Update KYC : ಬ್ಯಾಂಕ್‌ ಕೆವೈಸಿ ಅಪ್‌ಡೇಟ್‌ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ Vistara News

ಮನಿ-ಗೈಡ್

Update KYC : ಬ್ಯಾಂಕ್‌ ಕೆವೈಸಿ ಅಪ್‌ಡೇಟ್‌ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ

Update KYC ಗ್ರಾಹಕರು ತಮ್ಮ ವಿಳಾಸದಲ್ಲಿ ಬದಲಾವಣೆ ಇರದಿದ್ದರೆ, ಆನ್‌ಲೈನ್‌ ಮೂಲಕ ಬ್ಯಾಂಕ್‌ ಕೆವೈಸಿ ಅಪ್‌ಡೇಟ್‌ ಮಾಡಬಹುದು. ವಿವರ ಇಲ್ಲಿದೆ.

VISTARANEWS.COM


on

Update KYC No need to go to bank to update bank KYC
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ಯಾಂಕ್‌ ಖಾತೆದಾರರು ತಮ್ಮ ಖಾತೆಯ know your customer (KYC) ಪ್ರಕ್ರಿಯೆಯನ್ನು ಪರಿಷ್ಕರಿಸಲು ಇನ್ನು ಮುಂದೆ ಬ್ಯಾಂಕ್‌ ಕಚೇರಿಗೆ ಹೋಗಬೇಕಿಲ್ಲ. ಅಂದರೆ ನೀವು ಸಲ್ಲಿಸಿರುವ ದಾಖಲೆಗಳು ವ್ಯಾಲಿಡ್‌ ಆಗಿದ್ದರೆ ಹಾಗೂ ನಿಮ್ಮ ವಿಳಾಸದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಕೆವೈಸಿ ಪರಿಷ್ಕರಣೆ ಸಲುವಾಗಿ ಬ್ಯಾಂಕ್‌ ಕಚೇರಿಗೆ ತೆರಳಬೇಕಿಲ್ಲ. ಸ್ವತಃ ಆರ್‌ಬಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು.

ಆರ್‌ಬಿಐ ಏನು ಹೇಳಿತ್ತು? ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇರದಿದ್ದರೆ, ಗ್ರಾಹಕರು ಸೆಲ್ಫ್‌ ಡಿಕ್ಲರೇಷನ್‌ ಮೂಲಕ ಕೆವೈಸಿ ಪರಿಷ್ಕರಣೆ ಮಾಡಬಹುದು. ಹಾಗೂ ಡಿಕ್ಲರೇಷನ್‌ ಅನ್ನು ಇಮೇಲ್‌ -ಐಡಿ, ನೋಂದಾಯಿತ ಮೊಬೈಲ್‌ ನಂಬರ್‌, ಎಟಿಎಂ, ಇತರ ಯಾವುದಾದರೂ ಡಿಜಿಟಲ್‌ ಚಾನೆಲ್‌ ಮೂಲಕ ಬದಲಿಸಬಹುದು.

ಕೆವೈಸಿ ಪರಿಷ್ಕರಣೆ ಹೇಗೆ? ಆರ್‌ಬಿಐ ರಿ-ಕೆವೈಸಿಗೆ (re-KYC) ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ ಇದು ಹೇಗೆ ನಡೆಯುತ್ತದೆ ಎಂಬುದನ್ನು ನೋಡೋಣ.

ಸ್ಟೆಪ್‌ 1 : ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೆಬ್‌ಸೈಟ್‌ ಪ್ರಕಾರ ನಿಮ್ಮ ಕೆವೈಸಿ ಅಪ್‌ಡೇಟ್‌ ಸಲುವಾಗಿ ಬ್ಯಾಂಕಿನಿಂದ ನೋಟಿಫಿಕೇಶನ್‌ ಪಡೆದಿರಬಹುದು. ಆಗ ನೀವು ರಿ-ಕೆವೈಸಿ ಫಾರ್ಮ್‌ ಭರ್ತಿಗೊಳಿಸಬೇಕು.

ಸ್ಟೆಪ್‌ 2: ಎರಡನೇ ಹಂತದಲ್ಲಿ ನೀವು ಐಡೆಂಟಿಟಿ ಮತ್ತು ರೆಸಿಡೆನ್ಸ್‌ ಪ್ರೂಫ್‌ ಕುರಿತ ಸೆಲ್ಫ್‌ ಅಟೆಸ್ಟ್‌ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕಿನ ವೆಬ್‌ಸೈಟ್‌ ಅನ್ನು ಪರಿಶೀಲಿಸಿ ಐಡೆಂಟಿಟಿ ಮತ್ತು ವಿಳಾಸಕ್ಕೆ ಯಾವ ದಾಖಲೆ ಬೇಕು ಎಂಬುದನ್ನು ಪರಿಶೀಲಿಸಬಹುದು.

ಸ್ಟೆಪ್‌ 3 : ನೀವು ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 10 ದಿನ ಬೇಕಾಗುತ್ತದೆ. ಈ ಮೂರು ಸುಲಭ ಕೆವೈಸಿ ಸ್ಟೆಪ್ಟ್ಸ್‌ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ತಿಳಿಸಿದೆ. ಎಸ್‌ಬಿಐ ಪ್ರಕಾರ ಐಡೆಂಟಿಟಿ/ಅಡ್ರೆಸ್‌ ಪ್ರೂಫ್‌ಗೆ ನೀವು ಸಲ್ಲಿಸಬಹುದಾದ ದಾಖಲೆಗಳು: ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ವಾಹನ ವಾಲನಾ ತರಬೇತಿಯ ಲೈಸೆನ್ಸ್‌, ಆಧಾರ್‌ ಕಾರ್ಡ್‌, ನರೇಗಾ ಕಾರ್ಡ್ ಅನ್ನು ಒದಗಿಸಬಹುದು.

ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡಿರುವ ಮಾರ್ಗದರ್ಶಿಯಲ್ಲಿ ಕೆವೈಸಿ ಪರಿಷ್ಕರಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದೆ. ವಿಡಿಯೊ ಆಧರಿತ ಕಸ್ಟಮರ್‌ ಐಡೆಂಟಿಫೀಕೇಶನ್‌ ಪ್ರೊಸೆಸ್‌ (V-CIP) ಅನ್ನೂ ನಡೆಸಬಹುದು ಎಂದು ತಿಳಿಸಿದೆ. (Video based customer Identification process)

ಕೆವೈಸಿ ಯಾವಾಗ ಅಗತ್ಯವಾಗುತ್ತದೆ? ಬ್ಯಾಂಕ್‌ಗಳಿಗೆ ನೀವು ಸಲ್ಲಿಸಿರುವ ದಾಖಲೆಗಳು ಅಧಿಕೃತ ವ್ಯಾಲಿಡ್‌ ಡಾಕ್ಯುಮೆಂಟ್‌ಗಳ ಜತೆಗೆ ತಾಳೆ ಆಗದಿದ್ದರೆ ಕೆವೈಸಿ ಪರಿಷ್ಕರಣೆ ಅಗತ್ಯ. ಈ ಹಿಂದೆ ಸಲ್ಲಿಸಿದ್ದ ದಾಖಲೆಗಳ ಅವಧಿ ಎಕ್ಸ್‌ಪೈರ್‌ ಆಗಿದ್ದರೂ ಕೆವೈಸಿ ಪರಿಷ್ಕರಣೆ ಅಗತ್ಯ. ಗ್ರಾಹಕರು ವಿಳಾಸ ಬದಲಾದ ಸಂದರ್ಭದಲ್ಲಿ ಕೂಡ ಕೆವೈಸಿ ಮೂಲಕ ಬದಲಿಸಬಹುದು. ಬ್ಯಾಂಕ್‌ಗಳು ರೆಕಾರ್ಡ್‌ಗಳನ್ನು ಅಪ್‌ಡೇಟ್‌ ಮಾಡಿ ಇರುವುದು ಕಡ್ಡಾಯ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

Money Guide: ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಪಿಪಿಎಫ್‌ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದು. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

ppf
Koo

ಬೆಂಗಳೂರು: ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಅನೇಕ ಕನಸುಗಳಿರುತ್ತವೆ. ಸ್ವಂತ ಮನೆ ಇರಬೇಕು, ವಾಹನ ಹೊಂದಬೇಕು, ವ್ಯಾಪಾರ ಮಾಡಬೇಕು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಹೀಗೆ… ಈ ಕನಸುಗಳನ್ನು ನನಸು ಮಾಡಲು ಅವರು ಕಷ್ಟಪಟ್ಟು ದುಡಿಯುತ್ತಾರೆ. ಇಂತಹ ಶ್ರಮದ ದುಡಿಮೆಯನ್ನು ಸುರಕ್ಷಿತವಾಗಿ ಇಡುವುದು ಕೂಡ ಮುಖ್ಯ. ಅದಕ್ಕೆ ಅತ್ಯುತ್ತಮ ಆಯ್ಕೆ ಸಾರ್ವಜನಿಕ ಭವಿಷ್ಯ ನಿಧಿ (Public Provident Fund–PPF) ಎಂದು ತಜ್ಞರು ಸಲಹೆ ನೀಡುತ್ತಾರೆ. ಪಿಪಿಎಫ್ ಮೂಲಕ ಹೂಡಿಕೆ ಮಾಡುವುದರಿಂದ ಸುರಕ್ಷತೆ ದೊರೆಯುವುದಷ್ಟೇ ಅಲ್ಲ ಉತ್ತಮ ಆದಾಯವೂ ಲಭ್ಯವಾಗುತ್ತದೆ. ಈ ಕುರಿತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ದೀರ್ಘಕಾಲೀನ ಹೂಡಿಕೆ

ಪಿಪಿಎಫ್‌ ದೀರ್ಘಕಾಲೀನ ಹೂಡಿಕೆದಾರರ ನೆಚ್ಚಿನ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ 2.27 ಕೋಟಿ ರೂ. ಆದಾಯ ಸಿಗಲಿದೆ. ಪಿಪಿಎಫ್‌ ಅನ್ನು ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆಯು 1968ರಲ್ಲಿ ಪರಿಚಯಿಸಿತ್ತು. ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿದ್ದು, ವಿಶೇಷವಾಗಿ ನಿವೃತ್ತಿಗಂತಲೇ ವಿನ್ಯಾಸಗೊಳಿಸಲಾಗಿದೆ.

ಅರ್ಹತೆಗಳೇನು?

ಈ ಯೋಜನೆಯಲ್ಲಿ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಲು ಸಾಧ್ಯವಿದೆ. ಅಪ್ರಾಪ್ತ ವಯಸ್ಕರು ಅಥವಾ ಮಾನಸಿಕ ಅಸ್ವಸ್ಥರ ಪರವಾಗಿ ಗಾರ್ಡಿಯನ್‌ಗಳು ಕನಿಷ್ಠ 500 ರೂ. ಮತ್ತು ವಾರ್ಷಿಕ ಮಿತಿ ರೂ 1.5 ಲಕ್ಷ ರೂ.ಯೊಂದಿಗೆ ಪಿಪಿಎಫ್ ಖಾತೆಯನ್ನು ಪ್ರಾರಂಭಿಸಬಹುದು. ಅದಾಗ್ಯೂ ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ.

