RBI Public Tech Platform : ಕೆಲವೇ ನಿಮಿಷಗಳಲ್ಲೇ ಸಾಲ, ಆರ್‌ಬಿಐನಿಂದ ಹೊಸ ವ್ಯವಸ್ಥೆ - Vistara News

ಮನಿ-ಗೈಡ್

RBI Public Tech Platform : ಕೆಲವೇ ನಿಮಿಷಗಳಲ್ಲೇ ಸಾಲ, ಆರ್‌ಬಿಐನಿಂದ ಹೊಸ ವ್ಯವಸ್ಥೆ

RBI Public Tech Platform ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಇದರ ಪರಿಣಾಮ ಕೆಲವೇ ನಿಮಿಷಗಳಲ್ಲಿ ಜನತೆಗೆ ಸಾಲ ಸಿಗಲಿದೆ. ವಿವರ ಇಲ್ಲಿದೆ.

VISTARANEWS.COM


on

Cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ಹೋಮ್‌ ಲೋನ್‌, ಪರ್ಸನಲ್‌ ಲೋನ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಲೋನ್‌, ಡೇರಿ ಲೋನ್‌, ಎಂಎಸ್‌ಎಂಇ ಲೋನ್‌, ಇತ್ಯಾದಿಗಳನ್ನು ಪಡೆಯಲು ಬ್ಯಾಂಕ್‌ಗಳಿಗೆ ದಿನಗಟ್ಟಲೆ ಅಲೆದಿದ್ದೀರಾ, ತಿಂಗಳಾನುಗಟ್ಟಲೆ ಕಾದು ನಿರಾಶರಾಗಿದ್ದೀರಾ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೊಸತೊಂದು (RBI Public Tech Platform) ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿದೆ. ಇದರಿಂದಾಗಿ ಜನರಿಗೆ ಸುಲಭವಾಗಿ ಹಾಗೂ ಕೆಲವೇ ನಿಮಿಷಗಳಲ್ಲಿ ಸಾಲ ಮಂಜೂರಾಗಲಿದೆ. ಅರೆ ಇದು ಹೇಗೆ ಎನ್ನುತ್ತೀರಾ, ಈಗ ವಿವರಗಳನ್ನು ನೋಡೋಣ.

ಆರ್‌ಬಿಐ ಪಬ್ಲಿಕ್‌ ಟೆಕ್‌ ಪ್ಲಾಟ್‌ಫಾರ್ಮ್ ಅನ್ನು ಆಗಸ್ಟ್‌ 17ರಂದು ಪ್ರಾಯೋಗಿಕವಾಗಿ ಕರ್ನಾಟಕ ಸೇರಿದಂತೆ ಒಟ್ಟು 5 ರಾಜ್ಯಗಳಲ್ಲಿ ಆಯ್ದ ಜಿಲ್ಲೆಗಳಲ್ಲಿ ಬಿಡುಗಡೆಗೊಳಿಸಿದೆ. ಕರ್ನಾಟಕ ಹೊರತುಪಡಿಸಿ ಮಧ್ಯಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿದೆ. ಯೋಜನೆ ಯಶಸ್ವಿಯಾದರೆ ಉಳಿದ ರಾಜ್ಯಗಳಿಗೆ ವಿಸ್ತರಣೆಯಾಗಬಹುದು.

ಈ ಪಬ್ಲಿಕ್‌ ಟೆಕ್‌ ಪ್ಲಾಟ್‌ಫಾರ್ಮ್‌ (Public Tech Platform) ಅಡೆತಡೆ ಇಲ್ಲದೆ ಸಾಲ ಮಂಜೂರಾತಿಯ ವ್ಯವಸ್ಥೆ ಮಾಡುವ ಡಿಜಿಟಲ್‌ ಪ್ಲಾಟ್‌ ಫಾರ್ಮ್‌ ಆಗಿದೆ. ಇದನ್ನು ಆರ್‌ಬಿಐನ ಅಧೀನ ಸಂಸ್ಥೆಯಾದ ರಿಸರ್ವ್‌ ಬ್ಯಾಂಕ್‌ ಇನ್ನೊವೇಶನ್‌ ಹಬ್‌ ಅಭಿವೃದ್ಧಿಪಡಿಸಿದೆ. (Reserve bank innovation hub) ಈ ಪ್ಲಾಟ್‌ ಫಾರ್ಮ್‌ ಓಪನ್‌ ಆರ್ಕಿಟೆಕ್ಚರ್‌ ಅನ್ನು ಹೊಂದಿದ್ದು, ಹಣಕಾಸು ವಲಯದ ಎಲ್ಲ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ಎನ್‌ಬಿಎಫ್‌ಸಿಗಳು, ಫಿನ್‌ಟೆಕ್‌ ಕಂಪನಿಗಳು, ಸ್ಟಾರ್ಟಪ್‌ಗಳು ಭಾಗವಹಿಸಬಹುದು. ಗ್ರಾಹಕರಿಗೆ ಸಾಲ ವಿತರಿಸಬಹುದು. (fin tech) ಈ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ ಮೂಲಕ ಗ್ರಾಹಕರು ನಾನಾ ಬ್ಯಾಂಕ್‌ಗಳಿಂದ ಹೋಮ್‌ ಲೋನ್, ಪರ್ಸನ್‌ ಲೋನ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಲೋನ್‌, ಎಂಎಸ್‌ಎಂಇ ಲೋನ್‌ ಇತ್ಯಾದಿಗಳನ್ನು ಕೆಲವೇ ನಿಮಿಷಗಳಲ್ಲಿ ಪಡೆಯಬಹುದು.

ಸಾಲ ಮಂಜೂರಾತಿಗೆ ಅವಶ್ಯವಿರುವ ಫೈನಾನ್ಷಿಯಲ್‌ ಡೇಟಾಗಳನ್ನು ಓಪನ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್‌ಫೇಸ್‌ ಅಥವಾ ಎಪಿಐಗಳ ಮೂಲಕ ಮಾಡುವುದರಿಂದ, ಇಡೀ ಪ್ರಕ್ರಿಯೆ ಸರಳವಾಗುತ್ತದೆ. ಈ ವ್ಯವಸ್ಥೆಯಿಂದ ಸಾಲ ವಿತರಣೆಗೆ ತಗಲುವ ಖರ್ಚು ಕಡಿಮೆಯಾಗಲಿದೆ ಹಾಗೂ ಜನತೆಗೂ ನಾನಾ ಬ್ಯಾಂಕ್‌ಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಮಾಹಿತಿ ಪಡೆಯಲು ಆಗುವ ಸಮಯ ಮತ್ತು ಹಣಕಾಸು ವೆಚ್ಚದಲ್ಲಿ ಉಳಿತಾಯವಾಗಲಿದೆ. ತಮಗೆ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆಯೇ, ಅಥವಾ ಯಾವ ಬ್ಯಾಂಕ್‌ ಅನುಕೂಲವಾಗುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಾಗಾದರೆ ಸಾಲ ವಿತರಣೆಗೆ ಬೇಕಾಗುವ ದಾಖಲೆಗಳನ್ನು ಹೇಗೆ ಸಂಗ್ರಹಿಸಲಾಗುವುದು ಎನ್ನುತ್ತೀರಾ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು, ಅಕೌಂಟ್‌ ಅಗ್ರಿಗೇಟರ್ಸ್‌, ಕ್ರೆಡಿಟ್‌ ಇನ್‌ಫಾರ್ಮಶನ್‌ ಬ್ಯೂರೊಗಳಿಂದ ದಾಖಲಾತಿಗಳನ್ನು ಪಡೆಯಲಾಗುತ್ತದೆ. ಇದಕ್ಕೆ ದಿನಗಟ್ಟಲೆ ಕಾಲಾವಕಾಶ ತಗಲುತ್ತದೆ. ಆದರೆ ಆರ್‌ಬಿಐನ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ನಲ್ಲಿ ಬ್ಯಾಂಕ್‌ಗಳು ಅಥವಾ ಲೆಂಡರ್ಸ್‌ ಡಿಜಿಟಲ್‌ ಡೇಟಾಗಳ ಮೂಲಕ ಮಾಹಿತಿ ಪಡೆಯುತ್ತಾರೆ. ಇದರಿಂದಾಗಿ ಸಾಲ ವಿತರಣೆ ಕೆಲವೇ ನಿಮಿಷಗಳಲ್ಲಿ ನಡೆಯುತ್ತದೆ.

