Singham Again: ʻಸಿಂಗಂ ಅಗೇನ್ʼ ಸಿನಿಮಾ; ಅಜಯ್ ದೇವಗನ್ ಫಸ್ಟ್ ಲುಕ್ ಔಟ್‌! - Vistara News

ಬಾಲಿವುಡ್

Singham Again: ʻಸಿಂಗಂ ಅಗೇನ್ʼ ಸಿನಿಮಾ; ಅಜಯ್ ದೇವಗನ್ ಫಸ್ಟ್ ಲುಕ್ ಔಟ್‌!

Singham Again: ರೋಹಿತ್ ಶೆಟ್ಟಿ ಅವರು ಕೂಡ ಫಸ್ಟ್‌ ಲುಕ್‌ ಹಂಚಿಕೊಂಡು ʻʻʻಎಲ್ಲರ ಅಚ್ಚುಮೆಚ್ಚಿನ ಪೊಲೀಸ್, ಬಾಜಿರಾವ್ ಸಿಂಗಂ ಮರಳಿ ಬಂದಿದ್ದಾರೆ! ಮತ್ತೆ ಸಿಂಗಂʼʼಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Singham Again Ajay Devgn first look
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಜಯ್ ದೇವಗನ್ ಶೀಘ್ರದಲ್ಲೇ ರೋಹಿತ್ ಶೆಟ್ಟಿ ಅವರ ಮುಂಬರುವ ಚಿತ್ರ  ʻಸಿಂಗಂ ಅಗೇನ್ʼನಲ್ಲಿ (Singham Again) ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ‘ಅಜಯ್ ದೇವಗನ್ ಅವರ ಫಸ್ಟ್ ಲುಕ್ ಅನಾವರಣಗೊಂಡಿದೆ. ಅಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ʻಅವನು ಪರಾಕ್ರಮಿ. ಅವನು ಶಕ್ತಿ.. ಅವನು ಶಕ್ತಿ. ಸಿಂಗಂ ಮತ್ತೆ ಘರ್ಜಿಸುತ್ತಾನೆ!”ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ರೋಹಿತ್ ಶೆಟ್ಟಿ ಅವರು ಕೂಡ ಫಸ್ಟ್‌ ಲುಕ್‌ ಹಂಚಿಕೊಂಡು ʻʻʻಎಲ್ಲರ ಅಚ್ಚುಮೆಚ್ಚಿನ ಪೊಲೀಸ್, ಬಾಜಿರಾವ್ ಸಿಂಗಂ ಮರಳಿ ಬಂದಿದ್ದಾರೆ! ಮತ್ತೆ ಸಿಂಗಮ್‌ʼʼಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಸಿಂಗಂ ಎಗೇನ್‌ನ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಈ ತಿಂಗಳ ಆರಂಭದಲ್ಲಿ, ಕರೀನಾ ಅವರ ಚಿತ್ರದ ಫಸ್ಟ್ ಲುಕ್ ಹೊರಬಂದಿತ್ತು.

ʻಅವನಿʼ ಸಿಂಗಂ ಆಗಿ ರಗಡ್‌ ಲುಕ್‌ನಲ್ಲಿ ಕಂಡಿದ್ದಾರೆ ಕರೀನಾ.ಕರೀನಾ ಅವರು ರೋಹಿತ್ ಶೆಟ್ಟಿ ಅವರ ಪೋಸ್ಟ್ ರೀ ಪೋಸ್ಟ್‌ ಮಾಡಿ ʻʻಅವನಿ ಬಾಜಿರಾವ್ ಸಿಂಗಂ ನನ್ನ ಪಾತ್ರ ಈಗ. ರೋಹಿತ್‌ ಹಾಗೂ ನಾನು 2007ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವು. ಗೋಲ್ಮಾಲ್ ರಿಟರ್ನ್ಸ್, ಗೋಲ್ಮಾಲ್ 3, ಸಿಂಗಂ ರಿಟರ್ನ್ಸ್. ಇದೀಗ ಇದು ನಮ್ಮ ನಾಲ್ಕನೇ ಪ್ರಾಜೆಕ್ಟ್‌. 16 ವರ್ಷಗಳ ಸುದೀರ್ಘ ಒಡನಾಟ. ಏನೂ ಬದಲಾಗಿಲ್ಲʼʼಎಂದು ಬರೆದುಕೊಂಡಿದ್ದರು. ಇದೇ ಸಿನಿಮಾದಲ್ಲಿ ಅರ್ಜುನ್​ ಕಪೂರ್​ ಕೂಡ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇರುವುದರಿಂದ ಸಹಜವಾಗಿಯೇ ಹೈಪ್​ ಸೃಷ್ಟಿ ಆಗಿದೆ.