ಅವಧಿ

ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಲಾಕ್‌ ಇನ್‌ ಅವಧಿಯನ್ನು ಮತ್ತೆ 5 ವರ್ಷ ವಿಸ್ತರಿಸಬಹುದು. ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಲಂಪ್ಸಮ್‌ ಅಥವಾ ಕಂತುಗಳಲ್ಲಿ ಕಟ್ಟಬಹುದು. ಅಕೌಂಟ್‌ ಸಕ್ರಿಯವಾಗಲು ಪ್ರತಿ ವರ್ಷ ಕಟ್ಟಬೇಕು.

ಪಿಪಿಎಫ್ ಹೂಡಿಕೆಯ ಮೇಲೆ ಸಾಲ

ಇನ್ನೊಂದು ವಿಶೇಷ ಎಂದರೆ ಪಿಪಿಎಫ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಆದರೆ ಇದಕ್ಕೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಹಣಕ್ಕಾಗಿ ಮಾತ್ರ ಕ್ಲೇಮ್‌ ಮಾಡಿಕೊಳ್ಳಬಹುದು.‌

2.27 ಕೋಟಿ ರೂ. ಆದಾಯ ಪಡೆಯುವುದು ಹೇಗೆ?

ಈ ಮೊದಲು ಹೇಳಿದಂತೆ ಪಿಪಿಎಫ್‌ ಖಾತೆಯಿಂದ 2.27 ಕೋಟಿ ರೂ. ಆದಾಯ ಗಳಿಸಿಸುವುದು ಹೇಗೆ ಎನ್ನುವುದನ್ನು ನೋಡೋಣ. ಪಿಪಿಎಫ್ ಖಾತೆಯಲ್ಲಿ 35 ವರ್ಷಗಳವರೆಗೆ ತಿಂಗಳಿಗೆ ಕೇವಲ 12,500 ಅಥವಾ ವಾರ್ಷಿಕವಾಗಿ 1.50 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಪ್ರಸ್ತುತ ಪಿಪಿಎಫ್‌ ಬಡ್ಡಿ ದರ 7.10%. ಇದನ್ನು ಪರಿಗಣಿಸಿ ಮೆಚ್ಯುರಿಟಿ ಸಮಯದಲ್ಲಿ (35 ವರ್ಷ ಆದ ಮೇಲೆ) ಸುಮಾರು 2.27 ಕೋಟಿ ರೂ. ಆದಾಯವನ್ನು ಪಡೆಯಬಹುದು.

ಇದನ್ನೂ ಓದಿ: Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

ಮುಂದುವರಿಸುವುದು ಹೇಗೆ?

ಪಿಪಿಎಫ್‌ ಖಾತೆಗಳ ಅವಧಿ 15 ವರ್ಷಗಳು. ಹಾಗಿದ್ದರೂ ಅದನ್ನು ಮತ್ತೆ ಮುಂದುವರಿಸುವ ಅವಕಾಶವಿದೆ. ಐದು ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಬಹುದು. 20 ವರ್ಷಗಳ ನಂತರವೂ ಮುಂದುವರಿಯಲು ನೀವು ಫಾರ್ಮ್ 16-ಎಚ್‌ (16-H) ಅನ್ನು ಸಲ್ಲಿಸಬೇಕಾಗುತ್ತದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಮೂಲ ಮೊತ್ತಕ್ಕೆ ಟ್ಯಾಕ್ಸ್‌ ಬೆನಿಫಿಟ್‌ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಪರ್ಸನಲ್‌ ಲೋನ್‌ ಬಿಡಿ, ಕಡಿಮೆ ಬಡ್ಡಿದರದ ಈ ಸಾಲಗಳಿವೆ ನೋಡಿ!

Money Guide: ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ ಪಡೆದುಕೊಳ್ಳುವುದು ಸಾಹಸದ ಕೆಲಸವೇ ಸೈ. ಜತೆಗೆ ಬಡ್ಡಿದರವೂ ಹೆಚ್ಚಿರುತ್ತದೆ. ಅದರ ಬದಲು ತೆಗೆದುಕೊಳ್ಳಬಹುದಾದ ಸಾಲಗಳ ವಿವರ ಇಲ್ಲಿದೆ.

VISTARANEWS.COM


on

loan
Koo

ಬೆಂಗಳೂರು: ಪ್ರಸ್ತುತ ಯಾವುದೇ ಸಾಲ ಮಾಡದೆ ಜೀವನ ಸಾಗಿಸುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅದರಲ್ಲೂ ಮಧ್ಯಮ ವರ್ಗದ ಜನರು ಒಂದಲ್ಲ ಒಂದು ಕಾರಣಕ್ಕೆ ಸಾಲವನ್ನು ಮಾಡಲೇಬೇಕು ಎನ್ನುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ (Personal loan) ತೆಗೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಒಂದು ವೇಳೆ ಸಾಲ ಮಂಜೂರಾದರೂ ಅದಕ್ಕಿರುವ ಬಡ್ಡಿದರ ಹೆಚ್ಚಾಗಿರುತ್ತದೆ. ಹಾಗಾದರೆ ಇದಕ್ಕಿರುವ ಪರ್ಯಾಯ ಮಾರ್ಗಗಳೇನು? ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಕುಳಿತು ಸಾಲ ಪಡೆದುಕೊಳ್ಳುವ ಸೌಲಭ್ಯವೂ ಈಗ ಲಭ್ಯ. ಮೊಬೈಲ್‌ ಸಹಾಯದಿಂದ ಆನ್‌ಲೈನ್‌ ಮೂಲಕವೇ ಲೋನ್‌ ಪಾಸ್‌ ಮಾಡಿಸಬಹುದು. ಅಂತಹ ವಿವಿಧ ಸಾಲ ಸೌಲಭ್ಯಗಳ ವಿವರ ಇಲ್ಲಿದೆ.

