿದ್ದರು. ಅವರಿಗೆ ಈ ನಟಿಯೇ ಸ್ಫೂರ್ತಿಯಾಗಿದ್ದರು. ಈ ಮೂಲಕ ಮಾಧುರಿ ಮತ್ತು ಶಾರುಖ್ ಖಾನ್ ಅವರನ್ನು ಒಳಗೊಂಡ ಗಜ ಗಾಮಿನಿ (2000) ಎಂಬ ಚಲನಚಿತ್ರವನ್ನು ಹುಸೇನ್‌ ನಿರ್ಮಿಸಲು ಕಾರಣವಾಯಿತು.
  26. – ಮಾಧುರಿ ʻದಿ ಫೇಮ್ ಗೇಮ್‌ʼ (The Fame Game)ನೊಂದಿಗೆ OTT ಪದಾರ್ಪಣೆ ಮಾಡಿದರು. ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ OTT ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು.
  27. – ಕಥಕ್ ನರ್ತಕಿಯಾಗಿರುವ ಮಾಧುರಿ, ಕಥಕ್ ಮಾಂತ್ರಿಕ ಪಂಡಿತ್ ಬಿರ್ಜು ಮಹಾರಾಜ್ ಅವರಿಂದ ನೃತ್ಯ ಸಂಯೋಜನೆಯನ್ನು ಪಡೆದ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  28. – ಮಾಧುರಿ ಕೊನೆಯದಾಗಿ ಅಮೆಜಾನ್ ಪ್ರೈಮ್ OTT ಸಿರೀಸ್‌ ʻಮಜಾ ಮಾʼ (Maja Maa)ದಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
Continue Reading

ಬಾಲಿವುಡ್

Rakhi Sawant: ಆಸ್ಪತ್ರೆಗೆ ದಾಖಲಾದ ನಟಿ ರಾಖಿ ಸಾವಂತ್‌

Rakhi Sawant: ಇದಕ್ಕೂ ಮುಂಚೆ ರಾಖಿ ಅವರು ಕೆಂಪು ಟವೆಲ್ ಧರಿಸಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿ ಮಾಡಿದರು. ಪಾಪರಾಜಿಗಳೊಂದಿಗೆ ತಮಾಷೆಯ ವಿಡಿಯೊಗಳು ಬಹಳಷ್ಟು ಸದ್ದು ಮಾಡಿತ್ತು. ಸದಾ ತಮ್ಮ ವಿಭಿನ್ನ ಉಡುಗೆ ಮತ್ತು ಲುಕ್‌ಗಳಿಗೆ ಹೆಸರುವಾಸಿಯಾಗಿರುವ ರಾಖಿ ಸಾವಂತ್ ಇತ್ತೀಚೆಗೆ ಈವೆಂಟ್‌ನಲ್ಲಿ ವಿಶಿಷ್ಟವಾದ ‘ಟವೆಲ್’ ಉಡುಪನ್ನು ಧರಿಸಿ ಅಭಿಮಾನಿಗಳನ್ನು ಬೆರಗುಗೊಳಿಸಿದರು. ಟವೆಲ್‌ ಧರಿಸಿ ರೆಡ್ ಕಾರ್ಪೆಟ್‌ನಲ್ಲಿ ನಡೆಯುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿತ್ತು.

