ವಿಸ್ತಾರ Exclusive | ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಯಾವಾಗ?: ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್‌ ನಾಗರಕಟ್ಟೆ ಸಂದರ್ಶನ - Vistara News

ಕರ್ನಾಟಕ

ವಿಸ್ತಾರ Exclusive | ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಯಾವಾಗ?: ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್‌ ನಾಗರಕಟ್ಟೆ ಸಂದರ್ಶನ

ಕೋಟ್ಯಂತರ ಹಿಂದೂಗಳು ಕಾತರದಿಂದ ಕಾಯುತ್ತಿರುವ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಆಗಿರುವ ಗೋಪಾಲ ನಾಗರಕಟ್ಟೆ ಅವರು, ದೇವಾಲಯದ ಅಧಿಕೃತ ಮತ್ತು ಲೇಟೆಸ್ಟ್ ಮಾಹಿತಿಯನ್ನು ವಿಸ್ತಾರ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Exclusive
Vistara Exclusive

ಸಂದರ್ಶನ: ಅಭಿಷೇಕ್ ಬಿ.ವಿ, ವಿಸ್ತಾರ ನ್ಯೂಸ್‌
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ದೇಶದ ಪರಮ ಶ್ರದ್ಧಾ ಭಕ್ತಿಯ ಕೇಂದ್ರಗಳಲ್ಲಿ ಒಂದಾಗಿ ತಲೆ ಎತ್ತುತ್ತಿರುವ ಈ ದೇಗುಲವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಅತ್ಯಂತ ಸೂಕ್ಷ್ಮ ಧಾರ್ಮಿಕ ಮತ್ತು ತಾಂತ್ರಿಕ ಅಂಶಗಳನ್ನು ಆಧರಿಸಿ ನಿರ್ಮಿಸಲಾಗುತ್ತಿದೆ. ಈ ದೇವಾಲಯ ನಿರ್ಮಾಣ ಕಾರ್ಯ ಈಗ ಯಾವ ಹಂತದಲ್ಲಿದೆ, ಯಾವಾಗ ರಾಮನ ದರ್ಶನಕ್ಕೆ ಅವಕಾಶ ಸಿಗಬಹುದು, ಭವ್ಯ ಮಂದಿರದ ನಿರ್ಮಾಣ ಯಾವಾಗ ಪೂರ್ಣವಾಗಲಿದೆ ಎಂಬೆಲ್ಲ ವಿಚಾರಗಳಿಗೆ ಸಂಬಂಧಿಸಿ ವಿಸ್ತಾರ ನ್ಯೂಸ್‌ ಜತೆ ವಿಸ್ತೃತವಾಗಿ ಮಾತನಾಡಿದ್ದಾರೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯಾಗಿರುವ ಗೋಪಾಲ ನಾಗರಕಟ್ಟೆ ಅವರು. ಕರ್ನಾಟಕದವರೇ ಆಗಿರುವ ಗೋಪಾಲ ನಾಗರಕಟ್ಟೆ ಅವರು ಆರೆಸ್ಸೆಸ್‌ನ ಪ್ರಚಾರಕರಾಗಿದ್ದು ವಿಶ್ವ ಹಿಂದೂ ಪರಿಷತ್‌ಗೆ ನಿಯೋಜನೆಗೊಂಡಿದ್ದಾರೆ. ಅವರೊಂದಿಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

⭕ಮೂರ್ನಾಲ್ಕು ವರ್ಷ ನೀವು ಅಯೋಧ್ಯೆಯಲ್ಲೇ ಇದ್ದು ರಾಮ ಮಂದಿರ ನಿರ್ಮಾಣ ಕಾರ್ಯ ನೋಡಿಕೊಳ್ಳುತ್ತಿದ್ದೀರಿ. ಅಲ್ಲಿನ ಚಿತ್ರಣ ಯಾವ ರೀತಿ ಇತ್ತು? ಈಗ ಹೇಗಾಗಿದೆ?
✅ದೇವಸ್ಥಾನದ ಕೆಲಸ ಬಹಳ ವೇಗವಾಗಿ ನಡೆಯುತ್ತಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ದೇಶದ ಪ್ರಮುಖ ಸಂತರ ಉಪಸ್ಥಿತಿಯಲ್ಲಿ‌ ಭೂಮಿ ಪೂಜೆ ನಡೆದ ನಂತರ ಅಧಿಕೃತವಾಗಿ ಮಂದಿರದ ಕೆಲಸ ಶುರುವಾಯಿತು. ಇವತ್ತು ಹಗಲು ರಾತ್ರಿ ಅಲ್ಲಿ ಕೆಲಸ ನಡೆಯುತ್ತಿದೆ. ಕೆಳಗಡೆ ಬುನಾದಿಯನ್ನು ಹಾಕಿ ಅದಾದ ಮೇಲೆ ಕರ್ನಾಟಕದಿಂದ ತರಿಸಿದ ಗ್ರಾನೈಟ್ ಸ್ಟೋನ್‌ನಿಂದ ಪ್ಲಿಂಥ್ (ಕಟ್ಟೆ) ಕಟ್ಟುವ ಕೆಲಸ ಮಾಡಿದ್ದೇವೆ. ಈಗ ಆ ಕೆಲಸವೂ ಮುಗಿಯಿತು. ಅದರ ಮೇಲ್ಭಾಗದ ಕೆಲಸ ಈಗ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ತೊಂದರೆಗಳು ಇದ್ದವು. 70 ಎಕರೆ ಭೂಮಿಯನ್ನು ಸರ್ಕಾರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಕೊಟ್ಟಿದೆ. ಅದರ ಈಶಾನ್ಯ ಮೂಲೆಯಲ್ಲಿ ದೇವಸ್ಥಾನ, ರಾಮನ ಜನ್ಮಭೂಮಿ ಇದೆ. ಅಲ್ಲಿ 360 ಅಡಿ ಉದ್ದ, 235 ಅಗಲ ಹಾಗೂ 161 ಅಡಿ ಎತ್ತರದ ಮಂದಿರ ನಿರ್ಮಾಣ ಮಾಡುವ ಯೋಜನೆ ಆಗಿದೆ. ಇದರ ಆರ್ಕಿಟೆಕ್ಟ್ (ವಿನ್ಯಾಸಕಾರರು) ಚಂದ್ರಕಾಂತ್ ಸೋಂಪುರ. ಗುಜರಾತ್‌ನ ಅಹ್ಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರೀ ಶೈಲಿಯಲ್ಲಿ ಮಂದಿರವನ್ನು ಕಟ್ಟುವ ಶಿಲ್ಪಿ ಅವರು. ಈ ಮಂದಿರದ ನಿರ್ಮಾಣ ಕಾರ್ಯವನ್ನು ನಾವು L&T ಕಂಪನಿಗೆ ಕೊಟ್ಟಿದ್ದೇವೆ. ಮೇಲ್ವಿಚಾರಣೆ ಜವಾಬ್ದಾರಿಯನ್ನು ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌ಗೆ ವಹಿಸಿದ್ದೇವೆ. ನಮ್ಮ ಕಡೆಯಿಂದಲೂ ನಾಲ್ಕೈದು ಜನ ಎಂಜಿನಿಯರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