ಈ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್ ಆರಂಭದಲ್ಲಿ ಗೃಹ ಸಾಲ, ಡೇರಿ ಸಾಲ, ಅಡಮಾನ ರಹಿತ ಎಂಎಸ್‌ಎಂಇ ಸಾಲ, 1.6 ಲಕ್ಷ ರೂ. ತನಕ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ ವಿತರಣೆಗೆ ಆದ್ಯತೆ ನೀಡಲಿದೆ. ಡಿಜಿಟಲ್‌ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದರಿಂದಾಗಿ ರೈತರು ಸಾಲ ಪಡೆಯಲು ಬ್ಯಾಂಕ್‌ ಶಾಖೆಗೆ ಹೋಗಬೇಕಿಲ್ಲ. ಸಂಪೂರ್ಣವಾಗಿ ಪೇಪರ್‌ ಲೆಸ್‌ ಆಗಿ ಇದು ನಡೆಯುತ್ತದೆ. ರಾಜ್ಯ ಸರ್ಕಾರಗಳಿಂದ ಭೂ ದಾಖಲೆಗಳ ಡಿಜಿಟಲೀಕರಣ, ಕ್ರೆಡಿಟ್‌ ಬ್ಯೂರೊ ಸ್ಕೋರ್‌ ಮತ್ತಿತರ ದಾಖಲಾತಿಗಳ ಡಿಜಿಟಲೀಕರಣದಿಂದ ಇದು ಸಾಧ್ಯವಾಗಿದೆ.

ಇದೇ ರೀತಿ ಡಿಜಿಟಲ್‌ ಡೇರಿ ಲೋನ್‌ ವ್ಯವಸ್ಥೆಯಲ್ಲಿ ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಬಹುದು. ಹಾಲಿನ ಸೊಸೈಟಿಗಳಿಂದ ಪಡೆಯುವ ಹಾಲು ಖರೀದಿ ಡೇಟಾಗಳ ಡಿಜಿಟಲೀಕರಣದಿಂದ ಇದು ಸಾಧ್ಯವಾಗಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ. ಎಕ್ಸಿಸ್‌ ಬ್ಯಾಂಕ್‌ ಆರ್‌ಬಿಐನ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ ಮೂಲಕ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮತ್ತು ಸಣ್ಣ ಬಿಸಿನೆಸ್‌ ನಡೆಸುವವರಿಗೆ ಅನ್‌ ಸೆಕ್ಯೂರ್ಡ್‌ ಎಂಎಸ್‌ಎಂಇ ಸಾಲ ನೀಡುವುದಾಗಿ ತಿಳಿಸಿದೆ. ಮಧ್ಯಪ್ರದೇಶದಲ್ಲಿ ಬ್ಯಾಂಕ್‌ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಲೋನ್‌ ಅನ್ನು ಆರಂಭದಲ್ಲಿ ನೀಡಲಿದ್ದು, 1.6 ಲಕ್ಷ ರೂ. ತನಕ ಸಾಲ ನೀಡಲಿದೆ. ಎಂಎಸ್‌ಎಂಇ ಅಥವಾ ಸಣ್ಣ ಉದ್ದಿಮೆ, ವ್ಯಾಪಾರಗಳಿಗೆ 10 ಲಕ್ಷ ರೂ. ತನಕ ಸಾಲ ಸಿಗಲಿದೆ ಎಂದು ಆರ್‌ಬಿಐ ತಿಳಿಸಿದೆ. ಪ್ಯಾನ್‌ ವ್ಯಾಲಿಡೇಶನ್‌, ಆಧಾರ್‌ ಇ-ಕೆವೈಸಿ, ಅಕೌಂಟ್‌ ಅಗ್ರಿಗೇಟರ್‌ ಡೇಟಾ, ಲ್ಯಾಂಡ್‌ ರೆಕಾರ್ಡ್‌ಗಳ ವೆರಿಫಿಕೇಶನ್‌ ಎಲ್ಲವೂ ಡಿಜಿಟಲೀಕರಣದಿಂದ ಸುಲಭವಾಗಲಿದೆ. ತ್ವರಿತವಾಗಿ ನಡೆಯಲಿದೆ.

ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

ಈ ಡಿಜಿಟಲ್‌ ಲೋನ್‌ ವಿತರಣೆ ದೇಶದಲ್ಲಿ ಸಾಲ ಮಂಜೂರಾತಿಯ ವಿಧಾನದಲ್ಲಿ ಕ್ರಾಂತಿಕಾರಕ ಪರಿವರ್ತನೆ ತರಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಆಧರಿತ ಬೆಳವಣಿಗೆ ಇವತ್ತು ಹಲವಾರು ವಿಶ್ವ ದಾಖಲೆಗಳನ್ನು ಸೃಷ್ಟಿಸಿದೆ. ಇಡೀ ಜಗತ್ತು ಬೆರಗಿನಿಂದ ನೋಡುತ್ತಿದೆ. ಡಿಜಿಟಲ್‌ ಟ್ರಾನ್ಸಕ್ಷನ್‌ಗಳ ವಿಷಯದಲ್ಲಿ ಭಾರತವು ಈಗ ಅಮೆರಿಕ, ಚೀನಾವನ್ನೂ ಹಿಂದಿಕ್ಕಿದೆ. ಅಮೆರಿಕ, ಚೀನಾ, ಯುರೋಪನ್ನು ಒಟ್ಟು ಸೇರಿಸಿದರೂ, ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್‌ ಟ್ರಾನ್ಸಕ್ಷನ್‌ಗಳನ್ನು ಸರಿಗಟ್ಟಲಾಗದು. ಅಂಥ ಸಾಧನೆಯನ್ನು ದೇಶ ಸಾಧಿಸಿರುವುದು ಗಮನಾರ್ಹ. ಫಿನ್‌ಟೆಕ್‌ ಸಂಶೋಧನೆಯಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದೆ ಎನ್ನುತ್ತಾರೆ ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅನುರಾಗ್‌ ಜೈನ್‌ ಹೇಳುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮನಿ ಗೈಡ್

Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರು ಹೆಚ್ಚಾಗಿದ್ದು, ಅಂತೆಯೇ ವಂಚಕರ ದಾಳಿಯೂ ಹೆಚ್ಚಾಗಿದೆ. ಇದು ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂತಹ ವಂಚನೆಗಳನ್ನು ತಡೆಗಟ್ಟಲು ಬಳಕೆಯ ಸುರಕ್ಷಿತ ವಿಧಾನಗಳನ್ನು ಬಳಸುವುದೊಂದೇ ದಾರಿ. ಅದಕ್ಕಾಗಿ ಇಲ್ಲಿದೆ ಕ್ರೆಡಿಟ್ ಕಾರ್ಡ್‌ (Credit Card Safety Tips) ಕೆಲವು ಟಿಪ್ಸ್. ಕ್ರೆಡಿಟ್ ಕಾರ್ಡ್ ವಂಚನೆಗಳಿಂದ ಪಾರಾಗಲು ಈ ಟಿಪ್ಸ್ ಬಳಸಿ.

VISTARANEWS.COM


on

By

Credit Card Safety Tips
Koo

ಪಾವತಿಗೆ (payment) ಕ್ರೆಡಿಟ್ ಕಾರ್ಡ್‌ಗಳ ಬಳಕೆ (Credit Card Safety Tips) ಇಂದು ಸಾಮಾನ್ಯವಾಗಿದೆ. ಇದರಿಂದ ಸಾಕಷ್ಟು ಪ್ರಯೋಜನಗಳು ಇದ್ದರೂ ಅಪಾಯವೂ (risk) ಅಷ್ಟೇ ಇದೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಗಳ ಜನಪ್ರಿಯತೆಯು ವಂಚನೆಯಲ್ಲಿ ( fraud) ಏರಿಕೆಗೂ ಕಾರಣವಾಗಿದೆ. ಹೀಗಾಗಿ ಎಲ್ಲ ಕಡೆ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವಾಗ ಎಚ್ಚರದಿಂದ ಇರುವುದೊಂದೇ ದಾರಿ.

ವಿಶ್ವದಾದ್ಯಂತ ಸಾವಿರಾರು ಮಂದಿ ಇಂದು ಕ್ರೆಡಿಟ್ ಕಾರ್ಡ್ ವಂಚಕರ ಪಾಲಿಗೆ ತುತ್ತಾಗಿದ್ದಾರೆ. ಇಂತಹ ವಂಚನೆಗಳನ್ನು ಮಾಡಲು ಪ್ರತಿದಿನ ವಂಚಕರು ಹೊಸಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಅನಧಿಕೃತ ವಹಿವಾಟು, ಮಾಹಿತಿ ಕಳ್ಳತನ, ಉಳಿತಾಯದ ಖಾತೆಯಿಂದ ಹಣ ಕಳವು ಸೇರಿದಂತೆ ವಂಚನೆಯ ಕೃತ್ಯಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅರಿವು ಮತ್ತು ಜಾಗರೂಕತೆಯ ಅಗತ್ಯ. ಅದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು.

1. ವಹಿವಾಟನ್ನು ಅಪೂರ್ಣಗೊಳಿಸಬೇಡಿ

ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸುವಾಗ ಸ್ಥಳದಿಂದ ಹೊರಡುವ ಮೊದಲು ವಹಿವಾಟು ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕ್ರೆಡಿಟ್ ಕಾರ್ಡ್‌ನ ಎರಡೂ ಬದಿಗಳ ಫೋಟೋಕಾಪಿಗಳನ್ನು ಯಾರಿಗೂ ನೀಡಬೇಡಿ. ಯಾರಾದರೂ ನಿಮ್ಮ ಕಾರ್ಡ್ ಮಾಹಿತಿಯನ್ನು ಹೊಂದಿದ್ದರೆ, ಅವರು ಆನ್‌ಲೈನ್ ವಹಿವಾಟುಗಳಿಗಾಗಿ ನಿಮ್ಮ ಕಾರ್ಡ್‌ನ ಹಿಂಭಾಗದಲ್ಲಿ ಮುದ್ರಿಸಲಾದ ಕಾರ್ಡ್ ಪರಿಶೀಲನೆ ಮೌಲ್ಯವನ್ನು (CVV) ಬಳಸಬಹುದು ಎಚ್ಚರ. ಇದಕ್ಕಾಗಿ ಪ್ರತಿ ವಹಿವಾಟಿಗೂ ಒಟಿಪಿ ಬಳಸಲು ಮೊದಲೇ ಸೆಟ್ಟಿಂಗ್ ಮಾಡಿಕೊಳ್ಳಿ.


2. ಖಾತೆಗಳನ್ನು ಪರಿಶೀಲಿಸುತ್ತಿರಿ

ಅನಧಿಕೃತ ಚಟುವಟಿಕೆ ಕಾರ್ಡ್ ಸ್ಟೇಟ್ ಮೆಂಟ್ ಮತ್ತು ವಹಿವಾಟುಗಳನ್ನು ಪರಿಶೀಲಿಸುವ ಮೂಲಕ ಖಾತೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ. ಬ್ಯಾಂಕ್ ಅನುಮತಿಯೊಂದಿಗೆ ವಹಿವಾಟುಗಳಿಗಾಗಿ ನೈಜ-ಸಮಯದ ಅಧಿಸೂಚನೆಗಳನ್ನು ಸಕ್ರಿಯಗೊಳಿಸಿ. ಇದು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಲು ಮತ್ತು ತಕ್ಷಣವೇ ಬ್ಯಾಂಕ್‌ ಅನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ.

3. ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಿ

ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಅಥವಾ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಸ್ವೀಕರಿಸಿದ್ದರೆ ಆರ್ ಬಿ ಐ ಕ್ರೆಡಿಟ್ ಕಾರ್ಡ್ ಅನ್ನು ಸ್ವೀಕರಿಸಿದ 30 ದಿನಗಳಲ್ಲಿ ಸಕ್ರಿಯಗೊಳಿಸುತ್ತದೆ. ಭದ್ರತಾ ದೃಷ್ಟಿಯಿಂದ ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವಿಕೆಯು ಪ್ರಾಮುಖ್ಯತೆ ಪಡೆದಿದೆ. ನಿರ್ದಿಷ್ಟ ಸಮಯದೊಳಗೆ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಮರೆಯಬೇಡಿ.

4. CVV ಸಂಖ್ಯೆಯನ್ನು ಹಂಚಿಕೊಳ್ಳಬೇಡಿ

ಆನ್‌ಲೈನ್ ಪಾವತಿಗಳನ್ನು ಮಾಡುವಾಗ ಕಾರ್ಡ್‌ನ ಹಿಂಭಾಗದಲ್ಲಿ ಮುದ್ರಿಸಲಾದ ಕಾರ್ಡ್ ಪರಿಶೀಲನೆ ಮೌಲ್ಯ (CVV) ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಈ ಸಂಖ್ಯೆ ಯಾರಿಗಾದರೂ ಲಭ್ಯವಾದರೆ ಸುಲಭವಾಗಿ ಅವರು ನಿಮ್ಮ ಕಾರ್ಡ್ ಅನ್ನು ದುರ್ಬಳಕೆ ಮಾಡಬಹುದು.