VISTARANEWS.COM


on

Rakhi Sawant Rushed to Hospital After Heart-Related Ailment
Koo

ಬೆಂಗಳೂರು: ನಟಿ ರಾಖಿ ಸಾವಂತ್‌ (Rakhi Sawant) ಆಸ್ಪತ್ರೆಗೆ ದಾಖಲಾಗಿರುವ ಫೋಟೊ ವೈರಲ್‌ ಆಗುತ್ತಿದೆ. ವರದಿಗಳ ಪ್ರಕಾರ, ರಾಖಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇದೀಗ ನಟಿಯ ಫ್ಯಾನ್ಸ್‌ ʻಬೇಗ ಚೇತರಿಸಿಕೊಳ್ಳಿʼ ಎಂದು (Rakhi Sawant Heart-Related Ailment) ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ವರದಿಗಳ ಪ್ರಕಾರ ರಾಖಿ ಸಾವಂತ್ ಅವರು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ರಾಖಿ ಸಾವಂತ್ ಪಾಪರಾಜಿವೊಬ್ಬರಿಗೆ ಸಂದೇಶ ಕಳಿಸಿದ್ದಾರಂತೆ. ಮಾಜಿ ಪತಿ ರಿತೇಶ್ ಅವರು ಶೀಘ್ರದಲ್ಲೇ ಅವರ ಆರೋಗ್ಯದ ಬಗ್ಗೆ ತಿಳಿಸುವುದಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮುಂಚೆ ರಾಖಿ ಅವರು ಕೆಂಪು ಟವೆಲ್ ಧರಿಸಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿ ಮಾಡಿದರು. ಪಾಪರಾಜಿಗಳೊಂದಿಗೆ ತಮಾಷೆಯ ವಿಡಿಯೊಗಳು ಬಹಳಷ್ಟು ಸದ್ದು ಮಾಡಿತ್ತು. ಸದಾ ತಮ್ಮ ವಿಭಿನ್ನ ಉಡುಗೆ ಮತ್ತು ಲುಕ್‌ಗಳಿಗೆ ಹೆಸರುವಾಸಿಯಾಗಿರುವ ರಾಖಿ ಸಾವಂತ್ ಇತ್ತೀಚೆಗೆ ಈವೆಂಟ್‌ನಲ್ಲಿ ವಿಶಿಷ್ಟವಾದ ‘ಟವೆಲ್’ ಉಡುಪನ್ನು ಧರಿಸಿ ಅಭಿಮಾನಿಗಳನ್ನು ಬೆರಗುಗೊಳಿಸಿದರು. ಟವೆಲ್‌ ಧರಿಸಿ ರೆಡ್ ಕಾರ್ಪೆಟ್‌ನಲ್ಲಿ ನಡೆಯುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿತ್ತು.

ಇದನ್ನೂ ಓದಿ: Rakhi Sawant: ವೈಮನಸ್ಸು ಬಿಟ್ಟು ಮಾಜಿ ಪತಿ ಜೊತೆ ಒಂದಾದ್ರಾ ರಾಖಿ ಸಾವಂತ್‌?

ಆದಿಲ್‌ ಖಾನ್‌ ದುರಾನಿ(Adil Khan Durrani) ಜೊತೆ ವೈವಾಹಿಕ ಸಂಬಂಧ ಕಳೆದುಕೊಂಡ ಬಳಿಕ ಇದೀಗ ನಟಿ ರಾಖಿ ಸಾವಂತ್‌ ತಮ್ಮ ಮಾಜಿ ಪತಿ ರಿತೇಶ್‌(Rithesh) ಜತೆ ಮತ್ತೆ ಕಾಣಿಸಿಕೊಂಡಿದ್ದರು. ಆದಿಲ್‌ ಕೂಡ ರಾಖಿ ಸಾವಂತ್‌ ಜೊತೆಗಿನ ನಿರಂತರ ಕಾನೂನು ಹೋರಾಟದ ಬಳಿಕ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಸುಪ್ರೀಂ ಕೋರ್ಟ್‌(Supreme Court) ರಾಖಿಯ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದ್ದು, ನಾಲ್ಕು ವಾರಗಳಲ್ಲಿ ಕೋರ್ಟ್‌ ಮುಂದೆ ಶರಣಾಗುವಂತೆ ಆದೇಶಿದೆ. ಇದರ ಅರ್ಥ ಏನೆಂದರೆ ಮೊದಲು ಆಕೆ ಜೈಲಿಗೆ ಹೋಗಲೇಬೇಕು. ಆಮೇಲಷ್ಟೇ ಜಾಮೀನು ಪಡೆಯಬಹುದು ಎಂದು ಹೇಳಿದ್ದರು. ಇದರಿಂದ ರೊಚ್ಚಿಗೆದ್ದಿರುವ ರಾಖಿ ಮಾಜಿ ಪತಿ ರಿತೇಶ್‌ ಜೊತೆಗೂಡಿ ಆದಿಲ್‌ ವಿರುದ್ಧ ಕಿಡಿಕಾರಿದ್ದರು.

ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಈಗಾಗಲೇ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿಲ್ ಖಾನ್ ಇತ್ತೀಚೆಗೆ ಜೈಪುರದಲ್ಲಿ ಹಿಂದಿ ಬಿಗ್ ಬಾಸ್ 12ರ ಖ್ಯಾತಿಯ ಸೋಮಿ ಖಾನ್ ಅವರನ್ನು ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ಆಪ್ತರು ಮಾತ್ರ ಹಾಜರಿದ್ದರು. ಸೋಮಿ ಅವರು ಸಬಾ ಖಾನ್ ಅವರ ಸಹೋದರಿ. ಕಳೆದ ಕೆಲವು ತಿಂಗಳುಗಳಿಂದ ಆದಿಲ್ ಹಾಗೂ ಸೋಮಿ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು ಎನ್ನಲಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ ಹಿಂದಿ ಸೀಸನ್ 12’ರಲ್ಲಿ ಸೋಮಿ ಮತ್ತು ಸಬಾ ಖಾನ್ ಇಬ್ಬರೂ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

Continue Reading

ಸಿನಿಮಾ

Shamita Shetty: ವಿಚಿತ್ರ ಕಾಯಿಲೆಗೆ ತುತ್ತಾದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ: ಆಸ್ಪತ್ರೆಗೆ ದಾಖಲು

Shamita Shetty: ಇತ್ತೀಚೆಗಷ್ಟೇ ಶಮಿತಾ ತಾಯಿ ಸುನಂದಾ ಶೆಟ್ಟಿ ಮತ್ತು ಸಹೋದರಿ ನಟಿ ಶಿಲ್ಪಾ ಶೆಟ್ಟಿ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶಿಲ್ಪಾ ಅವರು ಪ್ರವಾಸದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಜಾರಿ ನಿರ್ದೇಶನಾಲಯ ಶಿಲ್ಪಾ ಶೆಟ್ಟಿ ಅವರಿಗೆ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶ ಪಡಿಸಿಕೊಂಡ ಪ್ರಕರಣ ತನಿಖೆ ಹಂತದಲ್ಲೇ, ಮತ್ತೊಂದು ವೈಯಕ್ತಿಕ ಸಮಸ್ಯೆ ಎದುರಾಗಿದೆ.

VISTARANEWS.COM


on

Shamita Shetty Undergoes Surgery For Endometriosis
Koo

ಬೆಂಗಳೂರು: ನಟಿ ಶಮಿತಾ ಶೆಟ್ಟಿ (Shamita Shetty ) ಅವರು ಎಂಡೊಮೆಟ್ರಿಯೊಸಿಸ್ (endometriosis ) ಎನ್ನುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಶಮಿತಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ಎಲ್ಲಾ ಮಹಿಳೆಯರೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಎಂಡೊಮೆಟ್ರಿಯೊಸಿಸ್ ಎಂದರೆ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ.

