Vastu Tips For Health: ಆರೋಗ್ಯಪೂರ್ಣ ಆಗಿರಬೇಕೆ? ಈ ವಾಸ್ತು ಟಿಪ್ಸ್ ಪಾಲಿಸಿ - Vistara News

ಆರೋಗ್ಯ

Vastu Tips For Health: ಆರೋಗ್ಯಪೂರ್ಣ ಆಗಿರಬೇಕೆ? ಈ ವಾಸ್ತು ಟಿಪ್ಸ್ ಪಾಲಿಸಿ

ಮನೆಯ ರಚನೆ ಮತ್ತು ಪೀಠೋಪಕರಣಗಳು ಅಲ್ಲಿ ವಾಸಿಸುತ್ತಿರುವವರ ಆರೋಗ್ಯದ ಮೇಲೆ (Vastu Tips For Health) ಪರಿಣಾಮ ಬೀರುತ್ತವೆ. ಹಾಗಾದರೆ ಆರೋಗ್ಯಪೂರ್ಣವಾಗಿರಬೇಕಿದ್ದರೆ ಏನು ಮಾಡಬೇಕು? ಇಲ್ಲಿದ ಮಾಹಿತಿ.

VISTARANEWS.COM


on

Vastu Tips For Health
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆರೋಗ್ಯವೇ ಭಾಗ್ಯ (Vastu Tips For Health) ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ಒಂದಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಇದಕ್ಕಾಗಿ ನಮ್ಮ ಹಿರಿಯರು ಆರೋಗ್ಯವಂತ ಜೀವನಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದರು. ವಾಸ್ತು ಮಾನವನ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮನೆಯ ರಚನೆ ಮತ್ತು ಪೀಠೋಪಕರಣಗಳು ಅಲ್ಲಿ ವಾಸಿಸುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆರೋಗ್ಯಕಾರಿ ಜೀವನಕ್ಕೆ ನೀವು ಪಾಲಿಸಬೇಕಾದ ಕೆಲವೊಂದು ವಾಸ್ತು ಸಲಹೆಗಳನ್ನು ನಾವಿಲ್ಲಿ ನೀಡುತ್ತೇವೆ.

Sleep. Young Woman Sleeping In Bed.

ಮಲಗುವ ದಿಕ್ಕು

ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ದೆ ಬಹಳ ಮುಖ್ಯ. ಅದೇ ರೀತಿ ನೆಮ್ಮದಿಯ ನಿದ್ದೆ ಬರಲು ನಾವು ಯಾವ ದಿಕ್ಕಿಗೆ ತಲೆಹಾಕಿ ಮಲಗುತ್ತೇವೆ ಎನ್ನುವುದೂ ಪ್ರಧಾನ ಅಂಶ. ನಮ್ಮ ಹಿರಿಯರು ಸಲಹೆ ನೀಡುವಂತೆ ದಕ್ಷಿಣ ಭಾಗಕ್ಕೆ ತಲೆ ಹಾಕಿ ಮಲಗುವುದನ್ನು ರೂಢಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬೇಡಿ. ಗೋಡೆಯಿಂದ ನಿಮ್ಮ ಹಾಸಿಗೆ ಕನಿಷ್ಠ ಮೂರರಿಂದ ನಾಲ್ಕು ಇಂಚು ದೂರದಲ್ಲಿರಲಿ. ಮರದ ಮಂಚವೇ ನಿಮ್ಮ ಆದ್ಯತೆಯ ಆಯ್ಕೆಯಾಗಿರಲಿ.

Toilet

ಶೌಚಗೃಹ

ಬಾತ್ ರೂಮ್ ಮತ್ತು ಟಾಯ್ಲೆಟ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಇಲ್ಲಿ ನೀರ ಪಸೆ ಇರುವುದರಿಂದ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನೈರ್ಮಲ್ಯಕ್ಕೆ ಪ್ರಾಧಾನ್ಯತೆ ಕೊಡಿ. ಬಾತ್ ರೂಮ್ ಒಳಗೆ ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಅದೇ ರೀತಿ ನಳ್ಳಿಯಿಂದ ನೀರು ತೊಟ್ಟಿಕ್ಕುವುದು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಆದ್ದರಿಂದ ಮನೆಯಲ್ಲಿ ಎಲ್ಲೂ ನೀರು ಸೋರಿಕೆಯಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಗೋಡೆಗೆ ಬಣ್ಣ

ಮನೆಯಲ್ಲಿ ಯಾರಿಗಾದರೂ ನಿರಂತರ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಸುತ್ತಲಿನ ಗೋಡೆಗೆ ಬಣ್ಣ ಹಚ್ಚಿ. ಇದಕ್ಕಾಗಿ ಕೆಂಪು ಅಥವಾ ಹಸುರು ಪೈಂಟ್ ಬಳಸಿ. ಕೆಂಪು ಬಣ್ಣ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸಿದರೆ ಹಸುರು ಬಣ್ಣ ಶಾಂತತೆಯ ಸಂಕೇತ. ಗೋಡೆಗಳಲ್ಲಿ ಬಿರುಕು, ಕೊಳೆ ಇದ್ದರೆ ಅದನ್ನು ಶುಚಿಗೊಳಿಸಿ ಬಳಿಕ ಪೈಂಟ್ ಮಾಡಿ.

Sofa Furniture with Tables

ಪೀಠೋಪಕರಣಗಳ ಸ್ಥಾನ

ಮನೆಗಳಲ್ಲಿ ಯಾವ ರೀತಿಯಲ್ಲಿ ನಾವು ಪೀಠೋಪಕರಣಗಳನ್ನು ಸೆಟ್ ಮಾಡಿ ಇಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಪ್ರತಿಫಲನ ಗುಣವುಳ್ಳ ಕನ್ನಡಿ ಅಥವಾ ಟಿವಿಯಂತಹ ವಸ್ತುಗಳನ್ನು ಬೆಡ್ ಅಥವಾ ಬೆಡ್ ರೂಮ್ ಎದುರು ಇಡಬೇಡಿ. ಬಾತ್ ರೂಮ್ ಮತ್ತು ಮೆಟ್ಟಿಲಿನ ಸಮೀಪ ಕತ್ತಲೆ ಇರದಂತೆ ನೋಡಿಕೊಳ್ಳಿ. ಅಭ್ಯಾಸ ಕೋಣೆಯಲ್ಲಿ ಮರ ಅಥವಾ ಮಾರ್ಬಲ್ ಪೀಠೋಪಕರಣಗಳನ್ನು ಇಡುವುದರಿಂದ ಸ್ಮರಣೆ ಶಕ್ತಿ ಮತ್ತು ಶ್ರದ್ಧೆ ಹೆಚ್ಚುತ್ತದೆ.