ಇದನ್ನೂ ಓದಿ: Singham Again: ʻಸಿಂಗಂ ಅಗೇನ್ʼ ಸಿನಿಮಾ; ಕರೀನಾ ಕಪೂರ್ ಲುಕ್‌ ಔಟ್‌!

ಈ ಹಿಂದೆ ಪೋಸ್ಟರ್‌ಗಳನ್ನು ಹಂಚಿಕೊಂಡ ಟೈಗರ್, “ಎಸಿಪಿ ಸತ್ಯ ರಿಪೋರ್ಟಿಂಗ್ ಆನ್ ಡ್ಯೂಟಿ ಸಿಂಗಂ ಸರ್ #ಸಿಂಗಂ ಅಗೇನ್” ಎಂದು ಬರೆದುಕೊಂಡಿದ್ದರು. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೀಗ ದೀಪಿಕಾ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಈ ಹಿಂದೆ ಅನಾವರಣಗೊಳಿಸಿತ್ತು. ಶಕ್ತಿ ಶೆಟ್ಟಿ ಪಾತ್ರದ ಹೆಸರು.

ರಕ್ತಸಿಕ್ತವಾಗಿ ದೀಪಿಕಾ ಕಂಡಿದ್ದು, ವ್ಯಕ್ತಿಯ ಬಾಯಿಯೊಳಗೆ ರಿವಾಲ್ವರ್ ಹಾಕಿ ಖಡಕ್‌ ಲುಕ್‌ ಕೊಟ್ಟಿದ್ದರು ದೀಪಿಕಾ. ಹಿಂದೆ ಬೆಂಕಿ, ಸುತ್ತಲೂ ಹೆಣಗಳ ರಾಶಿ, ಕಾರು ಅವಶೇಷಗಳು ಕಾಣಿಸಿಕೊಂಡಿದ್ದವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup 2024: ಸುದೀಪ್‌ ಸೇರಿದಂತೆ ಸೌತ್‌ ,ಬಾಲಿವುಡ್‌ ತಾರೆಯರು ವಿಶ್ವಕಪ್​ ಗೆಲುವನ್ನು  ಸಂಭ್ರಮಿಸಿದ್ದು ಹೀಗೆ!

T20 World Cup 2024: ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ.

VISTARANEWS.COM


on

T20 World Cup 2024 Celebrities Celebrates India ICC Cricket
Koo

ಬೆಂಗಳೂರು: ಅತ್ಯಂತ ರೋಚಕವಾಗಿ ನಡೆದ ಟಿ20 ವಿಶ್ವಕಪ್​ ಫೈನಲ್(T20 World Cup 2024) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa vs India) ತಂಡವನ್ನು 7 ರನ್​ಗಳಿಂದ ಮಣಿಸಿದ ಭಾರತ 2ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಜತೆಗೆ 13 ವರ್ಷಗಳ ಕಪ್​ ಬರಗಾಲ ಕೂಡ ನೀಗಿತು.  ಭಾರತ ಕ್ರಿಕೆಟ್ ತಂಡದ ಗೆಲುವನ್ನು ಸಿನಿಮಾ ಸೆಲೆಬ್ರಿಟಿಗಳು ಕೂಡ ಸಂಭ್ರಮಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಎಕ್ಸ್‌ ಖಾತೆಯಲ್ಲಿ ʻʻರಾಹುಲ್ ದ್ರಾವಿಡ್ ಸರ್ ನೀವು ನಮ್ಮ ಹೆಮ್ಮೆ. , ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯಾವದ. ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್​ಗೆ ವಿಶೇಷ ಧನ್ಯವಾದ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

ಅಮಿತಾಭ್‌ ಬಚ್ಚನ್‌ ಕೂಡ ʻʻಕಣ್ಣೀರು ಹರಿಯುತ್ತಿದೆ. ವಿಶ್ವ ಚಾಂಪಿಯನ್ಸ್ ಭಾರತ. ಭಾರತ ಮಾತಾ ಕಿ ಜಯ್‌. ಜಯ ಹಿಂದ್ ಜಯ ಹಿಂದ್ʼʼಎಂದು ಬರೆದುಕೊಂಡಿದ್ದಾರೆ.

