Pathaan Movie: 2ನೇ ದಿನ ʻಪಠಾಣ್‌ʼ ‌ವಿಶ್ವಾದ್ಯಂತ ದಾಖಲೆ ಕಲೆಕ್ಷನ್! - Vistara News

ಬಾಲಿವುಡ್

Pathaan Movie: 2ನೇ ದಿನ ʻಪಠಾಣ್‌ʼ ‌ವಿಶ್ವಾದ್ಯಂತ ದಾಖಲೆ ಕಲೆಕ್ಷನ್!

ಜನವರಿ 26ರಂದು ಬಿಡುಗಡೆಯಾದ ಪಠಾಣ್ (Pathaan Movie) ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಆರಂಭಿಕ ಟ್ರೆಂಡ್‌ಗಳ ವರದಿ ಪ್ರಕಾರ, ಚಿತ್ರವು ಭಾರತದಲ್ಲಿ 2ನೇ ದಿನದಂದು ಸುಮಾರು 70 ಕೋಟಿ ರೂ. ಗಳಿಕೆ ಕಂಡಿದೆ.

VISTARANEWS.COM


on

Pathaan Movie collection Day 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಾರುಖ್ ಖಾನ್ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 25, ಪಠಾಣ್ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಶಾರುಖ್‌ ಅವರನ್ನು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ನೋಡುತ್ತಿದ್ದಂತೆ ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ಸಂತಸ ಪಟ್ಟಿದ್ದಾರೆ. ಜನವರಿ 26, ಎರಡನೇ ದಿನ ಪಠಾಣ್‌ ಸಿನಿಮಾ (Pathaan Movie) ಭಾರತದಲ್ಲಿ 70 ಕೋಟಿ ರೂ. ಕಲೆಕ್ಷನ್‌ ಮಾಡಿದ್ದು, ವಿಶ್ವಾದ್ಯಂತ 235 ಕೋಟಿ ರೂ. ದಾಟಿದೆ ಎಂದು ವರದಿಯಾಗಿದೆ.

ಪಠಾಣ್‌ ಬಾಕ್ಸ್ ಆಫೀಸ್ ಕಲೆಕ್ಷನ್ ಎರಡನೇ ದಿನ:

ಜನವರಿ 26 ರಂದು ಬಿಡುಗಡೆಯಾದ ಪಠಾಣ್ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಆರಂಭಿಕ ಟ್ರೆಂಡ್‌ಗಳ ವರದಿ ಪ್ರಕಾರ, ಚಿತ್ರವು ಭಾರತದಲ್ಲಿ 2ನೇ ದಿನದಂದು ಸುಮಾರು 70 ಕೋಟಿ ರೂ. ಗಳಿಕೆ ಕಂಡಿದೆ. ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಯು ಒಟ್ಟು 2ರಿಂದ 3 ಕೋಟಿ ರೂ. ಕಲೆಕ್ಷನ್‌ ಮಾಡಿದ್ದು, ಪಠಾಣ್‌ನ ಒಟ್ಟು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನ 100 ಕೋಟಿ ರೂ. ಆಗಿದೆ ಎಂದು ವರದಿ ಆಗಿದೆ.

ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ʻʻಪಠಾಣ್‌ ಎರಡು ದಿನಗಳಲ್ಲಿ 235 ಕೋಟಿ ರೂ. ಗಳಿಕೆಯನ್ನು ದಾಟಿದೆ, ಈ ಹಿಂದೆಯೂ ಹಿಂದಿಯಲ್ಲಿ ಯಾವ ಸಿನಿಮಾಗಳು ಇಷ್ಟು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್‌ ಪಡೆದಿಲ್ಲʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Pathaan Movie: ಕೆಜಿಎಫ್‌ 2 ದಾಖಲೆ ಮುರಿದು ಭರ್ಜರಿ ಗಳಿಕೆ ಕಂಡ ʻಪಠಾಣ್’!

ಇದನ್ನೂ ಓದಿ: Pathaan Movie: ʻಪಠಾಣ್‌ʼನಲ್ಲಿ ಆಮಿರ್ ಖಾನ್‌ ಸಹೋದರಿ ನಿಖತ್ ಖಾನ್ ನಿರ್ವಹಿಸಿದ ಪಾತ್ರವಾದರೂ ಏನು?

ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಪಠಾಣ್‌ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಪಠಾಣ್ ಸಿನಿಮಾ ಮೊದಲ ಶೋ ಬೆಳಗ್ಗೆ (Pathaan review) 6 ಗಂಟೆಗೆ ಶುರುವಾಗಿದೆ. ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಹೊರತುಪಡಿಸಿ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

Kangana Ranaut : ನಟಿ ಕಂಗನಾ ರಣಾವತ್ ಹಿಟ್‌ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Kangana Ranaut
Koo

ಬೆಂಗಳೂರು: ನಟಿ ಕಂಗನಾ ರಣಾವತ್ (Kangana Ranaut) ಹಿಟ್ ಸಿನಿಮಾ ನೀಡದೇ ವರ್ಷಗಳೇ ಕಳೆದಿವೆ. ಆದರೆ, ಅವರ ಅಭಿಪ್ರಾಯದಲ್ಲಿ ಇದು ಮುಖ್ಯವಲ್ಲ. ಏಕೆಂದರೆ, ‘ಪಠಾಣ್’ ಮೊದಲು, ಬಾಲಿವುಡ್‌ನ ಸೂಪರ್‌ಸ್ಟಾರ್, ಶಾರುಖ್ ಖಾನ್ (Shah Rukh Khan) ಸಹ ಹತ್ತು ವರ್ಷಗಳ ಕಾಲ ಫ್ಲಾಪ್‌ ಸಿನಿಮಾಗಳನ್ನೇ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಹಾಗೂ ಶಾರುಖ್ ಅವರನ್ನು ʻ ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳು’ ಎಂದು ಹೇಳಿಕೊಂಡಿದ್ದಾರೆ.

ಟೈಮ್ಸ್ ನೌ ಶೃಂಗಸಭೆ 2024ರಲ್ಲಿ ಮಾತನಾಡಿದ ಕಂಗನಾ, ನಾನು ಮತ್ತು ಶಾರುಖ್ “ಈ ಯುಗದ ಕೊನೆಯ ತಲೆಮಾರಿನ ಸ್ಟಾರ್ಸ್‌ಗಳುʼʼ ಎಂದಿದ್ದಾರೆ. ʻʻಒಟಿಟಿ ವೇದಿಕೆ ಸ್ಟಾರ್‌ಗಳನ್ನು ನಿರ್ಮಾಣ ಮಾಡುವುದಿಲ್ಲ. ದೇವರ ದಯೆಯಿಂದ ನಮಗೆ ತುಂಬಾ ಬೇಡಿಕೆಯಿದೆʼʼ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂಗನಾ ಅವರು ಅಭಿನಯಿಸಿದ “ತೇಜಸ್‌ʼ ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಅವರ ‘ಜಡ್ಜ್‌ಮೆಂಟಲ್ ಹೈ ಕ್ಯಾ’, ‘ತಲೈವಿ’, ‘ಧಕಡ್’ ಮತ್ತು ‘ಚಂದ್ರಮುಖಿ 2’ ಚಿತ್ರಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ. ಶಾರುಖ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ಸಿನಿಮಾಗಳ ವೈಫಲ್ಯದ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

“ಜಗತ್ತಿನ ಯಾವುದೇ ನಟನಿಗೆ ಹಿಟ್‌ಗಳು ಮಾತ್ರ ಸಾಲದು. ಶಾರುಖ್ ಖಾನ್ ಅವರ ಚಿತ್ರಗಳು ಹತ್ತು ವರ್ಷಗಳ ಕಾಲ ಹಿಟ್‌ ಕಂಡೇ ಇಲ್ಲ. ಬಳಿಕ ʻಪಠಾಣ್ʼ ಸಕ್ಸೆಸ್‌ ಆಯಿತು. ನನ್ನ ಚಿತ್ರಗಳು ಏಳೆಂಟು ವರ್ಷಗಳ ಕಾಲ ಯಶಸ್ಸು ಕಾಣಲೇ ಇಲ್ಲ. ನಂತರ ‘ಕ್ವೀನ್’ ಸಿನಿಮಾ ಗೆದ್ದಿತು. 3-4 ವರ್ಷಗಳ ನಂತರ, ʻಮಣಿಕರ್ಣಿಕಾʼ ಕೆಲಸ ಮಾಡಿದೆ. ಈಗ, ʻ ಎಮರ್ಜೆನ್ಸಿʼ ಸಿನಿಮಾ ಬರುತ್ತಿದೆ. ಬಹುಶಃ ಅದು ಹಿಟ್ ಆಗಬಹುದುʼʼ ಎಂದು ಹೇಳಿಕೊಂಡಿದ್ದಾರೆ

ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕುರಿತಾಗಿನ ಕಥೆ ʻಎಮರ್ಜೆನ್ಸಿʼ ಸಿನಿಮಾದಲ್ಲಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಂಗನಾ ನಟಿಯಾಗಿ ನಟಿಸಿರುವುದಷ್ಟೇ ಅಲ್ಲದೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಈ ಹಿಂದೆ ನಟಿ “ತಲೈವಿʼ ಸಿನಿಮಾದಲ್ಲಿ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ, ಜೆ. ಜಯಲಲಿತಾ ಅವರಾಗಿಯೂ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. 2024ರ ಜೂನ್‌ 14ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

Continue Reading

ಬಾಲಿವುಡ್

Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

Kangana Ranaut: ಕಂಗನಾ ರಣಾವತ್‌ ಅವರು ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

VISTARANEWS.COM


on

Kangana Ranaut and sunny Urmila
Koo

ಬೆಂಗಳೂರು: ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.  ಇದರ ಜತೆಗೆ 2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ, ನಟಿ ಹಾಗೂ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಈ ವಿಡಿಯೊ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ನಟಿ ಟೈಮ್ಸ್ ನೌ ಶೃಂಗಸಭೆಯಲ್ಲಿ ಸಮರ್ಥಸಿಕೊಂಡಿದ್ದಾರೆ.

“ಸಾಫ್ಟ್ ಪೋರ್ನ್ ಅಥವಾ ಪೋರ್ನ್ ಸ್ಟಾರ್ ಒಂದು ಆಕ್ಷೇಪಾರ್ಹ ಪದವೇ? ಅಲ್ಲ! ಇದು ಆಕ್ಷೇಪಾರ್ಹ ಪದವಲ್ಲ. ಇದು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಪದವಾಗಿದೆ. ವಯಸ್ಕ ಸಿನಿಮಾಗೆ ನಮ್ಮ ದೇಶದಲ್ಲಿ ಗೌರವ ಕೂಡ ಇದೆ. ಪೋರ್ನ್ ಸ್ಟಾರ್‌ಗಳಿಗೆ ನಾವು ಕೊಡುವಷ್ಟು ಗೌರವ ಯಾವ ದೇಶವೂ ಕೊಡುವುದಿಲ್ಲ. ಸನ್ನಿ ಲಿಯೋನ್‌ (Sunny Leone) ಅವರನ್ನು ಕೇಳಿ ಗೊತ್ತಾಗುತ್ತೆʼʼಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ಊರ್ಮಿಳಾ ಮಾತೋಂಡ್ಕರ್ ಬಗ್ಗೆ ಕಂಗನಾ (Kangana Ranaut) ಮಾತನಾಡಿ ʻʻನನ್ನನ್ನು ರಾಜಕೀಯದಲ್ಲಿ ಪ್ರವೇಶಿಸಲು ಬಿಜೆಪಿಯು ಯಾವ ಆಧಾರದ ಮೇಲೆ ಪರಿಗಣಿಸಿದೆ ಎಂಬುದು ಊರ್ಮಿಳಾ ಅವರ ಪ್ರಶ್ನೆ ಆಗಿತ್ತು. ಕಲೆಗೆ ವಿವಿಧ ಕ್ಷೇತ್ರಗಳಿವೆ ಎಂದು ನಾನು ನಂಬುತ್ತೇನೆ. ಕಲೆಯನ್ನು ನಾವು ಸಂವೇದನಾಶೀಲ, ಸಮೂಹ ಕಲೆ ಎಂದು ನಾವು ಉಲ್ಲೇಖಿಸುತ್ತೇವೆ. ನಾನು ಬ್ಯಾಲೆನ್ಸ್ಡ್‌ ಸಿನಿಮಾ ಕಲಾವಿದರ ಗುಂಪಿಗೆ ಸೇರಿದವಳು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆʼಎಂದು ಹೇಳಿದರು.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಮಾತ್ರವಲ್ಲ ವೇಶ್ಯೆಗೆ ಹೋಲಿಸಿದರೆ ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುವುದರ ಹಿಂದಿನ ಕಾರಣವನ್ನು ಕಂಗನಾ ಪ್ರಶ್ನಿಸಿದ್ದಾರೆ. “ನಾವು ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಸ್ವೀಕರಿಸುವಾಗ ವೇಶ್ಯೆಯರ ಬಗ್ಗೆ ಈ ರೀತಿಯ ಕೆಟ್ಟ ಮನಸ್ಥಿತಿ ಏಕೆ ಹೊಂದಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ ಎಂಬ ಕಾರಣಕ್ಕಾಗಿಯೇ? ಗ್ಲಾಮರ್‌ಗಾಗಿಯೇ? ನಾವು ವೇಶ್ಯೆಯರನ್ನು ಪೋರ್ನ್ ಸ್ಟಾರ್‌ಗಳಂತೆ ಪರಿಗಣಿಸುತ್ತಿಲ್ಲ, ”ಎಂದು ಅವರು ಹೇಳಿದರು. ಇತ್ತೀಚಿನ ಕಂಗನಾ ಅವರ ಹೇಳಿಕೆಗಳ ಬಗ್ಗೆ ಊರ್ಮಿಳಾ ಮತ್ತು ಸನ್ನಿ ಇನ್ನೂ ಪ್ರತಿಕ್ರಿಯಿಸಿಲ್ಲ.

