Bangalore Bandh : ರಾಜಧಾನಿಯ ಎಲ್ಲ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ; ಬೆಂಗಳೂರು ಬಂದ್‌ ಕಾರಣ Vistara News

ಕರ್ನಾಟಕ

Bangalore Bandh : ರಾಜಧಾನಿಯ ಎಲ್ಲ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ; ಬೆಂಗಳೂರು ಬಂದ್‌ ಕಾರಣ

Bangalore Bandh : ಬೆಂಗಳೂರು ಬಂದ್‌ ಹಿನ್ನೆಲೆಯಲ್ಲಿ ಸೆ. 26ರಂದು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

VISTARANEWS.COM


on

School Colleges Closed in Bangalore on sep 26
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸೆಪ್ಟೆಂಬರ್‌ 26ರಂದು ವಿವಿಧ ಸಂಘಟನೆಗಳು ಬಂದ್ (Bangalore bandh) ಘೋಷಿಸಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ (Holiday announced for Bangalore Schools and Colleges) ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಪ್ರಕಟಿಸಿದ್ದಾರೆ.

ಕಾವೇರಿ ನೀರು ಬಿಡುಗಡೆಯನ್ನು ಪ್ರತಿಭಟಿಸಿ ಜಲಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಿರುವ ಬಂದ್‌ನಿಂದಾಗಿ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈಗಾಗಲೇ ಹಲವಾರು ಖಾಸಗಿ ಶಾಲೆಗಳು ರಜೆಯನ್ನು ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ಬರದಂತೆ ಸೂಚಿಸಿದೆ.

ಮಂಗಳವಾರದ ಬಂದ್‌ಗೆ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿರುವುದರಿಂದ ಅಂಗಡಿ ಮುಂಗಟ್ಟುಗಳು ಮಚ್ಚಿರುವ ಸಾಧ್ಯತೆ ಇದೆ. ಸರ್ಕಾರಿ ಬಸ್‌ಗಳು ಇರಬಹುದಾದರೂ ಪ್ರತಿಭಟನೆ ವೇಳೆ ತಡೆದು ನಿಲ್ಲಿಸುವ ಅಪಾಯವಿದೆ.

ಖಾಸಗಿ ವಾಹನಗಳು, ಟ್ಯಾಕ್ಸಿ, ಆಟೋಗಳು ಬಂದ್‌ ಇರುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳು ತೊಂದರೆಗೆ ಸಿಲುಕದಿರಲಿ ಎಂದು ಜಿಲ್ಲಾಡಳಿತ ಪೂರ್ವಭಾವಿಯಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ. ಇದರೊಂದಿಗೆ ಮಕ್ಕಳ ಹೆತ್ತವರು ನಿರಾಳರಾಗಿದ್ದಾರೆ.

ಬೆಂಗಳೂರು ವಿವಿ ಪರೀಕ್ಷೆಗಳು ಮುಂದಕ್ಕೆ

ಬೆಂಗಳೂರು ವಿವಿಯ ಎರಡು ಪರೀಕ್ಷೆಗಳು ಮುಂದೂಡಲಾಗಿದೆ. 2 ಮತ್ತು 4ನೇ ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳು ಮಂಗಳವಾರ ನಡೆಯಬೇಕಾಗಿತ್ತು. ಅವುಗಳನ್ನು ಸೆಪ್ಟೆಂಬರ್ 27ಕ್ಕೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು ಬಂದ್ ಗೆ ಬೆಂಬಲ ನೀಡಿರುವ ಸಂಘಟನೆಗಳು