ಪಿಪಿಎಫ್‌

ನೀವು ಉದ್ಯೋಗದಲ್ಲಿದ್ದರೆ ಸಾರ್ವಜನಿಕ ಭವಿಷ್ಯ ನಿಧಿಯಿಂದ (PPF) ಸಾಲ ತೆಗೆದುಕೊಳ್ಳಬಹುದು. ನಿಮ್ಮ ಪಿಪಿಎಫ್‌ನಲ್ಲಿರುವ ಹಣದ ಮೇಲೆ ನೀವು ಸಾಲವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಕನಿಷ್ಠ ಒಂದು ವರ್ಷದವರೆಗೆ ಪಿಪಿಎಫ್ ಖಾತೆಯನ್ನು ಹೊಂದಿರುವುದು ಅಗತ್ಯ. ನಿಮ್ಮ ಪಿಪಿಎಫ್‌ ಖಾತೆಯಲ್ಲಿರುವ ಮೊತ್ತದ ಆಧಾರದ ಮೇಲೆ ಸಾಲ ದೊರೆಯುತ್ತದೆ. ಪರ್ಸನಲ್ ಲೋನ್‌ಗೆ ಹೋಲಿಸಿದರೆ ಇದರಲ್ಲಿ ಬಡ್ಡಿದರ ಕಡಿಮೆ.

ಚಿನ್ನದ ಮೇಲಿನ ಸಾಲ

ಆಭರಣವಾಗಿ ಮಾತ್ರವಲ್ಲದೆ ಚಿನ್ನ ಆದಾಯದ ಮೂಲವಾಗಿಯೂ ಕಷ್ಟಕಾಲದಲ್ಲಿ ನೆರವಾಗುತ್ತದೆ. ಚಿನ್ನದ ಮೇಲಿನ ಸಾಲ ದುಡ್ಡಿನ ಆವಶ್ಯಕತೆಯನ್ನು ನೆರವೇರಿಸುತ್ತದೆ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲ 2ರಿಂದ 3 ದಿನಗಳಲ್ಲಿ ದೊರೆಯುತ್ತದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ (Non-banking Financial Company)ಗಳು 1.5 ಕೋಟಿ ರೂ.ಗಳವರೆಗೆ ಚಿನ್ನದ ಸಾಲವನ್ನು ನೀಡುತ್ತವೆ. ಈ ಸಾಲವನ್ನು ಪಡೆಯಲು ನಿಮ್ಮ ಚಿನ್ನದ ಆಭರಣಗಳನ್ನು ಅಡ ಇಡವಿಟ್ಟರೆ ಸಾಕು. ಬ್ಯಾಂಕ್ ಅವುಗಳನ್ನು ಸುರಕ್ಷಿತವಾಗಿ ತೆಗೆದಿರಿಸುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ನೀವು ಅಡವಿಟ್ಟ ಚಿನ್ನವನ್ನು ಹಿಂಪಡೆಯಬಹುದು. ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಸಾಲವನ್ನು ಕಡಿಮೆ ಬಡ್ಡಿದರದೊಂದಿಗೆ ಒದಗಿಸಲಾಗುತ್ತದೆ. ಇದು ಸಾಮಾನ್ಯವಾಗಿ ಶೇ. 8ರಷ್ಟು ವಾರ್ಷಿಕ ದರದಲ್ಲಿ ಪ್ರಾರಂಭವಾಗುತ್ತದೆ. 

ಇದನ್ನೂ ಓದಿ: Money Guide: ತುರ್ತು ಸಂದರ್ಭದಲ್ಲಿ ನೆರವಾಗುವ ಹೋಮ್‌ಲೋನ್‌ ಇನ್ಶೂರೆನ್ಸ್‌; ಏನಿದರ ಮಹತ್ವ?

ಎಲ್‌ಐಸಿ

ನಿಮ್ಮ ಬಳಿ ಎಲ್ಐಸಿ ಪಾಲಿಸಿ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಗೋಲ್ಡ್ ಲೋನ್‌ ಸಂದರ್ಭದಲ್ಲಿ ನೀವು ಸೆಕ್ಯೂರಿಟಿ ರೂಪದಲ್ಲಿ ಚಿನ್ನಾಭರಣ ಇಡುವಂತೆ ಇಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಇಡಬೇಕಾಗುತ್ತದೆ. ಒಂದು ವೇಳೆ ಸಾಲ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಸಂಸ್ಥೆ ಎಲ್ಐಸಿ ಪಾಲಿಸಿಯಲ್ಲಿರುವ ಹಣವನ್ನು ಕಡಿತಗೊಳಿಸುತ್ತದೆ. ಎಲ್‌ಐಸಿ ಸಾಲ ಪಡೆಯಲು ನೀವು ಕನಿಷ್ಠಪಕ್ಷ ಮೂರು ವರ್ಷಗಳ ಪ್ರೀಮಿಯಂ ಕಟ್ಟಿರಬೇಕು. ಎಲ್ಐಸಿ ಗ್ರಾಹಕರು ಮಾತ್ರ ಈ ಲೋನ್ ಪಡೆದುಕೊಳ್ಳಬಹುದಾಗಿದ್ದು, ಅವರ ಪಾಲಿಸಿ ಲೋನ್ ಅರ್ಹತೆಯನ್ನು ಹೊಂದಿರುವುದು ಮುಖ್ಯ. ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ವಾರ್ಷಿಕ 9 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಜತೆಗೆ ಬಡ್ಡಿದರವನ್ನು ಎಲ್ಐಸಿ ಪಾಲಿಸಿಯ ಪ್ರೊಫೈಲ್ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಪಾಲಿಸಿಯ ಮೌಲ್ಯದ 90 ಪ್ರತಿಶತ ಲೋನ್ ಹಣವನ್ನು ಪಡೆದುಕೊಳ್ಳಬಹುದು. ಸಾಲದ ಮರುಪಾವತಿಯ ಅವಧಿ ಕನಿಷ್ಠ ಆರು ತಿಂಗಳಿಂದ ಪ್ರಾರಂಭಿಸಿ ಗರಿಷ್ಠ ಐದು ವರ್ಷಗಳವರೆಗೆ ಇರುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಇಟ್ಟಿರುವ ಹಣಕ್ಕೆ ಏನಾಗುತ್ತದೆ? ಅದನ್ನು ಮರಳಿ ಪಡೆಯುವುದು ಹೇಗೆ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ ನಿಯಮ ಏನು ಹೇಳುತ್ತದೆ? ಮುಂತಾದ ಅನುಮಾನಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