Continue Reading

ಬಾಲಿವುಡ್

Ranbir Kapoor: ತಮ್ಮ ಐಷಾರಾಮಿ ಬಂಗಲೆಯಲ್ಲಿ ಪೋಸ್‌ ಕೊಟ್ಟ ಆಲಿಯಾ-ರಣಬೀರ್!

Ranbir Kapoor: ಆಲಿಯಾ ರಣಬೀರ್‌ ಬಂಗಲೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಇದೀಗ ದಂಪತಿ ಬಂಗಲೆಯನ್ನು ವೀಕ್ಷಣೆ ಮಾಡಿದ ವಿಡಿಯೊಗಳು ವೈರಲ್‌ ಆಗಿವೆ.

VISTARANEWS.COM


on

Ranbir Kapoor Alia Bhatt visit new Mumbai bungalow
Koo

ಬೆಂಗಳೂರು: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ಅವರ ತಾಯಿ, ನಟಿ ನೀತು ಕಪೂರ್ ಅವರು ಮುಂಬೈನಲ್ಲಿ ತಮ್ಮ ಹೊಸ ಬಂಗಲೆಗೆ ಬುಧವಾರ (ಮಾ.27) ಭೇಟಿ ನೀಡಿದ್ದರು. ಆಲಿಯಾ ಮತ್ತು ನೀತು ಒಟ್ಟಿಗೆ ಬಂಗಲೆಗೆ ಪ್ರವೇಶಿಸಿದ ವಿಡಿಯೊಗಳು ಮತ್ತು ರಣಬೀರ್ ಅವರು ಬಂಗಲೆಯಲ್ಲಿನ ಬಾಲ್ಕನಿಯಿಂದ ವೀಕ್ಷಣೆ ಮಾಡುತ್ತಿರುವ ಕ್ಲಿಪ್‌ಗಳು ವೈರಲ್‌ ಆಗಿವೆ.

