2nd PU Exam: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್! - Vistara News

ಶಿಕ್ಷಣ

2nd PU Exam: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

2nd PU Exam: ಮಾರ್ಚ್ 22ರ ವರೆಗೆ ನಡೆಯಲಿರುವ ಪರೀಕ್ಷೆಗೆ ಯಾವುದೇ ಅಡೆತಡೆಯಾಗದಂತೆ ಮತ್ತು ಯಾವುದೇ ಅಕ್ರಮ ನಡೆಯದಂತೆ ಕರ್ನಾಟಕ ರಾಜ್ಯ ಶಾಲಾ ಪರೀಕ್ಷಾ ಮಂಡಳಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಆಯಾ ನಗರ ಹಾಗೂ ತಾಲೂಕು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್‌ವರೆಗೂ ಪೊಲೀಸರು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

VISTARANEWS.COM


on

2nd PU Exam from tomorrow what are the conditions
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ (2nd PU Exam) ನಾಳೆಯಿಂದ (ಶುಕ್ರವಾರ – ಮಾ. 1) ಆರಂಭವಾಗುತ್ತಿದ್ದು, ಮಾರ್ಚ್ 22ರವರೆಗೆ ಪರೀಕ್ಷೆ ನಡೆಯಲಿದೆ. ಈ ನಡುವೆ ಶಾಲಾ ಶಿಕ್ಷಣ ಇಲಾಖೆಯು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (Prohibitory orders) ಇದ್ದು, ಕಟ್ಟೆಚ್ಚರ ವಹಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ನಿಯಮಾನುಸಾರ ಹಾಗೂ ಕೋರ್ಟ್ ಆದೇಶದ ಅನ್ವಯವೇ ಉಡುಪು ಧರಿಸಿ ಬರಬೇಕಿದೆ.

ಮಾರ್ಚ್ 22ರ ವರೆಗೆ ನಡೆಯಲಿರುವ ಪರೀಕ್ಷೆಗೆ ಯಾವುದೇ ಅಡೆತಡೆಯಾಗದಂತೆ ಮತ್ತು ಯಾವುದೇ ಅಕ್ರಮ ನಡೆಯದಂತೆ ಕರ್ನಾಟಕ ರಾಜ್ಯ ಶಾಲಾ ಪರೀಕ್ಷಾ ಮಂಡಳಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಆಯಾ ನಗರ ಹಾಗೂ ತಾಲೂಕು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್‌ವರೆಗೂ ಪೊಲೀಸರು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿಗೆ 6,98,627 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ನಡೆಯಲಿದೆ. 2023-24ನೇ ಸಾಲಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕ್ರಮದಲ್ಲಿ 80+20 patternನ್ನು (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಳವಡಿಸಲಾಗಿದೆ. ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಭಾಷೆಯ ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಆರಂಭಗೊಳ್ಳಲಿವೆ.

ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ..

01-03-2024: ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ
04-03-2024: ಗಣಿತ, ಶಿಕ್ಷಣ ಶಾಸ್ತ್ರ
05-03-2024: ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
06-03-2024: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್ಸ್‌
07-03-2024: ಇತಿಹಾಸ ಹಾಗೂ ಭೌತಶಾಸ್ತ್ರ
09-03-2024: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ ಪರೀಕ್ಷೆ
11-03-2024: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ಪರೀಕ್ಷೆ
13-03-2024: ಇಂಗ್ಲಿಷ್
15-03-2024: ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
16-03-2024: ಅರ್ಥಶಾಸ್ತ್ರ ಪರೀಕ್ಷೆ
18-03-2024: ಭೂಗೋಳ ಶಾಸ್ತ್ರ, ಜೀವಶಾಸ್ತ್ರ
20-03-2024: ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
21-03-2024: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
22-03-2024: ಹಿಂದಿ ಪರೀಕ್ಷೆ

ಇದನ್ನೂ ಓದಿ: ‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ FAQ’s

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಇರಬಹುದಾದ ಗೊಂದಲಗಳಿಗೆ ಸಂಬಂಧಿಸಿದಂತೆ, ಮಾಹಿತಿ ನೀಡುವುದಕ್ಕಾಗಿ “ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು” (FAQ’s) ಸಿದ್ಧಪಡಿಸಿ ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. 2023-24 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾಹಿತಿಯನ್ನೊಳಗೊಂಡ ಪೋಸ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ.

ಉಚಿತ ಬಸ್‌ ವ್ಯವಸ್ಥೆ

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ವಿಶೇಷ ಕೊಡುಗೆ ನೀಡುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ತೆರಳಲು ಹಾಗೂ ಮನೆಗೆ ಹಿಂದಿರುಗಲು ಉಚಿತ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ತೋರಿಸಿದರೆ ಸಾಕು. ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Text Book: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣರ ಕುರಿತು ತಪ್ಪು ಮಾಹಿತಿ ಪ್ರಕಟಿಸಲಾಗಿದೆ ಎಂದು 2024ರ ಸಾಲಿನ ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಲೋಪ ಸರಿಪಡಿಸುವಂತೆ ಮನವಿ ಮಾಡಿದೆ. ಪಠ್ಯದಲ್ಲಿ ವೀರಶೈವ ಎಂಬ ಪದವನ್ನೇ ಕೈ ಬಿಡಲಾಗಿದ್ದು, ಇದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವೀರಶೈವ ಮಠಾಧೀಶರು ಪತ್ರ ಬರೆದಿದ್ದಾರೆ.

