Gold rate : ಅಮೆರಿಕದಲ್ಲಿ ಬ್ಯಾಂಕ್‌ಗಳ ಪತನ, 60,000 ರೂ. ಗಡಿ ದಾಟಿದ ಬಂಗಾರ ದರ, ಶೀಘ್ರ ಮತ್ತಷ್ಟು ಏರಿಕೆ ಸಂಭವ Vistara News
Connect with us

ಚಿನ್ನದ ದರ

Gold rate : ಅಮೆರಿಕದಲ್ಲಿ ಬ್ಯಾಂಕ್‌ಗಳ ಪತನ, 60,000 ರೂ. ಗಡಿ ದಾಟಿದ ಬಂಗಾರ ದರ, ಶೀಘ್ರ ಮತ್ತಷ್ಟು ಏರಿಕೆ ಸಂಭವ

ಅಮೆರಿಕ ಮತ್ತು ಯುರೋಪ್‌ನಲ್ಲಿ ಉಂಟಾಗಿರುವ ಬ್ಯಾಂಕಿಂಗ್‌ ಬಿಕ್ಕಟ್ಟಿನ ಪರಿಣಾಮ ಹೂಡಿಕೆದಾರು ( Gold rate) ಬಂಗಾರದಲ್ಲಿ ಹೂಡಿಕೆ ಸುರಕ್ಷಿತ ಎಂದು ಭಾವಿಸಿದ್ದಾರೆ. ಹೀಗಾಗಿ ಅದರ ಬೇಡಿಕೆ ಮತ್ತು ದರ ಹೆಚ್ಚುತ್ತಿದೆ.

VISTARANEWS.COM


on

gold
Koo

ಬೆಂಗಳೂರು: ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕ್‌ಗಳಲ್ಲಿ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ ಹೂಡಿಕೆದಾರರು ಬಂಗಾರದತ್ತ ಆಕರ್ಷಿತರಾಗಿದ್ದು, ಅದರ ದರ ಜಿಗಿದಿದೆ. ( Gold rate) ಚಿನ್ನ ದರ 60,000 ರೂ.ಗಳ ಗಡಿ ದಾಟಿ ಮುನ್ನುಗ್ಗುತ್ತಿದೆ. ಬಂಗಾರದಲ್ಲಿ ಹೂಡಿಕೆ ಸುರಕ್ಷಿತ ಎಂದು ಹೂಡಿಕೆದಾರರು ಭಾವಿಸಿರುವುದು ಇದಕ್ಕೆ ಕಾರಣ.

ಯುರೋಪ್‌ನಲ್ಲಿ ಇಸಿಬಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಮೂಲಕ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಬಡ್ಡಿ ದರವನ್ನು ಏರಿಸಿದೆ. ಹಣದುಬ್ಬರವನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡಿದೆ. ಇದು ಕೂಡ ಬಂಗಾರದ ದರ ಏರಿಕೆಗೆ ಕಾರಣವಾಗಿದೆ.

ಮತ್ತಷ್ಟು ಏರಿಕೆ ಸಾಧ್ಯತೆ: ಅಮೆರಿಕದಲ್ಲಿ ಮಾರ್ಚ್‌ 21 ಮತ್ತು ಮಾರ್ಚ್‌ 22ರಂದು ಅಮೆರಿಕದ ಫೆಡರಲ್‌ ರಿಸರ್ವ್‌ ಸಭೆ ನಡೆಸಲಿದೆ. ಇದರಲ್ಲಿ ಒಂದು ವೇಳೆ ಮತ್ತಷ್ಟು ಬಡ್ಡಿ ದರ ಏರಿಸಿದರೆ ಬಂಗಾರದ ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಐಐಎಫ್‌ಎಲ್‌ ಸೆಕ್ಯುರಿಟೀಸ್‌ನ ಅಂಜು ಗುಪ್ತಾ. ಹೀಗಿದ್ದರೂ, ಅಮೆರಿಕದಲ್ಲಿ ದೀರ್ಘಕಾಲೀನವಾಗಿ ಹಣದುಬ್ಬರ ಸ್ಥಿರವಾಗುವ ನಿರೀಕ್ಷೆ ಇರುವುದರಿಂದ, ಬಡ್ಡಿ ದರ ಏರಿಕೆಯೂ ಸೀಮಿತವಾಗಿರಬಹುದು ಎನ್ನಲಾಗಿದೆ. ದರ ಏರಿಕೆ ಎಷ್ಟರಮಟ್ಟಿಗೆ ಇರಬಹುದು ಎಂಬುದು ಸ್ಪಷ್ಟವಾಗಿಲ್ಲ.

