Viral video | ಗುಂಡಿಯಲ್ಲಿ ಬಿದ್ದ ಆನೆ, ಮರಿಯನ್ನು ರಕ್ಷಿಸಲು ಈ ದೇವತಾ ಮನುಷ್ಯರು ಮಾಡಿದ ಸಾಹಸ ನೋಡಿ Vistara News
Connect with us

ವಿದೇಶ

Viral video | ಗುಂಡಿಯಲ್ಲಿ ಬಿದ್ದ ಆನೆ, ಮರಿಯನ್ನು ರಕ್ಷಿಸಲು ಈ ದೇವತಾ ಮನುಷ್ಯರು ಮಾಡಿದ ಸಾಹಸ ನೋಡಿ

ಗುಂಡಿಯಲ್ಲಿ ಬಿದ್ದ ಆನೆ ಮರಿ, ಅದನ್ನು ರಕ್ಷಿಸಲೆಂದು ಇಳಿದ ತಾಯಿ ಆನೆಯ ಸಂಕಟ ಮತ್ತು ಅವರೆಡಕ್ಕೂ ಮುಕ್ತಿ ನೀಡಿದ ಪಶುವೈದ್ಯರ ತಂಡದ ಮಾನವೀಯ ಸೇವೆಯ ಒಂದು ಹೃದಯಂಗಮ ಚಿತ್ರಣವಿದು.

VISTARANEWS.COM


on

ಗುಂಡಿಗೆ ಬಿದ್ದ ಆನೆ
Koo

ನಖೋನ್ ನಯೋಕ್ (ಥೈಲ್ಯಾಂಡ್): ಇಲ್ಲಿನ ಗಾಲ್ಫ್‌ ಕೋರ್ಟ್‌ನ ಬಳಿಯ ಏಳು ಅಡಿ ಗುಂಡಿಗೆ ಆನೆ ಮತ್ತು ಅದರ ಮರಿ ಬಿದ್ದು ಅಪಾಯಕ್ಕೆ ಸಿಲುಕಿದ್ದವು. ಒಂದು ಕಡೆ ತಾಯಿ ತನ್ನ ಮಗುವನ್ನು ರಕ್ಷಿಸಿಕೊಳ್ಳಲು ಹೋಗಿ ಇನ್ನಷ್ಟು ಅಪಾಯಕ್ಕೆ ಸಿಲುಕಿದೆ. ಎರಡು ಕೂಡಾ ಮೇಲೆ ಬರಲಾಗದೆ ಲಾಕ್‌ ಆಗಿಬಿಟ್ಟವು. ಈ ವೇಳೆ ಪಶುವೈದ್ಯರ ತಂಡವೊಂದು ನಡೆಸಿದ ಅತ್ಯಂತ ಸಮಯಪ್ರಜ್ಞೆಯ ಕಾರ್ಯಾಚರಣೆ ಎರಡೂ ಜೀವಗಳನ್ನು ಉಳಿಸಿತು.

ಕಳೆದ ಬುಧವಾರ ಸುರಿದ ಭಾರಿ ಮಳೆಯ ವೇಳೆ ಒಂದು ವರ್ಷದ ಆನೆ ಮರಿ ಗೊತ್ತಾಗದೆ ದೊಡ್ಡ ಗುಂಡಿಯೊಳಗೆ ಅಚಾನಕ್‌ ಆಗಿ ಬಿದ್ದಿದೆ. ಇದನ್ನು ನೋಡಿದ ತಾಯಿ ಆನೆ ತನ್ನ ಮಗುವನ್ನು ರಕ್ಷಣೆ ಮಾಡಲು ಗುಂಡಿಯೊಳಗೆ ಇಳಿದಿದೆ, ಆರಂಭದಲ್ಲಿ ತನ್ನ ಕರುವಿನ ಮೇಲೆ ಕಾವಲು ನಿಂತರೂ ಸ್ವಲ್ಪ ಸಮಯದ ನಂತರ ತಾಯಿ ಆನೆಗೆ ನಿತ್ರಾಣವಾಗಿದೆ.