5. ಕ್ಲಿಷ್ಟವಾದ ಪಾಸ್‌ವರ್ಡ್‌ ಬಳಸಿ

ಆನ್‌ಲೈನ್ ಶಾಪಿಂಗ್‌ನ ಹೆಚ್ಚುತ್ತಿರುವ ಜನಪ್ರಿಯತೆಯು ದೃಢವಾದ ಸೈಬರ್‌ ಸೆಕ್ಯುರಿಟಿ ಅಭ್ಯಾಸಗಳನ್ನು ಅನುಸರಿಸುವ ಅಗತ್ಯವನ್ನು ಉಂಟು ಮಾಡಿದೆ. ಕ್ರೆಡಿಟ್ ಕಾರ್ಡ್ ಅಥವಾ ಹಣಕಾಸು ಖಾತೆಗಳನ್ನು ದುರುಪಯೋಗದಿಂದ ರಕ್ಷಿಸಲು ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣವನ್ನು ಬಳಸಿಕೊಂಡು ಬಲವಾದ ಮತ್ತು ಅನನ್ಯವಾದ ಪಾಸ್‌ವರ್ಡ್‌ಗಳನ್ನು ರಚಿಸುವುದನ್ನು ಒಳ್ಳೆಯದು. ವಹಿವಾಟುಗಳಿಗೆ ಹೆಚ್ಚುವರಿ ಭದ್ರತೆಯಾಗಿ ಸಾಧ್ಯವಿರುವಲ್ಲೆಲ್ಲಾ ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ.

6. ವಂಚನೆಯ ಬಗ್ಗೆ ಜಾಗರೂಕರಾಗಿರಿ

ಇತ್ತೀಚಿನ ದಿನಗಳಲ್ಲಿ ಫಿಶಿಂಗ್ ಸ್ಕ್ಯಾಮ್‌ಗಳು ಮೋಸದ ಇ-ಮೇಲ್‌, ಸಂದೇಶ ಅಥವಾ ಫೋನ್ ಕರೆಗಳನ್ನು ಒಳಗೊಂಡಿರುತ್ತವೆ. ಅದು ಬ್ಯಾಂಕ್‌ ಅಥವಾ ಪ್ರಸಿದ್ಧ ಕಂಪೆನಿಗಳ ಕಾನೂನುಬದ್ಧ ಮೂಲಗಳನ್ನು ಬಳಸಿ ಎಐ ನಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಮಾಡಲಾಗುತ್ತದೆ. ಈ ಬಗ್ಗೆ ಅನುಮಾನಿಸುವುದು ಕಷ್ಟ. ಹೀಗಾಗಿ ಯಾವುದೇ ಮಾಹಿತಿಯನ್ನು ಎಸ್ ಎಂಎಸ್ , ಇಮೇಲ್, ಕರೆಗೆ ನೀಡಬೇಡಿ. ಸಂದೇಹವಿದ್ದಲ್ಲಿ, ಸಂವಹನದ ದೃಢೀಕರಣವನ್ನು ಪರಿಶೀಲಿಸಲು ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ವಿತರಕರನ್ನು ಸಂಪರ್ಕಿಸಿ.

ಇದನ್ನೂ ಓದಿ: Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

7. ಸುರಕ್ಷಿತ ವೆಬ್‌ಸೈಟ್‌ಗಳಲ್ಲಿ ಮಾತ್ರ ಬಳಸಿ

ಆನ್‌ಲೈನ್ ಶಾಪಿಂಗ್ ಪ್ರಪಂಚವು ವಿಶಾಲವಾಗಿದೆ ಮತ್ತು ಕೆಲವೊಮ್ಮೆ ಅಪಾಯಕಾರಿಯಾಗಿದೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ಕ್ರೆಡಿಟ್ ಕಾರ್ಡ್ ಅನ್ನು ಸುರಕ್ಷಿತ ಮತ್ತು ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿ ಮಾತ್ರ ಬಳಸಿ. ವಹಿವಾಟು ನಡೆಸುವ ಮೊದಲು ಅಥವಾ ನಿಮ್ಮ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವ ಮೊದಲು ವೆಬ್‌ಸೈಟ್‌ನ ದೃಢೀಕರಣವನ್ನು ಪರಿಶೀಲಿಸಲು ಪ್ರತಿಷ್ಠಿತ ನಿವ್ವಳ ದೃಢೀಕರಣ ಏಜೆನ್ಸಿಯನ್ನು ಬಳಸಿಕೊಳ್ಳಿ.


8. ಸಾಧನಗಳನ್ನು ಸುರಕ್ಷಿತಗೊಳಿಸಿ

ಆನ್‌ಲೈನ್ ವಹಿವಾಟು ನಡೆಸಲು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ಬಳಸಿದರೆ ನಿಮ್ಮ ಸಾಧನಗಳು ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಸೈಬರ್ ಬೆದರಿಕೆಗಳಿಂದ ರಕ್ಷಿಸಲು ಸಾಧನದ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ನವೀಕರಿಸಿ. ಕಂಪ್ಯೂಟರ್‌ನ ಆಪರೇಟಿಂಗ್ ಸಿಸ್ಟಂ ಮತ್ತು ಅಪ್ಲಿಕೇಶನ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುವುದರಿಂದ ಭದ್ರತಾ ದೋಷಗಳನ್ನು ಸರಿಪಡಿಸಲು ಮತ್ತು ಸೈಬರ್ ದಾಳಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಹಣಕಾಸಿನ ವಹಿವಾಟುಗಳಿಗಾಗಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವುದನ್ನು ತಪ್ಪಿಸಿ.

9. ಖರ್ಚಿನ ಮಿತಿ ನಿಗದಿಪಡಿಸಿ

ಹೆಚ್ಚಿನ ಕ್ರೆಡಿಟ್ ಕಾರ್ಡ್ ಕಂಪನಿ ಮತ್ತು ಬ್ಯಾಂಕ್‌ಗಳು ತಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ವಹಿವಾಟು ಮಿತಿಗಳನ್ನು ಮತ್ತು ಅಲರ್ಟ್ ಗಳನ್ನು ಹೊಂದಿಸಲು ಅವಕಾಶ ಮಾಡಿಕೊಡುತ್ತವೆ. ನಿರ್ದಿಷ್ಟಪಡಿಸಿದ ಮಿತಿಯನ್ನು ಮೀರಿದ ವಹಿವಾಟುಗಳು ಸೇರಿದಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಯಾವುದೇ ವಹಿವಾಟಿನ ಕುರಿತು ಅಲರ್ಟ್ ಗಳನ್ನು ಸೂಚಿಸುತ್ತವೆ. ಈ ಅಧಿಸೂಚನೆಗಳು ನಿಮ್ಮ ಕಾರ್ಡ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಅನುಮಾನಾಸ್ಪದ ವಹಿವಾಟಿನ ಸಂದರ್ಭದಲ್ಲಿ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು ನೆರವಾಗುತ್ತದೆ. ಖರ್ಚು ಮಿತಿಗಳನ್ನು ಫಿಕ್ಸ್ ಮಾಡುವುದರಿಂದ ಜೇಬಿಗೂ ಅನುಕೂಲಕರ!