⭕ ಅಯೋಧ್ಯೆಯ ನೆಲದಲ್ಲಿ ಮಂದಿರ ಕಟ್ಟುವಲ್ಲಿ ಎದುರಾದ ತಾಂತ್ರಿಕ ಸವಾಲುಗಳು ಏನು? ಅದನ್ನು ಹೇಗೆ ನಿಭಾಯಿಸಿದಿರಿ?
✅ಅಯೋಧ್ಯೆಯ ಮಣ್ಣು ಗಟ್ಟಿಯಲ್ಲ. ಕರ್ನಾಟಕದಲ್ಲಿ ಎಲ್ಲಿ ನೋಡಿದ್ರೂ ಕಲ್ಲು ಸಿಗುತ್ತದೆ. ಅಯೋಧ್ಯೆಯಲ್ಲಿ ಕಲ್ಲು ಸಿಗೋದಿಲ್ಲ. ಯಾರಿಗಾದ್ರೂ ಕಲ್ಲು ಹೊಡೆಯಬೇಕು ಅಂದ್ರೂ ಸಿಗಲ್ಲ! ಮರಳು ಮಿಶ್ರಿತ ಮಣ್ಣು. ಅಲ್ಲಿನ ಮರಳು ಬಹಳ ಮಧುರವಾದದ್ದು ಅಂದ್ರೆ ತುಂಬಾ ಮೃದು. ಹೀಗಾಗಿ ಹೈದರಾಬಾದ್‌ನ ಭೂಗರ್ಭ ಸಂಸ್ಥೆ ಹೇಳಿದಂತೆ ಭೂಮಿಗಿಂತ 10 ಮೀಟರ್ ಕೆಳಗಡೆ ಹೋದರೆ ಮಾತ್ರ ಸರಿಯಾದ ನೆಲ ಸಿಗುತ್ತದೆ. ಹಾಗಾಗಿ ನಾವು ಸುಮಾರು 6.5 ಎಕರೆ ಭೂಮಿಯ ಪ್ರದೇಶದಲ್ಲಿ, ಕೆಳಗಿರುವ ಮಣ್ಣೆಲ್ಲ ತೆಗೆದು ಕೆರೆಯ ರೀತಿಯ ಜಾಗವನ್ನು ನಿರ್ಮಾಣ ಮಾಡಿದೆವು. ನೆಲಮಟ್ಟಕ್ಕಿಂತ 50 ಅಡಿವರೆಗೂ ನಾವು ಮಣ್ಣನ್ನು ತೆಗೆದು, ಅದನ್ನು ಲೆವಲ್ ಮಾಡಿ ಅಲ್ಲಿಂದ ಮೇಲಕ್ಕೆ ಬಂದಿದ್ದು. ಮಂದಿರ ನಿರ್ಮಾಣ ಮಾಡುವ ಮೊದಲೇ ಎರಡು ಸಂಗತಿ ನಿಶ್ಚಯ ಮಾಡಿದ್ವಿ. ಮೊದಲನೇಯದ್ದು ಮಂದಿರದಲ್ಲಿ ಎಲ್ಲೂ ಸಹ ಕಬ್ಬಿಣ ಉಪಯೋಗಿಸಬಾರದು. ಯಾಕಂದ್ರೆ ಅದರ ಆಯುಸ್ಸೇ 100 ವರ್ಷ. ಎರಡನೇದಾಗಿ ಸಿಮೆಂಟ್ ಬಳಸಬಾರದು ಅಂತ. ಅದರ ಆಯುಷ್ಯವೂ 100 ವರ್ಷ. ಅದನ್ನು ಭೂಮಿಯ ಕೆಳಗೆ ಉಪಯೋಗಿಸಬಹುದು. ಭೂಮಿಯ ಮೇಲ್ಗಡೆ ಸಿಮೆಂಟ್ ಬೇಡ ಅನ್ನೋ ನಿರ್ಣಯ ಮಾಡಿದ್ವಿ.

ಗೋಪಾಲ ನಾಗರಕಟ್ಟೆ

ಭೂಮಿಯ ಕೆಳಗಡೆ ಸ್ಟೀಲ್ ರಹಿತವಾದ ಸಿಮೆಂಟ್ ಕಾಂಕ್ರೀಟ್ ಹಾಕುತ್ತಾ ಗಟ್ಟಿ ಮಾಡ್ತಾ ಬಂದೆವು. ಒಂದು ಅಡಿಯಷ್ಟು ಸಿಮೆಂಟ್ ಹಾಕೋದು, ಆಮೇಲೆ ರೋಲ್ ಮಾಡೋದು. ರೋಲ್ ಮಾಡ್ತಾ ಮಾಡ್ತಾ 48 ಪದರಗಳನ್ನು ಎಲ್ಲೆಡೆ ಹಾಗೂ ಗರ್ಭಗುಡಿಯ ಕೆಳಗೆ 56 ಲೇಯರ್ ಹಾಕಿದೆವು. ಅದಾದ ನಂತರ ಸುಮಾರು 5 ಅಡಿ, ರಿಚ್ ಕಾಂಕ್ರೀಟ್ ಹಾಕಿ ಒಂದು ಕಟ್ಟೆ ಕಟ್ಟಿದ್ದೇವೆ. ಅಂದ್ರೆ ನಮ್ಮ ದೇವಸ್ಥಾನ ನಿರ್ಮಾಣ ಆಗುವ ಪ್ರದೇಶಕ್ಕಿಂತ ಸ್ವಲ್ಪ ದೊಡ್ಡದನ್ನು ನಿರ್ಮಾಣ ಮಾಡಿದ್ದೇವೆ. ಅಲ್ಲಿಗೆ ನೆಲದ ಕೆಲಸ ಮುಗಿಯುತ್ತದೆ. ಅದರಿಂದ ಮೇಲ್ಗಡೆ 4 ಅಡಿಯಷ್ಟು ಮಣ್ಣು ಬರೋದಿದೆ. ಅದರ ಮೇಲೆ ನಾವು ಗ್ರಾನೈಟ್ ಕಲ್ಲುಗಳನ್ನು ಹಾಕಲು ಶುರು ಮಾಡಿದೆವು. ಇದನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಿದ್ದೇವೆ. ಕಲ್ಲುಗಳನ್ನು ಒಂದರ ಮೇಲೊಂದಿಟ್ಟು ಒಟ್ಟು ನೆಲದಿಂದ 21 ಅಡಿವರೆಗೂ ಕಲ್ಲನ್ನು ಹಾಸುತ್ತಿದ್ದೇವೆ. 5 ಅಡಿ ಉದ್ದ, 2.5 ಅಡಿ ಅಗಲ ಹಾಗುಯ 3 ಅಡಿ ದಪ್ಪದ 17,000 ಕಲ್ಲುಗಳನ್ನು ಒಂದರ ಮೇಲೊಂದು ಇಡುತ್ತಿದ್ದೇವೆ. ಆ ಕೆಲಸ ಬಹುತೇಕ ಮುಗಿದಿದ್ದು, ಇನ್ನೊಂದು 300 ಕಲ್ಲುಗಳನ್ನು ಇರಿಸೋದು ಮಾತ್ರ ಬಾಕಿ ಉಳಿದಿದೆ. ಅಂದ್ರೆ ಪ್ಲಿಂಥ್ ಅಂತ ಏನು ಕರೀತಾರೆ, ಸಾಮಾನ್ಯವಾಗಿ ಮನೆ ಕಟ್ಟುವಾಗ ನೆಲಕ್ಕಿಂತ ಮನೆ ಸ್ವಲ್ಪ ಮೇಲಿರುತ್ತದೆ. ಅದನ್ನು ಪ್ರಿಂಥ್ ಅಂತಾರೆ. ನಾವು ಕಟ್ಟೆ ಅನ್ನಬಹುದು ಕನ್ನಡದಲ್ಲಿ. ಈಗ ಆ ರೀತಿಯ ಕಟ್ಟೆ ಕಟ್ಟುವ ಕೆಲಸ ಮುಗೀತು. ಈಗ ಅದರ ಮೇಲ್ಗಡೆ ಬರಬೇಕಾಗಿದ್ದು ಬನ್ಸೀ ಪಹಾಡ್‌ಪುರ್ ಅಂತ. ರಾಜಸ್ಥಾನದ ಭರತ್‌ಪುರ್ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶ. ಅಲ್ಲಿ, ಗುಲಾಬಿ ಬಣ್ಣದ ಸುಣ್ಣದ ಕಲ್ಲು ಸಿಗುತ್ತದೆ. ಸ್ಯಾಂಡ್ ಸ್ಟೋನ್ ಅಂತ ಕರೀತಾರೆ. ಆ ಸ್ಯಾಂಡ್ ಸ್ಟೋನ್ ಮೂಲಕ ಈ ಮಂದಿರದ ನಿರ್ಮಾಣ ಆಗ್ತಿದೆ. ಅದರ ಕೆತ್ತನೆ ಆಗಿ ಬರ್ತಿದೆ. ಈಗ ಹೆಚ್ಚುಕಮ್ಮಿ 1 ಲಕ್ಷ ಘನ ಅಡಿ ಕಲ್ಲುಗಳು ಬಂದಿವೆ. ನಾವು ಈಗೊಂದು 15,000 ಘನ ಅಡಿ ಕಲ್ಲುಗಳನ್ನು ಇಟ್ಟಾಗಿದೆ. ಗರ್ಭಗೃಹದ ಪ್ರದೇಶ ಹಾಗೂ ಸುತ್ತಲೂ, ಕೆಳಗಡೆಯ ಬೇಸ್‌ಮೆಂಟ್ ಪ್ರದೇಶ ಅಂದ್ರೆ ಪ್ರಾರಂಭದ ಭಾಗದಲ್ಲೆಲ್ಲಾ ಇಟ್ಟು ಕೆಲಸ ಮುಂದಕ್ಕೆ ಹೋಗ್ತಿದೆ.