Frame Mockup in Kitchen Interior on Wooden Table in Kitchen Room.

ಹೀಗಿರಲಿ ಅಡುಗೆ ಕೋಣೆ

ಆರೋಗ್ಯ ಮತ್ತು ಅಡುಗೆ ಕೋಣೆ ಪರಸ್ಪರ ಸಂಬಂಧ ಇರುವಂತಹದ್ದು. ಅಡುಗೆ ಕೋಣೆಯ ಮುಖ ಆಗ್ನೇಯ ದಿಕ್ಕಿಗೆ ಇರಬೇಕು. ಅಲ್ಲದೆ ಸ್ಟವ್ ಅಥವಾ ಒಲೆ ಪೂರ್ವ ದಿಕ್ಕಿನಲ್ಲಿ ಇರಿಸಿ. ಯಾವುದೇ ಕಾರಣಕ್ಕೂ ಈಶಾನ್ಯ ಭಾಗಕ್ಕೆ ಮುಖ ಮಾಡಿ ಅಡುಗೆ ಕೋಣೆ ಮತ್ತು ಸ್ಟವ್ ನಿಲ್ಲದಂತರೆ ನೋಡಿಕೊಳ್ಳಿ.

ಒಡೆದ ಕನ್ನಡಿ, ಕಿಟಕಿ ಇರಲೇ ಬಾರದು

ಒಡೆದ ಕನ್ನಡಿ ಮನೆಯೊಳಗೆ ಇರುವುದು ಅಪಶಕುನದ ಸಂಕೇತ ಎನ್ನಲಾಗುತ್ತದೆ. ಆದ್ದರಿಂದ ಕನ್ನಡಿ ಒಡೆದಿದ್ದರೆ ಕೂಡಲೆ ಅದನ್ನು ತೆಗೆದುಬಿಡಿ. ಕಿಟಕಿ, ಪೀಠೋಪಕರಣ ಒಡೆದಿದ್ದರೆ ಕೂಡಲೇ ಸರಿಪಡಿಸಿ. ಒಡೆದ ವಸ್ತುಗಳು ಮನಸ್ಸಿನ ಮೇಲೆ ಒತ್ತಡ ಹೇರಬಲ್ಲವು.

Young Indian woman performing rituals of Ganesh pooja during Ganesh Festival

ದೇವರ ಕೋಣೆ ಹೀಗಿದ್ದರೆ ಚೆನ್ನ

ದೇವರ ಕೋಣೆ ಅಥವಾ ಧ್ಯಾನ ಮಾಡುವ ಸ್ಥಳ ಅತ್ಯಂತ ಶಾಂತ ವಾತಾವರಣವನ್ನು ಹೊಂದಿರುತ್ತವೆ. ವಿಗ್ರಹಗಳು ಸರಿಯಾದ ದಿಕ್ಕಿನಲ್ಲಿವೆ ಮತ್ತು ಯಾವುದೇ ಉಪಕರಣ ಒಡೆದಿಲ್ಲ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ವಿಗ್ರಹಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಡಿ. ಸಂಜೆ ಬೆಳಗುವ ಅಗರ್ಬತ್ತಿ, ದೀಪ ವಾತಾವರಣವನ್ನು ಶುಭ್ರವಾಗಿಸುತ್ತದೆ. ನಿಮ್ಮ ಗಾರ್ಡನ್‌ನ್ನಲ್ಲಿ ತುಳಸಿ ಮತ್ತು ಕಹಿ ಬೇವಿನ ಗಿಡ ಬೆಳೆಸಿ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಇದನ್ನೂ ಓದಿ: Vastu Tips For Success: ಜೀವನದಲ್ಲಿ ಯಶಸ್ಸು ಸಿಗಬೇಕೆ? ಈ ವಾಸ್ತು ನಿಯಮ ಪಾಲಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಪ್ರತಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಸಿ ಅಂಶದಿಂದ ತುಂಬಿ ತುಳುಕಾಡುವ ಸೀಬೆ ಹಣ್ಣು ಬಹಳ ಮಂದಿಗೆ ಪ್ರಿಯವಾದದ್ದು. ಇದು ಬಾಯಿ ರುಚಿಗೆ ಮಾತ್ರವೇ ಅಲ್ಲ, ಆರೋಗ್ಯಕಾರಿ ಗುಣಗಳಿಗಾಗಿಯೂ ಪ್ರಸಿದ್ಧವಾಗಿದೆ. ಇದರಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು (Benefits Of Eating Guava) ಒದಗಿಸಬಲ್ಲದು.

VISTARANEWS.COM


on

Benefits Of Eating Guava
Koo

ಸೀಬೆಕಾಯಿಗೆ ಸಾಮಾನ್ಯವಾಗಿ ಎರಡು ಋತುಗಳಿವೆ. ಅಂದರೆ ವರ್ಷಕ್ಕೆರಡು ಬಾರಿ ಇದು ದೊರೆಯುತ್ತದೆ. ಮಕ್ಕಳಿಂದ ವೃದ್ಧರಾದಿಯಾಗಿ ಕರೆದು ಕೊಟ್ಟರೂ, ಸೀಬೆಯನ್ನು ಕದ್ದು ತಿನ್ನುವುದೇ ಪ್ರಿಯವಾದ್ದರಿಂದ ಹೀಗೆ ಒಂದಕ್ಕಿಂತ ಹೆಚ್ಚಿನ ಬೆಳೆಗಳನ್ನು ಸೃಷ್ಟಿಯೇ ನೀಡಿರಬಹುದು ಇದಕ್ಕೆ. ಎಳೆ ಮಿಡಿ, ಕಾಯಿ, ಹಣ್ಣು ಮುಂತಾದ ಯಾವುದೇ ಭೇದವಿಲ್ಲದೆ ಇದನ್ನು ಖಾಲಿ ಮಾಡುವವರಿದ್ದಾರೆ. ಬಾಯಿ ರುಚಿಗಷ್ಟೇ ಇದನ್ನು ತಿನ್ನುವುದಲ್ಲ, ಸೀಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ (Benefits Of Eating Guava) ಪ್ರಯೋಜನಗಳಿವೆ.

