Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ? - Vistara News

ವಿದೇಶ

Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?

Akshardham : ಅಮೆರಿಕದಲ್ಲಿ ನಿರ್ಮಾಣವಾದ ಅತೀ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 8ರಂದು ನ್ಯೂಜೆರ್ಸಿಯಲ್ಲಿ(New Jersey)ಅಕ್ಷರಧಾಮ ದೇಗುಲವನ್ನು(Akshardham) ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Akshardham
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂ ಜೆರ್ಸಿ: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದ್ದು, ಭಾರತದ ಹೊರಗೆ ನಿರ್ಮಾಣವಾದ ಅತೀ ದೊಡ್ಡ ಹಿಂದೂ ದೇವಾಲಯವೊಂದರ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 8ರಂದು ಸ್ವಾಮಿ ನಾರಾಯಣ್‌ ಅಕ್ಷರಧಾಮ(Akshardham) ದೇವಾಲಯವನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ(New Jersey)ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಲ್ಲಿದೆ?

ನ್ಯೂಯಾರ್ಕ್‌ನ ವಿಶ್ವ ಪ್ರಸಿದ್ಧ ಟೈಮ್ಸ್‌ ಸ್ವೈರ್‌ನಿಂದ(Times Square) ದಕ್ಷಿಣಕ್ಕೆ 60 ಮೈಲಿ(90 ಕಿ.ಮೀ.) ಮತ್ತು ವಾಷಿಂಗ್ಟನ್‌ ಡಿಸಿಯಿಂದ(Washington DC) ಉತ್ತರಕ್ಕೆ 180 ಮೈಲಿ(289 ಕಿ.ಮೀ.) ದೂರದಲ್ಲಿ ಈ ಬಿಎಪಿಎಸ್‌ ಸ್ವಾಮಿನಾರಾಯಣ್‌ ಅಕ್ಷರಧಾಮವಿದೆ. ನ್ಯೂಜೆರ್ಸಿಯ ರಾಬಿನ್ಸನ್‌ವಿಲ್ಲೆ ಟೌನ್‌ಶಿಪ್‌ನಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಅಮೆರಿಕಾದ 12,500ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರು 2011ರಿಂದ 2023ರ ತನಕ ಸುಮಾರು 12 ವರ್ಷಗಳ ಕಾಲ ಈ ದೇಗುಲ ನಿರ್ಮಿಸಲು ಶ್ರಮಿಸಿದ್ದಾರೆ.

ವೈಶಿಷ್ಟ್ಯ ಏನೇನು?

ಅಕ್ಷರಧಾಮ ಎಂದೇ ಜನಪ್ರಿಯವಾಗಿರುವ ಈ ದೇಗುಲಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಲಿದ್ದಾರೆ. ಸುಮಾರು 183 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ದೇವಸ್ಥಾನ 255 ಅಡಿ x 345 ಅಡಿ x 191 ಅಡಿ ಅಳತೆ ಹೊಂದಿದೆ. ಇದನ್ನು ಪ್ರಾಚೀನ ಭಾರತೀಯ ಸಂಸ್ಕೃತಿ ಪ್ರಕಾರ ರಚಿಸಲಾಗಿದೆ. ಹಿಂದೂ ಸಂಪ್ರದಾಯಗಳನ್ನು ಸೂಚಿಸುವ ಸುಮಾರು 10 ಸಾವಿರದಷ್ಟು ಪ್ರತಿಮೆಗಳು, ಸಾಂಪ್ರದಾಯಿಕ ವಾದ್ಯೋಪಕರಣಗಳ ಮಾದರಿ, ನೃತ್ಯ ಪ್ರಕಾರಗಳನ್ನು ಕೆತ್ತಲಾಗಿದೆ.

ಈ ದೇಗುಲ ಕಾಂಬೋಡಿಯಾದ ಅಂಕೋರ್‌ ವಾಟ್‌ ಬಳಿಕ ಎರಡನೇ ಅತೀ ದೊಡ್ಡ ದೇಗುಲ ಎನಿಸಿಕೊಳ್ಳಲಿದೆ. 12ನೇ ಶತಮಾನದ ಅಂಕೋರ್‌ ವಾಟ್‌ ದೇಗುಲ ಸಂಕೀರ್ಣ ಅತೀ ದೊಡ್ಡ ಹಿಂದೂ ದೇವಾಲಯ ಎನಿಸಿಕೊಂಡಿದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಹರಡಿರುವ ಇದು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ನವದೆಹಲಿಯಲ್ಲಿ 2005ರ ನವೆಂಬರ್‌ ನಲ್ಲಿ ಉದ್ಘಾಟನೆಯಾದ ಅಕ್ಷರಧಾಮ ದೇವಸ್ಥಾನ 100 ಎಕ್ರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ.