ಬಂಗಾರದ ದರ ಭಾನುವಾರ ಬೆಂಗಳೂರಿನಲ್ಲಿ 10 ಗ್ರಾಮ್‌ಗೆ (24 ಕ್ಯಾರಟ್)‌ 60,370 ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರ 10 ಗ್ರಾಮ್‌ಗೆ 55,350 ರೂ.ನಷ್ಟಿತ್ತು. ಬೆಳ್ಳಿಯ ದರ ಕೆ.ಜಿಗೆ 74,400 ರೂ. ಇತ್ತು.

62,000 ರೂ.ಗೆ ಏರಿಕೆ ಸಾಧ್ಯತೆ:

Gold Rate hits record high today May Reach Rs60000 mark next week

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್‌ ಬ್ಯಾಂಕ್‌ಗಳು 2022ರಲ್ಲಿ 1,136 ಟನ್‌ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್‌ ಬಂಗಾರವನ್ನು ಸೆಂಟ್ರಲ್‌ ಬ್ಯಾಂಕ್‌ಗಳು ಖರೀದಿಸಿತ್ತು.

2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್‌ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್‌ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್‌ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್‌ ವರದಿ ತಿಳಿಸಿದೆ.

ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:

ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.

ಚಿನ್ನದ ದರ

Gold rate : ಬಂಗಾರದ ದರದಲ್ಲಿ 540 ರೂ. ಇಳಿಕೆ, ಬೆಳ್ಳಿ 200 ರೂ. ದುಬಾರಿ

ಬಂಗಾರದ ದರದಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆಯ ಏರುಗತಿ ಕಂಡು ಬಂದಿದೆ. ಈ ನಡುವೆ (Gold rate) ಮಂಗಳವಾರ ತುಸು ಇಳಿಕೆಯಾಗಿದೆ. ಗ್ರಾಹಕರು ಗಮನಿಸಬಹುದು.

VISTARANEWS.COM


on

Edited by

Gold Rate hits record high today May Reach Rs60000 mark next week
Koo

ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 540 ರೂ. ಇಳಿಕೆಯಾಗಿದೆ. ಪ್ರತಿ 10 ಗ್ರಾಮ್‌ ಚಿನ್ನದ ದರ 59,830 ರೂ.ಗೆ ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಮ್‌ಗೆ ದರ 54,850 ರೂ.ಗೆ ಅಂದರೆ 500 ರೂ. ಇಳಿಕೆಯಾಗಿದೆ.

ಒಟ್ಟಾರೆಯಾಗಿ ಬಂಗಾರದ ದರ ಏರುಗತಿ:

ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್‌ 18ರಂದು ಬಂಗಾರದ ದರ ಮೊದಲ ಬಾರಿಗೆ 60,370 ರೂ.ಗಳ ಗಡಿ ದಾಟಿತ್ತು. (Gold rate) ಸ್ವರ್ಣ ದರ ಸೋಮವಾರ 500 ರೂ. ಇಳಿಕೆಯಾಗಿದ್ದು, 59,830 ರೂ.ಗೆ ತಗ್ಗಿತ್ತು. (24 ಕ್ಯಾರಟ್)‌ ಕೇವಲ ಬ್ಯಾಂಕಿಂಗ್‌ ಬಿಕ್ಕಟ್ಟು ಮಾತ್ರವಲ್ಲದೆ, ಹೆಚ್ಚುತ್ತಿರುವ ಹಣದುಬ್ಬರ, ಬಡ್ಡಿ ದರ ಏರಿಕೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಪ್ರಭಾವ ಬೀರಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್‌ ಬ್ಯಾಂಕ್‌ಗಳು 2022ರಲ್ಲಿ 1,136 ಟನ್‌ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್‌ ಬಂಗಾರವನ್ನು ಸೆಂಟ್ರಲ್‌ ಬ್ಯಾಂಕ್‌ಗಳು ಖರೀದಿಸಿತ್ತು.