ಈ ವಿಚಾರ ಅಲ್ಲಿದ್ದ ಪಶುವೈದ್ಯರ ತಂಡಕ್ಕೆ ಗೊತ್ತಾಯಿತು. ಕೂಡಲೇ ಅವರು ಧಾವಿಸಿದರಾದರೂ ತಕ್ಷಣಕ್ಕೆ ರಕ್ಷಿಸುವ ಪರಿಸ್ಥಿತಿ ಇರಲಿಲ್ಲ. ಕೂಡಲೇ ಚೆರ‍್ರಿ ಪಿಕ್ಕರ್‌ ಕ್ರೇನ್‌ ತರಿಸಲಾಯಿತು. ಆದರೆ, ಹಾಗೆಯೇ ಆನೆಯನ್ನು ಮೇಲೆತ್ತುವ ಹಾಗಿರಲಿಲ್ಲ. ಯಾಕೆಂದರೆ, ಆನೆ ತನ್ನ ಮರಿಗಾಗಿ ಮತ್ತೆ ಗುಂಡಿಗೆ ಇಳಿಯುವ, ಘೀಳಿಟ್ಟು ಆನೆ ದಂಡನ್ನು ತರಿಸಿಕೊಳ್ಳುವ ಅಪಾಯವಿತ್ತು.

ಹೀಗಾಗಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅರಿವಳಿಕೆಯನ್ನು ನೀಡಿದರು. ಮೂರು ಇಂಜೆಕ್ಷನ್‌ ಎಸೆದು ಮತ್ತು ಬರಿಸಲಾಯಿತು. ಬಳಿಕ ಕ್ರೇನ್‌ ಮೂಲಕ ಮೇಲೆ ಎತ್ತಿ ಪಕ್ಕದಲ್ಲಿ ಮಲಗಿಸಲಾಯಿತು. ಈ ನಡುವೆ, ಗುಂಡಿಯ ಕಾಂಕ್ರೀಟ್‌ ಗೋಡೆ ಆನೆಯ ತಲೆಗೆ ತಾಗಿದ್ದರಿಂದ ಆನೆಗೆ ನಿದ್ದೆ ಬಂದಿದ್ದಷ್ಟೇ ಆಲ್ಲ, ಪ್ರಜ್ಞೆಯೇ ತಪ್ಪಿತ್ತು. ಆಗ ಇಡೀ ತಂಡ ಆನೆಯ ಮೇಲೆ ತೀವ್ರವಾದ ನಿಗಾವನ್ನು ಇಟ್ಟಿತು.

ಆನೆಯನ್ನು ಜಾಗೃತಗೊಳಿಸುವುದಕ್ಕಾಗಿ ಅದರ ಹೃದಯವನ್ನು ಪಂಪ್‌ ಮಾಡುವ ಹಾಗೆ ಒತ್ತಿ, ಆನೆಯ ಮೇಲೆ ಹತ್ತಿ ಪ್ರಯತ್ನಿಸಲಾಯಿತು. ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಬಳಸಿ ಹೃದಯವನ್ನು ಸಹಜ ಸ್ಥಿತಿಗೆ ತರಲಾಯಿತು.

ಈ ನಡುವೆ ಜೆಸಿಬಿ ಬಳಸಿ ಗುಂಡಿಯ ಒಂದು ಭಾಗವನ್ನು ಇಳಿಜಾರು ಮಾಡಲಾಯಿತು. ಈ ವೇಳೆ, ಮರಿ ಸಾಕಷ್ಟು ಪ್ರಯತ್ನ ಮಾಡಿ ತಾನೇ ಮೇಲೆದ್ದು ಬಂತು. ಮೇಲೆ ಬಂದಿದ್ದೇ ಆನೆ ಮರಿ ಕಿರಿಚುತ್ತಾ ತಾಯಿಯ ಹತ್ತಿರ ಓಡೋಡಿ ಹೋಗಿದೆ. ಅಮ್ಮ ಮಲಗಿರುವಿದನ್ನು ಕಂಡು ಎಬ್ಬಿಸಲು ಮುಂದಾಗಿದೆ. ಅವಳ ಎದೆಗೆ ತನ್ನ ಉಸಿರ ಸ್ಪರ್ಶ ನೀಡಿದೆ, ತನ್ನ ಮಗುವಿನ ಸಾಂಗತ್ಯದಿಂದ ತಾಯಿಗೆ ಉಸಿರು ಬಂದಿದೆ, ನಂತರ ತಾಯಿ-ಮಗು ಎರಡು ಕಾಡು ಸೇರಿವೆ.

