ಇದೆಂಥ ಪ್ರೀತಿ! ಗೊಂಬೆಯನ್ನೇ ಮದುವೆಯಾದ ಯುವತಿ, ದಂಪತಿಗೀಗ ಪುಟಾಣಿ ಮಗು ಕೂಡ ಹುಟ್ಟಿದೆ! - Vistara News

ವಿದೇಶ

ಇದೆಂಥ ಪ್ರೀತಿ! ಗೊಂಬೆಯನ್ನೇ ಮದುವೆಯಾದ ಯುವತಿ, ದಂಪತಿಗೀಗ ಪುಟಾಣಿ ಮಗು ಕೂಡ ಹುಟ್ಟಿದೆ!

ಇದು ಹೆಣ್ಮಗಳೊಬ್ಬಳ ಗೊಂಬೆ ಪ್ರೀತಿಯ ವಿಚಿತ್ರ ಕಥೆ. ಆದರೆ, ಚಿಂದಿಯ ಗೊಂಬೆಯನ್ನೇ ಗಂಡನೆಂದು ಆರಾಧಿಸುತ್ತಿರುವ ಆಕೆ ಅದೆಷ್ಟೋ ವಿವಾಹಿತ ಹೆಣ್ಮಕ್ಕಳಿಗಿಂತ ಸುಖ, ನೆಮ್ಮದಿಯಿಂದ ಇದ್ದಾಳೆ ಅನ್ನುವುದು ಸತ್ಯ.

VISTARANEWS.COM


on

ರ್ಯಾಗ್‌ ಡಾಲ್ ಹಾಗೂ ಯುವತಿಯ ಮದುವೆ ಆನಂತರ ಇಬ್ಬರಿಗೂ ಜನಿಸದ ಮಗುವಿನ ಪೋಟೊ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ರೆಜಿಲ್: ಇತ್ತೀಚಿನ ದಿನಗಳಲ್ಲಿ ಮದುವೆಗಳು ವಿಚಿತ್ರವಾಗಿ ನಡೆಯುತ್ತಿರುವುದು ಸಾಮಾನ್ಯ ವಿಷಯ. ವಿದೇಶ ಅಷ್ಟೇ ಏಕೆ ಭಾರತದಲ್ಲೂ ವಿಚಿತ್ರ ಮದುವೆಯ ಬಗ್ಗೆ ಸಾಮಾಜಿಕ ಜಲತಾಣದಲ್ಲಿ ನಾವು ನೋಡ್ತಾ ಇರುತ್ತೇವೆ. ಗಂಡು-ಹೆಣ್ಣು ವಿಚಿತ್ರ ರೀತಿಯಲ್ಲಿ ಮದುವೆಯಾಗುವುದು, ಗಂಡು ಮಕ್ಕಳೇ ಮದುವೆ ಆಗುವುದು, ಹೆಣ್ಮಕ್ಕಳೇ ವಿವಾಹ ಮಾಡಿಕೊಳ್ಳುವುದು, ಹೆಣ್ಣು ತನ್ನನ್ನೇ ತಾನು ಮದುವೆ ಆಗೋದನ್ನೆಲ್ಲ ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬಳು ಗೊಂಬೆಯನ್ನು ಮದುವೆಯಾಗಿದ್ದಾಳೆ! ಅಷ್ಟೇ ಅಲ್ಲ, ಅವರಿಗೊಂದು ಮಗು ಕೂಡಾ ಹುಟ್ಟಿದೆ!

ಈ ಕಥೆಯ ನಾಯಕಿಯ ಹೆಸರು ಮೀರಿವೊನ್ ರೋಚಾ ಮೊರೇಸ್, ವಯಸ್ಸು 37. ಬ್ರೆಜಿಲ್‌ನ ನಿವಾಸಿ ಆಗಿರುವ ಮೋರಿಸ್‌ ಸದಾ ಉತ್ಸಾಹಿ. ಮೋರಿಸ್‌ಗೆ ನೃತ್ಯ ಎಂದರೆ ವಿಪರೀತ ಹುಚ್ಚು. ತನ್ನ ಗೆಳೆಯರೊಂದಿಗೆ ಈಕೆ ಅನೇಕ ಬಾರಿ ನೃತ್ಯ ಕೂಟಗಳಿಗೆ ಹೋಗುತ್ತಿದ್ದಳು. ಆದರೆ ತನಗೆ 37 ವರ್ಷ ಕಳೆದರೂ ಸಂಗಾತಿ ಇಲ್ಲ ಅನ್ನುವ ನೋವು ಅವಳನ್ನು ಕಾಡುತಿತ್ತು. ಈ ಕುರಿತು ಆಕೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಏನಾದರೂ ಮಾಡಿ ತನಗೊಬ್ಬ ಸಂಗಾತಿಯನ್ನು ಹುಡುಕಿಕೊಡುವಂತೆ ತಾಯಿಯ ಮೇಲೆ ಒತ್ತಡ ಹೇರಿದ್ದಳು.

ಈ ನಡುವೆ ಮಗಳು ಸಪ್ಪೆ ಇರುವುದನ್ನು ಸಹಿಸದ ಅಮ್ಮ ಮಗಳಿಗಾಗಿ ಒಂದು ಚಿಂದಿ ಗೊಂಬೆ (ರ‍್ಯಾಗ್‌ ಡಾಲ್) ತಯಾರಿಸುತ್ತಾಳೆ. ಹಾಗೂ ಆ ಗೊಂಬೆಗೆ ಮಾರ್ಷೆಲೋ ಎಂದು ನಾಮಕರಣ ಮಾಡುತ್ತಾಳೆ. ಅದನ್ನು ತನ್ನ ಮಗಳಿಗೆ ನೀಡುತ್ತಾಳೆ.

