Pathaan Movie: 50 ದಿನಗಳನ್ನು ಪೂರೈಸಿದ ʻಪಠಾಣ್‌ʼ: 20 ದೇಶಗಳಲ್ಲಿ ಇನ್ನೂ ಪ್ರದರ್ಶನ! - Vistara News

ಬಾಲಿವುಡ್

Pathaan Movie: 50 ದಿನಗಳನ್ನು ಪೂರೈಸಿದ ʻಪಠಾಣ್‌ʼ: 20 ದೇಶಗಳಲ್ಲಿ ಇನ್ನೂ ಪ್ರದರ್ಶನ!

ಪಠಾಣ್’ (Pathaan Movie) 50 ದಿನಗಳನ್ನು ಪೂರೈಸಿದೆ. ಇನ್ನೂ 20 ದೇಶಗಳಲ್ಲಿ ಸ್ಕ್ರೀನ್‌ ಆಗುತ್ತಿದೆ. ಭಾರತದಲ್ಲಿ 800 ಚಿತ್ರಮಂದಿರಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಾದ್ಯಂತ 135 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆʼʼ

VISTARANEWS.COM


on

Pathaan Completes 50 Days
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಭಿನಯದ `ಪಠಾಣ್‌’ ಸಿನಿಮಾ (Pathaan Movie) 50 ದಿನಗಳನ್ನು ಪೂರೈಸಿದೆ. 50 ದಿನ ಪೂರೈಸಿದರೂ ಚಿತ್ರಮಂದರಗಳಲ್ಲಿ 20 ದೇಶಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪಠಾಣ್‌ ಈಗಾಗಲೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿದೆ. ಬಾಹುಬಲಿ ಸಿನಿಮಾ ಕಲೆಕ್ಷನ್‌ ಮೀರಿಸುವಲ್ಲಿ ಜಯ ಗಳಿಸಿದೆ.

ಸಿನಿಮಾ ವಿಶ್ಲೇಷಕ ತರಣ್‌ ಟ್ವೀಟ್‌ ಮಾಡಿದ್ದು ʻʻಪಠಾಣ್’ 50 ದಿನಗಳನ್ನು ಪೂರೈಸಿದೆ. ಇನ್ನೂ 20 ದೇಶಗಳಲ್ಲಿ ಸ್ಕ್ರೀನ್‌ ಆಗುತ್ತಿದೆ. ಭಾರತದಲ್ಲಿ 800 ಚಿತ್ರಮಂದಿರಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಾದ್ಯಂತ 135 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pathaan Movie: 1000 ಕೋಟಿ ರೂ. ಗಳಿಸಿದ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ!

ಪಠಾಣ್‌ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಯಶ್‌ ರಾಜ್‌ ಫಿಲ್ಮ್ಸ್‌ ಸ್ಪೈ ಯೂನಿವರ್ಸ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಹೊರಹೊಮ್ಮಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ರಾ ಏಜೆಂಟ್ ಆಗಿ ನಟಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Masaba Gupta: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೀನಾ ಗುಪ್ತಾ ಮಗಳು ಮಸಾಬಾ!

Masaba Gupta: ಮುಂಬಯಿಯ ಹೌಸ್‌ ಆಫ್‌ ಮಸಾಬಾ ಬ್ರ್ಯಾಂಡ್‌ ಖ್ಯಾತ ಡಿಸೈನರ್‌ ಮಸಾಬಾ ಗುಪ್ತಾ ಬಾಲಿವುಡ್‌ ನಟ-ನಟಿಯರಿಗೆ ಡ್ರೆಸ್‌ಗಳನ್ನು ಡಿಸೈನ್‌ ಮಾಡುವುದು ಮಾತ್ರವಲ್ಲ, ಕೋಟ್ಯಧಿಪತಿಗಳ ವೆಡ್ಡಿಂಗ್‌ ಕಾಸ್ಟ್ಯೂಮ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ಸಿದ್ಧಪಡಿಸುವಲ್ಲಿ ನಿಸ್ಸಿಮರು. ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳಾದ ಮಸಾಬಾ, ಈಗಾಗಲೇ ಖಾಸಗಿ ವಾಹಿನಿಯಲ್ಲಿ ಅವರ ಲೈಫ್‌ಸ್ಟೈಲ್‌ ಕುರಿತಂತೆ ಪ್ರಸಾರವಾದ ವೆಬ್‌ಸಿರೀಸ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