ʼʼನಮ್ಮ ಆಧ್ಯಾತ್ಮಿಕ ಗುರು ಪ್ರಮುಖ್‌ ಸ್ವಾಮಿ ಮಹರಾಜ್‌ ಹಿಂದೂಗಳು ಮಾತ್ರವಲ್ಲ, ಭಾರತೀಯರು ಮಾತ್ರವಲ್ಲ, ಒಂದು ಪ್ರತ್ಯೇಕ ಗುಂಪು ಮಾತ್ರವಲ್ಲ ಪ್ರಪಂಚದ ಎಲ್ಲಾ ಜನರಿಗೆ ಹೊಂದಬಹುದಾದ ತಾಣವೊಂದನ್ನು ರೂಪಿಸಬೇಕು ಎನ್ನುವ ಗುರಿ ಹೊಂದಿದ್ದರು. ಇದು ಹಿಂದೂ ಸಂಪ್ರದಾಯದ ಆಧಾರದಲ್ಲಿ ಕೆಲವು ಸಾರ್ವರ್ತಿಕ ಮೌಲ್ಯಗಳನ್ನು ಅರಿತುಕೊಳ್ಳಲು ನೆರವಾಗಲಿದೆʼʼ ಎಂದು ಬಿಎಪಿಎಸ್‌ ಸ್ವಾಮಿ ನಾರಾಯಣ್‌ ಸಂಸ್ಥದ ಅಕ್ಷರವತ್ಸಲ್‌ ದಾಸ್‌ ಸ್ವಾಮಿ ಹೇಳಿದ್ದಾರೆ.

ʼʼಇದು ಅವರ ಸಂಕಲ್ಪವಾಗಿತ್ತು. ಅವರ ಆಶಯದಂತೆ ಅಕ್ಷರಧಾಮ ದೇಗುಲವನ್ನು ಹಿಂದೂ ಸಂಪ್ರದಾಯಿಕ ವಾಸ್ತು ಶಿಲ್ಪದೊಂದಿಗೆ ನಿರ್ಮಿಸಲಾಗಿದೆʼʼ ಎಂದು ಅವರು ತಿಳಿಸಿದ್ದಾರೆ. ಅಕ್ಷರಧಾಮವು ಒಂದು ಮುಖ್ಯ ದೇವಾಲಯ, 12 ಉಪ ದೇವಾಲಯ, 9 ಶಿಖರಗಳು ಮತ್ತು 9 ಪಿರಮಿಡ್‌ ಆಕೃತಿಯ ಶಿಖರಗಳನ್ನು ಒಳಗೊಂಡಿದೆ. ಇದನ್ನು ಸಾವಿರ ವರ್ಷಗಳ ತನಕ ಉಳಿಯುವಂತೆ ನಿರ್ಮಿಸಿರುವುದು ವಿಶೇಷ.

4 ಮಾದರಿಯ ಶಿಲೆ

ಇನ್ನು ಅಕ್ಷರಧಾಮ ದೇಗುಲ ರಚನೆಗೆ 4 ಮಾದರಿಯ ಕಲ್ಲುಗಳನ್ನು ಬಳಸಲಾಗಿದೆ. ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಮಾರ್ಬಲ್‌ ಮತ್ತು ಗ್ರಾನೈಟ್‌ಗಳನ್ನು ಬಳಸಲಾಗಿದ್ದು, ಇವು ಅತೀ ಹೆಚ್ಚಿನ ಶಾಖ ಮತ್ತು ಶೀತವನ್ನು ತಡೆದುಕೊಳ್ಳಬಲ್ಲವು. ಸುಮಾರು 2 ಮಿಲಿಯನ್‌ ಕ್ಯೂಬಿಕ್‌ ಅಡಿ ಕಲ್ಲುಗಳನ್ನು ದೇಗುಲ ರಚನೆಗೆ ಬಳಸಲಾಗಿದ್ದು ಇವನ್ನು ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಲಾಗಿದೆ. ಬಲ್ಗೇರಿಯಾ ಮತ್ತು ತುರ್ಕಿಯಿಂದ ಸುಣ್ಣದ ಕಲ್ಲು, ತುರ್ಕಿ, ಇಟಲಿ, ಗ್ರೀಸ್‌ನಿಂದ ಮಾರ್ಬಲ್‌, ಭಾರತ ಮತ್ತು ಚೀನಾದಿಂದ ಗ್ರಾನೈಟ್‌, ಭಾರತದಿಂದ ಮರಳುಗಲ್ಲು, ಇತರ ಅಲಂಕೃತ ಕಲ್ಲುಗಳನ್ನು ಯುರೋಪ್‌, ಏಷ್ಯಾ, ಮತ್ತು ಲ್ಯಾಟಿನ್‌ ಅಮೆರಿಕಾದಿಂದ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ

ಭಾರತದ ಪ್ರಾಚೀನ ಬ್ರಹ್ಮ ಕುಂಡ್‌ ಸೇರಿದಂತೆ ಭಾರತ ಮತ್ತು ಅಮೆರಿಕಾದ ವಿವಿಧ ರಾಜ್ಯಗಳ ಪವಿತ್ರ ನದಿಗಳ ನೀರನ್ನು ಸಂಗ್ರಹಿಸಲಾಗಿದೆ. ಸಾವಿರಾರು ಸ್ವಯಂಸೇವಕರ ಶ್ರಮ ಈ ದೇಗುಲದ ಹಿಂದಿದೆ. ಮಹಂತ್‌ ಸ್ವಾಮಿ ಮಹಾರಾಜ್‌ ನೇತೃತ್ವದಲ್ಲಿ ಅಕ್ಟೋಬರ್‌ 8ರಂದು ಉದ್ಘಾಟನೆ ಆಯೋಜಿಸಲಾಗಿದೆ. ಅಕ್ಟೋಬರ್‌ 18ರಂದು ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

