Sukesh Chandrashekhar: ʻಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಜಾಕ್ವೆಲಿನ್​ಗೆ ವಂಚಕನ ಲವ್ ಲೆಟರ್! - Vistara News

ಬಾಲಿವುಡ್

Sukesh Chandrashekhar: ʻಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಜಾಕ್ವೆಲಿನ್​ಗೆ ವಂಚಕನ ಲವ್ ಲೆಟರ್!

Sukesh Chandrashekhar: ಆರೋಪಿ ಸುಕೇಶ್ ನಟಿ ಜಾಕ್ವೆಲಿನ್‌ ಅವರಿಗೆ ಪತ್ರಗಳನ್ನು ಬರೆಯುತ್ತಲೇ ಇರುತ್ತಾನೆ. ಕ್ರಿಸ್​ಮಸ್ ಸಂದರ್ಭದಲ್ಲಿ ನಟಿಗೆ ಪ್ರೀತಿಯ ಕರೆಯೋಲೆ ಕಳುಹಿಸಿದ್ದಾನೆ. ಇದರಲ್ಲಿ ಅವರು ‘ಲವ್​’, ‘ಬೇಬಿ’ ಎಂದೆಲ್ಲ ಬರೆದುಕೊಂಡಿದ್ದಾನೆ.

VISTARANEWS.COM


on

Sukesh Chandrasekhar with Jacqueline
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೂರಾರು ಕೋಟಿ ರೂ. ಸುಲಿಗೆ ಪ್ರಕರಣ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಬಂಧಿಸಲಾಗಿದ್ದು, ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರಿಗೆ ಸಮನ್ಸ್ ನೀಡಲಾಗಿದೆ.  ಗೆಳತಿ ಜಾಕ್ವೆಲಿನ್‌ ಫರ್ನಾಂಡಿಸ್‌ ಈಗಾಗಲೇ ಹಲವು ಬಾರಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಅವರ ಸಂಬಂಧವನ್ನು ನಿರಾಕರಿಸಿದ್ದರೂ ಆತ ಪದೇ ಪದೇ ಜಾಕ್ವೆಲಿನ್ ಅವರನ್ನು ಕಾಡುತ್ತಿದ್ದಾನೆ. ಆರೋಪಿ ಸುಕೇಶ್ ನಟಿ ಜಾಕ್ವೆಲಿನ್‌ ಅವರಿಗೆ ಪತ್ರಗಳನ್ನು ಬರೆಯುತ್ತಲೇ ಇರುತ್ತಾನೆ. ಕ್ರಿಸ್​ಮಸ್ ಸಂದರ್ಭದಲ್ಲಿ ನಟಿಗೆ ಪ್ರೀತಿಯ ಕರೆಯೋಲೆ ಕಳುಹಿಸಿದ್ದಾನೆ. ಇದರಲ್ಲಿ ಅವರು ‘ಲವ್​’, ‘ಬೇಬಿ’ ಎಂದೆಲ್ಲ ಬರೆದುಕೊಂಡಿದ್ದಾನೆ.

ಪತ್ರದಲ್ಲಿ ʻʻಬೇಬಿ ಸೋ ಸೋ ಹ್ಯಾಪಿ ಫಾರ್ ಯೂ. ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ DIAFA ಅವಾರ್ಡ್ ನೀಡಲಾಗಿದೆ. ಪ್ರಶಸ್ತಿಗಳನ್ನು ಸ್ವೀಕರಿಸಿದ್ದಕ್ಕಾಗಿ ಅಭಿನಂದನೆಗಳು. ನೀವು ನಿಜವಾಗಿಯೂ ಶ್ರೇಷ್ಠ ಪ್ರದರ್ಶನಕಾರರು. ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ “ವೈಟ್ ಗೌನ್” ನಲ್ಲಿ ಅದ್ಭುತವಾಗಿ ಕಂಡಿದ್ದೀರಿ. ನನಗೆ ಎಷ್ಟು ಖುಷಿ ಆಗಿದೆ ಎಂದು ಹೇಳಲು ಸಾಧ್ಯವೇ ಇಲ್ಲʼʼಎಂದು ಹೇಳಿದ್ದಾನೆ.