Crop woman with halves of guava

ಸತ್ವಗಳು

ಇದರಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ಬಿಳಿ ಪೇರಲೆ, ಹಳದಿ ಬಣ್ಣದ್ದು, ಕೆಂಪು ಬಣ್ಣದ್ದು- ಹೀಗೆ ಯಾವುದೇ ಆದರೂ ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ.

guava fruits

ವಿಟಮಿನ್‌ ಸಿ

ಒಂದು ದೊಡ್ಡ ಸೀಬೆ ಹಣ್ಣಿನಲ್ಲಿ ಎರಡು ಕಿತ್ತಳೆ ಹಣ್ಣುಗಳಲ್ಲಿ ಇರುವಷ್ಟು ಸಿ ಜೀವಸತ್ವ ಇದೆಯೆಂಬುದು ಗೊತ್ತೇ? ಇದರಿಂದ ರೋಗ ನಿರೋಧಕ ಶಕ್ತಿ ಬಲವಾಗುವುದಲ್ಲದೆ, ಕಬ್ಬಿಣದ ಅಂಶ ದೇಹದೊಳಗೆ ಚೆನ್ನಾಗಿ ಹೀರಲ್ಪಡುತ್ತದೆ. ಮಾತ್ರವಲ್ಲ, ಕೊಲಾಜಿನ್‌ ಉತ್ಪಾದನೆ ಹೆಚ್ಚಾಗಿ, ಕೂದಲು ಮತ್ತು ಚರ್ಮದ ಆರೋಗ್ಯವೂ ಸುಧಾರಿಸುತ್ತದೆ.

heart attack and Diabetes control

ಮಧುಮೇಹಿಗಳಿಗೆ ಸೂಕ್ತ

ಇದು ಹಣ್ಣಾದಾಗ ರುಚಿ ಸಿಹಿಯೇ ಇದ್ದರೂ, ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಪೇರಲೆಯ ಎಲೆಯ ಕಷಾಯಗಳನ್ನು ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಳಸುವ ಪದ್ಧತಿ ಪರಂಪರಾಗತ ಔಷಧಕ್ರಮದಲ್ಲಿ ಇದೆ. ನಾರಿನಂಶ ಹೇರಳವಾಗಿ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಜೊತೆಗೆ, ಗ್ಲೂಕೋಸ್‌ ಅಂಶ ದಿಢೀರನೆ ರಕ್ತ ಸೇರದಂತೆ ತಡೆಯುವ ಗುಣವಿದೆ ಇದಕ್ಕೆ.

fresh guava fruit

ಕ್ಯಾಲರಿ ಕಡಿಮೆ

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.

Guava smoothie

ಸೀಬೆ ಸ್ಮೂದಿ

ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಸೀಬೆ ಸಲಾಡ್

ತೂಕ ಇಳಿಸುವವರಿಗೆ ಸಲಾಡ್‌ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್‌, ಹಣ್ಣುಗಳ ಸಲಾಡ್‌ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ.

Continue Reading

ಆರೋಗ್ಯ

Bird Flu: ದೇಶದಲ್ಲಿ ಎರಡನೇ ಹಕ್ಕಿ ಜ್ವರದ ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ

Bird Flu: ದೇಶದಲ್ಲಿ H9N2 ವೈರಸ್‌ ಸೋಂಕಿನಿಂದ ಹರಡುವ ಹಕ್ಕಿ ಜ್ವರ (Bird Flu)ದ ಎರಡನೇ ಪ್ರಕರಣ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization – WHO) ಮಂಗಳವಾರ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿಗೆ H9N2 ವೈರಸ್‌ ಸೋಂಕಿನಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

VISTARANEWS.COM


on

Bird Flu
Koo

ನವದೆಹಲಿ: ದೇಶದಲ್ಲಿ H9N2 ವೈರಸ್‌ ಸೋಂಕಿನಿಂದ ಹರಡುವ ಹಕ್ಕಿ ಜ್ವರ (Bird Flu)ದ ಎರಡನೇ ಪ್ರಕರಣ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization – WHO) ಮಂಗಳವಾರ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿಗೆ H9N2 ವೈರಸ್‌ ಸೋಂಕಿನಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ತೀವ್ರ ಉಸಿರಾಟದ ತೊಂದರೆಗಳು, ಹೆಚ್ಚಿನ ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತದಿಂದಾಗಿ ಮಗುವನ್ನು ಫೆಬ್ರವರಿಯಲ್ಲಿ ಸ್ಥಳೀಯ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು. ಇದೀಗ ಮೂರು ತಿಂಗಳ ನಂತರ ಮಗುವನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ ಎಂದು ಹೇಳಿದೆ.

