Money Guide : ಡಿಸ್ಕೌಂಟ್‌ ಬ್ರೋಕರ್‌ ಎಂದರೇನು, ಷೇರು ಹೂಡಿಕೆದಾರರಿಗೆ ಲಾಭವೇನು? - Vistara News

ವಾಣಿಜ್ಯ

Money Guide : ಡಿಸ್ಕೌಂಟ್‌ ಬ್ರೋಕರ್‌ ಎಂದರೇನು, ಷೇರು ಹೂಡಿಕೆದಾರರಿಗೆ ಲಾಭವೇನು?

ಭಾರತೀಯ ಷೇರು ಪೇಟೆಯಲ್ಲಿ ಎರಡು ವಿಧದ ಬ್ರೋಕರೇಜ್‌ ಸೇವೆ ಸಿಗುತ್ತದೆ. ( Money Guide ) ಅದರಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವುದು ಡಿಸ್ಕೌಂಟ್‌ ಬ್ರೋಕರ್.‌ ಏನಿದು? ಇಲ್ಲಿದೆ ವಿವರ.

VISTARANEWS.COM


on

stock trading
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಿಸ್ಕೌಂಟ್‌ ಬ್ರೋಕರ್‌ಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. (Money Guide) ಡಿಸ್ಕೌಂಟ್‌ ಬ್ರೋಕರೇಜ್‌ ಸಂಸ್ಥೆಗಳೂ ಜನಪ್ರಿಯವಾಗುತ್ತಿವೆ. ಏಕೆಂದರೆ ಮ್ಯೂಚುವಲ್‌ ಫಂಡ್‌, ಸ್ಟಾಕ್ಸ್‌, ಇಟಿಎಫ್‌, ಬಾಂಡ್‌ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. (Discount broker) ಹಾಗಾದರೆ ಏನಿದು ಡಿಸ್ಕೌಂಟ್‌ ಬ್ರೋಕರ್?‌

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಎರಡು ವಿಧದ ಬ್ರೋಕರ್‌ ಸಂಸ್ಥೆಗಳು ಸಿಗುತ್ತವೆ. ಒಂದು ಫುಲ್-ಸರ್ವೀಸ್‌ ಬ್ರೋಕರ್.‌ ಮತ್ತೊಂದು ಡಿಸ್ಕೌಂಟ್‌ ಬ್ರೋಕರ್.‌ ಫುಲ್‌ ಸರ್ವೀಸ್‌ ಬ್ರೋಕರ್‌ ಸಂಸ್ಥೆಗಳು ಕಸ್ಟಮೈಸ್ಡ್‌ ಸೇವೆ ಒದಗಿಸುತ್ತವೆ. ಇಲ್ಲೂ ಮ್ಯೂಚುವಲ್‌ ಫಂಡ್‌, ಐಪಿಒ, ಡೆಟ್‌, ವಿಮೆ ಮತ್ತು ಸಾಲದ ಸೇವೆ ಸಿಗುತ್ತದೆ.

ಹೆಸರೇ ಸೂಚಿಸುವಂತೆ ಡಿಸ್ಕೌಂಟ್‌ ಬ್ರೋಕರ್‌ಗಳು ಕಡಿಮೆ ಖರ್ಚಿನಲ್ಲಿ ಟ್ರೇಡಿಂಗ್‌ ಸೌಲಭ್ಯ ಒದಗಿಸುತ್ತವೆ. ಆನ್‌ ಲೈನ್‌ ಅಕೌಂಟ್‌ ಮ್ಯಾನೇಜ್‌ ಮೆಂಟ್‌, ರಿಸರ್ಚ್‌ ಟೂಲ್ಸ್‌ ಮತ್ತು ಎಜುಕೇಶನಲ್‌ ರಿಸೋರ್ಸ್‌ ಅನ್ನು ಒದಗಿಸುತ್ತವೆ. ಹೂಡಿಕೆದಾರರಿಗೆ ಇದು ಲಾಭದಾಯಕವಾಗಿದೆ. ಸ್ಟ್ಯಾಂಡರ್ಡ್ ಫುಲ್‌ ಸರ್ವೀಸ್‌ ಬ್ರೋಕರ್‌ಗಳಿಗೆ ಹೋಲಿಸಿದರೆ ಡಿಸ್ಕೌಂಟ್‌ ಬ್ರೋಕರ್‌ ಎಂದರೆ ಅಗ್ಗದ ವೆಚ್ಚದಲ್ಲಿ ಇಂಟರ್‌ ನೆಟ್‌ ಟ್ರೇಡಿಂಗ್‌ ಸೇವೆ ಒದಗಿಸುವ ಬ್ರೋಕರೇಜ್‌ ಸಂಸ್ಥೆಗಳಾಗಿವೆ.