ಆಸ್ಪತ್ರೆಯ ಹಾಸಿಗೆಯಲ್ಲಿ ಕುಳಿತು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ. ಶಮಿತಾ ಮಾತನಾಡಿ ʻಮಹಿಳೆಯರೇ, ದಯವಿಟ್ಟು ಎಂಡೊಮೆಟ್ರಿಯೊಸಿಸ್ ಗೂಗಲ್ ಮಾಡಿ. ಸಮಸ್ಯೆ ಏನು ಎಂದು ನೀವು ತಿಳಿದುಕೊಳ್ಳಬೇಕು. ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ..? ನಮ್ಮಲ್ಲಿ ಹೆಚ್ಚಿನವರಿಗೆ ಈ ರೋಗದ ಬಗ್ಗೆ ತಿಳಿದಿಲ್ಲ !!! ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳಲು ಸಹಾಯ ಮಾಡಿದ ನನ್ನ ವೈದ್ಯರಾದ ಗೈನಾಕ್ ಡಾ ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ! ಈಗ ನಾನು ಈ ರೋಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ್ದೇನೆ ನನ್ನ ಆರೋಗ್ಯ ಮತ್ತಷ್ಟು ಸುಧಾರಿಸಲು ಎದುರು ನೀಡುತ್ತಿದ್ದೇನೆ. ಈಗೀಗ ನೋವಿಲ್ಲದ ದಿನಗಳನ್ನು ಕಳೆಯುತ್ತಿದ್ದೇನೆ. ಹೀಗಾಗಿ ಎಲ್ಲಾ ಮಹಿಳೆಯರೂ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ಜಾಗೃತರಾಗಿ ಮತ್ತು ಚಿಕಿತ್ಸೆ ಪಡೆಯಿರಿʼʼ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Shilpa Shetty: ಅಮ್ಮ , ಸಹೋದರಿ ಜತೆ ಕೇದಾರನಾಥಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್‌ ಆಗುತ್ತಿದ್ದಂತೆ ಶಮಿತಾ ಅವರ ಸಹೋದ್ಯೋಗಿಗಳು ಮತ್ತು ಬಾಲಿವುಡ್‌ನ ಅನೇಕ ಗಣ್ಯರು ಬೇಗ ಗುಣಮುಖರಾಗಿ ಎಂದು ಕಮೆಂಟ್‌ ಮಾಡಿದ್ದಾರೆ.

ಏನಿದು ಎಂಡೊಮೆಟ್ರಿಯೊಸಿಸ್ ಕಾಯಿಲೆ?

ಗರ್ಭಕೋಶಕ್ಕೆ ಸಂಬಂಧಿಸಿದ್ದು, ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಕಷ್ಟವಾಗುತ್ತದೆ.

ಇತ್ತೀಚೆಗಷ್ಟೇ ಶಮಿತಾ ತಾಯಿ ಸುನಂದಾ ಶೆಟ್ಟಿ ಮತ್ತು ಸಹೋದರಿ ನಟಿ ಶಿಲ್ಪಾ ಶೆಟ್ಟಿ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶಿಲ್ಪಾ ಅವರು ಪ್ರವಾಸದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಜಾರಿ ನಿರ್ದೇಶನಾಲಯ ಶಿಲ್ಪಾ ಶೆಟ್ಟಿ ಅವರಿಗೆ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶ ಪಡಿಸಿಕೊಂಡ ಪ್ರಕರಣ ತನಿಖೆ ಹಂತದಲ್ಲೇ, ಮತ್ತೊಂದು ವೈಯಕ್ತಿಕ ಸಮಸ್ಯೆ ಎದುರಾಗಿದೆ.

Continue Reading

ಸಿನಿಮಾ

Ramayana Movie: ದೇಶದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ ʼರಾಮಾಯಣʼ; ಬಜೆಟ್‌ ನಿಮ್ಮ ಊಹೆಗೂ ನಿಲುಕದ್ದು

Ramayana Movie: ಸದ್ಯ ಚಿತ್ರ ಪ್ರೇಮಿಗಳ ಕುತೂಹಲ ಕೆರಳಿಸಿರುವ ಸಿನಿಮಾಗಳಲ್ಲಿ ರಾಮಾಯಣ ಕೂಡ ಒಂದು. ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕೆಜಿಎಫ್‌ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ರಾಕಿ ಭಾಯಿ ಯಶ್‌ ರಾವಣನಾಗಿ ಈ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಸಿನಿಮಾ ಬಜೆಟ್‌ ಬಗ್ಗೆ ಹೊಸದೊಂದು ಅಪ್‌ಡೇಟ್‌ ಹೊರ ಬಿದ್ದಿದೆ. ಈ ಚಿತ್ರದ ಬಜೆಟ್‌ ಎಷ್ಟು ಗೊತ್ತೆ?

VISTARANEWS.COM


on

Ramayana Movie
Koo

ಮುಂಬೈ: ಸದ್ಯ ದೇಶಾದ್ಯಂತ ʼರಾಮಾಯಣʼ (Ramayana Movie) ಚಿತ್ರದ್ದೇ ಸದ್ದು. ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾ ಬಹು ತಾರಾಗಣದ ಮೂಲಕವೇ ಸುದ್ದಿಯಾಗುತ್ತಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯರಾಗುತ್ತಿರುವ ಈ ಚಿತ್ರದಲ್ಲಿ ರಾಮನಾಗಿ ರಣಬೀರ್‌ ಕಪೂರ್‌ (Ranbir Kapoor) ಮತ್ತು ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ (Yash) ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಈ ಮಧ್ಯೆ ಸಿನಿಮಾ ಬಜೆಟ್‌ ಬಗ್ಗೆ ಹೊಸ ಅಪ್‌ಡೇಟ್‌ ಹೊರ ಬಿದ್ದಿದೆ.