VISTARANEWS.COM


on

Text Book
Koo

ಬೆಂಗಳೂರು: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (Text Book) ಬಸವಣ್ಣರ ಕುರಿತು ತಪ್ಪು ಮಾಹಿತಿ ಪ್ರಕಟಿಸಲಾಗಿದೆ ಎಂದು 2024ರ ಸಾಲಿನ ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಲೋಪ ಸರಿಪಡಿಸುವಂತೆ ಮನವಿ ಮಾಡಿದೆ.

ಪಠ್ಯದಲ್ಲಿ ವೀರಶೈವ ಎಂಬ ಪದವನ್ನೇ ಕೈ ಬಿಡಲಾಗಿದ್ದು, ಇದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ವಚನಗಳನ್ನು ಉಲ್ಲೇಖಿಸಿ ಸುದೀರ್ಘವಾಗಿ ವೀರಶೈವ ಮಠಾಧೀಶರು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಪರವಾಗಿ ಡಾ. ಮಹಾಂತಲಿಂಗ ಶಿವಾಚಾರ್ಯ ಶ್ರೀ ಪತ್ರ ಬರೆದಿದ್ದಾರೆ. ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯಲ್ಲಿ ವೀರಶೈವ ಧರ್ಮದ ಗುರುಪರಂಪರೆಯ ಪಂಚಪೀಠಗಳ ಶಾಖಾಮಠಗಳ ಮಠಾಧೀಶರು ಸದಸ್ಯರಾಗಿದ್ದಾರೆ. ಈ ಎಲ್ಲ ಮಠಾಧೀಶರ ಒಮ್ಮತದ ಅಭಿಪ್ರಾಯವನ್ನು ಈ ಪತ್ರದಲ್ಲಿ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ.

ಈ ವರ್ಷದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣ ಅವರ ಪರಿಚಯವನ್ನು ಪರಿಷ್ಕರಿಸಲಾಗಿದೆ. 2016ರಿಂದ ಈಗ ಮೂರನೇ ಬಾರಿ ಪರಿಷ್ಕರಿಸಲಾಗಿದೆ. ಈ ಪರಿಷ್ಕರಣೆಯಲ್ಲಿ ವಿದ್ಯಾರ್ಥಿಗಳಿಗೆ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಬಸವಣ್ಣ ಅವರ ಪರಿಚಯದ ವೇಳೆ ವೀರಶೈವ ಪದ ಕೈ ಬಿಡಲಾಗಿದೆ. ಇದು ಸರಿಯಲ್ಲ ಎಂದು ವಚನದ ಮೂಲಕ ವಿವರಿಸಲಾಗಿದೆ.

ಬಸವಣ್ಣ ಅರಿವನ್ನೇ ಗುರುವಾಗಿಸಿಕೊಂಡಿದ್ದರು ಎಂದು ಪರಿಷ್ಕರಣೆ ಮಾಡಲಾದ ಪಠ್ಯಕ್ಕೂ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆ ತಪ್ಪುಗಳನ್ನೂ ಸರಿಪಡಿಸುವಂತೆ ತಿಳಿಸಲಾಗಿದೆ.

ಯಾವೆಲ್ಲ ತಪ್ಪುಗಳು?

ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ‘ವೀರಶೈವ’ ಪದವನ್ನು ತಗೆದು ಹಾಕಲಾಗಿದೆ. ಈ ಪರಿಷ್ಕರಣೆ ಸರಿಯಲ್ಲ‌. ಯಾಕೆಂದರೆ 30 ಹೆಚ್ಚು ಶಿವಶರಣರು 142 ವಚನಗಳಲ್ಲಿ 221 ಬಾರಿ ʼವೀರಶೈವʼ ಎಂಬ ಪದ ಬಳಸಿದ್ದಾರೆ. ಕೇವಲ 8 ಜನ ಶಿವಶರಣರು ತಮ್ಮ 10 ವಚನಗಳಲ್ಲಿ 12 ಕಡೆ ಮಾತ್ರ ‘ಲಿಂಗಾಯತ’ ಪದವನ್ನು ಬಳಸಿದ್ದಾರೆ. ಆದರೆ ಬಸವಣ್ಣ ತಮ್ಮ ಒಂದು ವಚನದಲ್ಲಿಯೂ ‘ಲಿಂಗಾಯತ’ ಪದ ಬಳಸಿಲ್ಲ. ಆದರೆ ಬಸವಣ್ಣ ಅವರೇ ಅನೇಕ ಬಾರಿ ತಮ್ಮ ವಚನಗಳಲ್ಲಿ ‘ವೀರಶೈವ’ ಪದ ಬಳಸಿರುವುದಲ್ಲದೇ ತಮ್ಮದೊಂದು ವಚನದಲ್ಲಿ ತಾವು ನಿಜ ವೀರಶೈವ’ (ವಚನ ಸಂಖ್ಯೆ 1,092) ಎಂದು ಹೇಳಿಕೊಂಡಿದ್ದಾರೆ.