2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್‌ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್‌ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್‌ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್‌ ವರದಿ ತಿಳಿಸಿದೆ.

ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:

ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.

Continue Reading

ಚಿನ್ನದ ದರ

Gold rate : ಬ್ಯಾಂಕಿಂಗ್‌ ಬಿಕ್ಕಟ್ಟಿನ ಪರಿಣಾಮ 60,000 ರೂ.ಗೆ ಜಿಗಿದ ಬಂಗಾರ ದರ, ಮತ್ತಷ್ಟು ಏರಿಕೆ ಸಂಭವ

ಅಮೆರಿಕ-ಯುರೋಪ್‌ನಲ್ಲಿ ಉಂಟಾಗಿರುವ ಬ್ಯಾಂಕಿಂಗ್‌ ಬಿಕ್ಕಟ್ಟು, ಹಣದುಬ್ಬರ, ಬಡ್ಡಿ ದರ ಏರಿಕೆಯ ಪರಿಣಾಮ ಚಿನ್ನದ ದರದಲ್ಲಿ ಹೆಚ್ಚಳ (Gold rate) ಉಂಟಾಗಿದೆ.

VISTARANEWS.COM


on

Edited by

gold bond
Koo

ಬೆಂಗಳೂರು: ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್‌ 18ರಂದು ಬಂಗಾರದ ದರ ಮೊದಲ ಬಾರಿಗೆ 60,370 ರೂ.ಗಳ ಗಡಿ ದಾಟಿತ್ತು. (Gold rate) ಸ್ವರ್ಣ ದರ ಸೋಮವಾರ 500 ರೂ. ಇಳಿಕೆಯಾಗಿದ್ದು, 59,830 ರೂ.ಗೆ ತಗ್ಗಿತ್ತು. (24 ಕ್ಯಾರಟ್)‌ ಕೇವಲ ಬ್ಯಾಂಕಿಂಗ್‌ ಬಿಕ್ಕಟ್ಟು ಮಾತ್ರವಲ್ಲದೆ, ಹೆಚ್ಚುತ್ತಿರುವ ಹಣದುಬ್ಬರ, ಬಡ್ಡಿ ದರ ಏರಿಕೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಪ್ರಭಾವ ಬೀರಿದೆ.

ಕಳೆದ 10 ದಿನಗಳಲ್ಲಿ 24 ಕ್ಯಾರಟ್‌ ಬಂಗಾರದ ದರ (10 ಗ್ರಾಮ್‌ )

ಮಾರ್ಚ್‌ 20 : 59,830 ರೂ.

ಮಾರ್ಚ್‌ 19: 60,370 ರೂ.