ಮಗು ತನ್ನ ಮನೆಯಲ್ಲಿದ್ದ ಕೋಳಿಗಳೊಂದಿಗೆ ಒಡನಾಟ ಹೊಂದಿತ್ತು. ಅದಾಗ್ಯೂ ಹಕ್ಕಿಜ್ವರ ಲಕ್ಷಣಗಳಿರುವ ಬೇರೆ ಪ್ರಕರಣ ಯಾವುದೂ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಭಾರತದಿಂದ ವರದಿಯಾದ ಎರಡನೇ H9N2 ವೈರಸ್‌ ಸೋಂಕಿನ ಪ್ರಕರಣವಾಗಿದ್ದು, 2019ರಲ್ಲಿ ಮೊದಲನೆಯ ಪ್ರಕರಣ ಕಂಡು ಬಂದಿತ್ತು. H9N2 ವೈರಸ್ ಸಾಮಾನ್ಯವಾಗಿ ಕಡಿಮೆ ಪ್ರಮಾಣದ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಆದರೆ ನಿರ್ಲಕ್ಷ್ಯ ಮಾಡುವುದು ಸಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಆತಂಕ ಸೃಷ್ಟಿಸಿದ ಚೀನಾ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಎಚ್‌9ಎನ್‌2 (ಏವಿಯನ್ ಇನ್ಫ್ಲುಯೆನ್ಸ ವೈರಸ್-ಹಕ್ಕಿ ಜ್ವರದ ವೈರಾಣು) ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಕಂಡುಬಂದು ಆತಂಕ ಸೃಷ್ಟಿಯಾಗಿತ್ತು. ಚೀನಾದಲ್ಲಿ ಮಾನವರಲ್ಲಿ ಎಚ್‌9ಎನ್‌2 ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಹಕ್ಕಿ ಜ್ವರದ ವಿರುದ್ಧ ಸನ್ನದ್ಧತಾ ಕ್ರಮಗಳ ಬಗ್ಗೆ ಚರ್ಚಿಸಲು ʻಡಿಜಿಎಚ್ಎಸ್ʼ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತ್ತು. ಭಾರತದಲ್ಲಿಯೂ ಸೋಂಕು ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Health Update: ಮಕ್ಕಳಲ್ಲಿ ಹೆಚ್ಚುತ್ತಿದೆ ಜ್ವರ ಬಾಧೆ; ಮುನ್ನೆಚ್ಚರಿಕೆ ಇರಲಿ, ಆತಂಕ ಬೇಡ

ಅಪಾಯಕಾರಿ ಎಚ್5ಎನ್1 ಹಕ್ಕಿ ಜ್ವರ

ಇನ್ನು ಕೆಲವು ದಿನಗಳ ಹಿಂದೆ ಕೋವಿಡ್ ಸಾಂಕ್ರಾಮಿಕಕ್ಕಿಂತ ಅಪಾಯಕಾರಿಯಾಗಿರುವ ಎಚ್5ಎನ್1 ಹಕ್ಕಿ ಜ್ವರದ (H5N1 bird flu) ಕುರಿತು ಪಿಟ್ಸ್‌ಬರ್ಗ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದರು. ಆರೋಗ್ಯ ತಜ್ಞರು ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ 100 ಪಟ್ಟು ವೇಗವಾಗಿ ಎಚ್5ಎನ್1 ಹಕ್ಕಿ ಜ್ವರದ ಹರಡುವ ಅಪಾಯವಿದೆ ಎಂದು ಹೇಳಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಹಕ್ಕಿಜ್ವರ ಸಾಂಕ್ರಾಮಿಕ ರೋಗವು ವೇಗವಾಗಿ ಹರಡಲಿದ್ದು, ಹೆಚ್ಚಿನ ಸಾವು, ನೋವಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಇದು ಜಾಗತಿಕವಾಗಿ ಮತ್ತೊಂದು ಸಾಂಕ್ರಾಮಿಕದ ಅಪಾಯವನ್ನು ಉಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪಿಟ್ಸ್‌ಬರ್ಗ್‌ನ ಪ್ರಮುಖ ಪಕ್ಷಿ ಜ್ವರ ಸಂಶೋಧಕ ಡಾ. ಸುರೇಶ್ ಕೂಚಿಪುಡಿ, ʼʼಬ್ರೀಫಿಂಗ್‌ನಲ್ಲಿ ಎಚ್5ಎನ್1 ಪಕ್ಷಿ ಜ್ವರವು ಮಾನವ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳಿಗೂ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವೇಗವಾಗಿ ಈ ಸೋಂಕು ಸಾಂಕ್ರಾಮಿಕ ರೋಗವಾಗುವ ಅಪಾಯವಿದೆ. ಹೀಗಾಗಿ ಶೀಘ್ರದಲ್ಲೇ ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕ ರೋಗವನ್ನು ಹರಡಲು ಈ ವೈರಸ್‌ ಕಾರಣವಾಗಬಹುದುʼʼ ಎಂದು ಹೇಳಿದ್ದರು.

Continue Reading

ಆರೋಗ್ಯ

Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು (Rock Salt Or Powder Salt) ಇದ್ದೇ ಇವೆ.