ವಾಸ್ತವ ಹೀಗಿರುವಾಗ 2016 ಮತ್ತು 2022ರ ಪಠ್ಯಪುಸ್ತದಲ್ಲಿರುವ ʼವೀರಶೈವ’ ಪದವನ್ನು ತಗೆದು ಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ಇತಿಹಾಸವನ್ನು ತಿರುಚಿದಂತಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ ಮತ್ತು ಕಾನೂನು ಬಾಹಿರ ಕಾರ್ಯ ಎಂದು ಪ್ರತಿಕ್ರಿಯಿಸಲಾಗಿದೆ.

ಅಲ್ಲದೆ ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ಬಸವಣ್ಣನವರು ‘ಅರಿವನ್ನೇ ಗುರು’ವಾಗಿಸಿಕೊಂಡಿದ್ದರು. ಬಸವಣ್ಣನವರು ಇಷ್ಟಲಿಂಗದ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ಪ್ರಕಟಿಸಲಾಗಿದೆ. ಇದು ಸಂಪೂರ್ಣ ತಪ್ಪು ಮಾಹಿತಿ. ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬರಲ್ಲಿರುವ ಅಂತರಂಗದಲ್ಲಿರುವ ಪರಮಾತ್ಮನ ಆರಿವೇ ಗುರುವಾಗಬೇಕು. ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರಿದೀಪವಾಗಬೇಕೆಂದು ಪ್ರತಿಪಾದಿಸಿದ್ದಾರೆಯೇ ಹೊರತು ತಮಗೆ ಗುರುವಿಲ್ಲ. ತಮಗೆ ತಮ್ಮ ಅರಿವೇ ಗುರು ಎಂದು ಎಲ್ಲಿಯೂ ಯಾವ ಸಂದರ್ಭದಲ್ಲಿಯೂ ಹೇಳಿಲ್ಲ. ಅವರು ಅವರಲ್ಲಿರುವ ಗುರುವಿನ ಬಗೆಗಿನ ಗೌರವವನ್ನು ತಮ್ಮ ಅನೇಕ ವಚನಗಳಲ್ಲಿ ನಿರೂಪಿಸಿದ್ದಾರೆ. ತಾವು ಗುರುವಿನಿಂದ ಇಷ್ಟಲಿಂಗವನ್ನು ಪಡೆದಿದ್ದೇನೆ ಎಂದು ಆನೇಕ ವಚನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕ ವಚನಗಳ ಉದಾಹರಣೆಗಳಿವೆ.

ಬಸವಣ್ಣನವರ ವಚನಗಳಲ್ಲಿ ಗುರುವಿನ ಮತ್ತು ಗುರುಗಳಿಂದ ಇಷ್ಟಲಿಂಗ ಪಡೆದೆ ಎನ್ನುವ ಉಲ್ಲೇಖಗಳಿವೆ. ಆದ್ದರಿಂದ ಬಸವಣ್ಣನವರಿಗಿಂತ ಮೊದಲೇ ಇಷ್ಟಲಿಂಗ ಪೂಜೆಯಿತ್ತು ಎನ್ನುವುದಕ್ಕೆ ಆಧಾರಗಳಿವೆ. ಆದ್ದರಿಂದ ಇತಿಹಾಸಕ್ಕೆ ಹಾಗೂ ನಡೆದು ಬಂದ ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿಧ್ಯಾರ್ಥಿಗಳ ತಲೆ ತುಂಬಬಾರದು ಎಂದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ 9ನೇ ತರಗತಿಯ ಪಠ್ಯದಲ್ಲಿ ಆದ ದೋಷಗಳನ್ನು ಸರಿಪಡಿಸದಿದ್ದರೆ ನಾವು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: Pralhad Joshi: ಸಚಿವ ಪ್ರಲ್ಹಾದ್‌ ಜೋಶಿ ವೀರಶೈವರನ್ನು ಕಡೆಗಣಿಸಿಲ್ಲ: ಶ್ರೀ ರುದ್ರಮುನಿ‌ ಸ್ವಾಮೀಜಿ ಸಮರ್ಥನೆ

Continue Reading

ಶಿಕ್ಷಣ

Parenting Tips: ಕಾಲೇಜಿಗೆ ಹೊರಡಲು ಸಿದ್ಧವಾಗಿರುವ ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಸಂಗತಿಗಳಿವು!

10, 12ನೇ ತರಗತಿ ಪರೀಕ್ಷೆ ಮುಗಿದ ತಕ್ಷಣ ಮಕ್ಕಳಲ್ಲಿ ತಾವು ಇನ್ನು ಸ್ವತಂತ್ರರು ಎಂಬ ಭಾವನೆ ಬರುವುದು ಸಹಜ. ಬದುಕಿನಲ್ಲಿ ಗಂಭೀರತೆ ಅರಿಯದೇ ಇದ್ದರೆ ಅವರು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಪೋಷಕರು (Parenting Tips) ತಿಳಿಸಲೇಬೇಕಾದ ಕೆಲವು ಸಂಗತಿಗಳಿವೆ. ಇದರಿಂದ ಅವರು ಜೀವನ ಮತ್ತು ಶಿಕ್ಷಣ ಎರಡರಲ್ಲೂ ಯಶಸ್ಸು ಸಾಧಿಸಬಹುದು. ಪೋಷಕರು ಗಮನ ಹರಿಸಬೇಕಾದ ಸಂಗತಿಗಳ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Parenting Tips
Koo