ರ್ಯಾಗ್‌ ಡಾಲ್ ಹಾಗೂ ಯುವತಿಯ ಮದುವೆ ಪೋಟೊ, ನಂತರ ಮಗುವಿನೊಂದಿಗಿನ ಪೋಟೊ

ಚಿಂದಿಯಿಂದ ಮಾಡಿದ ಗೊಂಬೆಯನ್ನು ನೋಡಿದ ಕೂಡಲೇ ಏನನಿಸಿತೋ ಏನೋ, ಈ ಹುಡುಗಿ ಅವನೇ ನನ್ನ ಗಂಡ ಅಂದುಕೊಂಡಳು!

ʻʻನನ್ನ ತಾಯಿ ಮಾರ್ಷೆಲೋನನ್ನು ಪರಿಚಯಿಸಿದ ದಿನವೇ ನಾನು ಅವನ ಪ್ರೀತಿಯಲ್ಲಿ ಬಿದ್ದೆ, ಮೊದಲ ನೋಟದಲ್ಲೇ ಅವನ ಮೇಲೆ ಪ್ರೀತಿಯಾಗಿತ್ತು, ನೃತ್ಯ ಸಂಗಾತಿ ಇಲ್ಲದ ನನ್ನ ಜೀವನಕ್ಕೆ ಮಾರ್ಷೆಲೋ ಹೊಸ ಅರ್ಥ ನೀಡಿದ್ದಾನೆʼ ಎಂದು ಹೇಳಿದ್ದಾಳೆ. ಈ ನಡುವೆ ಆಕೆ ನಂಬಲಸಾಧ್ಯವಾದ ವಿಷಯವೊಂದನ್ನು ಹೇಳಿದ್ದಾಳೆ! “ನನ್ನ ಹಾಗೂ ಮಾರ್ಸೆಲೋ ನಡುವಿನ ಪ್ರೀತಿಯಿಂದ ನಾನು ಗರ್ಭಿಣಿಯಾದೆ! ಆದರೆ, ಮದುವೆಗೆ ಮೊದಲು ಮಗು ಆಗುವುದು ಇಷ್ಟವಿಲ್ಲದ ಕಾರಣ ನಾನು ಬೇಗನೆ ಮದುವೆಯಾಗಲು ನಿರ್ಧರಿಸಿದೆʼʼ ಎಂದಿದ್ದಾಳೆ ಮೊರೇಸ್‌!

ರ್ಯಾಗ್‌ ಡಾಲ್ ಹಾಗೂ ಮೋರಿಸ್‌ ಮೊದಲ ರಾತ್ರಿಯ ಪೋಟೊ

“ನಮ್ಮ ಮದುವೆಯ ದಿನ ಬಹಳ ಮುಖ್ಯವಾದದ್ದು, ಹಾಗೂ ಅದ್ಬುತವಾದ ದಿನವಾಗಿತ್ತು. ಆ ದಿನ ನಾನು ಭಾವುಕಳಾಗಿದ್ದೆ ಹಾಗೂ ತುಂಬಾ ಖುಷಿಯಾಗಿದ್ದೆ. ಆವತ್ತು ಸುರಿದ ಮಳೆಯಿಂದ ನಮ್ಮ ಮದುವೆಗೆ ಮತ್ತಷ್ಟು ಕಳೆ ಬಂತು. ಮದುವೆ ಮಂಟಪದ ಆರಂಭದಿಂದ ಹಿಡಿದು ಮೊದಲ ರಾತ್ರಿಯವರೆಗೂ ನಾವಿಬ್ಬರೂ ತುಂಬಾ ಸಂತೋಷದಿಂದ ಸಮಯ ಕಳೆದೆವು” ಎಂದು ಮೊರೇಸ್‌ ಹೇಳಿದ್ದಾಳೆ.

ನಿಜವೆಂದರೆ ಅವರ ಮದುವೆಗೆ 250 ಅತಿಥಿಗಳು ಬಂದು ಶುಭ ಕೋರಿದ್ದಾರೆ. ಮದುವೆಯ ನಂತರ ಅವರಿಬ್ಬರೂ ಹನಿಮೂನ್‌ಗಾಗಿ ರಿಯೊ ಡಿ ಜನೈರೊದಲ್ಲಿನ ಬೀಚ್ ಹೌಸ್‌ಗೆ ಹೋಗಿದ್ದಾರೆ.

ಇದೆಲ್ಲಾ ಮುಗಿದ ನಂತರ ಮೇ 21ರಂದು ದಂಪತಿಗೊಂದು ಮಗು ಬಂದಿದೆ. ಅದಕ್ಕೆ ಮಾರ್ಷೆಲಿನೋ ಎಂದು ಹೆಸರಿಡಲಾಗಿದೆ. ಮೊರೇಸ್‌ ತನಗೆ ಮನೆಯಲ್ಲೇ ಹೆರಿಗೆ ಆಯ್ತು ಅಂತಾಳೆ!