MDH, Everest Spices: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳನ್ನು ನೇಪಾಳ ನಿಷೇಧಿಸಿದೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

VISTARANEWS.COM


on

MDH, Everest Spices
Koo

ಕಾಠ್ಮಂಡುಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ನೇಪಾಳ ನಿಷೇಧಿಸಿದೆ. ಈ ಹಿಂದೆ ಇದೇ ಕಾರಣಕ್ಕೆ ಈ ಉತ್ಪನ್ನಗಳನ್ನು ಸಿಂಗಾಪುರ, ಹಾಂಕಾಂಗ್‌ ಮುಂತಾದೆಡೆ ಬ್ಯಾನ್‌ ಮಾಡಲಾಗಿತ್ತು. ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಥಿಲೀನ್ ಆಕ್ಸೈಡ್ (Ethylene Oxide) ಅಂಶ ಇದೆ ಎನ್ನುವ ದೂರು ಕೇಳಿ ಬಂದ ಕಾರಣಕ್ಕೆ ಈ ಉತ್ಪನ್ನಗಳ ಆಮದು, ಮಾರಾಟ ಮತ್ತು ಬಳಕೆಯನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ನಿರ್ದಿಷ್ಟ ಬ್ರ್ಯಾಂಡ್‌ಗಳ ಮಸಾಲೆಗಳಲ್ಲಿನ ರಾಸಾಯನಿಕಗಳ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

“ಹಾಂಗ್‌ಕಾಂಗ್ ಮತ್ತು ಸಿಂಗಾಪುರ್ ಈಗಾಗಲೇ ಈ ಉತ್ಪನ್ನಗಳಿಗೆ ನಿಷೇಧ ಹೇರಿವೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ನಾವು ಕೂಡ ಪರೀಕ್ಷೆ ನಡೆಸಲು ಮುಂದಾಗಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ. ಈ ಮಧ್ಯೆ ರಫ್ತಾಗುವ ಭಾರತೀಯ ಮಸಾಲೆಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸ್ಪೈಸ್ ಮಂಡಳಿ ಕ್ರಮ ಕೈಗೊಂಡಿದೆ. ಮಂಡಳಿ ಟೆಕ್ನೋ-ಸೈಂಟಿಫಿಕ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದಿದೆ. ಜತೆಗೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ.

ಅಖಿಲ ಭಾರತ ಸಾಂಬಾರ ಪದಾರ್ಥಗಳ ರಫ್ತುದಾರರ ವೇದಿಕೆ ಮತ್ತು ಭಾರತೀಯ ಮಸಾಲೆ ಮತ್ತು ಆಹಾರ ಪದಾರ್ಥ ರಫ್ತುದಾರರ ಸಂಘದಂತಹ 130ಕ್ಕೂ ಹೆಚ್ಚು ಸಂಘಗಳೊಂದಿಗೆ ಭಾರತೀಯ ಸ್ಪೈಸ್ ಮಂಡಳಿ ಸಮಾಲೋಚನೆಯನ್ನೂ ನಡೆಸಿದೆ. ಮಂಡಳಿಯು ಎಲ್ಲ ರಫ್ತುದಾರರಿಗೆ ಎಥಿಲೀನ್ ಆಕ್ಸೈಡ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Continue Reading

ವಿದೇಶ

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Zakir Naik: ಭಾರತದ ವಿವಾದಿತ ಮತಪ್ರಭಾಷಣಕಾರ, ಭಾಷಣಕಾರ ಜಾಕೀರ್ ನಾಯ್ಕ್‌ನನ್ನು ದೇಶದ ಚಕ್ರವರ್ತಿಯನ್ನಾಗಿ ಘೋಷಿಸಬೇಕೆಂದು ಹೇಳಿ ಪಾಕಿಸ್ತಾನದ ಮೌಲ್ವಿಯೊಬ್ಬ ವಿವಾದದ ಕಿಡಿ ಹೊತ್ತಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ʼʼಡಾ.ಜಾಕೀರ್ ನಾಯ್ಕ್‌ ತನ್ನ ವಿಡಿಯೊದ ಮೂಲಕ ಅನೇಕ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಹೀಗಾಗಿ ಅವರು ಅಲ್ಲಾಹುವಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಜತೆಗೆ ಭಾರತದ ಚಕ್ರವರ್ತಿ ಯಾಕಾಗಬಾರದು?ʼʼ ಎಂದು ಪ್ರಶ್ನಿಸಿಸುವ ಮೂಲಕ ನಾಲಿಗೆ ಹರಿಯಬಿಟ್ಟಿದ್ದಾನೆ.