ರಾಜ್ಯ ರೈತ ಸಂಘಟನೆಗಳ ಒಕ್ಕೂಟ.
ರಾಜ್ಯ ಕಬ್ಬು ಬೆಳೆಗಾರರ ​​ಸಂಘ.
ಕಬಿನಿ ರೈತ ಹಿತರಕ್ಷಣಾ ಸಮಿತಿ
ಆಮ್ ಆದ್ಮಿ ಪಕ್ಷ.
ಜಯ ಕರ್ನಾಟಕ ಜನಪರ ವೇದಿಕೆ.
BBMP ಕಾರ್ಮಿಕರ ಸಂಘ.
KSRTC ಕನ್ನಡ ಕಾರ್ಮಿಕರ ಸಂಘ.
ಓಲಾ ಉಬರ್ ಮಾಲಿಕರ ಮತ್ತು ಚಾಲಕರ ಸಂಘ.
ಕಾರು ಆಟೋ ಮಿನಿ ಬಸ್ ಚಾಲಕರು ಮತ್ತು ಮಾಲೀಕರ ಸಂಘ 37 ಸಂಘಟನೆಗಳ ಒಕ್ಕೂಟ..
ಕಾರ್ಮಿಕ ಪಡೆ.
ಕರವೇ ಕನ್ನಡಿಗರ ಸಾರಥ್ಯ.
ಕರವೇ ಕನ್ನಡ ಸೇನೆ.
ನಮ್ಮ ನಾಡ ರಕ್ಷಣಾ ವೇದಿಕೆ.
ಕರ್ನಾಟಕ ಸಿಂಹ ಘರ್ಜನೆ ವೇದಿಕೆ.
ಕರುನಾಡ ಕಾವಲು ಪಡೆ.
ಕನ್ನಡಿಗರ ರಕ್ಷಣ ವೇದಿಕೆ
ತಮಿಳು ಸಂಘಮ್
ಕರವೇ ಸ್ವಾಭಿಮಾನ ವೇದಿಕೆ
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
ಪ್ರವಾಸಿ ರಾಜಸ್ಥಾನಿ ಮಂಡಲ
ಕರ್ನಾಟಕ ಮರಾಠ ಮಂಡಲ
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್
ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ.
ಹೊಯ್ಸಳ ಸೇನೆ.
ಕರವೇ ಗಜ ಸೇನೆ.
ಹೊಯ್ಸಳ ಸೇನೆ.
ಜೈ ಕರುನಾಡ ಯುವ ಸೇನೆ.
ಕರುನಾಡ ಯುವ ಪಡೆ.
ಕೆಂಪೇಗೌಡ ಸೇನೆ.
ಒಕ್ಕಲಿಗರ ಯುವ ವೇದಿಕೆ.
ನೆರವು ಕಟ್ಟದ ಕಾರ್ಮಿಕ ಸಂಘ.
ಅಕಿಲ ಕರ್ನಾಟಕ ಯುವ ಸೇನೆ.
ಯುವ ಶಕ್ತಿ ಕರ್ನಾಟಕ.
ದಲಿತ ಸಂರಕ್ಷಣಾ ಸಮಿತಿ
ಕರ್ನಾಟಕ ಸಮರ ಸೇನೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ.
ದಲಿತ ಜನಸೇನಾ.
ರಾಷ್ಟ್ರೀಯ ಚಾಲಕರ ಒಕ್ಕೂಟ.
ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಷನ್.
ಕನ್ನಡ ಮೊದಲು ತಂಡ.
ಕರುನಾಡ ಸೇವಕರು.
ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ.
ಕರುನಾಡ ಜನ ಬೆಂಬಲ ವೇದಿಕೆ.
ಕರ್ನಾಟಕ ದಲಿತ ಜನಸೇನೆ.
ಜೈ ಭಾರತ ಚಾಲಕ ಸಂಘ.
ರಾಜ್ಯ ಕರ್ನಾಟಕ ಸೇನೆ.
ಅಖಂಡ ಕರ್ನಾಟಕ ರಕ್ಷಣಾ ವೇದಿಕೆ.
ಕರುನಾಡ ಸೇನೆ.
ಕರ್ನಾಟಕ ವೇದಿಕೆ.
ಕನ್ನಡ ಸಾಹಿತ್ಯ ಪರಿಷತ್ತು.
ರಾಷ್ಟ್ರೀಯ ಕಾರ್ಮಿಕರ ಹಕ್ಕು & ಭ್ರಷ್ಟಾಚಾರ ವೇದಿಕೆ.
ಕರ್ನಾಟಕ ಜನಪರ ವೇದಿಕೆ.
ನಮ್ಮಿನಿ ರೇಡಿಯೋ.
ಹಸಿರು ಕರ್ನಾಟಕ.
ರಾಜ್ಯ ಒಕ್ಕಲಿಗರ ಯುವ ಸೇನೆ.
ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ.
ಕರ್ನಾಟಕ ಚಾಲಕ ವೇದಿಕೆ.
ಕರ್ನಾಟಕ ಕನ್ನಡಿಗರ ವೇದಿಕೆ.
ಕರ್ನಾಟಕ ಯುವರಕ್ಷಣಾ ವೇದಿಕೆ.
ಸುವರ್ಣ ಕರ್ನಾಟಕ ಹಿತರಕ್ಷಣ.
ಕಾವೇರಿ ಕನ್ನಡಿಗರ ವೇದಿಕೆ.
ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ.
ಜೈ ಭಾರತ ರಕ್ಷಣಾ ವೇದಿಕೆ.
ಕನ್ನಡ ಮನಸುಗಳು.
ಕರುನಾಡು ವಿದ್ಯಾರ್ಥಿ ಸಂಘಗಳು
ರಂಗಭೂಮಿ ಕಲಾವಿದರ ಸಂಘ
ಜೈನ ಸಂಘಟನೆ
ಕರ್ನಾಟಕ ಕ್ರೈಸ್ತ ಸಂಘಟನೆ
ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿ ಬಳಗ
ನಾಡಗೌಡ ಕೆಂಪೇಗೌಡ ಟ್ರಸ್ಟ್
ಎಸ್ ಪಿ ರಸ್ತೆ ವ್ಯಾಪಾರಿಗಳ ಸಂಘ
ವೀರಾಂಜನೇಯ ಕನ್ನಡ ಯುವಕರ ಸಂಘ
ಸಿರವಿ ಸಮಾಜ
ಕರ್ನಾಟಕ ರಾಜ್ಯ ಪುರೋಹಿತ ಯುವಶಕ್ತಿ ಸಂಘಟನೆ
ಬೆಂಗಳೂರು ಬಂದ್ ಬೆಂಬಲಿಸಿದವರ ಮುಂದುವರಿದ ಸಂಘ ಸಂಸ್ಥೆಗಳ ಪಟ್ಟಿ
ಬೆಂಗಳೂರು ಎಪಿಎಂಸಿ ವರ್ತಕರ ಸಂಘ
ಸಮತಾ ಸೈನಿಕ ದಳ

ಎಪ್ ಕೆ ಸಿ ಸಿ ಐ
ಕಾಶಿಯ ಸಣ್ಣ ಕೈಗಾರಿಕೆಗಳ ಒಕ್ಕೂಟ

ಕರ್ನಾಟಕ ಸಾಂಸ್ಕೃತಿಕ ವೇದಿಕೆ

ಬಿಡಬ್ಲ್ಯೂಎಸ್‌ಎಸ್‌ಬಿ ನೌಕರರ ಸಂಘ
ಬಿಡಿಎ ನೌಕರರ ಸಂಘ

ಬಿಡಿಎ ವಾಹನ ಚಾಲಕರ ಸಂಘ

ಕರ್ನಾಟಕ ರಾಜ್ಯ ರೈತ ಸಂಘ
ಎಐಟಿಯುಸಿ ಕೆಎಸ್ಆರ್ಟಿಸಿ ನೌಕರರ ಸಂಘ
ಬೆಂಗಳೂರು ಜುವೆಲರ್ಸ್ ಅಸೋಸಿಯೇಷನ
ಕರ್ನಾಟಕ ವಕೀಲರ ಸಂಘ
ಬೆಂಗಳೂರು ವಕೀಲರ ಸಂಘ
ಕೆಆರ್ ಮಾರ್ಕೆಟ್ ಆಲ್ ಟ್ರೇಡರ್ಸ್ ಅಸೋಸಿಯೇಷನ್
ಕೆ ಆರ್ ಮಾರ್ಕೆಟ್ ಹೂವು ಮಾರಾಟಗಾರ ಒಕ್ಕೂಟ