ರಕ್ಷಣಾಕಾರ್ಯದ ನಂತರದ ಖುಷಿಯಲ್ಲಿ ಪಶುವೈದ್ಯೆ

ಇದನ್ನು ನೋಡಿದ ಪಶುವೈದೈ ಆನಂದ ಭಾಷ್ಪ ಹಾಕಿದ್ದಾರೆ, ಅವರ ಜೀವನದಲ್ಲಿ ಅತೀ ದೊಡ್ಡ ರಕ್ಷಣಾ ಕಾರ್ಯ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ| ಗಾಢನಿದ್ರೆಯಲ್ಲಿದ್ದ ಕಂದನನ್ನು ಎಬ್ಬಿಸಲು ಮಾವುತನನ್ನೇ ಕರೆ ತಂದ ತಾಯಿ ಆನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Nijjar Killing: ಭಾರತ ವಿರುದ್ಧ ಪಾಕ್ ಕುತಂತ್ರ; ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ಹಿಂದೆ ಐಎಸ್‌ಐ ಕೈವಾಡ

Nijjar Killing: ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಕೈವಾಡ ಇದೆ ಎಂದು ತಿಳಿದುಬಂದಿದೆ. ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಇಂತಹ ಷಡ್ಯಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Edited by

Hardeep Singh Nijjar
ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್.
Koo

ನವದೆಹಲಿ: ಉಗ್ರ ಪೋಷಣೆ, ಉಗ್ರರ ದಾಳಿಗೆ ಸಹಕಾರ ನೀಡುವ ಮೂಲಕ ಭಾರತದ ಜತೆ ವ್ಯಾಪಾರ, ಸಹಕಾರ, ದ್ವಿಪಕ್ಷೀಯ ನೆರವಿನಿಂದ ವಂಚಿತವಾಗಿರುವ ಪಾಕಿಸ್ತಾನವು (Pakistan) ಭಾರತ ಜತೆಗೆ ಮಾತುಕತೆ ನಡೆಸಲು ಜಾಗತಿಕ ಮಟ್ಟದಲ್ಲಿ ಲಾಬಿ ನಡೆಸುತ್ತಿದೆ. ನಾವು ಮಾತುಕತೆಗೆ ಸಿದ್ಧ ಎಂದು ಜಾಗತಿಕ ವೇದಿಕೆಗಳಲ್ಲಿಯೂ ಹೇಳಿಕೊಳ್ಳುತ್ತಿದೆ. ಆದರೆ, ಭಾರತದ ವಿರುದ್ಧ ಕುತಂತ್ರ ಮಾಡುವ ಬುದ್ಧಿಯನ್ನು ಮಾತ್ರ ಪಾಕಿಸ್ತಾನ ಬಿಟ್ಟಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಭಾರತದ ವಿರುದ್ಧ ಷಡ್ಯಂತ್ರದ ಭಾಗವಾಗಿಯೇ ಪಾಕಿಸ್ತಾನ ಇಂತಹ ಕೃತ್ಯ (Nijjar Killing) ಎಸಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳೇ ತಿಳಿಸಿವೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಕೈವಾಡವಿದೆ. ಕೆನಡಾದಲ್ಲಿ ರಾಹತ್‌ ರಾವ್‌ ಹಾಗೂ ತಾರಿಕ್‌ ಕಿಯಾನಿ ಎಂಬುವರು ಐಸಿಸ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಅಪರಾಧ ಎಸಗಿ ಕೆನಡಾಗೆ ತೆರಳುವವರಿಗೂ ಇವರು ನೆರವು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೂ ಇವರೇ ಪ್ಲಾನ್‌ ರೂಪಿಸಿದ್ದಾರೆ. ಭಾರತದ ವಿರುದ್ಧ ಕೆನಡಾದಲ್ಲಿ ಪಾಕಿಸ್ತಾನ ಕುತಂತ್ರ ಮಾಡುತ್ತಿದೆ” ಎಂದು ತಿಳಿದುಬಂದಿದೆ.