ಬಜೆಟ್‌ ಎಷ್ಟು?

ʼರಾಮಾಯಣʼ ಸಿನಿಮಾ ಬರೋಬ್ಬರಿ 835 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಮೂಲಕ ಭಾರತೀಯ ಸಿನಿರಂಗದಲ್ಲೇ ಅತೀ ದುಬಾರಿ ಚಿತ್ರ ಎನಿಸಿಕೊಳ್ಳಲಿದೆ. ʼʼರಾಮಾಯಣ ಕೇವಲ ಸಿನಿಮಾವಲ್ಲ. ಅದೊಂದು ಭಾವನೆ. ನಂಬಿಕೆ. ಹೀಗಾಗಿ ನಿರ್ಮಾಪಕರು ಈ ಚಿತ್ರದ ತಯಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ದುಬಾರಿ ವೆಚ್ಚದಲ್ಲಿ ನಿರ್ಮಾಪಕರು ತೆರೆ ಮೇಲೆ ಮ್ಯಾಜಿಕ್‌ ಮಾಡಲು ಮುಂದಾಗಿದ್ದಾರೆʼʼ ಎಂದು ಮೂಲವೊಂದು ತಿಳಿಸಿದೆ.

ಈಗಾಗಲೇ ರಾಮಾಯಣ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇತ್ತೀಚೆಗೆ ಶೂಟಿಂಗ್‌ನ ತುಣುಕೊಂಡು ಲೀಕ್‌ ಆಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ʼʼಚಿತ್ರದ ಬಜೆಟ್‌ 835 ಕೋಟಿ ರೂ.ಗೆ ತಲುಪಲಿದೆ. ಪೋಸ್ಟ್‌ ಪ್ರೊಡಕ್ಷನ್‌ಗೇ ಸುಮಾರು 600 ದಿನ ಬೇಕಾಗುತ್ತದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾವೊಂದು ರಾರಾಜಿಸಲಿದೆʼʼ ಎಂದು ವರದಿಯೊಂದರಲ್ಲಿ ವಿವರಿಸಲಾಗಿದೆ.

ಅತ್ಯಂತ ದುಬಾರಿ ಚಿತ್ರ

ಪ್ರಭಾಸ್‌ ಅಭಿನಯದ, ಕಳೆದ ವರ್ಷ ತೆರೆಕಂಡ ʼಆದಿಪುರುಷ್‌ʼ ಸಿನಿಮಾ ಇದುವರೆಗಿನ ಅತ್ಯಂತ ವೆಚ್ಚದ ಸಿನಿಮಾ ಎನಿಸಿಕೊಂಡಿತ್ತು. ರಾಮಾಯಣವನ್ನು ಆಧರಿಸಿದ ಇದು ಸುಮಾರು 700 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು ಎನ್ನಲಾಗಿದೆ. ಎರಡನೇ ಸ್ಥಾನದಲ್ಲಿ ಪ್ರಭಾಸ್‌ ಅವರದ್ದೇ ʼಕಲ್ಕಿ 2898 ಎಡಿʼ ಸಿನಿಮಾ ಇದೆ. ದೀಪಿಕಾ ಪಡುಕೋಣೆ ನಾಯಕಿಯಾಗಿರುವ ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಈ ಚಿತ್ರದ ಬಜೆಟ್‌ ಸುಮಾರು 600 ಕೋಟಿ ರೂ. ಇನ್ನು ರಜನಿಕಾಂತ್‌ ನಟಿಸಿದ್ದ ʼ2.0ʼ ಚಿತ್ರಕ್ಕೆ 570 ಕೋಟಿ ರೂ. ವೆಚ್ಚವಾಗಿತ್ತು. ಹೀಗಾಗಿ ʼರಾಮಾಯಣʼ ಇದುವರೆಗಿನ ದುಬಾರಿ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ಸುಮಾರು 3 ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನುವ ಸುದ್ದಿಯೂ ಇದೆ.