VISTARANEWS.COM


on

Rock Salt Or Powder Salt
Koo

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಹಳೆಯ ಗಾದೆಯಿದೆ. ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು ಇದ್ದೇ ಇವೆ. ಸೈಂದವ ಲವಣ ಅಥವಾ ಕಲ್ಲುಪ್ಪಿಗೆ ಹೋಲಿಸಿದರೆ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬ ವಾದಗಳೂ ಇವೆ. ಬನ್ನಿ, ಈ ಮಾತಿನ ಸತ್ಯಾಸತ್ಯತೆಯ (Rock Salt Or Powder Salt) ಪರಾಮರ್ಶೆ ನಡೆಸೋಣ. ಇಲ್ಲಿ ಎಲ್ಲಕ್ಕಿಂತ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ರಿಪೈನ್ಡ್‌ ಅಥವಾ ಸಂಸ್ಕರಿಸಿ ಬಿಳಿಯಾದ ಪುಡಿ ಉಪ್ಪು ಕೂಡಾ ನೈಸರ್ಗಿಕ ಮೂಲಗಳಿಂದಲೇ ತಯಾರಿಸುವ ಉಪ್ಪು. ಬೇರೆ ಉಪ್ಪುಗಳಿಗೆ ಹೋಲಿಸಿದರೆ, ಇದನ್ನು ಸಮುದ್ರದ ನೀರಿನಿಂದಲೇ ತಯಾರಿಸಿದ್ದರೂ ಇದನ್ನು ಸಂಸ್ಕರಿಸಿ, ಅದರಲ್ಲಿರಲ್ಲಿರುವ ಕೊಳೆಯನ್ನು ಬೇರ್ಪಡಿಸಿ ಅದಕ್ಕೆ ಅಯೋಡಿನ್‌ ಅನ್ನು ಸೇರಿಸಿದ ಮೇಲೆ ಪ್ಯಾಕೆಟ್ಟುಗಳಲ್ಲಿ ಪುಡಿಯಾದ ರೂಪದಲ್ಲಿ ಬಿಡಲಾಗುತ್ತದೆ. ಗಾಯಟೆರ್‌ ಹಾಗೂ ಹೈಪೋಥೈರಾಯ್ಡಿಸಮ್‌ಗಳು ಬರದಂತೆ ಉಪ್ಪಿಗೆ ಅಯೋಡಿನ್‌ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಹಾಗಾಗಿ ನೈಸರ್ಗಿಕ ಮೂಲದಿಂದಲೇ ತಯಾರಾಗುವ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬುದು ನಿಜವಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಕಾರ್ಖಾನೆಗಳಲ್ಲಿ ಉಪ್ಪನ್ನು ಪ್ಯಾಕೆಟ್ಟುಗಳಲ್ಲಿ ತುಂಬಿಸಬೇಕಾದರೆ ಅದಕ್ಕೆ ಕೆಲವು ಆಂಟಿ ಕೇಕಿಂಗ್‌ ಏಜೆಂಟುಗಳನ್ನು ಸೇರಿಸಲಾಗುತ್ತದೆ. ಈ ಆಂಟಿ ಕೇಕಿಂಗ್‌ ಏಜೆಂಟುಗಳು ಉಪ್ಪು ಗಂಟಾಗುವುದನ್ನು ತಡೆದು ಉದುರುದುರಾಗಿ ಇರುವಂತೆ ಮಾಡುತ್ತದೆ.

salt

ಸೋಡಿಯಂ ಇದೆಯೆ?

ಸಂಸ್ಕರಿಸಿದ ಉಪ್ಪಿನಲ್ಲಿಯೂ ಸೋಡಿಯಂ ಇದೆ. ಸೈಂದವ ಲವಣ ಅಥವಾ ಕಲ್ಲುಪ್ಪಿನಲ್ಲೂ ಸೋಡಿಯಂ ಇದೆ. ಹಾಗಾಗಿ ಸೋಡಿಯಂ ಬಗ್ಗೆ ಚಿಂತೆ ಮಾಡುವವರಿಗೆ ಚಿಂತೆಗೆ ಇಲ್ಲಿ ಅವಕಾಶವಿಲ್ಲ. ಎರಡರಲ್ಲೂ ಸೋಡಿಯಂ ಇರುವುದರಿಂದ ಇವೆರಡೂ ಅತಿಯಾದಲ್ಲಿ ಹೈಪರ್‌ಟೆನ್ಶನ್‌ನ ಅಪಾಯ ಇದ್ದೇ ಇದೆ. ಹಾಗಾಗಿ, ಉಪ್ಪು ಯಾವುದೇ ಆದರೂ ಅತಿಯಾಗಬಾರದು. ಕಡಿಮೆಯೇ ತಿನ್ನುವುದು ಒಳ್ಳೆಯದು.
ಹಾಗೆ ನೋಡಿದರೆ, ಪುಡಿ ಉಪ್ಪಿನಲ್ಲಿ ಸಂಸ್ಕರಿಸುವ ಸಂದರ್ಭದಲ್ಲಿ ಬೆರಕೆಯಾದ ಬೇರೆ ಅಂಶಗಳು ಹಾಗೂ ಅದನ್ನು ಪುಡಿಪುಡಿಯಾಗಿ ಯಾವಾಗಲೂ ಇರಿಸಬಲ್ಲ ಆಂಟಿ ಕೇಕಿಂಗ್‌ ಏಜೆಂಟ್‌ಗಳು ಇತ್ಯಾದಿಗಳಿಂದಾಗಿ ಅದರಲ್ಲಿರುವ ಖನಿಜಾಂಶಗಳು ನಷ್ಟವಾಗಿರುತ್ತವೆ. ಕಲ್ಲುಪ್ಪಿನಲ್ಲಿ, ನೈಸರ್ಗಿಕವಾಗಿ ಉಪ್ಪಿನಲ್ಲಿ ಇರಬಹುದಾದ ಎಲ್ಲ ಬಗೆಯ ಖನಿಜಾಂಶಗಳು ಅದರ ನೈಸರ್ಗಿಕ ರೂಪದಲ್ಲಿಯೇ ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಹೆಚ್ಚು ಒಳ್ಳೆಯದು ಎಂದು ಹೇಳಬಹುದು.