bank account new
Koo

ಬೆಂಗಳೂರು: ಕೆಲವೊಮ್ಮೆ ಬ್ಯಾಂಕ್‌ಗಳು ದಿವಾಳಿಯಾಗುವ ಸುದ್ದಿಗಳನ್ನು ಕೇಳಿರುತ್ತೇವೆ. ಅಂತಹ ಸಂದರ್ಭದಲ್ಲಿ ಸಹಜವಾಗಿಯೇ ನಮಗೂ ಆತಂಕ ಕಾಡುತ್ತದೆ. ನಾವು ಠೇವಣಿ ಇಟ್ಟಿರುವ ಬ್ಯಾಂಕ್‌ ದಿವಾಳಿಯಾದರೆ ಏನಪ್ಪ ಗತಿ? ಎನ್ನುವ ಪ್ರಶ್ನೆ ಹಲವರ ನೆಮ್ಮದಿಯನ್ನೇ ಕಸಿದು ಬಿಡುತ್ತದೆ. ನಿಮಗೂ ಇಂತಹ ಅನುಮಾನ ಕಾಡ್ತಿದ್ಯಾ? ಹಾಗಾದರೆ ಇಂದಿನ ಮನಿಗೈಡ್‌ (Money Guide)ನಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ. ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಇಟ್ಟಿರುವ ಹಣಕ್ಕೆ ಏನಾಗುತ್ತದೆ? ಅದನ್ನು ಮರಳಿ ಪಡೆಯುವುದು ಹೇಗೆ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India)ನ ನಿಯಮ ಏನು ಹೇಳುತ್ತದೆ? ಮುಂತಾದ ಅನುಮಾನಗಳಿಗೆ ಇಲ್ಲಿದೆ ಉತ್ತರ.

ನಿಯಮಗಳ ಪ್ರಕಾರ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ಗಿಂತ ಅಧಿಕ ಹಣ ಇಟ್ಟಿದ್ದು, ಬ್ಯಾಂಕ್‌ ದಿವಾಳಿಯಾದರೆ ನಮಗೆ ಸಿಗುವುದು ಕೇವಲ 5 ಲಕ್ಷ ರೂ. ಮಾತ್ರ. ಉದಾಹರಣೆಗೆ ನಾವು 20 ಲಕ್ಷ ರೂ. ಇಟ್ಟಿದ್ದರೂ ಸರ್ಕಾರ ಅಥವಾ ಆರ್‌ಬಿಐ ವಾಗ್ದಾನ ಮಾಡುವ ಮೊತ್ತ 5 ಲಕ್ಷ ರೂ. ಮಾತ್ರ. ಅಂದರೆ ಉಳಿದ 15 ಲಕ್ಷ ರೂ. ಅನ್ನು ಕಳೆದುಕೊಳ್ಳಬೇಕಾಗುತ್ತದೆ. 

ಹಿಂದೆ 1 ಲಕ್ಷ ರೂ. ಸಿಗುತ್ತಿತ್ತು

ಈ ಹಿಂದೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Deposit Insurance and Credit Guarantee Corporation-DICGC) ಕಾಯ್ದೆಯಡಿ ಬ್ಯಾಂಕ್‌ಗಳ ಠೇವಣಿಗಳ ಗ್ಯಾರಂಟಿ 1 ಲಕ್ಷ ರೂ.ಗಳಾಗಿತ್ತು. ಅಂದರೆ ಬ್ಯಾಂಕ್‌ ದಿವಾಳಿಯಾದರೆ ಖಾತೆ ಹೊಂದಿದವರಿಗೆ 1 ಲಕ್ಷ ರೂ. ಮಾತ್ರ ಸಿಗುತ್ತಿತ್ತು. 2020ರಲ್ಲಿ ಕೇಂದ್ರ ಸರ್ಕಾರವು ಈ ಕಾನೂನನ್ನು ಬದಲಾಯಿಸಿ ಅದರ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಿತು.

ಅದಾಗ್ಯೂ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಯಾವುದೇ ಬ್ಯಾಂಕ್ ಅನ್ನು ಮುಳುಗಲು ಸರ್ಕಾರ ಬಿಡುವುದಿಲ್ಲ. ಇದಕ್ಕಾಗಿ ದಿವಾಳಿಯಾಗುತ್ತಿರುವ ಬ್ಯಾಂಕ್ ಅನ್ನು ಬೇರೊಂದು ದೊಡ್ಡ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುತ್ತದೆ. ಬಳಿಕವೂ ಬ್ಯಾಂಕ್ ದಿವಾಳಿಯಾದರೆ ಎಲ್ಲ ಖಾತೆದಾರರಿಗೆ ಹಣ ಪಾವತಿ ಮಾಡುವ ಜವಾಬ್ದಾರಿ ಡಿಐಸಿಜಿಸಿ ಮೇಲಿರುತ್ತದೆ. ಈ ಮೊತ್ತವನ್ನು ಖಾತರಿಪಡಿಸಲು ಡಿಐಸಿಜಿಸಿ ಬ್ಯಾಂಕ್‌ಗಳಿಂದ ಮೊದಲೇ ಪ್ರೀಮಿಯಂ ಪಡೆದುಕೊಳ್ಳುತ್ತದೆ.

ನಿಯಮ ಏನು ಹೇಳುತ್ತದೆ?

ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಕುಸಿತದ ಸಂದರ್ಭದಲ್ಲಿ ಎಲ್ಲ ಗ್ರಾಹಕರ ಠೇವಣಿಗಳು ಮತ್ತು ಸಾಲಗಳ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಬೇಕು. ಇದರ ನಂತರ ಡಿಐಸಿಜಿಸಿ ಗ್ರಾಹಕರ ಹಣವನ್ನು 90 ದಿನಗಳಲ್ಲಿ ಹಿಂದಿರುಗಿಸಬೇಕು. 2022ರ ಆಗಸ್ಟ್ ವೇಳೆಗೆ ದೇಶದಲ್ಲಿ ಒಟ್ಟು 2,035 ಬ್ಯಾಂಕ್‌ಗಳಿಗೆ ವಿಮೆ ಮಾಡಲಾಗಿದೆ ಎಂದು ಡಿಐಸಿಜಿಸಿ ತಿಳಿಸಿದೆ. ನಿಮ್ಮ ಬ್ಯಾಂಕ್ ವಿಮೆ ಹೊಂದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬಹುದು. ಅದಕ್ಕಾಗಿ ಅಧಿಕೃತ ವೆಬ್‌ಸೈಟ್‌ https://www.dicgc.org.in/FD_ListOfInsuredBanks.htmlಗೆ ಭೇಟಿ ನೀಡಬಹುದು.

15 ತಿಂಗಳ ಅವಧಿಯಲ್ಲಿ ದೇಶದ 35 ಬ್ಯಾಂಕ್‌ಗಳ 3 ಲಕ್ಷ ಗ್ರಾಹಕರು ಇಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ನಿಯಮ ಪ್ರಕಾರ ಸರ್ಕಾರವು ಸುಮಾರು 4 ಸಾವಿರ ಕೋಟಿ ರೂ.ಗಳನ್ನು ಜನರಿಗೆ ಹಿಂದಿರುಗಿಸಿದೆ. ಡಿಐಸಿಜಿಸಿ ಕಾಯ್ದೆಯಡಿ ದೇಶದ 35 ಬ್ಯಾಂಕ್‌ಗಳ ಸುಮಾರು 3,06,146 ಗ್ರಾಹಕರು ತಮ್ಮ ಹಣಕ್ಕೆ ಕ್ಲೈಮ್ ಮಾಡಿದ್ದಾರೆ ಎಂದು ಹಣಕಾಸು ರಾಜ್ಯ ಸಚಿವ ಡಾ.ಭಗವತ್ ಕಿಶನ್ ರಾವ್ ಕಳೆದ ವರ್ಷ ಲೋಕಸಭೆಗೆ ತಿಳಿಸಿದ್ದರು.

ಇದನ್ನೂ ಓದಿ: Money Guide: ಯಶಸ್ವಿ ಜೀವನಕ್ಕೆ 6 ಆರ್ಥಿಕ ಸೂತ್ರಗಳು, ಪಾಲಿಸಿ ನೋಡಿ!

ಏನು ಮಾಡಬೇಕು?

ಒಂದು ವೇಳೆ ಹೆಚ್ಚಿನ ಮೊತ್ತ ಇದ್ದರೆ ಅದನ್ನು ಹೇಗೆ ಕಾಪಾಡಿಕೊಳ್ಳಬಹುದು? ಎನ್ನುವ ಪ್ರಶ್ನೆಗೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದು ಅಲ್ಲಿ ಹಣವನ್ನು ಹಂಚಿಕೊಂಡು ಠೇವಣಿ ಇಡುವುದು ಇದಕ್ಕಿರುವ ಪರಿಹಾರ ಮಾರ್ಗ. ಉದಾಹರಣೆಗೆ ನಿಮ್ಮ ಬಳಿ 20 ಲಕ್ಷ ರೂ. ಇದೆ ಎಂದಿಟ್ಟುಕೊಳ್ಳೋಣ. ನೀವು 4 ಬ್ಯಾಂಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ತಲಾ 5 ಲಕ್ಷ ರೂ.ನಂತೆ ಡೆಪಾಸಿಟ್‌ ಇಟ್ಟರೆ ಅಷ್ಟೂ ಹಣ ಸುರಕ್ಷಿತವಾಗಿರುತ್ತದೆ. ಇನ್ನೂ ಅಧಿಕ ಮೊತ್ತದ ಹಣ ಇದ್ದರೆ ಮನೆಯವರ ಹೆಸರಿನಲ್ಲಿ ಅಕೌಂಟ್‌ ಓಪನ್‌ ಮಾಡಿ ಅದರಲ್ಲಿ ಇಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

Continue Reading

ಮನಿ-ಗೈಡ್

Money Guide: ತುರ್ತು ಸಂದರ್ಭದಲ್ಲಿ ನೆರವಾಗುವ ಹೋಮ್‌ಲೋನ್‌ ಇನ್ಶೂರೆನ್ಸ್‌; ಏನಿದರ ಮಹತ್ವ?