Pakistan ISI

ನಿಜ್ಜರ್‌ ನಿವಾಸದ ಬಳಿಯೇ ಠಿಕಾಣಿ

“ಹರ್ದೀಪ್‌ ಸಿಂಗ್‌ ನಿಜ್ಜರ್‌ ತುಂಬ ಎಚ್ಚರದಿಂದ ಇರುತ್ತಿದ್ದ. ಆತನಿಗೆ ಹೆಚ್ಚಿನ ಪ್ರಮಾಣದಲ್ಲಿ ಭದ್ರತೆ ಇರುತ್ತಿತ್ತು. ಆತನ ವಸತಿ, ಪ್ರಯಾಣ ಸೇರಿ ಹಲವು ವಿಷಯಗಳಲ್ಲಿ ಭಾರಿ ಗೌಪ್ಯತೆ ಇರುತ್ತಿತ್ತು. ಹಾಗಾಗಿ, ಸಾಮಾನ್ಯರಿಗೆ ಆತನ ಬಗ್ಗೆ ಯಾವುದೇ ಸುಳಿವು ಇರುತ್ತಿರಲಿಲ್ಲ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಚಲನವಲನ ಸೇರಿ ಹಲವು ಮಾಹಿತಿ ರಾಹತ್‌ ರಾವ್‌ ಹಾಗೂ ತಾರಿಕ್‌ ಕಿಯಾನಿಗೆ ಇತ್ತು. ನಿಜ್ಜರ್‌ ಮನೆಯ ಬಳಿಯೇ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳು ವಾಸವಿದ್ದರು. ಇವರೇ ನಿಜ್ಜರ್‌ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

Continue Reading

ಪ್ರಮುಖ ಸುದ್ದಿ

Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!

Iraq Fire Accident: ಇರಾಕ್‌ನ ನಿನೆವೆಹ್‌ ಪ್ರಾಂತ್ಯದ ವೆಡ್ಡಿಂಗ್‌ ಹಾಲ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 114 ಜನ ಮೃತಪಟ್ಟಿದ್ದಾರೆ. 550ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

VISTARANEWS.COM


on

Edited by

Iraq Fire Accident
Koo

ಬಾಗ್ದಾದ್:‌ ಇರಾಕ್‌ನ ನಿನೆವೆಹ್‌ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿರುವ ಮದುವೆ ಹಾಲ್‌ನಲ್ಲಿ (Wedding Hall) ಭೀಕರ ಅಗ್ನಿ ದುರಂತ (Iraq Fire Accident) ಸಂಭವಿಸಿದ್ದು, 114 ಜನ ಮೃತಪಟ್ಟಿದ್ದಾರೆ. ಹಾಗೆಯೇ, 550ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಹಲವು ಜನ ಅಗ್ನಿಯ ಕೆನ್ನಾಲಗೆಗೆ ಸಿಲುಕಿರುವ ಶಂಕೆ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ. ದುರಂತದಲ್ಲಿ ಮದುಮಕ್ಕಳು ಕೂಡ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೊಸುಲ್‌ ನಗರದ ಹಮ್ದನಿಯಾ ಪ್ರದೇಶದಲ್ಲಿರುವ ಕ್ರಿಶ್ಚಿಯನ್‌ ಸಮುದಾಯದ ಹಾಲ್‌ನಲ್ಲಿ ಮದುವೆ ಪಾರ್ಟಿ ನಡೆಯುತ್ತಿತ್ತು. ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಇದೇ ವೇಳೆ ಒಂದು ಅಗ್ನಿ ಕಡೆ ಅಗ್ನಿಯ ಸ್ಪರ್ಶವಾಗಿದೆ. ಇದಾಗುತ್ತಲೇ ಇಡೀ ಮದುವೆ ಹಾಲ್‌ಗೆ ಬೆಂಕಿ ಆವರಿಸಿದೆ. ಕೂಡಲೇ ಕಿರುಚಾಡುತ್ತ ಜನ ಹೊರಗೆ ಬರಲು ಯತ್ನಿಸಿದರಾದರೂ ಬಹುತೇಕ ಮಂದಿ ಅಗ್ನಿ ಕೆನ್ನಾಲಗೆಗೆ ಸಿಲುಕಿದರು. ಇಡೀ ಕಲ್ಯಾಣ ಮಂಟಪ ಸುಟ್ಟು ಕರಕಲಾಗಿದ್ದು, ಬಹುತೇಕ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮನಕಲಕುವ ವಿಡಿಯೊ