Rock Salt

ಕಲ್ಲುಪ್ಪು ಪರಿಣಾಮಕಾರಿ

ಸಾಮಾನ್ಯ ಉಪ್ಪಿನಲ್ಲಿ ಶೇ.97ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು, ಉಳಿದ ಶೇ.3ರಷ್ಟು ವಸ್ತುಗಳು ಸಂಸ್ಕರಣದ ಸಂದರ್ಭದಲ್ಲಿ ಸೇರಿಸಲ್ಪಡುತ್ತದೆ. ಮುಖ್ಯವಾಗಿ ಅಯೋಡಿನ್‌ ಈ ಸಂದರ್ಭ ಸೇರಿಸಲಾಗುತ್ತದೆ. ಆದರೆ ಕಲ್ಲುಪ್ಪಿನಲ್ಲಿ ಅಂದರೆ, ಭೂಮಿಯಡಿಯಿಂದ ದೊರೆಯುವ ಉಪ್ಪಿನಲ್ಲಿ ಶೇ.85ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು ಉಳಿದ ಶೇ.15ರಷ್ಟು ಅಂಶ ಕಬ್ಬಿಣಾಂಶ, ತಾಮ್ರ, ಝಿಂಕ್‌, ಅಯೋಡಿನ್‌, ಮ್ಯಾಂಗನೀಸ್‌, ಮೆಗ್ನೀಶಿಯಂ, ಸೆಲೆನಿಯಂ, ಅಯೋಡಿನ್‌ ಇತ್ಯಾದಿಗಳೂ ಇರುತ್ತವೆ. ಇದಕ್ಕೆ ಪ್ರತ್ಯೇಕವಾಗಿ ಅಯೋಡಿನ್‌ ಸೇರಿಸಲಾಗಿರುವುದಿಲ್ಲ. ಆದರೂ, ನೀರನ್ನು ಶುದ್ಧಿಕರಿಸಿ ಕುಡಿಯುವ ಅಭ್ಯಾಸ ಇತ್ತೀಚೆಗೆ ಹೆಚ್ಚಿರುವುದರಿಂದ, ನೀರಿನ ಮೂಲಕ ಖನಿಜಾಂಶಗಳು ಮನುಷ್ಯನ ದೇಹಕ್ಕೆ ಹೋಗುವುದಿಲ್ಲ. ಹೀಗಾಗಿ ಕಲ್ಲುಪ್ಪನ್ನು ಸೇವಿಸುವ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆ ಮೂಲಕ ಖನಿಜಾಂಶಗಳು ದೇಹಕ್ಕೆ ಸೇರುವ ಬಗೆ ಇದು. ಹಾಗಾಗಿ, ಸಾಮಾನ್ಯ ಪುಡಿ ಉಪ್ಪಿನಿಂದ ಕಲ್ಲುಪ್ಪು ಅನೇಕ ಬಗೆಯಲ್ಲಿ ಪರಿಣಾಮಕಾರಿ ಹಾಗೂ ಅರೋಗ್ಯಕರ ಎಂಬುದು ನಿಜ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading

ಆರೋಗ್ಯ

Health Benefits Of Jaggery: ಬೆಲ್ಲ ಉಳಿದ ಆಹಾರದಂಥಲ್ಲ; ಇದರ ಲಾಭಗಳು ಏನೇನು ತಿಳಿದುಕೊಂಡಿರಿ

ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಬೆಲ್ಲದ ಸವಿಯನ್ನು ತಿಂದವನೇ ಬಲ್ಲ. ನೈಸರ್ಗಿಕ ಸಿಹಿ ಎಂದೇ ಖ್ಯಾತವಾದ ಈ ಬೆಲ್ಲ ಪೊಂಗಲ್‌, ಪಾಯಸದಂಥ ಸಿಹಿತಿಂಡಿಗಳಿಗೆ ಅಥವಾ ಎಳ್ಳಿನೊಂದಿಗೆ ಹಂಚುವುದಕ್ಕೆ ಮಾತ್ರವೇ ಬಳಸುವುದಲ್ಲ. ಶತಮಾನಗಳಿಂದ ಭಾರತೀಯ ಅಡುಗೆ ಮನೆಗಳಲ್ಲಿ ಖಾದ್ಯಗಳನ್ನು ರುಚಿಗಟ್ಟಿಸುತ್ತಲೇ ಬಂದಿದೆ. ಆಲೆಮನೆಗಳಲ್ಲಿ ಸರಳವಾಗಿ ಕಣ್ಣೆದುರಿಗೇ ತಯಾರಾಗುವ ಬೆಲ್ಲದ ಬಗ್ಗೆ ಸಿಹಿ ಪ್ರಿಯರಿಗೆ ಕೊಂಚ ಹೆಚ್ಚೇ ಮೋಹ. ಈ ಕುರಿತ (Health Benefits Of Jaggery) ವಿವರ ಇಲ್ಲಿದೆ.

VISTARANEWS.COM


on

Health Benefits Of Jaggery
Koo

ಬೆಲ್ಲವನ್ನು ಯಾವುದೇ ರೂಪದಲ್ಲಿ, ಅಂದರೆ ಅಚ್ಚು, ಪುಡಿ, ಜೋನಿ ಮುಂತಾದ ಯಾವುದೇ ರೂಪದಲ್ಲಿ ಸೇವಿಸಿದರೂ ಲಾಭವಿದೆ. ಖಾದ್ಯದ ರುಚಿ ಹೆಚ್ಚುವುದು ಮಾತ್ರವೇ ಅಲ್ಲ, ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಬೆಲ್ಲದ ಸವಿಯನ್ನು ತಿಂದವನೇ ಬಲ್ಲ. ನೈಸರ್ಗಿಕ ಸಿಹಿ ಎಂದೇ ಖ್ಯಾತವಾದ ಈ ಬೆಲ್ಲ ಪೊಂಗಲ್‌, ಪಾಯಸದಂಥ ಸಿಹಿತಿಂಡಿಗಳಿಗೆ ಅಥವಾ ಎಳ್ಳಿನೊಂದಿಗೆ ಹಂಚುವುದಕ್ಕೆ ಮಾತ್ರವೇ ಬಳಸುವುದಲ್ಲ. ಶತಮಾನಗಳಿಂದ ಭಾರತೀಯ ಅಡುಗೆ ಮನೆಗಳಲ್ಲಿ ಖಾದ್ಯಗಳನ್ನು ರುಚಿಗಟ್ಟಿಸುತ್ತಲೇ ಬಂದಿದೆ. ಒದ್ದೆ ಮಣ್ಣಿನ ಪರಿಮಳದಂಥ ಘಮವನ್ನು ಹೊಂದಿದ ಈ ಸಿಹಿಯ ಮೂಲ ಕಬ್ಬು. ಸಕ್ಕರೆಯಂತೆ ತರಹೇವಾರಿ ಸಂಸ್ಕರಣೆಗಳಿಗೆ ಒಳಗಾಗದೆ, ಆಲೆಮನೆಗಳಲ್ಲಿ ಸರಳವಾಗಿ ಕಣ್ಣೆದುರಿಗೇ ತಯಾರಾಗುವ ಬೆಲ್ಲದ ಬಗ್ಗೆ ಸಿಹಿ ಪ್ರಿಯರಿಗೆ ಕೊಂಚ ಹೆಚ್ಚೇ ಮೋಹ. ಬೆಲ್ಲ ಖಾದ್ಯದ ರುಚಿ ಹೆಚ್ಚುವುದು ಮಾತ್ರವೇ ಅಲ್ಲ, ಆರೋಗ್ಯಕ್ಕೂ ಹಲವಾರು ಪ್ರಯೋಜನಗಳಿವೆ. ಆಯುರ್ವೇದ ಮತ್ತು ಪರಂಪರಾಗತ ಔಷಧಪ್ರಕಾರಗಳಲ್ಲಿ ಬೆಲ್ಲ ಹಲವು ಮದ್ದುಗಳಲ್ಲಿ ಬಳಕೆಯಾಗುತ್ತದೆ. ಅತಿ ಕಡಿಮೆ ಸಂಸ್ಕರಣೆಗೆ ಒಳಗಾಗುವ ಬೆಲ್ಲದ ಸ್ವರೂಪಗಳಲ್ಲಿ ಅತಿ ಹೆಚ್ಚಿನ ಖನಿಜಗಳು ಕಂಡುಬರುತ್ತವೆ. ಕಬ್ಬಿಣ, ಮ್ಯಾಂಗನೀಸ್‌, ಪೊಟಾಶಿಯಂ ಮತ್ತು ಹಲವು ಬಗೆಯ ಬಿ ಜೀವಸತ್ವಗಳು ಬೆಲ್ಲದಲ್ಲಿವೆ. ಇವೆಲ್ಲವೂ ಆರೋಗ್ಯದ (Health Benefits Of Jaggery) ಗುಣಮಟ್ಟವನ್ನು ಸುಧಾರಿಸಬಲ್ಲವು.