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್
ಬೀದಿ ಬದಿ ವ್ಯಾಪಾರಿಗಳ ಸಂಘ

ಮಂಡ್ಯ ಕಾವೇರಿ ರೈತ ಹಿತರಕ್ಷಣ ಸಮಿತಿ

ರಾಮನಗರ ಜಿಲ್ಲಾ ಬಂದ್
ಮಂಡ್ಯ ಜಿಲ್ಲೆಯ ಮಳವಳ್ಳಿ ಬಂದ್

ಮೈಸೂರು ಜಿಲ್ಲೆಯ
ಟಿ ನರಸೀಪುರ ಬಂದ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Assembly Session : ಗಾಂಧಿ ಮೇಲೋ, ಬಸವಣ್ಣ ಮೇಲೋ; ಅಧಿವೇಶನದಲ್ಲಿ ಫೋಟೊ ವಿವಾದ

Assembly Session : ಬೆಳಗಾವಿ ಅಧಿವೇಶನ ಒಂದು ಅಪರೂಪದ ಚರ್ಚೆಗೆ ವೇದಿಕೆಯಾಗುವ ಸಾಧ್ಯತೆ ಕಂಡುಬಂದಿದೆ. ಗಾಂಧಿ ಮೇಲೋ, ಬಸವಣ್ಣ ಮೇಲೋ? ಯಾಕಿದು?

VISTARANEWS.COM


on

Mahathma gandhi Basavanna Assembly session
Koo

ಬೆಳಗಾವಿ: ಕಳೆದ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ (Belagavi suvarna soudha) ವೀರ ಸಾವರ್ಕರ್‌ ಅವರ ಫೋಟೊ (Veer savarkar Photo) ಅಳವಡಿಸಲು ಮುಂದಾದಾಗ ಭಾರಿ ವಿವಾದವಾಗಿತ್ತು. ಆದರೆ, ಈಗ ಅದು ತಣ್ಣಗಾಗಿದೆ. ಸ್ವತಃ ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರೇ ಸಾವರ್ಕರ್‌ ಫೋಟೊ ಉಳಿಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇದರ ನಡುವೆಯೇ ಇನ್ನೊಂದು ಫೋಟೊ ಪಾಲಿಟಿಕ್ಸ್‌ ಶುರುವಾಗಿದೆ (Assembly Session).

ಅದೇನೆಂದರೆ, ಸುವರ್ಣ ಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಯಾರ ಪೋಟೋ ಇರಬೇಕು ಎನ್ನುವ ಗಂಭೀರ ಚರ್ಚೆಯನ್ನು ಹುಟ್ಟುಹಾಕಲು ಸ್ವತಃ ಆಡಳಿತ ಪಕ್ಷದ ಹಿರಿಯ ಶಾಸಕರಾಗಿರುವ ಕಾಂಗ್ರೆಸ್‌ ನಾಯಕ ಬಸವರಾಜ ರಾಯರೆಡ್ಡಿ ನಿರ್ಧರಿಸಿದ್ದಾರೆ. ಅವರು ಹುಟ್ಟು ಹಾಕಲು ಮುಂದಾಗಿರುವ ಚರ್ಚೆ: ಗಾಂಧಿ ಮೇಲೋ, ಬಸವಣ್ಣ ಮೇಲೋ?‌ (Who is on top? Gandhi or Basavanna?) ಇದಕ್ಕೆ ನಿಖರ ಉತ್ತರ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಈಗ ಜಗಜ್ಜೋತಿ ಬಸವೇಶ್ವರರ ಪೋಟೊವನ್ನು ಮೇಲೆ ಹಾಕಲಾಗಿದೆ. ಅದರ ಕೆಳಗೆ ಗಾಂಧೀಜಿ ಪೋಟೊ ಇದೆ. ಹಾಗಿದ್ದರೆ ಯಾರ ಫೋಟೊ ನಿಜಕ್ಕೂ ಮೇಲಿರಬೇಕು ಎಂಬ ವಿಷಯವನ್ನು ಚರ್ಚಿಸಿ ಅಂತಿಮ ತೀರ್ಮಾನ ಪಡೆಯಲು ಶಾಸಕ ಬಸವರಾಜ ರಾಯ ರೆಡ್ಡಿ ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗಾವಿ ವಿಧಾನಸಭಾ ಅಧಿವೇಶನದದಲ್ಲಿ ಮತ್ತೆ ಫೋಟೊ ಸದ್ದು ಮಾಡುವುದು ಖಚಿತವಾಗಿದೆ.