Continue Reading

ಮನಿ-ಗೈಡ್

Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

Money Guide: ಬ್ಯಾಂಕ್‌ ಖಾತೆ ಇರಲಿ, ಮ್ಯೂಚುವಲ್‌ ಫಂಡ್‌ ಇರಲಿ ನಾಮಿನಿಯನ್ನು ಹೆಸರಿಸುವುದು ಬಹಳ ಮುಖ್ಯ. ಇದರಿಂದ ಅನೇಕ ಗೊಂದಲ, ಸಂಘರ್ಷವನ್ನು ತಪ್ಪಿಸಬಹುದು. ಖಾತೆದಾರರ ಮರಣದ ನಂತರ ಸ್ವತ್ತು ಯಾರುಗೆ ಸೇರಬೇಕೆಂಬುದು ಸ್ಪಷ್ಟವಾಗಿ ಉಲ್ಲೇಖವಾಗಿರುವ ಕಾರಣ ಕೊನೆಯ ಕ್ಷಣದ ಗೊಂದಲ ಇದರಿಂದ ಇಲ್ಲವಾಗುತ್ತದೆ. ಇಷ್ಟು ಮಾತ್ರವಲ್ಲ ಇನ್ನೂ ಅನೇಕ ಪ್ರಯೋಜನಗಳಿವೆ. ಅವು ಯಾವುವು ಎನ್ನುವುದರ ವಿವರಕ್ಕಾಗಿ ಈ ಲೇಖನ ಓದಿ.

VISTARANEWS.COM


on

Money Guide
Koo

ಬೆಂಗಳೂರು: ಆರ್ಥಿಕವಾಗಿ ಸದೃಢವಾಗುವುದು, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವುದು ಪ್ರತಿಯೊಬ್ಬನ ಕನಸು. ಇದಕ್ಕಾಗಿ ಸೂಕ್ತ ಹಣಕಾಸಿನ ಯೋಜನೆ ರೂಪಿಸಿಕೊಳ್ಳುವುದು ಅತ್ಯಗತ್ಯ. ಅಲ್ಲದೆ ನಿಮ್ಮ ಸ್ವತ್ತುಗಳನ್ನು ರಕ್ಷಿಸುವುದು ಮತ್ತು ಅಗತ್ಯವಿದ್ದಾಗ ನಿಮ್ಮ ಪ್ರೀತಿಪಾತ್ರರಿಗೆ ಆರ್ಥಿಕ ನೆರವು ಲಭಿಸುವುದನ್ನು ಖಚಿತಪಡಿಸಿಕೊಳ್ಳುವುದೂ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇದಕ್ಕೇನು ಮಾಡಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಮತ್ತು ಸರಳ ಪರಿಹಾರ ಮಾರ್ಗವೆಂದರೆ ನಿಮ್ಮ ಬ್ಯಾಂಕ್ ಖಾತೆ ಮತ್ತು ಮ್ಯೂಚುವಲ್ ಫಂಡ್ ಖಾತೆಗೆ ನಾಮಿನಿಯನ್ನು ಹೆಸರಿಸುವುದು. ಹೌದು, ಈ ಕ್ರಮವು ಹಲವು ಪ್ರಯೋಜನಗಳನ್ನು ನೀಡುವ ಜತೆಗೆ ಸ್ವತ್ತಿಗೆ ಸೂಕ್ತ ರಕ್ಷಣೆಯನ್ನೂ ಒದಗಿಸುತ್ತದೆ. ಖಾತೆದಾರರ ಮರಣದ ನಂತರ ಸ್ವತ್ತುಗಳ ತಡೆರಹಿತ ವರ್ಗಾವಣೆ ಇದರಿಂದ ಸಾಧ್ಯವಾಗುತ್ತದೆ. ಇಂದಿನ ಮನಿಗೈಡ್‌ (Money Guide)ನಲ್ಲಿ ಈ ಕುರಿತಾದ ವಿವರಗಳಿವೆ.

ನಾಮಿನಿಯನ್ನು ಹೆಸರಿಸುವುದರಿಂದ ಲಭಿಸುವ ಪ್ರಯೋಜನಗಳು

ಗೊಂದಲ ರಹಿತವಾಗಿ ಸ್ವತ್ತುಗಳ ವರ್ಗಾವಣೆ

ಖಾತೆಗೆ ನಾಮಿನಿಯನ್ನು ಹೆಸರಿಸುವುದರಿಂದ ಲಭಿಸುವ ಅತಿ ಮುಖ್ಯ ಪ್ರಯೋಜನವಿದು. ಬ್ಯಾಂಕ್‌ ಖಾತೆಗೆ ನಾಮಿನಿ ಹೆಸರನ್ನು ನಿರ್ದೇಶಿಸುವುದರಿಂದ ಖಾತೆ ಹೊಂದಿರುವಾತ ಆಕಸ್ಮಿಕವಾಗಿ ಮರಣ ಹೊಂದಿದರೆ ದೀರ್ಘ ಕಾನೂನು ಪ್ರಕ್ರಿಯೆಯ ಅಗತ್ಯವಿಲ್ಲದೆ ಬ್ಯಾಂಕ್ ಖಾತೆಯ ಬಾಕಿಯನ್ನು ನಾಮನಿರ್ದೇಶಿತರಿಗೆ (ನಾಮಿನಿ) ವರ್ಗಾಯಿಸಬಹುದು. ಈ ಮೂಲಕ ನಾಮಿನಿಯು ಸರಳ ಮತ್ತು ವೇಗವಾಗಿ ಹಣವನ್ನು ಪಡೆಯಬಹುದು.

ಅದೇ ರೀತಿ ಮ್ಯೂಚುವಲ್‌ ಫಂಡ್‌ನಲ್ಲಿಯೂ ನಾಮಿನಿಯನ್ನು ಹೆಸರಿಸುವುದರಿಂದ ಖಾತೆಯಲ್ಲಿರುವ ಮೊತ್ತವನ್ನು ಖಾತೆದಾರನ ಮರಣದ ನಂತರ ನೇರವಾಗಿ ನಾಮಿನಿಗೆ ವರ್ಗಾಯಿಸಬಹುದು. ಹೀಗಾಗಿ ಇದು ಖಾತೆದಾರರ ಮರಣದ ಸಂದರ್ಭದಲ್ಲಿ ಅವರ ಪ್ರೀತಿಪಾತ್ರರಿಗೆ ನೀಡಬಹುದುದಾದ ಮೌಲ್ಯಯುತ ಉಡುಗೊರೆ ಎನಿಸಿಕೊಂಡಿದೆ.