ಮಂದಿರ ಲೋಕಾರ್ಪಣೆಗೂ ಲೋಕಸಭಾ ಚುನಾವಣೆಗೂ ಸಂಬಂಧ ಇದ್ಯಾ? ಲೋಕಸಭಾ ಚುನಾವಣೆ ನಡೆಯೋ ಕೆಲವು ತಿಂಗಳ ಮೊದಲೇ ದೇವಾಲಯ ಲೋಕಾರ್ಪಣೆ ಆಗುತ್ತದೆ ಅನ್ನೋ ಮಾತು ಕೇಳಿಬಂದಿದೆ. ಶ್ರೀ ರಾಮನ ದರ್ಶನ ಯಾವಾಗ?
✅ ಚುನಾವಣೆಗೂ ಮಂದಿರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ರೆ, ನಾವು ದೇವಸ್ಥಾನವನ್ನು ಯಥಾಶೀಘ್ರ ಜನರ ದರುಶನಕ್ಕೆ ತೆರೆದಿಡಬೇಕು ಅಂತ ಪ್ರಯತ್ನ ಮಾಡುತ್ತಿದ್ದೇವೆ. ಮೊದಲನೇಯದಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು. ಆಗ ದರ್ಶನ ಶುರುವಾಗುತ್ತದೆ. ಒಂದು ಮಹಡಿ ಕೆಲಸ ಮುಗಿದು, ಗರ್ಭಗೃಹದ ಭಾಗ ಸ್ವಲ್ಪ ಮೇಲಕ್ಕೆ ಬಂದ್ರೆ ಪ್ರಾಣ ಪ್ರತಿಷ್ಠಾಪನೆ ಮಾಡಬಹುದು. ಅದರ ನಂತರ ಬೇರೆ ಬೇರೆ ಕೆಲಸಗಳು ನಡೆಯುತ್ತಾ ಹೋಗುತ್ತದೆ. ನೆಲಮಹಡಿಯ ಕೆಲಸವನ್ನು ಡಿಸೆಂಬರ್ ಹೊತ್ತಿಗೆ ಪೂರ್ಣವಾಗಿ ಮುಗಿಸುತ್ತೇವೆ. 2024ರ ಜನವರಿ ತಿಂಗಳ ಮಕರ ಸಂಕ್ರಮಣ ಉತ್ತರಾಯಣ ಪರ್ವ ಕಾಲದ ಸಂದರ್ಭದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ.
ದೇವಸ್ಥಾನದ ಪ್ರಾಕಾರ 6.5 ಎಕರೆ ಭೂಮಿಯಲ್ಲಿ ನಿರ್ಮಾಣ ಆಗ್ತಿದೆ. 750 ಮೀಟರ್ ಉದ್ದದ ಪ್ರಾಕಾರವಾಗಿದ್ದು, ಇದು ಮುಗಿಯೋದಕ್ಕೆ 3 ವರ್ಷ ಬೇಕಾಗುತ್ತದೆ.

ಸೆಪ್ಟೆಂಬರ್‌ ೨೬ರ ಹೊತ್ತಿಗೆ ಆಗಿರುವ ಕಾಮಗಾರಿ

ಒಂದೊಳ್ಳೆ ಕೆಲಸ ಆಗಬೇಕಂದ್ರೆ ಸಾವಿರ ಕೈಗಳು ಜೊತೆಗೂಡಬೇಕು ಅಂತಾರೆ. ನಿಮ್ಮ ಜೊತೆ ಹೆಜ್ಜೆ ಹಾಕಿದವರು ಯಾರು? ಎಲ್ಲಿಂದ ಆರಂಭವಾಯ್ತು? ಈಗ ಎಲ್ಲಿಯವರೆಗೆ ಬಂದಿದ್ದೀರಾ? ದೇಣಿಗೆ ಎಷ್ಟು ಸಂಗ್ರಹವಾಗಿದೆ?
✅ ಕೇಂದ್ರ ಸರ್ಕಾರ 2020ರ ಫೆಬ್ರವರಿಯಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಅಂತ ಒಂದು ಟ್ರಸ್ಟ್ ನಿರ್ಮಾಣ ಮಾಡಿತ್ತು. ಆ ಟ್ರಸ್ಟ್‌ನ ಎಲ್ಲ ಸದಸ್ಯರೂ ಸೇರಿದಂತೆ, ನಮ್ಮ ಕರ್ನಾಟಕದ ಪೇಜಾವರ ಸ್ವಾಮಿಗಳು ಅಂದ್ರೆ, ಇಂದಿನ ವಿಶ್ವಪ್ರಸನ್ನತೀರ್ಥ ಸ್ವಾಮಿಗಳೂ ಒಬ್ಬ ಟ್ರಸ್ಟಿ. ದಕ್ಷಿಣ ಭಾರತದಿಂದ ಸ್ವಾಮೀಜಿಗಳ ಪೈಕಿ ಅವರು ಏಕಮೇವ ಟ್ರಸ್ಟಿಯಾಗಿದ್ದಾರೆ. ಇನ್ನೊಬ್ಬರು ಚೆನ್ನೈನ ಒಬ್ಬ ವಕೀಲರು. ಉಳಿದವರೆಲ್ಲ ಉತ್ತರ ಪ್ರದೇಶದ ಸಂತರಾಗಿದ್ದಾರೆ. ನಮ್ಮ ಈ ಕಾರ್ಯದಲ್ಲಿ, ವಿಶೇಷವಾಗಿ ನ್ಯಾಯಾಲಯದ ಹೋರಾಟದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ ಚಂಪತ್‌ ರಾಯರು ನಮ್ಮ ಸಂಘದ ಪ್ರಚಾರಕರು. ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿಯಾಗಿದ್ದರು. ಈಗ ವಿಶ್ವ ಹಿಂದೂ ಪರಿಷತ್‌ನ ಉಪ್ಯಾಧ್ಯಕ್ಷರಾಗಿದ್ದಾರೆ. ಅವರು ಈ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ. ನೃಪೇಂದ್ರ ಮಿಶ್ರಾ ಪ್ರಧಾನಿ ಮೋದಿಯವರಿಗೆ ಸಹಾಯಕರಾಗಿದ್ದರು. ಅವರು ಈ ಮಂದಿರ ನಿರ್ಮಾಣದ ಪ್ರಮುಖರಾಗಿ ಕೆಲಸ ಮಾಡ್ತಿದ್ದಾರೆ. ಅಯೋಧ್ಯೆಯವರೇ ಆದ ಡಾ. ಅನಿಲ್ ಮಿಶ್ರಾ ಹಾಗೂ ಅಲ್ಲಿನ ರಾಜ ಕುಟುಂಬಸ್ಥರೊಬ್ಬರು ಕೂಡ ಟ್ರಸ್ಟ್‌ನಲ್ಲಿದ್ದಾರೆ. ದೇಶಾದ್ಯಂತ ಕಳೆದ ವರ್ಷ ಜನವರಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಿಧಿ ಸಂಗ್ರಹದ ಅಭಿಯಾನ ನಡೆಯಿತು. ನಮಗೆ 3,200 ಕೋಟಿ ರೂಪಾಯಿ ನಿಧಿ ಬಂದಿದೆ, ಬರುತ್ತಲೇ ಇದೆ. ಅದಾದ ಮೇಲೆ ಇಂದಿಗೂ ಬರ್ತಾನೇ ಇದೆ. ವಿದೇಶಗಳಿಂದ ನಾವಿನ್ನೂ ಹಣ ತೆಗೆದುಕೊಂಡಿಲ್ಲ. ಏಕೆಂದರೆ ವಿದೇಶಗಳಿಂದ ಹಣ ತೆಗೆದುಕೊಳ್ಳಬೇಕಂದರೆ ಟ್ರಸ್ಟ್ ಆಗಿ ಮೂರು ವರ್ಷ ಕಳೆದಿರಬೇಕು. ಎಲ್ಲ ವರ್ಗದವರೂ ದೇಣಿಗೆ ನೀಡಿದ್ದಾರೆ. ಬಡವರು 10 ರೂಪಾಯಿಯನ್ನೂ ಕೊಟ್ಟಿದ್ದಾರೆ. ಅನುಕೂಲಸ್ಥರು ಕೋಟ್ಯಾಂತರ ರೂಪಾಯಿ ಕೊಟ್ಟಿದ್ದಾರೆ. ಎಲ್ಲ ರಾಮ ಭಕ್ತರ ಇದಕ್ಕೆ ಸಹಾಯ ಮಾಡಿದ್ದಾರೆ.