ಜಾಕ್ವೆಲಿನ್‌ ಅವರ ಇತರ ಕೆಲವು ಫೋಟೊಗಳ ಬಗ್ಗೆ ಸುಕೇಶ್ ಮತ್ತಷ್ಟು ಮಾತನಾಡುತ್ತಾ,ʻʻಬೇಬಿ ರೆಡ್ ಅರೇಬಿಕ್ ಡ್ರೆಸ್ ಹಾಗೂ ಪಿಂಕ್ ಬಣ್ಣದ ಸೀರೆಯಲ್ಲಿ ನೀನು ಸಖತ್ ಆಗಿ ಕಾಣಿಸುತ್ತೀಯ. ಗ್ಲಿಟರಿ ಲೆಹೆಂಗಾದಲ್ಲಿರುವ ಫೋಟೊ ನನ್ನ ಹೃದಯವನ್ನು ಕದ್ದಿದೆ. ಬೇಬಿ ಈ ಗ್ರಹದಲ್ಲಿ ನನಗೆ ನೀವು ಸಿಕ್ಕ ಏಕೈಕ ಜೀವಂತ ದೇವತೆ. ಲೆಹೆಂಗಾದಲ್ಲಿ ನೋಡುವಾಗ ʻಸೋ ಬ್ಯೂಟಿಫುಲ್ ಸೋ ಸ್ಟನ್ನಿಂಗ್. ಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: Sukesh Chandrashekhar: ಜಾಕ್ವೆಲಿನ್‌ ಹುಟ್ಟುಹಬ್ಬಕ್ಕೆ ಸೂಪರ್ ಸರ್ಪ್ರೈಸ್ ನೀಡಲಿದ್ದಾನಂತೆ ವಂಚಕ ಸುಕೇಶ್‌; ಪತ್ರದಲ್ಲಿ ಏನಿದೆ?

ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರವೇನೂ ಗುಟ್ಟಾಗಿ ಉಳಿದಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ ಸುಕೇಶ್ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು. ವಂಚಕ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಜತೆ ಅದ್ಧೂರಿ, ಐಷಾರಾಮಿ ಸಮಯವನ್ನು ಕಳೆದಿದ್ದ. ಲಿಮಿಟಿಡ್ ಎಡಿಷನ್ ಪರ್ಫ್ಯೂಮ್ಸ್, ಡಿಸೈನರ್ ಬ್ಯಾಗ್ಸ್, ಬಟ್ಟೆಗಳು, ಪ್ರೈವೆಟ್ ಜೆಟ್ಸ್ ಇತ್ಯಾದಿ ಅದ್ದೂರಿ ಜೀವನಕ್ಕೆ ಏನೂ ಭರವಿರಲಿಲ್ಲ. ಹಾಗಾಗಿ, ಜಾಕ್ವೆಲಿನ್ ಸಂಪೂರ್ಣವಾಗಿ ಸುಕೇಶ್ ಹಿಡಿತದಲ್ಲಿದ್ದಳು. ಅಲ್ಲದೇ, ತನ್ನ ಕನಸಿನ ಗಂಡು ಸಿಕ್ಕಿದ್ದಾನೆ, ನಾನು ಮದುವೆಯಾಗಲಿದ್ದೇನೆ ಎಂದು ಜಾಕ್ವೆಲಿನ್ ತನ್ನ ಸ್ನೇಹಿತೆಯರ ಮುಂದೆ ಹೇಳಿಕೊಂಡಿದ್ದಳು.

ಸುಕೇಶ್‌ ಚಂದ್ರಶೇಖರ್‌ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್‌ ನಂಟೂ ಬಿಚ್ಚಿಟ್ಟಿದೆ. ಸುಕೇಶ್‌ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್‌ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

India Couture Week 2024: ಕೌಚರ್ ವೀಕ್ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಂಚಿದ ರಶ್ಮಿಕಾ- ವಿಕ್ಕಿ ಕೌಶಲ್!