ಕಾನೂನು ತೊಡಕು, ಗೊಂದಲಗಳ ನಿವಾರಣೆ

ನಾಮನಿರ್ದೇಶನವು ಸಂಭಾವ್ಯ ವಾರಸುದಾರರ ನಡುವಿನ ಕಾನೂನು ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಖಾತೆದಾರರು ಮುಂದೆ ತಮ್ಮ ಆಸ್ತಿಗಳನ್ನು ಯಾರಿಗೆ ನೀಡಲು ಉದ್ದೇಶಿಸಿದ್ದಾರೆ ಎನ್ನುವ ಅಂಶ ಇದರಿಂದ ಯಾವುದೇ ಗೊಂದಲಗಳಿಲ್ಲದೆ ತಿಳಿದು ಬರುತ್ತದೆ. ಈ ಮೂಲಕ ಕುಟುಂಬ ಸದಸ್ಯರ ನಡುವೆ ಸಂಭವಿಸಬಹುದಾದ ಸಂಘರ್ಷಗಳನ್ನು ಇದು ತಡೆಯುತ್ತದೆ. ಜತೆಗೆ ತಕ್ಷಣವೇ ಹಣವನ್ನು ಹಿಂಪಡೆಯಬಹುದಾದ ಕಾರಣ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದು ಕೈ ಹಿಡಿಯುತ್ತದೆ. ಕೋರ್ಟ್‌, ಕಚೇರಿ ಎಂದು ಅಲೆದಾಡುವ ಪ್ರಮೇಯವೇ ಕಂಡು ಬರುವುದಿಲ್ಲ.

ಅವಲಂಬಿತರಿಗೆ ಆರ್ಥಿಕ ಸುರಕ್ಷೆ

ನಾಮನಿರ್ದೇಶಿತರನ್ನು ಹೆಸರಿಸುವುದರಿಂದ ಅವಲಂಬಿತರು ಅಥವಾ ಉದ್ದೇಶಿತ ಫಲಾನುಭವಿಗಳು ತ್ವರಿತವಾಗಿ ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಖಾತೆದಾರರ ನಿಧನದ ನಂತರ ತಕ್ಷಣದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಇದು ನಿರ್ಣಾಯಕವಾಗಿದೆ. ಒಂದು ವೇಳೆ ನಾಮನಿರ್ದೇಶಿತರು ಅಪ್ರಾಪ್ತರಾಗಿದ್ದರೆ ಅವರು ಪ್ರಾಪ್ತ ವಯಸ್ಕರಾಗುವ ತನಕ ಅವರ ಪೋಷಕರು ಇದನ್ನು ನಿಭಾಯಿಸಬಹುದು. ಇದರಿಂದ ಹಣ ದುರುಪಯೋಗವಾಗುವುದನ್ನು ತಡೆಯಬಹುದು.

ಖರ್ಚು ಕಡಿತ

ನಾಮಿನಿಯನ್ನು ಹೆಸರಿಸುವುದರಿಂದ ಲಭಿಸುವ ಇನ್ನೊಂದು ಮುಖ್ಯ ಪ್ರಯೋಜನ ಎಂದರೆ ಖರ್ಚು ಕಡಿತ. ಸ್ಪಷ್ಟವಾಗಿ ಹಣ ಯಾರಿಗೆ ಸೇರಬೇಕೆಂದು ಉಲ್ಲೇಖಿಸುವುದರಿಂದ ಕೋರ್ಟ್‌ ಅಲೆದಾಟ ಇದರಿಂದ ತಪ್ಪುತ್ತದೆ. ಈ ಮೂಲಕ ವಕೀಲರ ಫೀಸ್‌ ಸೇರಿದಂತೆ ಅನೇಕ ಖರ್ಚುಗಳನ್ನು ಉಳಿಸಬಹುದು.

ಬದಲಾವಣೆಯನ್ನೂ ಮಾಡಬಹುದು

ಒಂದು ವೇಳೆ ನಾಮಿನಿಯ ಹೆಸರನ್ನು ಬದಲಾಯಿಸಬೇಕಂದು ಖಾತೆದಾರರಿಗೆ ಅನಿಸಿದರೆ ಅದಕ್ಕೆ ಬೇಕಾದ ಆಯ್ಕೆಯೂ ಲಭ್ಯ. ಕೆಲವು ಸ್ವತ್ತುಗಳನ್ನು ಉದ್ದೇಶಿತರಿಗೆ ಪರಿಣಾಮಕಾರಿಯಾಗಿ ವರ್ಗಾಯಿಸಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಇದು ವಿಲ್‌ ಮತ್ತು ಟ್ರಸ್ಟ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

ಒಟ್ಟಿನಲ್ಲಿ ನಿಮ್ಮ ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್ ಖಾತೆಗಳಿಗೆ ನಾಮಿನಿಯನ್ನು ಸೇರಿಸುವುದರಿಂದ ನಿಮ್ಮ ಸ್ವತ್ತುಗಳ ಸುಗಮ ಮತ್ತು ಪರಿಣಾಮಕಾರಿ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಬಹುದು. ಮಾತ್ರವಲ್ಲ ಸಂಭಾವ್ಯ ಕಾನೂನು ತೊಡಕುಗಳನ್ನು ನಿವಾರಿಸಿ ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.

Continue Reading

ವಾಣಿಜ್ಯ

New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಹಣಕಾಸು ನಿಯಮ, ಎಲ್ ಪಿಜಿ ದರ, ಸಂಚಾರ ನಿಯಮ, ಆಧಾರ್ ಕಾರ್ಡ್ ನವೀಕರಣ ಸೇರಿದಂತೆ ಜೂನ್ 1ರಿಂದ ಹಲವು ಪ್ರಮುಖ ಆರ್ಥಿಕ ನಿಯಮಗಳಲ್ಲಿ ಬದಲಾವಣೆಗಳು (New Financial Rules) ಆಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

New Financial Rules
Koo

ಮೇ ತಿಂಗಳಾಂತ್ಯದಲ್ಲಿ ಈಗ ನಾವಿದ್ದೇವೆ. ಹೀಗಾಗಿ ಮುಂದಿನ ತಿಂಗಳ ಆರಂಭದಿಂದಲೇ ವಿವಿಧ ಹಣಕಾಸು ನಿಯಮಗಳು (New Financial Rules) ಬದಲಾಗಲಿದೆ. ಜೂನ್ 1ರಿಂದ (june) ಯಾವೆಲ್ಲ ಹೊಸ ನಿಯಮಗಳು ಬರಲಿದೆ, ಹಣಕಾಸು ಕಾನೂನಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಎಂಬ ಕುರಿತು ಮಾಹಿತಿ ಇಲ್ಲಿದೆ.

2024ರ ಜೂನ್ 1ರಿಂದ ಐದು ಪ್ರಮುಖ ಆರ್ಥಿಕ ಬೆಳವಣಿಗೆಗಳು ಸಂಭವಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿದೆ. ಅವುಗಳಲ್ಲಿ ಹಣಕಾಸು ನಿಯಮ (Financial Changes), ಎಲ್ ಪಿಜಿ ದರ (LPG Cylinder Prices), ಸಂಚಾರ ನಿಯಮ (New Traffic Rules), ಆಧಾರ್ ಕಾರ್ಡ್ (Aadhaar card update) ನವೀಕರಣ ಸೇರಿವೆ.