ದೇವಾಲಯದ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರೂ ದೇಣಿಗೆ ಕೊಟ್ಟಿದ್ದಾರಾ?
✅ ಒಟ್ಟು 12 ಕೋಟಿ ಕುಟುಂಬಗಳಿಂದ ನಮಗೆ ಹಣ ಬಂದಿದೆ. ಅದರಲ್ಲಿ ಮುಸಲ್ಮಾನರೂ ಇದ್ದಾರೆ. ನಾನೂ ಬೇರೆ ಬೇರೆ ಮನೆಗಳಿಗೆ ಹೋದಾಗ, ಮುಸಲ್ಮಾನರ ಮನೆಗಳು ಬಂದಾಗ ಅವರೂ ಕೂಡ ದೇಣಿಗೆ ಕೊಟ್ಟಿದ್ದಾರೆ.

ಭಾರತ ದೇವಾಲಯಗಳಿಗೆ ಪ್ರಸಿದ್ಧವಾಗಿದೆ ಹೌದು. ದೇವಾಲಯಗಳ ಪ್ರಾಕಾರಗಳೇ ವಿಭಿನ್ನವಾಗಿವೆ. ಈ ದೇವಾಲಯ ಯಾವ ರೀತಿ ವಿಭಿನ್ನವಾಗಿರಲಿದೆ?
✅ ನಾವು ನಾಗರೀ ಶೈಲಿಯಲ್ಲಿ ದೇವಸ್ಥಾನ ಕಟ್ಟುತ್ತಿದ್ದೇವೆ. 750 ಮೀಟರ್ ಉದ್ದದ ಪ್ರಾಕಾರ ಆಯತಾಕಾರದಲ್ಲಿ ನಿರ್ಮಾಣ ಆಗಲಿದೆ. ಅಲ್ಲಿಂದ ದೇವಾಲಯದ ಪ್ರವೇಶ ಶುರುವಾಗುತ್ತದೆ. ರಾಮ ಮಂದಿರ ಮೂರು ಮಹಡಿ ಹೊಂದಿರುತ್ತದೆ. ನೆಲಮಹಡಿಯಲ್ಲಿ ರಾಮ ಬಾಲ ಸ್ವರೂಪದಲ್ಲಿ ಇರ್ತಾನೆ. ಒಂದನೇ ಮಹಡಿಯಲ್ಲಿ ರಾಮ, ಲಕ್ಷ್ಮಣ, ಭರತ, ಶತೃಘ್ನ, ಹನುಮಾನ್, ಸೀತಾ ಮಾತೆ ಸಹಿತವಾಗಿ ರಾಮ ದರ್ಬಾರ್ ಇರುತ್ತದೆ. ಸಿಂಹಾಸನದಲ್ಲಿ ಕುಳಿತ ರಾಮನ ದರ್ಶನ ಪಡೆಯಬಹುದು. 161 ಅಡಿ ಎತ್ತರದ ಶಿಖರ ಇರುತ್ತದೆ. ಇದು ಉತ್ತರ ಭಾರತದಲ್ಲೇ ಅತೀ ದೊಡ್ಡ ದೇವಾಲಯವಾಗಲಿದೆ.

⭕ ಅಕ್ಷರಧಾಮ ದೇವಾಲಯದಂತೆ ಇಲ್ಲಿಯೂ ಎಲ್‌ಇಡಿ ಗೋಡೆ ಹಾಕಿ ಭಗವಂತನ ಇತಿಹಾಸ ಅಥವಾ ಕಥೆಗಳನ್ನು ಪ್ರದರ್ಶಿಸುತ್ತೀರಾ?

ಅಯೋಧ್ಯೆಯಲ್ಲಿ ಪೂಜಿಸಲ್ಪಡುತ್ತಿರುವ ರಾಮ ಲಲ್ಲಾ

✅ ಮೂಲ ಮಂದಿರದ ಪ್ರಾಕಾರದಲ್ಲಿ ಆರು ದೇವಸ್ಥಾನಗಳು ಇರಲಿವೆ. ದೇವಸ್ಥಾನದ ಲೋವರ್ ಪ್ಲಿಂಥ್‌ನಲ್ಲಿ ದೇಶದ ಮಹಾಪುರುಷರ, ರಾಮಾಯಣಕ್ಕೆ ಸಂಬಂಧಿಸಿದಂತೆ ಮಹಾಪುರುಷರ ಚಿತ್ರಣ ಬರಲಿದೆ. ಹಾಗೆಯೇ, ಪ್ರಾಕಾರದಲ್ಲಿ ರಾಮನ ಜೀವನಚಿತ್ರಣ ಬರಲಿದೆ. ಅದು ನಮ್ಮ ವಿಶೇಷತೆಯಾಗಿದೆ. ಈ ಎರಡನ್ನೂ ಜನರಿಗೆ ತೋರಿಸಲಿದ್ದೇವೆ. ಸಂಸ್ಕೃತಿಯ ಚಿತ್ರಣವನ್ನೂ ನೀಡುತ್ತೇವೆ. ರಾಮನ ಜೀವನದ ಚಿತ್ರಣವನ್ನೂ ತೋರಿಸಲಿದ್ದೇವೆ.

ವಿದೇಶಗಳಿಂದಲೂ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುವುದರಿಂದ ಪ್ರವಾಸೋದ್ಯಮ ಯಾವ ರೀತಿ ಅಭಿವೃದ್ಧಿಗೊಳಿಸುತ್ತೀರಾ?
✅ ಇದೆಲ್ಲವೂ ಸರ್ಕಾರದ ಕೆಲಸವಾಗಿದೆ. ಎಲ್ಲವನ್ನೂ ನಾವೇ ಮಾಡೋದಕ್ಕಾಗಲ್ಲ. ದೇವಸ್ಥಾನದಿಂದ ಏನು ಮಾಡಬಹುದು ಎಂಬ ಚಿಂತನೆ ಈಗ ನಡೆದಿದೆ. ಕೆಲ ಗೈಡ್‌ಗಳಾದ್ರೂ ನಮ್ಮ ಕಡೆಯಿಂದ ಇರಬೇಕು ಅಂತ ನಿರ್ಧರಿಸಿದ್ದೇವೆ. ಇದನ್ನು ಪ್ರವಾಸಿ ತಾಣ ಮಾಡೋದಕ್ಕೆ ನಾವು ಹೊರಟಿಲ್ಲ. ಶ್ರದ್ಧಾ ಸ್ಥಾನ ಮಾಡೋದಕ್ಕೆ ಹೊರಟಿದ್ದೇವೆ. ವಿದೇಶದಿಂದಾದ್ರೂ ಬರಲಿ, ಎಲ್ಲಿಂದಾದ್ರೂ ಬರಲಿ, ಶ್ರದ್ಧಾ ಸ್ಥಾನವಾಗಿಯೇ ಅಯೋಧ್ಯೆಯನ್ನು ನೋಡಬೇಕು. ಅಯೋಧ್ಯೆಯನ್ನು ನೋಡಬೇಕಾದರೆ ಸರಯೂಗೆ ಹೋಗಬೇಕು. ಸರಯೂ ದರ್ಶನ ಮಾಡದಿದ್ದರೆ ಅಯೋಧ್ಯೆ ಪುಣ್ಯ ಲಭಿಸುವುದಿಲ್ಲ. ಸರಯೂ ಶ್ರೇಷ್ಠವಾದಂತ ನದಿ. ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿಗಳು ಸರಯೂ ವರ್ಣನೆ ಮಾಡಿದ್ದಾರೆ. ಅದರ ಪಕ್ಕದಲ್ಲಿ ರಾಮನ ಸ್ಥಾನ ಅಂದ್ರೆ, ಅಯೋಧ್ಯೆ ನಿರ್ಮಿತವಾಗಿದೆ. ಅದರಿಂದಾಗಿಯೇ ಅಯೋಧ್ಯೆಗೆ ಒಂದು ಮಹತ್ವ ಸಿಕ್ಕಿದೆ. ಎರಡನೇಯದ್ದು, ಹನುಮಾನ್ ಗಡಿ. ಹನುಮಾನ್ ಇಲ್ಲದೇ ರಾಮನಿಲ್ಲ. ಅದನ್ನೂ ದರ್ಶನ ಮಾಡಬೇಕು. ಮೂರನೆಯದ್ದು ರಾಮಮಂದಿರ. ಇದು ಪ್ರಮುಖವಾದ 3 ಸ್ಥಳಗಳು. ಇದರ ಹೊರತಾಗಿಯೂ ಅನೇಕ ನಿರ್ಮಾಣವಾಗುತ್ತಿದೆ.