ಇನ್ನು ನಟ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹ ಟ್ವೀಟ್ ಮಾಡಿದ್ದು, ಸರಳವಾಗಿ, ‘ಭಾರತ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸಹ ಟ್ವೀಟ್ ಮಾಡಿದ್ದು, ʻʻಈ ಕಪ್‌ ನಮ್ಮದು! ಹೀರೋಸ್-ಇನ್-ಬ್ಲೂ ಹೊಸ ‘ವಿಶ್ವ ಚಾಂಪಿಯನ್’! ಸೂರ್ಯ ಕುಮಾರ್‌ ಕ್ಯಾಚ್‌ ಅದ್ಭುತ. ಈ ಐತಿಹಾಸಿಕ ಗೆಲುವಿನ ಬಗ್ಗೆ ತುಂಬಾ ಹೆಮ್ಮೆ ಇದೆ. ಜೈ ಹಿಂದ್! ಎಂದು ಬರೆದುಕೊಂಡಿದ್ದಾರೆ.

ರಣದೀಪ್ ಹೂಡಾ “ಬುಮ್ರಾ ಸ್ವಿಂಗ್ ದೇವರು ಮತ್ತು ಅರ್ಶ್‌ದೀಪ್ ಮತ್ತು ಅಕ್ಸರ್ .. ಕೊಹ್ಲಿ ಬ್ಯಾಟ್ ಮತ್ತು ರೋಹಿತ್ ಗ್ರೇಟ್‌. ಧನ್ಯವಾದಗಳು ರಾಹುಲ್ ದ್ರಾವಿಡ್.”ಎಂದು ಬರೆದುಕೊಂಡಿದ್ದಾರೆ.

ಅನಿಲ್ ಕಪೂರ್, ಮತ್ತು ರಶ್ಮಿಕಾ ಮಂದಣ್ಣ, ಅನನ್ಯ ಪಾಂಡೆ, ರವೀನಾ ಟಂಡನ್ ರಣದೀಪ್ ಹೂಡಾ ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಹಲವು ಸಿನಿಮಾ ಸೆಲೆಬ್ರಿಟಿಗಳು ಭಾರತ ಕ್ರಿಕೆಟ್ ತಂಡದ ಅತ್ಯದ್ಭುತವಾದ ವಿಜಯಕ್ಕೆ ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Continue Reading

Latest

OTT Release : ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

OTT Release ನೀವು ಸಿನಿಮಾ ಪ್ರಿಯರಾಗಿದ್ದರೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾಗಳು ನಿಮಗೆ ಭರಪೂರ ಮನರಂಜನೆಯನ್ನು ನೀಡುವುದಂತೂ ಗ್ಯಾರಂಟಿ. ಎ ಫ್ಯಾಮಿಲಿ ಅಫೇರ್, ಆವೇಶಮ್, ಸಿವಿಲ್ ವಾರ್, ಸಾವೇಜ್ ಬ್ಯೂಟಿ ಸೀಸನ್ 2, ಶರ್ಮಾಜೀ ಕಿ ಬೇಟಿ, ದಿ ವೈರ್ಲ್ವಿಂಡ್ ಮುಂತಾದ ಸಿನಿಮಾಗಳು ನಿಮ್ಮನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗಲಿದೆ. ತಪ್ಪದೇ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಿ.

VISTARANEWS.COM


on

OTT Release
Koo

ಬೆಂಗಳೂರು : ಒಟಿಟಿ ಪ್ರತಿವಾರ ತನ್ನ ವೀಕ್ಷಕರಿಗೆ ಹೊಸ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡುತ್ತದೆ. ಆ ಮೂಲಕ ಒಟಿಟಿ ತನ್ನ ವೀಕ್ಷಕರನ್ನು ಸೆಳೆಯುವ ಯೋಜನೆ ಮಾಡುತ್ತಿದೆ. ಪ್ರತಿಬಾರಿ ಒಟಿಟಿಯಲ್ಲಿ ಉತ್ತಮವಾದ ಚಿತ್ರಗಳನ್ನು ಬಿಡುಗಡೆ ಮಾಡಿ ವೀಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದೆ. ಹಾಗಾದ್ರೆ ಒಟಿಟಿ(OTT Release )ಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಬಗ್ಗೆ ತಿಳಿದುಕೊಳ್ಳೋಣ.