ಯೆಸ್‌.. ಇದೆಲ್ಲವೂ ಆಕೆಯದೇ ಕಲ್ಪನಾ ಲೋಕ. ಆಕೆ ಗೊಂಬೆಯನ್ನೇ ಗಂಡ ಎಂದುಕೊಂಡಿದ್ದಾಳೆ. ಚಿಂದಿಯಿಂದ ರೂಪಿಸಿದ ಸಣ್ಣ ಗೊಂಬೆಯನ್ನು ಮಗು ಎಂದುಕೊಂಡಿದ್ದಾಳೆ. ಆದರೆ ಆಕೆಗೆ ಇದೆಲ್ಲ ನಕಲಿ ಅಲ್ವಾ ಎಂದರೆ ಆಕೆಗೆ ನೋವಾಗುತ್ತದಂತೆ, ಕೋಪ ಬರುತ್ತದಂತೆ. ʻʻನಾನು ಅವನೊಂದಿಗೆ ಸಂತೋಷವಾಗಿದ್ದೆನೆ, ನಮ್ಮಿಬ್ಬರ ವೈವಾಹಿಕ ಜೀವನ ನೆಮ್ಮದಿಯಿಂದ ಇದೆ. ನನ್ನ ಪತಿ ನನ್ನೊಂದಿಗೆ ಜಗಳ ಮಾಡೊಲ್ಲ, ನನ್ನ ಅರ್ಥ ಮಾಡಿಕೊಂಡಿದ್ದಾನೆ, ಮಾರ್ಷೆಲೋ ಒಬ್ಬ ಶ್ರೇಷ್ಠ ಹಾಗೂ ನಿಷ್ಠಾವಂತ ಪತಿ. ಸಮಾಜದಲ್ಲಿ ಜನ ಹೇಗಿದ್ದರೂ ಮಾತನಾಡಿಕೊಳ್ಳುತ್ತಾರೆ. ಆದರೆ ನಮ್ಮ ಖುಷಿಗಾಗಿ ನಾನು ಬದುಕುವೆʼʼ ಎನ್ನುವ ಮೊರೆಸ್‌ ಕೆಲವೊಮ್ಮೆ ಸರಿ ಅನಿಸಿಬಿಡುತ್ತಾಳಲ್ವಾ?

ಮದುವೆಯಾಗಿ ಗಂಡನಿಂದ ನೋವನುಭವಿಸುತ್ತಾ, ಆಗಾಗ ಜಗಳ ಮಾಡುತ್ತಾ, ನೆಮ್ಮದಿ ಕಳೆದುಕೊಳ್ಳುತ್ತಾ ಇರುವ ಅದೆಷ್ಟೋ ಹೆಣ್ಮಕ್ಕಳಿದ್ದಾರೆ. ಗಂಡ ಹೆಂಡಿರು ಮುಖಾಮುಖಿ ಮಾತನಾಡದೆ ಬದುಕುವವರೂ ಇದ್ದಾರೆ. ಅಂಥವರ ಮಧ್ಯೆ ಅತ್ಯಂತ ಆತ್ಮೀಯತೆಯ ಕಲ್ಪನಾ ಲೋಕ ಕೂಡಾ ನೆಮ್ಮದಿಯ ಅರಮನೆಯಾಗಿ ಬಿಡುವುದು ಸುಳ್ಳೇನಲ್ಲವಲ್ಲ!

ಇದನ್ನೂ ಓದಿ : Viral Video: ತನ್ನದೇ ಮದುವೆ ಸಂಭ್ರಮವನ್ನು ಸೂತಕವಾಗಿ ಬದಲಿಸಿದ ವರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್‌ ವಿಡಿಯೋ

Sharia Law: ಮುಂದಿನ ದಿನಗಳಲ್ಲಿ ಷರಿಯಾ ಕಾನೂನನ್ನು ಅಮೆರಿಕನ್ನರ ಮೇಲೆ ಹೇರಲಾಗುವಂತಹ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ರಿಪಬ್ಲಿಕ್‌ ಪಕ್ಷದ ಸದಸ್ಯ ಚಿಪ್‌ ರಾಯ್‌ ಕಳವಳ ವ್ಯಕ್ತಪಡಿಸಿದ್ದಾರೆ. ಗಡಿ ಭದ್ರತೆ ಮತ್ತು ವಿದೇಶಿಗರ ನೆಲೆ ಬಗ್ಗೆ ಅಮೆರಿಕ ಸಂಸತ್‌ನಲ್ಲಿ ಪ್ರಸ್ತಾಪಿಸಿದ ರಾಯ್‌, ಷರಿಯಾ ಕಾನೂನುಗಳ ಬಗ್ಗೆ ತಮಗೆ ಕೊಂಚ ಕಳವಳ ಇದ್ದೇ ಇದೆ ಎಂದು ಹೇಳಿದರು.

VISTARANEWS.COM


on

Sharia law
Koo

ಅಮೆರಿಕ: ಇದೇ ಮೊದಲ ಬಾರಿಗೆ ಷರಿಯಾ ಕಾನೂನು(Sharia Law) ಬಗ್ಗೆ ಅಮೆರಿಕ(America)ದಲ್ಲಿ ದನಿ ಎತ್ತಿ ಎದ್ದಿದೆ. ಮುಂದಿನ ದಿನಗಳಲ್ಲಿ ಷರಿಯಾ ಕಾನೂನನ್ನು ಅಮೆರಿಕನ್ನರ ಮೇಲೆ ಹೇರಲಾಗುವಂತಹ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ರಿಪಬ್ಲಿಕ್‌ ಪಕ್ಷದ ಸದಸ್ಯ ಚಿಪ್‌ ರಾಯ್‌(Rep. Chip Roy) ಕಳವಳ ವ್ಯಕ್ತಪಡಿಸಿದ್ದಾರೆ. ಗಡಿ ಭದ್ರತೆ ಮತ್ತು ವಿದೇಶಿಗರ ನೆಲೆ ಬಗ್ಗೆ ಅಮೆರಿಕ ಸಂಸತ್‌ನಲ್ಲಿ ಪ್ರಸ್ತಾಪಿಸಿದ ರಾಯ್‌, ಷರಿಯಾ ಕಾನೂನುಗಳ ಬಗ್ಗೆ ತಮಗೆ ಕೊಂಚ ಕಳವಳ ಇದ್ದೇ ಇದೆ ಎಂದು ಹೇಳಿದರು. ಇದೀಗ ಅವರ ಈ ವಿಡಿಯೋ ಪ್ರಪಂಚಾದ್ಯಂತ ಬಹಳ ಸದ್ದು ಮಾಡುತ್ತಿದೆ. ಮತ್ತು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್‌(Viral video) ಆಗುತ್ತಿದೆ.