ಮಂಗಳವಾರದ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಲು ಮುಂದಾಗಿದ್ದಾರೆ ಕಾಂಗ್ರೆಸ್ ನ ಬಸವರಾಜ್ ರಾಯರೆಡ್ಡಿ.. ನಿಯಮಗಳ ಪ್ರಕಾರ ವಿಧಾನಸಭಾ ಸಭಾಂಗಣದಲ್ಲಿ ಯಾವುದೇ ಫೋಟೊ ಹಾಕುವಂತಿಲ್ಲ. ಕಾನ್‌ಸ್ಟಿಟುಯೆಂಟ್‌ ಅಸೆಂಬ್ಲಿ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್‌ ಅವರ ಫೋಟೊವನ್ನೇ ಹಾಕಿಲ್ಲ. ಆದರೆ, ಇಲ್ಲಿ ಬಸವೇಶ್ವರರ ಫೋಟೊ ಕೆಳಗೆ ಗಾಂಧೀಜಿ ಪೋಟೊ ಹಾಕಲಾಗಿದೆ. ವೀರ ಸಾವರ್ಕರ್ ಫೋಟೊ ಹಾಕುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಹೀಗಾಗಿ ಸಭಾಂಗಣದಲ್ಲಿ ಫೋಟೊ ಹಾಕುವ ಕುರಿತು ಮಾರ್ಗಸೂಚಿ ಪಾಲನೆ ಮಾಡಬೇಕು. ಆ ಮಾರ್ಗಸೂಚಿ ಏನು ಎನ್ನುವುದರ ಬಗ್ಗೆ ಸ್ಪಷ್ಟ ಉತ್ತರಕ್ಕೆ ಒತ್ತಾಯಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಲು ರಾಯರೆಡ್ಡಿ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: Assembly Session : ಅಧಿವೇಶನದಲ್ಲಿ ನನಗೆ ಮೊದಲ ಸಾಲೇ ಬೇಕು; ಪಟ್ಟು ಹಿಡಿದಿರುವ ಎಚ್.ಡಿ. ರೇವಣ್ಣ!

ಸದನದಲ್ಲಿ ಈ ವಿಚಾರ ಪ್ರಸ್ತಾಪವಾದರೆ ಸಾವರ್ಕರ್‌ ಫೋಟೊವೂ ಸೇರಿದಂತೆ ಎಲ್ಲ ವಿಚಾರಗಳು ಚರ್ಚೆಗೆ ಬರಲಿವೆ. ಹೀಗಾಗಿ ಫೋಟೊ ರಾಜಕಾರಣಕ್ಕೆ ಹೊಸ ಸ್ವರೂಪ ಸಿಗುವ ಸಾಧ್ಯತೆಗಳು ದಟ್ಟವಾಗಿದೆ. ಯಾರ ಪೋಟೋ ಹಾಕಬೇಕು – ಯಾರ ಪೋಟೋ ತೆಗೆಯಬೇಕು ಅನ್ನುವ ಬಗ್ಗೆಯೂ ನಿರ್ಣಯ ಆಗುವ ಸಾಧ್ಯತೆ ಇದೆ.

ಹಾಗಿದ್ದರೆ ಸ್ಪೀಕರ್ ಯು.ಟಿ.ಖಾದರ್ ಅವರು ಈ ಸಂಬಂಧ ಸೂಕ್ತ ಕ್ರಮಕ್ಕೆ ಆದೇಶ ಮಾಡ್ತಾರಾ? ಏನಾದರೂ ಸಮಿತಿ ರಚನೆ ಮಾಡುತ್ತಾರಾ? ಸಭಾಂಗಣದಲ್ಲಿರುವ ಎಲ್ಲಾ ಫೋಟೊಗಳ ಭವಿಷ್ಯ ನಿರ್ಣಯ ಆಗುತ್ತದಾ? ಹೀಗೆ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ರಾಜ್ಯ ಕಾಂಗ್ರೆಸ್ ಶಾಸಕ ರಾಯರೆಡ್ಡಿ ಪ್ರಸ್ತಾವನೆ.

Continue Reading

ಕರ್ನಾಟಕ

Theft Case : ಬೆಂಗಳೂರಿಗರೇ ಎಚ್ಚರ; ಖಾಕಿ ಡ್ರೆಸ್‌ನಲ್ಲಿ ಬಂದು ದರೋಡೆ ಮಾಡ್ತಾರೆ ಹುಷಾರ್‌!

Theft Case : ಇತ್ತೀಚೆಗೆ ಖದೀಮರು ಪೊಲೀಸರ ಸೋಗಿನಲ್ಲಿ ಬಂದು ದರೋಡೆ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರಲ್ಲಿ ಉದ್ಯಮಿ ಮನೆಗೆ ನುಗ್ಗಿದ ದರೋಡೆಕೋರರು ಲಕ್ಷಾಂತರ ರೂ. ಕದ್ದು ಪರಾರಿ ಆಗಿದ್ದಾರೆ.

VISTARANEWS.COM


on

By

Theft case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆ ಉದ್ಯಮಿ ಮನೆಯವರು ಇನ್ನೇನು ರಾತ್ರಿ ಊಟ ಮುಗಿಸಿ ನಿದ್ರೆಗೆ ಜಾರುವವರಿದ್ದರು. ಆದರೆ ಅದೇ ಸಮಯಕ್ಕೆ ಮನೆ ಡೋರ್‌ನ ಕಾಲಿಂಗ್‌ ಬೆಲ್‌ ಬಡಿದುಕೊಂಡಿತ್ತು. ಯಾರೆಂದು ನೋಡಿದಾಗ ಎದುರಿಗೆ ನಾಲ್ಕೈದು ಮಂದಿ ಪೊಲೀಸ್‌ ಸಮವಸ್ತ್ರದಲ್ಲಿ ಬಂದಿದ್ದರು. ಪೊಲೀಸರಲ್ವಾ ಎಂದು ಆ ಮನೆಯವರು ಮನೆ ಬಾಗಿಲು ತೆರೆದಿದ್ದು ಅಷ್ಟೇ.., ರಾಜಾರೋಷವಾಗಿ ಮನೆಯೊಳಗೆ ನುಗ್ಗಿದ್ದರು. ಏಕಾಏಕಿ ಮಾರಕಾಸ್ತ್ರಗಳನ್ನು ತೋರಿಸಿ ಕ್ಷಣಾರ್ಧದಲ್ಲಿ ದರೋಡೆ (theft Case) ಮಾಡಿ ಪರಾರಿ ಆಗಿದ್ದರು.