OTT Release

ಎ ಫ್ಯಾಮಿಲಿ ಅಫೇರ್(A Family Affair):

ಒಬ್ಬ ಯುವತಿ, ಆಕೆಯ ತಾಯಿ ಮತ್ತು ಆಕೆಯ ನೆಚ್ಚಿನ ಸಿನಿಮಾ ತಾರೆ ಬಾಸ್ ಅವರ ಪ್ರೀತಿ, ಸೆಕ್ಸ್ ಅನ್ನು ನ್ಯಾವಿಗೇಟ್ ಮಾಡುವುದರಿಂದ ಅವರ ಪ್ರಣಯ ಹಾಸ್ಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ.

ಇದರಲ್ಲಿ ನಿಕೋಲ್ ಕಿಡ್ಮನ್, ಜಾಕ್ ಎಫ್ರಾನ್, ಜೋಯಿ ಕಿಂಗ್ ನಟಿಸಿದ್ದಾರೆ. ಇದು ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಆವೇಶಮ್ (ಹಿಂದಿ) (Aavesham (Hindi):

ಮೂವರು ಹದಿಹರೆಯದ ಬಾಲಕರು ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದು ಅಲ್ಲಿ ಜಗಳವಾಡುತ್ತಾರೆ. ನಂತರ ಅವರು ಹೊಡೆದಾಡಲು ಸ್ಥಳೀಯ ದರೋಡೆಕೋರನ ಸಹಾಯವನ್ನು ಪಡೆಯುತ್ತಾರೆ.

ಇದರಲ್ಲಿ ಫಹಾದ್ ಫಾಸಿಲ್, ಹಿಪ್‌ಸ್ಟರ್‌, ಸಜಿನ್ ಗೋಪು, ಮಿಥುನ್ ಜೈ ಶಂಕರ್ ನಟಿಸಿದ್ದಾರೆ. ಇದು ಹಾಸ್ಯ ಹಾಗೂ ಆ್ಯಕ್ಷನ್ ಚಿತ್ರವಾಗಿದ್ದು, ಜೂನ್ 28ರಂದು ಡಿಸ್ನಿ ಪ್ಲಸ್ ಹಾಟ್ಸ್ಸ್ಟಾರ್ನಲ್ಲಿ ಪ್ರಸಾರವಾಗಿದೆ.

OTT Release

ಸಿವಿಲ್ ವಾರ್ (Civil War):

ಯುಎಸ್ ಅಂತರ್ಯುದ್ಧದ ಸಮಯದಲ್ಲಿ ವಾರ್ ಜರ್ನಲಿಸ್ಟ್ ತಂಡವು ನ್ಯೂಯಾರ್ಕ್ ನಗರದಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸುತ್ತದೆ. ಬಂಡುಕೋರರು ರಾಜಧಾನಿಯನ್ನು ವಶಪಡಿಸಿಕೊಳ್ಳುವ ಮೊದಲು ಯುಎಸ್ ಅಧ್ಯಕ್ಷರನ್ನು ಸಂದರ್ಶಿಸುವ ಗುರಿಯನ್ನು ಅವರು ಹೊಂದಿರುತ್ತಾರೆ.

ಇದರಲ್ಲಿ ಕ್ರಿಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್ ನಟಿಸಿದ್ದಾರೆ. ಇದು ಆ್ಯಕ್ಷನ್, ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಿದೆ.

OTT Release

ರೌತು ಕಾ ರಾಜ್(Rautu Ka Raaz):

ಉತ್ತರಾಖಂಡದ ತೆಹ್ರಿಯ ರೌತು ಕಿ ಬೇಲಿ ಗ್ರಾಮದ ಅಂಧರ ಶಾಲೆಯ ವಾರ್ಡನ್ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗುತ್ತಾನೆ. ಈ ಪ್ರಕರಣದ ತನಿಖೆ ಮಾಡಲು ಇನ್ಸ್ಪೆಕ್ಟರ್ ದೀಪಕ್ ನೇಗಿ ಅವರನ್ನು ಕರೆಸಲಾಗುತ್ತದೆ.

ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ರಾಜೇಶ್ ಕುಮಾರ್, ಅತುಲ್ ತಿವಾರಿ, ನಾರಾಯಣಿ ಶಾಸ್ತ್ರಿ ನಟಿಸಿದ್ದಾರೆ. ಇದು ಮಿಸ್ಟರಿ/ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.