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಅಗ್ನಿ ಅವಘಡ ಸಂಭವಿಸುತ್ತಲೇ ಹಲವು ಅಗ್ನಿ ಶಾಮಕ ವಾಹನಗಳು, ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಇಡೀ ಕಲ್ಯಾಣ ಮಂಟಪಕ್ಕೆ ಬೆಂಕಿ ಆವರಿಸಿತ್ತು. ಇಷ್ಟಾದರೂ ಸಿಬ್ಬಂದಿಯು 550 ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿರುವುದರಿಂದ ಹಾಗೂ ಇನ್ನೂ ಹಲವು ಜನ ಕಲ್ಯಾಣ ಮಂಟಪದಲ್ಲಿ ಸಿಲುಕಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸುಟ್ಟುಕರಕಲಾದ ವೆಡ್ಡಿಂಗ್‌ ಹಾಲ್

ಇದನ್ನೂ ಓದಿ: Car blast : ಗ್ಯಾಸ್‌ ತುಂಬಿಸುವಾಗ ಅಗ್ನಿ ಅವಘಡ; ಧಗಧಗನೆ ಹೊತ್ತಿ ಉರಿದ ಒಮಿನಿ ಕಾರು

ಅಗ್ನಿ ಅವಘಡದಲ್ಲಿ ನೂರಾರು ಜನ ಮೃತಪಟ್ಟಿರುವುದಕ್ಕೆ ಇರಾಕ್‌ ಪ್ರಧಾನಿ ಮೊಹಮ್ಮದ್‌ ಶಿಯಾ ಅಲ್‌ ಸುದಾನಿ (Mohammed Shia al-Sudani) ಸಂತಾಪ ಸೂಚಿಸಿದ್ದು, ಘಟನೆಯನ್ನು ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ, ಗಾಯಾಳುಗಳಿಗೆ ಚಿಕಿತ್ಸೆ, ಜನರ ರಕ್ಷಣೆಗೆ ಸಕಲ ರೀತಿಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮದುವೆ ಹಾಲ್‌ಅನ್ನು ಹಲವು ರೀತಿಯಲ್ಲಿ ಸಿಂಗರಿಸಿದ್ದು, ಅವುಗಳಿಗೆ ಬೆಂಕಿ ತಗುಲಿದ್ದೇ ಹೆಚ್ಚಿನ ಜನ ಮೃತಪಡಲು ಕಾರಣ ಎನ್ನಲಾಗಿದೆ. ಆದಾಗ್ಯೂ, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Continue Reading

ದೇಶ

UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!

UNGA Speech: 78ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಪಾಲ್ಗೊಂಡು ದೇಶದ ವಾದವನ್ನು ಮಂಡಿಸಿದರು.

VISTARANEWS.COM


on

Edited by

jai shankar
Koo

ವಿಶ್ವ ಸಂಸ್ಥೆ: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು(Respect for territorial integrity), ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಷೇರಿದಂತೆ ಅನೇಕ ವಿಷಯಗಳನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ (External affairs minister S Jaishankar) ಅವರು, ಮಂಗಳವಾ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ”ನಮಸ್ತೆ, ನಾನು ಭಾರತದಿಂದ ಬಂದಿದ್ದೇನೆ(Bharat)” ಎಂದು ಮಾತು ಆರಂಭಿಸಿದ ಜೈ ಶಂಕರ್ ಅವರು, ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಇದೇ ವೇಳೆ, ಪರೋಕ್ಷವಾಗಿ ಕೆನಡಾಕ್ಕೆ ಕುಟುಕಿದ ಜೈ ಶಂಕರ್ ಅವರು, ಭಯೋತ್ಪಾದನೆಯ ಪ್ರತಿಕ್ರಿಯೆಯು ರಾಜಕೀಯ ಅನುಕೂಲಕ್ಕಾಗಿ ನಿರ್ಧರಿಸಬಾರದು ಎಂದು ಹೇಳಿದರು(UNGA Speech).