ದೇವಾಲಯಕ್ಕೆ ಬರುವ ಮಾರ್ಗದಲ್ಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿ ವಿಚಾರವಾಗಿ ಸರ್ಕಾರಕ್ಕೆ ಏನು ಸಲಹೆ ಕೊಟ್ಟಿದ್ದೀರಾ?
✅ ಅಯೋಧ್ಯೆ ಬಹಳ ಚಿಕ್ಕ ಊರು. ಕಾಶಿ, ಮಥುರಾ ಇವೆಲ್ಲಾ ದೊಡ್ಡ ದೊಡ್ಡ ನಗರಗಳು. ಅಯೋಧ್ಯೆ 50 ಸಾವಿರ ಜನಸಂಖ್ಯೆ ಇರೋ ಊರದು. ಮೊದಲು ಫೈಜಾಬಾದ್ ಅಂತ ಹೆಸರಿತ್ತು, ಈಗ ಅದನ್ನು ಅಯೋಧ್ಯೆ ಅಂತ ಮಾಡಿದ್ದಾರೆ. ಜಿಲ್ಲಾ ಕೇಂದ್ರವನ್ನೂ ಸೇರಿಸಿದ್ರೆ 3 ಲಕ್ಷ ಅಷ್ಟೇ ಅಲ್ಲಿನ ಜನಸಂಖ್ಯೆ. ಅದು ಅಭಿವೃದ್ಧಿಯಾಗಬೇಕಿದೆ. ರಸ್ತೆಗಳು ಅಗಲೀಕರಣಗೊಳ್ಳುತ್ತಿವೆ. ಸರ್ಕಾರದಿಂದಲೂ ಬಹಳ ಒಳ್ಳೆಯ ಯೋಜನೆಗಳು ನಡೆಯುತ್ತಿವೆ. ಹೊಸ ಅಯೋಧ್ಯೆಯನ್ನು ಅಭಿವೃದ್ಧಿಗೊಳಿಸಬೇಕು ಅಂತ ದೇವಸ್ಥಾನದಿಂದ 5 ಕಿ.ಮೀ ದೂರದಲ್ಲಿ ಸರ್ಕಾರ 1200 ಎಕರೆ ಪ್ರದೇಶವನ್ನು ಪಡೆಯುತ್ತಿದೆ. ಅಲ್ಲಿ ಯಾತ್ರಿ ನಿವಾಸಗಳು ನಿರ್ಮಾಣ ಆಗಲಿವೆ. ಅಯೋಧ್ಯೆಯಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳಿವೆ. ಅವುಗಳಿಂದಲೂ ರೂಂಗಳು ನಿರ್ಮಾಣ ಆಗಲಿವೆ.

ಉತ್ತರ ಪ್ರದೇಶದ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ಸಹಕಾರ ಹೇಗಿದೆ?
✅ ನಮಗೆ ಕೇವಲ ಎರಡು ಸರ್ಕಾರಗಳು ಮಾತ್ರವಲ್ಲ, ಮೂರು ಸರ್ಕಾರಗಳ ಸಹಕಾರ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರ, ಕೇಂದ್ರ ಸರ್ಕಾರಗಳ ಜತೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಿಂದಲೂ ಸಹಕಾರ ಲಭಿಸಿದೆ. ಒಟ್ಟು 13,50,000 ಘನ ಅಡಿ ಕಲ್ಲುಗಳು ಬೇಕಿವೆ. ಇದಿಷ್ಟೂ ಕಲ್ಲುಗಳು ರಾಜಸ್ಥಾನದಿಂದ ಬರಬೇಕು. ಆದರೆ ಆ ಕಲ್ಲುಗಳು ಇದ್ದಂಥ ಪ್ರದೇಶ ನಿಷೇಧಕ್ಕೆ ಒಳಗಾಗಿತ್ತು. ಅದನ್ನು ಕೇಂದ್ರ ಸರ್ಕಾರ ಮತ್ತು ರಾಜಸ್ಥಾನದ ಸರ್ಕಾರಗಳ ಸಹಯೋಗದಿಂದ ನಿಷೇಧ ತೆರವಾಗಿ ನಮಗೆ ಕಲ್ಲುಗಳು ಸಿಗುವಂತಾಗಿದೆ. ನಾವು ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ತೆಗೆದುಕೊಳ್ಳುವುದಿಲ್ಲ.‌ ಯಾವುದೇ ವಿನಾಯಿತಿ ಕೇಳಬಾರದು ಅಂತ ನಿಶ್ಚಯ ಮಾಡಿದ್ದೇವೆ. ನ್ಯಾಯಯುತವಾಗಿ ನಮಗೆ ಸಿಗಬೇಕಾದ ಅನುಕೂಲತೆಗಳನ್ನು ಸರ್ಕಾರ ಮಾಡಿಕೊಟ್ಟರೆ ಸಾಕು.

ಅಯೋಧ್ಯೆ ಹಲವಾರು ವರ್ಷಗಳ ಕಾಲ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಭದ್ರತೆಯ ವಿಚಾರವಾಗಿ ಟ್ರಸ್ಟ್ ಹಾಗೂ ಸರ್ಕಾರ ಏನು ವ್ಯವಸ್ಥೆ ಮಾಡಿಕೊಂಡಿದೆ?
✅ ಅನೇಕ ವರ್ಷಗಳಿಂದ ಅಯೋಧ್ಯೆಯಲ್ಲಿ ಸುಮಾರು 2500ಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದಾರೆ. ಅಯೋಧ್ಯೆಯಲ್ಲಿ ಯೆಲ್ಲೋ ಝೋನ್, ರೆಡ್ ಝೋನ್ ಎಂದು ಗುರುತಿಸಲಾಗಿದೆ. ಹೀಗಾಗಿ, ನಮ್ಮ ಪರಿಸರದ ಸುತ್ತಲೂ ಪೊಲೀಸ್ ವ್ಯವಸ್ಥೆ ಇದೆ. ಯಾವುದೇ ವಾಹನ ಪೊಲೀಸ್ ಅನುಮತಿ ಇಲ್ಲದೇ ದೇವಸ್ಥಾನಕ್ಕೆ ಬರುವ ಹಾಗಿಲ್ಲ. ಹೊರಗಡೆಯಿಂದ ಬರುವ ಎಲ್ಲ ವಾಹನಗಳೂ ತಪಾಸಣೆಗೆ ಒಳಗಾದ ನಂತರವಷ್ಟೇ ಒಳಕ್ಕೆ ಬರಲಿದೆ. ದೇವಸ್ಥಾನ ಇರುವ 70 ಎಕರೆ ಪ್ರದೇಶದ ಒಳಗೆ ಪ್ರವೇಶ ಪಡೆಯಬೇಕು ಅಂದರೆ ಮೊಬೈಲ್, ಪೆನ್‌ ತರೋದಕ್ಕೂ ಅವಕಾಶ ಇಲ್ಲ. ಯಾವುದೇ ಎಲೆಕ್ಟ್ರಾನಿಕ್ ವಸ್ತು ತರುವ ಹಾಗಿಲ್ಲ. ಹೂವನ್ನೂ ತರುವ ಹಾಗಿಲ್ಲ. ಅಭೂತಪೂರ್ವ ಭದ್ರತೆ ಇರಲಿದೆ.