Money Guide: ಗೃಹಸಾಲ ತೆಗೆದುಕೊಳ್ಳುವಾಗ ಹೋಮ್‌ಲೋನ್‌ ಇನ್ಶೂರೆನ್ಸ್‌ ಮಾಡಿಸುವುದು ಕೂಡ ಅಗತ್ಯ ಎನ್ನುತ್ತಾರೆ ತಜ್ಞರು. ಹೋಮ್‌ಲೋನ್‌ ಇನ್ಶೂರೆನ್ಸ್‌ ಎಂದರೇನು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

home loan
Koo

ಬೆಂಗಳೂರು: ಹೊಸ ಮನೆ ನಿರ್ಮಿಸಬೇಕು ಅಥವಾ ಕೊಂಡುಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭದ ಮಾತಲ್ಲ. ಇದಕ್ಕಾಗಿ ಅನೇಕರು ಗೃಹಸಾಲ(Home loan)ದ ಮೊರೆ ಹೋಗುತ್ತಾರೆ. ಆದರೆ ಈ ಸಾಲಗಳ ಬಡ್ಡಿದರವೂ ದುಬಾರಿಯಾಗಿರುತ್ತದೆ. ಈ ಮಧ್ಯೆ ಸಾಲ ಪಡೆದುಕೊಂಡವರು ಆಕಸ್ಮಿಕವಾಗಿ ಮರಣ ಹೊಂದಿದರೆ ಏನು ಮಾಡಬೇಕು? ಆಗ ಬ್ಯಾಂಕ್‌ಗಳು ಯಾವ ಕ್ರಮ ಕೈಗೊಳ್ಳುತ್ತವೆ? ಹೋಮ್‌ಲೋನ್‌ ಇನ್ಶೂರೆನ್ಸ್‌ (Home Loan Insurance) ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಪ್ರಾಧಾನ್ಯತೆ ಏನು? ಮುಂತಾದ ನಿಮ್ಮನ್ನು ಕಾಡುವ ಪ್ರಶ್ನೆಗಳಿಗೆ ಉತ್ತರ ಇಂದಿನ ಮನಿಗೈಡ್‌ ಮನಿಗೈಡ್‌ (Money Guide)ನಲ್ಲಿದೆ.

ಸಾಲದಾತ ಮರಣ ಹೊಂದಿದರೆ ಬ್ಯಾಂಕ್‌ ಏನು ಮಾಡುತ್ತದೆ?

ಒಂದು ವೇಳೆ ಗೃಹಸಾಲ ಪಡೆದುಕೊಂಡಾತ ಸಾಲ ಮುಗಿಯುವ ಮೊದಲೇ ಮರಣ ಹೊಂದಿದರೆ ಬ್ಯಾಂಕ್‌ಗಳು 2 ರೀತಿಯಲ್ಲಿ ಕ್ರಮ ಕೈಗೊಳ್ಳುತ್ತವೆ. ಸಾಲವನ್ನು ಮರುಪಾವತಿಸಲು ಕುಟುಂಬದ ಮೇಲೆ ಒತ್ತಡ ಹೇರಬಹುದು ಅಥವಾ ಗೃಹ ಸಾಲವನ್ನು ತೆಗೆದುಕೊಂಡ ಆಸ್ತಿಯನ್ನು ಮಾರಾಟ ಮಾಡಬಹುದು. ಆ ಕುಟುಂಬ ಸಾಲ ಮರು ಪಾವತಿಸಲು ಶಕ್ತವಾಗಿರುವುದಿಲ್ಲ. ಜತೆಗೆ ಆ ಆಸ್ತಿಯನ್ನೂ ಉಳಿಸಿಕೊಳ್ಳಬೇಕು ಎಂದಿದ್ದರೆ ಏನು ಮಾಡಬೇಕು? ಆಗ ನೆರವಿಗೆ ಬರುತ್ತದೆ ಹೋಮ್‌ಲೋನ್ ಇ‍ನ್ಶೂರೆನ್ಸ್‌.

ಏನಿದು ಹೋಮ್‌ಲೋನ್ ಇ‍ನ್ಶೂರೆನ್ಸ್‌?

ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್ (Home Loan Protection Plan-HLPP) ಎಂದೂ ಕರೆಯಲ್ಪಡುವ ಹೋಮ್ ಲೋನ್ ಇನ್ಶೂರೆನ್ಸ್ ಒಂದು ವಿಮಾ ಪಾಲಿಸಿಯಾಗಿದ್ದು, ಸಾಲ ಹೊಂದಿದಾತ ಆಕಸ್ಮಿಕವಾಗಿ ಮರಣ ಹೊಂದಿದರೆ ಗೃಹ ಸಾಲವನ್ನು ಮರುಪಾವತಿಸಲು ಆತನ ಕುಟುಂಬಕ್ಕೆ ಸಹಾಯ ಮಾಡುತ್ತದೆ. ʼʼಗೃಹ ಸಾಲವನ್ನು ಪಾವತಿಸುವ ವ್ಯಕ್ತಿಯು ದುರದೃಷ್ಟವಶಾತ್‌ ಮೃತಪಟ್ಟರೆ ಬಾಕಿ ಇರುವ ಇಎಂಐಯನ್ನು ವಿಮೆ ನೋಡಿಕೊಳ್ಳುತ್ತದೆ. ಇದರಿಂದ ಮನೆ ಸುರಕ್ಷಿತವಾಗಿರುತ್ತದೆʼʼ ಎಂದು ತಜ್ಞರು ಹೇಳುತ್ತಾರೆ.

ಎಚ್ಎಲ್‌ಪಿಪಿಯನ್ನು ನಿರ್ದಿಷ್ಟವಾಗಿ ಗೃಹ ವಿಮಾ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದ್ದರೂ ಅದನ್ನು ಟರ್ಮ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿಯೂ ಕೊಂಡುಕೊಳ್ಳಬಹುದು. ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹೆಚ್ಚುವರಿ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ಗೃಹ ವಿಮೆಯನ್ನು ಸಹ ಕವರ್ ಮಾಡಬಹುದು. ಅದಾಗ್ಯೂ ಹೋಮ್‌ಲೋನ್‌ ಇನ್ಶೂರೆನ್ಸ್‌ನ ನಿಯಮಗಳು ಮತ್ತು ಷರತ್ತುಗಳು ನೀವು ತೆಗೆದುಕೊಂಡ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಗೃಹ ವಿಮೆ ಮತ್ತು ಗೃಹ ಸಾಲ ವಿಮೆ ಎರಡು ಬೇರೆ ಬೇರೆ. ಗೃಹ ವಿಮೆ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಮನೆಯನ್ನು ರಕ್ಷಿಸಿದರೆ, ಕೆಲವು ಆಕಸ್ಮಿಕ ಘಟನೆಗಳಿಂದ ಮರುಪಾವತಿ ಸಾಧ್ಯವಾಗದಿದ್ದರೆ ಅದರ ಜವಾಬ್ದಾರಿಯನ್ನು ಗೃಹ ಸಾಲ ವಿಮೆ ನೋಡಿಕೊಳ್ಳುತ್ತದೆ. ಆಸ್ತಿ ಮಾಲಕರು ಗೃಹ ಸಾಲದ ಇನ್ಶೂರೆನ್ಸ್‌ ಪಾಲಿಸಿಯನ್ನು ಖರೀದಿಸಲು ಅರ್ಹರು.