ರಾಯ್‌ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ರಾಯ್‌, ಮುಸ್ಲಿಮರ ಪ್ರತ್ಯೇಕ ಕಾನೂನು ಆಗಿರುವ ಷರಿಯಾ ಕಾನೂನು ಬಗ್ಗೆ ಕಳವಳ ವ್ಯಕ್ತಪಡಿಸಿದರು. ಯಾರಾದಾರೂ ಇಂಗ್ಲೆಂಡ್‌ನಲ್ಲಿ ಏನಾಗ್ತಿದೆ ಎಂಬುದನ್ನು ಗಮನಿಸುತ್ತಿದ್ದೀರಾ? ಅಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಬಂದು ನೆಲೆಸಿದ್ದಾರೆ. ಅಲ್ಲಿ ನೆಲೆವೂರಿರುವ ಅವರು ಏನು ಮಾಡುತ್ತಿದ್ದಾರೆ ಗೊತ್ತೇ? ಅಲ್ಲಿ ಇಸ್ರೇಲ್‌ ವಿರುದ್ಧ ಏನಾದರೂ ಘಟನೆಗಳು ನಡೆದಾಗ ಅದನ್ನು ಸಂಭ್ರಮಿಸುತ್ತಾರೆ. ನೂತನವಾಗಿ ಚುನಾಯಿತನಾಗಿರುವ ಅಲ್ಲಿನ ಸಂಸತ್‌ ಸದಸ್ಯ ಮೋತಿನ್‌ ಅಲಿ ಕೂಡ ಅವರಿಗೆ ಬೆಂಬಲ ನೀಡುತ್ತಾರೆ. ಇಂತಹ ಸ್ಥಿತಿ ಅಮೆರಿಕದಲ್ಲೂ ಬರಬಹುದೆಂಬ ಆತಂಕ ನನಗಿದೆ ಎಂದು ಹೇಳಿದರು. ಅಲಿ ತಮ್ಮ ಗೆಲುವಿನ ಬೆನ್ನಲ್ಲೇ ಪ್ಯಾಲೆಸ್ತೀನ್‌ ಧ್ವಜ ಹಿಡಿ ಅಲ್ಲಾಹು ಅಕ್ಬರ್‌ ಎಂಬು ಘೋಷಣೆ ಕೂಗುತ್ತಾ, ಇದು ಗಾಜಾ ಜನರ ಗೆಲವು ಎಂದು ಹೇಳಿದ್ದರು. ಈ ವಿಡಿಯೋ ಬಹಳ ವೈರಲ್‌ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಯ್‌, ಶೀಘ್ರದಲ್ಲೇ ಅಮೆರಿಕಕ್ಕೆ ಇಂತಹ ಸ್ಥಿತಿ ಬರುತ್ತದೆ ಎಂದು ಬರೆದುಕೊಳ್ಳುವ ಮೂಲ ಗಮನ ಸೆಳೆದಿದ್ದರು. ಇದಾದ ಬಳಿಕ ಅಲಿ ಕ್ಷಮೆಯನ್ನೂ ಯಾಚಿಸಿದ್ದರು. ಇದೇ ವಿಚಾರವನ್ನು ಪ್ರಸ್ತಾಪಿಸಿ ರಾಯ್‌ ಸಂಸತ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ನಂತರ ಅವರು ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆ ಪ್ರಸ್ತಾಪಿಸಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಕ್ಕೆ ವಿದೇಶಿಗರು ವಲಸೆ ಬರುತ್ತಿದ್ದಾರೆ. ವಿದೇಶಿಗರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಏರಿಕೆ ಆಗುತ್ತಿದೆ. ನಮ್ಮಲ್ಲಿ 51.5 ಮಿಲಿಯನ್‌ ವಿದೇಶಿ ಮೂಲದ ಪ್ರಜೆಗಳಿದ್ದಾರೆ. ಅವರಿಗೆ 20 ರಿಂದ 25 ಮಿಲಿಯನ್‌ ಮಕ್ಕಳಿವೆ. ನಮ್ಮ ಜನಸಂಖ್ಯೆಗಿಂತಲೂ ಅವರ ಜನಸಂಖ್ಯೆ ಶೇ.20ಕ್ಕಿಂತ ಹೆಚ್ಚಿದೆ. ಇದು ಖುಷಿ ವಿಚಾರವೇ? ಎಂದು ಅವರು ಪ್ರಶ್ನಿಸಿದ್ದಾರೆ. ಚಿಪ್‌ ರಾಯ್‌ ಈ ಹೇಳಿಕೆ ಇಡೀ ಪ್ರಪಂಚದ ಗಮನ ಸೆಳೆದಿದ್ದು, ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

ಯಾರು ಈ ಚಿಪ್‌ ರಾಯ್‌?

ಚಾರ್ಲ್ಸ್ ಯುಜೀನ್ ” ಚಿಪ್ ” ರಾಯ್ ಒಬ್ಬ ಅಮೇರಿಕನ್ ವಕೀಲ ಮತ್ತು ರಾಜಕಾರಣಿಯಾಗಿದ್ದು ಟೆಕ್ಸಾಸ್‌ನ US ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ . ರಿಪಬ್ಲಿಕನ್ ಪಕ್ಷದ ಸದಸ್ಯ , ರಾಯ್ ಜನವರಿ 3, 2019 ರಂದು ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್‌ಗೆ ಆಯ್ಕೆಯಾಗುವ ಮೊದಲು, ಅವರು ಸೆನೆಟರ್ ಟೆಡ್ ಕ್ರೂಜ್‌ಗೆ ಸಿಬ್ಬಂದಿ ಮುಖ್ಯಸ್ಥರಾಗಿ ಮತ್ತು ಟೆಕ್ಸಾಸ್‌ನ ಮೊದಲ ಸಹಾಯಕ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದರು. ಹೌಸ್ ಫ್ರೀಡಂ ಕಾಕಸ್‌ನ ಸದಸ್ಯ ಮತ್ತು ನೀತಿ ಅಧ್ಯಕ್ಷರಾದ ರಾಯ್ ಅವರನ್ನು ಹೌಸ್ ರಿಪಬ್ಲಿಕನ್ ಕಾನ್ಫರೆನ್ಸ್‌ನ ಬಲಪಂಥೀಯ ಬಣದ ಸದಸ್ಯ ಎಂದು ಪರಿಗಣಿಸಲಾಗಿದೆ .