OTT Release

ಸಾವೇಜ್ ಬ್ಯೂಟಿ ಸೀಸನ್ 2 (Savage Beauty Season 2):

ನಿಗೂಢ ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹಿಂದೆ ನಡೆದ ದುರಂತಕ್ಕೆ ಸೇಡು ತೀರಿಸಿಕೊಳ್ಳಲು ಜಾಗತಿಕ ಸೌಂದರ್ಯ ಸಾಮ್ರಾಜ್ಯ ಮತ್ತು ಕರಾಳ ರಹಸ್ಯಗಳನ್ನೊಳಗೊಂಡ ಪ್ರಬಲ ಕುಟುಂಬಕ್ಕೆ ಬರುತ್ತಾಳೆ.

ಈ ಚಿತ್ರದಲ್ಲಿ ನಂಬಿತಾ ಬೆನ್-ಮಜ್ವಿ, ರೋಸ್ಮರಿ ಜಿಮು, ಎನ್ಥಾಟಿ ಮೋಶೆಶ್, ದುಮಿಸಾನಿ ಎಂಬೆಬೆ ನಟಿಸಿದ್ದಾರೆ. ಇದು ಥ್ರಿಲ್ಲರ್/ಡ್ರಾಮಾ ಚಿತ್ರವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಶರ್ಮಾಜೀ ಕಿ ಬೇಟಿ (Sharmajee Ki Beti):

ಶರ್ಮಾ ಎಂಬ ಉಪನಾಮ ಹೊಂದಿರುವ ಮೂವರು ಮಹಿಳೆಯರನ್ನು ಕಥೆ ಅನುಸರಿಸುತ್ತದೆ. ಅವರ ಜೀವನವು ಸರಿಯಾದ ದಾರಿಯಲ್ಲಿ ಚಲಿಸಿದರೂ ಕೂಡ ಅವರು ಸಂಕ್ಷಿಪ್ತವಾದ ಮಾರ್ಗಗಳನ್ನು ದಾಟುತ್ತಾರೆ, ಇದು ಅವರ ಜೀವನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ.

ಈ ಚಿತ್ರದಲ್ಲಿ ಸಾಕ್ಷಿ ತನ್ವರ್, ದಿವ್ಯಾ ದತ್ತಾ, ಸಯಾಮಿ ಖೇರ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ:  ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

ದಿ ವೈರ್ಲ್ವಿಂಡ್(The Whirlwind):

ದಕ್ಷಿಣ ಕೊರಿಯಾದ ಸರ್ಕಾರದಲ್ಲಿ, ಭ್ರಷ್ಟಾಚಾರವನ್ನು ನಿಭಾಯಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ಪಾರ್ಕ್ ಡಾಂಗ್ ಹೋ, ಎಂಬವವರು ಅಲ್ಲಿನ ಅಧ್ಯಕ್ಷರ ಹತ್ಯೆಯನ್ನು ಧೈರ್ಯದಿಂದ ಆಯೋಜಿಸುತ್ತಾರೆ.

ಇದರಲ್ಲಿ ಸೋಲ್ ಕ್ಯೂಂಗ್-ಗು, ಕಿಮ್ ಹೀ-ಎ, ಲೀ ಹೇ ಯಂಗ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Continue Reading

Latest

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

Deepika Padukone ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

VISTARANEWS.COM


on

deepika padukone
Koo

ಮುಂಬೈ : ಬಾಲಿವುಡ್ ಖ್ಯಾತ ನಟಿಯರಲ್ಲಿ ದೀಪಿಕಾ ಪಡುಕೋಣೆ (Deepika Padukone )ಕೂಡ ಒಬ್ಬರು. ಇವರು ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಖ್ಯಾತನಟಿ ದೀಪಿಕಾ ಪಡುಕೋಣೆ ಅವರ ‘ಕಲ್ಕಿ 2898 ಎಡಿ’ ಚಿತ್ರದ ಬೆಂಕಿಯಲ್ಲಿ ನಡೆದು ಬರುವ ಅವರ ನಗ್ನ ಚಿತ್ರ ಸೋರಿಕೆಯಾಗಿದೆ.

Deepika Padukone

ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ಆದರೆ ಈ ಚಿತ್ರದ ಕೆಲವು ದೃಶ್ಯಗಳು, ಹಲವಾರು ಫೋಟೊಗಳು ಮತ್ತು ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ.