India Couture Week 2024: ಫಲ್ಗುಣಿ ಶೇನ್ ಪೀಕಾಕ್ ಅವರು ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ರ‍್ಯಾಂಪ್ನಲ್ಲಿ ತಮ್ಮ ಶೋ ಸ್ಟಾಪರ್‌ಗಳಾಗಿ ಆಯ್ಕೆ ಮಾಡಿದ್ದರು. ವಿಕ್ಕಿ ಕ್ರೀಮ್ ಕಸೂತಿಯ ಶೇರ್ವಾನಿ ಧರಿಸಿದ್ದರೆ, ರಶ್ಮಿಕಾ ಐವರಿ ಲೆಹೆಂಗಾ ಸೆಟ್‌ನಲ್ಲಿ ಕಂಗೊಳಿಸಿದ್ದರು.

VISTARANEWS.COM


on

India Couture Week 2024 Vicky Kaushal Rashmika Mandanna turn showstoppers
Koo

ಬೆಂಗಳೂರು: ಬುಧವಾರ ನಡೆದ ಹ್ಯುಂಡೈ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ರ‍್ಯಾಂಪ್ (Falguni Shane Peacock) ವಾಕ್‌ ಮಾಡಿದರು. ಫ್ಯಾಶನ್ ಡಿಸೈನ್ ಕೌನ್ಸಿಲ್ (FDCI) X ಇಂಡಿಯಾ ಕೌಚರ್ ವೀಕ್‌ನ (India Couture Week 2024) ಮುಕ್ತಾಯದ ಪ್ರದರ್ಶನದಲ್ಲಿ ವಿನ್ಯಾಸಕರು ತಮ್ಮ ಇತ್ತೀಚಿನ ಸಂಗ್ರಹವನ್ನು ಪ್ರಸ್ತುತಪಡಿಸಿದರು.

ಇಂಡಿಯಾ ಕೌಚರ್ ವೀಕ್‌ನ ಮುಕ್ತಾಯದ ಕಾರ್ಯಕ್ರಮದಲ್ಲಿ ಫಲ್ಗುಣಿ ಶೇನ್ ಪೀಕಾಕ್ ತಮ್ಮ ಹೊಸ ಸಂಗ್ರಹವಾದ ರಂಗ್ ಮಹಲ್ ಅನ್ನು ಪ್ರಸ್ತುತಪಡಿಸಿದರು. ಈ ಧಿರಸಿಗಳು ಐಷಾರಾಮಿ ರೇಷ್ಮೆಗಳು, ಶ್ರೀಮಂತ ವೆಲ್ವೆಟ್‌ಗಳು ಒಳಗೊಂಡಿದೆ. ಭಾರತದ ರಾಜಮನೆತನದ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ. ವಿನ್ಯಾಸಗಾರರಾದ ಫಲ್ಗುಣಿ ಪೀಕಾಕ್ ಮತ್ತು ಶೇನ್ ಪೀಕಾಕ್ ಅವರು ಇತ್ತೀಚೆಗೆ ಸಿದ್ಧಪಡಿಸಿದ “ರಂಗ್ ಮಹಲ್” ಪ್ರಸ್ತುತಪಡಿಸಿದರು. ಸಾಂಪ್ರದಾಯಿಕ ಹಾಗೂ ಭಾರತೀಯ ಕರಕುಶಲತೆಗೆ ಸಾಕ್ಷಿಯಾದ ಡಿಸೈನರ್‌ವೇರ್‌ಗಳು ಅನಾವರಣಗೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದವು.

ಫಲ್ಗುಣಿ ಶೇನ್ ಪೀಕಾಕ್ ಅವರು ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ರ‍್ಯಾಂಪ್ನಲ್ಲಿ ತಮ್ಮ ಶೋ ಸ್ಟಾಪರ್‌ಗಳಾಗಿ ಆಯ್ಕೆ ಮಾಡಿದ್ದರು. ವಿಕ್ಕಿ ಕ್ರೀಮ್ ಕಸೂತಿಯ ಶೇರ್ವಾನಿ ಧರಿಸಿದ್ದರೆ, ರಶ್ಮಿಕಾ ಐವರಿ ಲೆಹೆಂಗಾ ಸೆಟ್‌ನಲ್ಲಿ ಕಂಗೊಳಿಸಿದ್ದರು.