ಡಿಸ್ಕೌಂಟ್‌ ಬ್ರೋಕರೇಜ್‌ ಕಂಪನಿಗಳು ರೆಗ್ಯುಲರ್‌ ಸಾಂಪ್ರದಾಯಿಕ ಬ್ರೋಕರ್‌ಗಳು ನೀಡುವ ಸೇವೆಗಳನ್ನು ನೀಡುತ್ತವೆ. ಆದರೆ ಕಡಿಮೆ ವೆಚ್ಚದಲ್ಲಿ ನೀಡುತ್ತವೆ. ಡಿಸ್ಕೌಂಟ್‌ ಬ್ರೋಕರೇಜ್‌ ಕಂಪನಿಗಳು ರೆಗ್ಯುಲರ್‌ ಸಾಂಪ್ರದಾಯಿಕ ಬ್ರೋಕರ್‌ ಗಳು ಕೊಡುವಂತೆ ಸ್ಪೆಶಲೈಸ್ಡ್‌ ಅಕೌಂಟ್‌ ಮ್ಯಾನೇಜರ್‌ ಸೇವೆಯನ್ನು ಕೊಡುವುದಿಲ್ಲ. ಕಸ್ಟಮೈಸ್ಡ್‌ ಇನ್ವೆಸ್ಟ್‌ ಮೆಂಟ್‌ ಅಡ್ವೈಸ್‌ ನೀಡುವುದಿಲ್ಲ. ಬದಲಿಗೆ ಸರಳ, ನೇರವಾದ ಟ್ರೇಡಿಂಗ್‌ ಪ್ಲಾಟ್‌ ಫಾರ್ಮ್‌ ಅನ್ನು ಒದಗಿಸುತ್ತವೆ. ಮಿನಿಮಲ್‌ ಅಡ್ವೈಸ್‌ ಮತ್ತು ರಿಸರ್ಚ್‌ ಸರ್ವೀಸ್‌ ನೀಡುತ್ತವೆ. ಆನ್‌ ಲೈನ್‌ ಟೂಲ್‌ಗಳನ್ನು ಬಳಸುತ್ತವೆ. ಕಸ್ಟಮರ್‌ ಸರ್ವೀಸ್‌ ಅನ್ನು ಆನ್‌ಲೈನ್‌ ಮೂಲಕ ಕೊಡುತ್ತವೆ. ಹೀಗಾಗಿ ಕಡಿಮೆ ಖರ್ಚಾಗುತ್ತದೆ.

ಇದನ್ನೂ ಓದಿ: Money plus : ಕೇಂದ್ರ ಬಜೆಟ್‌ನಲ್ಲಿ ತೆರಿಗೆದಾರರ ನಿರೀಕ್ಷೆಗಳು ಈಡೇರಲಿದೆಯೇ?

ಡಿಸ್ಕೌಂಟ್‌ ಬ್ರೋಕರ್‌ ಸಂಸ್ಥೆಗಳು ಮಾರುಕಟ್ಟೆ ಬಗ್ಗೆ ನಾನಾ ಮಾಹಿತಿಗಳನ್ನು, ಮಾರ್ಗದರ್ಶನವನ್ನು ಆನ್‌ ಲೈನ್‌ನಲ್ಲಿ ಒದಗಿಸುತ್ತವೆ. ಇದು ಅದರ ಎಲ್ಲ ಗ್ರಾಹಕರಿಗೂ ಲಭಿಸುತ್ತವೆ. ಇಲ್ಲಿ ಹೂಡಿಕೆದಾರರು ತಾವೇ ತಮ್ಮನ್ನು ನಿರ್ದೇಶಿಸುತ್ತಾರೆ. ಅಂಥವರಿಗೆ ಇದು ಅಫರ್ಡಬೆಲ್‌ ಆಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಷೇರು ವ್ಯವಹಾರವನ್ನು ಮಾಡಲು ಬಯಸುವವರಿಗೆ ಡಿಸ್ಕೌಂಟ್‌ ಬ್ರೋಕರ್‌ ಸಂಸ್ಥೆಗಳು ಸಹಾಯಕ. ಸಕ್ರಿಯ ಹೂಡಿಕೆದಾರರು. ಲಾಂಗ್‌ ಟರ್ಮ್‌ ಇನ್ವೆಸ್ಟರ್ಸ್‌ ಇದರ ಲಾಭವನ್ನು ಪಡೆಯಬಹುದು. ಸ್ಟಾಕ್ಸ್‌, ಮ್ಯೂಚುವಲ್‌ ಫಂಡ್‌, ಬಾಂಡ್‌, ಇಟಿಎಫ್‌ ಇತ್ಯಾದಿಗಳ ಹೂಡಿಕೆ ಕುರಿತ ಸೇವೆಯನ್ನು ಡಿಸ್ಲೌಂಟ್‌ ಬ್ರೋಕರ್‌ ಮೂಲವೂ ಪಡೆಯಬಹುದು. ಟ್ರೇಡಿಂಗ್‌ ಪ್ಲಾಟ್‌ ಫಾರ್ಮ್‌ ಬಳಸಿ ಹೂಡಿಕೆದಾರರು ಮನೆಯಲ್ಲೇ ಇದ್ದರೂ, ಕಚೇರಿಯಲ್ಲೇ ಇದ್ದರೂ ಹೂಡಿಕೆ ಮಾಡಬಹುದು. ಮೊಬೈಲ್‌ ಟ್ರೇಡಿಂಗ್‌ ಅಪ್ಲಿಕೇಶನ್‌ ಗಳೂ ಲಭ್ಯವಿದೆ.