ಎಸ್ ಎಸ್ ಎಲ್ ಸಿ (SSLC) ಮತ್ತು ಸೆಕೆಂಡ್ ಪಿಯುಸಿ (PUC) ಪರೀಕ್ಷೆಗಳ (Exam) ಫಲಿತಾಂಶದ ಅನಂತರ ಮಕ್ಕಳು ಜೀವನದ ಹೊಸ ಪ್ರಯಾಣವನ್ನು (new life) ಪ್ರಾರಂಭಿಸಲು ಸಿದ್ಧರಾಗುತ್ತಾರೆ. ಕೆಲವರು ಕಾಲೇಜಿನತ್ತ (collage) ಹೆಜ್ಜೆ ಹಾಕಿದರೆ ಇನ್ನು ಕೆಲವರು ಸ್ವಂತ ಬಿಸ್ ನೆಸ್ ಪ್ರಾರಂಭ ಅಥವಾ ತಂದೆ ತಾಯಿಯಿಂದ (Parenting Tips) ಕಲಿತ ಕೆಲಸಗಳನ್ನು ವೃತ್ತಿಯಾಗಿ ಪಡೆಯಲು ಸಿದ್ಧತೆ ನಡೆಸುತ್ತಾರೆ. ಒಂದು ಅರ್ಥದಲ್ಲಿ 12ನೇ ತರಗತಿಯ ಅನಂತರ ಮಕ್ಕಳು ತಮ್ಮ ವೃತ್ತಿಜೀವನವನ್ನು ನಿರ್ಧರಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡುತ್ತಾರೆ. ವಿಷಯ ಮತ್ತು ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಮತ್ತು ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ ಮಗುವೂ ಶಾಲೆಯನ್ನು ತೊರೆದು ಕಾಲೇಜಿಗೆ ಹೋಗುವ ವಯಸ್ಸಾಗಿದ್ದರೆ, ಪೋಷಕರಾಗಿ ಅವರ ವೃತ್ತಿ ಮತ್ತು ಭವಿಷ್ಯದ ಬಗ್ಗೆ ಕಾಳಜಿಯನ್ನು ತೋರುವುದು ಒಳ್ಳೆಯದು.

Parents moving college student

ಶಾಲಾ ಜೀವನಕ್ಕೂ ಕಾಲೇಜು ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶಾಲೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಮೇಲ್ವಿಚಾರಣೆಯಲ್ಲಿ ವಾಸಿಸುತ್ತಿದ್ದ ಮಗು, ವಯಸ್ಸಿನಲ್ಲಿ ಬೆಳೆಯುತ್ತದೆ ಮಾತ್ರವಲ್ಲದೆ ಅಂತಹ ವಾತಾವರಣಕ್ಕೆ ಹೋಗುತ್ತದೆ. ಅಲ್ಲಿ ಬಹುತೇಕ ಸ್ವತಂತ್ರನಾಗಲು ಪ್ರಾರಂಭಿಸುತ್ತದೆ. ಇಲ್ಲಿಂದ ಮಗುವಿನ ಆಲೋಚನೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಶಾಲಾ ವಾಹನದ ಬದಲು, ಮಕ್ಕಳು ತಮ್ಮ ಬೈಕ್-ಸ್ಕೂಟರ್ ಅಥವಾ ಕಾರನ್ನು ತಾನೇ ಓಡಿಸಿಕೊಂಡು ಕಾಲೇಜಿಗೆ ಹೋಗುವ ಹಾದಿಯಲ್ಲಿರುತ್ತಾರೆ. ಮಕ್ಕಳು ಈ ಸಂದರ್ಭದಲ್ಲಿ ವಿದ್ಯಾಭ್ಯಾಸದ ಜೊತೆಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೆಲ್ಲವೂ ಅವರಿಗೆ ಹೊಸ ಅನುಭವವಾಗಿದೆ. ಅವರು ಇದನ್ನು ಧನಾತ್ಮಕ ಮತ್ತು ಋಣಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ಪೋಷಕರು ತಮ್ಮ ಮಗುವಿಗೆ ಕಾಲೇಜಿಗೆ ಕಳುಹಿಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿಸಬೇಕು. ಇದರಿಂದ ಮಗು ಕಾಲೇಜು ಜೀವನದಲ್ಲಿ ಕಳೆದುಹೋಗುವುದಿಲ್ಲ. ಆದರೆ ತನ್ನ ಗುರಿಯನ್ನು ಸಾಧಿಸುವ ಜೊತೆಗೆ ಸಮಾಜದಲ್ಲಿ ಬದುಕಲು ಮತ್ತು ಸ್ವಯಂ ಆಗಲು ತರಬೇತಿಯನ್ನು ಪ್ರಾರಂಭಿಸಬಹುದು. ಮೊದಲ ಬಾರಿಗೆ ಕಾಲೇಜಿಗೆ ಹೋಗಲು ತಯಾರಿ ನಡೆಸುತ್ತಿರುವ ಮಕ್ಕಳು ಹಾಗೂ ಇವರ ಪೋಷಕರು ತಿಳಿದುಕೊಳ್ಳಬೇಕಾದ ಹಲವು ಸಂಗತಿಗಳಿವೆ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ವಿಚಾರಗಳು ಹಲವಾರು ಇದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