ಇದನ್ನೂ ಓದಿ: Vicky Kaushal: ಸೀರೆಯುಟ್ಟು ʻತೌಬಾ ತೌಬಾʼ ಸಾಂಗ್‌ಗೆ ಮಹಿಳೆಯ ಸಖತ್‌ ಸ್ಟೆಪ್ಸ್‌; ಹುಬ್ಬೇರಿಸಿದ ವಿಕ್ಕಿ ಕೌಶಲ್!

ಮಿನುಗು ಮತ್ತು ಬೀಡ್‌ವರ್ಕ್‌ನಿಂದ ಅಲಂಕರಿಸಲ್ಪಟ್ಟ ಅದ್ಭುತವಾದ ಲೆಹೆಂಗಾದಲ್ಲಿ ರಶ್ಮಿಕಾ ಕಾಣಿಸಿಕೊಂಡರೆ, ಬೀಜ್-ಬಣ್ಣದ ಬಟನ್-ಅಪ್ ಬನಾರಸ್ ಬ್ರೋಕೇಡ್ ಶೆರ್ವಾನಿಯಲ್ಲಿ ವಿಕ್ಕಿ ಕೌಶಲ್ ಗಮನ ಸೆಳೆದರು.

ಸಿನಿಮಾ ವಿಚಾರಕ್ಕೆ ಬಂದರೆ ವಿಕ್ಕಿ ಕೌಶಲ್ ಅವರು ಬ್ಯಾಡ್ ನ್ಯೂಜ್‌ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಕ್ಕಿ ಹಾಗೂ ರಶ್ಮಿಕಾ ಮುಂದೆ ಸೌಂದರ್ಯ ಸ್ಪರ್ಧೆಯಲ್ಲಿ ‘ಛಾವಾ’ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. . ವಿಕ್ಕಿ ಕೌಶಲ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧವಾಗಿರುವ ರಶ್ಮಿಕಾ ಮಂದಣ್ಣ ಚಿತ್ರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ಅವರ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ವಿಕ್ಕಿ ಕೌಶಲ್ ಅವರು ದೇಹದ ತೂಕ ಹೆಚ್ಚಿಸಿಕೊಳ್ಳಲು ಬೇರೆ ಡಯಟ್ ಫಾಲೋ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ. ರಶ್ಮಿಕಾ ಈಗಾಗಲೇ ಈ ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ. ಕತ್ತಿ ಕಾಳಗ, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾಗಲು ನಾಲ್ಕು ತಿಂಗಳ ಕಾಲ ತರಬೇತಿಯನ್ನು ವಿಕ್ಕಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ಸ್ತ್ರೀ’, ‘ಭೇಡಿಯಾ’ ಮೊದಲಾದ ಸಿನಿಮಾಗಳಿಗೆ ಬಂಡವಾಳ ಹೂಡಿದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ʻಛಾವಾʼ ಸಿನಿಮಾ ಈ ಪ್ರೊಡಕ್ಷನ್ ಹೌಸ್‌ನ ಮೊದಲ ಐತಿಹಾಸಿಕ ಯೋಜನೆಯಾಗಿದೆ. ಈ ಯೋಜನೆ ವಿಕ್ಕಿ ಮತ್ತು ರಶ್ಮಿಕಾ ಅವರ ಮೊದಲ ಸಹಯೋಗವಾಗಿದೆ. ಈ ಹಿಂದೆ ಒಳಉಡುಪುಗಳ ಜಾಹೀರಾತಿಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ರಶ್ಮಿಕಾ ಕೊನೆಯದಾಗಿ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಕಾಣಿಸಿಕೊಂಡಿದ್ದರು.

Continue Reading

ವೈರಲ್ ನ್ಯೂಸ್

Urfi Javed: ಚಿಟ್ಟೆ, ಬ್ರಹ್ಮಾಂಡ ಎಲ್ಲಾ ಆಯ್ತು! ಈಗ ಅಕ್ಟೋಪಸ್​​ನಂತೆ ಬಂದ ಉರ್ಫಿ!