ಭಾರತದಲ್ಲಿ ಪ್ರಮುಖ ಡಿಸ್ಕೌಂಟ್‌ ಬ್ರೋಕರ್‌ ಸಂಸ್ಥೆಗಳಿವು

ಬ್ರೋಕರ್ಸಕ್ರಿಯ ಗ್ರಾಹಕರ ಸಂಖ್ಯೆ
ಗ್ರೊ7,092,413
ಜೆರೋಧಾ6,598,363
ಏಂಜೆಲ್‌ ಒನ್5,098,124
ಅಪ್‌ ಸ್ಟಾಕ್2,237,974
ಪೇಟಿಎಂ ಮನಿ740,285

ಪ್ರಮುಖ ಫುಲ್‌ ಸರ್ವೀಸ್‌ ಬ್ರೋಕರ್‌ ಸಂಸ್ಥೆಗಳು

ಬ್ರೋಕರ್‌ ಸಂಸ್ಥೆಸಕ್ರಿಯ ಗ್ರಾಹಕರು
ಐಸಿಐಸಿಐ ಡೈರೆಕ್ಟ್1,875,350
ಕೋಟಕ್‌ ಸೆಕ್ಯುರಿಟೀಸ್1,055,717
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್1,016,329
ಮೋತಿಲಾಲ್ ಓಸ್ವಾಲ್807,786
ಎಸ್‌ ಬಿಐ ಸೆಕ್ಯುರಿಟೀಸ್‌757,635

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

Money Guide: ಹೋಮ್‌ ಲೋನ್‌ ಸಂಪೂರ್ಣ ಪಾವತಿಸಿದ ಮೇಲೂ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಸಾಲ ಪಾವತಿಯಾದ ಬಳಿಕವೂ ನೀವು ಒಂದಷ್ಟು ಮುಖ್ಯ ಕೆಲಸ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗದಿರಲು ಕೆಲವು ಅಂಶಗಳತ್ತ ನೀವು ಗಮನ ಹರಿಸಲೇ ಬೇಕು. ಅವು ಯಾವುವು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ ಬಹು ಪ್ರಯಾಸದ ಸಂಗತಿ. ಅದರಲ್ಲಿಯೂ ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟಬೇಕು ಎಂದರೆ ಸಾಮಾನ್ಯ ವರ್ಗದ ಜನರು ಸಾಲದ ಮೊರೆ ಹೋಗಲೇ ಬೇಕಾಗುತ್ತದೆ. ಸರಿ ಅಂತೂ ಗೃಹಸಾಲ ಮಂಜೂರಾಗಿ, ಗೃಹ ಪ್ರವೇಶ ನಡೆದು, ಸಾಲವನ್ನೂ ಕಟ್ಟಿಯಾಯ್ತು ಎಂದುಕೊಳ್ಳೋಣ. ʼಅಬ್ಬ ದೊಡ್ಡ ಹೊರೆಯೊಂದು ತಲೆಯ ಮೇಲಿಂದ ಇಳಿಯಿತುʼ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನ ಇಲ್ಲಿ ಗಮನಿಸಿ. ಸಾಲ ಕಟ್ಟಿದ ಮಾತ್ರಕ್ಕೆ ನಿಮ್ಮ ಎಲ್ಲ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬೇಡಿ. ಸಾಲ ತೀರಿಸಿದ ಮೇಲೂ ನೀವು ಮಾಡಿ ಮುಗಿಸಬಹುದಾದು ಬಹು ಮುಖ್ಯ ಕೆಲಸಗಳಿವೆ. ಅವು ಯಾವುವು ಎನ್ನುವ ಮಾಹಿತಿ ತಿಳಿದುಕೊಳ್ಳಲು ಇಂದಿನ ಮನಿಗೈಡ್‌ (Money Guide) ಓದಿ.