school and collage girl

1. ಶಾಲೆ ಮತ್ತು ಕಾಲೇಜು ನಡುವಿನ ವ್ಯತ್ಯಾಸ

ಶಾಲೆಯಿಂದ ಕಾಲೇಜಿಗೆ ಹೋಗುವುದು ಮಕ್ಕಳಿಗೆ ಒಂದು ಪ್ರಮುಖ ಹಂತವಾಗಿದೆ. ಮಗುವು ನಿಯಮ ಮತ್ತು ಶಿಸ್ತಿನ ಜೀವನದಿಂದ ಸಂಪೂರ್ಣವಾಗಿ ವಿಭಿನ್ನವಾದ ಸ್ಥಳದಲ್ಲಿದ್ದಾಗ ಅವನು ತನ್ನದೇ ಆದ ನಿಯಮಗಳನ್ನು ರೂಪಿಸಿಕೊಂಡು ಬದುಕುವ ಸಮಯ ಇದು. ಕಾಲೇಜು ಮಕ್ಕಳಿಗೆ ಸ್ವಾತಂತ್ರ್ಯ ನೀಡುತ್ತದೆ. ಅದಕ್ಕಾಗಿ ಅವರು ಬಹಳ ಸಮಯದಿಂದ ಕಾಯುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮಗುವು ಈ ಸ್ವಾತಂತ್ರ್ಯವನ್ನು ತಪ್ಪು ರೀತಿಯಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಕಾಲೇಜು ಮತ್ತು ಶಾಲೆಯ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ವಿವರಿಸಿ ಮತ್ತು ಅವನ ವೃತ್ತಿಜೀವನದ ಬಗ್ಗೆ ಅದರ ಗಂಭೀರತೆಯ ಬಗ್ಗೆ ತಿಳಿಸಿ.

2. ಕೇವಲ ಶಿಕ್ಷಣದತ್ತ ಗಮನಹರಿಸಬೇಡಿ

ಶಾಲೆಗಿಂತ ಕಾಲೇಜಿನಲ್ಲಿ ಅಧ್ಯಯನವೇ ಮುಖ್ಯವಾಗಿದ್ದರೂ ಕೇವಲ ಶಿಕ್ಷಣದತ್ತ ಗಮನ ಹರಿಸಿ ಇತರ ವಿಷಯಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅಧ್ಯಯನದ ಜೊತೆಗೆ ಉತ್ತಮ ಸ್ನೇಹಿತರೊಂದಿಗೆ ಸಮಯ ಕಳೆಯಲು, ಪ್ರಾಧ್ಯಾಪಕರೊಂದಿಗೆ ಸಂವಹನ ನಡೆಸಲು ಮತ್ತು ಕ್ಯಾಂಟೀನ್ ಅನ್ನು ಅನುಭವಿಸಲು ಮಗುವನ್ನು ಪ್ರೋತ್ಸಾಹಿಸಿ.

3. ಹಣದ ಮೌಲ್ಯ ತಿಳಿಸಿ

ಕಾಲೇಜಿಗೆ ಹೋಗುವ ಮೊದಲು ಮಕ್ಕಳು ಆರ್ಥಿಕ ವ್ಯವಸ್ಥೆಯನ್ನು ಸಹ ಅರ್ಥಮಾಡಿಕೊಳ್ಳಬೇಕು. ಕಾಲೇಜಿಗೆ ಹೋಗುವ ಪ್ರತಿಯೊಂದು ಮಗುವೂ ಪಾಕೆಟ್ ಮನಿಯನ್ನು ಹೇಗೆ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕೆಂದು ತಿಳಿದಿರಬೇಕು. ಹಣದ ಮೌಲ್ಯವನ್ನು ಅವರಿಗೆ ಕಲಿಸಿ. ನಿಗದಿತ ಪಾಕೆಟ್ ಮನಿಯಿಂದ ಅವರ ಕಾಲೇಜು ಖರ್ಚು ಭರಿಸಬೇಕೆಂದು ಹೇಳಿ. ಅಧ್ಯಯನ, ಕ್ಯಾಂಟೀನ್ ಮತ್ತು ಸ್ನೇಹಿತರ ನಡುವೆ ಎಷ್ಟು ಮತ್ತು ಹೇಗೆ ಹಣವನ್ನು ಖರ್ಚು ಮಾಡಬೇಕೆಂದು ಅವರಿಗೆ ತಿಳಿಸಿ.