jaggery

ಉರಿಯೂತ ಶಮನ

ಸಿಹಿಯನ್ನು ತಿಂದರೆ ಉರಿಯೂತ ಹೆಚ್ಚುವ ಎನ್ನುವುದು ಸತ್ಯ. ಆದರೆ ಶ್ವಾಸನಾಳಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು, ಇದರಿಂದ ಉಂಟಾಗುವ ಅಸ್ತಮಾದಂಥ ಸಮಸ್ಯೆ ಹೆಚ್ಚದಂತೆ ಮಾಡಲು ಇದು ಪ್ರಯೋಜನವಾದೀತು. ಇದರಲ್ಲಿರುವ ಸೆಲೆನಿಯಂ ಮತ್ತು ಕಬ್ಬಿಣದ ಅಂಶಗಳು ರಕ್ತದಲ್ಲಿನ ಹಿಮೊಗ್ಲೋಬಿನ್‌ ಮಟ್ಟವನ್ನು ಸುಧಾರಿಸಿ, ಈ ಮೂಲಕ ಆಮ್ಲಜನಕದ ಪ್ರಮಾಣವನ್ನು ವೃದ್ಧಿಸುತ್ತವೆ

ಸೂಕ್ಷ್ಮ ಸತ್ವಗಳು

ಇದರಲ್ಲಿರುವ ಪೊಟಾಶಿಯಂ ರಕ್ತದೊತ್ತಡ ಶಮನಕ್ಕೆ ನೆರವಾದರೆ, ಮೆಗ್ನೀಶಿಯಂ ಸ್ನಾಯುಗಳಿಗೆ ಬಲ ತುಂಬಬಲ್ಲದು. ಕ್ಯಾಲ್ಸಿಯಂ ಮೂಳೆಗಳನ್ನು ಸದೃಢ ಮಾಡಿದರೆ, ಜಿಂಕ್‌ ಅಂಶವು ಪ್ರತಿರೋಧಕತೆಯನ್ನು ಹೆಚ್ಚಿಸಬಲ್ಲದು. ದೇಹದಿಂದ ಕಶ್ಮಲಗಳನ್ನು ತೆಗೆಯುವ ಮತ್ತು ಮಲಬದ್ಧತೆ ನಿವಾರಿಸುವ ಗುಣವೂ ಬೆಲ್ಲಕ್ಕಿದೆ. ಜೀರ್ಣಾಂಗಗಳನ್ನು ಶುದ್ಧಗೊಳಿಸಿ, ಪಚನಕ್ರಿಯೆಯನ್ನು ಉದ್ದೀಪಿಸುತ್ತದೆ.

Antioxidants in it keep immunity strong Benefits Of Mandakki

ಪ್ರತಿರೋಧಕತೆ ಚುರುಕು

ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಉರಿಯೂತ ಶಮನಕ್ಕೆ ನೆರವಾಗಬಲ್ಲವು. ಜೊತೆಗೆ ಇದರಲ್ಲಿರುವ ಸತು ಮತ್ತು ಸೆಲೆನಿಯಂ ಅಂಶಗಳು ರೋಗ ನಿರೋಧಕತೆಯನ್ನು ಚುರುಕಾಗಿಸುತ್ತವೆ. ಹಾಗಾಗಿ ಚಳಿಗಾಲದ ಹಬ್ಬ ಸಂಕ್ರಾಂತಿಯಲ್ಲಿ ಎಳ್ಳಿನೊಂದಿಗೆ ಬೆಲ್ಲದ ಬಳಕೆಯೂ ಇರುವುದು ಗಮನಾರ್ಹ.