ಎನ್‌ಒಸಿ ಪಡೆದುಕೊಳ್ಳಿ

ಗೃಹಸಾಲವನ್ನು ಸಂಪೂರ್ಣವಾಗಿ ಪಾವತಿಸದ ಬಳಿಕ ನೀವು ಮಾಡಬೇಕಾದ ಬಹು ಮುಖ್ಯ ಕೆಲಸ ಎಂದರೆ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಅಥವಾ ನೋ ಡ್ಯೂ ಸರ್ಟಿಫಿಕೆಟ್‌ (ಎನ್‌ಡಿಸಿ) ಪಡೆದುಕೊಳ್ಳುವುದು. ನೀವು ಸಂಪೂರ್ಣ ಸಾಲವನ್ನು ಮರುಪಾವತಿಸಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಪ್ರಮಾಣಿಕರಿಸುವ ಸರ್ಟಿಫಿಕೆಟ್‌ ಇದು. ಗಮನಿಸಿ, ಈ ಪತ್ರವನ್ನು ಪಡೆದುಕೊಳ್ಳುವ ಮುನ್ನ ಇದರಲ್ಲಿ ನಮೂದಿಸಿರುವ ಎಲ್ಲ ಅಂಶಗಳು ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸಿ. ಅಕ್ಷರ ದೋಷ ಅಥವಾ ಯಾವುದಾದರೂ ಮಾಹಿತಿಯಲ್ಲಿ ತಪ್ಪು ಕಂಡು ಬಂದರೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಜತೆಗೆ ಈ ಪ್ರಮಾಣ ಪತ್ರದಲ್ಲಿ ಸಾಲ ನೀಡಿದ ಸಂಸ್ಥೆಯ ಹೆಸರು, ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ಆಸ್ತಿಯ ವಿವರ, ನಿಮ್ಮ ವಿಳಾಸ, ಸಾಲದ ಕಂತು ಆರಂಭಗೊಂಡ ಮತ್ತು ಕೊನೆಗೊಂಡ ದಿನಾಂಕ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಮನೆ ಇನ್ನು ಸಂಪೂರ್ಣವಾಗಿ ನಿಮ್ಮ ಸೊತ್ತು ಎನ್ನುವುದು ಕೂಡ ಇದರಲ್ಲಿ ನಮೂದಾಗಿದೆ ಎನ್ನುವುದನ್ನು ಚೆಕ್‌ ಮಾಡಿ.

ಮೂಲ ದಾಖಲೆ ಪಡೆದುಕೊಳ್ಳಿ

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ಗಳು ನಿಮ್ಮ ಮನೆಯ ಮೂಲ ದಾಖಲೆಗಳನ್ನು ಪಡೆದುಕೊಳ್ಳುತ್ತವೆ. ಸಾಲ ಪಾವತಿಯಾದ ಬಳಿಕ ಬ್ಯಾಂಕ್‌ಗಳು ಈ ಮೂಲ ದಾಖಲೆಗಳನ್ನು ನಿಮಗೆ ಹಿಂದಿರುಗಿಸಬೇಕು ಎನ್ನುವ ನಿಯಮ ಇದೆ. ಒಂದು ಬೇಳೆ ಬ್ಯಾಂಕ್‌ ಇದನ್ನು ನೀಡಲು ಮರೆತರೆ ನೀವು ನೆನಪಿಸಿ ತಪ್ಪದೆ ಪಡೆದುಕೊಳ್ಳಿ. ದಾಖಲೆಗಳೆಲ್ಲ ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ದಾಖಲೆಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ

ಗೃಹಸಾಲ ನೀಡುವಾಗ ನಿಮ್ಮ ಆಸ್ತಿಯ ಹಕ್ಕನ್ನು ಬ್ಯಾಂಕ್‌ ಹೊಂದಿರುತ್ತದೆ. ಒಂದುವೇಳೆ ಸಾಲ ಪಡೆದವರು ಮರು ಪಾವತಿಸದಿದ್ದರೆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಬ್ಯಾಂಕ್‌ಗೆ ಇರುತ್ತದೆ. ಹೀಗಾಗಿ ಸಾಲ ಮರುಪಾವತಿ ಮಾಡಿದ ಬಳಿಕ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲೇಬೇಡಿ. ಜತೆಗೆ ಋಣಭಾರ ಪ್ರಮಾಣಪತ್ರ ಪಡೆದುಕೊಳ್ಳಿ. ಈ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಬಳಿ ಕೇಳಿ ತಿಳಿದುಕೊಳ್ಳಿ.

ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿ

ಸಾಲ ಮಂಜೂರಾದ ಬಳಿಕ ನಿಮ್ಮ ಮರುಪಾವತಿಯನ್ನು ಗಮನಿಸಿ ಕ್ರೆಡಿಟ್‌ ಬ್ಯೂರೋ ಕ್ರೆಡಿಟ್‌ ಸ್ಕೋರ್‌ ನೀಡುತ್ತದೆ. ಹೀಗಾಗಿ ಸಾಲದ ಎಲ್ಲ ಕಂತನ್ನು ಪಾವತಿಸಿದ ಬಳಿಕ ಸಾಲಮುಕ್ತರಾಗಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಅಪ್‌ಡೇಟ್‌ ಮಾಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಬ್ಯಾಂಕ್‌ಗಳು ಬ್ಯುರೋಕ್ಕೆ ಮಾಹಿತಿ ನೀಡಲು ಮರೆಯುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಪರಿಶೀಲಿಸಿ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತನ್ನಿ.

ಒಟ್ಟಿನಲ್ಲಿ ಗೃಹಸಾಲದ ಎಲ್ಲ ಕಂತುಗಳನನು ಪಾವತಿಸಿದ ಬಳಿಕ ಭವಿಷ್ಯದಲ್ಲಿ ಯಾವುದೇ ತೊಂದರೆ, ಕಾನೂನು ಸಮಸ್ಯೆ ಎದುರಾಗದಿರಲು ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಇದನ್ನೂ ಓದಿ: Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

Continue Reading

ವಾಣಿಜ್ಯ

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ವಿಶ್ವ
ಇತರ ಪ್ರಸಿದ್ಧ ಕಂಪನಿಗಳು ಭಾರತದಲ್ಲಿ ಎಂಜಿನಿಯರ್ ಗಳಿಗೆ ಎಷ್ಟು ಸಂಬಳ ಪಾವತಿ (Highest Salary Paying Companies) ಮಾಡುತ್ತಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Highest Paying Companies
Koo

ಗೂಗಲ್ (Google), ಅಮೆಜಾನ್ (amazon), ಮೈಕ್ರೋ ಸಾಫ್ಟ್ (microsoft) ಸೇರಿದಂತೆ ವಿಶ್ವ ಪ್ರಸಿದ್ಧ ಕಂಪನಿಗಳ ಸ್ಯಾಲರಿ ಪ್ಯಾಕೇಜ್ (Highest Salary Paying Companies) ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಕುರಿತು ಇದೀಗ ಎಕ್ಸ್ ನಲ್ಲಿ (x) ಮಾಹಿತಿ ವೈರಲ್ (viral) ಆಗಿದ್ದು, ವಿಶ್ವ ಪ್ರಸಿದ್ಧ ಕಂಪನಿಗಳ ಎಂಜಿನಿಯರ್ ಗಳು ವಾರ್ಷಿಕ ಸರಾಸರಿ 26 ಸಾವಿರ ರೂ.ನಿಂದ 66 ಲಕ್ಷ ರೂ. ವರೆಗೆ ಸಂಬಳ ಪಡೆಯುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ಬಳಿಕ ಗೊಜೆಕ್, ಮೈಕ್ರೋಸಾಫ್ಟ್, ಝೀಟಾ, ಅಡೋಬ್ ಮತ್ತು ಸೇಲ್ಸ್‌ಫೋರ್ಸ್‌ನಲ್ಲಿ ಎಂಜಿನಿಯರ್‌ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಇದರಲ್ಲಿ ಕ್ರಮವಾಗಿ 59.7 ಲಕ್ಷ, 58.5 ಲಕ್ಷ, 58 ಲಕ್ಷ, 56.3 ಲಕ್ಷ, ಮತ್ತು 56.1 ಲಕ್ಷ ಸಂಬಳ ಪಡೆಯುವ ಎಂಜಿನಿಯರ್ ಗಳು ಇದ್ದಾರೆ.

ಬಳಿಕದ ಸ್ಥಾನದಲ್ಲಿ ವಿಎಂ ವೇರ್, ಶೇರ್ ಚಾಟ್, ಗೋಲ್ಡ್ ಮನ್, ಪೇ ಪಾಲ್, ಮಿಂತ್ರಾ, ವಾಲ್ ಮಾರ್ಟ್, ಸರ್ವಿಸ್ ನೌ, ಫ್ಲಿಪ್ ಕಾರ್ಟ್, ರಝೋರ್ ಪೇ, ಒರಾಕಲ್, ಅಮೆಜಾನ್ ಕೂಡ ಸೇರಿದೆ. ಇದರಲ್ಲಿ ಬಹುತೇಕ ಎಂಜಿನಿಯರ್‌ಗಳ ಸಂಬಳ 51.4 ಲಕ್ಷ ರೂ. ವರೆಗೆ ಇದೆ. ಟೆಕೀವ್ನ್, ಸಿಸ್ಕೊ, ಪೇ ಟಿಎಂ, ಕ್ವ್ಯಾಲ್ ಕಾಮ್, ಸ್ಯಾಪ್, ಓಯೋ ಕಂಪೆನಿಗಳ ಎಂಜಿನಯರ್ ಗಳಿಗೆ 5೦ ಲಕ್ಷ ರೂ.ವರೆಗೆ ವಾರ್ಷಿಕ ಪಾವತಿ ಮಾಡಲಾಗುತ್ತದೆ.