VISTARANEWS.COM


on

Masaba Gupta, Satyadeep Misra expecting 1st child
Koo

ಬೆಂಗಳೂರು: ಸೆಲೆಬ್ರಿಟಿ ಫ್ಯಾಷನ್ ಡಿಸೈನರ್, ನಟಿ ನೀನಾ ಗುಪ್ತಾ ಅವರ ಮಗಳು ಮಸಾಬಾ ಗುಪ್ತಾ (Masaba Gupta) ಇದೀಗ ಪ್ರೆಗ್ನೆಂಟ್‌. ಏಪ್ರಿಲ್ 18ರಂದು ಮಸಾಬಾ ಗುಪ್ತಾ ಅವರು ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಅನನ್ಯ ಪಾಂಡೆ, ಶಿಲ್ಪಾ ಶೆಟ್ಟಿ ಮುಂತಾದ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು (Masaba Gupta is pregnant) ದಂಪತಿಗೆ ಶುಭಹಾರೈಸಿದ್ದಾರೆ. ಮಸಾಬಾ ಅವರ ತಾಯಿ ನೀನಾ ಗುಪ್ತಾ ಅವರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಮಸಾಬಾ ಗುಪ್ತಾ ಪತಿ ಸತ್ಯದೀಪ್ ಮಿಶ್ರಾ (Satyadeep Misra) ಅವರೊಂದಿಗೆ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಪ್ರೀತಿ, ಆಶೀರ್ವಾದ ಮತ್ತು ಬಾಳೆಹಣ್ಣಿನ ಚಿಪ್ಸ್ ಅನ್ನು ಕಳುಹಿಸಿʼ ಎಂಬ ಪೋಸ್ಟ್‌ನೊಂದಿಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ ಮಸಾಬಾ. ಮಸಾಬಾ ಅವರ ತಾಯಿ, ನಟಿ ನೀನಾ ಗುಪ್ತಾ `ನಮ್ಮ ಮಕ್ಕಳ ಮಗು ಬರಲಿದೆ. ಇದಕ್ಕಿಂತ ಸಂತೋಷ ಮತ್ತೇನು?’ ಎಂದು ಮಗಳು ಮತ್ತು ಅಳಿಯನ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್

ಮಸಾಬ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಅವರು 2023ರ ಜನವರಿ 27 ರಂದು ವಿವಾಹವಾದರು. ಮಸಾಬಾ ಅವರದ್ದು ಇದು ಎರಡನೇ ಮದುವೆ. ಪತಿ ಸತ್ಯದೀಪ್‌ ಮಿಶ್ರಾಗೂ ಕೂಡ ಇದು ಎರಡನೇ ಮದುವೆ.ಸೆಲೆಬ್ರಿಟಿ ಡಿಸೈನರ್‌ ಮಸಾಬಾ ಗುಪ್ತಾ ತಮ್ಮ ಲೆಹೆಂಗಾವನ್ನು ಅತ್ಯಂತ ಪ್ರೀತಿಯಿಂದಲೇ ಸಿದ್ಧಪಡಿಸಿದ್ದರು.

ಮಸಾಬಾ ಗುಪ್ತಾ ಯಾರು?

ಮುಂಬಯಿಯ ಹೌಸ್‌ ಆಫ್‌ ಮಸಾಬಾ ಬ್ರ್ಯಾಂಡ್‌ ಖ್ಯಾತ ಡಿಸೈನರ್‌ ಮಸಾಬಾ ಗುಪ್ತಾ ಬಾಲಿವುಡ್‌ ನಟ-ನಟಿಯರಿಗೆ ಡ್ರೆಸ್‌ಗಳನ್ನು ಡಿಸೈನ್‌ ಮಾಡುವುದು ಮಾತ್ರವಲ್ಲ, ಕೋಟ್ಯಧಿಪತಿಗಳ ವೆಡ್ಡಿಂಗ್‌ ಕಾಸ್ಟ್ಯೂಮ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ಸಿದ್ಧಪಡಿಸುವಲ್ಲಿ ನಿಸ್ಸಿಮರು. ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳಾದ ಮಸಾಬಾ, ಈಗಾಗಲೇ ಖಾಸಗಿ ವಾಹಿನಿಯಲ್ಲಿ ಅವರ ಲೈಫ್‌ಸ್ಟೈಲ್‌ ಕುರಿತಂತೆ ಪ್ರಸಾರವಾದ ವೆಬ್‌ಸಿರೀಸ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಮೊದಲೊಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಮಸಾಬಾ ಅವರದ್ದು ಎರಡನೇ ಮದುವೆ. ಪತಿ ಸತ್ಯದೀಪ್‌ ಮಿಶ್ರಾಗೂ ಕೂಡ ಇದು ಎರಡನೇ ಮದುವೆ. ಈ ಮೊದಲು ಅವರು ನಟಿ ಅದಿತಿ ಹೈದರ್‌ ಅವರನ್ನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದರು.