Urfi Javed: ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್​. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು.

VISTARANEWS.COM


on

Urfi Javed Octopus Dress Is The Most EPIC Thing Of The Day
Koo

ಬೆಂಗಳೂರು: ಕೆಲವು ದಿನಗಳಿಂದ ನಟಿ ಉರ್ಫಿ ಜಾವೇದ್ (Urfi Javed) ಕುಡಿದು ತೇಲಡುತ್ತಿರುವ ವಿಡಿಯೊ ಭಾರಿ ವೈರಲ್‌ ಆಗಿತ್ತು. ಹೀಗಾಗಿ ಉರ್ಫಿಯ ಫ್ಯಾಷನ್‌ ಬಗ್ಗೆಯೇ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತೆ ಉರ್ಫಿ ಹೊಸ ಅವತರಾದಲ್ಲಿ ಕಂಡಿದ್ದಾರೆ. ಬಬಲ್ ಗಮ್ ಟಾಪ್‌ನಿಂದ ಕಸದ ಚೀಲದ ಉಡುಪಿನವರೆಗೆ ಬಿಗ್ ಬಾಸ್ OTT 1 ಖ್ಯಾತಿಯ ಉರ್ಫಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅಕ್ಟೋಪಸ್ ಡ್ರೆಸ್ ನಿಂದ ಬಹಳ ಮಜವಾಗಿ ಕಂಡಿದ್ದರು.

ಉರ್ಫಿ ಜಾವೇದ್ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಅಕ್ಟೋಪಸ್ ರೀತಿಯ ತೋಳುಗಳನ್ನು ಹೊಂದಿತ್ತು ಈ ಉಡುಗೆ. ಸದಾ ತನ್ನ ಉಡುಪಿನ ವಿಚಾರವಾಗಿ ಟ್ರೋಲ್‌ ಆಗುವ ಉರ್ಫಿ ಈ ಬಾರಿ ನೆಟ್ಟಿಗರಿಂದ ಪ್ರಶಂಸೆ ಪಡೆದಿದ್ದಾರೆ. ಬಟ್ಟೆಗಳಲ್ಲಿಯ ಉರ್ಫಿಯ ಸೃಜನಶೀಲತೆಗೆ 10 ಅಂಕ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್​. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎನ್ನುತ್ತಿದ್ದರು.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

Continue Reading

ಬಾಲಿವುಡ್

Aishwarya Rai : ಡಿವೋರ್ಸ್ ವದಂತಿ ಮಧ್ಯೆ ಒಬ್ಬರೇ ಮಗಳ ಜತೆ ನ್ಯೂಯಾರ್ಕ್ ವಕೇಶನ್‌ ಎಂಜಾಯ್‌ ಮಾಡಿ ಬಂದ ಐಶ್ವರ್ಯಾ ರೈ!

Aishwarya Rai: ಇದೀಗ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಅವರು ನ್ಯೂಯಾರ್ಕ್‌ನಿಂದ ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕೂಡ ಅಭಿಷೇಕ್‌ ಇರಲಿಲ್ಲ. ಹೀಗಾಗಿ ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಸತ್ಯ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