ಉಳಿದಂತೆ ಐಬಿಎಂ, ಸ್ಯಾಮ್ ಸಂಗ್, ಅಕ್ವೆವೆಂಚರ್, ಕಾಗ್ನಿಜೆಂಟ್, ಇನ್ಫೋಸಿಸ್, ಕ್ಯಾಂಪ್ಗೆಮಿನಿ, ಟಿಸಿಎಸ್ ಕಂಪೆನಿಗಳಲ್ಲಿ ಎಂಜಿನಿಯರ್ ಗಳಿಗೆ ಗರಿಷ್ಠ ವಾರ್ಷಿಕ ಪಾವತಿ 30 ಲಕ್ಷ ರೂ.ವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ: LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

ಹೆಚ್ಚು ಮತ್ತು ಕಡಿಮೆ ಪಾವತಿಸುವ ಕಂಪನಿಗಳ ಮಾಹಿತಿ ಸಂಗ್ರಹಕ್ಕಾಗಿ ಒಟ್ಟು 25,000 ಮಂದಿಯ ಸಂಬಳವನ್ನು ವಿಶ್ಲೇಷಿಸಲಾಗಿದೆ ಎಂದು ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಸಂಬಳ ಪಾವತಿಯ ಬಗ್ಗೆ ಪಾರದರ್ಶಕತೆ ಬಹಳ ಮುಖ್ಯ ಎಂದಿರುವ ಅವರು ಇದರಲ್ಲಿ ಮೂಲ ವೇತನದಲ್ಲಿ ಕೊಂಚ ವ್ಯತ್ಯಾಸವಿರಬಹುದು ಎಂದು ತಿಳಿಸಿದ್ದಾರೆ.

Continue Reading

ವಾಣಿಜ್ಯ

Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Exit Polls: ಲೋಕಸಭಾ ಚುನಾವಣೆಯ ಎಲ್ಲ ಹಂತಗಳ ಮತದಾನ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಇದರಲ್ಲಿ ಎನ್‌ಡಿಎಗೆ ಬಹುಮತ ದೊರೆಯುವ ಸಾಧ್ಯತೆ ಇದೆ ಎನ್ನುವ ಅಂಶ ಕಂಡು ಬಂದಿದ್ದು, ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

VISTARANEWS.COM


on

Exit Polls
Koo

ಮುಂಬೈ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election 2024)ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ಶನಿವಾರ (ಜೂನ್‌ 1) ಚುನಾವಣೋತ್ತರ ಸಮೀಕ್ಷೆ (Exit Polls) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಹುದ್ದೆಗೆ ಏರುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.

ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಾದ 272 ಸೀಟನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸುಲಭವಾಗಿ ಪಡೆದುಕೊಳ್ಳಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಫಲಿತಾಂಶ ಮಂಗಳವಾರ (ಜೂನ್‌ 4) ಪ್ರಕಟವಾಗಲಿದೆ. ಕಡಿಮೆ ಮತದಾನದ ಪ್ರಮಾಣ ಮತ್ತು ಹಲವಾರು ರಾಜ್ಯಗಳಲ್ಲಿ ಬಿಗಿಯಾದ ಸ್ಪರ್ಧೆಗಳಿಂದಾಗಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ 400 ಸ್ಥಾನಗಳ ಗುರಿಯನ್ನು ತಲುಪಲು ಬಿಜೆಪಿ ವಿಫಲವಾಗಬಹುದು ಎಂಬ ಆತಂಕದಿಂದ ಇತ್ತೀಚಿನ ಷೇರು ಮಾರುಕಟ್ಟೆ ಚಂಚಲತೆಯಿಂದ ಕೂಡಿತ್ತು. ಇದುವ ಹೂಡಿಕೆದಾರರನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಚುನಾವಣೋತ್ತರ ಸಮೀಕ್ಷೆಯಿಂದ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡು ಬರುವ ಸಾಧ್ಯತೆ ಇದೆ.