ಮಾರ್ಚ್‌ 18: 60,370

ಮಾರ್ಚ್‌ 17: 58,740

ಮಾರ್ಚ್‌ 16: 58,470

ಮಾರ್ಚ್‌ 15 : 57,920

ಮಾರ್ಚ್‌ 14 : 58,030

ಮಾರ್ಚ್‌ 13 : 57,270

ಮಾರ್ಚ್‌ 12 : 56,950

ಮಾರ್ಚ್‌ 11 : 56,940

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ತನ್ನ ಸಭೆ ನಡೆಸಲಿದ್ದು, ಬಡ್ಡಿ ದರಗಳ ಪರಿಷ್ಕರಣೆ ಬಗ್ಗೆ ಪರಾಮರ್ಶೆಸ ನಡೆಸಲಿದೆ. ಇದು ಬಂಗಾರದ ಅಂತಾರಾಷ್ಟ್ರೀಯ ದರಗಳ ಮೇಲೆ ಪ್ರಭಾವ ಬೀರಬಹುದು. ಆಪತ್ತಿನ ಸಂದರ್ಭ ಜನತೆ ಚಿನ್ನದಲ್ಲಿ ಹೂಡಿಕೆ ಬಯಸುತ್ತಾರೆ. ಮುಖ್ಯವಾಗಿ ಬ್ಯಾಂಕಿಂಗ್‌, ಹಣಕಾಸು ಕ್ಷೇತ್ರದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗ ಚಿನ್ನ ಸುರಕ್ಷಿತ ಹೂಡಿಕೆಯ ಸಾಧನವಾಗಿ ಬಳಕೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಬೆಂಗಳೂರಿನಲ್ಲಿ ಸೋಮವಾರ 10 ಗ್ರಾಮ್ ಚಿನ್ನದ ದರ ‌ (24 ಕ್ಯಾರಟ್)‌ : 59,830, 22 ಕ್ಯಾರಟ್‌ ಚಿನ್ನದ ದರ : 54,850 ರೂ.

62,000 ರೂ.ಗೆ ಏರಿಕೆ ಸಂಭವ:

Gold Rate hits record high today May Reach Rs60000 mark next week

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್‌ ಬ್ಯಾಂಕ್‌ಗಳು 2022ರಲ್ಲಿ 1,136 ಟನ್‌ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್‌ ಬಂಗಾರವನ್ನು ಸೆಂಟ್ರಲ್‌ ಬ್ಯಾಂಕ್‌ಗಳು ಖರೀದಿಸಿತ್ತು.

2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್‌ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್‌ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್‌ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್‌ ವರದಿ ತಿಳಿಸಿದೆ.

ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:

ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.

Continue Reading

ಚಿನ್ನದ ದರ

Gold rate : ದಿಢೀರ್‌ ಹೆಚ್ಚಳದ ಬಳಿಕ ಬಂಗಾರದ ದರದಲ್ಲಿ 110 ರೂ. ಇಳಿಕೆ, ಬೆಳ್ಳಿಯ ದರ 500 ರೂ. ಏರಿಕೆ

ಬಂಗಾರದ ದರದಲ್ಲಿಕಳೆದ ವಾರ ಏರುಗತಿಯಲ್ಲಿತ್ತು. ಈ ವರ್ಷ ದರ 62,000 ರೂ.ಗೆ ಜಿಗಿದರೂ ಆಶ್ಚರ್ಯ (Gold rate) ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

VISTARANEWS.COM


on

Edited by

gold rate in bangalore
Koo

ಬೆಂಗಳೂರು: ಬಂಗಾರದ ದರದಲ್ಲಿ ಸೋಮವಾರ 110 ರೂ. ಇಳಿಕೆಯಾಗಿದ್ದು, 24 ಕ್ಯಾರಟ್‌ನ 10 ಗ್ರಾಮ್‌ ಚಿನ್ನದ ದರ 57,920 ರೂ.ಗೆ (Gold rate) ತಗ್ಗಿದೆ. 22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರದಲ್ಲಿ 100 ರೂ. ತಗ್ಗಿದ್ದು, 53,100 ರೂ.ಗೆ ಇಳಿಕೆಯಾಗಿದೆ. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ 500 ರೂ. ಏರಿಕೆಯಾಗಿದ್ದು 72,500 ರೂ.ಗೆ ವೃದ್ಧಿಸಿದೆ. ಕಳೆದ ಕೆಲ ದಿನಗಳಿಂದ ಸತತ ಏರಿಕೆಯನ್ನು ಚಿನ್ನದ ದರ ದಾಖಲಿಸಿತ್ತು.

62,000 ರೂ.ಗೆ ಏರಿಕೆ ಸಾಧ್ಯತೆ:

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:

ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.

Continue Reading

ಚಿನ್ನದ ದರ

Gold rate : ಖರೀದಿದಾರರೇ ಮರೆಯದಿರಿ, ಕಳೆದ 5 ದಿನಗಳಿಂದ ಚಿನ್ನದ ದರ 2450 ರೂ. ಜಿಗಿತ, ಬೆಳ್ಳಿಯೂ ದುಬಾರಿ

ಬಂಗಾರದ ದರದಲ್ಲಿ ಕಳೆದ 5 ದಿನಗಳಿಂದ 2450 ರೂ. ಏರಿಕೆಯಾಗಿದ್ದು, 58,030 ರೂ.ಗೆ ವೃದ್ಧಿಸಿದೆ. ಇದರೊಂದಿಗೆ ಶೀಘ್ರ 60,000 ರೂ.ಗಳ (Gold rate) ಗಡಿ ದಾಟಿದರೆ ಆಶ್ಚರ್ಯವಿಲ್ಲ.