ಸಿನಿಮಾ ಸೆಟ್‌ನಲ್ಲಿ ಮೊದಲ ಭೇಟಿ

ಸತ್ಯದೀಪ್ ಮಿಶ್ರಾ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ ನಟಿʻʻ ನಾನು ಅವರನ್ನು ಮಸಾಬಾ ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾದೆ. ಅವರು ಸೀಸನ್ 1ರಲ್ಲಿ ನನ್ನ ಮಾಜಿ ಗಂಡನ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಮ್ಮ ಕಂಫರ್ಟ್‌ ಜೋನ್‌ನಲ್ಲಿ ಇಬ್ಬರಲ್ಲಿಯೂ ಆತ್ಮೀಯತೆ ಹೆಚ್ಚಾಯ್ತು. ನಾವಿಬ್ಬರೂ ಸರಳವಾದ ವಿಷಯಗಳನ್ನು ಇಷ್ಟಪಡುತ್ತೇವೆʼʼಎಂದಿದ್ದರು.

Continue Reading

ಸಿನಿಮಾ

Flop Film: ಫ್ಲಾಪ್ ಎಂದು ಕರೆಸಿಕೊಂಡ ಈ ಚಿತ್ರದ 25 ಕೋಟಿ ಟಿಕೆಟ್ ಮಾರಾಟವಾಗಿದ್ದು ಹೇಗೆ; ಇಲ್ಲಿದೆ ರೋಚಕ ಸಿನಿ ಇತಿಹಾಸ

Flop Film ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟವಾಗಿದೆ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಚಲನಚಿತ್ರವೊಂದು ಈ ದಾಖಲೆಯನ್ನು ಬ್ರೇಕ್ ಮಾಡಿ ಎಂದಿಗೂ ಮುರಿಯಲಾಗದ ದಾಖಲೆಯನ್ನು ಮಾಡಿ ಹೋಗಿದೆ..

VISTARANEWS.COM


on

Flop Film
Koo

ಬೆಂಗಳೂರು: ಕಳೆದ ವರ್ಷ ‘ಜವಾನ್’ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಕೊನೆಯಲ್ಲಿ ಅದು 4 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು ಮತ್ತು ಇದನ್ನು ದೊಡ್ಡ ದಾಖಲೆ ಎಂಬಂತೆ ಎತ್ತಿ ತೋರಿಸಲಾಗಿತ್ತು. ಆದರೆ ಇಂದು ಅನೇಕ ಚಿತ್ರಗಳು ಬಿಡುಗಡೆಯಾದರೂ ಕೂಡ 1 ಕೋಟಿ ಟಿಕೆಟ್ ಮಾರಾಟವಾಗುವುದೇ ಕಷ್ಟ. ಅಂತಹದರಲ್ಲಿ ಅತಿ ಹೆಚ್ಚು ವೀಕ್ಷಿಸಿದ ಮತ್ತು ಟಿಕೆಟ್​ಗಳು ಮಾರಾಟವಾದ ಭಾರತೀಯ ಚಲನಚಿತ್ರವೊಂದು ಸಾರ್ವಕಾಲಿಕ ದಾಖಲೆ ಮಾಡಿದೆ. ಅಚ್ಚರಿ ಏನೆಂದರೆ ಈ ಸಿನಿಮಾ ಆರಂಭದಲ್ಲಿ ಇದು ಸೋತ ((Flop Film) ) ಸಿನಿಮಾ ಎಂಬ ವಿಮರ್ಶೆಯನ್ನು ಪಡೆದುಕೊಂಡಿತ್ತು. ಆದರೆ, ಬಳಿಕ ಆದದ್ದೇ ಬೇರೆ.