Continue Reading

ವಿದೇಶ

Indian Sailors Released: ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು; ಐವರು ಭಾರತೀಯ ನಾವಿಕರು ರಿಲೀಸ್‌

Indian Sailors Released:ಇರಾನ್‌ ಜೊತೆಗಿನ ಭಾರತದ ಮಾತುಕತೆ ಯಶಸ್ವಿಯಾಗಿದ್ದು, ವಶಕ್ಕೆ ಪಡೆದಿರುವ ಐವರನ್ನು ರಿಲೀಸ್‌ ಮಾಡಲು ಇರಾನ್‌ ಒಪ್ಪಿದ್ದು, ಅವರನ್ನು ಈಗಾಗಲೇ ತಾಯ್ನಾಡಿಗೆ ಕಳುಹಿಸಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ. ಇದು ಭಾರತದ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.

VISTARANEWS.COM


on

Indian Sailors Released
Koo

ಟೆಹ್ರಾನ್‌: ವಶಕ್ಕೆ ಪಡೆದಿದ್ದ ಇಸ್ರೇಲ್‌(Israel) ಮೂಲದ ಹಡಗಿನಲ್ಲಿದ್ದ ಐವರು ಭಾರತೀಯರನ್ನು(Indian Sailors Released) ಇರಾನ್‌(Iran) ಕೊನೆಗೂ ಬಿಡುಗಡೆಗೊಳಿಸಿದೆ. ಇರಾನ್‌ ಜೊತೆಗಿನ ಭಾರತದ ಮಾತುಕತೆ ಯಶಸ್ವಿಯಾಗಿದ್ದು, ವಶಕ್ಕೆ ಪಡೆದಿರುವ ಐವರನ್ನು ರಿಲೀಸ್‌ ಮಾಡಲು ಇರಾನ್‌ ಒಪ್ಪಿದ್ದು, ಅವರನ್ನು ಈಗಾಗಲೇ ತಾಯ್ನಾಡಿಗೆ ಕಳುಹಿಸಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ(Indian Embassy) ಕಚೇರಿ ಹೇಳಿದೆ. ಇದು ಭಾರತದ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.

ಈ ರಾಜತಾಂತ್ರಿಕ ಗೆಲುವಿಗೆ ಬಂದರ್ ಅಬ್ಬಾಸ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, ಇರಾನ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ. ಇಸ್ರೇಲ್-ಸಂಬಂಧಿತ ಸರಕು ಹಡಗನ್ನು ಏ.13 ರಂದು ಇರಾನ್ ವಶಪಡಿಸಿಕೊಂಡಿತು. ಅದರಲ್ಲಿ 17 ಭಾರತೀಯರು ಇದ್ದರು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಬಳಿ ಕಂಟೈನರ್ ಹಡಗನ್ನು ವಶಪಡಿಸಿಕೊಂಡಿತ್ತು. ಏ.13 ರಂದು ಇರಾನ್ ವಶಪಡಿಸಿಕೊಂಡಿದ್ದ ಇಸ್ರೇಲ್ ಸಂಪರ್ಕಿತ ಸರಕು ಹಡಗು ‘ಎಂಎಸ್‌ಸಿ ಏರೀಸ್’ನ 17 ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರಾದ ಕೇರಳದ ತ್ರಿಶೂರ್‌ನ ಆನ್ ಟೆಸ್ಸಾ ಜೋಸೆಫ್ ಏ.18 ರಂದು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದರು. 17 ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇತರರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಒಪ್ಪಂದದ ಜವಾಬ್ದಾರಿಗಳನ್ನು ಪೂರೈಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ಬಿಡುಗಡೆಗೊಂಡವರಲ್ಲಿ ಐವರು ಭಾರತೀಯರು, ಓರ್ವ ಫಿಲಿಪ್ಪೀನ್ಸ್ ಹಾಗೂ ಓರ್ವ ಎಸ್ಟೋನಿಯಾ ಪ್ರಜೆಗಳು ಸೇರಿದ್ದಾರೆ. ಪೋರ್ಚುಗೀಸ್ ಧ್ವಜ ಹೊಂದಿರುವ ಎಂಎಸ್‍ಸಿ ಏರೀಸ್ ಹಡಗನ್ನು ಎಪ್ರಿಲ್ 13ರಂದು ಇರಾನ್‍ನ ರೆವೊಲ್ಯುಷನರಿ ಗಾಡ್ರ್ಸ್ ವಶಕ್ಕೆ ಪಡೆದಿತ್ತು. ಕಂಟೈನರ್ ಹಡಗು ಇಸ್ರೇಲ್ ಜತೆ ಸಂಪರ್ಕ ಹೊಂದಿತ್ತು ಎಂದು ಇರಾನ್ ವಿದೇಶಾಂಗ ಇಲಾಖೆ ಹೇಳಿತ್ತು. ಇರಾನ್‍ನ ಕ್ರಮವನ್ನು ಸ್ವಾಗತಿಸಿರುವ ಪೋರ್ಚುಗಲ್, ಉಳಿದ 17 ಸಿಬ್ಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ. ಹಡಗಿನ ಎಲ್ಲಾ ಸಿಬ್ಬಂದಿಗಳನ್ನೂ ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಆದರೆ ಜಫ್ತಿ ಮಾಡಿರುವ ಹಡಗನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಕಳೆದ ವಾರ ಹೇಳಿದ್ದರು.