VISTARANEWS.COM


on

Edited by

gold
Koo

ಬೆಂಗಳೂರು: ಕಳೆದ ಐದು ದಿನಗಳಿಂದ ಬಂಗಾರದ ದರ (Gold rate) ಸ್ಫೋಟ ಸಂಭವಿಸಿದೆ. ಮಾರ್ಚ್‌ 10 ರಿಂದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ‌ ಒಟ್ಟು 2450 ರೂ. ಹೆಚ್ಚಳವಾಗಿದ್ದು, ಬುಧವಾರ 24 ಕ್ಯಾರಟ್‌ನ 10 ಗ್ರಾಮ್‌ಗೆ ದರ 58,030 ರೂ.ಗೆ ವೃದ್ಧಿಸಿದೆ. ಈ ಮೂಲಕ 60,000 ರೂ. ಮೈಲಿಗಲ್ಲಿನತ್ತ ದಾಪುಗಾಲಿಕ್ಕಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರ 53,200 ರೂ.ಗೆ ವೃದ್ಧಿಸಿತ್ತು. ಪ್ರತಿ ಕೆಜಿ ಬೆಳ್ಳಿ ದರದಲ್ಲೂ (silver) ಬುಧವಾರ 2500 ರೂ. ಹೆಚ್ಚಳವಾಗಿದ್ದು, 72,000 ರೂ.ಗೆ ಏರಿಕೆಯಾಗಿದೆ.

ದಿನಾಂಕ22K24K
ಮಾರ್ಚ್‌ 14, 202353,20058,030
ಮಾರ್ಚ್‌ 13, 202352,50057,270
ಮಾರ್ಚ್‌ 12, 202352,21056,950
ಮಾರ್ಚ್‌ 11, 202352,20056,940
ಮಾರ್ಚ್‌ 10, 202351,45056,110

62,000 ರೂ.ಗೆ ಏರಿಕೆ ಸಾಧ್ಯತೆ:

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1880 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್.‌ 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು. ‌

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ 18% ಹೆಚ್ಚಳವಾಗಿದೆ. ಇದು 2011ರಿಂದೀಚೆಗಿನ ಗರಿಷ್ಠ ಪ್ರಮಾಣವಾಗಿದೆ. ಸೆಂಟ್ರಲ್‌ ಬ್ಯಾಂಕ್‌ಗಳು 2022ರಲ್ಲಿ 1,136 ಟನ್‌ ಬಂಗಾರವನ್ನು ಖರೀದಿಸಿವೆ. ಕಳೆದ 55 ವರ್ಷದಲ್ಲಿಯೇ ಇದು ಹೆಚ್ಚು. 2021ರಲ್ಲಿ ಇದು ಕೇವಲ 450 ಟನ್‌ಗೆ ಸೀಮಿತವಾಗಿತ್ತು. ಆದರೆ 2022ರ ದ್ವಿತೀಯಾರ್ಧ ಒಂದರಲ್ಲಿಯೇ 800 ಟನ್‌ ಬಂಗಾರವನ್ನು ಸೆಂಟ್ರಲ್‌ ಬ್ಯಾಂಕ್‌ಗಳು ಖರೀದಿಸಿತ್ತು.