VISTARANEWS.COM


on

Zakir Naik
Koo

ಇಸ್ಲಾಮಾಬಾದ್‌: ಪಾಕಿಸ್ತಾನದ ಮೌಲ್ವಿಯೊಬ್ಬ ಭಾರತದ ವಿವಾದಿತ ಮತಪ್ರಭಾಷಣಕಾರ, ಭಾಷಣಕಾರ ಜಾಕೀರ್ ನಾಯ್ಕ್‌ (Zakir Naik)ನನ್ನು ದೇಶದ ಚಕ್ರವರ್ತಿಯನ್ನಾಗಿ ಘೋಷಿಸಬೇಕೆಂದು ಹೇಳಿ ವಿವಾದ ಹುಟ್ಟು ಹಾಕಿದ್ದಾನೆ. ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ‘ಸಾಂಪ್ರದಾಯಿಕ ಹಿಂದೂ ಧರ್ಮ’ವನ್ನು ಉತ್ತೇಜಿಸುವ ಪಕ್ಷವು ಭಾರತವನ್ನು ಆಳುತ್ತಿರುವ ಅವಧಿಯಲ್ಲಿ ಸಾವಿರಾರು ಹಿಂದುಗಳನ್ನು ಮತಾಂತರಗೊಳಿಸಲು ಯತ್ನಿಸುವ ಜಾಕೀರ್ ನಾಯ್ಕ್‌ನ ಪಾತ್ರವನ್ನು ಮೌಲ್ವಿ ಶ್ಲಾಘಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಮೌಲ್ವಿ ತನ್ನ ಭಾಷಣದಲ್ಲಿ, ʼʼಡಾ.ಜಾಕೀರ್ ನಾಯ್ಕ್‌ ಇಂದು ತಮ್ಮ ಭಾಷಣ, ವಿಡಿಯೊದ ಮೂಲಕ ಸಾವಿರಾರು ಹಿಂದುಗಳ ಮತಾಂತರ ನಡೆಸಿದ್ದಾರೆ. ಸದ್ಯ ಭಾರತದಲ್ಲಿ ಆಡಳಿತ ನಡೆಸುತ್ತಿರುವ, ಮೋದಿ ನೇತೃತ್ವದ ಹಿಂದು ಪರವಾದ ಸರ್ಕಾರದ ಅವಧಿಯಲ್ಲಿ ಡಾ.ಝಾಕೀರ್‌ಗೆ ಪ್ರವಾದಿ ಇಬ್ರಾಹಿಂ ಅವರಂತೆ ಕಷ್ಟಕರ ಜೀವನ ನಡೆಸುವುದು ಅನಿವಾರ್ಯ ಎನಿಸಿಕೊಂಡಿದೆʼʼ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿಗೆ ಮೌಲ್ವಿಯ ವಾಕ್‌ ಪ್ರವಾಹ ನಿಂತಿಲ್ಲ. ಮುಂದುವರಿದು, ʼʼಡಾ.ಜಾಕೀರ್ ನಾಯ್ಕ್‌ ತನ್ನ ವಿಡಿಯೊದ ಮೂಲಕ ಅನೇಕ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಹೀಗಾಗಿ ಅವರು ಅಲ್ಲಾಹುವಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಜತೆಗೆ ಭಾರತದ ಚಕ್ರವರ್ತಿ ಯಾಕಾಗಬಾರದು?ʼʼ ಎಂದು ಪ್ರಶ್ನಿಸಿಸುವ ಮೂಲಕ ನಾಲಿಗೆ ಹರಿಯಬಿಟ್ಟಿದ್ದಾನೆ.

ವ್ಯಾಪಕ ಆಕ್ರೋಶ

ಸದ್ಯ ಪಾಕಿಸ್ತಾನದ ಈ ಮೌಲ್ವಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕೆಂಬ ಮೌಲ್ವಿಯ ಆಘಾತಕಾರಿ ಘೋಷಣೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ʼʼಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನಿನ್ನ ಜಾಕೀರ್ ನಾಯ್ಕ್‌ ಪಲಾಯನ ಮಾಡಿದ್ದು ಯಾಕೆ ಎನ್ನುವುದಕ್ಕೆ ಮೊದಲು ಉತ್ತರಿಸುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಜಾಕೀರ್ ʼನಾಲಾಯಕ್‌ʼ ಭಯೋತ್ಪಾದನೆಯನ್ನು ಉತ್ತೇಜಿಸುತ್ತಾನೆ. ಒಂದು ವೇಳೆ ಆತ ನಿಜವನ್ನೇ ಹೇಳಿದ್ದರೆ ಹೇಡಿಯಂತೆ ಪಲಾಯನ ಮಾಡುವ ಅಗತ್ಯ ಏನಿತ್ತು?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಜಾಕೀರ್ ನಾಯ್ಕ್ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಯುಎಇಯಲ್ಲಿನ ದೇವಾಲಯ ನಿರ್ಮಾಣದ ಕೆಲಸವನ್ನು ಒಪ್ಪಿಕೊಳ್ಳದಂತೆ ಮುಸ್ಲಿಂ ಯುವಕರಿಗೆ ಸಂದೇಶ ನೀಡಿದ್ದ. ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಇಸ್ಲಾಮಿಕ್ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಇದಕ್ಕೆ ಕಾರಣ ನೀಡಿದ್ದ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದು ಮಂದಿರ ಉದ್ಘಾಟಿಸಿದ್ದನ್ನು ಉಲ್ಲೇಖಿಸಿ ಈ ವಿಡಿಯೊವನ್ನು ಮಾಡಲಾಗಿತ್ತು.