ಇದನ್ನೂ ಓದಿ:Actor Ravichandran: ಕನಸುಗಾರನ ʻಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌!

ಇರಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಭಾರತ ವಿದೇಶಾಂಗ ಇಲಾಖೆ ಭಾರತೀಯರ ಸುರಕ್ಷಿತ ಬಿಡುಗಡೆ ಒತ್ತಾಯಿಸಿತ್ತು. ಖುದ್ದು ಕೇಂದ್ರ ಸಚಿವ ಜೈಶಂಕರ್​ ಸಹ ಇರಾನ್ ಜತೆ ಮಾತುಕತೆ ನಡೆಸಿ ಭಾರತೀಯರನ್ನು ಬಿಟ್ಟು ಕಳುಹಿಸುವಂತೆ ಮನವಿ ಮಾಡಿದ್ದು, ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು.


Promoted

Continue Reading

ವಿದೇಶ

America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

America v/s Russia:ಅಮೆರಿಕವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ ಎಂದು ರಷ್ಯಾ ಹೇಳಿತ್ತು. ಇದೀಗ ರಷ್ಯಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ, ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಅಮೆರಿಕ ಎಂದಿಗೂ ಬಯಸುವುದಿಲ್ಲ. ಭಾರತ ಮಾತ್ರ ಅಲ್ಲ ಬೇರೆ ಯಾವುದೇ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

VISTARANEWS.COM


on

America v/s Russia
Koo

ವಾಷಿಂಗ್ಟನ್‌: ಅಮೆರಿಕದಲ್ಲಿ ಖಲಿಸ್ತಾನಿ ನಾಯಕ (Khalistan Leader) ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಯ ಸಂಚಿನಲ್ಲಿ (Murder plot) ಭಾರತದ ʼರಾʼ (RAW) ಅಧಿಕಾರಿಯ ಕೈವಾಡದ ಕುರಿತು ಅಮೆರಿಕ(America)ದ ಆರೋಪಕ್ಕೆ ತಿರುಗೇಟು ನೀಡಿದ್ದ ರಷ್ಯಾ(America v/s Russia), ಅಮೆರಿಕವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ ಎಂದು ಹೇಳಿತ್ತು. ಇದೀಗ ರಷ್ಯಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ, ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಅಮೆರಿಕ ಎಂದಿಗೂ ಬಯಸುವುದಿಲ್ಲ. ಭಾರತ ಮಾತ್ರ ಅಲ್ಲ ಬೇರೆ ಯಾವುದೇ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಈ ಬಗ್ಗೆ ಮಾತನಾಡಿದ್ದು, ಭಾರತದ ಚುನಾವಣೆ ಬಗ್ಗೆ ಅಲ್ಲಿನ ಜನ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಹೊರತು ನಾವಲ್ಲ. ಅಮೆರಿಕದಲ್ಲಿ ಭಾರತ ಕೆಲವೊಂದು ಕಾನೂನು ಕಾಯ್ದೆಗಳನ್ನು ಉಲ್ಲಂಘನೆಯಾದಾಗ ಇಂತಹ ಆರೋಪಗಳು ಸಹಜ ಎಂದು ಹೇಳಿದ್ದಾರೆ.

ರಷ್ಯಾ ಹೇಳಿದ್ದೇನು?

ಪನ್ನುನು ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದ ಅಮೆರಿಕಕ್ಕೆ ಟಾಂಗ್‌ ನೀಡಿದ್ದ ರಷ್ಯಾ, ಭಾರತದಲ್ಲಿ ಆಂತರಿಕ ರಾಜಕೀಯ ಸ್ಥಿತಿಗತಿಯನ್ನು ಅಲ್ಲೋಲ ಕಲ್ಲೋಲ ಮಾಡಲು ಅಮೆರಿಕ ಯತ್ನಿಸುತ್ತಿದೆ. ಭಾರತೀಯ ರಾಷ್ಟ್ರೀಯತೆ ಮನಸ್ಥಿತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳದ ಅಮೆರಿಕ ಸುಖಾ ಸುಮ್ಮನೆ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆರೋಪ ಮಾಡುತ್ತಿದೆ. ಭಾರತದ ಆಂತರಿಕ ವಿಚಾರದಲ್ಲಿ ಅಮೆರಿಕ ನಿರಂತರವಾಗಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಭಾರತವನ್ನು ಗೌರವಿಸುವ ಮನಸ್ಸು ಅಮೆರಿಕಕ್ಕೆ ಇಲ್ಲ. ಅಮೆರಿಕದ ಆರೋಪಗಳು ಸುಳ್ಳು ಮತ್ತು ನಿರಾಧಾರವಾಗಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಹೇಳಿದೆ.