ದೇವಸ್ಥಾನ ನಿರ್ಮಾಣ ಆದ ನಂತರ ನಿರ್ವಹಣೆಯ ಉಸ್ತುವಾರಿ ಯಾರದ್ದು? ವಿಶ್ವ ಹಿಂದೂ ಪರಿಷತ್ ಹಾಗು ಆರ್‌ಎಸ್‌ಎಸ್‌ನ ಪಾತ್ರ ಕೂಡ ನಿರ್ವಹಣೆಯಲ್ಲಿ ಇರಲಿದೆಯಾ? ಸರ್ಕಾರದ ಪಾತ್ರ ಏನಿರುತ್ತದೆ?
✅ ಸರ್ಕಾರ ಸುರಕ್ಷಾ ವ್ಯವಸ್ಥೆ ಮತ್ತು ಸಂಚಾರದ ವ್ಯವಸ್ಥೆ ಮಾಡುತ್ತದೆ. ದೇವಾಲಯದ ಹೊರಗಿನ ಕೆಲಸಗಳನ್ನು ಸರ್ಕಾರ ಮಾಡಲಿದೆ. ಒಳಗಿನ ಎಲ್ಲ ವ್ಯವಸ್ಥೆಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೋಡಿಕೊಳ್ಳುತ್ತದೆ. ಅದರಲ್ಲಿ ಸಂಘದವರೂ ಇದ್ದಾರೆ, ಹೊರಗಿನವರೂ ಇದ್ದಾರೆ. ಈಗ ಟ್ರಸ್ಟ್‌ನಲ್ಲಿ 15 ಜನರಿದ್ದಾರೆ. ಅದರಲ್ಲಿ 3 ಜನ ಸರ್ಕಾರಿ ಅಧಿಕಾರಿಗಳಿದ್ದಾರೆ. ಅವರಿಗೆ ಮತದಾನದ ಅಧಿಕಾರ ಇಲ್ಲ. ದೇವಸ್ಥಾನದ ನಿರ್ವಹಣೆಗೆ ಮ್ಯಾನೇಜ್‌ಮೆಂಟ್ ಕಮಿಟಿ ಇರುತ್ತದೆ. ವಿಶ್ವ ಹಿಂದೂ ಪರಿಷತ್ ಹಾಗೂ ಆರ್‌ಎಸ್ಎಸ್ ನೇರ ಪಾತ್ರ ನಿರ್ವಹಣೆಯಲ್ಲಿ ಇರೋದಿಲ್ಲ. ಆದ್ರೆ ಈ ಸಂಘಟನೆಗಳ ಸಹಕಾರ ಇದ್ದೇ ಇರುತ್ತದೆ.

ಮಂದಿರ ನಿರ್ಮಾಣ ಕಾರ್ಯದಲ್ಲಿ ಹಿನ್ನಡೆಯಾದ ಸಂದರ್ಭವೇನಾದ್ರೂ ಇತ್ತಾ?
✅ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಒಳಗಿನ ಸಮಸ್ಯೆಯಿಂದ ಕೆಲಸಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಬೇರೆ ಬೇರೆಯವರು ಸಣ್ಣಪುಟ್ಟ ವಿವಾದಗಳನ್ನು ಬೇರೆ ಬೇರೆ ಕಾರಣಕ್ಕಾಗಿ ಸೃಷ್ಟಿ ಮಾಡ್ತಾ ಇರ್ತಾರೆ. ಅದೆಲ್ಲವೂ ಕ್ಷಣಿಕವಷ್ಟೇ. ಚುನಾವಣೆ ಬಂದಾಗ ಸೃಷ್ಟಿ ಮಾಡ್ತಾರೆ. ಒಂದು ಸಂದರ್ಭದಲ್ಲಿ ನಮ್ಮ ಮೇಲೂ ಜಾಗದ ವಿಚಾರವಾಗಿ ಆರೋಪ ಕೇಳಿಬಂತು. ಆದ್ರೆ, ನಾವೆಲ್ಲ ರೀತಿಯಿಂದಲೂ ಶುದ್ಧವಿರೋದ್ರಿಂದ ಸಮಸ್ಯೆ ಆಗಿಲ್ಲ. ನಮ್ಮದು ಬಹಳ ಪಾರದರ್ಶಕ ವ್ಯವಹಾರವಾಗಿದೆ. ನಮ್ಮ ಬಳಿ ಚೆಕ್‌ಬುಕ್ ಅಕೌಂಟ್ ಕೂಡ ಇಲ್ಲ. ಚೆಕ್‌ಬುಕ್ ರಹಿತ ಅಕೌಂಟ್‌ ಬಳಸುತ್ತಿದ್ದೇವೆ. ಅಂದರೆ ನಮ್ಮ ಕಾರ್ಯದರ್ಶಿ ಬ್ಯಾಂಕ್‌ಗೆ ಹೋಗಿ ಸಹಿ ಹಾಕಿದರೆ ಮಾತ್ರ ಬ್ಯಾಂಕ್‌ನಿಂದ ಹಣ ಹೊರಹೋಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ನಾವು ಫಿಸಿಕಲ್ ಟ್ರಾನ್ಸಾಕ್ಷನ್ ಕೂಡ ಮಾಡ್ತಿಲ್ಲ. ಜಿಎಸ್‌ಟಿ ಕಟ್ಟದೇ ಯಾವುದೇ ವ್ಯವಹಾರವನ್ನೂ ಮಾಡಿಲ್ಲ. ಇಡೀ ದೇಶ ನಮ್ಮನ್ನು ನೋಡುತ್ತಿದೆ. ನಾವು ಎಚ್ಚರಿಕೆಯಿಂದ, ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ.

೨೦೨೨ರ ಜೂನ್‌ ೧ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ ಕ್ಷಣ

ಸ್ವರ್ಣ ಕಳಶ ಸ್ಥಾಪನೆ ಹೊಣೆಯನ್ನು ಕರ್ನಾಟಕಕ್ಕೆ ನೀಡಬೇಕೆಂಬ ಕೋರಿಕೆ ಇದೆ. ಇದರ ಬಗ್ಗೆ ನಿರ್ಣಯವಾಗಿದೆಯಾ?
✅ ಸ್ವರ್ಣ ಕಳಶ ನಿರ್ಮಿಸುವ ವಿಚಾರವನ್ನು ಟ್ರಸ್ಟ್‌ನಲ್ಲಿ ಪೇಜಾವರ ಸ್ವಾಮಿಗಳು ಇಟ್ಟಿದ್ದಾರೆ. ಟ್ರಸ್ಟ್ ಇದಕ್ಕೆ ಒಪ್ಪಿದೆ. ಸ್ವರ್ಣ ಕಳಶ ನಿಶ್ಚಿತ. ಟ್ರಸ್ಟ್‌ನಲ್ಲಿ ಈಗ ಕಳಶದ ವಿಚಾರವಾಗಿ ಪರಾಮರ್ಶೆ ನಡೆಯುತ್ತಿದೆ. ಶಿಖರ ನಿರ್ಮಾಣವಾಗೋದೇ 2024ರ ಆಗಸ್ಟ್ ವೇಳೆಗೆ. ಇನ್ನೂ 2 ವರ್ಷಗಳು ಇರುವುದರಿಂದ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

ಅಯೋಧ್ಯೆ ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಇರುವ ವಿಶಿಷ್ಟ ನಂಟೇನು?
✅ ರಾಜ್ಯದ ಪ್ರತಿನಿಧಿಯಾಗಿ ನಾನು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕರ್ನಾಟಕದಿಂದ ಬಂದ ಗ್ರಾನೈಟ್ ಕಲ್ಲುಗಳನ್ನು ದೇವಾಲಯಕ್ಕೆ ಬಳಸಲಾಗಿದೆ. ಅದರಲ್ಲೂ ರಾಮಮಂದಿರದ ಬುನಾದಿಯನ್ನು ಕರ್ನಾಟಕದ ಕಲ್ಲುಗಳಿಂದಲೇ ಹಾಕಲಾಗಿದೆ. ರಾಜ್ಯದವರೇ ಆದ ಪೇಜಾವರ ಸ್ವಾಮಿಗಳು ಟ್ರಸ್ಟಿಯಾಗಿದ್ದಾರೆ. ಹಾಗಾಗಿ ರಾಮ ಮಂದಿರ ನಿರ್ಮಾಣ ಇತಿಹಾಸದಲ್ಲಿ ಕರ್ನಾಟಕದ ಹೆಸರೂ ಅಚ್ಚಳಿಯದೇ ಉಳಿಯಲಿದೆ.