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ಎಚ್‌.ಎಂ.ಟಿ ಲೇಔಟ್‌ನಲ್ಲಿ ಪೊಲೀಸರ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕಳ್ಳರು ದರೋಡೆ ಮಾಡಿದ್ದಾರೆ. ಖಾಸಗಿ ಕಂಪನಿ ಮಾಲೀಕ ಮನೋಹರ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಮನೆಯಲ್ಲಿದ್ದ ಸುಮಾರು 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ರೂ. ನಗದು ಕದ್ದು ಪರಾರಿ ಆಗಿದ್ದಾರೆ.

ಉದ್ಯಮಿ ಮನೋಹರ್ ಮನೆಯಲ್ಲಿ ಇಲ್ಲದ ವೇಳೆ ಈ ಕಳ್ಳತನ ನಡೆದಿದೆ. ಮನೋಹರ್ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮನೆಯಲ್ಲಿದ್ದರು. ಈ ವೇಳೆ ಪೊಲೀಸ್ ಡ್ರೆಸ್‌ನಲ್ಲಿ ಮನೆಗೆ ನುಗ್ಗಿದ್ದಾರೆ. ಉದ್ಯಮಿ ಮನೋಹರ್‌ರ ಅಣ್ಣ-ತಮ್ಮಂದಿರ ನಡುವೆ ಹಲವು ಪ್ರಕರಣಗಳಿದ್ದವು. ಹೀಗಾಗಿ ಅದೇ ವಿಚಾರಕ್ಕೆ ಪೊಲೀಸರು ಬಂದಿರಬಹುದು ಎಂದುಕೊಂಡು ಸುಜಾತ ಮನೆ ಡೋರ್‌ ತೆರೆದಿದ್ದರು. ಪೊಲೀಸರ ಸೋಗಿನಲ್ಲಿ ಮನೆಯೊಳಗೆ ಕಾಲಿಟ್ಟ ಕಳ್ಳರು ಕ್ಷಣ ಮಾತ್ರದಲ್ಲಿ ತಮ್ಮ ನಿಜ ಸ್ವರೂಪವನ್ನು ತೋರಿದ್ದರು.

ಇದನ್ನೂ ಓದಿ: Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ

ನೋಡನೋಡುತ್ತಿದ್ದಂತೆ ಈ ಮೊದಲೇ ತಂದಿದ್ದ ಡ್ರ್ಯಾಗರ್ ಹಾಗೂ ಮಚ್ಚುಗಳನ್ನು ಹೊರತೆಗೆದು ಮನೆಯೊಳಗೆ ಇದ್ದವರನ್ನು ಹೆದರಿಸಲು ಶುರು ಮಾಡಿದ್ದರು. ಈ ವೇಳೆ ಉದ್ಯಮಿ ಪುತ್ರ ರೂಪೇಶ್ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದರು. ಆದರೆ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಮನೆಯಲ್ಲಿ ಇದ್ದವರನ್ನೆಲ್ಲ ಲಾಕ್‌ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿದ್ದಾರೆ.

ಮಾತ್ರವಲ್ಲದೆ ಕೃತ್ಯ ಎಸಗಿದ ಬಳಿಕ ಸಿಕ್ಕಿಹಾಕಿಕೊಳ್ಳಬಾರದೆಂದು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಸಮೇತ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಸುಮಾರು 5 ರಿಂದ 6 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ರೂಪೇಶ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಅಕ್ಕ ಪಕ್ಕದ ಸಿಸಿಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಮೊಬೈಲ್‌ ಅಂಗಡಿಗೆ ಕನ್ನ

ರಾಯಚೂರಿನ ಸಿಂಧನೂರಿನ ಬಸ್ ನಿಲ್ದಾಣದ ಬಳಿ ಇದ್ದ ಮೊಬೈಲ್‌ ಅಂಗಡಿಗೆ ಖದೀಮರು ಕನ್ನ ಹಾಕಿದ್ದಾರೆ. ಎಸ್‌ಆರ್‌ಕೆ ಮೊಬೈಲ್ ಶಾಪ್‌ನ ಬೀಗ ಮುರಿದು, ಸುಮಾರು 53ಕ್ಕೂ ಹೆಚ್ಚು ಮೊಬೈಲ್‌ಗಳನ್ನು ‌ಕಳವು ಮಾಡಿದ್ದಾರೆ. ಅಂಗಡಿಯೊಳಗೆ ಇದ್ದ ಸಿಸಿಟಿವಿಯನ್ನು ಬೇರೆ ಕಡೆ ತಿರುಗಿಸಿ ಕಳ್ಳತನ ಮಾಡಿದ್ದಾರೆ. ಮಾಹಿತಿ ತಿಳಿದು ಮೊಬೈಲ್ ಅಂಗಡಿಗೆ ಸಿಂಧನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Gold Rate Today: ಬಂಗಾರದ ಬೆಲೆ ಒಂದೇ ದಿನ ₹100 ಇಳಿಕೆ, ಇಂದೆಷ್ಟಿದೆ ಖರೀದಿಯ ದರ?

ರಾಜ್ಯದಲ್ಲಿ ಬಂಗಾರದ ಧಾರಣೆ (Gold Rate Today) ಮಂಗಳವಾರ ಗಮನಾರ್ಹ ಇಳಿಕೆ ಕಂಡಿದೆ. 22 ಕ್ಯಾರೆಟ್‌ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕ್ರಮವಾಗಿ ₹100 ಮತ್ತು ₹82 ಇಳಿಕೆಯಾಗಿದೆ.