ಇದನ್ನೂ ಓದಿ:Neeraj Chopra: 3 ವರ್ಷದ ಬಳಿಕ ದೇಶೀಯ ಕ್ರೀಡಾಕೂಟದಲ್ಲಿ ನೀರಜ್​ ಚೋಪ್ರಾ ಸ್ಪರ್ಧೆ

ವಿಕ್ರಮ್ ಯಾದವ್ ಎಂದು ಗುರುತಿಸಲಾದ ರಾ ಅಧಿಕಾರಿಯು ಯುಎಸ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್‌ನ “ತನಿಖಾ” ವರದಿ ಮಾಡಿತ್ತು. ಆ ಸಂದರ್ಭದಲ್ಲಿ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಮಂತ್ ಗೋಯೆಲ್ ಆಗಿದ್ದರು ಎಂದು ವರದಿ ತಿಳಿಸಿದೆ. ಖಲಿಸ್ತಾನ್ ಚಳವಳಿಯ ಪ್ರಮುಖ ಉಗ್ರರಲ್ಲಿ ಒಬ್ಬನಾದ ಗುರುಪತ್ವಂತ್ ಸಿಂಗ್ ಪನ್ನುನ್, ಸಿಖ್ಸ್ ಫಾರ್ ಜಸ್ಟಿಸ್‌ನ ಕಾನೂನು ಸಲಹೆಗಾರ ಮತ್ತು ವಕ್ತಾರನಾಗಿದ್ದಾನೆ. ಇದು ಪ್ರತ್ಯೇಕ ಸಿಖ್ ದೇಶದ ಕಲ್ಪನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರ ಗುರುಪತ್ವಂತ್ ಸಿಂಗ್ ಪನ್ನೂನ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಹಿಂದೂ ಮುಖಂಡನೊಬ್ಬನನ್ನು ಹತ್ಯೆ ಮಾಡಿದ್ದ ಆರೋಪವೂ ಈತನ ಮೇಲಿತ್ತು. ಹೀಗಾಗಿ 2007ರಲ್ಲಿ ಅಮೆರಿಕಕ್ಕೆ ಪರಾರಿಯಾಗಿದ್ದ. ಮತ್ತೊಂದೆಡೆ ಕೆನಡಾ ಕೂಡ ಪನ್ನುನ್‌ ಬೆಂಬಲಕ್ಕೆ ನಿಂತಿದೆ. ಕೆನಡಾದಲ್ಲಿ ಸಿಕ್ಖರು ಹೆಚ್ಚಿನ ಪ್ರಮಾಣದಲ್ಲೇ ಇದ್ದು, ಹೀಗಾಗಿ ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರಾಡೊ ಖಲಿಸ್ಥಾನಿ ಉಗ್ರರ ಜತೆಗೆ ನಿಂತಿದ್ದಾರೆ ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Maldives anti-India stance : ಭಾರತ ವಿರೋಧಿ ಕ್ರಮಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ ಮಾಲ್ಡೀವ್ಸ್​​

Maldives anti-India stance: ಭಾರತ ವಿರೋಧಿ ಹೇಳಿಕೆಗಳು ನಮ್ಮ ಸರ್ಕಾರದ ನಿಲುವಲ್ಲ ಎಂದು ನಾವು ಆರಂಭದಲ್ಲಿಯೇ ಹೇಳಿದ್ದೇವೆ. ಅದನ್ನು ಮಾಡಬಾರದಿತ್ತು ಎಂಬುದನ್ನೂ ಅರಿತುಕೊಂಡಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ತಿಳುವಳಿಕೆ ಸೃಷ್ಟಿಯಾಗಿದೆ. ಏನಾಯಿತು ಎಂದು ಮಾಲ್ಡೀವ್ಸ್ ಮತ್ತು ಭಾರತದ ಸರ್ಕಾರಗಳು ಅರ್ಥಮಾಡಿಕೊಂಡಿವೆ” ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ್ದಾರೆ.

VISTARANEWS.COM


on

Maldives anti-India stance
Koo

ನವ ದೆಹಲಿ: ಭಾರತದ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಮಾಲ್ಡೀವ್ಸ್ ಪಶ್ಚಾತಾಪ ವ್ಯಕ್ತಪಡಿಸಿದೆ. ಅವಹೇಳನಕಾರಿ ಹೇಳಿಕೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ದ್ವೀಪ ರಾಷ್ಟ್ರ ವಿದೇಶಾಂಗ ಸಚಿವ ಮೂಸಾ ಜಮೀರ್ ಗುರುವಾರ ಭರವಸೆ ನೀಡಿದ್ದಾರೆ. ಭಾರತ ಭೇಟಿಯಲ್ಲಿರುವ ಜಮೀರ್, ಮಾಲ್ಡೀವ್ಸ್ ಮತ್ತು ಭಾರತ ಸರ್ಕಾರಗಳು ಆಗಿರುವ ವಿಷಯಗಳನ್ನು ಅರ್ಥಮಾಡಿಕೊಂಡಿವೆ. ಆ ಹಂತವನ್ನು ದಾಟಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

“ಭಾರತ ವಿರೋಧಿ ಹೇಳಿಕೆಗಳು ನಮ್ಮ ಸರ್ಕಾರದ ನಿಲುವಲ್ಲ ಎಂದು ನಾವು ಆರಂಭದಲ್ಲಿಯೇ ಹೇಳಿದ್ದೇವೆ. ಅದನ್ನು ಮಾಡಬಾರದಿತ್ತು ಎಂಬುದನ್ನೂ ಅರಿತುಕೊಂಡಿದ್ದೇವೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು ತಿಳುವಳಿಕೆ ಸೃಷ್ಟಿಯಾಗಿದೆ. ಏನಾಯಿತು ಎಂದು ಮಾಲ್ಡೀವ್ಸ್ ಮತ್ತು ಭಾರತದ ಸರ್ಕಾರಗಳು ಅರ್ಥಮಾಡಿಕೊಂಡಿವೆ” ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರು ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಮೋದಿ ಲಕ್ಷ್ಮ ದ್ವೀಪಕ್ಕೆ ಭೇಟಿ ನೀಡಿದ್ದ ಬಳಿಕ ಅವರು ಈ ಅನಪೇಕ್ಷಿತ ಹೇಳಿಕೆಗಳನ್ನು ಕೊಟ್ಟಿದ್ದರು. ನಂತರ ಉಭಯ ದೇಶಗಳ ನಡುವಿನ ಸಂಬಂಧದ ಹದಗೆಟ್ಟಿತ್ತು.

ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲ್ಡೀವ್ಸ್ ತೊರೆಯಲು ಮೊಹಮ್ಮದ್ ಮುಯಿಝು ಮೇ 10 ರ ಗಡುವನ್ನು ನಿಗದಿಪಡಿಸಿದ ನಂತರ ಸಂಬಂಧಗಳು ಮತ್ತಷ್ಟು ಹಾಳಾಗಿದ್ದವು. ಏತನ್ಮಧ್ಯೆ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮೂಸಾ ಜಮೀರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ-ಮಾಲ್ಡೀವ್ಸ್ ಸಂಬಂಧಗಳ ಅಭಿವೃದ್ಧಿಯು “ಪರಸ್ಪರ ಹಿತಾಸಕ್ತಿಗಳನ್ನು” ಆಧರಿಸಿದೆ ಎಂದು ಒಪ್ಪಿಕೊಂಡಿದ್ದಾರೆ.

ಮಾಲ್ಡೀವ್ಸ್ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಂಬಂಧ ವೃದ್ಧಿಸುವ ಮತ್ತು ಪರಸ್ಪರ ವಿನಿಮಯ ಹೆಚ್ಚಿಸುವ ಬಗ್ಗೆ ನಾವು ನಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಜಮೀರ್ ಸಭೆಯ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

ಪ್ರವಾಸೋದ್ಯಮ ಕುಸಿತದ ಬಗ್ಗೆ ಪ್ರತಿಕ್ರಿಯೆ

ಮಾಲ್ಡೀವ್ಸ್ ಗೆ ಪ್ರಯಾಣಿಸಲು ಬಯಸುವ ಎಲ್ಲಾ ಭಾರತೀಯರಿಗೆ ವೈಯಕ್ತಿಕವಾಗಿ ಮತ್ತು ಮಾಲ್ಡೀವ್ಸ್ ಜನರ ಪರವಾಗಿ ಆತ್ಮೀಯ ಸ್ವಾಗತ ನೀಡಲು ಬಯಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಮಾಲ್ಡೀವ್ಸ್​ಗೆ ಭೇಟಿ ನೀಡುವುದನ್ನು ಮುಂದುವರಿಸಲು ನಾವು ಎಲ್ಲಾ ಭಾರತೀಯ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಭಾರತೀಯ ಪ್ರಯಾಣಿಕರು ನಿಜವಾಗಿಯೂ ಮಾಲ್ಡೀವ್ಸ್​​​ಗೆ ಗಮನಾರ್ಹ ಸಂಖ್ಯೆಯಲ್ಲಿ ಆಗಮಿಸಿದರು. ಆ ಪ್ರವೃತ್ತಿ ಮುಂದುವರೆದಿದೆ. ಕಳೆದ ಎರಡು ತಿಂಗಳುಗಳಲ್ಲಿ, ನಾವು 16 ರಿಂದ 17% ಹೆಚ್ಚಳ ಕಂಡಿದ್ದೇವೆ. ಭಾರತೀಯ ಮಾರುಕಟ್ಟೆಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Continue Reading
Advertisement
Rahul gandhi
ದೇಶ7 mins ago

Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Madhavi Latha
ದೇಶ10 mins ago

ಹೈದರಾಬಾದ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಮುಸ್ಲಿಂ ಗಲ್ಲಿಗಳಲ್ಲಿ ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ

Covishield Vaccine
ಪ್ರಮುಖ ಸುದ್ದಿ21 mins ago

Covishield: ಭಾರತದಲ್ಲೂ ಎಲ್ಲಾ ಕೋವಿಡ್ ಲಸಿಕೆಗಳ ಸೈಡ್‌ ಎಫೆಕ್ಟ್‌ ಪರಿಶೀಲಿಸಿ: ವೈದ್ಯರ ಒತ್ತಾಯ

Kannada New Movie
ಸಿನಿಮಾ37 mins ago

Kannada New Movie: ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಮುನ್ನುಡಿ; ಆನೆಗುಡ್ಡೆ ಗಣಪತಿ ದೇಗುಲದಲ್ಲಿ ಮುಹೂರ್ತ

Aravind Kejriwal
ಪ್ರಮುಖ ಸುದ್ದಿ1 hour ago

Arvind Kejriwal: ಜೂನ್‌ 1ರವರೆಗೆ ಕೇಜ್ರಿವಾಲ್‌ಗೆ ಜಾಮೀನು, ಮತದಾನ ಮುಗಿಯುವವರೆಗೆ ರಿಲೀಫ್‌

KIA bengaluru terminal 2
ಪ್ರಮುಖ ಸುದ್ದಿ1 hour ago

Terminal 2: ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ; ವಿಮಾನ ಹಾರಾಟ ಅಸ್ತವ್ಯಸ್ತ

Prajwal Revanna Case Pen drive case personal quarrel No threat to BJP and JDS alliance says R Ashoka
ರಾಜಕೀಯ1 hour ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ ವೈಯಕ್ತಿಕ ಜಗಳ; ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಧಕ್ಕೆ ಇಲ್ಲ: ಆರ್.‌ ಅಶೋಕ್‌

Physical Abuse The public prosecutor called the client woman to the lodge
ಕ್ರೈಂ1 hour ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

Roopa Iyer
ಕ್ರೈಂ2 hours ago

Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Viral video
ಕ್ರೈಂ2 hours ago

Viral Video:ಛೀ.. ಎಂಥಾ ಹೇಯ ಕೃತ್ಯ! ಶಾಲಾ ಬಾಲಕಿ ಮೇಲೆ ಆಟೋ ಚಾಲಕನ ನೀಚ ಕೃತ್ಯ; ಶಾಕಿಂಗ್‌ ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ1 hour ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ3 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ4 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ11 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ18 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ19 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ20 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