ಇದನ್ನೂ ಓದಿ | Ayodhya Ram Temple | ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂ. ವೆಚ್ಚ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುತ್ತೇನೆ ಎಂದಿದ್ದ ಯುವಕ ವಶಕ್ಕೆ

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ವಿಡಿಯೊ ಮಾಡಿ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಐಪಿಎಲ್‌ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುತ್ತೇನೆ ಎಂದು ಹೇಳಿದ್ದ ಯುವಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ವಿಡಿಯೊ ಮಾಡಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ.

ನಿತಿನ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುವುದಾಗಿ ಯುವಕ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೇ 18ರಂದು ನಡೆಯುವ ಮ್ಯಾಚ್ ವೇಳೆ ಸ್ಟೇಡಿಯಂಗೆ ನುಗ್ಗುತ್ತೇನೆ ಎಂದು ಯುವಕ ವಿಡಿಯೊದಲ್ಲಿ ಹೇಳಿದ್ದ. ಈ ವಿಡಿಯೊವನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಗಮನಿಸಿ ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಮಾರ್ಚ್‌ 25ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಅಭಿಮಾನಿಯೊಬ್ಬ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಪ್ರಸಂಗ ನಡೆದಿತ್ತು. ಈ ಘಟನೆಯಿಂದ ಪ್ರೇರಣೆಗೊಂಡ ಬೆಂಗಳೂರಿನ ಯುವಕ ನಿತಿನ್‌, ತಾನು ಕೂಡ ಮೈದಾನಕ್ಕೆ ನುಗ್ಗುವುದಾಗಿ ವಿಡಿಯೊದಲ್ಲಿ ಹೇಳಿದ್ದ. ಇದರಿಂದ ಪಂದ್ಯದ ವೇಳೆ ಸಮಸ್ಯೆಯಾಗಬಹುದು ಎಂದು ಕ್ರೀಡಾಂಗಣದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ | RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

ಯುವಕನ ವಿಡಿಯೊ ವೈರಲ್‌ ಆದ ಬಳಿಕ ನಿಗಾ ವಹಿಸಿದ್ದ ಪೊಲೀಸರು, ಯುವಕ ಟಿಕೆಟ್‌ ಪಡೆದು ಪಂದ್ಯ ವೀಕ್ಷಿಸಲು ಶನಿವಾರ ಆಗಮಿಸಿದ್ದಾಗ ವಶಕ್ಕೆ ಪಡೆದಿದ್ದಾರೆ.

ವಿರಾಟ್‌ ಕೊಹ್ಲಿಯ ಕಾಲಿಗೆ ಬಿದ್ದಿದ್ದ ಅಭಿಯಾನಿ

ಮಾರ್ಚ್‌ನಲ್ಲಿ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂಗೆ ನುಗ್ಗಿ ವಿರಾಟ್‌ ಕೊಹ್ಲಿಯ(Virat Kohli) ಕಾಲಿಗೆ ಬಿದ್ದ ಅಭಿಯಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಆಗ ಕೊಹ್ಲಿ ಕ್ರೀಸ್‌ನಲ್ಲಿದ್ದರು. ಅ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿ ಪಿಚ್‌ ಕಡೆ ಬಂದು ಕೊಹ್ಲಿ ಕಾಲಿಗೆ ಬಿದ್ದು, ಆಲಿಂಗನ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಹಾಕಿದ್ದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ | RCB vs CSK: ಸಿಕ್ಸರ್​ ಮೂಲಕವೂ ದಾಖಲೆ ಬರೆದ ವಿರಾಟ್​ ಕೊಹ್ಲಿ

ರಾಯಚೂರು ಮೂಲದ ವಿರಾಟ್​ ಕೊಹ್ಲಿಯ ಅಪ್ಪಟ ಅಭಿಮಾನಿ ಕುರುಮಪ್ಪ‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಅತ ಪೊಲೀಸ್​ ವಿಚಾರಣೆ ವೇಳೆ ತನ್ನ ಮೂಲ ಹೆಸರನ್ನು ಮರೆ ಮಾಚಿ ರಂಜಿತ್ ಎಂದು ಹೇಳಿದ್ದ. ದಾಖಲೆಗಳನ್ನು ಪರಿಶೀಲಿಸುವ ವೇಳೆ ಆತ ರಂಜಿತ್​ ಅಲ್ಲ ಕುರುಮಪ್ಪ‌ ಎಂಬ ವಿಚಾರ ಬೆಳಕಿಗೆ ಬಂದಿತ್ತು. ನಂತರ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಲಾಗಿತ್ತು.

Continue Reading

ಸಿನಿಮಾ

Kannada New Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಔಟ್‌; ಶೀಘ್ರದಲ್ಲೇ ತೆರೆಗೆ

Kannada New Movie: ‘ರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣ’ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ ಪ್ರಕಾಶ್ ನಿರ್ಮಾಣದ 5ನೇ ಸಿನಿಮಾ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಚಿತ್ರದ ಪೋಸ್ಟರ್ ಈಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಸಿಂಪಲ್ ಸುನಿ, ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

VISTARANEWS.COM


on

Bank of Bhagyalakshmi movie poster released
Koo

ಬೆಂಗಳೂರು: ‘ರಂಗಿ ತರಂಗʼ, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್.ಕೆ. ಪ್ರಕಾಶ್ ನಿರ್ಮಾಣದ 5ನೇ ಸಿನಿಮಾ ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಚಿತ್ರದ ಪೋಸ್ಟರ್ (Kannada New Movie) ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರು ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು.

ದೀಕ್ಷಿತ್ ಶೆಟ್ಟಿ ಅಭಿನಯದ ಚಿತ್ರ‌

ದಿಯಾ , ದಸರಾ, ಕೆಟಿಎಂ ಹಾಗೂ ಬ್ಲಿಂಕ್ ಸಿನಿಮಾಗಳಲ್ಲಿ ಅಭಿನಯದಲ್ಲಿ ಹೆಸರು ಮಾಡಿ, ತೆಲುಗು, ಮಲಯಾಳಂಗಳಲ್ಲಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ಸಿನಿಮಾದ ನಾಯಕಿಯಾಗಿದ್ದಾರೆ.

ಇದನ್ನೂ ಓದಿ: Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

ಚಿತ್ರಕ್ಕೆ ನವ ನಿರ್ದೇಶಕ ಅಭಿಷೇಕ ಎಂ. ಅವರ ನಿರ್ದೇಶನವಿದೆ. ನಿರ್ದೇಶಕ ಸಿಂಪಲ್ ಸುನಿ ಜತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗು ಕೆಲ ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. ‘ಪಿನಾಕ’ ಎಂಬ ವಿಎಫ್‌ಎಕ್ಸ್‌ (VFX) ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ. ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಹಾಸ್ಯ ಪ್ರಧಾನ ಕಥಾಹಂದರ

ಬ್ಯಾಂಕ್‌ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರವನ್ನು ಈ ಚಿತ್ರವು ಒಳಗೊಂಡಿದೆ. ಸಹ ಕಲಾವಿದರಾಗಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಸೇರಿದಂತೆ ಮುಂತಾದ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.