ಆ ಚಿತ್ರ ಯಾವುದೆಂದರೆ ರಮೇಶ್ ಸಿಪ್ಪಿ ಅವರ, ನಟ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ ಜನಪ್ರಿಯ ‘ಶೋಲೆ’ ಚಿತ್ರ. ಇದನ್ನು ಇತರ ಭಾರತೀಯ ಚಿತ್ರಗಳಿಗಿಂತ ಹೆಚ್ಚು ಜನರು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರಂತೆ. ಗಲ್ಲಾ ಪೆಟ್ಟಿಗೆ ಸಂಗ್ರಾಹಕರ ಪ್ರಕಾರ, ಶೋಲೆ ಚಿತ್ರ 1975-80ರ ಆರಂಭದಲ್ಲಿ ಭಾರತದಲ್ಲಿ ಮಾತ್ರ 18 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿತು. ಹಾಗೇ ಈ ಚಿತ್ರ 60 ಚಿತ್ರಮಂದಿರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತ್ತು ಮತ್ತು ಬೆಳ್ಳಿ ಹಬ್ಬವನ್ನು ಆಚರಿಸಿತ್ತು. ಅಲ್ಲದೇ ಈ ಚಿತ್ರ ಬಾಂಬೆಯ ಮಿನರ್ವ ಥಿಯೇಟರ್ ನಲ್ಲಿ ಐದು ವರ್ಷಗಳ ಕಾಲ ಓಡಿದ್ದು, ಅಂದಿನ ದಾಖಲೆ. ಒಟ್ಟಾರೆ ಈ ಚಿತ್ರ ಅಂದಾಜು 2 ಕೋಟಿ ಟಿಕೆಟ್ ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಹಾಗೇ ಈ ಚಿತ್ರ ಸೋವಿಯತ್ ರಷ್ಯಾದಲ್ಲಿ ಬಿಡುಗಡೆಯಾಗಿ ಅಲ್ಲಿ 48 ಮಿಲಿಯನ್ (4.8 ಕೋಟಿ) ಗಳಿಕೆ ಮಾಡಿದೆ. ಒಟ್ಟಾರೆ ಸುಮಾರು 25 ಕೋಟಿಯಷ್ಟು ಟಿಕೆಟ್​ ಸೇಲಾಗಿದೆ.

ಕೊನೆಯಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಹಾಗೂ ಭಾರತದಲ್ಲಿ ಅತ್ಯಂತ ಯಶಸ್ಸು ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು 30ಕೋಟಿ ಗಳಿಸಿತ್ತು. ಆ ಮೂಲಕ ಅದು ಮುಘಲ್-ಎ-ಆಜಮ್ ಮತ್ತು ಮದರ್ ಇಂಡಿಯಾದ ದಾಖಲೆಯನ್ನು ಮುರಿದಿದೆ.

ಆದರೆ ಈ ಚಿತ್ರ ಮೊದಲು ಹಿಟ್ ಆಗಲಿಲ್ಲ, ಸ್ವಾತಂತ್ರ್ಯ ದಿನಾಚರಣೆಯ ಮೊದಲು ಬಿಡುಗಡೆಯಾದ ಈ ಚಿತ್ರ ನಂತರ ಕೆಟ್ಟ ವಿಮರ್ಶೆಗಳು ಮತ್ತು ಟೀಕೆಗಳಿಗೆ ಒಳಗಾಗಿತ್ತು. ಹಾಗಾಗಿ ಮೊದಲ ಎರಡು ವಾರಗಳಲ್ಲಿ ಈ ಚಿತ್ರತಂಡದವರೇ ಅದನ್ನು ಫ್ಲಾಪ್ ಎಂದು ಲೇಬಲ್ ನೀಡಿದ್ದಾರೆ. ಹಾಗಾಗಿ ತಯಾರಕರು ಅದರ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಲು ಹೇಳಿದ್ದರು. ಆದರೆ ಕೊನೆಯಲ್ಲಿ ಹಿಟ್ ಚಿತ್ರವಾಗಿ ಹೊರಮೊಮ್ಮಿತ್ತು., ದಾಖಲೆಯನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಕಳೆದ ವರ್ಷಗಳಲ್ಲಿ ಹಲವಾರು ಭಾರತೀಯ ಚಲನಚಿತ್ರಗಳು ವಿಶ್ವದಾದ್ಯಂತ 1000 ಕೋಟಿ ಗಳಿಕೆಯನ್ನು ಪಡೆದುಕೊಂಡಿವೆ. ಬಾಹುಬಲಿ ಚಿತ್ರ ಜಾಗತಿಕ ಮಟ್ಟದಲ್ಲಿ 15-20 ಕೋಟಿ ಪ್ರೇಕ್ಷಕರನ್ನು ಗಳಿಸಿತ್ತು. ಆರ್ ಆರ್ ಆರ್ ಮತ್ತು ಕೆಜಿಎಫ್ 2 10 ಕೋಟಿ ಗಿಂತ ಕಡಿಮೆ ಪ್ರೇಕ್ಷಕರನ್ನು ಗಳಿಸಿದೆ. ದಂಗಲ್ ಚಿತ್ರ ಕೂಡ 10 ಕೋಟಿ ಪ್ರೇಕ್ಷಕರನ್ನು ಗಳಿಸಿದೆ. ಆದರೂ ಅವುಗಳು ಶೋಲೆಯ ಮಟ್ಟಕ್ಕೆ ಬಂದು ನಿಲ್ಲಲಿಲ್ಲ. ಎನ್ನಲಾಗಿದೆ.