“ಆಲ್ಕೋಹಾಲ್ ಉತ್ಪಾದಿಸುವ ಕಂಪನಿಯಲ್ಲಿ ಕೆಲಸ ಮಾಡುವುದು ಮತ್ತು ಸಾವಿರಾರು ಜನರನ್ನು ಕೊಲ್ಲಲಿರುವ ಕೊಕೇನ್ ಅಥವಾ ಗಾಂಜಾವನ್ನು ಉತ್ಪಾದಿಸುವುದು ದೊಡ್ಡ ಪಾಪ. ಆದರೆ ದೇವಾಲಯ ನಿರ್ಮಾಣಕ್ಕಾಗಿ ಕೆಲಸ ಮಾಡುವುದು ಅದಕ್ಕಿಂತಲೂ ದೊಡ್ಡ ಪಾಪ. ಇಸ್ಲಾಂ ಹೊರತುಪಡಿಸಿ ಬೇರೆ ಯಾವುದೇ ಧರ್ಮಗಳ ಪೂಜಾ ಸ್ಥಳಕ್ಕಾಗಿ ನೀವು ಕೆಲಸ ಮಾಡುವುದು ಹರಾಮ್” ಎಂದು ನಾಯ್ಕ್‌ ಹೇಳಿದ್ದ. ಜತೆಗೆ “ಸಾವಿರಾರು ಮುಗ್ಧ ಮನುಷ್ಯರನ್ನು ಕೊಲ್ಲುತ್ತಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ದೇವಾಲಯ ಅಥವಾ ಚರ್ಚ್ ನಿರ್ಮಾಣದಲ್ಲಿ ಕೆಲಸ ಮಾಡುವುದಕ್ಕಿಂತ ಉತ್ತಮ ಕಾರ್ಯʼʼ ಎಂದೂ ಅಭಿಪ್ರಾಯಪಟ್ಟಿದ್ದ.

ನಿಷೇಧ

ದ್ವೇಷವನ್ನು ಉತ್ತೇಜಿಸುವ ಭಾಷಣ ಮಾಡುವ ಕಾರಣಕ್ಕೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಸ್ಥಾಪಕ ಜಾಕೀರ್ ನಾಯ್ಕ್‌ನನ್ನು 2016ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಮುಸ್ಲಿಂ ಯುವಕರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಪ್ರಚೋದಿಸಿದ ಆರೋಪ ಆತನ ಮೇಲಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಮಾತ್ರವಲ್ಲ ಜಾರಿ ನಿರ್ದೇಶನಾಲಯ (ED) ಆತನ ಸಂಸ್ಥೆಯ ವಿರುದ್ಧ ಮನಿ ಲಾಂಡರಿಂಗ್ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Zakir Naik: ಒಮಾನ್‌ನಿಂದ ಜಾಕೀರ್‌ ನಾಯ್ಕ್‌ ಗಡಿಪಾರು, ಮೂಲಭೂತವಾದಿಯ ಬಂಧನಕ್ಕೆ ಭಾರತ ಮುಹೂರ್ತ ಫಿಕ್ಸ್‌?

Continue Reading

ವೈರಲ್ ನ್ಯೂಸ್

Viral News: ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಮಗಳು; ಖುಷಿಯಾಗಿದ್ದ ಪೋಷಕರಿಗೆ ಕಾದಿತ್ತು ಮತ್ತೊಂದು ಶಾಕ್‌!

Viral News:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಕ್ಸಿಕೋದ ಕ್ಯಾಮಿಲಾ ರೊಕ್ಸಾನಾ ಮರಿನೇಜ್‌ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇದಾದ ಬಳಿಕ 12 ಗಂಟೆಗಳ ಬಳಿಕ ಆಕೆ ಜೀವಂತವಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಮಗಳು ಇನ್ನೇನು ಬದುಕಿದಳಲ್ಲಾ ಎಂದು ಪೋಷಕರು ಬಹಳ ಖುಷಿಯಲ್ಲಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ.