Deepika Padukone

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ ದೀಪಿಕಾ ಬೆಂಕಿಯ ಮೂಲಕ ನಡೆಯುತ್ತಾ ಬರುವಾಗ ಅವರ ಬಟ್ಟೆಗಳು ಬೆಂಕಿಗೆ ಉರಿದುಹೋಗುತ್ತಿದ್ದಂತೆ, ಅವರು ತಮ್ಮ ಎದೆಯನ್ನು ತಮ್ಮ ಕೈಯಿಂದ ಮುಚ್ಚಿಕೊಳ್ಳುತ್ತಾರೆ. ದೀಪಿಕಾ ಅವರ ಈ ಪಾತ್ರವು ಕಥಾಹಂದರಕ್ಕೆ ಪ್ರಮುಖವಾಗಿರುವುದರಿಂದ ಅವರ ಈ ಪಾತ್ರದ ಬಗ್ಗೆ ಚಿತ್ರತಂಡ ಬಹಿರಂಗಪಡಿಸಿರಲಿಲ್ಲ.

ಆದರೂ ಈ ವಿಡಿಯೋ ಸೋರಿಕೆಯಾಗಿದೆ. ಆದರೆ ಇದರಲ್ಲಿ ನಟಿಯ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಬಳಕೆದಾರರು ಈ ಬೆಂಕಿಯ ದೃಶ್ಯವನ್ನು ‘ಅಪ್ರತಿಮ’ ಎಂದು ಕರೆದಿದ್ದಾರೆ.

Deepika Padukone

ದೀಪಿಕಾ ಪಡುಕೋಣೆಯವರ ಇಡೀ ವೃತ್ತಿಜೀವನದ ಅತ್ಯಂತ ಅಪ್ರತಿಮ ದೃಶ್ಯ ಇದಾಗಿದೆ ಎಂದು ಒಬ್ಬ ಬಳಕೆದಾರ ತಿಳಿಸಿದರೆ, ಮತ್ತೊಬ್ಬರು “ದೀಪಿಕಾ ಉರಿಯುತ್ತಿರುವ ಬೆಂಕಿಯ ಮೂಲಕ ನಡೆಯುವುದು ಯುಗಾಂತರಗಳ ದೃಶ್ಯವಾಗಿದೆ” ಎಂದು ಬರೆದಿದ್ದಾರೆ.

ಈ ನಡುವೆ ‘ಕಲ್ಕಿ 2898 ಎಡಿ’ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆಯಾದಾಗ ಚಿತ್ರತಂಡ ಚಲನಚಿತ್ರದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಚಿತ್ರ 4 ವರ್ಷಗಳ ಸುದೀರ್ಘ ಪ್ರಯಾಣ ಮತ್ತು ಇದು ನಾಗ್ ಅಶ್ವಿನ್ ಮತ್ತು ತಂಡದ ಅಪಾರ ಪರಿಶ್ರಮದ ಕಥೆಯಾಗಿದೆ.

Deepika Padukone

ಇದನ್ನೂ ಓದಿ: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

ಈ ಕಥೆಯನ್ನು ಜಾಗತಿಕ ಮಟ್ಟಕ್ಕೆ ತರುವಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಇದನ್ನು ಮುಂದೆ ತರಲು ತಂಡವು ರಕ್ತ ಮತ್ತು ಬೆವರು ಹರಿಸಿದೆ. ಹಾಗಾಗಿ ದಯವಿಟ್ಟು ಸಿನಿಮಾವನ್ನು ಗೌರವಿಸೋಣ. ಅದಕ್ಕಾಗಿ ಸಿನಿಮಾ ತುಣುಕುಗಳನ್ನು ಹಂಚಿಕೊಳ್ಳಬೇಡಿ. ನಿಮಿಷದಿಂದ ನಿಮಿಷಕ್ಕೆ ಅಪ್ಡೇಟ್ ನೀಡಬೇಡಿ ಅಥವಾ ಪೈರಸಿಯಲ್ಲಿ ತೊಡಗಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಈ ಚಿತ್ರದ ಪ್ರಮುಖ ದೃಶ್ಯ ಸೋರಿಕೆಯಾಗಿರುವುದು ಬೇಸರವೇ ಸರಿ.