ಎಲ್ ಪಿ ಜಿ ಸಿಲಿಂಡರ್ ಬೆಲೆಗಳು

ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳ ಮೊದಲನೇ ದಿನ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿ ಪಡಿಸುತ್ತದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ. ಮೇ ತಿಂಗಳಲ್ಲಿ ಸಂಸ್ಥೆಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದವು. ಆದರೂ ತೈಲ ಸಂಸ್ಥೆಗಳು ಜೂನ್ 1 ರಂದು ಮತ್ತೆ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಿವೆ.

ತೈಲ ಮಾರುಕಟ್ಟೆ ಕಂಪೆನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ನಿರ್ಧರಿಸುತ್ತವೆ. 14 ಕೆ.ಜಿ. ದೇಶೀಯ ಮತ್ತು 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳಲ್ಲಿ ಜೂನ್ ಮೊದಲನೇ ತಾರೀಖಿನಂದು ಬದಲಾವಣೆ ಆಗುತ್ತವೆ.

ಬ್ಯಾಂಕುಗಳಿಗೆ ರಜೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಬ್ಯಾಂಕ್ ಹಾಲಿಡೇ ಪಟ್ಟಿಯ ಪ್ರಕಾರ ಜೂನ್‌ನಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದು ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನಗಳನ್ನು ಒಳಗೊಂಡಿದೆ. ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.


ಡ್ರೈವಿಂಗ್ ಲೈಸೆನ್ಸ್ ನಿಯಮ

ಹೊಸ ಡ್ರೈವಿಂಗ್ ಲೈಸೆನ್ಸ್ ನಿಯಮಗಳು ಜೂನ್ ತಿಂಗಳಿನಿಂದ ಅನ್ವಯವಾಗಲಿದೆ. ಹೊಸ ನಿಯಮದ ಪ್ರಕಾರ ಅತೀ ವೇಗದಲ್ಲಿ ವಾಹನ ಚಲಾಯಿಸಿದರೆ 1000ರಿಂದ 2000 ರೂ.ವರೆಗೆ ದಂಡ ತೆರಬೇಕಾಗಬಹುದು. ಅದೇ ಸಮಯದಲ್ಲಿ, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ 500 ರೂ ದಂಡವನ್ನು ಪಾವತಿಸಬೇಕಾಗುತ್ತದೆ.
ಇದಲ್ಲದೇ ಚಾಲಕ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ದಂಡದ ಮೊತ್ತ ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ.

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ವರ್ಷ ಪೂರ್ಣಗೊಂಡಿರಬೇಕು ಎಂಬುದು ಹಳೆಯ ನಿಯಮ. ಹೊಸ ನಿಯಮಗಳ ಅಡಿಯಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ 25,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಜೂನ್ 1ರಿಂದ ಆರ್ ಟಿಒ ಗಳಿಗಿಂತ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್ ಪರೀಕ್ಷೆಯನ್ನು ನಡೆಸಬಹುದು. ಅಲ್ಲದೇ ಅಪ್ರಾಪ್ತ ವಯಸ್ಕರು ಚಾಲನೆ ಮಾಡುವಾಗ ಅಪಘಾತ ಉಂಟು ಮಾಡಿದರೆ ಅವರು 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿಯನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಹೆಚ್ಚುವರಿಯಾಗಿ, ಅವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು. ಅವರ ಪೋಷಕರನ್ನು ಜೈಲಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ


ಆಧಾರ್ ಕಾರ್ಡ್ ನಿಯಮ

ಜೂನ್ 14 ರ ಮೊದಲು ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸರಳವಾಗಿ ಹೇಳುವುದಾದರೆ ಜೂನ್ 14 ರ ಅನಂತರ ಆಧಾರ್ ಕಾರ್ಡ್ ನವೀಕರಿಸಲು ಶುಲ್ಕ ವಿಧಿಸಲಾಗುತ್ತದೆ.

ಯುಐಡಿಎಐ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ದಿನಾಂಕವನ್ನು ಜೂನ್ 14 ರವರೆಗೆ ವಿಸ್ತರಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಹೊಂದಿರುವವರು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ನವೀಕರಿಸಬಹುದು. ಆದರೂ ಆಫ್‌ಲೈನ್ ಅಪ್‌ಡೇಟ್‌ಗಾಗಿ ಜೂನ್ 14 ರ ಬಳಿಕ ಆಧಾರ್ ಕೇಂದ್ರಕ್ಕೆ ಹೋಗುವಾಗ ಪ್ರತಿ ಅಪ್‌ಡೇಟ್‌ಗೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Continue Reading

ದೇಶ

SBI Warning: ನಕಲಿ ಸಂದೇಶಗಳ ಬಗ್ಗೆ ಎಚ್ಚರ‌ ಇರಲಿ; ಗ್ರಾಹಕರಿಗೆ ಎಸ್ ಬಿ ಐ ಸೂಚನೆ

ಸೈಬರ್ ವಂಚಕರು ಗ್ರಾಹಕರನ್ನು ವಂಚಿಸಲು ಹೊಸ ಹೊಸ ವಿಧಾನವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ನಕಲಿ ಎಪಿಕೆ ಲಿಂಕ್‌ಗಳ ಮೂಲಕ ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಅವಕಾಶ ನೀಡುತ್ತಾರೆ. ಈ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಎಸ್ ಬಿಐ (SBI Warning) ಹೇಳಿದೆ.

VISTARANEWS.COM


on

By

SBI Warning
Koo

ರಿವಾರ್ಡ್ ಪಾಯಿಂಟ್ ಅಧಿಸೂಚನೆಗಳು (point redemption notifications) ಸೇರಿದಂತೆ ನಕಲಿ ಸಂದೇಶಗಳ (fake messages) ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Warning) ಎಚ್ಚರಿಕೆ ನೀಡಿದೆ. ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ (whats app) ಮೂಲಕ ಕಳುಹಿಸಲಾದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಥವಾ ಯಾವುದೇ ಅಪ್ಲಿಕೇಶನ್‌ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡಿದೆ.

ವಿವಿಧ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಮಾಡಿದ ನಿಯಮಿತ ವಹಿವಾಟುಗಳಿಗಾಗಿ ಎಸ್‌ಬಿಐ ತನ್ನ ಗ್ರಾಹಕರಿಗೆ ಕಾರ್ಪೊರೇಟ್-ವೈಡ್ ಲಾಯಲ್ಟಿ ಕಾರ್ಯಕ್ರಮವಾಗಿ ಪಾಯಿಂಟ್‌ಗಳನ್ನು ನೀಡುತ್ತದೆ. ಅಲ್ಲದೆ, ಪ್ರತಿ ಪಾಯಿಂಟ್‌ನ ಮೌಲ್ಯವು 25 ಪೈಸೆ. ಅನೇಕ ಬಳಕೆದಾರರು ಹಲವಾರು ತಿಂಗಳುಗಳವರೆಗೆ ತಮ್ಮ ಅಂಕಗಳನ್ನು ಪಡೆದುಕೊಳ್ಳುವುದಿಲ್ಲ.