ಶೀಘ್ರದಲ್ಲೇ ಚಿತ್ರೀಕರಣ ಮುಕ್ತಾಯ

ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗ ಸುತ್ತಮುತ್ತ ಶೇ.80 ರಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಇನ್ನು ʼಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀʼ ಸಿನಿಮಾವನ್ನು ನಿರ್ಮಾಪಕ ಎಚ್.ಕೆ ಪ್ರಕಾಶ್, ಕನ್ನಡದ ಜತೆಗೆ ತೆಲುಗಿನಲ್ಲಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ. ಕಾಸರಗೋಡು ಅವರ ಕ್ಯಾಮೆರಾ ನಿರ್ದೇಶನ, ರಘು ಮೈಸೂರ್ ಅವರ ಕಲಾ ನಿರ್ದೇಶನ, ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

Continue Reading

ಕರ್ನಾಟಕ

Lorry Accident: ಕಾರ್ಕಳದಲ್ಲಿ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು

Lorry Accident: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಭ್ರಾಮರಿ ಕ್ರಾಸ್‌ನಲ್ಲಿ ಅಪಘಾತ ನಡೆದಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

VISTARANEWS.COM


on

Lorry Accident
Koo

ಉಡುಪಿ: ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ (Lorry Accident) ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಭ್ರಾಮರಿ ಕ್ರಾಸ್‌ನಲ್ಲಿ ನಡೆದಿದೆ. ಕಲ್ಲು ತುಂಬಿದ್ದ ಲಾರಿ ಮಂಗಳೂರಿನ ಕಡೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ದುರ್ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರದ ಕರಿಯಪ್ಪ ಮತ್ತು ನರಿಯಪ್ಪ ಮೃತ. ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder case : ಕುಡಿದ ನಶೆಯಲ್ಲಿ ಗೆಳೆಯನ ಕೊಂದ; ಸೇಡಿಗಾಗಿ ಗ್ರಾ.ಪಂ ಸದಸ್ಯನ ಮನೆ ಮೇಲೆ ಅಟ್ಯಾಕ್‌

ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

ಕಲಬುರಗಿ: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವುದು (Road Accident) ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ನಡೆದಿದೆ. ಅಫಜಲಪುರ ತಾಲೂಕಿನ ಹೊಸೂರು ಗ್ರಾಮದ ದೇವಾನಂದ್ ಘತ್ತರಗಿ (25), ಬಸವರಾಜ್ ದುರ್ಗ (56) ಮೃತ ದುರ್ದೈವಿಗಳು.

ಚೌಡಾಪುರದಿಂದ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿಯಾಗಿದ್ದರಿಂದ ದುರಂತ ನಡೆದಿದೆ. ಅಪಘಾತ ನಡೆದ ಬಳಿಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

ಗದಗ: ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ (Veerabhadreswara Fair) ರಥದ ಚಕ್ರದಡಿ‌ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಥ ಎಳೆಯುವ ವೇಳೆ ಈ ಅವಘಡ ನಡೆದಿದೆ.

ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಬ್ಬ ಭಕ್ತನ ತಲೆ‌ ಮೇಲೆ ರಥದ ಚಕ್ರ ಹತ್ತಿಳಿದಿದ್ದರಿಂದ ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೊಬ್ಬನ ಬೆನ್ನಿನ ಮೇಲೆ ಹಾದು ಹೋಗಿದೆ. ಹೀಗಾಗಿ ಆತನೂ ಅಲ್ಲಿಯೇ ಉಸಿರು ಚೆಲ್ಲಿದ್ದಾನೆ. ರಥೋತ್ಸವಕ್ಕೆ‌ ಎಸೆಯುವ ಉತ್ತುತ್ತೆಯನ್ನು ಆರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ | Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

ಮಲ್ಲಪ್ಪ ಲಿಂಗನಗೌಡರ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Continue Reading

ಕ್ರೀಡೆ

RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

RCB vs CSK: ಶಿವರಾಜ್​ ಕುಮಾರ್​ ಆರ್​ಸಿಬಿಯ ಜೆರ್ಸಿ ತೊಟ್ಟು ಗಮನಸೆಳೆದಿದ್ದಾರೆ. ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ತವರಿನ ತಂಡಕ್ಕೆ ಬೆಂಬಲ ಸೂಚಿಸಲು ರಾಜಕೀಯ ಗಣ್ಯರು, ಸಿನೆಮಾ ನಟ ನಟಿಯರು ಹಾಜರಾಗಿದ್ದಾರೆ.

VISTARANEWS.COM


on

RCB vs CSK
Koo

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡ ಕಣಕ್ಕಿಳಿದಿದೆ. ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ತವರಿನ ತಂಡಕ್ಕೆ ಬೆಂಬಲ ಸೂಚಿಸಲು ರಾಜಕೀಯ ಗಣ್ಯರು, ಸಿನೆಮಾ ನಟ ನಟಿಯರು ಹಾಜರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್‌, ನಟ ಶಿವರಾಜ್​ ಕುಮಾರ್​, ರಿಷಬ್​ ಶೆಟ್ಟಿ ಸೇರಿ ಅನೇಕರು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದಾರೆ. ಶಿವರಾಜ್​ ಕುಮಾರ್​ ಆರ್​ಸಿಬಿಯ ಜೆರ್ಸಿ ತೊಟ್ಟು ಗಮನಸೆಳೆದಿದ್ದಾರೆ. ಗಣ್ಯರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ. ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು ಎಂದು ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

ಆರ್​ಸಿಬಿಗೆ ಸಪೋರ್ಟ್​ ಮಾಡಲು ಮಹಿಳಾ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ, ತಂಡದ ಆಟಗಾರ್ತಿಯರಾದ ಶ್ರೇಯಾಂಕ ಪಾಟೀಲ್​,ಆಶಾ ಶೋಭನಾ ಹಾಗೂ ಇತರೆ ಆಟಗಾರ್ತಿಯರು ಕೂಡ ಹಾಜರಾಗಿದ್ದಾರೆ. ಆರ್​ಸಿಬಿ ಮಾಜಿ ಆಟಗಾರ ಕ್ರಿಸ್​ ಗೇಲ್​ ಕೂಡ 333 ನಂಬರ್​ನ ಆರ್​ಸಿಬಿ ಜೆರ್ಸಿಯಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ.

ಪಂದ್ಯವನ್ನು ಆರ್​ಸಿಬಿ ತಂಡ ಗೆಲ್ಲುತ್ತದೆ ಎಂದು ಮಹಿಳಾ ಆಟಗಾರ್ತಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೋಟೋವನ್ನು ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹ್ಯಾಟ್ರಿಕ್​ ಹೀರೊ ಶಿವರಾಜ್​ ಕುಮಾರ್​ ಅವರು ಆರ್​ಸಿಬಿ ಜೆರ್ಸಿ ತೊಟ್ಟ ಫೋಟೊವನ್ನು ಅವರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ ಆರ್​ಸಿಬಿ ಹುಡುಗರೇ ಎಂದು ಬರೆದುಕೊಂಡಿದ್ದಾರೆ.

ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್​ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ. ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ.

Continue Reading
Advertisement
RCB vs CSK
ಕರ್ನಾಟಕ7 mins ago

RCB vs CSK: ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುತ್ತೇನೆ ಎಂದಿದ್ದ ಯುವಕ ವಶಕ್ಕೆ

Bank of Bhagyalakshmi movie poster released
ಸಿನಿಮಾ10 mins ago

Kannada New Movie: ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ ಸಿನಿಮಾದ ಪೋಸ್ಟರ್ ಔಟ್‌; ಶೀಘ್ರದಲ್ಲೇ ತೆರೆಗೆ

Priyanka Vadra
ಪ್ರಮುಖ ಸುದ್ದಿ30 mins ago

ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

Kangana Ranaut
ದೇಶ2 hours ago

Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

RCB vs CSK
ಕ್ರೀಡೆ2 hours ago

RCB vs CSK: ಸಿಕ್ಸರ್​ ಮೂಲಕವೂ ದಾಖಲೆ ಬರೆದ ವಿರಾಟ್​ ಕೊಹ್ಲಿ

Lorry Accident
ಕರ್ನಾಟಕ2 hours ago

Lorry Accident: ಕಾರ್ಕಳದಲ್ಲಿ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರ ಸಾವು

RCB vs CSK
ಕ್ರೀಡೆ2 hours ago

RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

Road Accident
ಕರ್ನಾಟಕ2 hours ago

Road Accident: ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರ ದುರ್ಮರಣ

Russia Tourism
ಪ್ರವಾಸ3 hours ago

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

Constitution
ದೇಶ3 hours ago

ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ1 day ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