VISTARANEWS.COM


on

gold rate
Koo

ಬೆಂಗಳೂರು: ರಾಜ್ಯದಲ್ಲಿ ಬಂಗಾರದ ಧಾರಣೆ (Gold Rate Today) ಮಂಗಳವಾರ ಗಮನಾರ್ಹ ಇಳಿಕೆ ಕಂಡಿದೆ. 22 ಕ್ಯಾರೆಟ್‌ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕ್ರಮವಾಗಿ ₹100 ಮತ್ತು ₹82 ಇಳಿಕೆಯಾಗಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನವನ್ನು ₹5785ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹46,280 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರೆಟ್‌ ಚಿನ್ನವನ್ನು ₹57,850 ಮತ್ತು ₹5,78,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ₹6,311 ಆಗಿದ್ದರೆ, ಎಂಟು ಗ್ರಾಂ ಬೆಲೆ ₹50,488 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರೆಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹63,110 ಮತ್ತು ₹6,31,000 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ ₹79.25, ಎಂಟು ಗ್ರಾಂ ₹634 ಮತ್ತು 10 ಗ್ರಾಂ ₹792.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹7,925 ಮತ್ತು 1 ಕಿಲೋಗ್ರಾಂಗೆ ₹ 79,250 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ
22 ಕ್ಯಾರಟ್ 24 ಕ್ಯಾರಟ್
ದಿಲ್ಲಿ
58,000 63,260
ಮುಂಬಯಿ57,85063,110
ಬೆಂಗಳೂರು
57,85063,110
ಚೆನ್ನೈ 58,500 63,820

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಇಲ್ಲಿವೆ:

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

Continue Reading

ಕರ್ನಾಟಕ

Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ

Elephant Arjuna : ಅರ್ಜುನನ ಸಾವಿಗೆ ಕಾಡಾನೆ ತಿವಿತ ಒಂದೇ ಕಾರಣವಲ್ಲ. ತಿವಿತಕ್ಕೂ ಮುನ್ನ ಹಲವು ಘಟನಾವಳಿಗಳು ನಡೆದಿವೆ ಎಂಬ ಅಂಶಗಳು ಈಗ ಹೊರಬೀಳುತ್ತಿವೆ.

VISTARANEWS.COM


on

Arjuna death
ಅರ್ಜುನನ ಮೇಲೆ ಬಿದ್ದು ಕಣ್ಣೀರು ಹಾಕುತ್ತಿರುವ ಕಾವಾಡಿಗರು ಮತ್ತು ಇತರರು
Koo

ಹಾಸನ: ಎಂಟು ಬಾರಿ ಮೈಸೂರು ದಸರಾ ಅಂಬಾರಿ (Mysore Dasara Ambari) ಹೊತ್ತು ತನ್ನ ಅದ್ಧೂರಿ ಗಜ ನಡಿಗೆಯಿಂದ ಜನರನ್ನು ರಂಜಿಸಿದ್ದ ಅರ್ಜುನ ಎಂಬ ಆನೆಯ (Elephant Arjuna) ಸಾವಿಗೆ ಅಧಿಕಾರಿಗಳು ಮಾಡಿದ ಎಡವಟ್ಟೇ ಕಾರಣವಾಯಿತೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆಯ (Elephant Operation) ವೇಳೆ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ. ಅಧಿಕಾರಿಗಳ ಪ್ರಕಾರ ಪುಂಡಾನೆ ದಾಳಿಗೆ ಸಿಲುಕಿ ಅರ್ಜುನ ಮೃತಪಟ್ಟಿದ್ದಾನೆ. ಆದರೆ, ಅರ್ಜುನನಂಥ ಬಲಶಾಲಿಯನ್ನು ಪುಂಡಾನೆ ಕೆಡವಲು ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಜನರು ಮತ್ತು ಆನೆಗಳ ಮಾವುತರ ಆರೋಪ.

ಕಾಡಾನೆಯನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳು ನಡೆಸಿದ ಪ್ರಯೋಗಗಳೆಲ್ಲವೂ ಅರ್ಜುನನ ಮೇಲೆ ಆಗಿದೆ. ಕಾಡಾನೆಯ ಕಾಲಿಗೆ ಎಂದು ಹಾರಿಸಿದ ಗುಂಡು ಅರ್ಜುನನ ಕಾಲಿಗೆ ಬಿದ್ದಿದೆ. ಈ ಕಾರಣದಿಂದ ಬಲ ಕಳೆದುಕೊಂಡ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ ಎನ್ನುವುದು ಮಾವುತರು ನೀಡುವ ವಿವರಣೆ. ಅಂತಿಮವಾಗಿ ಕಾಡಾನೆ ತಿವಿತಕ್ಕೆ ಒಳಗಾಗಿ ಅರ್ಜುನ ಸತ್ತಿದ್ದು ನಿಜವಾದರೂ ಅದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ಎಡವಟ್ಟು ಎನ್ನುವುದು ಈಗ ಕೇಳಿಬರುತ್ತಿರುವ ಮಾತು.

ಅಲ್ಲಿ ನಡೆದ ಘಟನೆಗಳ ಬಗ್ಗೆ ಕಾವಾಡಿಗರು ಆಡಿಕೊಂಡಿರುವ ಮಾತುಗಳ ಆಡಿಯೊ ಒಂದು ವೈರಲ್‌ ಆಗಿದ್ದು, ಅದರಲ್ಲಿ ಈ ಎಡವಟ್ಟುಗಳ ಚರ್ಚೆ ನಡೆದಿದೆ.