2022ರಲ್ಲಿ ಹೂಡಿಕೆಗೋಸ್ಕರ ಚಿನ್ನದ ಬೇಡಿಕೆ 10% ಏರಿಕೆಯಾಗಿತ್ತು. ಇಟಿಎಫ್‌ಗೆ ಹೂಡಿಕೆ ಕಡಿಮೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಬೇಡಿಕೆ ವೃದ್ಧಿಸಿತ್ತು. ಯುರೋಪಿನಲ್ಲಿ ಗಟ್ಟಿ ಮತ್ತು ನಾಣ್ಯದ ಒಟ್ಟು 300 ಟನ್‌ ಬಂಗಾರವನ್ನು ಹೂಡಿಕೆಗೆ ಬಳಕೆಯಾಗಿದೆ. ಮಧ್ಯಪ್ರಾಚ್ಯದಲ್ಲೂ ಹೂಡಿಕೆಗೋಸ್ಕರ ಬಂಗಾರಕ್ಕೆ ಬೇಡಿಕೆಯಲ್ಲಿ 42% ಹೆಚ್ಚಳವಾಗಿದೆ. ವಿಶೇಷವೆಂದರೆ 2022ರಲ್ಲಿ ಚಿನ್ನದ ಆಭರಣಗಳಿಗೆ ಬೇಡಿಕೆ 3% ತಗ್ಗಿತ್ತು. 2,086 ಟನ್‌ಗೆ ಇಳಿದಿತ್ತು.

2008-09ರಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಂದಿನಿಂದ ಐರೋಪ್ಯ ಬ್ಯಾಂಕ್‌ಗಳು ಬಂಗಾರದ ಮಾರಾಟವನ್ನು ಸ್ಥಗಿತಗೊಳಿಸಿವೆ. ಮತ್ತೊಂದು ಕಡೆ ಭಾರತ, ರಷ್ಯಾ, ಟರ್ಕಿಯಲ್ಲಿ ಚಿನ್ನದ ಖರೀದಿ ಹೆಚ್ಚಳವಾಗಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ವರದಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಆದರೆ ಕರೆನ್ಸಿ, ಬಾಂಡ್‌ಗಳು ಮೌಲ್ಯ ಕಳೆದುಕೊಳ್ಳುತ್ತವೆ. ಹೀಗಾಗಿಯೇ ಸೆಂಟ್ರಲ್‌ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸುತ್ತವೆ. ಕಳೆದ ವರ್ಷ ಮೂರನೇ ಎರಡರಷ್ಟು ಸೆಂಟ್ರಲ್‌ ಬ್ಯಾಂಕ್‌ಗಳು ತಾವು ಖರೀದಿಸಿದ್ದ ಚಿನ್ನದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ ಎಂದು ಕೌನ್ಸಿಲ್‌ ವರದಿ ತಿಳಿಸಿದೆ.

ಚಿನ್ನದ ಆಮದು ದರ ಇಳಿಕೆಗೆ ಒತ್ತಾಯ:

ಬಂಗಾರದ ದರ ದಾಖಲೆಯ ಏರಿಕೆ ಹಿನ್ನೆಲೆಯಲ್ಲಿ ಆಮದು ಸುಂಕವನ್ನು ತಗ್ಗಿಸಬೇಕು ಎಂದು ಜ್ಯುವೆಲ್ಲರಿ ವಲಯದ ತಜ್ಞರು ಒತ್ತಾಯಿಸಿದ್ದಾರೆ. ದರ ಹೆಚ್ಚಳದ ಪರಿಣಾಮ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಮದು ಸುಂಕ ಈಗ 15% ಇದೆ.

Continue Reading
Advertisement
Jio True 5G service launched in 41 cities including KGF's robertsonpet
ಕರ್ನಾಟಕ5 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್19 mins ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ27 mins ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ32 mins ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ34 mins ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

Delhi team won the toss against UP and chose fielding
ಕ್ರಿಕೆಟ್36 mins ago

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

savadatti accident
ಕರ್ನಾಟಕ40 mins ago

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

HP Pavilion Aero 13 Laptop Launched and Check details
ಗ್ಯಾಜೆಟ್ಸ್42 mins ago

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

ಕರ್ನಾಟಕ44 mins ago

Basavaraj Bommai: ವಿಜಯಪುರದಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ; ಬೊಮ್ಮಾಯಿ

congress says cm basavraj bommai will not get chance to contest inkarnataka election
ಕರ್ನಾಟಕ55 mins ago

Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್‌ ಸಿಗುವುದು ಡೌಟು ಎಂದ ಕಾಂಗ್ರೆಸ್‌

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!