VISTARANEWS.COM


on

Aishwarya Rai Returns From NY Vacation With Aaradhya
Koo

ಬೆಂಗಳೂರು: ಐಶ್ವರ್ಯಾ ರೈ (Aishwarya Rai ) ಬಚ್ಚನ್ ಅವರು ಪತಿ ಅಭಿಷೇಕ್ ಬಚ್ಚನ್‌ಗೆ ಡಿವೋರ್ಸ್‌ ಕೊಟ್ಟಿದ್ದಾರೆ ಎಂಬ ವಿಚಾರದ ಬಗ್ಗೆ ಸುದ್ದಿಯಲ್ಲಿದ್ದಾರೆ. ಸದ್ಯ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಐಶ್ವರ್ಯಾ ಅವರು ಅನಂತ್ ಮತ್ತು ರಾಧಿಕಾ ಅವರ ಮದುವೆಯಲ್ಲಿ ಮಗಳ ಜತೆ ಭಾಗಿಯಾಗಿದ್ದಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಅವರು ನ್ಯೂಯಾರ್ಕ್‌ನಿಂದ ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕೂಡ ಅಭಿಷೇಕ್‌ ಇರಲಿಲ್ಲ. ಹೀಗಾಗಿ ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಸತ್ಯ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ವೀಡಿಯೊದಲ್ಲಿ, ಐಶ್ವರ್ಯಾ ಅವರು ಸಂಪೂರ್ಣವಾಗಿ ಕಪ್ಪು ಬಟ್ಟೆಯಲ್ಲಿ ಕಂಡಿದ್ದಾರೆ. ಆರಾಧ್ಯ ಕೂಡ ತಾಯಿಯ ಜತೆಗೆ ಇದ್ದರು. ಲ್ಯಾವೆಂಡರ್-ಹ್ಯೂಡ್ ಸ್ವೆಟ್‌ಶರ್ಟ್‌ ಧರಿಸಿದ್ದರು. ಈ ಮುಂಚೆಯೆ ಐಶ್ವರ್ಯಾ ಅವರು ವಕೇಶನ್‌ ಸಲುವಾಗಿ ನ್ಯೂಯಾರ್ಕ್‌ಗೆ ತೆರಳಿದ್ದರು ಎಂದು ವರದಿಯಾಗಿತ್ತು. ಇದೀಗ ಅಮ್ಮ ಮಗಳು ಮಾತ್ರ ವಕೇಶನ್‌ ಎಂಜಾಯ್‌ ಮಾಡಿರುವಂತೆ ಕಂಡಿದೆ. ಅಭಿಷೇಕ್ ಜತೆ ಅಮ್ಮ ಮಗಳು ಹೋಗಿಲ್ಲ ಎಂದು ಈ ವಿಡಿಯೊ ಮೂಲಕ ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ (Anant Ambani Wedding) ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆದಿತ್ತು. ಐಶ್ವರ್ಯಾ ರೈ ಮಾತ್ರ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಇತರರು ಒಟ್ಟಾಗಿ ಮದುವೆಗೆ ಆಗಮಿಸಿದ್ದರು. ಆದರೆ, ಈ ವೇಳೆ ಐಶ್ವರ್ಯಾ ಇರಲಿಲ್ಲ. ಮದುವೆಗೆ ಹಾಜರಾಗುತ್ತಿಲ್ಲವೇನೋ ಎಂದು ಕೆಲವರು ಭಾವಿಸಿದ್ದರು. ಬಳಿಕ ಅವರು ಮದುವೆಗೆ ಹಾಜರಿ ಹಾಕಿದ್ದರು. ಇನ್ನು ಆ ಬಳಿಕ ಐಶ್ವರ್ಯಾ ರೈ ಅವರು ಮಗಳ ಜತೆ ಪೋಸ್‌ ಕೊಟ್ಟಿದ್ದರು. ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬದ ಜತೆ ಕಿರಿಕ್ ಮಾಡಿಕೊಂಡಿರುವುದು ನಿಜ ಎಂದು ಅನೇಕರು ಮಾತನಾಡಿಕೊಂಡಿದ್ದರು. ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್-ಜಯಾ ಬಚ್ಚನ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇತ್ತು.

Continue Reading

ಬಾಲಿವುಡ್

Alia Bhatt: ಪುತ್ರಿಯರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ನನ್ನ ತಾಯಿಗೆ ಚಿಂತೆಯಾಗಿತ್ತು ಎಂದ ಆಲಿಯಾ ಭಟ್‌ ತಂದೆ!