ಕಾವಾಡಿಗರು ಹೇಳುವ ಪ್ರಕಾರ ಕಾರ್ಯಾಚರಣೆಯ ವೇಳೆ ನಡೆದ ಘಟನಾವಳಿಗಳು ಇವು

ಅರ್ಜುನ ಮತ್ತು ಪ್ರಶಾಂತ್‌ ಎಂಬ ಸಾಕಾನೆಗಳನ್ನು ಕೂಡಿಕೊಂಡು ಕಾಡಾನೆಯನ್ನು ಪಳಗಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಕಾವಾಡಿಗರು ಆನೆಯ ಮೇಲೆ ಕುಳಿತೇ ಸಾಗುತ್ತಿದ್ದರು. ಒಂದು ಹಂತದಲ್ಲಿ ಕಾಡಾನೆ ಮತ್ತು ನಾಡಾನೆಗಳ ಮುಖಾಮುಖಿ ನಡೆಯಿತು.

ಈ ಹಂತದಲ್ಲಿ ಅಬ್ಬರಿಸುತ್ತಿದ್ದ ಕಾಡಾನೆಯನ್ನು ನಿಯಂತ್ರಿಸಲು ಅರಿವಳಿಕೆ ಶಾಟ್‌ ನ್ನು ಶೂಟ್‌ ಮಾಡಲಾಯಿತು. ಆದರೆ, ಮೂರೂ ಆನೆಗಳು ಹತ್ತಿರ ಹತ್ತಿರ ಇದ್ದಿದ್ದರಿಂದ ಅದು ಕಾಡಾನೆ ಬದಲು ಪ್ರಶಾಂತ್‌ ಎಂಬ ಸಾಕಾನೆ ಮೇಲೆ ಬಿತ್ತು. ಒಮ್ಮಿಂದೊಮ್ಮೆಗೇ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಅದರ ಪರಿಣಾಮವನ್ನು ತಗ್ಗಿಸಲು ಇನ್ನೊಂದು ಶಾಟ್‌ ನೀಡಿದರು.

ಈ ನಡುವೆ, ಕಾಡಾನೆ ಅರ್ಜುನನ ಮೇಲೆ ಮುಗಿಬಿದ್ದಿತ್ತು. ಆ ಹೊತ್ತಿಗೆ ಪ್ರಶಾಂತ್‌ ಅರ್ಜುನನ ರಕ್ಷಣೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಇದೇ ವೇಳೆ ಅರಣ್ಯಾಧಿಕಾರಿಗಳು ಕಾಡಾನೆ- ಸಾಕಾನೆ ಸಂಘರ್ಷದ ತಡೆಯಲು ಕೋವಿಯಿಂದ ಗುಂಡು ಹಾರಿಸಿದ್ದಾರೆ. ಅದು ಕಾಡಾನೆಗೆ ತಗಲುವ ಬದಲು ಅರ್ಜುನನ ಮೇಲೆ ಬಿದ್ದಿದೆ. ಒಮ್ಮಿಂದೊಮ್ಮೆಗೇ ಉಂಟಾದ ಆಘಾತದಿಂದ ಅರ್ಜುನ ಬಲ ಕಳೆದುಕೊಂಡು ಉರುಳಿದ್ದಾನೆ. ಆಗ ಮರಗಳು ಕೂಡಾ ಬಿದ್ದವು. ಕಾವಾಡಿಗರು ಕೂಡಾ ಆನೆಯ ಮೇಲಿಂದ ಇಳಿದು ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾಡಾನೆ ಅರ್ಜುನನಿಗೆ ಬಲವಾಗಿ ತಿವಿದಿದೆ- ಇದು ಕಾವಾಡಿಗರು ಸ್ಥಳೀಯರೊಬ್ಬರಿಗೆ ದೂರವಾಣಿ ಮೂಲಕ ನೀಡಿದ ಮಾಹಿತಿ.

ಹೀಗಾಗಿ ಅಧಿಕಾರಿಗಳ ಪ್ರಮಾದದಿಂದ ಅರ್ಜುನ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುವುದು ಎಲ್ಲರ ಆರೋಪ. ಈ ಬಗ್ಗೆ ಸಮಗ್ರ ತನಿಖೆ ನಡೆಸಲೇಬೇಕು ಎಂಬ ಆಗ್ರಹ ಜೋರಾಗಿ ಕೇಳಿಬರುತ್ತಿದೆ.

ಕಾಡಾನೆ ಮದದಲ್ಲಿರುವಾಗಲೇ ಸೆರೆಗೆ ಹೋಗಿದ್ದೇ ತಪ್ಪು!

ಈ ನಡುವೆ, ಕಾಡಾನೆ ಮದದಲ್ಲಿತ್ತು. ಮದದಲ್ಲಿರುವ ಆನೆಗಳನ್ನು ನಿಯಂತ್ರಿಸುವುದು ತುಂಬ ಕಷ್ಟ. ಅಂಥ ಹೊತ್ತಲ್ಲಿ ಅರಿವಳಿಕೆ ವಿಧಾನದಿಂದ ಅವುಗಳನ್ನು ನಿಯಂತ್ರಿಸಿ ಬಳಿಕ ಕಾರ್ಯಾಚರಣೆ ನಡೆಸಬೇಕಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಮದದಲ್ಲಿರುವ ಕಾಡಾನೆ ಹುಚ್ಚನಂತೆ ಆಡುತ್ತದೆ ಎಂಬ ಮಾಹಿತಿ ಕೊತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ.

ಅಧಿಕಾರಿಗಳು ಹೇಳುವ ಪ್ರಕಾರ ಅಲ್ಲಿ ನಡೆದಿದ್ದೇನು?