4. ಅಡುಗೆಯನ್ನು ಕಲಿಸಿ

ಕಾಲೇಜು ಜೀವನಕ್ಕೆ ಪ್ರವೇಶಿಸುವುದು ಎಂದರೆ ಮಗು ಸ್ವಾವಲಂಬಿಯಾಗುವುದು. ಅಂತಹ ಪರಿಸ್ಥಿತಿಯಲ್ಲಿ, ಪೋಷಕರ ಸಹಾಯವಿಲ್ಲದೆ ಏಕಾಂಗಿಯಾಗಿ ಬದುಕಲು ಅಗತ್ಯವಾದ ಕೆಲಸಗಳನ್ನು ಹೇಗೆ ಮಾಡಬೇಕೆಂದು ಮಗುವಿಗೆ ತಿಳಿದಿರಬೇಕು. ನೀರು ಕಾಯಿಸುವುದು, ಅಡುಗೆ ಮಾಡುವುದು ಹೀಗೆ ಕಾಲೇಜಿಗೆ ಬಂದ ಮೇಲೆ ಓದುವ ಮಟ್ಟವೂ ಹೆಚ್ಚುತ್ತದೆ. ಅನೇಕ ಬಾರಿ ಮಕ್ಕಳು ಮನೆಯಿಂದ ದೂರ ಹೋಗಿ ಹಾಸ್ಟೆಲ್ ಅಥವಾ ಪಿಜಿಯಲ್ಲಿ ಇರಬೇಕಾಗುತ್ತದೆ. ಅಂತಹ ಪರಿಸ್ಥಿತಿ ಮಗು ಮೊದಲೇ ಸಿದ್ಧವಾಗಿರುವುದು ಒಳ್ಳೆಯದು.

ಇದನ್ನೂ ಓದಿ: Top 5 Engineering Courses: ಇವು ಬಹು ಬೇಡಿಕೆಯ ಟಾಪ್ 5 ಎಂಜಿನಿಯರಿಂಗ್ ಕೋರ್ಸ್‌ಗಳು

5. ವೈಯಕ್ತಿಕ ಸುರಕ್ಷತೆ

ಶಾಲಾ ದಿನಗಳಲ್ಲಿ ಮಗುವಿನ ಸುರಕ್ಷತೆಯ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಆದರೆ ಕಾಲೇಜಿಗೆ ಹೋದ ಅನಂತರ ಮಗುವಿನ ಸುರಕ್ಷತೆಯ ಜವಾಬ್ದಾರಿಯು ಮಗುವಿನ ಮೇಲಿರುತ್ತದೆ. ಅವನು ಒಬ್ಬನೇ ಕಾಲೇಜಿಗೆ ಹೋಗುವುದನ್ನು ಕಲಿಯುತ್ತಾನೆ. ತರಗತಿ ಮುಗಿಸಿ ಒಬ್ಬರೇ ಮನೆಗೆ ಹಿಂದಿರುಗುತ್ತಾರೆ. ಪೋಷಕರ ಮೇಲ್ವಿಚಾರಣೆ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಮಗುವಿಗೆ ತನ್ನನ್ನು ರಕ್ಷಿಸಿಕೊಳ್ಳಲು ಕಲಿಸಬೇಕು. ಯಾವುದೇ ಅಜ್ಞಾತ ಸ್ಥಳಕ್ಕೆ ಒಂಟಿಯಾಗಿ ಹೋಗಬೇಡಿ ಎಂದು ಮಗುವಿಗೆ ಹೇಳಿ. ಹೊಸ ಸ್ನೇಹಿತರು ಹೇಳುವ ಎಲ್ಲವನ್ನೂ ನಂಬಬೇಡಿ ಅಥವಾ ಸಂಬಂಧದಲ್ಲಿ ತನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಕಲಿಸಿ. ಯೋಚಿಸದೆ ಯಾರನ್ನೂ ನಂಬಬೇಡಿ ಎಂಬುದನ್ನು ತಿಳಿಸಿ.

6. ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಲು ಕಲಿಸಿ

ಮಗುವಿಗೆ ಕಾಲೇಜಿನಲ್ಲಿ ಹೊಸ ಸ್ನೇಹಿತರು ಸಿಗುತ್ತಾರೆ. ಕಾಲೇಜು ಸ್ನೇಹಿತರು ಹೆಚ್ಚಾಗಿ ನೋಟುಗಳ ವಿನಿಮಯದಿಂದ ಪ್ರಾರಂಭಿಸುತ್ತಾರೆ. ಶಾಲಾ ಸ್ನೇಹಿತರಂತೆ, ಅವರು ಬಾಲಿಶತೆಯನ್ನು ಹೊಂದಿರುವುದಿಲ್ಲ. ಆದರೆ ಇತರ ಅನೇಕ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಆದ್ದರಿಂದ, ಅವರು ಕಾಲೇಜಿನಲ್ಲಿ ಬುದ್ಧಿವಂತಿಕೆಯಿಂದ ಸ್ನೇಹಿತರನ್ನು ಆಯ್ಕೆ ಮಾಡಬೇಕು ಎಂಬುದನ್ನು ನಾವು ಮಕ್ಕಳಿಗೆ ತಿಳಿಸಬೇಕು.

Continue Reading

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading

ಬೆಂಗಳೂರು

UGCET 2024: ಯುಜಿಸಿಇಟಿ ದಾಖಲೆಗಳ ಆನ್‌ಲೈನ್‌ ಪರಿಶೀಲನೆ; ವಿದ್ಯಾರ್ಥಿಗಳೇ ನಿಮ್ಮ status ಚೆಕ್ ಮಾಡಿಕೊಳ್ಳಿ

UGCET 2024: ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಸೇರಲು ಬಯಸಿ, ಅಭ್ಯರ್ಥಿಗಳು ಯುಜಿಸಿಇಟಿ-2024 (UGCET-2024) ಆನ್‌ಲೈನ್ ಅರ್ಜಿಯಲ್ಲಿ ಕ್ಲೇಮ್ ಮಾಡಿದ್ದ ವಿವಿಧ ಮೀಸಲಾತಿಗಳನ್ನು ಪರಿಗಣಿಸಿ ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿದ್ದು, ಈ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