Alia Bhatt: ತಮ್ಮ ಹೆಣ್ಣುಮಕ್ಕಳಾದ ಆಲಿಯಾ ಮತ್ತು ಶಾಹೀನ್‌ ಭಟ್ ಅವರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ಮಹೇಶ್‌ ಭಟ್‌ (Alia Bhatt and Shaheen) ತಾಯಿ ಚಿಂತಿತರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Mahesh Bhatt said his mother was worried after he gave daughters Muslim names
Koo

ಬೆಂಗಳೂರು: ಬಾಲಿವುಡ್‌ ನಟಿ ಆಲಿಯಾ ಭಟ್ (Alia Bhatt) ಅವರ ತಂದೆ ಮಹೇಶ್ ಭಟ್ ಆಗಾಗ ವೈಯಕ್ತಿಕ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಮಹೇಶ್ ಅವರ ತಂದೆ ನಾನಾಭಾಯ್ ಭಟ್ ಗುಜರಾತಿ ಬ್ರಾಹ್ಮಣರಾಗಿದ್ದರು ಮತ್ತು ತಾಯಿ ಶಿರಿನ್ ಮೊಹಮ್ಮದ್ ಅಲಿ ಮುಸ್ಲಿಂ. ತಮ್ಮ ಹೆಣ್ಣುಮಕ್ಕಳಾದ ಆಲಿಯಾ ಮತ್ತು ಶಾಹೀನ್‌ ಭಟ್ ಅವರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ಮಹೇಶ್‌ ಭಟ್‌ (Alia Bhatt and Shaheen) ತಾಯಿ ಚಿಂತಿತರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಮಹೇಶ್ ಭಟ್‌ ಹಳೆಯ ಸಂದರ್ಶನವೊಂದರಲ್ಲಿ ತಮ್ಮ ಕುಂಟುಂಬದ ಬಗ್ಗೆ ಹೇಳಿಕೊಂಡಿದ್ದರು. ʻʻನನ್ನ ತಾಯಿ ಮುಸ್ಲಿಂ ಆಗಿದ್ದರೆ, ತಂದೆ ಜನಿವಾರ ಧರಿಸಿದ್ದರು. ಇಬ್ಬರೂ (ತಂದೆ ಮತ್ತು ತಾಯಿ) ತಮ್ಮ ವೈಯಕ್ತಿಕ ನಂಬಿಕೆಗಳನ್ನು ಉಳಿಸಿಕೊಂಡು ಬಂದರುʼʼಎಂದು ಹೇಳಿಕೊಂಡಿದ್ದಾರೆ.

“ನನ್ನ ತಾಯಿ ಯಾವಾಗಲೂ ದೊಡ್ಡದ್ದಾಗಿ ಹಣೆಗೆ ಬಿಂದಿ ಇಡುತ್ತಿದ್ದರು ಮತ್ತು ಸೀರೆಯನ್ನು ಧರಿಸುತ್ತಿದ್ದರು. ಅದೇ ಸಮಯದಲ್ಲಿ, ಅವರು ಏನೋ ಮರೆಮಾಚುವಂತೆ ನನಗೆ ಅನ್ನಿಸುತ್ತಿತ್ತು. ನಮ್ಮ ದೈನಂದಿನ ಜೀವನದಲ್ಲಿ ಅವಳ ಜಾತಿ ಎಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಅವರು ಭಾವಿಸಿದ್ದರು. 1992 ರಲ್ಲಿ ನಡೆದ ಕೋಮುಗಲಭೆಗಳ ಸಮಯದಲ್ಲಿ ಹೆಚ್ಚು ಚಿಂತಿತಳಾಗಿದ್ದಳು. ಆಲಿಯಾಗೆ ಮುಸ್ಲಿಂ ಹೆಸರನ್ನು ಇಟ್ಟಾಗ ಮತ್ತಷ್ಟು ಚಿಂತಿತಳಾದಳು. ನನ್ನ ಎರಡನೇ ಹೆಂಡತಿ (ಸೋನಿ ರಜ್ದಾನ್) ಆಲಿಯಾ ಹೆಸರನ್ನು ಇಷ್ಟಪಟ್ಟರುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