Continue Reading

ಬಾಲಿವುಡ್

Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

Navya Naveli Nanda: ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

VISTARANEWS.COM


on

Aaradhya Bachchan is wiser more intelligent than I
Koo

ಬೆಂಗಳೂರು: ಪೋಡ್‌ಕಾಸ್ಟ್‌ ʻವಾಟ್ ದಿ ಹೆಲ್ ನವ್ಯಾʼದಲ್ಲಿ ಜಯಾ ಬಚ್ಚನ್‌ ಅವರು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೀಗ ಶ್ವೇತಾ ಬಚ್ಚನ್ ಮಗಳು ನವ್ಯಾ ಅವರು ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಮಗಳ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ತನ್ನ ಸೋದರಸಂಬಂಧಿ ಆರಾಧ್ಯ(Aaradhya Bachchan) ತುಂಬ ಬುದ್ಧಿವಂತೆ ಎಂದು ಹೇಳಿಕೊಂಡಿದ್ದಾರೆ.

ಆರಾಧ್ಯಗೆ ಏನು ಸಲಹೆ ನೀಡುತ್ತೀರಿ ಎಂದು ನವ್ಯಾಗೆ ಪ್ರಶ್ನೆ ಎದುರಾದಾಗ ಹೀಗೆ ಹೇಳಿದರು ನವ್ಯಾ. “ಆರಾಧ್ಯ ನನಗಿಂತ ಹೆಚ್ಚು ಬುದ್ಧಿವಂತಳು. ಇಂದಿನ ಮಕ್ಕಳು ಬಹಳ ಮುಂದಿದ್ದಾರೆ. ಅವಳ ವಯಸ್ಸಿನಲ್ಲಿ ನಾನು ಅಷ್ಟು ಬುದ್ಧಿವಂತನಾಗಿರಲಿಲ್ಲ. ಜಗತ್ತನ್ನು ಹಲವು ವಿಧಗಳಲ್ಲಿ ಬದಲಾಯಿಸಲು ಬಯಸುವ ಯುವತಿಯರ ಪೀಳಿಗೆಯನ್ನು ನಾವು ಈಗ ಹೊಂದಿದ್ದೇವೆ. ಅದು ನಾನು ಅವಳಲ್ಲಿಯೂ ನೋಡುತ್ತಿರುವ ಖುಷಿಯ ಸಂಗತಿ. ಅವಳಿಗೆ ನಾನು ಸಲಹೆ ಅಥವಾ ಸ್ಫೂರ್ತಿ ನೀಡುವುದಕ್ಕಿಂತ ಹೆಚ್ಚಾಗಿ, ಅವಳಿಂದ ನಾನು ಬಹಳಷ್ಟು ತಿಳಿದುಕೊಳ್ಳುತ್ತಿರುವೆ ಎಂದು ನಾನು ಭಾವಿಸುತ್ತೇನೆʼʼಎಂದರು.

ನವ್ಯಾ ಅವರು ಹೆಚ್ಚಾಗಿ ತಾಯಿ ಶ್ವೇತಾ ಬಚ್ಚನ್-ನಂದಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರಿಂದ ಸಲಹೆ ಪಡೆಯುತ್ತಿರುವಾಗಿ ಹೇಳಿಕೊಂಡರು. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ನಟಿ ಜಯಾ ಬಚ್ಚನ್ ಈ ಮುಂಚೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದರು.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದಿದ್ದರು.