“ಫಲಿತಾಂಶದ ಬಗ್ಗೆ ಕೆಲವು ಸಂದೇಹಗಳು ಇದ್ದವು. ಈ ಬಗ್ಗೆ ಕೆಲವರು ಆತಂಕಕ್ಕೊಳಗಾಗಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಾಗಿತ್ತು. ಚುನಾವಣೋತ್ತರ ಸಮೀಕ್ಷೆಯಿಂದ ಆತಂಕ ನಿವಾರಣೆಯಾಗಿದೆ. ಹೀಗಾಗಿ ಮಾರುಕಟ್ಟೆಗಳು ಸೋಮವಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದುʼʼ ಎಂದು ಮುಂಬೈಯ ಡಿಎಸ್‌ಪಿ ಮ್ಯೂಚುವಲ್ ಫಂಡ್‌ನ ಈಕ್ವಿಟಿಗಳ ಮುಖ್ಯಸ್ಥ ವಿನೀತ್ ಸಾಂಬ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂತಿಮ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳಿಗಿಂತ ಭಿನ್ನವಾಗಿದ್ದರೂ, ಎನ್‌ಡಿಎ ಒಕ್ಕೂಟಕ್ಕೆ ಗೆಲುವು ನಿಶ್ಚಿತ ಎನ್ನಲಾಗಿದೆ. ಭಾರತೀಯ ಷೇರುಗಳು ಮೇ ತಿಂಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿದರೆ, ಬಾಂಡ್ ಸುಮಾರು ಒಂದು ವರ್ಷದಲ್ಲಿ ಗರಿಷ್ಠ ಮಟ್ಟದ ಹತ್ತಿರದಲ್ಲಿದೆ. ಜೂನ್ 4ರ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಯೊಂದಿಗೆ ಹೊಂದಿಕೆಯಾದರೆ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಹೊಸ ದಾಖಲೆಯನ್ನು ತಲುಪಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಮುಂಚಿತವಾಗಿ ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರಿಂದ ಮುಖ್ಯ ಗೇಜ್ ಕಳೆದ ವಾರ ಸುಮಾರು ಶೇ. 2ರಷ್ಟು ಕುಸಿದು 22,531ಕ್ಕೆ ತಲುಪಿದೆ.

ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ʼʼಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಜೂನ್‌ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲʼʼ ಎಂದು ಹೇಳಿದ್ದರು. ʼʼಜೂನ್‌ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆʼʼ ಎಂದು ಗೃಹ ಸಚಿವ ಅಮಿತ್‌ ಶಾ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್‌, ಜಪಾನ್‌, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್‌ ಷೇರು ಮಾರುಕಟ್ಟೆ ಎನಿಸಿದೆ. ಹೀಗಾಗಿ ಚುನಾವಣಾ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. 

Continue Reading

ವಾಣಿಜ್ಯ

GST Collection: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂ. 2; ಇಲ್ಲಿ ಸಂಗ್ರಹವಾಗಿದ್ದು ಎಷ್ಟು?

GST Collection: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ. ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ.

VISTARANEWS.COM


on

GST Collection
Koo

ನವದೆಹಲಿ: ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆಯಾಗಿದೆ (GST Collection). ಮೇಯಲ್ಲಿ ಬರೋಬ್ಬರಿ 1.73 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿದ್ದು, ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ರೀಫಂಡ್ ಕಳೆದ ಬಳಿಕ ನಿವ್ವಳ ಜಿಎಸ್​ಟಿ ಸಂಗ್ರಹ ಮೇಯಲ್ಲಿ 1.44 ಲಕ್ಷ ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.

ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿ, ʼʼಮೇಯಲ್ಲಿ ಜಿಎಸ್‌ಟಿ ಆದಾಯ 1.73 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದಕ್ಕೆ ಹೋಲಿಸಿದರೆ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳ ದಾಖಲಿಸಿದೆ. ಜತೆಗೆ ದೇಶೀಯ ವಹಿವಾಟುಗಳಲ್ಲಿ ಬಲವಾದ ಹೆಚ್ಚಳ (ಶೇಕಡಾ 15.3ರಷ್ಟು ಏರಿಕೆ) ಮತ್ತು ಆಮದುಗಳಲ್ಲಿ ಇಳಿಕೆ (ಶೇಕಡಾ 4.3ರಷ್ಟು ಕಡಿಮೆ) ಕಂಡು ಬಂದಿದೆʼʼ ಎಂದು ತಿಳಿಸಿದೆ.