ಲಸಿಕೆ ವರ್ಣಭೇದ ನೀತಿಯಂತಹ ಅನ್ಯಾಯವನ್ನು ಮರುಕಳಿಸಲು ನಾವು ಎಂದಿಗೂ ಅವಕಾಶವನ್ನು ನೀಡಬಾರದು. ಹವಾಮಾನ ಕ್ರಿಯೆಯು ಸಹ ಐತಿಹಾಸಿಕ ಜವಾಬ್ದಾರಿಗಳ ತಪ್ಪಿಸಿಕೊಳ್ಳುವಿಕೆಗೆ ಸಾಕ್ಷಿಯಾಗಲು ಸಾಧ್ಯವಿಲ್ಲ. ಆಹಾರ ಮತ್ತು ಶಕ್ತಿಯನ್ನು ಅಗತ್ಯವಿರುವವರಿಂದ ಶ್ರೀಮಂತರಿಗೆ ಸಾಗಿಸಲು ಮಾರುಕಟ್ಟೆಯ ಶಕ್ತಿಯನ್ನು ಬಳಸಬಾರದು ಎಂದು ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಹೇಳಿದರು.

ರಾಜಕೀಯ ಅನುಕೂಲವು ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸೆಗೆ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತದೆ ಎಂದು ನಾವು ಪರಿಗಣಿಸಬಾರದು. ಅದೇ ರೀತಿ, ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಒಳ್ಳೆಯದು ಎಂದು ಭಾರತೀಯ ವಿದೇಶಾಂಗ ಸಚಿವರು ಹೇಳಿದರು.

78 ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರ ಭಾಷಣವು ಗಮನ ಸೆಳೆಯಿತು. ನ್ಯಾಯಯುತ, ಸಮಾನ ಮತ್ತು ಪ್ರಜಾಪ್ರಭುತ್ವದ ವಿಶ್ವ ಕ್ರಮಕ್ಕಾಗಿ ಕರೆ ನೀಡಿದರು. ನಮ್ಮ ಚರ್ಚೆಗಳಲ್ಲಿ, ನಾವು ಸಾಮಾನ್ಯವಾಗಿ ನಿಯಮಾಧಾರಿತ ಆದೇಶದ ಪ್ರಚಾರವನ್ನು ಪ್ರತಿಪಾದಿಸುತ್ತೇವೆ. ಕಾಲಕಾಲಕ್ಕೆ, ಯುಎನ್ ಚಾರ್ಟರ್ಗೆ ಗೌರವವನ್ನು ಸಹ ಒಳಗೊಂಡಿರುತ್ತದೆ. ಆದರೆ ಎಲ್ಲಾ ಚರ್ಚೆಗಾಗಿ, ಇನ್ನೂ ಕೆಲವು ರಾಷ್ಟ್ರಗಳು ಕಾರ್ಯಸೂಚಿಯನ್ನು ರೂಪಿಸುತ್ತವೆ ಮತ್ತು ರೂಢಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತವೆ. ಇದು ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್‌ ಮಾತು

ಮಹಿಳಾ ಮಸೂದೆ ಪ್ರಸ್ತಾಪ

ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆಯೂ ವಿದೇಶಾಂಗ ಸಚಿವರು ಮಾತನಾಡಿದರು. “ನಮ್ಮ ಇತ್ತೀಚಿನ ಸಮರ್ಥನೆಯು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಶಾಸನ ಮಾಡಿದ್ದೇವೆ. ಪ್ರಜಾಪ್ರಭುತ್ವದ ಪ್ರಾಚೀನ ಸಂಪ್ರದಾಯಗಳು ಆಳವಾದ ಆಧುನಿಕ ಬೇರುಗಳನ್ನು ಹೊಂದಿರುವ ಸಮಾಜ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಪರಿಣಾಮವಾಗಿ, ನಮ್ಮ ಆಲೋಚನೆಗಳು, ವಿಧಾನಗಳು ಮತ್ತು ಕಾರ್ಯಗಳು ಹೆಚ್ಚು ಆಧಾರವಾಗಿವೆ ಮತ್ತು ಅಧಿಕೃತವಾಗಿವೆ ಎಂದು ಸಚಿವರು ಪ್ರತಿಪಾದಿಸಿದರು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

Kashmir Dispute: ಗಿಲ್ಗಿಟ್‌-ಬಾಲ್ಟಿಸ್ತಾನಕ್ಕೆ ಅಮೆರಿಕ ರಾಯಭಾರಿ ರಹಸ್ಯ ಭೇಟಿ! ಭಾರತಕ್ಕೆ ಶೀಘ್ರ ಸಿಗುತ್ತಾ ಸಿಹಿ ಸುದ್ದಿ?