Continue Reading

ಪ್ರಮುಖ ಸುದ್ದಿ

Shah Rukh Khan: ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

Shah Rukh Khan ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಹಿಟ್ ಚಿತ್ರಗಳನ್ನು ಮಾಡಿದ ಹಿರಿಯ ನಟ ಗೋವಿಂದ್ ನಾಮದೇವ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಇಬ್ಬರು ಬಾಲಿವುಡ್ ಸೂಪರ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆಲಸದ ಬಗ್ಗೆ ತುಂಬಾ ನಿಷ್ಠೆ ಇರುವ ನಟ ಶಾರೂಕ್ ಖಾನ್ ರಾತ್ರಿಯಿಡೀ ಚಿತ್ರತಂಡದೊಂದಿಗೆ ಸೇರಿಕೊಂಡು ಮುಂಜಾನೆ 2 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು. ಅವರು ಮೂರೂವರೆ ಅಥವಾ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡುತ್ತಿರಲಿಲ್ಲ.ಇನ್ನೂ ಧೂಮಪಾನದ ಚಟ ಕೂಡ ಇವರಿಗೆ ವಿಪರೀತವಿತ್ತು ಎಂದು ಹೇಳಿದ್ದಾರೆ.

VISTARANEWS.COM


on

Shah Rukh Khan
Koo

ಮುಂಬೈ : ಶಾರುಖ್ ಖಾನ್ (Shah Rukh Khan) ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ನಟರೆನಿಸಿಕೊಂಡಿದ್ದಾರೆ. ದೇಶ, ವಿದೇಶಗಳಲ್ಲಿ ಕೊಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಈ ನಟನ ಧೂಮಪಾನ ಚಟದ ಕುರಿತು ಹಿರಿಯ ನಟ ಗೋವಿಂದ್ ನಾಮದೇವ್ ಅವರು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಹಿಟ್ ಚಿತ್ರಗಳನ್ನು ಮಾಡಿದ ಹಿರಿಯ ನಟ ಗೋವಿಂದ್ ನಾಮದೇವ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಇಬ್ಬರು ಬಾಲಿವುಡ್ ಸೂಪರ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

Shah Rukh Khan

2000ರಲ್ಲಿ ಬಿಡುಗಡೆಯಾದ “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಶಾರುಖ್ ಖಾನ್ ಅವರ ಜೊತೆ ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರವನ್ನು ಶಾರುಖ್ ಖಾನ್, ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಮತ್ತು ಚಲನಚಿತ್ರ ನಿರ್ಮಾಪಕ ಅಜೀಜ್ ಮಿರ್ಜಾ ನಿರ್ಮಿಸಿದ್ದು, ಡ್ರೀಮ್ಜ್ ಅನ್ಲಿಮಿಟೆಡ್ ನಿರ್ಮಾಣ ಮಾಡಿದೆ.

Shah Rukh Khan

ನಟ ಶಾರುಖ್ ಖಾನ್ ಅವರು ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಹಾಗಾಗಿ ಅವರು ದಿನವಿಡೀ ಕೆಲಸ ಮಾಡುತ್ತಿದ್ದರು, ರಾತ್ರಿಯಿಡೀ ಚಿತ್ರತಂಡದೊಂದಿಗೆ ಸೇರಿಕೊಂಡು ಮುಂಜಾನೆ 2 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು. ಅವರು ಸಮಾರಂಭವೊಂದರಲ್ಲಿ ಭಾಗವಹಿಸಲು ಚೆನ್ನೈಗೆ ಮುಂಜಾನೆ ವಿಮಾನದಲ್ಲಿ ತೆರಳಬೇಕಾಗಿತ್ತು, ನಂತರ ಹಿಂತಿರುಗಿ ಬಂದು ಮತ್ತೆ ಚಿತ್ರೀಕರಣವನ್ನು ಪುನರಾರಂಭಿಸಬೇಕಾಗಿತ್ತು. ಹಾಗಾಗಿ ಅವರು ಮೂರೂವರೆ ಅಥವಾ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡುತ್ತಿರಲಿಲ್ಲ.

ಹಾಗಾಗಿ ಅವರು ಚಿಮಣಿಯಂತೆ ಧೂಮಪಾನ ಮಾಡುತ್ತಿದ್ದರು ಮತ್ತು ಕೆಲಸ ಮಾಡುತ್ತಲೇ ಇರುತ್ತಿದ್ದರು, ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಲೇ ಇರುತ್ತಾರೆ. ಸೂಪರ್‌ ಸ್ಟಾರ್‌ಗಳಲ್ಲಿ ಸಾಮಾನ್ಯವಾಗಿ ಈ ಮನೋಭಾವ ಇರುತ್ತದೆ ಎಂದು ಗೋವಿಂದ್ ಅವರು ಶಾರುಖ್ ಖಾನ್ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಈ ಆರು ಯೂಟ್ಯೂಬರ್‌ಗಳು ಜೈಲು ಪಾಲಾಗಲು ಶಾರುಖ್‌ ಖಾನ್‌ ಕಾರಣವಂತೆ!