ಪಾಪರಾಜೋ ಖಾತೆಯಿಂದ ಹಂಚಿಕೊಂಡಿರುವ ವಿಡಿಯೊದಲ್ಲಿ, ಆಲಿಯಾ ತನ್ನ ಕಾರಿನಿಂದ ಹೊರಬಂದು ಬಂಗಲೆಯೊಳಗೆ ಹೋಗುತ್ತಿರುವುದನ್ನು ಕಾಣಬಹುದು. ಪ್ರತ್ಯೇಕ ಕಾರಿನಲ್ಲಿ ಬಂದ ನೀತು ಅವರು ಆಲಿಯಾ ಅವರ ಜತೆ ಸೇರಿಕೊಂಡರು. ಆಲಿಯಾ ಕಪ್ಪು ಪ್ಯಾಂಟ್ ಜೊತೆಗೆ ಕಪ್ಪು ಶರ್ಟ್ ಧರಿಸಿದ್ದರೆ, ರಣಬೀರ್ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ನೀತು ಬೀಜ್ ಉಡುಪಿನಲ್ಲಿ ಕಂಡರು.

ಬಂಗಲೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಕುಟುಂಬ ಯಾವಾಗ ಹೊಸ ಬಂಗಲೆಗೆ ಶಿಪ್ಟ್ ಆಗಲಿದೆ ಎಂದು ತಿಳಿದು ಬಂದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ರಣಬೀರ್, ನೀತು ಮತ್ತು ಆಲಿಯಾ ಜತೆಗೆ ಅನೇಕ ಬಾರಿ ಬಂಗಲೆಗೆ ಭೇಟಿ ನೀಡಿದ್ದರು. 2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು.

ಇದನ್ನೂ ಓದಿ: Ranbir Kapoor: ‘ಅನಿಮಲ್ ಪಾರ್ಕ್ʼ ಶೂಟಿಂಗ್‌ ಯಾವಾಗಿನಿಂದ ಶುರು?

ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2022ರ ಏಪ್ರಿಲ್ 14ರಂದು ಮದುವೆಯಾದರು.

ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ

ನಿತೇಶ್ ತಿವಾರಿ ರಾಮಾಯಣ ಆಧರಿಸಿ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದಲ್ಲಿ ಈ ಚಿತ್ರದಲ್ಲಿ ರಣಬೀರ್, ಆಲಿಯಾ ಭಟ್ ಹಾಗೂ ಯಶ್ (Actor Yash) ನಟಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಾತ್ರವರ್ಗ ಕೂಡ ಫಿಕ್ಸ್‌ ಆಗಿದ್ದು, ರಣಬೀರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಆಲಿಯಾ ಭಟ್ ಸೀತೆ ಪಾತ್ರವನ್ನು ನಿಭಾಯಸಿಲಿದ್ದಾರೆ ಎನ್ನಲಾಗಿದೆ.

Continue Reading

ಬಾಲಿವುಡ್

Ramayana Movie: ರಾಮಾಯಣದಲ್ಲಿ ಯಶ್‌ ಪತ್ನಿಯ ಪಾತ್ರಕ್ಕೆ ʻದಂಗಲ್‌ʼ ಸಿನಿಮಾ ನಟಿ!

Ramayana Movie: ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಎನ್ನಲಾಗಿದೆ.

VISTARANEWS.COM


on

sakshi tanwar joins the ramayana team
Koo

ಬೆಂಗಳೂರು: ನಿತೇಶ್ ತಿವಾರಿ ಅವರ ʻರಾಮಾಯಣʼ (Ramayana Movie) ಆಗಾಗ ಸುದ್ದಿಯಾಗುತ್ತಲೇ ಇದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಬಾಲಿವುಡ್ ನಟಿ ಸಾಕ್ಷಿ ತನ್ವರ್ ರಾವಣನ ಪತ್ನಿ ಮಂಡೋದರಿಯಾಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಮೂಲಗಳ ಪ್ರಕಾರ ಸಾಕ್ಷಿ ತನ್ವರ್ ಸ್ಕ್ರಿಪ್ಟ್ ಓದುವ ಸೆಷನ್‌ಗಳಿಗೆ ಹಾಜರಾಗುತ್ತಿದ್ದಾರೆ. ಕೆಜಿಎಫ್ ಸ್ಟಾರ್ ಯಶ್ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಲಾರಾ ದತ್ತಾ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರು ಕೈಕೇಯಿ ಮತ್ತು ಶೂರ್ಪನಖಿ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಇಬ್ಬರು ನಟಿಯರೂ ನಿತೇಶ್ ತಿವಾರಿಯವರ ರಾಮಾಯಣದ ಭಾಗವಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ “ರಾಮಾಯಣʼ ತೆರೆಕಾಣಲಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು.