Kashmir Dispute: ಪಾಕ್ ಆಕ್ರಮಿತ ಪ್ರದೇಶದ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಕ್ಕೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಭೇಟಿ ನೀಡಿರುವ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.

VISTARANEWS.COM


on

Edited by

David Blome
Koo

ನವದೆಹಲಿ: ಭಾರತ-ಪಾಕಿಸ್ತಾನ (India and Pakistan) ನಡುವಿನ ಕಾಶ್ಮೀರ ವಿವಾದ (Kashmir Dispute) ಬಗೆಹರಿಸಲು ಅಮೆರಿಕ (America) ಮಧ್ಯಸ್ಥಿಕೆಗೆ ಮುಂದಾಗಿದೆಯಾ? ಇಂಥದೊಂದು ಅನುಮಾನ ಮೂಡಲು ಕಾರಣವಿದೆ. ಜಿ20 ಶೃಂಗಸಭೆ (G20 Summit) ನಡೆಯುತ್ತಿರುವಾಗಲೇ ಅಮೆರಿಕನ್ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದರೆ, ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಡೇವಿಡ್ ಬ್ಲೋಮ್ (David Blome) ಅವರು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ ಪ್ರದೇಶದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ (Gilgit-Baltistan) ರಹಸ್ಯ ಭೇಟಿ ನೀಡಿದ್ದರು. ಈ ಕಾರಣಕ್ಕಾಗಿಯೇ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ (Eric Garcetti) ಅವರು ಮಾತ್ರ, ಪಾಕಿಸ್ತಾನ ಮತ್ತು ಭಾರತಗಳು ತಮ್ಮ ನಡುವಿನ ಈ ಸಮಸ್ಯೆಯವನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಅಮೆರಿಕ ರಾಯಭಾರಿಗೆ ಪ್ರತಿಕ್ರಿಯಿಸುವುದು ನನ್ನ ಕೆಲಸವಲ್ಲ. ಆದರೆ, ಅವರು ಆಗಲೇ ಅಲ್ಲಿದ್ದರು. ಜಿ20 ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನಿಯೋಗದ ಭಾಗವವಾಗಿ ನಾವಿದ್ದೇವೆ ಎಂದು ಅಮೆರಿಕದ ರಾಯಭಾರಿ 20 ನೇ ಭಾರತ-ಅಮೆರಿಕ ಆರ್ಥಿಕ ಶೃಂಗದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಶ್ಮೀರ ವಿಷಯದ ಬಗ್ಗೆ ಅಮೆರಿಕದ ಹೊಂದಿರುವ ನಿಲುವನ್ನು ರಾಯಭಾರಿ ಗಾರ್ಸೆಟ್ಟಿ ಅವರು ಪುನರುಚ್ಚಾರ ಮಾಡಿದರು. ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಯ ಮೂಲಕ ಪರಿಹರಿಸಬೇಕಾದ ದ್ವಿಪಕ್ಷೀಯ ವಿಷಯವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಹರಿಸಬೇಕಾದ ಸಮಸ್ಯೆಯಾಗಿದೆ ಮತ್ತು ಅಮೆರಿಕ ಸೇರಿದಂತೆ ಮೂರನೇ ವ್ಯಕ್ತಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಎರಿಕ್ ಗಾರ್ಸೆಟ್ಟಿ ಅವರು ಹೇಳಿದರು.

ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರು ಇತ್ತೀಚೆಗೆ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಖಾಸಗಿ ಭೇಟಿ ನೀಡಿದ್ದರು. ಈ ಘಟನೆಯೇ ಗಾರ್ಸೆಟ್ಟಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರೇರಣೆಯಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನವನ್ನು ನವದೆಹಲಿಯು, ಅವಿಭಜಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಅವಿಭಾಜ್ಯ ಅಂಗ ಎಂದು ಪರಿಗಣಿಸುತ್ತದೆ.