1970 ರಲ್ಲಿ, ಮಹೇಶ್ ಲೋರೆನ್ ಬ್ರೈಟ್ ಅವರನ್ನು ವಿವಾಹವಾದರು (ನಂತರದ ಹೆಸರು ಕಿರಣ್ ಭಟ್ ಎಂದು ಬದಲಾಯಿತು), ಅವರಿಗೆ ಇಬ್ಬರು ಮಕ್ಕಳಿದ್ದರು. ರಾಹುಲ್ ಮತ್ತು ಪೂಜಾ ಭಟ್. 1986ರಲ್ಲಿ ನಟ ಸೋನಿ ರಜ್ದಾನ್ ಅವರನ್ನು ವಿವಾಹವಾದರು. ಆಗ ಶಾಹೀನ್ ಮತ್ತು ಆಲಿಯಾ ಭಟ್ ಜನಿಸಿದರು. ಆಲಿಯಾ ಮಾರ್ಚ್ 1993 ರಲ್ಲಿ ಜನಿಸಿದರು. ಇದೀಗ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ.

ಹಿಂದಿಯಲ್ಲಿ ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ರಾಜ್​ಕುಮಾರ್ ರಾವ್ ಹಾಗೂ ತೃಪ್ತಿ ದಮ್ರಿ ನಟನೆಯ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಹಾಗೂ ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ‘ದೇವ’ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

Continue Reading
Advertisement
Road Accident
ಚಿಕ್ಕಬಳ್ಳಾಪುರ4 mins ago

Road Accident : ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ಬೈಕ್‌ ಸವಾರರು

IND vs SL 1st ODI
ಕ್ರೀಡೆ24 mins ago

IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ, ರೋಹಿತ್​, ಬುಮ್ರಾ

Heavy Rain
ದೇಶ30 mins ago

Heavy Rain: ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಯ್ತು ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ

India Couture Week 2024 Vicky Kaushal Rashmika Mandanna turn showstoppers
ಬಾಲಿವುಡ್30 mins ago

India Couture Week 2024: ಕೌಚರ್ ವೀಕ್ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಂಚಿದ ರಶ್ಮಿಕಾ- ವಿಕ್ಕಿ ಕೌಶಲ್!

Self Harming
ಬೆಂಗಳೂರು37 mins ago

Self Harming : ವಯಸ್ಸಲ್ಲದ ವಯಸ್ಸಲ್ಲಿ ಲವ್; 15ನೇ ವರ್ಷಕ್ಕೆ ಮದುವೆ ಆದವಳು 17ನೇ ವರ್ಷಕ್ಕೆ ಆತ್ಮಹತ್ಯೆ

Urfi Javed Octopus Dress Is The Most EPIC Thing Of The Day
ವೈರಲ್ ನ್ಯೂಸ್49 mins ago

Urfi Javed: ಚಿಟ್ಟೆ, ಬ್ರಹ್ಮಾಂಡ ಎಲ್ಲಾ ಆಯ್ತು! ಈಗ ಅಕ್ಟೋಪಸ್​​ನಂತೆ ಬಂದ ಉರ್ಫಿ!

Hindu Girl Murder
ಕ್ರೈಂ50 mins ago

Yashashree Shinde Murder: ಮುಂಬಯಿಯ ಯಶಶ್ರೀ ಶಿಂಧೆಯನ್ನು ಕರ್ನಾಟಕದ ದಾವೂದ್ ಶೇಖ್ ಕೊಂದಿದ್ದು ಹೇಗೆ? ಆಘಾತಕಾರಿ ಮಾಹಿತಿ

Terror Attack
ದೇಶ57 mins ago

Terror Attack: ಒಂದು ತಿಂಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಉಗ್ರರ ದಾಳಿ; 14 ಯೋಧರು ಹುತಾತ್ಮ

ಕ್ರೀಡೆ59 mins ago

Paris Olympics: ನೇರಳೆ ಟ್ರ್ಯಾಕ್​ನಲ್ಲಿ ಕಮಾಲ್​ ಮಾಡಲು ಸಜ್ಜಾದ ಅಥ್ಲೀಟ್​ಗಳು

Parliament Session
ರಾಜಕೀಯ1 hour ago

Parliament Session: ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ ವಯನಾಡು ದುರಂತ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