VISTARANEWS.COM


on

UGCET 2024 Online verification of UGCET records Information publish on karnataka examination authority website
Koo

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್ ಸೇರಲು ಬಯಸಿ, ಅಭ್ಯರ್ಥಿಗಳು ಯುಜಿಸಿಇಟಿ 2024 (UGCET-2024) ಆನ್‌ಲೈನ್ ಅರ್ಜಿಯಲ್ಲಿ ಕ್ಲೇಮ್ ಮಾಡಿದ್ದ ವಿವಿಧ ಮೀಸಲಾತಿಗಳನ್ನು ಪರಿಗಣಿಸಿ ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿದ್ದು, ಈ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: IPS officers promoted: ಡಿಜಿಪಿಯಾಗಿ ಮಾಲಿನಿ ಕೃಷ್ಣಮೂರ್ತಿ, ಪ್ರಣಬ್ ಮೊಹಂತಿಗೆ ಮುಂಬಡ್ತಿ

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ SATS (ಸ್ಯಾಟ್ಸ್) ಸಂಖ್ಯೆ ಆಧರಿಸಿ ಅಭ್ಯರ್ಥಿಗಳ ವ್ಯಾಸಂಗ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಪರಿಶೀಲಿಸಲಾಗಿದೆ. ಅದೇ ರೀತಿಯಾಗಿ RD (ಆರ್‌ಡಿ) ಸಂಖ್ಯೆ ಆಧರಿಸಿ ಮೀಸಲಾತಿ (ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ) 371(ಜೆ), ಧಾರ್ಮಿಕ ಅಲ್ಪಸಂಖ್ಯಾತ, ಎನ್‌ಸಿಎಲ್‌ಸಿ (Non Creamy Layer Certificate) ಮತ್ತು ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಪರಿಶೀಲಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಅರ್ಹತಾ ಕಂಡಿಕೆ ಇ, ಎಫ್, ಜಿ, ಎಚ್ ಮತ್ತು ಒ ಕ್ಲಾಸ್‌ಗಳಿಗೆ ಅನ್ವಯಿಸುವಂತೆ ಆಯಾ ಇಲಾಖೆಯವರು ಪರಿಶೀಲನೆ ನಂತರ ನೀಡಿದ ಅರ್ಹತೆಯನ್ನು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

SATS ಮತ್ತು RD ಸಂಖ್ಯೆ ಆಧರಿಸಿ ಮಾಡಲಾಗಿರುವ ಪರಿಶೀಲನೆಯ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನ ಲಿಂಕ್‌ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ನಿಗದಿತ ಲಿಂಕ್‌ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ವಿವರಗಳನ್ನು ನೋಡಬಹುದು. ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್‌ನ್ನು ಸದ್ಯದಲ್ಲಿಯೇ ಸಕ್ರಿಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಹಂತಗಳು:

ಅಭ್ಯರ್ಥಿಗಳು ಪ್ರಕಟಿಸಲಾಗುವ ವೇಳಾಪಟ್ಟಿಯನುಸಾರ ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜು ಮತ್ತು ಕೋರ್ಸ್‌ಗಳ ಪಟ್ಟಿ ಮಾಡಿಕೊಳ್ಳಬೇಕು. ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್‌ಸೈಟ್‌ನ ಲಿಂಕ್‌ನಲ್ಲಿ ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್, ಜೆಡ್, ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ವೇಳಾಪಟ್ಟಿ ನೀಡಿ ಪರಿಶೀಲನೆ ಮಾಡಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ನೀಡಲಾಗಿದೆ. ಈ ಅಭ್ಯರ್ಥಿಗಳು ಮೇಲಿನ ಲಿಂಕ್‌ ಅನ್ನು ಪರಿಶೀಲಿಸಬೇಕಾಗಿಲ್ಲ. ಆಫ್‌ಲೈನ್ ಪರಿಶೀಲನೆಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

DCET 2024: ಡಿಸಿಇಟಿ ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಡಿಸಿಇಟಿ-2024ರ (DCET 2024) ಪರೀಕ್ಷೆ ಫಲಿತಾಂಶವನ್ನು (Result) ಕೆಇಎ (KEA) ಶನಿವಾರ ಮಧ್ಯಾಹ್ನ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ. ಒಟ್ಟು 17,483 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಡಿಪ್ಲೊಮಾ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಹೊಂದಿದ್ದು, ಡಿಸಿಇಟಿ ಪರೀಕ್ಷೆಗೆ ಹಾಜರಾಗಿ ರ‍್ಯಾಂಕ್ ಪ್ರಕಟವಾಗಿರದಿದ್ದರೆ ಅಂತಹ ಅಭ್ಯರ್ಥಿಗಳು ಡಿಪ್ಲೊಮಾ ಅಂಕ ಮತ್ತು ಅಂಕಪಟ್ಟಿಯನ್ನು ಪಿಡಿಎಫ್ ಫಾರ್ಮ್ಯಟ್‌ನಲ್ಲಿ ಪ್ರಾಧಿಕಾರದ ಇಮೇಲ್ ಸಲ್ಲಿಸಿದಲ್ಲಿ ಅರ್ಹತೆಯನ್ನು ಪರಿಶೀಲಿಸಿ, ನಿಯಮಾನುಸಾರ ರ‍್ಯಾಂಕ್ ನೀಡಲಾಗುತ್ತದೆ.