ಹೆಚ್ಚುತ್ತಿರುವ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಬಿಐ ತನ್ನ ಗ್ರಾಹಕರು ಎಚ್ಚರಿಕೆ ವಹಿಸುವಂತೆ ತಿಳಿಸಿದೆ.

ಸೈಬರ್ ವಂಚಕರು ಗ್ರಾಹಕರನ್ನು ವಂಚಿಸಲು ಹೊಸ ಹೊಸ ವಿಧಾನವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಮೊದಲಿಗೆ ನಕಲಿ ಎಪಿಕೆ ಲಿಂಕ್‌ಗಳ ಮೂಲಕ ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಅವಕಾಶ ನೀಡುವಂತೆ ಹೇಳುತ್ತಾರೆ. ಹೀಗಾಗಿ ಗ್ರಾಹಕರು ಎಚ್ಚರಿಕೆ ವಹಿಸಬೇಕು.

ಎಪಿಕೆ ಎಂದರೆ ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್. APK ಎನ್ನುವುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಿಂದ ಸಾಧನಗಳಲ್ಲಿ ಅಪ್ಲಿಕೇಶನ್‌ಗಳನ್ನು ವಿತರಿಸಲು ಮತ್ತು ಸ್ಥಾಪಿಸಲು ಬಳಸುವ ಅಪ್ಲಿಕೇಶನ್ ಫೈಲ್ ಫಾರ್ಮ್ಯಾಟ್ ಆಗಿದೆ.
ಎಸ್ ಬಿ ಐ ಯು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಲಿಂಕ್‌ಗಳನ್ನು ಎಂದಿಗೂ ಒದಗಿಸುವುದಿಲ್ಲ ಎಂದು ಬ್ಯಾಂಕ್ ಹೇಳಿಕೊಂಡಿದೆ.

ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ವಂಚಕರು ಎಪಿಕೆ ಮತ್ತು ಎಸ್ ಎಂಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಬ್ಯಾಂಕ್ ಹೇಳಿದೆ.

ಎಸ್ ಬಿಐ ಮಾಡಿರುವ ಪೋಸ್ಟ್ ಪ್ರಕಾರ ಎಸ್‌ಬಿಐ ಎಂದಿಗೂ ಲಿಂಕ್‌ಗಳು ಅಥವಾ ಅಪೇಕ್ಷಿಸದ ಎಪಿಕೆ ಗಳನ್ನು ಎಸ್ ಎಂಎಸ್ ಅಥವಾ ವಾಟ್ಸ್ ಆಪ್ ಮೂಲಕ ಒದಗಿಸುವುದಿಲ್ಲ. ಅಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಪರಿಚಯವಿಲ್ಲದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಹೇಳಿದೆ.


ಎಸ್ ಬಿ ಐ ಪಾಯಿಂಟ್‌ ಚೆಕ್ ಮಾಡುವುದು ಹೇಗೆ?

ಎಸ್ ಬಿ ಐ ಮಾಹಿತಿ ಪ್ರಕಾರ, ಬಳಕೆದಾರರು ಸ್ವಯಂಚಾಲಿತವಾಗಿ ಎಸ್ ಬಿ ಐ ರಿವಾರ್ಡ್ಜ್ ಪ್ರೋಗ್ರಾಂಗೆ ದಾಖಲಾಗುತ್ತಾರೆ. ನೀವು https://www.rewardz.sbi/ ನಲ್ಲಿ ನಿಮ್ಮ ಎಸ್ ಬಿಐ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು. ಪೋರ್ಟಲ್ ಅನ್ನು ಬಳಸಲು, ನೀವು ಮೊದಲು ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

https://www.rewardz.sbi ಗೆ ಹೋಗಿ ಮತ್ತು “ಹೊಸ ಬಳಕೆದಾರ” ಆಯ್ಕೆಯನ್ನು ಆರಿಸಿ. ಅನಂತರ SBI Rewardz ಗ್ರಾಹಕ ID ಅನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀಡಲಾದ ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ನಮೂದಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಿ ಮತ್ತು ರಿಡೀಮ್ ಮಾಡಲು ಪ್ರಾರಂಭಿಸಿ.

ಪಾಯಿಂಟ್ ಯಾವುದರಿಂದ ಸಿಗುವುದು?

ಎಸ್ ಬಿ ಐ ಯು ತನ್ನ ಗ್ರಾಹಕರಿಗೆ ಸರಕುಗಳು, ಚಲನಚಿತ್ರ ಟಿಕೆಟ್‌ಗಳು, ಮೊಬೈಲ್/ ಡಿಟಿ ಹೆಚ್ ರೀಚಾರ್ಜ್, ಏರ್‌ಲೈನ್ ಟಿಕೆಟ್‌ಗಳು, ಹೊಟೇಲ್ ಕಾಯ್ದಿರಿಸುವಿಕೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ.

Continue Reading
Advertisement
AC Side Effects
ಆರೋಗ್ಯ39 mins ago

AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

karnataka weather forecast
ಮಳೆ1 hour ago

Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

Rishab Pant
ಪ್ರಮುಖ ಸುದ್ದಿ2 hours ago

Rishabh Pant : ವಿಶ್ವಕಪ್​​ಗೆ ಮುನ್ನ ಟೀಮ್ ಇಂಡಿಯಾ ಜೆರ್ಸಿ ಧರಿಸಿದ ರಿಷಭ್ ಪಂತ್ ವಿಡಿಯೋ ಹಂಚಿಕೊಂಡ ಬಿಸಿಸಿಐ

Wildlife Sanctuaries
ಪರಿಸರ2 hours ago

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

T20 World Cup
ಕ್ರೀಡೆ2 hours ago

T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

namaz on road
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ನಡುರಸ್ತೆಯಲ್ಲೇಕೆ ನಮಾಜ್‌ ಮಾಡಬೇಕು?

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಜಂಟಿ ಹೂಡಿಕೆ ವ್ಯವಹಾರದಿಂದ ದೂರವಿರಿ

Prajwal Revanna Case
ಪ್ರಮುಖ ಸುದ್ದಿ8 hours ago

Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

chakravarthy sulibele
ಕರ್ನಾಟಕ9 hours ago

Chakravarthy Sulibele : ಮಂಡಿಯೂರಿ ಭೈರಪ್ಪ ಅವರಿಂದ ಸಾವರ್ಕರ್ ಪ್ರಶಸ್ತಿ ಸ್ವೀಕರಿಸಿದ ಚಕ್ರವರ್ತಿ ಸೂಲಿಬೆಲೆ

Cyber Crime
ಪ್ರಮುಖ ಸುದ್ದಿ9 hours ago

Cyber Crime : ಹೆಣ್ಣು ಮಕ್ಕಳ ಫೋಟೋ ಅಶ್ಲೀಲಗೊಳಿಸಿ ಪೋಸ್ಟ್​ ಮಾಡುತ್ತಿದ್ದವನ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು21 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