ಕಡ್ಡಾಯವಲ್ಲ

ಎಚ್ಎಲ್‌ಪಿಪಿಯಲ್ಲಿ ಹೆಚ್ಚುವರಿ ಪ್ಲ್ಯಾನ್‌ ಖರೀದಿಸಿದರೆ ಅಂಗವೈಕಲ್ಯಗಳು, ಮಾರಣಾಂತಿಕ ಕಾಯಿಲೆಗಳು, ಬೆಂಕಿ ಅಪಘಾತಗಳು ಮತ್ತು ಮಾನವ ನಿರ್ಮಿತ ಅಪಾಯಗಳನ್ನು ಸಹ ಕವರ್‌ ಮಾಡಬಹುದು. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಗೃಹ ಸಾಲದೊಂದಿಗೆ ಗೃಹ ಸಾಲ ವಿಮಾ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಲ್ಲ.

ಸಾಲವನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ವಿಮೆಯ ಅವಧಿ ಕೊನೆಗೊಳ್ಳುತ್ತದೆ. ಗೃಹ ಸಾಲವನ್ನು ಮರುಪಾವತಿಸಿದಂತೆ ಹೋಮ್ ಲೋನ್ ಇನ್ಶೂರೆನ್ಸ್ ಪ್ಲಾನ್ ಕವರೇಜ್ ಕಡಿಮೆಯಾಗುತ್ತದೆ. ಉದಾಹರಣೆಗೆ ಈಗಾಗಲೇ 30 ಲಕ್ಷ ರೂ.ಗಳ ಗೃಹ ಸಾಲದಲ್ಲಿ 10 ಲಕ್ಷ ರೂ.ಗಳನ್ನು ಪಾವತಿಸಿದಾಗ ಅಪಘಾತ ಸಂಭವಿಸಿದಲ್ಲಿ ರಕ್ಷಣಾ ಯೋಜನೆಯು ಕೇವಲ 20 ಲಕ್ಷ ರೂ. ಅನ್ನು ಒಳಗೊಳ್ಳುತ್ತದೆ.

ಪ್ರೀಮಿಯಂ ಪಾವತಿ ವಿಧಾನ

ಹೆಚ್ಚಿನ ಇನ್ಶೂರೆನ್ಸ್‌ ಪಾಲಿಸಿಗಳಲ್ಲಿ ವಿಮಾ ಕಂಪನಿಗೆ ಒಂದು ಬಾರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದಾಗ್ಯೂ ಕೆಲವು ಕಂತುಗಳಲ್ಲಿ ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಬಹುದಾದ ಯೋಜನೆಗಳೂ ಇವೆ. ವಯಸ್ಸು ಮತ್ತು ವೈದ್ಯಕೀಯ ದಾಖಲೆಗಳು ಗೃಹ ಸಾಲದ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರುತ್ತವೆ. ವಯಸ್ಸಾದವರಿಗೆ ಪ್ರೀಮಿಯಂ ಮೊತ್ತ ಹೆಚ್ಚಾಗಿರುತ್ತದೆ ಮತ್ತು ದೈಹಿಕವಾಗಿ ಸದೃಢರಾಗಿದ್ದವರಿಗೆ ಪ್ರೀಮಿಯಂ ಕಡಿಮೆಯಾಗಿರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಇದನ್ನೂ ಓದಿ: Money Guide: ಆಪತ್ಕಾಲದಲ್ಲಿ ನೆರವಾಗುವ ಆಪ್ತಮಿತ್ರ ಟರ್ಮ್‌ ಇನ್ಶೂರೆನ್ಸ್‌; ಏನಿದರ ವೈಶಿಷ್ಟ್ಯ?

ಒಟ್ಟಿನಲ್ಲಿ ನಿಮ್ಮ ಹೋಮ್ ಲೋನ್ ಅನ್ನು ಕವರ್ ಮಾಡಲು ಎಚ್ಎಲ್‌ಪಿಪಿ ಮತ್ತು ಟರ್ಮ್ ಇನ್ಶೂರೆನ್ಸ್ ಎಂಬ ಎರಡು ಆಯ್ಕೆಗಳಾಗಿವೆ. ಎರಡೂ ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಆದರೆ ನಿಮ್ಮ ಹೋಮ್ ಲೋನ್ ಅನ್ನು ವಿಮೆ ಮಾಡಿಸುವುದನ್ನು ಮಾತ್ರ ಮರೆಯಬೇಡಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Task force committee meeting at Kottur
ವಿಜಯನಗರ12 seconds ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ5 mins ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್16 mins ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ26 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ43 mins ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ54 mins ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ1 hour ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ1 hour ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ1 hour ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

life certificate
ಉದ್ಯೋಗ2 hours ago

ಜೀವನ ಪ್ರಮಾಣ ಪತ್ರ ಇನ್ನೂ ಸಲ್ಲಿಸಿಲ್ಲವೇ? ನಾಳೆಯೇ ಕೊನೇ ದಿನ! ಇಲ್ದಿದ್ರೆ ಸಿಗಲ್ಲ ಪೆನ್ಶನ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ16 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