ಡಿಸಿಇಟಿ: ಜು.2ರಿಂದ 4ರವರೆಗೆ ದಾಖಲಾತಿ ಪರಿಶೀಲನೆ

ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಹಾಗು ಮೊದಲನೇ ವರ್ಷದ ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ಜು.2ರಿಂದ 4ವರೆಗೆ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಸಿಇಟಿ ರ‍್ಯಾಂಕ್‌ ಪಡೆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಇದನ್ನೂ ಓದಿ: WhatsApp: ಇನ್ನು ಮುಂದೆ ಈ ಫೋನ್‌ಗಳಲ್ಲಿ ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನೂ ಇದೆಯಾ ನೋಡಿ

ದಾಖಲಾತಿ ಪರಿಶೀಲನೆ ನಡೆಸುವ ಕಾಲೇಜುಗಳ ಪಟ್ಟಿಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮಗೆ ಹತ್ತಿರ ಇರುವ ಯಾವುದಾದರೊಂದು ಕಾಲೇಜಿಗೆ ಖುದ್ದು ಹೋಗಬೇಕು. ಆನ್ ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ವಿಶೇಷ ಪ್ರವರ್ಗದ (ಎನ್ ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್- ಕ್ಲೇಮ್ ಮಾಡಿದ್ದಲ್ಲಿ ಮಾತ್ರ ಅರ್ಹತೆ) ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

Continue Reading
Advertisement
Road Accident
ಬೆಳಗಾವಿ1 min ago

Road Accident : ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ; ಮಗನ ಕಣ್ಣೆದುರೇ ತಾಯಿ ಸಾವು

Pradeep Eshwar
ಕರ್ನಾಟಕ9 mins ago

Pradeep Eshwar: ವಿಪಕ್ಷ ನಾಯಕರು ಸಿದ್ದರಾಮಯ್ಯ ಬಳಿ ಕೋಚಿಂಗ್‌ ಪಡೆಯಲಿ: ಅಶೋಕ್‌ಗೆ ಪ್ರದೀಪ್‌ ಈಶ್ವರ್‌ ಸಲಹೆ

Actor Darshan in Parappana Agrahara Jail special fan who came to visit
ಸ್ಯಾಂಡಲ್ ವುಡ್24 mins ago

Actor Darshan : ಶಂಖ ಊದುತ್ತ, ಜಾಗಟೆ ಬಾರಿಸುತ್ತ ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ!

Hardik Pandya
ಪ್ರಮುಖ ಸುದ್ದಿ26 mins ago

Hardik Pandya : ಭಾರತಕ್ಕೆ ಆಡುವುದೇ ಕನಸು; ಹಾರ್ದಿಕ್ ಪಾಂಡ್ಯನ ಹಳೆ ವಿಡಿಯೊ ವೈರಲ್​

Physical Assault
ಕ್ರೈಂ32 mins ago

Physical Assualt: 2 ವರ್ಷದ ಮಗುವನ್ನೇ ಲೈಂಗಿಕ ಕ್ರಿಯೆಗಾಗಿ ಮಾರಲು ಯತ್ನಿಸಿದ್ದ ದುಷ್ಟ ದಂಪತಿ ಬಂಧನ

bike wheeling
ಬೆಂಗಳೂರು ಗ್ರಾಮಾಂತರ42 mins ago

Bike Wheeling: ಹೈವೇಯಲ್ಲಿ ಭಯಾನಕ ವ್ಹೀಲಿಂಗ್‌ ಜತೆಗೆ ಯುವತಿಗೆ ಕೀಟಲೆ ಮಾಡಿದ ಪುಂಡರು!

Ex CIA Officer
ವಿದೇಶ44 mins ago

Ex CIA Officer: ಪಾಕಿಸ್ತಾನದಲ್ಲಿ ಉಗ್ರರನ್ನು ತಾಲಿಬಾನ್ ಮೂಲಕ ಕೊಲ್ಲುತ್ತಿರುವ ಭಾರತ; ಅಮೆರಿಕ ಗುಪ್ತಚರ ಇಲಾಖೆ ಮಾಜಿ ಅಧಿಕಾರಿ ಹೇಳಿಕೆ

Suryakumar Yadav
ಕ್ರೀಡೆ49 mins ago

Suryakumar Yadav Catch: ಬೌಂಡರಿ ಲೈನ್ ಟಚ್ ಮಾಡಿದ್ರಾ ಸೂರ್ಯಕುಮಾರ್?; ಹೊಸ ವಿಡಿಯೊ ವೈರಲ್​

Actor Darshan case Shivaraj Kumar reaction
ಸ್ಯಾಂಡಲ್ ವುಡ್56 mins ago

Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್‌ ಕೇಸ್‌ ಬಗ್ಗೆ ಶಿವಣ್ಣ ಮಾತು!

Rohit Sharma
ಕ್ರೀಡೆ2 hours ago

Rohit Sharma: ಲಿಯೋನೆಲ್ ಮೆಸ್ಸಿ ಶೈಲಿಯಲ್ಲಿ ವಿಶ್ವಕಪ್​ ಎತ್ತಿ ಹಿಡಿದ ರೋಹಿತ್​; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು3 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ23 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