VISTARANEWS.COM


on

Viral News
Koo

ಮೆಕ್ಸಿಕೋ: ಪ್ರೀತಿಪಾತ್ರರಾದವರನ್ನು ಕಳೆದುಕೊಳ್ಳುವಂತಹ ನೋವು ಬೇರೊಂದಿಲ್ಲ. ಅದರಲ್ಲೂ ಮನೆಯಲ್ಲಿ ನಗು ನಗುತ್ತಾ ಆಟ ಆಡುತ್ತಿದ್ದ ಮಕ್ಕಳು ಡಿಢೀರ್‌ ಸಾವನ್ನಪ್ಪಿದ್ದರೆ ಅದರ ನೋವು ಊಹಿಸೋಕೆ ಸಾಧ್ಯವಿಲ್ಲ. ಇನ್ನು ಕೆಲವೊಮ್ಮೆ ಸತ್ತಿದ್ದಾರೆಂದು ವೈದ್ಯರು ಹೇಳಿದ ಬಳಿಕ ಮತ್ತೆ ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಬದುಕಿ ಬಂದಿದ್ದೂ ಇದೆ. ಅಂತಹದ್ದೇ ಒಂದು ಅಪರೂಪವಾದ ಘಟನೆ(Viral News)ಯೊಂದು ಮೆಕ್ಸಿಕೋ(Mexico)ದಲ್ಲಿ ನಡೆದಿದೆ. ಆದರೆ ಸತ್ತು ಬದುಕಿದ ಬಾಲಕಿ ಮತ್ತೆ ಕೊನೆಯುಸಿರೆಳೆದಿದ್ದು, ಪೋಷಕರು ಎರಡೆರಡು ಬಾರಿ ನೋವು ಅನುಭವಿಸುವಂತಾಗಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೆಕ್ಸಿಕೋದ ಕ್ಯಾಮಿಲಾ ರೊಕ್ಸಾನಾ ಮರಿನೇಜ್‌ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಇದಾದ ಬಳಿಕ 12 ಗಂಟೆಗಳ ಬಳಿಕ ಆಕೆ ಜೀವಂತವಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಮಗಳು ಇನ್ನೇನು ಬದುಕಿದಳಲ್ಲಾ ಎಂದು ಪೋಷಕರು ಬಹಳ ಖುಷಿಯಲ್ಲಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ.

ಏನಿದು ಘಟನೆ?

ಈ ಘಟನೆ ಕಳೆದ ವರ್ಷ ಮೆಕ್ಸಿಕೋದ ಸ್ಯಾನ್‌ ಲೂಯಿಸ್‌ ಪೋಟೋಸಿಯಲ್ಲಿ ನಡೆದಿದ್ದು, ಕ್ಯಾಮಿಲಾ ತಾಯಿ ಮೇರಿ ಜೇನ್‌ ಮೆಂಡೋಜಾ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.ಅವರು ಹೇಳುವ ಪ್ರಕಾರ, ಹೊಟ್ಟೆ ನೋವು ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಕ್ಯಾಮಿಲಾ ಇದ್ದಕ್ಕಿದ್ದಂತೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಳು. ತಕ್ಷಣ ಆಕೆಯನ್ನು ಮಕ್ಕಳ ತಜ್ಞ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಅವರ ಸಲಹೆ ಮೇರೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕೆಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಕೇವಲ ಹಣ್ಣು ಮತ್ತು ನೀರು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ಆದರೆ ಅವಳ ಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಹೋಗಿತ್ತು.ವೈದ್ಯರ ಚಿಕಿತ್ಸೆ ಯಾವುದೇ ರೀತಿಯಲ್ಲಿ ಫಲಕಾರಿಯಾಗಲೇ ಇಲ್ಲ. ಅವಳನ್ನು ವೆಂಟಿಲೇಟರ್‌ನಲ್ಲಿ ಇಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕ್ಯಾಮಿಲಾ ಕೊನೆಯುಸಿರೆಳೆದಿದ್ದಾಳೆ. ಆಕೆ ಸಾವನ್ನಪ್ಪಿರುವ ಬಗ್ಗೆ ಸ್ವತಃ ವೈದ್ಯರೇ ದೃಢಪಡಿಸಿದ್ದರು. ಡಿಹೈಡ್ರೇಶನ್‌ನಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು. ಇದಾದ ಬಳಿಕ ಮಗುವಿನ ದೇಹದೊಂದಿಗೆ ಪೋಷಕರು ಮನೆಗೆ ವಾಪಾಸಾಗಿ, ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು.

ಇದನ್ನೂ ಓದಿ:Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

ಅಂತ್ಯಕ್ರಿಯೆ ತಯಾರಿ ನಡೆಸುತ್ತಿದ್ದ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಶಾಕ್‌ವೊಂದು ಕಾದಿತ್ತು. ಕಾಫಿನ್‌ನನ್ನು ಮಲಗಿಸಿದ್ದ ಮಗಳ ದೇಹದಲ್ಲಿ ಚಲನೆಗಳನ್ನು ಕಂಡು ಎಲ್ಲರೂ ಒಂದು ಕ್ಷಣಕ್ಕೆ ದಂಗಾಗಿದ್ದರು. ಮಗುವಿನ ನಾಡಿ ಹಿಡಿದು ಪರಿಶೀಲನೆ ನಡೆಸಿದಾಗ ಕ್ಯಾಮಿಲಾ ಬದುಕಿರುವುದು ತಿಳಿಯಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್‌ ಆಕೆ ಎರಡನೇ ಬಾರಿ ಸಾವನ್ನಪ್ಪಿದ್ದಾಳೆ. ಅಂತೂ ಇಂತೂ ಮಗು ಮತ್ತ ಬದುಕಿ ಬಂದಲ್ಲ ಎಂಬ ಖುಷಿಯಲ್ಲಿದ್ದ ಪೋಷಕರ ನೋವು ಊಹಿಸಲು ಸಾಧ್ಯವಿರಲಿಲ್ಲ.