ಯಶ್‌ ನಟಿಸುತ್ತಾರಾ?

ʼಕೆಜಿಎಫ್‌ʼ ಸರಣಿ ಸಿನಿಮಾ ಮೂಲಕ ದೇಶದ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟ ಯಶ್‌ ರಾಮಾಯಣ ಸಿನಿಮಾದಲ್ಲಿ ರಾವಣನನಾಗಿ ಅಬ್ಬರಿಸಲಿದ್ದಾರೆ. ಅದಕ್ಕಾಗಿ ದುಬಾರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದರ ಜತೆಗೆ ಯಶ್‌ ನಟಿಸುತ್ತಿಲ್ಲ, ಬದಲಾಗಿ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೆ ಈ ಬಗ್ಗೆ ಚಿತ್ರತಂಡವಾಗಲೀ, ಯಶ್‌ ಕಡೆಯಿಂದಾಗಲೀ ಸ್ಪಷ್ಟನೆ ದೊರೆತಿಲ್ಲ.

ಇದನ್ನೂ ಓದಿ: Ramayana Movie: ರಾಮಾಯಣ’ ಸಿನಿಮಾದ ರಣ್‌ಬೀರ್, ಸಾಯಿ ಪಲ್ಲವಿ ಲುಕ್ ಲೀಕ್

ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ನಟಿಸುತ್ತಾರೆ ಎಂದು ವರದಿಯಾಗಿದೆ. ಸದ್ಯ ಯಶ್ ಮತ್ತೊಂದು ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Continue Reading
Advertisement
MLC Election
ಕರ್ನಾಟಕ1 min ago

MLC Election: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫೈನಲ್‌; ಬಂಡಾಯವಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ

CAA
EXPLAINER3 mins ago

CAA: ಸಿಎಎ ಅನ್ವಯ 14 ಜನಕ್ಕೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Fortis Hospital doctors team performed a successful complex kidney transplant surgery for two patients with robotic assistance
ಕರ್ನಾಟಕ5 mins ago

Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

V. Sunil Kumar latest statemetn
ಬೆಂಗಳೂರು12 mins ago

V. Sunil Kumar: ರಾಜ್ಯದಲ್ಲಿ ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ: ವಿ. ಸುನೀಲ್ ಕುಮಾರ್

private hospitals heads and health department officers Meeting at vijayanagara DC office
ವಿಜಯನಗರ22 mins ago

Vijayanagara News: ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ಲೋಪ ಎಸಗಿದರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ

Ram Pothineni Double iSmart teaser with Sanjay Dutt
ಟಾಲಿವುಡ್24 mins ago

Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

Prajwal Revanna Case Deve Gowda lashes out at Bhavani
ರಾಜಕೀಯ26 mins ago

Prajwal Revanna Case: ಭವಾನಿ ವಿರುದ್ಧ ದೇವೇಗೌಡ ಗರಂ; ಮತ್ತೆ ಹೀಗಾಗದಂತೆ ಎಚ್ಚರಿಕೆ ನೀಡಲು ರೇವಣ್ಣಗೆ ತಾಕೀತು!

Wedding men's jewel Fashion Artificial pearl necklace has entered
ಫ್ಯಾಷನ್26 mins ago

Wedding men’s jewel Fashion: ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ಗೆ ಕಾಲಿಟ್ಟ ಆರ್ಟಿಫಿಶಿಯಲ್‌ ಪರ್ಲ್‌ ಹಾರ!

Team India Coach Applications
ಕ್ರೀಡೆ31 mins ago

Team India Coach Applications: ಭಾರತ ತಂಡದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಸಾವಿರಾರು ಅಭಿಮಾನಿಗಳು; ಪಜೀತಿಗೆ ಸಿಲುಕಿದ ಬಿಸಿಸಿಐ

CAA
ದೇಶ35 mins ago

CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ10 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ12 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ22 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