ಈ ಸುದ್ದಿಯನ್ನೂ ಓದಿ: G 20 Meeting: ಚೀನಾ ಮತ್ತೆ ಉದ್ಧಟತನ; ಕಾಶ್ಮೀರ ವಿವಾದಿತ ಪ್ರದೇಶ ಎಂದು ಹೇಳಿಕೆ, ಜಿ-20 ಸಭೆ ಬಹಿಷ್ಕಾರ

ಭೇಟಿಯ ವೇಳೆ ಪಾಕಿಸ್ತಾನದ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರು ಗಿಲ್ಗಿಟ್-ಬಾಲ್ಟಿಸ್ತಾನದ ಅನೇಕ ಮನರಂಜನೆಯ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಅವರು ಗಿಲ್ಗಿಟ್-ಬಾಲ್ಟಿಸ್ತಾನ್ ಅಸೆಂಬ್ಲಿಯ ಡೆಪ್ಯುಟಿ ಸ್ಪೀಕರ್ ಸಾದಿಯಾ ಡ್ಯಾನಿಶ್ ಮತ್ತು ಅಸೆಂಬ್ಲಿ ಸದಸ್ಯೆ ರಾಣಿ ಸನಮ್ ಫರ್ಯಾದ್ ಅವರೊಂದಿಗೆ ಸಭೆ ನಡೆಸಿದರು.

ಅಮೆರಿಕದ ರಾಜತಾಂತ್ರಿಕರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2002ರ ಅಕ್ಟೋಬರ್‌ನಲ್ಲಿ ಡೊನಾಲ್ಡ್ ಬ್ಲೋಮ್ ಅವರು ಮುಜಫರಾಬಾದ್‌ಗೆ ಭೇಟಿ ನೀಡಿ, ಪಾಕ್‌ನಿಂದ ನೇಮಕವಾಗಿರುವ ತನ್ವೀರ್ ಇಲ್ಯಾಸ್ ಅವರನ್ನು ಭೇಟಿ ಮಾಡಿದ್ದರು. 2005ರ ಭೂಕಂಪದಲ್ಲಿ ಮೃತಪಟ್ಟ ಜನರಿಗೆ ಈ ವೇಳೆ ಬ್ಲೋಮ್ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅಲ್ಲದೇ, ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯನ್ನು ದೃಢಪಡಿಸಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
HD DeveGowda HD Kumaraswamy and PM Narendra Modi on BJP JDS alliance
ಕರ್ನಾಟಕ7 mins ago

BJP JDS alliance : ವಿಜಯದಶಮಿ ನಂತರ ಜೆಡಿಎಸ್‌ ಸೀಟು ಹಂಚಿಕೆ ಅಂತಿಮ ಮಾತುಕತೆ!

Nayanthara Vignesh Shivan twin
South Cinema13 mins ago

Actress Nayanthara: ನಯನತಾರಾ -ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ಬರ್ತ್‌ಡೇ; ಕ್ಯೂಟ್‌ ಫೋಟೊಸ್ ಔಟ್‌!

Murder case in Kolara
ಕರ್ನಾಟಕ14 mins ago

Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!

Team India
ಕ್ರಿಕೆಟ್34 mins ago

World Cup 2023 : ಭಾರತ ವಿರುದ್ಧ ಗೆದ್ದವರು ವಿಶ್ವ ಕಪ್​ ಗೆಲ್ತಾರೆ; ಪಾಕ್​ ತಂಡ ಮಾಜಿ ಆಟಗಾರನ ಭವಿಷ್ಯ

ದೇಶ34 mins ago

Stadium row: ಕ್ರೀಡಾಂಗಣದಲ್ಲಿ ನಾಯಿ ಜತೆ ವಾಕಿಂಗ್‌ ಮಾಡಿದ್ದ ಅಧಿಕಾರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ!

Nithya Menen
South Cinema39 mins ago

Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ!

Narendra Modi
ದೇಶ43 mins ago

Lok Sabha Election 2024: 2.5 ಲಕ್ಷ ಗ್ರಾಮಗಳಲ್ಲಿ ಬಿಜೆಪಿ ‘ರಥ’ಯಾತ್ರೆ; ‘ಲೋಕ’ ಸಮರಕ್ಕೆ ರಣತಂತ್ರ

HD Devegowda Press meet for BJP JDS alliance
ಕರ್ನಾಟಕ51 mins ago

BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್‌ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ

Instagram message murder
ಅವಿಭಾಗೀಕೃತ55 mins ago

Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

gold rate today
ಕರ್ನಾಟಕ1 hour ago

Gold Rate Today: ಬೆಂಗಳೂರಿನಲ್ಲಿ ಇಳಿಯಿತು ಬಂಗಾರದ ಬೆಲೆ, ಎಷ್ಟಿದೆ ನೋಡಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ8 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