ರಾಜ್ಯವಾರು ಸಂಗ್ರಹ

ಮಹಾರಾಷ್ಟ್ರವು 26,854 ಕೋಟಿ ರೂ. ಸಂಗ್ರಹಿಸುವ ಮೂಲಕ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ಇಲ್ಲಿ 11,889 ಕೋಟಿ ರೂ. ಸಂಗ್ರಹವಾಗಿದೆ. ಗುಜರಾತ್‌ನಲ್ಲಿ 11,325 ಕೋಟಿ ರೂ. ಸಂಗ್ರಹವಾಗಿದ್ದು ಮೂರನೇ ಸ್ಥಾನದಲ್ಲಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್‌ 10 ರಾಜ್ಯಗಳು

ರಾಜ್ಯ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)
ಮಹಾರಾಷ್ಟ್ರ26,854
ಕರ್ನಾಟಕ11,889
ಗುಜರಾತ್11,325
ತಮಿಳುನಾಡು9,768
ಹರಿಯಾಣ9,289
ಉತ್ತರಪ್ರದೇಶ9,091
ದೆಹಲಿ7,512
ಪಶ್ಚಿಮ ಬಂಗಾಳ5,377
ಒಡಿಶಾ5,027
ತೆಲಂಗಾಣ4,986

ವಿವಿಧ ತೆರಿಗೆಗಳ ಅಂಕಿ ಅಂಶ

  • ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST): 32,409 ಕೋಟಿ ರೂ.
  • ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST): 40,265 ಕೋಟಿ ರೂ.
  • ಸಮಗ್ರ ಸರಕು ಮತ್ತು ಸೇವಾ ತೆರಿಗೆ (IGST): ಆಮದು ಸರಕುಗಳ ಮೇಲೆ ಸಂಗ್ರಹಿಸಿದ 39,879 ಕೋಟಿ ರೂ. ಸೇರಿದಂತೆ ಒಟ್ಟು 87,781 ಕೋಟಿ ರೂ.
  • ಸೆಸ್: ಆಮದು ಮಾಡಿದ ಸರಕುಗಳ ಮೇಲೆ ಸಂಗ್ರಹಿಸಿದ 1,076 ಕೋಟಿ ರೂ. ಸೇರಿದಂತೆ ಒಟ್ಟು 12,284 ಕೋಟಿ ರೂ.

ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಜಿಎಸ್‌ಟಿ ಸಂಗ್ರಹ

ಏಪ್ರಿಲ್‌ನ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 2024ರ ಏಪ್ರಿಲ್‌ನ ಒಟ್ಟು ಜಿಎಸ್‌ಟಿ ಸಂಗ್ರಹವು 2.10 ಲಕ್ಷ ಕೋಟಿ ರೂ.ಗೆ ತಲುಪಿತ್ತು. ಒಟ್ಟಾರೆಯಾಗಿ ಪರೋಕ್ಷ ತೆರಿಗೆ ಆದಾಯವು ಶೇ. 12.4ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ದೇಶೀಯ ವಹಿವಾಟು ಮತ್ತು ಆಮದುಗಳಲ್ಲಿನ ಹೆಚ್ಚಳ ಇದಕ್ಕೆ ಕಾರಣ.

ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಸರ್ವೀಸಸ್ ಎಲ್‌ಎಲ್‌ಪಿಯ ಪಾಲುದಾರ ವಿವೇಕ್ ಜಲನ್ ಈ ಬಗ್ಗೆ ಮಾತನಾಡಿ,  ʼʼ2017ರ ಜುಲೈಯಲ್ಲಿ ಈ ನಿಯಮ ಜಾರಿಗೆ ಬಂದಾಗಿನಿಂದ 2024ರ ಏಪ್ರಿಲ್‌ವರೆಗೆ ಜಿಎಸ್‌ಟಿ ಸಂಗ್ರಹವು ಸರಾಸರಿ ಮಾಸಿಕ ಆದಾಯವನ್ನು ಸುಮಾರು 0.9 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: GST Collection: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಜಿಎಸ್‌ಟಿ ಸಂಗ್ರಹ; ಏಪ್ರಿಲ್‌ನ ಕಲೆಕ್ಷನ್‌ ಎಷ್ಟು?

Continue Reading
Advertisement
Amul Milk
ದೇಶ2 hours ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Odisha Assembly Election
ದೇಶ4 hours ago

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Mysore lok sabha constituency
ಪ್ರಮುಖ ಸುದ್ದಿ4 hours ago

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Haveri Lok Sabha Constituency
ಹಾವೇರಿ5 hours ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ5 hours ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 20245 hours ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Chikballapur lok sabha constituency
ಪ್ರಮುಖ ಸುದ್ದಿ5 hours ago

Chikballapur lok sabha constituency : ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತರುವರೇ ಸುಧಾಕರ್​?

Bangalore Rain
ಕರ್ನಾಟಕ6 hours ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ6 hours ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ6 hours ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