Continue Reading

ವಿದೇಶ

Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

Pakistan: ಭಾರತ 30ವರ್ಷಗಳ ಹಿಂದೆಯೇ ಇಂದಿಗೆ ಏನು ಪ್ರಸ್ತುತವೋ ಅದನ್ನೇ ಮಕ್ಕಳಿಗೆ ಕಲಿಸಿದೆ. ಹೀಗಾಗಿಯೇ ಪ್ರಪಂಚದ 25ಕಂಪನಿಗಳ ಸಿಇಒಗಳು ಭಾರತೀಯರೇ ಆಗಿದ್ದಾರೆ. ಇಂಉ ಭಾರತ ಇಡೀ ಪ್ರಪಂಚದಲ್ಲಿ ಪ್ರಕಾಶಿಸುತ್ತಿದೆ. ಅವರಿಗೆ ಗೊತ್ತಿದೆ ಮಕ್ಕಳಿಗೆ, ಜನರಿಗೆ ಏನು ಕಲಿಸಬೇಕು ಎನ್ನುವುದು. ನಮ್ಮ ಐಟಿ ರಫ್ತು ಕೇವಲ 7ಅರಬ್‌ ಡಾಲರ್‌, ಆದರೆ ಭಾರತದ ಐಟಿ ರಫ್ತಿನ ಮೌಲ್ಯ 270ಡಾಲರ್ಸ್‌. ಪ್ರಪಂಚಕ್ಕೆ ಇಂದು ಯಾವುದರ ಅಗತ್ಯ ಇದೆಯೋ ಅದನ್ನೇ ಭಾರತ ಹಲವು ವರ್ಷಗಳ ಹಿಂದೆಯೇ ಭಾರತೀಯರಿಗೆ ಕಲಿಸಿತ್ತು ಎಂದು ಹೇಳಿದ್ದಾರೆ. ಮುಸ್ತಾಫಾ ಕಮಲ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

VISTARANEWS.COM


on

Pakistan
Koo

ಪಾಕಿಸ್ತಾನ: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ ಎಂದು ಸಂಸತ್‌ನಲ್ಲೇ ಹೇಳಿಕೆ ನೀಡಿದ್ದ ಪಾಕಿಸ್ತಾನ(Pakistan)ದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌(Syed Mustafa Kamal) ಅವರ ಮತ್ತೊಂದು ವಿಡಿಯೋ ವೈರಲ್‌(Viral Video) ಆಗಿದೆ. ಸಂಸತ್‌ನಲ್ಲಿ ಪಾಕಿಸ್ತಾನದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಿಸುತ್ತಾ ಭಾರತದ ಜೊತೆ ಪಾಕಿಸ್ತಾನವನ್ನು ಹೋಲಿಕೆ ಮಾಡಿದ ಮುಸ್ತಾಫಾ ಕಮಲ್‌, ಭಾರತೀಯರು ಪ್ರಪಂಚ ಟಾಪ್‌ ಕಂಪನಿಗಳ ಸಿಇಒ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಇಲ್ಲಿ ಮಕ್ಕಳು ಹೊಟ್ಟೆಗಿಲ್ಲದೇ, ಸರಿಯಾದ ಶಿಕ್ಷಣವಿಲ್ಲದೇ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರತ 30ವರ್ಷಗಳ ಹಿಂದೆಯೇ ಇಂದಿಗೆ ಏನು ಪ್ರಸ್ತುತವೋ ಅದನ್ನೇ ಮಕ್ಕಳಿಗೆ ಕಲಿಸಿದೆ. ಹೀಗಾಗಿಯೇ ಪ್ರಪಂಚದ 25ಕಂಪನಿಗಳ ಸಿಇಒಗಳು ಭಾರತೀಯರೇ ಆಗಿದ್ದಾರೆ. ಇಂದು ಭಾರತ ಇಡೀ ಪ್ರಪಂಚದಲ್ಲಿ ಪ್ರಕಾಶಿಸುತ್ತಿದೆ. ಅವರಿಗೆ ಗೊತ್ತಿದೆ ಮಕ್ಕಳಿಗೆ, ಜನರಿಗೆ ಏನು ಕಲಿಸಬೇಕು ಎನ್ನುವುದು. ನಮ್ಮ ಐಟಿ ರಫ್ತು ಕೇವಲ 7ಅರಬ್‌ ಡಾಲರ್‌, ಆದರೆ ಭಾರತದ ಐಟಿ ರಫ್ತಿನ ಮೌಲ್ಯ 270ಡಾಲರ್ಸ್‌. ಪ್ರಪಂಚಕ್ಕೆ ಇಂದು ಯಾವುದರ ಅಗತ್ಯ ಇದೆಯೋ ಅದನ್ನೇ ಭಾರತ ಹಲವು ವರ್ಷಗಳ ಹಿಂದೆಯೇ ಭಾರತೀಯರಿಗೆ ಕಲಿಸಿತ್ತು ಎಂದು ಹೇಳಿದ್ದಾರೆ. ಮುಸ್ತಾಫಾ ಕಮಲ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ

ಕರಾಚಿ ಪಾಕಿಸ್ತಾನದ ಆದಾಯದ ಮೂಲ. ಆದರೇ ಕಳೆದ 15ವರ್ಷಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಕರಾಚಿಗೆ ಸಾಧ್ಯವಾಗುತ್ತಿಲ್ಲ. ನೀರು ಬಂದರೂ ಟ್ಯಾಂಕರ್‌ ಮಾಫಿಯಾ ಶುರುವಾಗುತ್ತದೆ. ಇನ್ನು ನಾವು 48,000 ಶಾಲೆಗಳಿವೆ. ಆದರೆ ವರದಿ ಪ್ರಕಾರ 11,000 ಶಾಲೆಗಳು ಮುಚ್ಚಿವೆ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ದೇಶದಲ್ಲಿ ಒಟ್ಟು 2,62,00,000 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಆದರೂ ಸರ್ಕಾರ ಮಾತ್ರ ನಿದ್ದೆಯಿಂದ ಏಳುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಪಾಕಿಸ್ತಾನ ತನ್ನನ್ನು ತಾನು ಅಫ್ಘಾನಿಸ್ತಾನ, ಬಾಂಗ್ಲಾದೇಶದ ಜೊತೆಗೆ ನಾವು ನಮ್ಮನ್ನು ಹೋಲಿಸಿಕೊಳ್ಳಬೇಕಿದೆ. ಭಾರತದ ಜೊತೆಗೆ ನಮ್ಮ ಹೋಲಿಕೆ ಸಾಧ್ಯವೇ ಇಲ್ಲ. ಭಾರತದ ಬಹಳ ಎತ್ತರದಲ್ಲಿದೆ. ಆಪಲ್‌ ಜೊತೆ ಆರೆಂಜ್‌ ಹೋಲಿಗೆ ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Continue Reading
Advertisement
Bal Jeevan Bima
ಮನಿ ಗೈಡ್11 mins ago

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

road Accident in Bengaluru mysore
ಬೆಂಗಳೂರು12 mins ago

Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

Swati Maliwal
ದೇಶ12 mins ago

Swati Maliwal: “ಪೀರಿಯೆಡ್ಸ್‌ ಆಗಿದೆ.. ಪ್ಲೀಸ್‌ ಬಿಟ್ಟು ಬಿಡು ಅಂದ್ರೂ ಕೇಳಲಿಲ್ಲ”-ಆಘಾತಕಾರಿ ಸಂಗತಿ ಬಿಚ್ಚಿಟ್ಟ ಸ್ವಾತಿ ಮಲಿವಾಲ್‌

Viral Video
ವೈರಲ್ ನ್ಯೂಸ್27 mins ago

Viral Video: ಅಳುತ್ತಾ ವಿದಾಯ ಹೇಳಿದ್ದೇಕೆ ಪಾಕಿಸ್ತಾನದ ಅತ್ಯಂತ ಕಿರಿಯ ಯೂಟ್ಯೂಬರ್?

1 year of CM Siddaramaiah government BJP prepares chargesheet and Congress gears up for counter
ರಾಜಕೀಯ36 mins ago

CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ 1 ವರ್ಷ; ಚಾರ್ಜ್‌ಶೀಟ್‌ ರೆಡಿ ಮಾಡಿದ ಬಿಜೆಪಿ; ಕೌಂಟರ್‌ಗೆ ಕಾಂಗ್ರೆಸ್‌ ತಯಾರಿ

RCB vs CSK
ಕ್ರೀಡೆ37 mins ago

RCB vs CSK: ಆರ್​ಸಿಬಿ-ಚೆನ್ನೈ ಪಂದ್ಯಕ್ಕೆ ಮಳೆ ನಿಯಮ ಹೇಗಿದೆ?

anjali murder case culprit girish
ಕ್ರೈಂ37 mins ago

Anjali Murder Case: ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!

Shah Rukh Khan and Anirudh Ravichander to team up for King
ಬಾಲಿವುಡ್48 mins ago

Shah Rukh Khan: ಶಾರುಖ್‌ ಹೊಸ ಸಿನಿಮಾಗಾಗಿ ಕೈ ಜೋಡಿಸಿದ ಅನಿರುದ್ಧ್ ರವಿಚಂದರ್!

Air India
ದೇಶ52 mins ago

Air India: ಟಗ್ ಟ್ರ್ಯಾಕ್ಟರ್‌ಗೆ 180 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಡಿಕ್ಕಿ; ತಪ್ಪಿದ ಭಾರೀ ದೊಡ್ಡ ದುರಂತ

PM Narendra Modi
ದೇಶ53 mins ago

PM Narendra Modi: “ಮೊದಲ 100 ದಿನಗಳ ಬ್ಲೂಪ್ರಿಂಟ್‌ ರೆಡಿ; ಹೆಚ್ಚುವರಿ 25 ದಿನ ಯುವಕರಿಗೆ ಮೀಸಲು”- ಪ್ರಧಾನಿ ಮೋದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ7 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ21 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ24 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