ರಕ್ತಹೀನತೆಗೆ

ಬೆಲ್ಲದಲ್ಲಿ ಕಬ್ಬಿಣದ ಸತ್ವ ಹೇರಳವಾಗಿ ಇರುವುದರಿಂದ ದೇಹದಲ್ಲಿನ ರಕ್ತಹೀನತೆ ಗುಣಕಾಣಲು ನೆರವಾಗುತ್ತದೆ. ದೇಹದಲ್ಲಿನ ಹಿಮೋಗ್ಲೋಬಿನ್‌ ಮಟ್ಟವನ್ನಿದು ಸುಧಾರಿಸುತ್ತದೆ. ಇದರ ಪಿತ್ತ ಸಮತೋಲನದ ಗುಣಗಳಿಂದಾಗಿ ಆಯುರ್ವೇದದಲ್ಲಿ ಔಷಧವಾಗಿಯೂ ಇದು ಬಳಕೆಯಲ್ಲಿದೆ.

heart attack and Diabetes control

ಸಕ್ಕರೆಯಂಶ ನಿಯಂತ್ರಣ

ಸಿಹಿ ತಿಂದರೆ ಸಕ್ಕರೆಯ ಮಟ್ಟ ಏರುಪೇರಾಗುವುದು ನಿಜ. ಆದರೆ ಸಂಸ್ಕರಿತ ಬಿಳಿ ಸಕ್ಕರೆಯಷ್ಟು ಬೆಲ್ಲ ಹಾಳಲ್ಲ. ಬಿಳಿ ಸಕ್ಕರೆಗಿಂತ ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಹಾಗಾಗಿ ರಕ್ತದಲ್ಲಿನ ಸಕ್ಕರೆಯಂಶವು ದಿಢೀರ್‌ ಏರುಪೇರಾಗುವ ಸಾಧ್ಯತೆ ಸಕ್ಕರೆಗಿಂತ ಬೆಲ್ಲದಲ್ಲಿ ಕಡಿಮೆ. ಹಾಗೆಂದು ಮಧುಮೇಹಿಗಳಾದರೆ ಬೆಲ್ಲವನ್ನೇ ಸೇವಿಸಿದರೂ ಮಿತಿ ಹೇರಿಕೊಳ್ಳುವುದು ಅಗತ್ಯ.

ಶಕ್ತಿ ಹೆಚ್ಚು

ಬಿಸಿಲಿನಲ್ಲಿ ದಣಿದು ಬಂದಿದ್ದೀರಿ ಅಥವಾ ವ್ಯಾಯಾಮದ ನಂತರ ಬೆವರು ಹರಿಸುತ್ತಾ ಕುಳಿತಿದ್ದೀರಿ. ಇಂಥ ಯಾವುದೇ ದಣಿದಂಥ ಸನ್ನಿವೇಶಗಳಲ್ಲೂ ಬೆಲ್ಲದ ನೀರು ಅಥವಾ ಬೆಲ್ಲದ ಪಾನಕದ ಸೇವನೆಯು ದೇಹಕ್ಕೆ ಶಕ್ತಿ ನೀಡಬಲ್ಲದು, ಚೈತನ್ಯ ಹೆಚ್ಚಿಸಬಲ್ಲದು. ಹಳೆಯ ತಲೆಮಾರಿನವರು ತೀವ್ರ ದಣಿದಾಗ ಉಪಯೋಗಿಸುತ್ತಿದ್ದ ʻಎನರ್ಜಿ ಡ್ರಿಂಕ್‌ʼ ಎಂದರೆ ಬೆಲ್ಲದ ಪಾನಕವೇ. ಯಾವುದೇ ಕೃತಕ ಸಿಹಿಗಳಿಲ್ಲದ ಖನಿಜಭರಿತ ನೈಸರ್ಗಿಕ ಸಿಹಿ ಪೇಯ ಯಾವಾಗಲೂ ಕ್ಷೇಮ, ಆರೋಗ್ಯಕರ.

ಇದನ್ನೂ ಓದಿ: Cervical Cancer: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌; ಪುರುಷರಿಗೂ ಇದೆ ಅಪಾಯ!

ಮಹಿಳೆಯರಿಗೆ ಉತ್ತಮ

ಇದರಲ್ಲಿರುವ ಕಬ್ಬಿಣದ ಅಂಶವು ಮುಟ್ಟಿನ ದಿನಗಳ ಹೊಟ್ಟೆನೋವನ್ನು ಶಮನ ಮಾಡುವ ಗುಣ ಹೊಂದಿದೆ. ಜೊತೆಗೆ ಆ ದಿನಗಳಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ, ಮೂಡ್‌ ಏರುಪೇರಾಗುವುದನ್ನು ತಡೆಯುತ್ತದೆ. ಜೊತೆಗೆ, ಇದರಲ್ಲಿರುವ ಕ್ಯಾಲ್ಶಿಯಂ, ಫಾಸ್ಫರಸ್‌ ಮತ್ತು ಮೆಗ್ನೀಶಿಯಂ ಅಂಶಗಳು ಮೂಳೆಗಳು ಟೊಳ್ಳಾಗದಂತೆ ತಡೆದು, ಆಸ್ಟಿಯೊಪೊರೊಸಿಸ್‌ ಬಾರದಂತೆ ಕಾಪಾಡುತ್ತವೆ.

Continue Reading
Advertisement
TK Chathunni
ಕ್ರೀಡೆ2 mins ago

TK Chathunni: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ, ಕೋಚ್​ ಟಿ.ಕೆ. ಚತುನ್ನಿ ನಿಧನ

Ready Saree Fashion Tips
ಫ್ಯಾಷನ್19 mins ago

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Virat Kohli
ಕ್ರೀಡೆ29 mins ago

Virat Kohli: ಅಮೆರಿಕ ವಿರುದ್ಧವಾದರೂ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಕಿಂಗ್​ ಕೊಹ್ಲಿ?

Chandrababu Naidu
ದೇಶ52 mins ago

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Benefits Of Eating Guava
ಆರೋಗ್ಯ59 mins ago

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

Actor Darshan
ಪ್ರಮುಖ ಸುದ್ದಿ1 hour ago

Actor Darshan: ಡೆವಿಲ್‌ ಗ್ಯಾಂಗ್‌ ಜತೆ ಸ್ಥಳ ಮಹಜರು; ಅಮಾಯಕನಂತೆ ಕೈಕಟ್ಟಿ ನಿಂತ ದರ್ಶನ್‌

FIFA World Cup
ಕ್ರೀಡೆ1 hour ago

FIFA World Cup: ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು; ತನಿಖೆಗೆ ಕೋರಿದ ಎಐಎಫ್‌ಎಫ್‌

Terror attack
ದೇಶ1 hour ago

Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Actor Darshan wife Vijayalakshmi will get divorce
ಸ್ಯಾಂಡಲ್ ವುಡ್1 hour ago

Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

Fish Spa awareness
ಫ್ಯಾಷನ್1 hour ago

Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