ಇದನ್ನೂ ಓದಿ: Lok Sabha Election 2024: ರಾಯಚೂರಲ್ಲಿ ಬಿ.ವಿ. ನಾಯಕ ಭಿನ್ನಮತ ಸ್ಫೋಟ; ಡೀಸೆಲ್‌ ಸುರಿದುಕೊಂಡು ಹೈಡ್ರಾಮಾ!

ಏಕ್ತಾ ಕಪೂರ್ ಅವರ ಐಕಾನಿಕ್ ಶೋ ʻಕಹಾನಿ ಘರ್ ಘರ್ ಕಿʼಯಲ್ಲಿ ನಾಯಕಿ ಪಾರ್ವತಿ ಪಾತ್ರವನ್ನು ನಿರ್ವಹಿಸಿದ ನಂತರ ಸಾಕ್ಷಿ ತನ್ವರ್ ಮನೆ ಮಾತಾದರು. ʻಬಡೇ ಅಚ್ಚೆ ಲಗ್ತೆ ಹೇʼ ಚಿತ್ರದಲ್ಲಿ ಪ್ರಿಯಾ ಪಾತ್ರದಲ್ಲಿ ಮನಗೆದ್ದ ನಂತರ, ಅವರು ಸಣ್ಣ ಪರದೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು. ಆಮೀರ್ ಖಾನ್ ಅವರ ದಂಗಲ್, ಸಾಮ್ರಾಟ್ ಪೃಥ್ವಿರಾಜ್, ಮಿಷನ್ ಓವರ್ ಮಾರ್ಸ್, ಮತ್ತು ಮೈ: ಎ ಮದರ್ ರೇಜ್ ಸೇರಿದಂತೆ ಅನೇಕ ಸಿನಿಮಾಗಳು ಮತ್ತು ಮತ್ತು ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಈ ಸಿನಿಮಾವನ್ನು ಅಲ್ಲು ಅರವಿಂದ್, ಮಧು ಮಂತೇನಾ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಲಿದ್ದು, ನಿತೇಶ್ ತಿವಾರಿ ಮತ್ತು ರವಿ ಉದ್ಯಾವರ್ ನಿರ್ದೇಶಕರಾಗಿದ್ದಾರೆ. 2023ರ ಡಿಸೆಂಬರ್ /2024ರ ಜನವರಿಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

Continue Reading
Advertisement
Xiaomi Car in China
ಪ್ರಮುಖ ಸುದ್ದಿ12 mins ago

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

viral video
ವೈರಲ್ ನ್ಯೂಸ್22 mins ago

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

BJP State Vice President Malavika Avinash latest statement
ಬೆಂಗಳೂರು27 mins ago

Bengaluru News: ಭಯೋತ್ಪಾದನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್ ಟೀಕೆ

Lok Sabha Election 2024 Prajwal Revanna gets Rs 40 crore worth asset
Lok Sabha Election 202427 mins ago

Lok Sabha Election 2024: ಪ್ರಜ್ವಲ್‌ ರೇವಣ್ಣ 40 ಕೋಟಿ ರೂ. ಒಡೆಯ; ಇದೆ ಕೆಜಿಗಟ್ಟಲೆ ಚಿನ್ನ!

Uttara Kannada Lok Sabha constituency Congress candidate Dr Anjali Nimbalkar latest statement
ಉತ್ತರ ಕನ್ನಡ30 mins ago

Uttara Kannada News: ಚುನಾವಣೆಯನ್ನು ಸುಲಭವಾಗಿ ಪರಿಗಣಿಸದಿರಿ: ನಿಂಬಾಳ್ಕರ್

Rameswaram cafe bomb blast case
ಬೆಂಗಳೂರು56 mins ago

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rajasthan Royals
ಪ್ರಮುಖ ಸುದ್ದಿ1 hour ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ1 hour ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Rishabh Pant -IPL 2024
ಕ್ರೀಡೆ2 hours ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Parliament Flashback
ಕರ್ನಾಟಕ2 hours ago

Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20248 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20249 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ17 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