ಆದರೆ ಬೋನಿ ಕಪೂರ್ ನಿರ್ಮಿಸಿದ ಆಕ್ಷನ್ ಚಿತ್ರ ‘ವಾಂಟೆಡ್’ ನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಗೋವಿಂದ್ ಅವರು, ನಟ ಸಲ್ಮಾನ್ ಖಾನ್ ಅವರು ನಟ ಶಾರುಖ್ ಖಾನ್ ಅವರಿಗೆ ವಿರುದ್ಧವಾಗಿದ್ದರು. ಯಾಕೆಂದರೆ ಅವರು ಹೆಚ್ಚು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇತರರೊಂದಿಗೆ ಸಂವಹನ ನಡೆಸುವ ವಿಷಯದಲ್ಲಿ ಅವರು ಶಾರುಖ್ ಖಾನ್‌ಗೆ ವಿರುದ್ಧವಾಗಿದ್ದಾರೆ” ಎಂದು ಅವರು ಹೇಳಿದರು.

Continue Reading
Advertisement
Road Accident
ಕ್ರೈಂ6 mins ago

Road Accident: ಕೂಡ್ಲಿಗಿಯಲ್ಲಿ ಮತ್ತೊಂದು ರಸ್ತೆ ಅಪಘಾತ; ಇಬ್ಬರ ಸಾವು

Virat Kohli (
ಕ್ರೀಡೆ7 mins ago

Virat Kohli: ಗೆಲುವಿನ ಬಳಿಕ ಪಂಜಾಬಿ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ ವಿರಾಟ್​ ಕೊಹ್ಲಿ

T20 World Cup 2024 Celebrities Celebrates India ICC Cricket
ಕ್ರಿಕೆಟ್9 mins ago

T20 World Cup 2024: ಸುದೀಪ್‌ ಸೇರಿದಂತೆ ಸೌತ್‌ ,ಬಾಲಿವುಡ್‌ ತಾರೆಯರು ವಿಶ್ವಕಪ್​ ಗೆಲುವನ್ನು  ಸಂಭ್ರಮಿಸಿದ್ದು ಹೀಗೆ!

T20 World Cup 2024 Netizen Thanking Darshan For India World Cup Win
ಸ್ಯಾಂಡಲ್ ವುಡ್35 mins ago

T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

Rohit Sharma
ಕ್ರೀಡೆ37 mins ago

Rohit Sharma: ಗೆಲುವಿನ ಸವಿ ನೆನಪಿಗಾಗಿ ಪಿಚ್​ನ ಮಣ್ಣು ತಿಂದ ರೋಹಿತ್​; ವಿಡಿಯೊ ವೈರಲ್​

swim benefits
ಆರೋಗ್ಯ1 hour ago

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

T20 World Cup 2024
ಕ್ರಿಕೆಟ್1 hour ago

T20 World Cup 2024: ಟಿ20 ವಿಶ್ವಕಪ್​ ಮುಡಿಗೇರಿಸಿಕೊಂಡ ಭಾರತ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಹೀಗಿತ್ತು

tamanna bhatia gold
ಸಿನಿಮಾ2 hours ago

Actress Tamanna Bhatia: ಬೆಂಗಳೂರಿನ ಶಾಲೆಯಲ್ಲಿ ನಟಿ ತಮನ್ನಾ ಭಾಟಿಯಾ ಬಗ್ಗೆ ಪಾಠ; ಪೋಷಕರ ಆಕ್ಷೇಪ

Viral Video
Latest2 hours ago

Viral Video: ಮನೆಯ ಹೊರಗೆ ತಾಯಿಯ ಜೊತೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!

Parenting Tips
ಶಿಕ್ಷಣ2 hours ago

Parenting Tips: ಕಾಲೇಜಿಗೆ ಹೊರಡಲು ಸಿದ್ಧವಾಗಿರುವ ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಸಂಗತಿಗಳಿವು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ16 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ22 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