1.ಸೋಮವಾರ ಬೆಳಗ್ಗೆಯೇ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾಡಾನೆಗಳು ಇದ್ದ ಸ್ಥಳಕ್ಕೆ ಹೋದಾಗ 12 ಆನೆಗಳಿದ್ದವು. ಆನೆಗಳ ಗುಂಪನ್ನು ಗಂಡಾನೆಯೊಂದು ಲೀಡ್​ ಮಾಡ್ತಿತ್ತು.

2.ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿದ್ದರೂ ಅದು ಪೂರ್ಣ ಪ್ರಜ್ಞೆ ತಪ್ಪಿರಲಿಲ್ಲ. ಮತ್ತಿನಲ್ಲಿದ್ದಾಗ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗಿದೆ.

3. ಕಾಡಾನೆಗಳು ದಾಳಿಗೆ ಮುಂದಾದ ವೇಳೆ ಇತರ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಓಡಿಹೋಗಿದ್ದಾರೆ. ಆದರೆ, ಅರ್ಜುನ ಮಾತ್ರ ಅದರ ಜತೆ ಕಾಳಗ ನಡೆಸಿತು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕಾಡಾನೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಅಂಬಾರಿ ವೀರ ಅರ್ಜುನನ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ನೆಡುತೋಪಿನಲ್ಲಿ ಸಕಲ ಸರ್ಕಾರಿ ಗೌರವ ಹಾಗು ರಾಜ ಮರ್ಯಾದೆಯೊಂದಿಗೆ ನಡೆಯಲಿದೆ.

ಅರ್ಜುನ ದಸರಾ ಅಂಬಾರಿ ಹೊತ್ತ ಆನೆಯಾದ ಕಾರಣ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಮೈಸೂರು ಅರಮನೆಯ ರಾಜ ವಂಶಸ್ಥರಿಂದಲೂ ಅರ್ಜುನನಿಗೆ ಅಂತಿಮ ಗೌರವ ಸಲ್ಲಲಿದೆ. ಅರಮನೆಯ ಪೊರೋಹಿತರಿಂದ ಅಂತಿಮ ವಿಧಿ ವಿಧಾನ ನಡೆಯಲಿದೆ.

Continue Reading
Advertisement
chennai airport
ದೇಶ28 mins ago

Cyclone Michaung: ಮಿಚಾಂಗ್ ಚಂಡಮಾರುತದಿಂದ 8 ಸಾವು; ಶಾಲೆ, ಬ್ಯಾಂಕ್‌ ಕ್ಲೋಸ್‌

dunki trailer
ಬಾಲಿವುಡ್30 mins ago

Dunki Trailer: ʼಡಂಕಿʼ ಟ್ರೈಲರ್‌ ಹೇಗಿದೆ ನೋಡಿ! ಈ ವರ್ಷ ಹ್ಯಾಟ್ರಿಕ್‌ ಗೆಲುವು ಸಾಧಿಸ್ತಾರಾ ಕಿಂಗ್‌ ಖಾನ್‌?

hindu temples in Pakistan
ದೇಶ31 mins ago

Viral Video: ಹಿಂದೂ ದೇವಾಲಯವನ್ನು ಪ್ರಾಣಿಗಳ ದೊಡ್ಡಿ ಮಾಡಿದ ಪಾಪಿ ಪಾಕಿಗಳು

Mahathma gandhi Basavanna Assembly session
ಕರ್ನಾಟಕ38 mins ago

Assembly Session : ಗಾಂಧಿ ಮೇಲೋ, ಬಸವಣ್ಣ ಮೇಲೋ; ಅಧಿವೇಶನದಲ್ಲಿ ಫೋಟೊ ವಿವಾದ

Theft case
ಕರ್ನಾಟಕ39 mins ago

Theft Case : ಬೆಂಗಳೂರಿಗರೇ ಎಚ್ಚರ; ಖಾಕಿ ಡ್ರೆಸ್‌ನಲ್ಲಿ ಬಂದು ದರೋಡೆ ಮಾಡ್ತಾರೆ ಹುಷಾರ್‌!

dc
ವಿದೇಶ1 hour ago

Huge Blast: ಪೊಲೀಸರು ಶೋಧಕ್ಕೆ ಮುಂದಾಗುತ್ತಿದ್ದಂತೆ ಮನೆಯೊಳಗೆ ಭೀಕರ ಸ್ಫೋಟ; ವಿಡಿಯೊ ಇಲ್ಲಿದೆ

Travis Head
ಕ್ರಿಕೆಟ್1 hour ago

IPL 2024: ಹೆಡ್​,ರಚಿನ್​ಗೆ 20 ಕೋಟಿ ರೂ. ನೀಡಿ ಖರೀದಿಸಲು ಮುಂದಾದ ಫ್ರಾಂಚೈಸಿ!

orange peel
ಆರೋಗ್ಯ1 hour ago

Orange Peel Benefits: ಕಿತ್ತಳೆ ಸಿಪ್ಪೆ ಎಸೆಯದಿರಿ, ನಿಮ್ಮ ಸೌಂದರ್ಯವರ್ಧಕ ನೀವೇ ತಯಾರಿಸಿ!

gold rate
ಕರ್ನಾಟಕ2 hours ago

Gold Rate Today: ಬಂಗಾರದ ಬೆಲೆ ಒಂದೇ ದಿನ ₹100 ಇಳಿಕೆ, ಇಂದೆಷ್ಟಿದೆ ಖರೀದಿಯ ದರ?

Arjuna death
ಕರ್ನಾಟಕ2 hours ago

Elephant Arjuna : ಅಧಿಕಾರಿಗಳ ಗುಂಡಿನಿಂದಲೇ ಅರ್ಜುನನ ಮರಣ?; ಇಲ್ಲಿದೆ ವಿಡಿಯೊ ಸಾಕ್ಷಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ7 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