Continue Reading

ಕ್ರೈಂ

Raj Kundra: ಬಿಟ್‌ಕಾಯಿನ್‌ ಪೋಂಜಿ ಸ್ಕೀಮ್‌; ಇಡಿಯಿಂದ ರಾಜ್‌ ಕುಂದ್ರಾ ₹97 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Raj Kundra: ಸಿಂಗಾಪುರ (Singapore) ಮೂಲದ ಸಂಸ್ಥೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ನಡೆಸಿದ ₹6,600 ಕೋಟಿ ಬಿಟ್‌ಕಾಯಿನ್ (Bitcoin) ಆಧಾರಿತ ಪೋಂಜಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ರಾಜ್‌ ಕುಂದ್ರಾ ಅವರ ಕೈವಾಡವನ್ನು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

VISTARANEWS.COM


on

Raj Kundra Shilpa Shetty
Koo

ಮುಂಬಯಿ: ನಟಿ ಶಿಲ್ಪಾ ಶೆಟ್ಟಿ (Actress Shilpa Shetty) ಅವರ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಅವರ ₹97.79 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಸಿಂಗಾಪುರ (Singapore) ಮೂಲದ ಸಂಸ್ಥೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ನಡೆಸಿದ ₹6,600 ಕೋಟಿ ಬಿಟ್‌ಕಾಯಿನ್ (Bitcoin) ಆಧಾರಿತ ಪೋಂಜಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ರಾಜ್‌ ಕುಂದ್ರಾ ಅವರ ಕೈವಾಡವನ್ನು ಶಂಕಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಕುಂದ್ರಾ ಈ ಪ್ರಕರಣದ ಆದಾಯದ ಫಲಾನುಭವಿ ಎಂದು ಶಂಕಿಸಲಾಗಿದೆ.

ಲಗತ್ತಿಸಲಾದ ಆಸ್ತಿಗಳಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಜುಹುದಲ್ಲಿರುವ ವಸತಿ ಫ್ಲಾಟ್, ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ರಾಜ್ ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳು ಸೇರಿವೆ. ವೇರಿಯಬಲ್ ಟೆಕ್ ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ದೇಶಾದ್ಯಂತ ಮೋಸಗಾರಿಕೆಯ ಹೂಡಿಕೆದಾರ ಮೂಲಕ 80,000 ಬಿಟ್‌ಕಾಯಿನ್‌ಗಳನ್ನು ಸಂಗ್ರಹಿಸಿದೆ. ಮತ್ತು ವಿದೇಶದಲ್ಲಿ ಆಸ್ತಿಗಳನ್ನು ಖರೀದಿಸಲು ಒಂಬತ್ತು ಸಂಸ್ಥೆಗಳ ಮೂಲಕ ₹6,606 ಕೋಟಿ ಮೌಲ್ಯದ ಹಣವನ್ನು ಭಾರತದಿಂದ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಅಮೇಜ್ ಮೈನಿಂಗ್ ಮತ್ತು ಬ್ಲಾಕ್‌ಚೈನ್ ರಿಸರ್ಚ್ ಲಿಮಿಟೆಡ್ ಹಾಂಗ್‌ಕಾಂಗ್, ಗ್ರೀನ್‌ ಓಶನ್‌ ಓವರ್‌ಸೀಸ್‌ ಹಾಂಗ್‌ಕಾಂಗ್, ಬ್ಲೂ ವೇವ್ ಟ್ರೇಡಿಂಗ್ ಹಾಂಗ್‌ಕಾಂಗ್, AB ಮಾರ್ಕೆಟಿಂಗ್ ಕನ್ಸಲ್ಟೆನ್ಸಿ FZE ದುಬೈ, ಕ್ರಿಪ್ಟೋ ಕ್ಯಾಪಿಟಲ್ ಎಸ್ಟೋನಿಯಾ, ABC ಮೆಗಾ ಅಲೈಯನ್ಸ್ DMCC/ABC ಮೆಗಾಕಾರ್ಪ್ ದುಬೈ, ಎಬಿ ಹೋಲ್ಡಿಂಗ್ಸ್ ದುಬೈ, ಎಬಿ ಫೆಸಿಲಿಟೀಸ್ ದುಬೈ ಮತ್ತು ಪರ್ಪಲ್ ರೈನ್ ಟ್ರೇಡಿಂಗ್ ಕಂಪನಿ ದುಬೈಗಳು EDಯ ತನಿಖೆಯ ಅಡಿಯಲ್ಲಿರುವ ಸಂಸ್ಥೆಗಳಾಗಿವೆ.

ವೇರಿಯೇಬಲ್ ಟೆಕ್ ಮತ್ತು ಹಲವಾರು ಇತರ ಏಜೆಂಟ್‌ಗಳ ವಿರುದ್ಧ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ದಾಖಲಿಸಿದ ಬಹು ಪ್ರಕರಣಗಳ ಆಧಾರದ ಮೇಲೆ 2018ರಲ್ಲಿ ಇಡಿ ಸಂಸ್ಥೆಯು ಪೋಂಜಿ ಸ್ಕೀಮ್‌ ಕುರಿತ ತನಿಖೆಯನ್ನು ಪ್ರಾರಂಭಿಸಿತು. ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿ ನಿಖಿಲ್ ಮಹಾಜನ್ ಅವರನ್ನು ಏಜೆನ್ಸಿ ಬಂಧಿಸಿತ್ತು. ಹೂಡಿಕೆದಾರರನ್ನು ಆಕರ್ಷಿಸಲು ದುಬೈನಲ್ಲಿ ಸೆಮಿನಾರ್‌ಗಳನ್ನು ನಡೆಸುವ ಮೂಲಕ ಮಹಾಜನ್ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಮತ್ತು 40 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ದರಗಳ ಪ್ರಕಾರ, ಒಂದು ಬಿಟ್‌ಕಾಯಿನ್‌ಗೆ ಸುಮಾರು ₹51 ಲಕ್ಷ ದರವಿದೆ. Bitcoin ಕಾನೂನುಬದ್ಧ ಕರೆನ್ಸಿ ಅಲ್ಲ.

ಅಶ್ಲೀಲ ವೀಡಿಯೊಗಳನ್ನು ವಿತರಿಸಿದ ಆರೋಪದ ಮೇಲೂ ಬಂಧಿತರಾಗಿ ಜೈಲಿಗೆ ಹೋಗಿದ್ದ ರಾಜ್‌ ಕುಂದ್ರಾ ಅವರಿಗೆ 2022ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದರ ತನಿಖೆಯೂ ನಡೆಯುತ್ತಿದೆ.

ಇದನ್ನೂ ಓದಿ: Shilpa Shetty: ಜೈಲಿಗೆ ಹೋಗಿ ಬಂದ ಬಳಿಕವೂ ಪತಿ ರಾಜ್‌ ಕುಂದ್ರಾರನ್ನು ಹಾಡಿ ಹೊಗಳಿದ ಶಿಲ್ಪಾ ಶೆಟ್ಟಿ!

Continue Reading
Advertisement
Day 2 of CET 2024 Exam 26 out of syllabus question KEA asks to raise objections by April 27
ಶಿಕ್ಷಣ16 mins ago

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

Maldives Tourism
ವಿದೇಶ19 mins ago

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

IPL 2024
ಕ್ರೀಡೆ22 mins ago

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

Party symbols
ರಾಜಕೀಯ25 mins ago

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

letter to President
ಕರ್ನಾಟಕ27 mins ago

letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

Surapura assembly constituency by election Congress candidate Rajavenugopal Nayaka filed nomination
ಯಾದಗಿರಿ44 mins ago

Yadgiri News: ರಾಜಾವೇಣುಗೋಪಾಲ ನಾಯಕಗೆ ಬೆಂಬಲಿಸಿ, ಗೆಲ್ಲಿಸಿ: ಸಚಿವ ದರ್ಶನಾಪುರ

Royal Challengers Banaglore
ಕ್ರೀಡೆ48 mins ago

Royal Challenges Bangalore : ಬೆಂಗಳೂರಿನ ಮೂರು ಕೆರೆಗಳನ್ನೂ ಅಭಿವೃದ್ಧಿ ಮಾಡಿದ ಆರ್​ಸಿಬಿ

Video Viral Parameshwara statement on ballot paper bogus voting
ವೈರಲ್ ನ್ಯೂಸ್50 mins ago

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Money Guide
ಮನಿ-ಗೈಡ್1 hour ago

Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

‌Assault Case
ಕರ್ನಾಟಕ1 hour ago

‌Assault Case: ಮೋದಿ ಹಾಡು ಬರೆದ ಯುವಕನ ಮೇಲೆ ಹಲ್ಲೆ; ಐವರ ವಿರುದ್ಧ ಎಫ್ಐಆರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ5 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ16 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